Homeಅಂಕಣಗಳುಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

ಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

- Advertisement -
- Advertisement -

ನಮ್ಮ ಸಂತೆಶಿವರದ ಲಿಂಗಣ್ಣಯ್ಯ ಭೈರಪ್ಪ ಗೊತ್ತೆ ನಿಮಗೆ? ಅದೆ ಹಿಂದೂ ಧರ್ಮದ ಪುರೋಹಿತಶಾಹಿ ಪುನರುತ್ಥಾನದ ಕಾದಂಬರಿ ಕಾರ್ಖಾನೆ. ಈ ಕಾರ್ಖಾನೆ ಈಗ ಸ್ಥಗಿತಗೊಂಡಿದೆ ಏಕೆಂದರೆ ಅವರ ತೊಂಬತ್ತೆರೆಡು ವರ್ಷದಲ್ಲಿ ಸುಳ್ಳು ಸೃಜನಶೀಲತೆ ಕಷ್ಟವಾದ್ದರಿಂದ; ಬರವಣಿಗೆ ಬತ್ತಿ ಹೋಗಿದೆ. ಇದನ್ನು ಗ್ರಹಿಸಿದ ಮೋದಿ ಗವುರಮೆಂಟು ಭೈರಪ್ಪನವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟಿತು. ಜ್ಞಾನಪೀಠ ಸಿಗಲಿಲ್ಲ ಎಂದು ಕೊರಗುತ್ತಾ ವೃದ್ಧಾಪ್ಯ ಸಮೀಪಿಸಿದ ಭೈರಪ್ಪ ಈ ಸಮಯದಲ್ಲಿ ಧನಕನಕದ ಪ್ರಶಸ್ತಿಯನ್ನೇ ಎಡವಿಬಿದ್ದಂತೆ ಪದ್ಮಭೂಷಣ ದೊರೆತಿದೆ. ಈ ಸುದ್ದಿ ಕೇಳಿ ಬವಳಿ ಬಂದಂತಾದ ಭೈರಪ್ಪ ಈ ಪ್ರಶಸ್ತಿ ಕೊಟ್ಟ ಮೋದಿ 2024ರಲ್ಲಿ ಗೆದ್ದು ಪ್ರಧಾನಿಯಾಗಲಿ ಮತ್ತೆ 2029ರಲ್ಲೂ ಗೆದ್ದು ಪ್ರಧಾನಿಯಾಗಲಿ, ದುರ್ದೈವದಿಂದ ನಾನು ಅಲ್ಲಿಯವರೆಗೂ ಇರಲಾಗುವುದಿಲ್ಲ, ಆದರೂ ಅದೇನೂ ಬಹಳ ದೂರದ ಸಮಯವಲ್ಲ, ಕೇವಲ 8 ವರ್ಷ ಎಂದಿಲ್ಲವಲ್ಲ. ಮೋದಿ ಪರ ಇಂತಹ ವಕಾಲತ್ತು ವಹಿಸಿದ ಭೈರಪ್ಪ ಯಾರಾದರೂ ತಪ್ಪು ತಿಳಿದಾರೆಂದು ನಾನು ಯಾವ ಪಕ್ಷದ ಪಕ್ಷಪಾತಿಯಲ್ಲ, ಮೋದಿ ಭಕ್ತ ಅಷ್ಟೇ; ಇಂತಹ ಪ್ರಧಾನಿ ಈವರೆಗೆ ಬಂದಿರಲಿಲ್ಲ ಎಂದು ತಮ್ಮ ಅಜ್ಞಾನವನ್ನ ಅನಾವರಣ ಮಾಡಿದರಲ್ಲಾ. ಅಜ್ಞಾನ ಏಕೆಂದರೆ ನೆಹರೂ ನಂತರ ಈ ದೇಶದ ಪ್ರಧಾನಿಯಾಗಿದ್ದ ಲಾಲ್‌ಬಹದ್ದೂರ್ ಶಾಸ್ತ್ರಿ ನಿಧನರಾದಾಗ ಶಾಸ್ತ್ರಿ ಕುಟುಂಬ ಬಡತನದಲ್ಲಿತ್ತು. ಅವರಿಗೆ ಏನಾದರೂ ಸಹಾಯ ಮಾಡಬೇಕೆಂಬ ಚರ್ಚೆ ಅಂದಿನ ಸಂಸತ್ತಿನಲ್ಲಿ ನಡೆದಿತ್ತು. ಇದು ಭೈರಪ್ಪನವರ ಮತಾಂಧ ಮೆದುಳಿಗೆ ಹೊಳೆಯದ ಸಂಗತಿಯಂತಲ್ಲಾ, ಥೂತ್ತೇರಿ.

