Homeಮುಖಪುಟಕನ್ನಡ ಏಕೀಕರಣದಿಂದಲೂ ಕನ್ನಡ ಭಾಷೆಯ ಏಳ್ಗೆಗಾಗಿ, ಬಸವ ತತ್ವಕ್ಕಾಗಿ ಶ್ರಮಿಸುತ್ತಿರುವ ಭಾಲ್ಕಿ ಮಠ

ಕನ್ನಡ ಏಕೀಕರಣದಿಂದಲೂ ಕನ್ನಡ ಭಾಷೆಯ ಏಳ್ಗೆಗಾಗಿ, ಬಸವ ತತ್ವಕ್ಕಾಗಿ ಶ್ರಮಿಸುತ್ತಿರುವ ಭಾಲ್ಕಿ ಮಠ

ಕನ್ನಡ ಶಾಲೆ ಮುಚ್ಚಿ, ಇಲ್ಲದಿದ್ದರೇ ಶಿಕ್ಷೆ ಅನುಭವಿಸಿ ಎಂಬ ನಿಜಾಮರ ಆದೇಶಕ್ಕೆ ಜಗ್ಗದ ಶ್ರೀಗಳು ಶಾಲೆಯ ಮುಂದೆ ಉರ್ದು ಶಾಲೆ ಎಂಬ ನಾಮಫಲಕ ಹಾಕಿ, ಒಳಗಡೆ ಕನ್ನಡ ಪಾಠ ನಡೆಸುತ್ತಿದ್ದರು!

- Advertisement -
- Advertisement -

ಹೈದರಾಬಾದ್ ಕರ್ನಾಟಕ ಎಂದೇ ಹೆಚ್ಚು ಜನಪ್ರಿಯಾವಾಗಿರುವ ಪ್ರದೇಶದ ಜಿಲ್ಲೆಯಾದ ಬೀದರ್‌ನ ಭಾಲ್ಕಿಯ ಹಿರೇಮಠ ಸಂಸ್ಥಾನ ಹಲವು ವಿಶೇಷಗಳನ್ನೊಳಗೊಂಡ ಶರಣ ಮಠ. ನಿಜಾಮರ ಆಳ್ವಿಕೆಯಲ್ಲಿ ಉರ್ದು ಪ್ರಭಾವ ಹೆಚ್ಚಿದ್ದ ಹಾಗೂ ಕನ್ನಡಕ್ಕಿಂತಲೂ ಮರಾಠಿ ಪ್ರಭಾವ ಹೆಚ್ಚಿದ್ದ ಸಮಯದಲ್ಲಿ, ಅಲ್ಲಿ ಕನ್ನಡ ಮಾತೃಭಾಷೆಯಾಗಿದ್ದ ಜನರ ನುಡಿಯಲ್ಲೇ ಮಕ್ಕಳ ಶಿಕ್ಷಣಕ್ಕಾಗಿ ಕಂಕಣತೊಟ್ಟು, ಹಲವು ಸಮಸ್ಯೆಗಳ ನಡುವೆಯೇ ಹೋರಾಟಗಳನ್ನು ಮಾಡಿ, ಕನ್ನಡ ಶಾಲೆಗಳನ್ನು ಸ್ಥಾಪಿಸಿ ಯಶಸ್ವಿಗೊಳಿಸಿದ ಈ ಮಠದ ಮತ್ತು ಮಠದ ಸಂಸ್ಥಾಪಕರಾದ ಚನ್ನಬಸವ ಪಟ್ಟದೇವರು ಶ್ರೀಗಳ ಕೆಲಸ ಸ್ಮರಣೀಯವಾದದ್ದು.


ಅಷ್ಟೇ ಅಲ್ಲದೆ ಬಸವ ಮತ್ತು ಶರಣ ಚಳವಳಿಯ ಪ್ರಸಾರಕ್ಕೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಅವಿರತವಾಗಿ ದುಡಿಯುತ್ತಿರುವ ಮಠ ಇದು.

