Homeಕರ್ನಾಟಕರೈತರ ಆಕ್ರೋಶ ಸ್ಫೋಟ - ಎಲ್ಲೆಡೆ ಆರಂಭಗೊಂಡ ಭಾರತ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ರೈತರ ಆಕ್ರೋಶ ಸ್ಫೋಟ – ಎಲ್ಲೆಡೆ ಆರಂಭಗೊಂಡ ಭಾರತ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ರೈತ ವಿರೋಧಿ ಧೋರಣೆ ವಿರುದ್ಧ ಸಿಡಿದೆದ್ದ ಕರ್ನಾಟಕ... ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಕ್ತವಾಗಿರುವ ಆಕ್ರೋಶ ನೋಡಿರಿ...

- Advertisement -
- Advertisement -

ರೈತರು ಕರೆ ನೀಡಿರುವ ರಾಷ್ಟ್ರವ್ಯಾಪಿ ಬಂದ್‌ಗೆ ಕನ್ನಡ ನಾಡು ಸ್ಪಂದಿಸಿದೆ. ವಿವಿಧ ಸಂಘಟನೆಗಳು ರಸ್ತೆತಡೆ, ಪ್ರತಿಭಟನೆ ನಡೆಸಿದ್ದಾರೆ. ರೈತ ವಿರೋಧಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಭಾರತ್ ಬಂದ್ ಬೆಂಬಲಿಸಿ ಕೊಪ್ಪಳದಲ್ಲಿ ಪ್ರತಿಭಟನೆ

***

ಸಂಯುಕ್ತ ಕಿಸಾನ್ ಮೋರ್ಚಾ-ಶಿವಮೊಗ್ಗದಲ್ಲಿ ಬೈಕ್ ರ್‍ಯಾಲಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು, ಶಿವಮೊಗ್ಗ ನಗರದ ಗೋಪಿ ವೃತ್ತದಿಂದ ಬೈಕ್ ರ್‍ಯಾಲಿ ಹೊರಟು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು.
***
ರಸ್ತೆಗೆ ಅಡ್ಡ ಮಲಗಿ ಪ್ರತಿಭಟನೆ
https://twitter.com/naanugauri/status/1442351259906830336
ಮೈಸೂರಿನಲ್ಲಿ ಭಾರತ್ ಬಂದ್ ಅಂಗವಾಗಿ ಬಸ್ ಸಂಚಾರ ಮಾಡದಂತೆ ತಡೆದ ಪ್ರತಿಭಟನಾಕಾರರು..

***

ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ!

ಚಿತ್ರದುರ್ಗದಲ್ಲಿ ವಿನೂತನ ಪ್ರತಿಭಟನೆ ಮಾಡಲಾಯಿತು. ಭಾರತ್ ಬಂದ್ ಅಂಗವಾಗಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿದ ರೈತರು ಆಕ್ರೋಶ ವ್ಯಕ್ತಪಡಿಸಿದರು.

***

ಚಿಕ್ಕಬಳ್ಳಾಪುರ ವರದಿ

ಚಿಕ್ಕಬಳ್ಳಾಪುರದಲ್ಲಿ ಭಾರತ್ ಬಂದ್ ಅಂಗವಾಗಿ ಅಂಗಡಿ ಮುಂಗಟ್ಟುಗಳನ್ನು ರೈತರು ಮುಚ್ಚಿಸಿದರು.

***

ಚಿತ್ರದುರ್ಗದಲ್ಲಿ ಪ್ರತಿಭಟನೆ

ಚಿತ್ರದುರ್ಗದಲ್ಲಿ ಭಾರತ್ ಬಂದ್ ಬೆಂಬಲಿಸಿ ಹೆದ್ದಾರಿ ತಡೆ ಮಾಡಿ ಪ್ರತಿಭಟಿಸಲಾಯಿತು. ಕರ್ನಾಟಕ ಜನಶಕ್ತಿ ಮತ್ತು ಇತರ ಸಂಘಟನೆಗಳು ಪಾಲ್ಗೊಂಡಿದ್ದವು.

***

ಅಂಗಡಿಗಳನ್ನು ಮುಚ್ಚಿಸಿದ ಹೋರಾಟಗಾರರು

https://twitter.com/naanugauri/status/1442350363491794948

ಹಾಸನದಲ್ಲಿ ಬಲವಂತವಾಗಿ ಅಂಗಡಿ ಮುಚ್ಚಿಸಿ ಬಂದ್ ಆಚರಿಸಲಾಯಿತು.
***

ಅಂಬಾನಿ- ಅದಾನಿ ಸ್ಟಾಲ್‌!

