Homeಅಂಕಣಗಳುಎರಡು ದುಃಖದ ಸಂಗತಿ ಎದುರಾದವಲ್ಲಾ

ಎರಡು ದುಃಖದ ಸಂಗತಿ ಎದುರಾದವಲ್ಲಾ

- Advertisement -
- Advertisement -

ಈವಾರ ಎರಡು ದುಃಖಕರ ಸಂಗತಿಗಳು ಹೊರಬಿದ್ದಿವೆಯಲ್ಲಾ. ಮೊದಲನೆಯದಾಗಿ ನಮ್ಮ ಸಭ್ಯರಾಜಕಾರಣಿ ಎಸ್.ಎಂ ಕೃಷ್ಣ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ನಿರ್ಧಾರಕ್ಕೆ ಬಿಜೆಪಿಗಳು ಕಿವಿ ಕೇಳದಂತಿರುವುದು ಸಹಜ. ಕೃಷ್ಣ ತಮ್ಮ ರಾಜಕಾರಣದ ಇತಿಹಾಸದಲ್ಲಿ ಎಂದೂ ಅಸಭ್ಯವಾಗಿ ನಡೆದುಕೊಂಡವರಲ್ಲ. ಅಸಂಬದ್ಧ ಮಾತನಾಡಿದವರಲ್ಲಾ. ಯಾರನ್ನೂ ಕಟುವಾಗಿ ಟೀಕಿಸಿದವರಲ್ಲ. ತಮ್ಮ ಕಾರಿನ ಡ್ರೈವರನ್ನು ಕೂಡ ಬಹುವಚನದಲ್ಲಿ ಮಾತನಾಡಿಸಿದ ವ್ಯಕ್ತಿ. ಎಲ್ಲಕ್ಕಿಂತ ಮುಖ್ಯವಾಗಿ ನರಹಂತಕ ವೀರಪ್ಪನ್‌ನನ್ನು, ’ವೀರಪ್ಪನ್‌ರವರೆ’ ಎಂದು ಸಂಭೋಧಿಸಿ “ಕಿಸ್ನ ನಲ್ಲ ಪೆರಿಯವರು” ಎಂಬ ಬಿರುದು ಪಡೆದವರು. ಕೃಷ್ಣರಲ್ಲಿರುವ ಈ ಗುಣಗಳಿಗಾಗಿ ಅವರು ಸುಮ್ಮನಾಗಬಹುದಿತ್ತು. ಅದುಬಿಟ್ಟು, ತಮ್ಮ ನಡವಳಿಕೆ ಭಾಷೆ ಮತ್ತು ಬುದ್ಧಿಯ ಸಮೀಪಕ್ಕೂ ಬಾರದ ಬಿಜೆಪಿ ಸೇರಿದ್ದು ಈ ಶತಮಾನದ ರಾಜಕೀಯ ದ್ರೋಹವಾಗಿ ಕಂಡಿತಂತಲ್ಲಾ. ಯಾರೋ ರಾಹುಲ್‌ಗಾಂಧಿಯವರನ್ನು ಕೇಳಿದಾಗ, ಇದು ಕೃಷ್ಣರ ಸಮಸ್ಯೆ, ಕಾಂಗ್ರೆಸ್ ಮತ್ತು ಬಿಜೆಪಿ ಸಮಸ್ಯೆಯಲ್ಲ; ಅಲ್ಲಿ ಯಾರೂ ಇವರನ್ನು ಕರೆದಿಲ್ಲ ಎಂದುಬಿಟ್ಟಿದ್ದರಲ್ಲಾ. ಆದರೇನು ಕೃಷ್ಣ ಎಲ್ಲವನ್ನು ಬಿಟ್ಟು ಬಿಜೆಪಿಯ ಬಾಗಿಲಿಗೆ ಹೋದರು. ಖಾಲಿಯಿದ್ದ ಒಂದು ಆರಾಮ ಕುರ್ಚಿಯಲ್ಲಿ ಕುಳಿತರು. ಯಾರೂ ಕ್ಯಾರೆ ಅನ್ನಲಿಲ್ಲ. ನಿಧಾನವಾಗಿ ಎದ್ದು ಬರ್ತಿನಿ ಇವುರೆ, ಬಹಳ ಹೊತ್ತು ಕೂರಕ್ಕೆ ವಯಸ್ಸು ಪರ್ಮಿಟ್ ಮಾಡ್ತ ಇಲ್ಲ ಎಂದು ನಿಧಾನವಾಗಿ ಎದ್ದು ಹೊರಟಾಗಲೂ ಯಾವ ಬಿಜೆಪಿಗಳೂ ಕೂಡ ಆಯ್ತು ಸರ್ ಹೋಗಿ ಬನ್ನಿ ಅನ್ನಲಿಲ್ಲವಂತಲ್ಲಾ, ಥೂತ್ತೇರಿ.