*****

ಸಂತೆಶಿವರ ಎಂಬ ಹಳ್ಳಿಯಲ್ಲಿ ಒಕ್ಕಲಿಗರು ಮತ್ತು ಕುರುಬರ ಮನೆಗಳ ನಡುವೆ ಇದ್ದು ಅವರುಗಳ ಸಹಾಯದಿಂದ ಮೇಲೆ ಬಂದ ಭೈರಪ್ಪ ತನ್ನನ್ನು ಸಾಕಿ ಸಲಹಿದ ಈ ಜನರ ಬಗ್ಗೆ ಎಂದೂ ಮಾತನಾಡದೆ ಶ್ರಮಿಸಿದ್ದೆಲ್ಲಾ ತಮ್ಮ ಕೋಮಿನ ಬ್ರಾಹ್ಮಣರ ಉದ್ಧಾರಕ್ಕೆ ಮತ್ತು ಸಂಘ ಪರಿವಾರದ ಏಳ್ಗೆಗೆ. ಇನ್ನೊಂದು ಐತಿಹಾಸಿಕವಾದ ಸತ್ಯ ಯಾವುದೆಂದರೆ, ನಮ್ಮ ನೆಲದ ಯಾವ ಜಾತಿಗೇ ಆಗಲಿ ಭೈರಪ್ಪನವರ ಪರಿವಾರ ಎಂದೂ ಅಣ್ಣತಮ್ಮಂದಿರಾಗಿ ನಡೆದುಕೊಂಡಿಲ್ಲ, ಆ ಭಾವನೆಯೂ ಅವರಿಗೆ ಬರುವುದಿಲ್ಲ. ಹಾಗಾಗಿ ಸಂತೆಶಿವರದ ಜನಗಳೆಂದೂ ಭೈರಪ್ಪನವರಿಗೆ ಅಣ್ಣ ತಮ್ಮಂದಿರಾಗಿ ಗೋಚರವಾಗಲಿಲ್ಲ. ಬದಲಿಗೆ ಮೈಸೂರಲ್ಲಿ ಬೀಡು

ಭೈರಪ್ಪ

ಬಿಟ್ಟಿದ್ದ ಬ್ರಾಹ್ಮಣ ಸಮುದಾಯದವರಿಗೆ ಬಂಧುವಾದರು; ಅದ್ದರಿಂದ ದೈತ್ಯ ಬರಹಗಾರನಾದರೂ ಮಾನವತಾವಾದಿಯಾಗಲಿಲ್ಲ. ಇನ್ನು ಭೈರಪ್ಪನವರ ಬಾಯಲ್ಲಿ ಮೋದಿ ಜಪ ಆರಂಭವಾಗಿರುವಾಗಲೇ ಬಿಬಿಸಿ ಗುಜರಾತ್ ಗಲಭೆಗೆ ಸಂಬಂಧಿಸಿದ ಸಾಕ್ಷಚಿತ್ರ ಬಿಡುಗಡೆ ಮಾಡಿಬಿಟ್ಟಿದ್ದಾರಲ್ಲಾ. ಭೈರಪ್ಪನವರ ಉತ್ತರಕಾಂಡದ ಮಾತುಗಳನ್ನೇ ಜೋರು ದನಿಯಲ್ಲಿ ಮಾತನಾಡುತ್ತಿರುವ ಭಗವಾನ್ ಮತ್ತೆ ’ರಾಮ ದೇವರಲ್ಲ ನರಮನುಷ್ಯ’ ಇತ್ಯಾದಿ ಮಾತನಾಡಿ ಮಾಧ್ಯಮದ ಮೂರ್ಖರು ಮತ್ತು ಮತಾಂಧರಿಂದ ಉಗ್ರ ಟೀಕೆಗೆ ಒಳಗಾಗಿದ್ದಾರೆ. ಈ ಭಗವಾನ್ ತಮ್ಮ ಅಭಿಪ್ರಾಯ ಅದುಮಿಟ್ಟುಕೊಂಡು ಭೈರಪ್ಪ ಬರೆದ ಉತ್ತರಕಾಂಡ ಓದಲು ಹೇಳಿದರೆ ಎಷ್ಟು ಒಳ್ಳೆಯದಲ್ಲವೆ ಎಂಬುದು ಬುದ್ಧಿಜೀವಿಗಳ ಬುದ್ಧಿವಾದವಾಗಿದೆಯಲ್ಲಾ, ಥೂತ್ತೇರಿ.