2020ನೇ ಸಾಲಿನ ಕನ್ನಡ ರಾಜ್ಯೋತ್ಸದ ಸಂದರ್ಭದಲ್ಲಿ ಭಾಲ್ಕಿ ಮಠದ ವಿಶೇಷತೆಗಳನ್ನು ನೆನೆಯಲು ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ, ಬಸವಕಲ್ಯಾಣದ ಅನುಭವಮಂಟಪದ ಹಾಲಿ ಅಧ್ಯಕ್ಷರಾಗಿರುವ ಶ್ರೀ ಡಾ. ಬಸವಲಿಂಗ ಪಟ್ಟದೇವರು ಅವರನ್ನು ರಾಜೇಶ್ವರ ಜುಬರೆ (ಸಾಹಿತಿಗಳು, ಹಿರೇಮಠ ಸಂಸ್ಥಾನ ಭಾಲ್ಕಿ) ಸಂದರ್ಶನ ಮಾಡಿದ್ದಾರೆ.

1. ಕನ್ನಡ ಭಾಷೆಯ ಉಳಿವು ಎಂದರೆ ಅದೊಂದು ಸಾಂಸ್ಕೃತಿಕ, ರಾಜಕೀಯ ಹೋರಾಟವೆಂದೇ ಪರಿಗಣಿಸಲಾಗುತ್ತದೆ. ಭಾಲ್ಕಿಯ ಹಿರೇಮಠ ಸಂಸ್ಥಾನ ಕನ್ನಡದ ಉಳಿವಿಗೆ ಪಣ ತೊಟ್ಟಿದ್ದು ವಿಶೇಷ. ಇದಕ್ಕೆ ಪ್ರೇರಣೆ ಏನಿರಬಹುದೆಂದು ನಿಮಗೆ ಅನ್ನಿಸುತ್ತದೆ..?

ಭಾಲ್ಕಿಯ ಹಿರೇಮಠ ಸಂಸ್ಥಾನ ಕನ್ನಡ ಉಳಿವಿಗಾಗಿ ಸತತ ಪರಿಶ್ರಮ ನಡೆಸುತ್ತಿದೆ. ಬೀದರ್ ಜಿಲ್ಲೆಯಲ್ಲಿ ನಿಜಾಮರ ಆಳ್ವಿಕೆ ಸಮಯದಲ್ಲಿ ಶುರುವಾದ ಈ ಕಾರ್ಯ ಇಂದಿಗೂ ನಡೆಯತ್ತಲೇ ಇದೆ. ಈ ಭಾಗದಲ್ಲಿ ರಾಜ್ಯ ಭಾಷೆಯಾಗಿ ಇದ್ದಿದ್ದು ಕೂಡ ಉರ್ದು.

ಇದರ ಜೊತೆ ಜೊತೆಗೆ ಮರಾಠಿ ಭಾಷೆಯ ಪ್ರಭಾವ ಬೇರೆ. ಈ ಭಾಗದಲ್ಲಿ ಕನ್ನಡಕ್ಕೆ ಯಾವುದೇ ನೆಲೆ ಇಲ್ಲದಂತೆ ಆಗಿತ್ತು. ಅಂಗಡಿಗಳಲ್ಲಿ, ಲೆಕ್ಕಪತ್ರ ವ್ಯವಹಾರಗಳಲ್ಲಿ ಕೇವಲ ಮರಾಠಿ ಬಳಸಲಾಗುತ್ತಿತ್ತು.
ಇಂತಹ ಸಂದರ್ಭದಲ್ಲಿ 1924ರಲ್ಲಿ ಭಾಲ್ಕಿ ಮಠದಲ್ಲಿ ಚನ್ನಬಸವ ಪಟ್ಟದೇವರು ಪಟ್ಟಾಧೀಶರಾದರು. ಜಿಲ್ಲೆಯ ಸ್ಥಿತಿಯನ್ನು ಗಮನಿಸಿ, ಅಧ್ಯಯನ ಮಾಡಿದ ಸ್ವಾಮಿಗಳು ಕನ್ನಡ ಶಾಲೆಯನ್ನು ತೆರೆಯುವ ಸಾಹಸಕ್ಕೆ ಕೈಹಾಕಿದರು. ಆದರೆ ಅದು ಸುಲಭದ ಮಾತಾಗಿರಲಿಲ್ಲ.

ಸ್ವಾಮಿಗಳ ಮೂಲ ಆಶಯ ವಚನ ಚಳವಳಿ. ಬಸವ ತತ್ವವನ್ನು ಉಳಿಸುವುದು, ಬೆಳೆಸುವುದು ಆಗಿತ್ತು. ಆದರೆ ವಚನ ಸಾಹಿತ್ಯವಿರುವುದು ಕನ್ನಡದಲ್ಲಿ ಹಾಗಾಗಿ ಕನ್ನಡದ ಉಳಿವಿಗೆ ಪಣ ತೊಟ್ಟರು. ವಚನ ಸಂಸ್ಕೃತಿ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ವಚನ ಸಂಸ್ಕೃತಿ ಬೆಳೆದರೆ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ಈ ಹಿನ್ನಲೆಯಲ್ಲಿ ಕನ್ನಡವನ್ನು ಬೆಳೆಸುವ ಗುರಿ ಹೊಂದಿದ್ದರು.

