Homeಅಂಕಣಗಳುನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

- Advertisement -
- Advertisement -

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಉದಯವಾದ ಸುದ್ದಿಕೇಳಿ ಗಣಿಮಣ್ಣು ತಿಂದಷ್ಟು ಖುಷಿಯಾಯ್ತಲ್ಲಾ. ಇದಕ್ಕೆ ಕಾರಣರಾದ ಜನಾರ್ಧನ ರೆಡ್ಡಿಯವರಿಗೆ ಪೋನ್ ಮಾಡಿ ಶುಭಾಶಯ ಹೇಳಬೇಕೆನಿಸಿ ಪೋನ್ ಮಾಡಿದರೆ ರಿಂಗಾಯ್ತು. ರಿಂಗ್‌ಟೋನ್: ‘ತಿರುಪತಿ ಗಿರಿವಾಸ ಶ್ರೀ ವೆಂಕಟೇಶ, ನೀನೊಲಿದ ಮನೆ ಮನೆಯು ಲಕ್ಷ್ಮೀನಿವಾಸ….’

“ಹಲೋ ಯಾರು?”

“ನಾನು ಸಾರ್ ಪತ್ರಕರ್ತ ಯಾಹು ಅಂತ.”

“ಯಾವೂ ಅಂದ್ರೆ ಯಾರು?”

“ನಿಮ್ಮತ್ರ ಈ ಹಿಂದೆ ಒಬ್ಬ ವಕೀಲ, ಮತ್ತೊಬ್ಬ ಪತ್ರಕರ್ತ ಕಂ ಪ್ರೊಫೆಸರ್ ಇದ್ರಲ್ಲ ಸಾರ್ ಅವರ ಆತ್ಮೀಯ ಗೆಳೆಯ ಸಾರ್.”

“ಭಾಳ ಒಳ್ಳೆದು. ಏನು ಹೇಳಿ ಇವರೆ.”

“ನಿಮ್ಮನ್ನ ಅಭಿನಂದಿಸೋದಕ್ಕೆ ಪೋನ್ ಮಾಡಿದೆ ಸಾರ್. ಅಂತೂ ನಮ್ಮ ಕರ್ನಾಟಕ್ಕೆ ಇಂತದೊಂದು ಪಾರ್ಟಿ ಬೇಕಿತ್ತು ಸಾರ್.”

“ಅದಕ್ಕಾಗಿ ನಾನು ಪಾರ್ಟಿ ಸ್ಥಾಪನೆ ಮಾಡಿದೆ, ಯಾಕಂದ್ರೆ ಕಲ್ಯಾಣ ಕರ್ನಾಟಕ ಅಂತ ಹೇಳಿ ಬರೀ ನಾಮಕರಣ ಮಾಡಿದ್ರು, ಆದ್ರೆ ಅಭಿವೃದ್ಧಿ ಕೆಲಸಗಳು ಏನೂ ಆಗಿಲ್ಲ.”

“ನಿಜ ಸಾರ್ ಶ್ರೀಕೃಷ್ಣದೇವರಾಯನ ಕಾಲದಿಂದ್ಲೂ ಆಭಿವೃದ್ಧಿ ಆಗಲಿಲ್ಲ. ಕಡೆಗೆ ನಮ್ಮ ಸಂಪತ್ತನ್ನೆಲ್ಲಾ ತುಂಬಿಕೊಂಡು ಆಂಧ್ರಕ್ಕೋದ್ರು.”

“ನಾನು ಕಲ್ಯಾಣ ಕರ್ನಾಟಕನ ಅಷ್ಟೇ ಅಭಿವೃದ್ಧಿ ಮಾಡಲ್ಲ, ಇಡೀ ಕರ್ನಾಟಕನ ಅಭಿವೃದ್ಧಿ ಮಾಡತಕ್ಕಂತ ಕಾರ್ಯಕ್ರಮ ತಯಾರು ಮಾಡಿದ್ದಿನಿ.”

“ಆ ಅಭಿವೃದ್ಧಿಲಿ ಗಣಿ ಗುಡ್ಡಗಳು ಇವೆಯಾ ಸಾರ್?”

“ಇಲ್ಲ, ಜನರ ಮೂಲಭೂತ ಸಮಸ್ಯೆಗಳಿವೆ.”

“ಜನರ ಸಮಸ್ಯೆ ನಿವಾರಿಸಕ್ಕೆ ಹಣ ಬೇಕಲ್ಲವ ಸಾರ್. ಅದನ್ನ ಎಲ್ಲಿಂದ ತರ್ತಿರಿ? ಕೇಂದ್ರ ಸರಕಾರ ಹಣಕೊಡಲಿಲ್ಲ ಅಂದರೆ ಯಂಗೆ ಮಾಡ್ತಿರಿ?”

