Homeಮುಖಪುಟಕನ್ನಡ ಏಕೀಕರಣದಿಂದಲೂ ಕನ್ನಡ ಭಾಷೆಯ ಏಳ್ಗೆಗಾಗಿ, ಬಸವ ತತ್ವಕ್ಕಾಗಿ ಶ್ರಮಿಸುತ್ತಿರುವ ಭಾಲ್ಕಿ ಮಠ

ಕನ್ನಡ ಏಕೀಕರಣದಿಂದಲೂ ಕನ್ನಡ ಭಾಷೆಯ ಏಳ್ಗೆಗಾಗಿ, ಬಸವ ತತ್ವಕ್ಕಾಗಿ ಶ್ರಮಿಸುತ್ತಿರುವ ಭಾಲ್ಕಿ ಮಠ

ಕನ್ನಡ ಶಾಲೆ ಮುಚ್ಚಿ, ಇಲ್ಲದಿದ್ದರೇ ಶಿಕ್ಷೆ ಅನುಭವಿಸಿ ಎಂಬ ನಿಜಾಮರ ಆದೇಶಕ್ಕೆ ಜಗ್ಗದ ಶ್ರೀಗಳು ಶಾಲೆಯ ಮುಂದೆ ಉರ್ದು ಶಾಲೆ ಎಂಬ ನಾಮಫಲಕ ಹಾಕಿ, ಒಳಗಡೆ ಕನ್ನಡ ಪಾಠ ನಡೆಸುತ್ತಿದ್ದರು!

- Advertisement -
- Advertisement -

ಹೈದರಾಬಾದ್ ಕರ್ನಾಟಕ ಎಂದೇ ಹೆಚ್ಚು ಜನಪ್ರಿಯಾವಾಗಿರುವ ಪ್ರದೇಶದ ಜಿಲ್ಲೆಯಾದ ಬೀದರ್‌ನ ಭಾಲ್ಕಿಯ ಹಿರೇಮಠ ಸಂಸ್ಥಾನ ಹಲವು ವಿಶೇಷಗಳನ್ನೊಳಗೊಂಡ ಶರಣ ಮಠ. ನಿಜಾಮರ ಆಳ್ವಿಕೆಯಲ್ಲಿ ಉರ್ದು ಪ್ರಭಾವ ಹೆಚ್ಚಿದ್ದ ಹಾಗೂ ಕನ್ನಡಕ್ಕಿಂತಲೂ ಮರಾಠಿ ಪ್ರಭಾವ ಹೆಚ್ಚಿದ್ದ ಸಮಯದಲ್ಲಿ, ಅಲ್ಲಿ ಕನ್ನಡ ಮಾತೃಭಾಷೆಯಾಗಿದ್ದ ಜನರ ನುಡಿಯಲ್ಲೇ ಮಕ್ಕಳ ಶಿಕ್ಷಣಕ್ಕಾಗಿ ಕಂಕಣತೊಟ್ಟು, ಹಲವು ಸಮಸ್ಯೆಗಳ ನಡುವೆಯೇ ಹೋರಾಟಗಳನ್ನು ಮಾಡಿ, ಕನ್ನಡ ಶಾಲೆಗಳನ್ನು ಸ್ಥಾಪಿಸಿ ಯಶಸ್ವಿಗೊಳಿಸಿದ ಈ ಮಠದ ಮತ್ತು ಮಠದ ಸಂಸ್ಥಾಪಕರಾದ ಚನ್ನಬಸವ ಪಟ್ಟದೇವರು ಶ್ರೀಗಳ ಕೆಲಸ ಸ್ಮರಣೀಯವಾದದ್ದು.


ಅಷ್ಟೇ ಅಲ್ಲದೆ ಬಸವ ಮತ್ತು ಶರಣ ಚಳವಳಿಯ ಪ್ರಸಾರಕ್ಕೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಅವಿರತವಾಗಿ ದುಡಿಯುತ್ತಿರುವ ಮಠ ಇದು.

