ವಿವಾದಿತ ಕೃಷಿ ಕಾನೂನುಗಳನ್ನು ಒಕ್ಕೂಟ ಸರ್ಕಾರ ಜಾರಿಗೊಳಿಸಿ ಒಂದು ವರ್ಷವಾದ ಹಿನ್ನೆಲೆ ಇಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ಗೆ ಕರೆ ನೀಡಿದೆ. ಇದಕ್ಕೆ ವಿಪಕ್ಷ ನಾಯಕರು ಸೇರಿದಂತೆ ಹಲವು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರುಗಳ ವಿವರ ಇಲ್ಲಿದೆ.
ರಾಹುಲ್ ಗಾಂಧಿ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾರತ್ ಬಂದ್ಗೆ ಬೆಂಬಲ ನೀಡಿದ್ದು, “ರೈತರ ಅಹಿಂಸಾತ್ಮಕ ಸತ್ಯಾಗ್ರಹ ಇಂದಿಗೂ ಹಾಗೆಯೇ ನಡೆಯುತ್ತಿದೆ. ಆದರೆ ಶೋಷಣೆ ಮಾಡುತ್ತಿರುವ ಸರ್ಕಾರವು ಇದನ್ನು ಇಷ್ಟಪಡುವುದಿಲ್ಲ. ಹೀಗಾಗಿ ಇಂದು ಭಾರತ್ ಬಂದ್ ಇದೆ” ಎಂದು ಟ್ವೀಟ್ ಮಾಡಿದ್ದಾರೆ.
किसानों का अहिंसक सत्याग्रह आज भी अखंड है
लेकिन शोषण-कार सरकार को ये नहीं पसंद है
इसलिए #आज_भारत_बंद_है #IStandWithFarmers— Rahul Gandhi (@RahulGandhi) September 27, 2021
ಚರಣ್ಜಿತ್ ಸಿಂಗ್ ಚನ್ನಿ (ಕಾಂಗ್ರೆಸ್)
ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ರೈತ ಹೋರಾಟಕ್ಕೆ ಬೆಂಬಲಿಸಿ ಕಪ್ಪು ಬಾವುಟ ಹಿಡಿದಿರುವ ಪೋಟೋ ಜೊತೆಗೆ ಟ್ವೀಟ್ ಮಾಡಿದ್ದಾರೆ.
“ನಾನು ರೈತರೊಂದಿಗೆ ನಿಲ್ಲುತ್ತೇನೆ ಮತ್ತು ಕೇಂದ್ರ ಸರ್ಕಾರಕ್ಕೆ ಮೂರು ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಲು ಮನವಿ ಮಾಡುತ್ತೇನೆ. ನಮ್ಮ ರೈತರು ಒಂದು ವರ್ಷದಿಂದಲೂ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಅವರ ಧ್ವನಿಯನ್ನು ಕೇಳುವ ಸಮಯ ಬಂದಿದೆ” ಎಂದಿದ್ದಾರೆ. ಜೊತೆಗೆ ರೈತರು ಶಾಂತಿಯುತವಾಗಿ ತಮ್ಮ ಹಕ್ಕನ್ನು ಕೇಳುವಂತೆ ನಾನು ವಿನಂತಿಸುತ್ತೇನೆ ಎಂದಿದ್ದಾರೆ.
#IStandWithFarmers & appeal the Union Govt. to repeal the three anti farmer laws. Our farmers have been struggling for their rights since more than a year & it is high time that their voice is heard. I request the farmers to raise their voice in a peaceful manner. pic.twitter.com/R1VZ5gowIc
— Charanjit S Channi (@CHARANJITCHANNI) September 27, 2021
ರಾಘವ್ ಚಡ್ಡಾ (ಆಪ್)
ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಡ್ಡಾ ಕೃಷಿ ಕಾನೂನುಗಳನ್ನು ವಿರೋಧಿಸಿ, ಭಾರತ್ ಬಂದ್ಗೆ ಬೆ<ಬಲ ನೀಡಿದ್ದಾರೆ.
“ಆಮ್ ಆದ್ಮಿ ಪಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಅವರು ಕೇಜ್ರಿವಾಲ್, ಕಪ್ಪು ಕಾನೂನುಗಳ ವಿರುದ್ಧ ರೈತರ ಪರವಾಗಿ ನಿಂತಿದ್ದಾರೆ. ಸೆಪ್ಟೆಂಬರ್ 27 ರಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ ಭಾರತ್ ಬಂದ್ ಕರೆಗೆ ಎಎಪಿ ಸಂಪೂರ್ಣ ಬೆಂಬಲಿಸುತ್ತಣ” ಎಂದು ವಿಡಿಯೊ ಬಿಡುಗಡೆ ಮಾಡಿದ್ದಾರೆ.