“ನಾನು ಹ್ಯಾಗೊ ಮಾಡ್ತಿನಿ. ಮೊದಲಿಂದ ನಾನು ನನ್ನ ಗುರಿಲಿ ಸೋತವನಲ್ಲ, ಈಗಲೂ ಸೋಲಲ್ಲ.”

“ಸೋಲಬೇಡಿ ಸಾರ್.. ವಿಧಾನಸೌಧದ ವರಾಂಡದಲ್ಲಿ ನಿಮ್ಮ ಗ್ರೀನ್ ಕಲರ್ ರೋಲ್ಸ್‌ರಾಯ್ ಕಾರ್ ನಿಂತಿರದ್ದನ್ನ ನೋಡಕ್ಕೆ ನನ್ನ ಕಣ್ಣಿಗೆ ಹಬ್ಬ ಸಾರ್.”

“ನಾನು ನನ್ನ ರೋಲ್ಸ್‌ರಾಯ್ ಕಾರಲ್ಲಿ ಬಂದೇ ಬರ್ತಿನಿ ಯಾಹೂ.”

“ನಿಮ್ಮಂತವರ ಕಾರ್ಯಕ್ಷೇತ್ರದ ತಾಣದಂಗಿದ್ದ ಬಿಜೆಪಿ ಯಾಕೆ ಬಿಟ್ರಿ ಸಾರ್?”

“ಬಿಜೆಪಿ ಇವತ್ತು ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ರೆ ಅದು ನನ್ನಿಂದ. ಮೊದಲು ಕುಮಾರಸ್ವಾಮಿಗೆ ಏನು ಬೇಕೋ ಅದನ್ನ ಕೊಟ್ಟು ಅಧಿಕಾರದಲ್ಲಿ ಪಾಲು ಪಡೆದೆವು. ನಂತರ ಬಹುಮತ ಬರದೇ ಹೋದಾಗ ಶಾಸಕರಿಗೆ ಏನು ಬೇಕೋ ಅದು ಕೊಟ್ಟು, ಅವರಿಂದ ರಾಜಿನಾಮೆ ಕೊಡಿಸಿ ಚುನಾವಣೆ ಮಾಡಿ ಎಡೂರಪ್ಪನ್ನ ಮುಖ್ಯಮಂತ್ರಿ ಮಾಡಿದ್ದು ನಾವು. ಅದಕ್ಕಾಗಿ ನಾವು ಗಣಿಯಿಂದ ಬಂದ ಹಣವನ್ನು ಖರ್ಚು ಮಾಡಿದೆವು.”

“ಆ ನಂತರ ಸರಕಾರ ಬಂದಾಗ ಅಕ್ರಮ ಮಾಡಿ ಹಣ ಮಾಡಿಕಂಡ್ರಲ್ಲ ಸಾರ್. ಗಣಿ ಹಣನ ರಾಜಕಾರಣಕ್ಕೆ ಹಾಕಿದ್ರಿ. ಪವರ್ರಿಗೆ ಬಂದಾಗ ಗೋರಿ ಕಂಡ್ರಿ..”

“ಅದು ಸರಿ, ಪರಿಣಾಮಗಳನ್ನ ಅನುಭವಿಸಿದವರು ನಾವು, ಜೈಲಿಗೆ ಹೋಗಿದ್ದು ನಾನು, ನಮ್ಮ ತಾಯಿ ಸಮಾನರಾಗಿದ್ದ ಸುಷ್ಮಸ್ವರಾಜ್ ಕೂಡ ಅವುರ್ಯಾರೊ ನನಿಗೆ ಗೊತ್ತೆಯಿಲ್ಲ ಅಂದುಬುಟ್ರು. ಇನ್ನ ತಂದೆ ಸಮಾನರಾದ ಎಡೂರಪ್ಪನೂ ನಮ್ಮ ಸಹಾಯಕ್ಕೆ ಬರಲಿಲ್ಲ..”