2020ನೇ ಸಾಲಿನ ಕನ್ನಡ ರಾಜ್ಯೋತ್ಸದ ಸಂದರ್ಭದಲ್ಲಿ ಭಾಲ್ಕಿ ಮಠದ ವಿಶೇಷತೆಗಳನ್ನು ನೆನೆಯಲು ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ, ಬಸವಕಲ್ಯಾಣದ ಅನುಭವಮಂಟಪದ ಹಾಲಿ ಅಧ್ಯಕ್ಷರಾಗಿರುವ ಶ್ರೀ ಡಾ. ಬಸವಲಿಂಗ ಪಟ್ಟದೇವರು ಅವರನ್ನು ರಾಜೇಶ್ವರ ಜುಬರೆ (ಸಾಹಿತಿಗಳು, ಹಿರೇಮಠ ಸಂಸ್ಥಾನ ಭಾಲ್ಕಿ) ಸಂದರ್ಶನ ಮಾಡಿದ್ದಾರೆ.

1. ಕನ್ನಡ ಭಾಷೆಯ ಉಳಿವು ಎಂದರೆ ಅದೊಂದು ಸಾಂಸ್ಕೃತಿಕ, ರಾಜಕೀಯ ಹೋರಾಟವೆಂದೇ ಪರಿಗಣಿಸಲಾಗುತ್ತದೆ. ಭಾಲ್ಕಿಯ ಹಿರೇಮಠ ಸಂಸ್ಥಾನ ಕನ್ನಡದ ಉಳಿವಿಗೆ ಪಣ ತೊಟ್ಟಿದ್ದು ವಿಶೇಷ. ಇದಕ್ಕೆ ಪ್ರೇರಣೆ ಏನಿರಬಹುದೆಂದು ನಿಮಗೆ ಅನ್ನಿಸುತ್ತದೆ..?

ಭಾಲ್ಕಿಯ ಹಿರೇಮಠ ಸಂಸ್ಥಾನ ಕನ್ನಡ ಉಳಿವಿಗಾಗಿ ಸತತ ಪರಿಶ್ರಮ ನಡೆಸುತ್ತಿದೆ. ಬೀದರ್ ಜಿಲ್ಲೆಯಲ್ಲಿ ನಿಜಾಮರ ಆಳ್ವಿಕೆ ಸಮಯದಲ್ಲಿ ಶುರುವಾದ ಈ ಕಾರ್ಯ ಇಂದಿಗೂ ನಡೆಯತ್ತಲೇ ಇದೆ. ಈ ಭಾಗದಲ್ಲಿ ರಾಜ್ಯ ಭಾಷೆಯಾಗಿ ಇದ್ದಿದ್ದು ಕೂಡ ಉರ್ದು.

ಇದರ ಜೊತೆ ಜೊತೆಗೆ ಮರಾಠಿ ಭಾಷೆಯ ಪ್ರಭಾವ ಬೇರೆ. ಈ ಭಾಗದಲ್ಲಿ ಕನ್ನಡಕ್ಕೆ ಯಾವುದೇ ನೆಲೆ ಇಲ್ಲದಂತೆ ಆಗಿತ್ತು. ಅಂಗಡಿಗಳಲ್ಲಿ, ಲೆಕ್ಕಪತ್ರ ವ್ಯವಹಾರಗಳಲ್ಲಿ ಕೇವಲ ಮರಾಠಿ ಬಳಸಲಾಗುತ್ತಿತ್ತು.
ಇಂತಹ ಸಂದರ್ಭದಲ್ಲಿ 1924ರಲ್ಲಿ ಭಾಲ್ಕಿ ಮಠದಲ್ಲಿ ಚನ್ನಬಸವ ಪಟ್ಟದೇವರು ಪಟ್ಟಾಧೀಶರಾದರು. ಜಿಲ್ಲೆಯ ಸ್ಥಿತಿಯನ್ನು ಗಮನಿಸಿ, ಅಧ್ಯಯನ ಮಾಡಿದ ಸ್ವಾಮಿಗಳು ಕನ್ನಡ ಶಾಲೆಯನ್ನು ತೆರೆಯುವ ಸಾಹಸಕ್ಕೆ ಕೈಹಾಕಿದರು. ಆದರೆ ಅದು ಸುಲಭದ ಮಾತಾಗಿರಲಿಲ್ಲ.

ಸ್ವಾಮಿಗಳ ಮೂಲ ಆಶಯ ವಚನ ಚಳವಳಿ. ಬಸವ ತತ್ವವನ್ನು ಉಳಿಸುವುದು, ಬೆಳೆಸುವುದು ಆಗಿತ್ತು. ಆದರೆ ವಚನ ಸಾಹಿತ್ಯವಿರುವುದು ಕನ್ನಡದಲ್ಲಿ ಹಾಗಾಗಿ ಕನ್ನಡದ ಉಳಿವಿಗೆ ಪಣ ತೊಟ್ಟರು. ವಚನ ಸಂಸ್ಕೃತಿ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ವಚನ ಸಂಸ್ಕೃತಿ ಬೆಳೆದರೆ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ಈ ಹಿನ್ನಲೆಯಲ್ಲಿ ಕನ್ನಡವನ್ನು ಬೆಳೆಸುವ ಗುರಿ ಹೊಂದಿದ್ದರು.