*******

ಎರಡನೆ ದುಃಖಪೂರಿತ ಸಂಗತಿ ಯಾವುದೆಂದರೇ ಗೃಹಮಂತ್ರಿ ಆರಗ ಜ್ಞಾನೇಂದ್ರ ಆತ್ಮಹತ್ಯೆಯ ಮಾತನಾಡಿರುವುದು. ಕರ್ನಾಟಕದ ರಾಜಕೀಯದ ಆಗಸದಲ್ಲಿ ಎಂದೆಂದೂ ಮಿನುಗುವ ನಕ್ಷತ್ರವಾಗುಳಿದಿರುವ ಶಾಂತವೇರಿ ಗೋಪಾಲಗೌಡರು ಆರಿಸಿ ಬಂದಿದ್ದ ತೀರ್ಥಹಳ್ಳಿಯನ್ನು ಪ್ರತಿನಿಧಿಸುತ್ತಿರುವ ಜ್ಞಾನೇಂದ್ರ ಅವರು ರಾಷ್ಟ್ರಕವಿ ಕುವೆಂಪು ವಿಚಾರಧಾರೆಗಳ ವಾಹಕನಾಗಿ ಬದುಕಲಾಗದೆ ಬಲವಂತವಾಗಿ ಎಂಬಂತೆ ಗೋಳವಲಕರ, ಹೆಡಗೆವಾರ, ಸಾವರಕರ ಇತ್ಯಾದಿ ಭಯಂಕರ ಹಿಂದೂವಾದಿಗಳ ಹಿಂಬಾಲಕರಾಗಿ, ಅವರ ಸಿದ್ಧಾಂತಗಳ ಪ್ರತಿಪಾದಕರಾಗಿ ಬದುಕಿದವರು. ಸದಾ ಶ್ವೇತವಸ್ತ್ರಧಾರಿಯಾಗಿ ಶುಭ್ರವಾಗಿ ಬದುಕಿದ್ದ ಅರಗರ ಪಕ್ಕ ಸ್ಯಾಂಟ್ರೊ ರವಿ ಅದೇ ಡ್ರೆಸ್ಸಿನಲ್ಲಿ ಬಂದು ನಿಂತಿದ್ದೂ ಅಲ್ಲದೆ, ಅರಗರ ಅರಿವಿಗೂ ಬರದೆ ಜೇಬಿಗೆ ಏನೊ ಇಟ್ಟು ಹೋದದ್ದು ಗಮನಕ್ಕೇ ಬರಲಿಲ್ಲವಂತಲ್ಲಾ. ಈಗ ನೋಡಿದರೆ ಸ್ಯಾಂಟ್ರೊ ರವಿ ಪೊಲೀಸ್ ವರ್ಗಾವಣೆಯಲ್ಲಿ ಪಡೆದ ಕಾಸಿನ ಕವಡೆಯನ್ನು ಅರಗರ ಜೇಬಿಗೆ ಹಾ ಹೋಗಿದ್ದಾನೆಂಬ ಸುದ್ದಿ ಹಬ್ಬಿದೆಯಲ್ಲಾ. ಇಂತಹ ಸುದ್ದಿಗಳ ಶೋಧನೆ ಮತ್ತು ಅನಾವರಣದಲ್ಲಿ ಎತ್ತಿದ ಕೈಯಾದ ಕುಮಾರಣ್ಣನವರು, ಆತ್ಮಹತ್ಯೆ ಬೇಡ ಆತ್ಮಸಾಕ್ಷಿಯಿದ್ದರೆ ಸಾಕು; ಆತ್ಮಹತ್ಯೆಯ ಹೆಸರೆತ್ತುವುದೂ ಅಪರಾಧವೇ, ಹಾಗೆ ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಂಡರೆ ಇಡೀ ದೇಶದಲ್ಲಿ ರಾಜಕಾರಣಿಗಳೇ ಇಲ್ಲದಂತಾಗಿ ದೇಶವೇ ಅರಾಜಕ ಸ್ಥಿತಿಗೆ ಹೋಗುತ್ತದೆ ಎಂದಿಲ್ಲವಲ್ಲಾ, ಥೂತ್ತೇರಿ.

