Homeಅಂಕಣಗಳುಎರಡು ದುಃಖದ ಸಂಗತಿ ಎದುರಾದವಲ್ಲಾ

ಎರಡು ದುಃಖದ ಸಂಗತಿ ಎದುರಾದವಲ್ಲಾ

- Advertisement -
- Advertisement -

ಈವಾರ ಎರಡು ದುಃಖಕರ ಸಂಗತಿಗಳು ಹೊರಬಿದ್ದಿವೆಯಲ್ಲಾ. ಮೊದಲನೆಯದಾಗಿ ನಮ್ಮ ಸಭ್ಯರಾಜಕಾರಣಿ ಎಸ್.ಎಂ ಕೃಷ್ಣ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ನಿರ್ಧಾರಕ್ಕೆ ಬಿಜೆಪಿಗಳು ಕಿವಿ ಕೇಳದಂತಿರುವುದು ಸಹಜ. ಕೃಷ್ಣ ತಮ್ಮ ರಾಜಕಾರಣದ ಇತಿಹಾಸದಲ್ಲಿ ಎಂದೂ ಅಸಭ್ಯವಾಗಿ ನಡೆದುಕೊಂಡವರಲ್ಲ. ಅಸಂಬದ್ಧ ಮಾತನಾಡಿದವರಲ್ಲಾ. ಯಾರನ್ನೂ ಕಟುವಾಗಿ ಟೀಕಿಸಿದವರಲ್ಲ. ತಮ್ಮ ಕಾರಿನ ಡ್ರೈವರನ್ನು ಕೂಡ ಬಹುವಚನದಲ್ಲಿ ಮಾತನಾಡಿಸಿದ ವ್ಯಕ್ತಿ. ಎಲ್ಲಕ್ಕಿಂತ ಮುಖ್ಯವಾಗಿ ನರಹಂತಕ ವೀರಪ್ಪನ್‌ನನ್ನು, ’ವೀರಪ್ಪನ್‌ರವರೆ’ ಎಂದು ಸಂಭೋಧಿಸಿ “ಕಿಸ್ನ ನಲ್ಲ ಪೆರಿಯವರು” ಎಂಬ ಬಿರುದು ಪಡೆದವರು. ಕೃಷ್ಣರಲ್ಲಿರುವ ಈ ಗುಣಗಳಿಗಾಗಿ ಅವರು ಸುಮ್ಮನಾಗಬಹುದಿತ್ತು. ಅದುಬಿಟ್ಟು, ತಮ್ಮ ನಡವಳಿಕೆ ಭಾಷೆ ಮತ್ತು ಬುದ್ಧಿಯ ಸಮೀಪಕ್ಕೂ ಬಾರದ ಬಿಜೆಪಿ ಸೇರಿದ್ದು ಈ ಶತಮಾನದ ರಾಜಕೀಯ ದ್ರೋಹವಾಗಿ ಕಂಡಿತಂತಲ್ಲಾ. ಯಾರೋ ರಾಹುಲ್‌ಗಾಂಧಿಯವರನ್ನು ಕೇಳಿದಾಗ, ಇದು ಕೃಷ್ಣರ ಸಮಸ್ಯೆ, ಕಾಂಗ್ರೆಸ್ ಮತ್ತು ಬಿಜೆಪಿ ಸಮಸ್ಯೆಯಲ್ಲ; ಅಲ್ಲಿ ಯಾರೂ ಇವರನ್ನು ಕರೆದಿಲ್ಲ ಎಂದುಬಿಟ್ಟಿದ್ದರಲ್ಲಾ. ಆದರೇನು ಕೃಷ್ಣ ಎಲ್ಲವನ್ನು ಬಿಟ್ಟು ಬಿಜೆಪಿಯ ಬಾಗಿಲಿಗೆ ಹೋದರು. ಖಾಲಿಯಿದ್ದ ಒಂದು ಆರಾಮ ಕುರ್ಚಿಯಲ್ಲಿ ಕುಳಿತರು. ಯಾರೂ ಕ್ಯಾರೆ ಅನ್ನಲಿಲ್ಲ. ನಿಧಾನವಾಗಿ ಎದ್ದು ಬರ್ತಿನಿ ಇವುರೆ, ಬಹಳ ಹೊತ್ತು ಕೂರಕ್ಕೆ ವಯಸ್ಸು ಪರ್ಮಿಟ್ ಮಾಡ್ತ ಇಲ್ಲ ಎಂದು ನಿಧಾನವಾಗಿ ಎದ್ದು ಹೊರಟಾಗಲೂ ಯಾವ ಬಿಜೆಪಿಗಳೂ ಕೂಡ ಆಯ್ತು ಸರ್ ಹೋಗಿ ಬನ್ನಿ ಅನ್ನಲಿಲ್ಲವಂತಲ್ಲಾ, ಥೂತ್ತೇರಿ.