2. ವಚನ ಪರಂಪರೆಯು ಸಂಸ್ಕೃತ ಮತ್ತು ಶಿಷ್ಟ ಭಾಷೆಯ ಯಾಜಮಾನ್ಯ ತಿರಸ್ಕರಿಸಿ, ಆಡು ಮಾತಿನಲ್ಲೇ ಜೀವನ ತತ್ವಗಳನ್ನು ಹಂಚಿಕೊಂಡಿದ್ದು ನಮ್ಮ ಮುಂದಿದೆ. ಅದನ್ನೂ ಕನ್ನಡದ ಚಳವಳಿ ಎನ್ನಬಹುದೇನೊ. ಈ ಹಿನ್ನೆಲೆಯಲ್ಲಿ ಹಿರೇಮಠದ ಪೀಠಾಧಿಪತಿಗಳಾಗಿದ್ದ ಚನ್ನಬಸವ ಪಟ್ಟದೇವರು ಅವರನ್ನು ನೆನಪಿಸಿಕೊಳ್ಳಲೇಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಅವರ ಕನ್ನಡ ಹೋರಾಟ ಒಂದು ವಿಶೇಷ ಅಧ್ಯಾಯ. ಅವರ ಕನ್ನಡ ಹೋರಾಟದ ಬಗ್ಗೆ ಹೇಳಿ.

ಹೌದು, ಉತ್ತರ ಕರ್ನಾಟಕ ಭಾಗದಲ್ಲಿ ಚನ್ನಬಸವ ಪಟ್ಟದೇವರ ಹೋರಾಟ ಒಂದು ವಿಶೇಷ ಅಧ್ಯಾಯ. ಕನ್ನಡ ಶಾಲೆಗಳನ್ನು ತೆರೆಯವ ನಿರ್ಧಾರ ಮಾಡಿದ ಶ್ರೀಗಳ ಕೆಲಸ ಸುಲಭದ್ದಾಗಿರಲಿಲ್ಲ. ನಿಜಾಮರ ಆಳ್ವಿಕೆಯಲ್ಲಿದ್ದ ಭಾಗದಲ್ಲಿ ಎಲ್ಲರ ಕಣ್ಣು ತಪ್ಪಿಸಿ ಕೆಲಸ ಮಾಡಬೇಕಿತ್ತು. ಹಾಗಾಗಿ 1936ರಲ್ಲಿ ಮೋರ್ಗಿ ಎಂಬ ಗ್ರಾಮದಲ್ಲಿ (ಇಂದು ತೆಲಂಗಾಣದಲ್ಲಿದೆ) ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಎಂಬ ಕನ್ನಡ ಶಿಕ್ಷಣ ಶಾಲೆಯನ್ನು ಸ್ಥಾಪಿಸಿದರು.
ಶಾಲೆ ಪ್ರಾರಂಭಿಸಿದರು ನಿಜ. ಆದರೆ ಶಾಲೆಗಳಿಗೆ ಮಕ್ಕಳು ಬರುತ್ತಿರಲಿಲ್ಲ. ಊಟ-ವಸತಿ ನೀಡುತ್ತೇವೆ ಎಂದರೂ, ಕನ್ನಡ ಕಲಿತು ಏನ್ನು ಲಾಭ ಎಂದು ಪೋಷಕರು ಕೇಳುತ್ತಿದ್ದರು. ಕನ್ನಡ ಕಲಿತರೆ ಕೆಲಸ ಸಿಗುವುದೇ? ಉರ್ದು, ಮರಾಠಿ ಕಲಿತವರಿಗೆ ಮಾತ್ರ ಕೆಲಸ ಸಿಗುತ್ತದೆ ಎನ್ನುತ್ತಿದ್ದರು. ಆದರೆ ಛಲ ಬಿಡದ ಅವರು ಜಿಲ್ಲೆಯಾದ್ಯಂತ ತಿರುಗಿ 50 ಮಕ್ಕಳನ್ನು ಶಾಲೆಗೆ ಕರೆತಂದರು.

