Homeಮುಖಪುಟದೈಹಿಕ ತಪಸ್ಸು, ಮನದ ಸಾಧನೆ ಹಾಗೂ ವೈಚಾರಿಕ ಮಂಥನದ ಯಾತ್ರೆ

ದೈಹಿಕ ತಪಸ್ಸು, ಮನದ ಸಾಧನೆ ಹಾಗೂ ವೈಚಾರಿಕ ಮಂಥನದ ಯಾತ್ರೆ

- Advertisement -
- Advertisement -

ಐದು ತಿಂಗಳವರೆಗೆ ದೇಶದ ರಸ್ತೆಗಳಲ್ಲಿ 3700 ಕಿಲೊಮೀಟರ್ ಅಳೆದು ಈ ಭಾರತ್ ಜೋಡೊ ಯಾತ್ರೆ ಸಾಧಿಸುವುದಾದರೂ ಏನು? 7ನೆಯ ಸೆಪ್ಟೆಂಬರ್‌ನಂದು ಕನ್ಯಾಕುಮಾರಿಯಿಂದ ಈ ಯಾತ್ರೆ ಶುರುವಾದಾಗ ಈ ಪ್ರಶ್ನೆ ಎಲ್ಲಾ ಯಾತ್ರಿಗಳ ಎದುರಿಗೆ ಕಾಣಿಸಿಕೊಂಡಿತ್ತು. ಆದರೆ ಗಾಂಧೀಜಿಯ ಪುಣ್ಯತಿಥಿಯ ದಿನದಂದು, ಜೋರಾಗಿ ಸುರಿಯುತ್ತಿರುವ ಹಿಮದ ನಡುವೆಯೇ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯವಾದಾಗ ಅದಕ್ಕೆ ಉತ್ತರ ಸ್ಪಷ್ಟವಾಗಿತ್ತು.

ನಮ್ಮ ಪರಂಪರೆಯಲ್ಲಿ ಯಾವುದೇ ಯಾತ್ರೆ ಕೇವಲ ರಸ್ತೆ ಅಳೆಯಲು ಅಥವಾ ಪಿಕ್ನಿಕ್‌ಗಾಗಿ ಅಥವಾ ಕಸರತ್ತು ಮಾಡಲು ಆಗಿರುವುದಿಲ್ಲ. ಗೌತಮ ಬುದ್ಧನಿಂದ ಹಿಡಿದು ಮಹಾತ್ಮ ಗಾಂಧಿಯ ತನಕ ಎಲ್ಲಾ ಯಾತ್ರೆಗಳು ಶರೀರವನ್ನು ದಂಡಿಸುವುದಕ್ಕಿಂತ ಹೆಚ್ಚಾಗಿ ವಿಚಾರದ ಹಾಗೂ ಮಾನಸ ಯಾತ್ರೆಗಳಾಗಿವೆ. ಶರೀರದ ಚಲನೆಯು ದೇಶ ಮತ್ತು ಸಮಾಜವನ್ನು ಅಲುಗಾಡಿಸುವ ಮಾಧ್ಯಮವಾಗಿರುತ್ತದೆ. ಭಾರತ ಜೋಡೊ ಯಾತ್ರೆಯ ಉದ್ದೇಶವೂ ಇದೇ ಆಗಿತ್ತು. ಇದು ಶಾರೀರಿಕ ತಪಸ್ಸಿನ ಮುಖಾಂತರ ವೈಚಾರಿಕ ಮಂಥನ ಹಾಗೂ ಮನಸ್ಸಿನ ಸಾಧನದ ಯಾತ್ರೆಯಾಗಿದೆ.