2. ವಚನ ಪರಂಪರೆಯು ಸಂಸ್ಕೃತ ಮತ್ತು ಶಿಷ್ಟ ಭಾಷೆಯ ಯಾಜಮಾನ್ಯ ತಿರಸ್ಕರಿಸಿ, ಆಡು ಮಾತಿನಲ್ಲೇ ಜೀವನ ತತ್ವಗಳನ್ನು ಹಂಚಿಕೊಂಡಿದ್ದು ನಮ್ಮ ಮುಂದಿದೆ. ಅದನ್ನೂ ಕನ್ನಡದ ಚಳವಳಿ ಎನ್ನಬಹುದೇನೊ. ಈ ಹಿನ್ನೆಲೆಯಲ್ಲಿ ಹಿರೇಮಠದ ಪೀಠಾಧಿಪತಿಗಳಾಗಿದ್ದ ಚನ್ನಬಸವ ಪಟ್ಟದೇವರು ಅವರನ್ನು ನೆನಪಿಸಿಕೊಳ್ಳಲೇಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಅವರ ಕನ್ನಡ ಹೋರಾಟ ಒಂದು ವಿಶೇಷ ಅಧ್ಯಾಯ. ಅವರ ಕನ್ನಡ ಹೋರಾಟದ ಬಗ್ಗೆ ಹೇಳಿ.

ಹೌದು, ಉತ್ತರ ಕರ್ನಾಟಕ ಭಾಗದಲ್ಲಿ ಚನ್ನಬಸವ ಪಟ್ಟದೇವರ ಹೋರಾಟ ಒಂದು ವಿಶೇಷ ಅಧ್ಯಾಯ. ಕನ್ನಡ ಶಾಲೆಗಳನ್ನು ತೆರೆಯವ ನಿರ್ಧಾರ ಮಾಡಿದ ಶ್ರೀಗಳ ಕೆಲಸ ಸುಲಭದ್ದಾಗಿರಲಿಲ್ಲ. ನಿಜಾಮರ ಆಳ್ವಿಕೆಯಲ್ಲಿದ್ದ ಭಾಗದಲ್ಲಿ ಎಲ್ಲರ ಕಣ್ಣು ತಪ್ಪಿಸಿ ಕೆಲಸ ಮಾಡಬೇಕಿತ್ತು. ಹಾಗಾಗಿ 1936ರಲ್ಲಿ ಮೋರ್ಗಿ ಎಂಬ ಗ್ರಾಮದಲ್ಲಿ (ಇಂದು ತೆಲಂಗಾಣದಲ್ಲಿದೆ) ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಎಂಬ ಕನ್ನಡ ಶಿಕ್ಷಣ ಶಾಲೆಯನ್ನು ಸ್ಥಾಪಿಸಿದರು.
ಶಾಲೆ ಪ್ರಾರಂಭಿಸಿದರು ನಿಜ. ಆದರೆ ಶಾಲೆಗಳಿಗೆ ಮಕ್ಕಳು ಬರುತ್ತಿರಲಿಲ್ಲ. ಊಟ-ವಸತಿ ನೀಡುತ್ತೇವೆ ಎಂದರೂ, ಕನ್ನಡ ಕಲಿತು ಏನ್ನು ಲಾಭ ಎಂದು ಪೋಷಕರು ಕೇಳುತ್ತಿದ್ದರು. ಕನ್ನಡ ಕಲಿತರೆ ಕೆಲಸ ಸಿಗುವುದೇ? ಉರ್ದು, ಮರಾಠಿ ಕಲಿತವರಿಗೆ ಮಾತ್ರ ಕೆಲಸ ಸಿಗುತ್ತದೆ ಎನ್ನುತ್ತಿದ್ದರು. ಆದರೆ ಛಲ ಬಿಡದ ಅವರು ಜಿಲ್ಲೆಯಾದ್ಯಂತ ತಿರುಗಿ 50 ಮಕ್ಕಳನ್ನು ಶಾಲೆಗೆ ಕರೆತಂದರು.