ಕನ್ನಡ ಕಲಿಯುವವರು ಪಂಚಾಂಗ ಹೇಳುವವರು ಎಂಬ ನಂಬಿಕೆ ಮಠದ ಭಕ್ತಾದಿಗಳಲ್ಲಿ ಇತ್ತು. ಆದರೆ ಇವರದು ಅಚಲ ವಿಶ್ವಾಸ. ಕನ್ನಡಕ್ಕೆ ಮುಂದೊಂದು ದಿನ ಬೆಲೆ ಬರುತ್ತದೆ, ನಿಮ್ಮ ಮಕ್ಕಳಿಗೆ ಕನ್ನಡ ಕಲಿಸಿ ಎಂದು ಹೇಳುತ್ತಿದ್ದರು. ಆದರೆ 100 ಮಕ್ಕಳಲ್ಲಿ ಐದಾರು ಮಕ್ಕಳನ್ನು ಮಾತ್ರ ಪೋಷಕರು ಶಾಲೆಗೆ ಕಳುಹಿಸುತ್ತಿದ್ದರು.

ಶಾಲೆಯಲ್ಲಿ ಕಲಿಯಲು ಬಂದವರಿಗೆ ಊಟದ ವ್ಯವಸ್ಥೆ ಕೂಡ ಕಷ್ಟದ ಕೆಲಸವಾಗಿತ್ತು. ಬೀದರ್ ಜಿಲ್ಲೆ ಅಂದು ಕಡುಬಡತನದ ಜಿಲ್ಲೆ ಆಗಿತ್ತು. ಅಂತಹ ಕಾಲದಲ್ಲಿ ಕನ್ನಡ ಉಳಿಸಿ ಬೆಳೆಸಲು, ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಮುಷ್ಠಿ ಫಂಡ್ ಎಂಬ ಅಭಿಯಾನ ಆರಂಭಿಸಿದರು.

ಅಂದಿನ ಕಾಲದಲ್ಲಿ ಜೋಳ ಬೀಸಲು ಯಂತ್ರಗಳಿರಲಿಲ್ಲ. ಹಳ್ಳಿಗಳಲ್ಲಿ ಅಲ್ಲಲ್ಲಿ ಬೀಸುವ ಕಲ್ಲುಗಳು ಇರುತ್ತಿದ್ದವು. ಸ್ವಾಮಿಗಳು ಬೀಸುವಕಲ್ಲು ಇರುವ ಜಾಗಗಳಲ್ಲಿ ಕಲ್ಲಿನ ಮೇಲೆ ಜೋಳಿಗೆ ನೇತುಹಾಕುತ್ತಿದ್ದರು. ಜೋಳ ಬೀಸಲು ಬರುತ್ತಿದ್ದ ಹೆಣ್ಣುಮಕ್ಕಳು ತಾವು ಜೋಳ ಬೀಸುವ ಮುನ್ನ ಒಂದು ಹಿಡಿ ಜೋಳವನ್ನು ಜೋಳಿಗೆಗೆ ಹಾಕುತ್ತಿದ್ದರು. ಅದನ್ನು ವಾರದ ಬಳಿಕ ಸಂಗ್ರಹಿಸಿ ಮಕ್ಕಳ ಆಹಾರಕ್ಕಾಗಿ ಬಳಸುತ್ತಿದ್ದರು. ಇದೇ ಮುಷ್ಠಿ ಫಂಡ್.
ಶಾಲೆ ಇದ್ದ ಸ್ಥಳದಲ್ಲಿ ನೀರಿನ ಸಮಸ್ಯೆ ಹೆಚ್ಚಾದ ಕಾರಣ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಿದರು.

ಮುಷ್ಠಿ ಫಂಡ್ ಜೊತೆಗೆ ಪ್ರತಿ ಮನೆಯೂ ವರ್ಷಕ್ಕೆ 2 ರೂ ನೀಡುವಂತೆ ಮಾಡಿದ್ದರು. ಇದರಿಂದ ಶಿಕ್ಷಕರಿಗೆ ಸಂಬಳ, ಮಕ್ಕಳ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳಲಾಗುತ್ತಿತ್ತು. ಜೊತೆಗೆ ಪ್ರತಿ ಹಬ್ಬದಲ್ಲೂ ಅಂಗಡಿಗಳಲ್ಲಿ ವಂತಿಕೆ ಪಡೆದು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರು. ಕನ್ನಡ ಶಾಲೆ ಉಳಿವಿಗೆ ದೇಣಿಗೆ ಸಂಗ್ರಹಿಸಲು, ಹಳ್ಳಿಗಳು, ಪಟ್ಟಣಗಳು ಎಂಬುದನ್ನು ನೋಡದೇ, ಹಗಲು-ರಾತ್ರಿ ಸಂಚರಿಸಿ ಕೆಲಸ ಮಾಡುತ್ತಿದ್ದರು.