*****

ಇತ್ತ ಬಿಜೆಪಿ ರಾಜಕಾರಣದ ಸಂಗತಿಗಳು ಶಾನೆ ದುಃಖಕರವಾಗಿವೆಯಲ್ಲಾ. ಆಸ್ತಿ ಮಾಡಲೆಂದೇ ಹೋರಾಟದ ರಾಜಕಾರಣ ಮಾಡುತ್ತಾ ಬಂದು, ಮಾರಿಕೊಂಡ ಮಾಧ್ಯಮದವರಿಂದ ರಾಜಾಹುಲಿ ಬಿರುದು ಪಡೆದ ಎಡೂರಪ್ಪನವರು ತಮ್ಮ ನಿಲುಗಡೆಯ ನಿಲ್ದಾಣವನ್ನು ಘೋಷಣೆ ಮಾಡಿದ್ದಾರೆ. ಎಡೂರಪ್ಪನನ್ನು ಇಳಿಸಲು ಸಾಕಷ್ಟು ಟೀಕೆ ಸಂಗ್ರಹ ಮಾಡಿಕೊಳ್ಳಲೆಂದೇ ನೇಮಿಸಿದ್ದ ಬಸವನಗೌಡ ಪಾಟೀಲರನ್ನು ಕರೆಸಿಕೊಂಡ ಹೈಕಮಾಂಡು, “ಅಪ್ನಾ ಎಡೂರಪ್ಪಾಕ ಟೀಕೆ ಬಂದ್ ಕರೊ ಬೈಯ್ಯಾ” ಎಂದು ಹೇಳಿ ಕಳಿಸಿರುವುದರಿಂದ ಯತ್ನಾಳ್ ಮುಂದೆ ಯಾರನ್ನು ಟೀಕಿಸಬೇಕೆಂದು ಚಿಂತಿಸುತ್ತಿರುವಾಗಲೇ, ಎಡೂರಪ್ಪ ನನಗೀಗ 80ವರ್ಷ, ಹಾಗೆಂದು ಮನೆಯಲ್ಲಿ ಕೂರಲಾಗುವುದಿಲ್ಲ, ಹಾಗಾಗಿ ಯಾವುದೇ ಸಭೆ ಸಮಾರಂಭ ಇರಲಿ ಅಲ್ಲಿಗೆ ಹೋಗಿ ಬೊಮ್ಮಾಯಿ ಜೊತೆ ನಿಂತುಕೊಳ್ಳುತ್ತೇನೆ ಎಂದಿದ್ದಾರಲ್ಲಾ. ಇದರಿಂದ ಒಳಗೊಳಗೇ ಮುಜುಗರಗೊಂಡಿರುವ ಬೊಮ್ಮಾಯಿ, ತಾನೆ ಮುಂದಾಳತ್ವ ವಹಿಸಲು ಚಿಂತಿಸುತ್ತಿದ್ದಾಗಲೇ, ಎಡೂರಪ್ಪ ಮುಂದಿನ ಚುನಾವಣೆಗೆ 140 ಸೀಟು ಗೆಲ್ಲಿಸುತ್ತೇನೆ ಎಂದುಬಿಟ್ಟಿದ್ದಾರಲ್ಲಾ. ಹಾಗೆ ನೋಡಿದರೆ ಮುಖ್ಯಮಂತ್ರಿಯೊಬ್ಬ ಆ ಪದವಿಯಿಂದ ಕೆಳಗಿಳಿದ ಮೇಲೆ ಹಾಲಿ ಮುಖ್ಯಮಂತ್ರಿ ಜೊತೆ ಕಾಣಿಸಿಕೊಂಡು ತಿರುಗುತ್ತಿರುವ ದಾಖಲೆ ಎಡೂರಪ್ಪನವರಿಗೆ ಮಾತ್ರ ಸೇರುವಂತದ್ದು. ಅಲ್ಲದೆ ಎಡೂರಪ್ಪನವರ ಜೋಳಿಗೆಯಲ್ಲಿ ಹಲವಾರು ಅಳಿಸಲಾಗದ ದಾಖಲೆಗಳಿವೆ; ಅವುಗಳನ್ನ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಆ ವಿಷಯದಲ್ಲವರು ಮಾಧ್ಯಮದವರು ಕೊಟ್ಟ ರಾಜಾಹುಲಿ ಬಿರುದಿಗೆ ಯೋಗ್ಯರಂತಲ್ಲಾ, ಥೂತ್ತೇರಿ.