ಈ ಯಾತ್ರೆಯ ಶಾರೀರಿಕ ತಪಸ್ಸಿನ ಬಗೆ ಅರ್ಥಮಾಡಿಕೊಳ್ಳಲು ದೇಶಕ್ಕೆ ಇನ್ನೂ ಸಮಯ ಹಿಡಿಯಲಿದೆ. ಜನತೆಗೆ ರಾಹುಲ್ ಗಾಂಧಿಯ ಟಿ-ಶರ್ಟ್ ಅಂತೂ ಕಾಣಿಸಿತು, ಆದರೆ ಈ ಸಂಪೂರ್ಣ ಪರಿಶ್ರಮದ ಹಿಂದೆ ಲಕ್ಷಾಂತರ ಜನರ ತಪಸ್ಸು ಇನ್ನೂ ಕಣ್ಣಿಗೆ ಬಿದ್ದಿಲ್ಲ. ಪ್ರತಿ ದಿನ ಸುಮಾರು 20ರಿಂದ 25 ಕಿಲೋಮೀಟರ್ ಕಾಲ್ನಡಿಗೆ, ಎಲ್ಲಾ ರೀತಿಯ ಹವಾಮಾನವನ್ನು ಎದುರಿಸುವುದು ಹಾಗೂ ಎಲ್ಲಾ ರೀತಿಯ ಮನಸ್ಥಿತಿ ಮತ್ತು ಸನ್ನಿವೇಶಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು, ಇವೆಲ್ಲವೂ ಸಣ್ಣ ವಿಷಯಗಳೇನಲ್ಲ. ಈ ಯಾತ್ರೆಯು ದೇಶದ ಎಲ್ಲಾ ರೀತಿಯ ಪ್ರದೇಶಗಳನ್ನು ಹಾಗೂ ಎಲ್ಲಾ ರೀತಿಯ ಹವಾಮಾನಗಳನ್ನು ನೋಡಿದೆ. ಸುಡು ಬಿಸಿಲು, ಮೈಕೊರೆಯುವ ಚಳಿ, ಧಾರಾಕಾರ ಮಳೆ ಹಾಗೂ ಜೋರಾದ ಹಿಮಪಾತ. ಈ ಯಾತ್ರೆಯ ಒಬ್ಬ ಸಹಯಾತ್ರಿಯಾಗಿ, ಪ್ರತಿಯೊಬ್ಬ ಯಾತ್ರಿಯ ಪಾದಗಳಲ್ಲಿ ಗುಳ್ಳೆಗಳು, ಎಲ್ಲಾ ರೀತಿಯ ರೋಗಗಳು, ಎಲುಬು ಕೊರೆಯುವ ಚಳಿಯ ನಡುವೆ ಉರುಳಿಹೋದ ಟೆಂಟ್‌ಗಳು- ಇವೆಲ್ಲವಕ್ಕೂ ನಾನು ಖುದ್ದು ಸಾಕ್ಷಿಯಾಗಿದ್ದೇನೆ. ಈ ದೈಹಿಕ ತಪಸ್ಸು, ಯಾತ್ರೆಯ ಸಂದೇಶವನ್ನು ಪ್ರಾಮಾಣಿಕವಾಗಿಸಿದೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಕಾಣಿಸದೇ ಇರುವ ಶ್ರದ್ಧೆಯನ್ನು ಸಾಮಾನ್ಯ ಜನರ ಮನಸ್ಸಿನಲ್ಲಿ ತುಂಬಿದೆ. ಪ್ರತಿದಿನ ಕಷ್ಟ ಸಹಿಸುವ ರೂಢಿಯು ಸ್ವತಃ ಯಾತ್ರಿಗಳನ್ನೂ ಒಳಗಿನಿಂದ ಬದಲಿಸಿದೆ, ಅವರನ್ನು ನಿಜವಾದ ಅರ್ಥದಲ್ಲಿ ಭಾರತ್ ಜೋಡೊದ ಸಂದೇಶವಾಹಕರನ್ನಾಗಿಸಿದೆ.