ಕನ್ನಡ ಶಾಲೆಯ ಬಗ್ಗೆ ತಿಳಿದ ನಿಜಾಮರ ಸರ್ಕಾರ ಶಾಲೆ ಮುಚ್ಚಿಸಲು ಬೆದರಿಕೆ ಹಾಕಿತು. ಕನ್ನಡ ಶಾಲೆ ಮುಚ್ಚಿ ಇಲ್ಲದಿದ್ದರೇ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುತ್ತದೆ ಎಂಬ ಆದೇಶ ಬಂತು. ಇದಕ್ಕೂ ಜಗ್ಗದ ಶ್ರೀಗಳು ಶಾಲೆಯ ಮುಂದೆ ಉರ್ದು ಶಾಲೆ ಎಂಬ ನಾಮಫಲಕ ಹಾಕಿ, ಒಳಗಡೆ ಕನ್ನಡ ಪಾಠ ನಡೆಸುತ್ತಿದ್ದರು.

ಕನ್ನಡ ಶಾಲೆ ಕಟ್ಟಲು ಆಗ ಸರ್ಕಾರದಿಂದ ಯಾವ ಸೌಲಭ್ಯಗಳೂ ಇರಲಿಲ್ಲ. ಕಾಯಕ ಜೀವಿ ಆಗಿದ್ದ ಶ್ರೀಗಳೇ ಮುಂದೆ ನಿಂತು ಶಾಲೆಯ ಕೆಲಸಗಳನ್ನು ಮಾಡುತ್ತಿದ್ದರು. ಮರಳು ಸೋಸುವುದು, ಗೋಡೆಗಳಿಗೆ ನೀರು ಹಾಕುವುದು ಹೀಗೆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ಇದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ಗಮನಿಸಿದ್ದರು.

3. ಕನ್ನಡ ಭಾಷಿಕರನ್ನು ಒಂದೆಡೆಗೆ ತಂದಿದ್ದು ಏಕೀಕರಣ. ಈ ಹೋರಾಟದಲ್ಲಿ ಚನ್ನಬಸವ ಪಟ್ಟದೇವರು ಶ್ರೀಗಳ ಹೋರಾಟ ಬಹಳ ದೊಡ್ಡ ಪಾತ್ರ ನಿರ್ವಹಿಸಿದೆ. ಈ ಬಗ್ಗೆ ನೀವು ಗಮನಿಸಿದ ಸಂಗತಿಗಳನ್ನು ಮೆಲುಕು ಹಾಕಬಹುದೆ?

ಇಂದಿನ ನಮ್ಮ ಬೀದರ್ ಜಿಲ್ಲೆ ಕರ್ನಾಟಕದಲ್ಲಿ ಉಳಿಯಲು ಕಾರಣ ಶ್ರೀಗಳು. ಕನ್ನಡ ಏಕೀಕರಣ ಸಮಿತಿಯಲ್ಲಿ ಕೆಲಸ ಮಾಡಿದ್ದಾರೆ.

ಒಮ್ಮೆ ಬೀದರ್ ಜಿಲ್ಲೆಯ ಕಮಲನಗರದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅಂದೇ ಕೆಲವು ಮರಾಠಿಗರ ಮುಖಂಡರು ಕೂಡ ಗುಪ್ತವಾಗಿ ಬೃಹತ್ ಮರಾಠ ರ‍್ಯಾಲಿ ಆಯೋಜಿಸಿದ್ದರು. ಕನ್ನಡ ಏಕೀಕರಣ ಸಭೆಯಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಕನ್ನಡಿಗರ ಮೇಲೆ 500-600 ಸಂಖ್ಯೆಯಲ್ಲಿ ಬಂದ ಮರಾಠಿಗರು ಹಲ್ಲೆ ಮಾಡಿದರು. ಕನ್ನಡಪರ ಹೋರಾಟಗಾರರು ಓಡಿದರೂ ಬಿಡದೇ, ಹೊಲಗಳಲ್ಲಿ ಓಡಾಡಿಸಿ ಹಲ್ಲೆ ಮಾಡಿದ್ದರು. ಅಂಥ ಸಂದರ್ಭದಲ್ಲಿ ಗುರುಗಳು ತಕ್ಷಣ ಕನ್ನಡಿಗರ ನೆರವಿಗಾಗಿ ಕಮಲನಗರಕ್ಕೆ ಹೋದರು. ಅವರುಗಳ ಜೊತೆಯೇ ಇದ್ದು ಆರೈಕೆ ಮಾಡಿದರು.