******

ಹಾವೇರಿ ಸಾಹಿತ್ಯ ಸಮ್ಮೇಳನ ಮುಗಿದಿದೆ. ಜೋಶಿಯ ಲೆಕ್ಕಾಚಾರಗಳು ಸಾಂಗವಾಗಿ ನಡೆದಿವೆ. ಈ ನಡುವೆ ಹಾವೇರಿಯ ಸಣ್ಣವೇದಿಕೆಯಿಂದ ದೊಡ್ಡ ಗಂಟಲಲ್ಲಿ ಅಬ್ಬರಿಸಿದ ದೊಡ್ಡರಂಗೇಗೌಡರ ದನಿ ನಾಡಿನ ಮೂಲೆಮೂಲೆಗೆ ತಲುಪಿ ತುಸು ಗೊಂದಲ ಮೂಡಿಸಿದೆಯಂತಲ್ಲಾ. ಕಳೆದ ಶತಮಾನದಲ್ಲಿ ಕುವೆಂಪು ಹೊಸ ತರುಣ ಜನಾಂಗಕ್ಕೆ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಎಂದರು. ಆ ಕೂಡಲೇ ಹಲವು ತರುಣರು ದೇವರು ದಿಂಡಿರನ್ನು ಮತ್ತು ಜ್ಯೋತಿಷಿಗಳನ್ನು ಬಿಟ್ಟು ಮಂತ್ರ ಮಾಂಗಲ್ಯದ ಮದುವೆಯಾದರು, ಉರಿಯುವ ಪಂಜುಗಳಾದರು. ಆದರೀಗ ದೊಡ್ಡರಂಗೇಗೌಡರ ದನಿಗೆ ಕಿವಿಯಾದ ಹುಡುಗರು ಯಾವ ರೂಪದ ಕ್ರಾಂತಿ ಮಾಡಬೇಕೆಂದು ಯೋಚಿಸುತ್ತಿದ್ದಾರಂತಲ್ಲಾ. ಏಕೆಂದರೆ ಗೌಡರು ಮಠೋಪಜೀವಿಯಂತಹ ಕವಿ. ಆದಿಚುಂಚನಗಿರಿ ಬೆಟ್ಟದ ಮೇಲೆ ನಿಂತು ಸೂರ್ಯೋದಯ ನೋಡಿದ ಫಲವಾಗಿ “ತೇರಾಏರಿ ಅಂಬರದಾಗ ನೇಸರು ನಗತಾನೆ ಮರಗಿಡ ಕೂಗ್ಯಾವೇ ಹಕ್ಕಿ ಹಾಡ್ಯಾವೇ” ಎಂದು ಬೇಂದ್ರೆ ತೋರಿದ ಬೆಳಗಿನ ಪ್ರತಿಯಾಗಿ ನೇಸರ ತೋರಿದ ಕವಿ. ಆದರೇನು ಶೂದ್ರ ಸಮೂಹದ ಬೆಟ್ಟಸಾಲಲ್ಲಿ ನಿಂತು ಅದ್ಯಾವಾಗ ಬಿಜೆಪಿ ಗುಡಾರಕ್ಕೆ ನೆಗೆದರೊ ಸ್ಥಾನ ಮಾನಗಳು ಹಿಂಬಾಲಿಸಿ ಬಂದವು. ಕೂಡಲೇ ಮೋದಿ ಬಗ್ಗೆ ಎಡೂರಪ್ಪನ ಬಗ್ಗೆಯೂ ಕವನ ಬರೆದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆದರು. ಮುಂದೆ ಜೋಶಿಗೆ ತೋರುವ ಕೃತಜ್ಞತೆಯ ಫಲವಾಗಿ ಯಾವ ಕವನ ಉದ್ಭವವಾಗುತ್ತದೊ ಎಂಬ ಆತಂಕದ ನಡುವೆ ಇತ್ತ ಚೆಡ್ಡಿಗಳು, ಅತ್ತ ಚುಂಚನಗಿರಿ ಪ್ರಾಂತ್ಯದ ಹುಡುಗರು ಗೌಡರ ಕ್ರಾಂತಿ ಮಾತಿನಿಂದ ಗೊಂದಲಗೊಂಡಿದ್ದಾರಂತಲ್ಲಾ, ಥೂತ್ತೇರಿ.