*******

ಎರಡನೆ ದುಃಖಪೂರಿತ ಸಂಗತಿ ಯಾವುದೆಂದರೇ ಗೃಹಮಂತ್ರಿ ಆರಗ ಜ್ಞಾನೇಂದ್ರ ಆತ್ಮಹತ್ಯೆಯ ಮಾತನಾಡಿರುವುದು. ಕರ್ನಾಟಕದ ರಾಜಕೀಯದ ಆಗಸದಲ್ಲಿ ಎಂದೆಂದೂ ಮಿನುಗುವ ನಕ್ಷತ್ರವಾಗುಳಿದಿರುವ ಶಾಂತವೇರಿ ಗೋಪಾಲಗೌಡರು ಆರಿಸಿ ಬಂದಿದ್ದ ತೀರ್ಥಹಳ್ಳಿಯನ್ನು ಪ್ರತಿನಿಧಿಸುತ್ತಿರುವ ಜ್ಞಾನೇಂದ್ರ ಅವರು ರಾಷ್ಟ್ರಕವಿ ಕುವೆಂಪು ವಿಚಾರಧಾರೆಗಳ ವಾಹಕನಾಗಿ ಬದುಕಲಾಗದೆ ಬಲವಂತವಾಗಿ ಎಂಬಂತೆ ಗೋಳವಲಕರ, ಹೆಡಗೆವಾರ, ಸಾವರಕರ ಇತ್ಯಾದಿ ಭಯಂಕರ ಹಿಂದೂವಾದಿಗಳ ಹಿಂಬಾಲಕರಾಗಿ, ಅವರ ಸಿದ್ಧಾಂತಗಳ ಪ್ರತಿಪಾದಕರಾಗಿ ಬದುಕಿದವರು. ಸದಾ ಶ್ವೇತವಸ್ತ್ರಧಾರಿಯಾಗಿ ಶುಭ್ರವಾಗಿ ಬದುಕಿದ್ದ ಅರಗರ ಪಕ್ಕ ಸ್ಯಾಂಟ್ರೊ ರವಿ ಅದೇ ಡ್ರೆಸ್ಸಿನಲ್ಲಿ ಬಂದು ನಿಂತಿದ್ದೂ ಅಲ್ಲದೆ, ಅರಗರ ಅರಿವಿಗೂ ಬರದೆ ಜೇಬಿಗೆ ಏನೊ ಇಟ್ಟು ಹೋದದ್ದು ಗಮನಕ್ಕೇ ಬರಲಿಲ್ಲವಂತಲ್ಲಾ. ಈಗ ನೋಡಿದರೆ ಸ್ಯಾಂಟ್ರೊ ರವಿ ಪೊಲೀಸ್ ವರ್ಗಾವಣೆಯಲ್ಲಿ ಪಡೆದ ಕಾಸಿನ ಕವಡೆಯನ್ನು ಅರಗರ ಜೇಬಿಗೆ ಹಾ ಹೋಗಿದ್ದಾನೆಂಬ ಸುದ್ದಿ ಹಬ್ಬಿದೆಯಲ್ಲಾ. ಇಂತಹ ಸುದ್ದಿಗಳ ಶೋಧನೆ ಮತ್ತು ಅನಾವರಣದಲ್ಲಿ ಎತ್ತಿದ ಕೈಯಾದ ಕುಮಾರಣ್ಣನವರು, ಆತ್ಮಹತ್ಯೆ ಬೇಡ ಆತ್ಮಸಾಕ್ಷಿಯಿದ್ದರೆ ಸಾಕು; ಆತ್ಮಹತ್ಯೆಯ ಹೆಸರೆತ್ತುವುದೂ ಅಪರಾಧವೇ, ಹಾಗೆ ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಂಡರೆ ಇಡೀ ದೇಶದಲ್ಲಿ ರಾಜಕಾರಣಿಗಳೇ ಇಲ್ಲದಂತಾಗಿ ದೇಶವೇ ಅರಾಜಕ ಸ್ಥಿತಿಗೆ ಹೋಗುತ್ತದೆ ಎಂದಿಲ್ಲವಲ್ಲಾ, ಥೂತ್ತೇರಿ.