ಕಾಲ್ನಡಿಗೆಯ ಈ ಯಾತ್ರೆಯ ಜೊತೆಜೊತೆಗೇ ಒಂದು ವಿಚಾರದ ಯಾತ್ರೆಯೂ ನಡೆಯುತ್ತಲಿತ್ತು. ಸ್ವತಃ ರಾಹುಲ್ ಗಾಂಧಿ ಈ ವೈಚಾರಿಕ ಮಂಥನದ ಪ್ರಮುಖ ವಾಹಕ ಹಾಗೂ ಉದ್ಘೋಷಕರಾದರು. “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಬಂದಿದ್ದೇನೆ”- ಈ ಮಾತಂತೂ ಒಂದು ಸಿನೆಮಾ ಡಯಲಾಗ್‌ನಷ್ಟು ಜನಪ್ರಿಯವಾಗಿದೆ. ಶ್ರೀನಗರದಲ್ಲಿ ಅವರ ಸಮಾರೋಪ ಮಾತುಗಳು ಈ ಡಯಲಾಗ್‌ನ ತಾತ್ವಿಕತೆಯನ್ನು ಬಹಿರಂಗಪಡಿಸುತ್ತದೆ. ಇದನ್ನು ಗಂಗಾ-ಜಮುನಾ ಶಿಷ್ಟಾಚಾರ ಅಂದುಕೊಳ್ಳಿ ಅಥವಾ ಕಶ್ಮೀರಿಯತ್ ಅನ್ನಿ. ಬೇಕಾದರೆ ಸಂತರ ಪರಂಪರೆಯಿಂದ ನೋಡಿ ಕಲಿತುಕೊಳ್ಳಿ ಅಥವಾ ಮಹಾತ್ಮಾ ಗಾಂಧಿಯ ಪರಂಪರೆಯಿಂದಾಗಲೂ- ನಮ್ಮ ಸಾಂಸ್ಕೃತಿಕ ಪರಂಪರೆ ಜೋಡಿಸುವುದಾಗಿದೆಯೇ ಹೊರತು ಒಡೆಯುವುದಲ್ಲ. ನಮ್ಮ ಸಂವಿಧಾನದ ಪ್ರಸ್ತಾವನೆಯ ’ಬಂಧುತ್ವ’ವು ಇದೇ ತತ್ವವನ್ನು ಬರಹರೂಪದಲ್ಲಿ ಇಳಿಸಿದೆ. ತನ್ನ ಅಜ್ಜಿ ಮತ್ತು ತಂದೆಯ ಹತ್ಯೆ ಆದಾಗ ಬಂದ ದೂರವಾಣಿ ಕರೆಗಳನ್ನು ಉಲ್ಲೇಖಿಸುತ್ತ ರಾಹುಲ್ ಗಾಂಧಿ ಮಾರ್ಮಿಕವಾಗಿ ಈ ಯಾತ್ರೆಯ ಉದ್ದೇಶವನ್ನು ತಿಳಿಸಿದ್ದಾರೆ: ಇನ್ನು ಮುಂದೆ ಯಾವುದೇ ಮಗುವಿಗೆ ಇಂತಹ ದೂರವಾಣಿ ಕರೆಗಳು ಬರದೇ ಇರಲಿ ಎಂಬುದಕ್ಕೇ ಈ ಯಾತ್ರೆ. ದ್ವೇಷ, ಹಿಂಸೆ ಹಾಗೂ ಆತಂಕದ ರಾಜಕೀಯದ ವಿರುದ್ಧದ ಆಳವಾದ ಹೇಳಿಕೆ ಇದಾಗಿದೆ.

ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ?: ಪಾದಯಾತ್ರೆಗಳ ಇತಿಹಾಸ ಏನು ಹೇಳುತ್ತದೆ?