ਆਮ ਆਦਮੀ ਪਾਰਟੀ ਅਤੇ ਅਰਵਿੰਦ ਕੇਜਰੀਵਾਲ ਕਾਲੇ ਕਾਨੂੰਨਾਂ ਦੇ ਖ਼ਿਲਾਫ਼ ਸਦਾ ਕਿਸਾਨਾਂ ਦੇ ਨਾਲ ਖੜ੍ਹੇ ਹਨ। ਆਪ 27 ਸਤੰਬਰ ਨੂੰ ਸੰਯੁਕਤ ਕਿਸਾਨ ਮੋਰਚੇ ਵੱਲੋਂ ਦਿੱਤੇ ਭਾਰਤ ਬੰਦ ਦੇ ਸੱਦੇ ਦਾ ਪੁਰਜ਼ੋਰ ਸਮਰਥਨ ਕਰਦੀ ਹੈ। pic.twitter.com/cahz87Q24I
— Raghav Chadha (@raghav_chadha) September 25, 2021
ತೇಜಸ್ವಿ ಯಾದವ್ (ಆರ್ಜೆಡಿ)
ಆರ್ಜೆಡಿ ನಾಯಕ, ಬಿಹಾರದ ಪ್ರತಿಪಕ್ಷ ನಾಯಕ್ ತೇಜಸ್ವಿ ಯಾದವ್ ರೈತರಿಗೆ ಬೆಂಬಲ ವ್ಯಕ್ತಪಡಿಸಿ, ರೈತರ ವಬಿರುದ್ಧ ಮಾತನಾಡುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
किसान जो देश की रीढ़ हैं उन्हें गरीब रखकर क्या देश कभी समृद्ध, सक्षम, सबल बन पाएगा?
जिस मुँह से अन्नदाताओं का उगाया अन्न खाते हैं उसी मुँह से फंडदाताओं के फ़ायदे के लिए देश के किसानों के विरुद्ध दुष्प्रचार करते, अपशब्द कहते लज्जा नहीं आती?#भारत_बंद #BharatBand pic.twitter.com/tKfNMc4Vio
— Tejashwi Yadav (@yadavtejashwi) September 27, 2021
“ದೇಶದ ಬೆನ್ನೆಲುಬಾಗಿರುವ ರೈತರನ್ನು ಬಡವರನ್ನಾಗಿ ಮಾಡುವ ಮೂಲಕ, ದೇಶವು ಎಂದಾದರೂ ಸಮೃದ್ಧ, ಸಮರ್ಥ, ಬಲಿಷ್ಠವಾಗಲು ಸಾಧ್ಯವೇ..? ಈ ದಾನಿಗಳು ಬೆಳೆದ ಆಹಾರವನ್ನು ನಾವು ತಿನ್ನುತ್ತೇವೆ. ಅದೇ ಬಾಯಿಯಿಂದ ದೇಶದ ರೈತರ ವಿರುದ್ಧ ನಿಂದನಾತ್ಮಕ ಮಾತುಗಳನ್ನು ಮಾತನಾಡಲು ನಾಚಿಕೆಯಾಗುವುದಿಲ್ಲವೇ..?” ಎಂದು ಆಕ್ರೋಶ ಹೊರಹಾಕಿದ್ದಾರೆ.
ಲಾಲೂ ಪ್ರಸಾದ್ ಯಾದವ್ (ಬಿಹಾರದ ಮಾಜಿ ಮುಖ್ಯಮಂತ್ರಿ)
ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಭಾರತ್ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
“ಭಾರತವು ಕೃಷಿಕರ ದೇಶವಾಗಿದ್ದು, ರೈತರ ಶ್ರಮದಿಂದ ಬಲವನ್ನು ಪಡೆಯುವ ಮೂಲಕ ದೇಶ ಬೆಳೆಯುತ್ತಿದೆ. ಇದು ಬೆರಳೆಣಿಕೆಯಷ್ಟು ಬಂಡವಾಳಶಾಹಿಗಳ ಕ್ರೋನಿ ಕ್ಯಾಪಿಟಲಿಸಂ ಪ್ರಾಬಲ್ಯದ ದೇಶವಲ್ಲ. ಕ್ರೂರ ಬಂಡವಾಳಶಾಹಿ ಎಲ್ಲಾ ಸಂಪತ್ತನ್ನು ಬೆರಳೆಣಿಕೆಯ ಜನರ ಚೀಲದಲ್ಲಿ ಇರಿಸುತ್ತದೆ. ಆದರೆ ರೈತ ಎಲ್ಲರಿಗೂ ಆಹಾರವನ್ನು ಉತ್ಪಾದಿಸುತ್ತಾನೆ. ಅದಕ್ಕಾಗಿಯೇ ನಾವು ರೈತರೊಂದಿಗೆ ಇದ್ದೇವೆ” ಎಂದಿದ್ದಾರೆ.
भारत कृषकों के परिश्रम से ताकत पाकर बढ़ने वाला कृषि प्रधान देश है। यह मुट्ठीभर पूंजीपतियों का क्रोनी कैपिटलिज्म प्रधान देश नहीं।
घोर पूंजीवाद समस्त धन को मुट्ठीभर लोगों की झोली में डालता है जबकि किसान सबके लिए अन्न पैदा करता है।
इसीलिए हम किसानों और #आज_भारत_बंद_है के साथ है।
— Lalu Prasad Yadav (@laluprasadrjd) September 27, 2021
ಇದನ್ನೂ ಓದಿ: ರೈತರ ಆಕ್ರೋಶ ಸ್ಫೋಟ – ಎಲ್ಲೆಡೆ ಆರಂಭಗೊಂಡ ಭಾರತ್ ಬಂದ್ಗೆ ಉತ್ತಮ ಪ್ರತಿಕ್ರಿಯೆ