ಕನ್ನಡ ಕಲಿಯುವವರು ಪಂಚಾಂಗ ಹೇಳುವವರು ಎಂಬ ನಂಬಿಕೆ ಮಠದ ಭಕ್ತಾದಿಗಳಲ್ಲಿ ಇತ್ತು. ಆದರೆ ಇವರದು ಅಚಲ ವಿಶ್ವಾಸ. ಕನ್ನಡಕ್ಕೆ ಮುಂದೊಂದು ದಿನ ಬೆಲೆ ಬರುತ್ತದೆ, ನಿಮ್ಮ ಮಕ್ಕಳಿಗೆ ಕನ್ನಡ ಕಲಿಸಿ ಎಂದು ಹೇಳುತ್ತಿದ್ದರು. ಆದರೆ 100 ಮಕ್ಕಳಲ್ಲಿ ಐದಾರು ಮಕ್ಕಳನ್ನು ಮಾತ್ರ ಪೋಷಕರು ಶಾಲೆಗೆ ಕಳುಹಿಸುತ್ತಿದ್ದರು.

ಶಾಲೆಯಲ್ಲಿ ಕಲಿಯಲು ಬಂದವರಿಗೆ ಊಟದ ವ್ಯವಸ್ಥೆ ಕೂಡ ಕಷ್ಟದ ಕೆಲಸವಾಗಿತ್ತು. ಬೀದರ್ ಜಿಲ್ಲೆ ಅಂದು ಕಡುಬಡತನದ ಜಿಲ್ಲೆ ಆಗಿತ್ತು. ಅಂತಹ ಕಾಲದಲ್ಲಿ ಕನ್ನಡ ಉಳಿಸಿ ಬೆಳೆಸಲು, ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಮುಷ್ಠಿ ಫಂಡ್ ಎಂಬ ಅಭಿಯಾನ ಆರಂಭಿಸಿದರು.

ಅಂದಿನ ಕಾಲದಲ್ಲಿ ಜೋಳ ಬೀಸಲು ಯಂತ್ರಗಳಿರಲಿಲ್ಲ. ಹಳ್ಳಿಗಳಲ್ಲಿ ಅಲ್ಲಲ್ಲಿ ಬೀಸುವ ಕಲ್ಲುಗಳು ಇರುತ್ತಿದ್ದವು. ಸ್ವಾಮಿಗಳು ಬೀಸುವಕಲ್ಲು ಇರುವ ಜಾಗಗಳಲ್ಲಿ ಕಲ್ಲಿನ ಮೇಲೆ ಜೋಳಿಗೆ ನೇತುಹಾಕುತ್ತಿದ್ದರು. ಜೋಳ ಬೀಸಲು ಬರುತ್ತಿದ್ದ ಹೆಣ್ಣುಮಕ್ಕಳು ತಾವು ಜೋಳ ಬೀಸುವ ಮುನ್ನ ಒಂದು ಹಿಡಿ ಜೋಳವನ್ನು ಜೋಳಿಗೆಗೆ ಹಾಕುತ್ತಿದ್ದರು. ಅದನ್ನು ವಾರದ ಬಳಿಕ ಸಂಗ್ರಹಿಸಿ ಮಕ್ಕಳ ಆಹಾರಕ್ಕಾಗಿ ಬಳಸುತ್ತಿದ್ದರು. ಇದೇ ಮುಷ್ಠಿ ಫಂಡ್.
ಶಾಲೆ ಇದ್ದ ಸ್ಥಳದಲ್ಲಿ ನೀರಿನ ಸಮಸ್ಯೆ ಹೆಚ್ಚಾದ ಕಾರಣ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಿದರು.

ಮುಷ್ಠಿ ಫಂಡ್ ಜೊತೆಗೆ ಪ್ರತಿ ಮನೆಯೂ ವರ್ಷಕ್ಕೆ 2 ರೂ ನೀಡುವಂತೆ ಮಾಡಿದ್ದರು. ಇದರಿಂದ ಶಿಕ್ಷಕರಿಗೆ ಸಂಬಳ, ಮಕ್ಕಳ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳಲಾಗುತ್ತಿತ್ತು. ಜೊತೆಗೆ ಪ್ರತಿ ಹಬ್ಬದಲ್ಲೂ ಅಂಗಡಿಗಳಲ್ಲಿ ವಂತಿಕೆ ಪಡೆದು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರು. ಕನ್ನಡ ಶಾಲೆ ಉಳಿವಿಗೆ ದೇಣಿಗೆ ಸಂಗ್ರಹಿಸಲು, ಹಳ್ಳಿಗಳು, ಪಟ್ಟಣಗಳು ಎಂಬುದನ್ನು ನೋಡದೇ, ಹಗಲು-ರಾತ್ರಿ ಸಂಚರಿಸಿ ಕೆಲಸ ಮಾಡುತ್ತಿದ್ದರು.