ಸ್ನೇಹದ ಈ ಭಾವನೆಯ ಜೊತೆಜೊತೆಗೆ ಭಾರತ ಜೋಡೊ ಯಾತ್ರೆಯು ಸಮಾನತೆಯ ತತ್ವವನ್ನೂ ಪದೇ ಪದೇ ಸ್ಪಷ್ಟಪಡಿಸಿದೆ. ದೀರ್ಘ ಸಮಯದ ನಂತರ ದೇಶದಲ್ಲಿ ಹೆಚ್ಚುತ್ತಿರುವ ವಿಷಮತೆಯ ಬಗ್ಗೆ ರಾಜಕೀಯ ಮುಖ್ಯವಾಹಿನಿಯಲ್ಲಿ ಕಾಳಜಿ ವ್ಯಕ್ತಪಡಿಸಲಾಗಿದೆ. ಬಹುಶಃ ಮೊದಲ ಬಾರಿ ಒಂದು ದೊಡ್ಡ ಪಕ್ಷದ ನಾಯಕನೊಬ್ಬ ಅದಾನಿ ಹಾಗೂ ಅಂಬಾನಿಯ ಹೆಸರನ್ನು ಎತ್ತುವ ಧೈರ್ಯ ತೋರಿಸಿದ್ದಾರೆ. ದಲಿತ, ಆದಿವಾಸಿ ಹಾಗೂ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕಾಳಜಿಯು ತೋರಿಕೆಯ ಮಾತು ಅಥವಾ ಜುಮ್ಲೆಬಾಜಿಯನ್ನು ಮೀರಿ ಕೆಲವು ಗಟ್ಟಿಯಾದ ಕಾಂಕ್ರೀಟ್ ಪ್ರಸ್ತಾಪಗಳಲ್ಲಿ ವ್ಯಕ್ತಗೊಂಡಿದೆ. ಮಹಿಳೆಯರ ಮತ್ತು ಲೈಂಗಿಕ ಭೇದಭಾವದ ಬಲಿಪಶುಗಳಾದ ಎಲ್ಲಾ ವರ್ಗಗಳ ನೋವು ಪ್ರತಿಯೊಂದು ಹೆಜ್ಜೆಯಲ್ಲಿ ದಾಖಲಿಸಲಾಗಿದೆ. ನೋವಿನಿಂದ ನೋವಿನ ಸಂಬಂಧ ಬೆಸೆದ ಈ ವಿಚಾರ ಯಾತ್ರೆಯು ಒಂದು ವೈಚಾರಿಕ ದಿಕ್ಕು ನೀಡುವ ಕೆಲಸವನ್ನು ಮಾಡಿದೆ. ಈ ದಿಕ್ಕು ಅತ್ಯಂತ ಹೊಸದು ಅಥವಾ ವಿಶಿಷ್ಟ ಅಂತೇನೂ ಅಲ್ಲ. ಇದು ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಸ್ವಧರ್ಮಕ್ಕೆ ಒಂದು ಹೊಸ ಸಂದರ್ಭ ತೋರಿಸಿದೆ.

ದೇಹ ಮತ್ತು ವಿಚಾರದ ಯಾತ್ರೆಯಿಂದಲೂ ಮುಂದೆ ಹೋಗಿ ಭಾರತ ಜೋಡೊ ಯಾತ್ರೆಯು ಆಧ್ಯಾತ್ಮಿಕ ಯಾತ್ರೆಯೂ ಆಗಿತ್ತು. ಪಾದಯಾತ್ರೆಯು ಮನಸ್ಸಿನ ಸಾಧನೆಯ ಅತ್ಯುತ್ತಮ ಸಹಜ ಮಾರ್ಗವಾಗಿದೆ. ಈ ಯಾತ್ರೆಯು ದೇಶದಲ್ಲಿ ಆವರಿಸಿದ ನಿರಾಸೆ, ಅಸಹಾಯಕತೆ ಮತ್ತು ಒಬ್ಬಂಟಿತನದ ಭಾವನೆಯನ್ನು ಒಡೆದುಹಾಕಿದೆ. ಸುಳ್ಳು ಮತ್ತು ದ್ವೇಷದ ವಿರುದ್ಧ ಶಸ್ತ್ರತ್ಯಾಗ ಮಾಡಿದ ನಾಗರಿಕರಿಗೆ ಇನ್ನೊಮ್ಮೆ ಧೈರ್ಯ ತುಂಬಿದೆ. “ಹೆದರಬೇಡಿ” ಎಂಬ ಸರಳ ಮಂತ್ರವು ಕೋಟ್ಯಂತರ ಭಾರತೀಯರ ಮನದಲ್ಲಿ ಶಕ್ತಿ ತುಂಬಿದೆ. ಕಾಶ್ಮೀರ ಕಣಿವೆಯಲ್ಲಿ ಸಿಕ್ಕ ಅಪಾರ ಸ್ನೇಹವು, ಈ ದೇಶದಲ್ಲಿ ಹೊಸ ಭರವಸೆಯ ಸಂಚಲನವನ್ನು ಸಾಧ್ಯವಾಗಿಸಿತು ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಇದು ಕೇವಲ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷಕ್ಕಲ್ಲದೇ ಭಾರತಕ್ಕೂ ಒಂದು ಒಳ್ಳೆಯ ಸುದ್ದಿ. ನಂಬಿಕೆ, ನಿರೀಕ್ಷೆಯ ಮೇಲೆಯೇ ಈ ಜಗತ್ತು ಉಳಿದುಕೊಂಡಿದೆ ಎನ್ನಲಾಗುತ್ತದೆ; ಯಾವುದೇ ಸಮಾಜಕ್ಕೆ ಈ ನಂಬಿಕೆ ಎಲ್ಲಕ್ಕಿಂತ ದೊಡ್ಡ ಬಂಡವಾಳ.