ಕೋಲಾರದಲ್ಲಿ ಅಂಬಾನಿ – ಅದಾನಿ ಸ್ಟಾಲ್ ತೆಗೆದು ರೈತರು ಪ್ರತಿಭಟಿಸಿದರು. ಮುಂಜಾನೆ 6 ಗಂಟೆಯಲ್ಲೇ ಪ್ರತಿಭಟನೆ ಆರಂಭವಾಗಿತ್ತು.

***

ಪೊಲೀಸರೊಂದಿಗೆ ಜಟಾಪಟಿ

https://twitter.com/naanugauri/status/1442355063666536450

ಯಾದಗಿರಿಯಲ್ಲಿ ಬಸ್ ತಡೆದು ರೈತರು ಪ್ರತಿಭಟಿಸಿದರು. ಪ್ರತಿಭಟನಾಕಾರರು ಪೊಲೀಸರೊಂದಿಗೆ ಜಟಾಪಟಿ ನಡೆಸಿದರು.

***

ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ

ಕಲಬುರಗಿ ವರದಿ

ಕಲಬುರಗಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಭಾರತ್ ಬಂದ್ ಆಚರಣೆ

***

ತುಮಕೂರಿನಲ್ಲಿ ಬೃಹತ್‌ ಮೆರವಣಿಗೆ

ತುಮಕೂರಿನಲ್ಲಿ ಬೃಹತ್ ಮೆರವಣಿಗೆ, ಪ್ರತಿಭಟನೆ ನಡೆಯಿತು. ಭಾರತ್ ಬಂದ್ ಯಶಸ್ವಿಯಾಯಿತು.

ಬಾಗಲಕೋಟೆ ವರದಿ

ಬಾಗಲಕೋಟೆಯಲ್ಲಿ ಬಸ್ ತಡೆದು ಪ್ರತಭಟನೆ, ಭಾರತ್ ಬಂದ್ ಬೆಂಬಲಿಸಿದ ರೈತರು

***

ಪ್ರತಿಭಟನಾಕಾರರ ಮೇಲೆ ಹಲ್ಲೆ

ದಾವಣಗೆರೆಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಭಾರತ್ ಬಂದ್ ನಡೆಸದಂತೆ ವಿರೋಧ ವ್ಯಕ್ತಪಡಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

****

ಮೈಸೂರು ವರದಿ

ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಿತು.

***

ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಕರ್ನಾಟಕ ಕಾರ್ಮಿಕ ಪಕ್ಷದ ಪಧಾದಿಕಾರಿಗಳಿಂದ ಭಾರತ್ ಬಂದ್ ಆಚರಣೆ – ಪ್ರತಿಭಟನೆ

***

ಕಾಂಗ್ರೆಸ್‌ನಿಂದ ಪ್ರತಿಭಟನೆ

ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರತ್ ಬಂದ್.. ವಶಕ್ಕೆ ಪಡೆದ ಪೊಲೀಸರು

***

ಬೆಂಗಳೂರಲ್ಲಿ ಜನಸಾಗರ

ಬೆಂಗಳೂರಿನ ಟೌನ್‌ಹಾಲ್‌ ತುಂಬಾ ಜನಸಾಗರ.. ಭಾರತ್ ಬಂದ್‌ಗೆ ಬೆಂಬಲದ ಮಹಾಪೂರ..

***

 ಅರಬೆತ್ತಲೆ ಪ್ರತಿಭಟನೆ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೆಳಗಾವಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ರೈತರು.

***

ಮಳೆಯಲ್ಲಿಯೇ ಪ್ರತಿಭಟನೆ

ಮಡಿಕೇರಿಯಲ್ಲಿ ಮಳೆಯಲ್ಲೂ ಪ್ರತಿಭಟಿಸಿ ಭಾರತ್ ಬಂದ್ ಆಚರಿಸಿದ ಪ್ರಜ್ಞಾವಂತರು…

ಪಾಂಡವಪುರ ವರದಿ

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ರೈತರಿಂದ ಬೈಕ್ ರ್‍ಯಾಲಿ ನಡೆಯಿತು.

***

ರಾಯಚೂರು ವರದಿ

ರಾಯಚೂರು ಗ್ರಾಮೀಣ ಶಾಸಕ ದದ್ದಲ ಬಸನಗೌಡ ಅವರು ಭಾರತ್ ಬೆಂಬಲಿಸಿ ಪ್ರತಿಭಟನೆಯಲ್ಲಿ ಮಾತನಾಡಿದರು.

***

ಮಂಗಳೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...