ಕನ್ನಡ ಶಾಲೆಯ ಬಗ್ಗೆ ತಿಳಿದ ನಿಜಾಮರ ಸರ್ಕಾರ ಶಾಲೆ ಮುಚ್ಚಿಸಲು ಬೆದರಿಕೆ ಹಾಕಿತು. ಕನ್ನಡ ಶಾಲೆ ಮುಚ್ಚಿ ಇಲ್ಲದಿದ್ದರೇ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುತ್ತದೆ ಎಂಬ ಆದೇಶ ಬಂತು. ಇದಕ್ಕೂ ಜಗ್ಗದ ಶ್ರೀಗಳು ಶಾಲೆಯ ಮುಂದೆ ಉರ್ದು ಶಾಲೆ ಎಂಬ ನಾಮಫಲಕ ಹಾಕಿ, ಒಳಗಡೆ ಕನ್ನಡ ಪಾಠ ನಡೆಸುತ್ತಿದ್ದರು.

ಕನ್ನಡ ಶಾಲೆ ಕಟ್ಟಲು ಆಗ ಸರ್ಕಾರದಿಂದ ಯಾವ ಸೌಲಭ್ಯಗಳೂ ಇರಲಿಲ್ಲ. ಕಾಯಕ ಜೀವಿ ಆಗಿದ್ದ ಶ್ರೀಗಳೇ ಮುಂದೆ ನಿಂತು ಶಾಲೆಯ ಕೆಲಸಗಳನ್ನು ಮಾಡುತ್ತಿದ್ದರು. ಮರಳು ಸೋಸುವುದು, ಗೋಡೆಗಳಿಗೆ ನೀರು ಹಾಕುವುದು ಹೀಗೆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ಇದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ಗಮನಿಸಿದ್ದರು.

3. ಕನ್ನಡ ಭಾಷಿಕರನ್ನು ಒಂದೆಡೆಗೆ ತಂದಿದ್ದು ಏಕೀಕರಣ. ಈ ಹೋರಾಟದಲ್ಲಿ ಚನ್ನಬಸವ ಪಟ್ಟದೇವರು ಶ್ರೀಗಳ ಹೋರಾಟ ಬಹಳ ದೊಡ್ಡ ಪಾತ್ರ ನಿರ್ವಹಿಸಿದೆ. ಈ ಬಗ್ಗೆ ನೀವು ಗಮನಿಸಿದ ಸಂಗತಿಗಳನ್ನು ಮೆಲುಕು ಹಾಕಬಹುದೆ?

ಇಂದಿನ ನಮ್ಮ ಬೀದರ್ ಜಿಲ್ಲೆ ಕರ್ನಾಟಕದಲ್ಲಿ ಉಳಿಯಲು ಕಾರಣ ಶ್ರೀಗಳು. ಕನ್ನಡ ಏಕೀಕರಣ ಸಮಿತಿಯಲ್ಲಿ ಕೆಲಸ ಮಾಡಿದ್ದಾರೆ.

ಒಮ್ಮೆ ಬೀದರ್ ಜಿಲ್ಲೆಯ ಕಮಲನಗರದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅಂದೇ ಕೆಲವು ಮರಾಠಿಗರ ಮುಖಂಡರು ಕೂಡ ಗುಪ್ತವಾಗಿ ಬೃಹತ್ ಮರಾಠ ರ‍್ಯಾಲಿ ಆಯೋಜಿಸಿದ್ದರು. ಕನ್ನಡ ಏಕೀಕರಣ ಸಭೆಯಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಕನ್ನಡಿಗರ ಮೇಲೆ 500-600 ಸಂಖ್ಯೆಯಲ್ಲಿ ಬಂದ ಮರಾಠಿಗರು ಹಲ್ಲೆ ಮಾಡಿದರು. ಕನ್ನಡಪರ ಹೋರಾಟಗಾರರು ಓಡಿದರೂ ಬಿಡದೇ, ಹೊಲಗಳಲ್ಲಿ ಓಡಾಡಿಸಿ ಹಲ್ಲೆ ಮಾಡಿದ್ದರು. ಅಂಥ ಸಂದರ್ಭದಲ್ಲಿ ಗುರುಗಳು ತಕ್ಷಣ ಕನ್ನಡಿಗರ ನೆರವಿಗಾಗಿ ಕಮಲನಗರಕ್ಕೆ ಹೋದರು. ಅವರುಗಳ ಜೊತೆಯೇ ಇದ್ದು ಆರೈಕೆ ಮಾಡಿದರು.