****

ಇದನ್ನೂ ಓದಿ: ಎರಡು ದುಃಖದ ಸಂಗತಿ ಎದುರಾದವಲ್ಲಾ

ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಪ್ರವೇಶ ಮಾಡಿದ ಬಿಜೆಪಿ ಎಂಬ ಪಾರ್ಟಿ ಪ್ರಜಾಪ್ರಭುತ್ವದ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯಲು ನಾಗಮಂಗಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದೆಯಲ್ಲಾ. ಬಿಜೆಪಿಯಿಂದ ಸ್ಫರ್ಧಿಸಲು ಬಂದಾತ ಫೈಟರ್ ರವಿ ಎಂಬ ರೌಡಿ ಪಟ್ಟದವನು. ಚುನಾವಣೆಗೆ ನಾಗಮಂಗಲದ ಮತದಾರರನ್ನು ಕೊಳ್ಳಲು ತಂದಿರುವ ಹಣ ಎಪ್ಪತ್ತು ಕೋಟಿ ಇದೆಯಂತಲ್ಲಾ. ಇದರಲ್ಲಿ ತಾರತಮ್ಯವಿಲ್ಲದೆ ತಲೆಗೆ ಐದು ಸಾವಿರದಂತೆ ಹಂಚಿದರೆ ಆ ಮೊತ್ತ ಸರಿಯಾಗುತ್ತದಂತೆ. ಇನ್ನ ಹಂಚಲು ಬಿಟ್ಟ ಉಸ್ತುವಾರಿ ಜನರಿಗೆ ಲಕ್ಷವಂತೆ. ಈ ನಡುವೆ ಈಗಾಗಲೇ ಕಷ್ಟ ಹೇಳಿಕೊಂಡ ಜನರ ಕೈಗೆ ಹಣ ಸೇರುತ್ತಿದೆ, ಜೊತೆಗೆ ಈತ ಏರ್ಪಡಿಸುವ ಸಭೆಗೆ ಹೋದರೆ ತಲಾ 200 ರೂ. ಮತ್ತು ಬಿರಿಯಾನಿ ಊಟ. ಈಗಾಗಲೇ ಇಂತಹ ಮಾಂಸದ ಪರಿಶೆ ನೋಡಿದ ಪಕ್ಷೇತರ ಅಭ್ಯರ್ಥಿ

ಶಿವರಾಮೇಗೌಡ

ಶಿವರಾಮೇಗೌಡ ಹಾಗೂ ಜನತಾದಳದ ಸುರೇಶ್‌ಗೌಡ ಮತ್ತು ಕಾಂಗ್ರೆಸ್ಸಿನ ಚಲುವರಾಯಸ್ವಾಮಿ ದಂಗುಬಡಿದುಹೋಗಿದ್ದಾರಲ್ಲಾ. ಈ ಫೈಟರ್ ರವಿಗೆ ಫೈಟ್ ಕೊಡಲು ಈಗಾಗಲೇ ತಯಾರಾಗಿರುವ ಶಿವರಾಮೇಗೌಡ ಕೊಪ್ಪ ಹೋಬಳಿ ಮತ್ತು ಬಂಡಿಗನವಿಲೆ ಹೋಬಳಿಯಲ್ಲಿ ಮೂರು ಕಾರ್ಯಕ್ರಮಗಳನ್ನು ಮಾಡಿ ಬಾಡೂಟದ ಮಟ್ಟಿಗೆ ಫೈಟ್ ಕೊಡುತ್ತಿರಬೇಕಾದರೆ, ಅತ್ತ ಜೆಡಿಎಸ್‌ನ ಸುರೇಶ್‌ಗೌಡ ಕುಮಾರಣ್ಣ ಮತ್ತು ದ್ಯಾವೇಗೌಡರ ಬರುವಿಕೆಗಾಗಿ ಕಾಯುತಿದ್ದಾರಂತಲ್ಲಾ. ಇತ್ತ ಚಲುವರಾಯಸ್ವಾಮಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ಕರೆಸಲು ಸಿದ್ಧತೆ ನಡೆಸುತ್ತ ಇರಬೇಕಾದರೆ ಇವರೂ ಮಾಂಸದೂಟವನ್ನೇನಾದರೂ ಏರ್ಪಡಿಸಿದರೇ ಆ ಪ್ರಾಂತ್ಯದ ಆಡು, ಕುರಿ, ಎಮ್ಮೆ, ದನಕರುಗಳು ಕಾಣೆಯಾಗಿ ಎಲ್ಲಿ ನೋಡಿದರೂ ಬರೀ ಮನುಷ್ಯರೆ ಕಾಣುವ ಕಾಲ ಬಹಳ ದೂರವಿಲ್ಲ ಎನ್ನುವಂತಾಗಿದೆಯಲ್ಲಾ, ಥೂ ಥೂ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...