ನಂಬಿಕೆಯ/ಆಸೆಯ ದೀಪ ಬೆಳಗಿಸುವುದು ದೊಡ್ಡ ಕೆಲಸವೇ ಸರಿ. ಆದರೆ ಅದಕ್ಕಿಂತ ದೊಡ್ಡ ಕೆಲಸ ಆ ನಂಬಿಕೆಯನ್ನು ಜೀವಂತವಾಗಿಟ್ಟುಕೊಳ್ಳುವುದು. ಈ ನಿಟ್ಟಿನಲ್ಲಿ ಭಾರತ ಜೋಡೊದ ಈ ಅಭೂತಪೂರ್ವ ಯಶಸ್ಸು ಈ ಯಾತ್ರೆಯೊಂದಿಗೆ ಸಂಬಂಧಿಸಿದ ಪ್ರತಿಯೊಬ್ಬ ಭಾರತೀಯರ ಹೆಗಲಿನ ಮೇಲೆ ದೊಡ್ಡ ಜವಾಬ್ದಾರಿಯನ್ನು ಹಾಕಿದೆ. ಈ ಯಾತ್ರೆಯು ಬಂಜರು ಭೂಮಿಯಲ್ಲಿ ನೇಗಿಲನ್ನು ಎಳೆದಿದೆ; ಆದರೆ ಈಗ ಜವಾಬ್ದಾರಿ ಇರುವುದು ಇದರಲ್ಲಿ ಬೀಜ ಬಿತ್ತುವುದು ಹಾಗೂ ನೀರು ಗೊಬ್ಬರ ಎರೆಯುವುದು. ದೇಶದ ಪ್ರತಿಯೊಂದು ಬಾಗಿಲ ಮೇಲೆ ಈ ವಿಚಾರ ತಟ್ಟುವವರೆಗೆ, ದೇಶದ ಪ್ರತಿಯೊಂದು ಹೃದಯವನ್ನು ಮುಟ್ಟುವ ತನಕ ಈ ಯಾತ್ರೆಯ ಉದ್ದೇಶ ಸಫಲವಾಗುವುದಿಲ್ಲ. ಯಾವತ್ತು ಪ್ರತಿಯೊಬ್ಬ ಭಾರತೀಯ ಸುಳ್ಳನ್ನು ಸುಳ್ಳು ಎಂದು ಹೇಳಲು ಕಲಿಯುವಳೋ/ನೋ ಹಾಗೂ ದ್ವೇಷವನ್ನು ತಿರಸ್ಕರಿಸುತ್ತಾಳೋ/ನೋ ಅಂದು ಭಾರತ ಜೋಡೊ ಯಾತ್ರೆ ಸಫಲವಾಗುವುದು. ಈ ನಿಟ್ಟಿನಲ್ಲಿ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯಗೊಂಡಿಲ್ಲ, ಬದಲಿಗೆ ನಿಜವಾದ ಅರ್ಥದಲ್ಲಿ ಭಾರತವನ್ನು ತನ್ನ ಸ್ವಧರ್ಮದೊಂದಿಗೆ ಪುನಃ ಜೋಡಿಸುವ ಯಾತ್ರೆಯನ್ನು ಪ್ರಾರಂಭಿಸಿದೆ.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...