ಒಮ್ಮೆ ಬೀದರ್‌ನ ಪ್ರಮುಖರಾದ ಪ್ರಭುರಾವ್ ಕಂಬ್ಳಿವಾಲೆ ಕನ್ನಡ ಏಕೀಕರಣದ ಬಗ್ಗೆ ನೂರಾರು ಮಂದಿಯನ್ನು ಕರೆದಿದ್ದ ಸಭೆಗೆ ಶ್ರೀಗಳು ಒಬ್ಬರೇ ಹೋಗಿದ್ದರಂತೆ. ಜಯದೇವಿ ತಾಯಿ ಲಿಗಾಡೆ ಅವರ ಎಲ್ಲಾ ಸಭೆಗಳಲ್ಲೂ ಇವರು ಮುಂಚೂಣಿಯಲ್ಲಿದ್ದರು.

4. ಇದೀಗ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲೂ ಬಸವ ತತ್ವಗಳನ್ನು ಪ್ರಸಾರ ಮಾಡುತ್ತಾ ತಾತ್ವಿಕ ವಿಸ್ತರಣೆ ನಡೆಸುತ್ತಿದ್ದೀರಿ. ಅದಕ್ಕೆ ಪ್ರತಿಕ್ರಿಯೆ ಹೇಗಿದೆ?

ಮಹಾರಾಷ್ಟ್ರದಲ್ಲಿ ಬಸವ ತತ್ವದ, ವಚನ ಸಾಹಿತ್ಯದ ಹಂಬಲವಿದೆ. ಹೀಗಾಗಿ ನಾವು ಅವರ ಭಾಷೆಗಳಲ್ಲೇ ವಚನಗಳನ್ನು, ಬಸವ ತತ್ವಗಳ ಕನ್ನಡ ಪುಸ್ತಕಗಳನ್ನು ಭಾಷಾಂತರ ಮಾಡಿದ್ದೇವೆ. ಅದು ಯಶಸ್ವಿಯಾಗಿದೆ. ಮಹಾರಾಷ್ಟ್ರದಲ್ಲಿ ಲಿಂಗಾಯತ ಚಳುವಳಿ ನಡೆಯುತ್ತಿದೆ. ಲಿಂಗಾಯತ ಸ್ವತಂತ್ರಧರ್ಮ ಎಂಬ ಚಳುವಳಿ ಇದಾಗಿದೆ. ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಬಸವ ತತ್ವದಿಂದ.

ತೆಲಂಗಾಣ ಜಿಲ್ಲೆಯಲ್ಲಿ ಬಸವ ತತ್ವವನ್ನು, ವಚನ ಸಾಹಿತ್ಯವನ್ನು ಪಸರಿಸುವ ಕೆಲಸವಾಗಬೇಕಿದೆ. ಅಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿದ್ದೇವೆ. ಕೆಲಸ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ವಚನ ಸಾಹಿತ್ಯದ ಬಗ್ಗೆ ತಿಳುವಳಿಕೆ ಇರುವ ಕಾರಣ, ಜೊತೆಗೆ ಮರಾಠಿ ಭಾಷೆ ಕೂಡ ಇಲ್ಲಿಗೆ ಹತ್ತಿರವಾದ ಕಾರಣ ಅಲ್ಲಿ ಬಸವ ತತ್ವ ಪಸರಿಸಲು ಸಾಧ್ಯವಾಗಿದೆ.

ಅಕ್ಷರ ರೂಪ: ಮಮತ.ಎಂ


ಇದನ್ನೂ ಓದಿ: ಲಿಂಗಾಯತ ಚಳವಳಿ : ಕೇವಲ ರಾಜಕಾರಣವಾಗಿತ್ತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...