******

ಹಾವೇರಿ ಸಾಹಿತ್ಯ ಸಮ್ಮೇಳನ ಮುಗಿದಿದೆ. ಜೋಶಿಯ ಲೆಕ್ಕಾಚಾರಗಳು ಸಾಂಗವಾಗಿ ನಡೆದಿವೆ. ಈ ನಡುವೆ ಹಾವೇರಿಯ ಸಣ್ಣವೇದಿಕೆಯಿಂದ ದೊಡ್ಡ ಗಂಟಲಲ್ಲಿ ಅಬ್ಬರಿಸಿದ ದೊಡ್ಡರಂಗೇಗೌಡರ ದನಿ ನಾಡಿನ ಮೂಲೆಮೂಲೆಗೆ ತಲುಪಿ ತುಸು ಗೊಂದಲ ಮೂಡಿಸಿದೆಯಂತಲ್ಲಾ. ಕಳೆದ ಶತಮಾನದಲ್ಲಿ ಕುವೆಂಪು ಹೊಸ ತರುಣ ಜನಾಂಗಕ್ಕೆ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಎಂದರು. ಆ ಕೂಡಲೇ ಹಲವು ತರುಣರು ದೇವರು ದಿಂಡಿರನ್ನು ಮತ್ತು ಜ್ಯೋತಿಷಿಗಳನ್ನು ಬಿಟ್ಟು ಮಂತ್ರ ಮಾಂಗಲ್ಯದ ಮದುವೆಯಾದರು, ಉರಿಯುವ ಪಂಜುಗಳಾದರು. ಆದರೀಗ ದೊಡ್ಡರಂಗೇಗೌಡರ ದನಿಗೆ ಕಿವಿಯಾದ ಹುಡುಗರು ಯಾವ ರೂಪದ ಕ್ರಾಂತಿ ಮಾಡಬೇಕೆಂದು ಯೋಚಿಸುತ್ತಿದ್ದಾರಂತಲ್ಲಾ. ಏಕೆಂದರೆ ಗೌಡರು ಮಠೋಪಜೀವಿಯಂತಹ ಕವಿ. ಆದಿಚುಂಚನಗಿರಿ ಬೆಟ್ಟದ ಮೇಲೆ ನಿಂತು ಸೂರ್ಯೋದಯ ನೋಡಿದ ಫಲವಾಗಿ “ತೇರಾಏರಿ ಅಂಬರದಾಗ ನೇಸರು ನಗತಾನೆ ಮರಗಿಡ ಕೂಗ್ಯಾವೇ ಹಕ್ಕಿ ಹಾಡ್ಯಾವೇ” ಎಂದು ಬೇಂದ್ರೆ ತೋರಿದ ಬೆಳಗಿನ ಪ್ರತಿಯಾಗಿ ನೇಸರ ತೋರಿದ ಕವಿ. ಆದರೇನು ಶೂದ್ರ ಸಮೂಹದ ಬೆಟ್ಟಸಾಲಲ್ಲಿ ನಿಂತು ಅದ್ಯಾವಾಗ ಬಿಜೆಪಿ ಗುಡಾರಕ್ಕೆ ನೆಗೆದರೊ ಸ್ಥಾನ ಮಾನಗಳು ಹಿಂಬಾಲಿಸಿ ಬಂದವು. ಕೂಡಲೇ ಮೋದಿ ಬಗ್ಗೆ ಎಡೂರಪ್ಪನ ಬಗ್ಗೆಯೂ ಕವನ ಬರೆದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆದರು. ಮುಂದೆ ಜೋಶಿಗೆ ತೋರುವ ಕೃತಜ್ಞತೆಯ ಫಲವಾಗಿ ಯಾವ ಕವನ ಉದ್ಭವವಾಗುತ್ತದೊ ಎಂಬ ಆತಂಕದ ನಡುವೆ ಇತ್ತ ಚೆಡ್ಡಿಗಳು, ಅತ್ತ ಚುಂಚನಗಿರಿ ಪ್ರಾಂತ್ಯದ ಹುಡುಗರು ಗೌಡರ ಕ್ರಾಂತಿ ಮಾತಿನಿಂದ ಗೊಂದಲಗೊಂಡಿದ್ದಾರಂತಲ್ಲಾ, ಥೂತ್ತೇರಿ.