*****

ಈಚೆಗೆ ಕೆಲವು ಮಠಾಧೀಶರು ಸಂಘಟಿತರಾಗಿ ಸರಕಾರಕ್ಕೆ ಸಲಹೆ ಕೊಡುವುದು ಸಾಮಾನ್ಯವಾಗಿದೆಯಂತಲ್ಲಾ. ಈಗವರ ಕಣ್ಣುಬಿದ್ದಿರುವುದು ಶಾಲಾ ಮಕ್ಕಳ ಆಹಾರದ ಬಗ್ಗೆ. ಸಾಮಾನ್ಯವಾಗಿ ಮಠಾಧೀಶರು, ಧರ್ಮವಂತರು, ನೀತಿವಂತರು, ಸತ್ಯವಂತರು. ತಾವು ಪ್ರತಿನಿಧಿಸುವ ಜಾತಿಯ ತಲೆಯ ಮೇಲೂ ಕುಳಿತವರು. ಇಂತಹ ಸ್ಥಾನದಲ್ಲಿರುವವರಿಗೆ ಸಾಮಾನ್ಯವಾಗಿ ಯಾವ ಶ್ರಮವೂ ಇರುವುದಿಲ್ಲ. ವಿಕಲಚೇತನ ಮಗುವಿಗೆ ತಾಯಿ ತಾನೇ ಆಹಾರ ನೀಡಿ ಸಾಕಿ ಸಲಹುವಂತೆ ಜನಾಂಗ ಈ ಜಗದ್ಗುರುಗಳನ್ನ ಸಾಕುತ್ತಿದೆ. ಹೀಗೆ ಸಾಕಿಸಿಕೊಂಡವರೆಲ್ಲಾ ಮಕ್ಕಳ ಸಾತ್ವಿಕ ಆಹಾರದ ಬಗ್ಗೆ ಮಾತನಾಡುತ್ತಿದ್ದಾರೆ. ಗುರುಗಳ ಭೋಜನದ ಬಗ್ಗೆ ’ಗುರು ಶಿಷ್ಯರು’ ಎಂಬ ಚಿತ್ರದ ತುಣುಕು ಹೇಳಿದರೆ ಅಪ್ರಸ್ತುತವಾಗಲಾರದು. ಉಂಡಾಡಿ ಗುರುವೊಬ್ಬರು ಗುರುವರ್ಯರ ಮನೆಗೆ ಬರುತ್ತಾರೆ. ಆಗ ಆಚಾರ್ಯರು ಅವರ ಕಾರ್ಯಕ್ರಮ ಕೇಳುತ್ತಾರೆ. ಆಗ ಅತಿಥಿಗಳು ಮುಂಜಾನೆ ಸ್ನಾನ, ಸಂಧ್ಯಾವಂದನೆ ಮತ್ತೆ ಉಪಾಹಾರ ಮಧ್ಯಾಹ್ನ ಭೋಜನ, ಶಯನ ನಂತರ ವಾಯುವಿಹಾರ, ರಾತ್ರಿ ಭೋಜನ ಮತ್ತು ಒಂದು ತಂಬಿಗೆ ಕ್ಷೀರ ಇದೇ ನನ್ನ ದಿನಚರಿ ಎನ್ನುತ್ತಾನೆ. ಹೀಗೆ ಬದುಕಿರುವ ನಮ್ಮ ಕೆಲವು ಜಗತ್ ಗುರುಗಳು ಮಕ್ಕಳ ಸಾತ್ವಿಕ ಆಹಾರದ ಬಗ್ಗೆ ಎಗ್ಗಿಲ್ಲದೆ ಸಲಹೆ ಕೊಡತೊಡಗಿದ್ದಾರೆ. ಇಂತಹವರ ಅವಗಾಹನೆಗೆ ತರುವ ವಿಷಯ ಯಾವುದೆಂದರೆ ಶೃಂಗೇರಿ, ಚುಂಚನಗಿರಿ, ಸಿದ್ಧಗಂಗಾ ಮಠ ಮತ್ತು ಇನ್ನಿತರ ಪ್ರಗತಿಪರ ಚಿಂತಕರನ್ನ ಪಡೆದಿರುವ ಮಠಗಳು ಎಂದೂ ಮಕ್ಕಳ ಆಹಾರ ಪದ್ಧತಿ ಬಗ್ಗೆ ಮಾತನಾಡಿಲ್ಲ. ಆಹಾರ ಅವರವರ ಜನ್ಮಸಿದ್ಧ ಹಕ್ಕು. ಆದ್ದರಿಂದ ತಮಗೆ ಬಿಟ್ಟಿ ಸಿಗುವ ದ್ರಾಕ್ಷಿ, ಉತ್ತುತ್ತೆ, ಗೋಡಂಬಿ ತಿಂದುಕೊಂಡು ಟಿವಿ ನೋಡುತ್ತ ಕಾಲ ಹಾಕಲು ಸಮಸ್ಯೆ ಏನು ಎಂದು ಕೇಳುವಂತೆ ಮಾತನಾಡುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...