ಒಮ್ಮೆ ಬೀದರ್‌ನ ಪ್ರಮುಖರಾದ ಪ್ರಭುರಾವ್ ಕಂಬ್ಳಿವಾಲೆ ಕನ್ನಡ ಏಕೀಕರಣದ ಬಗ್ಗೆ ನೂರಾರು ಮಂದಿಯನ್ನು ಕರೆದಿದ್ದ ಸಭೆಗೆ ಶ್ರೀಗಳು ಒಬ್ಬರೇ ಹೋಗಿದ್ದರಂತೆ. ಜಯದೇವಿ ತಾಯಿ ಲಿಗಾಡೆ ಅವರ ಎಲ್ಲಾ ಸಭೆಗಳಲ್ಲೂ ಇವರು ಮುಂಚೂಣಿಯಲ್ಲಿದ್ದರು.

4. ಇದೀಗ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲೂ ಬಸವ ತತ್ವಗಳನ್ನು ಪ್ರಸಾರ ಮಾಡುತ್ತಾ ತಾತ್ವಿಕ ವಿಸ್ತರಣೆ ನಡೆಸುತ್ತಿದ್ದೀರಿ. ಅದಕ್ಕೆ ಪ್ರತಿಕ್ರಿಯೆ ಹೇಗಿದೆ?

ಮಹಾರಾಷ್ಟ್ರದಲ್ಲಿ ಬಸವ ತತ್ವದ, ವಚನ ಸಾಹಿತ್ಯದ ಹಂಬಲವಿದೆ. ಹೀಗಾಗಿ ನಾವು ಅವರ ಭಾಷೆಗಳಲ್ಲೇ ವಚನಗಳನ್ನು, ಬಸವ ತತ್ವಗಳ ಕನ್ನಡ ಪುಸ್ತಕಗಳನ್ನು ಭಾಷಾಂತರ ಮಾಡಿದ್ದೇವೆ. ಅದು ಯಶಸ್ವಿಯಾಗಿದೆ. ಮಹಾರಾಷ್ಟ್ರದಲ್ಲಿ ಲಿಂಗಾಯತ ಚಳುವಳಿ ನಡೆಯುತ್ತಿದೆ. ಲಿಂಗಾಯತ ಸ್ವತಂತ್ರಧರ್ಮ ಎಂಬ ಚಳುವಳಿ ಇದಾಗಿದೆ. ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಬಸವ ತತ್ವದಿಂದ.

ತೆಲಂಗಾಣ ಜಿಲ್ಲೆಯಲ್ಲಿ ಬಸವ ತತ್ವವನ್ನು, ವಚನ ಸಾಹಿತ್ಯವನ್ನು ಪಸರಿಸುವ ಕೆಲಸವಾಗಬೇಕಿದೆ. ಅಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿದ್ದೇವೆ. ಕೆಲಸ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ವಚನ ಸಾಹಿತ್ಯದ ಬಗ್ಗೆ ತಿಳುವಳಿಕೆ ಇರುವ ಕಾರಣ, ಜೊತೆಗೆ ಮರಾಠಿ ಭಾಷೆ ಕೂಡ ಇಲ್ಲಿಗೆ ಹತ್ತಿರವಾದ ಕಾರಣ ಅಲ್ಲಿ ಬಸವ ತತ್ವ ಪಸರಿಸಲು ಸಾಧ್ಯವಾಗಿದೆ.

ಅಕ್ಷರ ರೂಪ: ಮಮತ.ಎಂ


ಇದನ್ನೂ ಓದಿ: ಲಿಂಗಾಯತ ಚಳವಳಿ : ಕೇವಲ ರಾಜಕಾರಣವಾಗಿತ್ತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...