*****

ಈಚೆಗೆ ಕೆಲವು ಮಠಾಧೀಶರು ಸಂಘಟಿತರಾಗಿ ಸರಕಾರಕ್ಕೆ ಸಲಹೆ ಕೊಡುವುದು ಸಾಮಾನ್ಯವಾಗಿದೆಯಂತಲ್ಲಾ. ಈಗವರ ಕಣ್ಣುಬಿದ್ದಿರುವುದು ಶಾಲಾ ಮಕ್ಕಳ ಆಹಾರದ ಬಗ್ಗೆ. ಸಾಮಾನ್ಯವಾಗಿ ಮಠಾಧೀಶರು, ಧರ್ಮವಂತರು, ನೀತಿವಂತರು, ಸತ್ಯವಂತರು. ತಾವು ಪ್ರತಿನಿಧಿಸುವ ಜಾತಿಯ ತಲೆಯ ಮೇಲೂ ಕುಳಿತವರು. ಇಂತಹ ಸ್ಥಾನದಲ್ಲಿರುವವರಿಗೆ ಸಾಮಾನ್ಯವಾಗಿ ಯಾವ ಶ್ರಮವೂ ಇರುವುದಿಲ್ಲ. ವಿಕಲಚೇತನ ಮಗುವಿಗೆ ತಾಯಿ ತಾನೇ ಆಹಾರ ನೀಡಿ ಸಾಕಿ ಸಲಹುವಂತೆ ಜನಾಂಗ ಈ ಜಗದ್ಗುರುಗಳನ್ನ ಸಾಕುತ್ತಿದೆ. ಹೀಗೆ ಸಾಕಿಸಿಕೊಂಡವರೆಲ್ಲಾ ಮಕ್ಕಳ ಸಾತ್ವಿಕ ಆಹಾರದ ಬಗ್ಗೆ ಮಾತನಾಡುತ್ತಿದ್ದಾರೆ. ಗುರುಗಳ ಭೋಜನದ ಬಗ್ಗೆ ’ಗುರು ಶಿಷ್ಯರು’ ಎಂಬ ಚಿತ್ರದ ತುಣುಕು ಹೇಳಿದರೆ ಅಪ್ರಸ್ತುತವಾಗಲಾರದು. ಉಂಡಾಡಿ ಗುರುವೊಬ್ಬರು ಗುರುವರ್ಯರ ಮನೆಗೆ ಬರುತ್ತಾರೆ. ಆಗ ಆಚಾರ್ಯರು ಅವರ ಕಾರ್ಯಕ್ರಮ ಕೇಳುತ್ತಾರೆ. ಆಗ ಅತಿಥಿಗಳು ಮುಂಜಾನೆ ಸ್ನಾನ, ಸಂಧ್ಯಾವಂದನೆ ಮತ್ತೆ ಉಪಾಹಾರ ಮಧ್ಯಾಹ್ನ ಭೋಜನ, ಶಯನ ನಂತರ ವಾಯುವಿಹಾರ, ರಾತ್ರಿ ಭೋಜನ ಮತ್ತು ಒಂದು ತಂಬಿಗೆ ಕ್ಷೀರ ಇದೇ ನನ್ನ ದಿನಚರಿ ಎನ್ನುತ್ತಾನೆ. ಹೀಗೆ ಬದುಕಿರುವ ನಮ್ಮ ಕೆಲವು ಜಗತ್ ಗುರುಗಳು ಮಕ್ಕಳ ಸಾತ್ವಿಕ ಆಹಾರದ ಬಗ್ಗೆ ಎಗ್ಗಿಲ್ಲದೆ ಸಲಹೆ ಕೊಡತೊಡಗಿದ್ದಾರೆ. ಇಂತಹವರ ಅವಗಾಹನೆಗೆ ತರುವ ವಿಷಯ ಯಾವುದೆಂದರೆ ಶೃಂಗೇರಿ, ಚುಂಚನಗಿರಿ, ಸಿದ್ಧಗಂಗಾ ಮಠ ಮತ್ತು ಇನ್ನಿತರ ಪ್ರಗತಿಪರ ಚಿಂತಕರನ್ನ ಪಡೆದಿರುವ ಮಠಗಳು ಎಂದೂ ಮಕ್ಕಳ ಆಹಾರ ಪದ್ಧತಿ ಬಗ್ಗೆ ಮಾತನಾಡಿಲ್ಲ. ಆಹಾರ ಅವರವರ ಜನ್ಮಸಿದ್ಧ ಹಕ್ಕು. ಆದ್ದರಿಂದ ತಮಗೆ ಬಿಟ್ಟಿ ಸಿಗುವ ದ್ರಾಕ್ಷಿ, ಉತ್ತುತ್ತೆ, ಗೋಡಂಬಿ ತಿಂದುಕೊಂಡು ಟಿವಿ ನೋಡುತ್ತ ಕಾಲ ಹಾಕಲು ಸಮಸ್ಯೆ ಏನು ಎಂದು ಕೇಳುವಂತೆ ಮಾತನಾಡುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...