“ಬರಲಿಲ್ಲ ಅಂದ್ರೆ ಅವರಿಗೂ ನಿಮ್ಮ ಮೇಲೆ ಸಿಟ್ಟಿತ್ತಲ್ಲ ಸಾರ್. ಅವರ ಆತ್ಮೀಯರಾಗಿದ್ದ ಶೋಭ ಕರಂದ್ಲಾಜೆಯವರ್ನ ಸಂಪುಟದಿಂದ ತಗಿಬೇಕು ಅಂದ್ರಿ, ತಗದ್ರು. ಇನ್ನ ನಿಮ್ಮನ್ನ ವಿಚಾರಿಸಿಗಳಕ್ಕೆ ಅಂತ ಕಳಿಸಿದ್ದ ಡಿ.ಸಿನ ಕೂಡಲೇ ವರ್ಗಮಾಡಿ ಅಂದಾಗ ಮಾಡಿದ್ರು. ಒಂದೇ ವಾರಕ್ಕೆ ಎಸ್ಪಿ ಡಿ.ಸಿ ವರ್ಗ ಮಾಡಿಸಿದ್ದು ನೀವೇ ಇರಬೇಕು.”

“ಯಾರು ಸರಕಾರವನ್ನ ತಂದ್ರೋ ಅವರಿಗೇ ಕಿರುಕುಳ ಕೊಡೋ ಅಧಿಕಾರಿಗಳನ್ನ ಹಾಕಿದ್ರೆ ಸುಮ್ಮನಿರಬೇಕಾಗುತ್ತ?”

“ಆಗಲ್ಲ ಸಾರ್. ನೀವು ಬಿಜೆಪಿ ಅನ್ನೋ ಪಾರ್ಟಿನ ಅರ್ಥಮಾಡಿಕೊಬೇಕಾಗಿತ್ತು. ಅವರ ಮೋಸದ ಇತಿಹಾಸ ದೊಡ್ಡದಿದೆ.”

“ನಂಬಿದವರ ಕತ್ತು ಕುಯ್ಯತರೆ ಅಂತ ಗೊತ್ತಿರಲಿಲ್ಲ ಕಂಡ್ರಿ.”

“ಕತ್ತು ಕುಯ್ಯಲ್ಲ ಸಾರ್ ಅವುರು. ನೀವೇ ಪಾಷಣ ತಿಂದು ಸಾಯಂಗೆ ಮಾಡ್ತರೆ. ಇದೇ ಎಡೂರಪ್ಪ ಜೈಲಿಗೋಗಿದ್ದಾಗ ಬೆಂಗಳೂರಿಗೆ ಅಡ್ವಾನಿ ಬಂದಿದ್ರು. ಎಡೂರಪ್ಪನ್ನ ನೋಡಕ್ಕೆ ಹೋಗಿದ್ರಾ? ಅದೇ ಅಡ್ವಾನಿ ಈಗೆಲ್ಯವುರೆ, ಬಾಬರಿ ಮಸೀದಿ ಕೆಡಹಿದ ಕಲ್ಯಾಣಸಿಂಗ ಏನಾದ್ರು, ಹುಬ್ಬಳಿ ಈದ್ಗಾ ಮೈದಾನದಲ್ಲಿ ಬಾವುಟ ಹಾರಿಸಿದ ಉಮಾಭಾರತಿ ಏನಾದ್ರು, ಶಿವಸೇನೆ ಏನಾಗಿದೆ, ಗೋವಾ ಕತೆ ಏನಾಗಿದೆ. ಕುತಂತ್ರದಿಂದ್ಲೆ ಪಾರ್ಟಿ ಕಟ್ಟಿ ಆಡಳಿತ ಮಾಡದು ಅವರ ಹುಟ್ಟುಗುಣ. ನೀವು ನಿಮ್ಮ ಬಗ್ಗೆ ಯೋಚನೆ ಮಾಡಿದ್ರೆ ಇಷ್ಟೊಂದು ಗಣಿ ಲೂಟಿ ಮಾಡೋ ಅಗತ್ಯ ಇರಲಿಲ್ಲ ಅಲ್ಲವ ಸಾರ್?”

“ಹೌದು, ಇವರಿಗೋಸ್ಕರ ಜಾಸ್ತಿ ಮಾಡಬೇಕಾಯ್ತು.”

“ಗಣಿಕಳ್ರು ಅಂತ ಹೆಸರು ಪಡದೋರು ನೀವು. ಅಧಿಕಾರ ಮಾಡ್ತ ಸರಕಾರನೆ ಕೊಳ್ಳೆ ಹೊಡಿತಾಯಿರೋರು ಅವುರು.”

“ಅದಕೆ ನಾನು ಅವರನ್ನ ಸುಮ್ಮನೆ ಬಿಡಬಾರ್ದು ಅಂತ ಕಲ್ಯಾಣ ಪ್ರಗತಿ ಪಕ್ಷ ಮಾಡಿದ್ದಿನಿ.”

“ಪ್ರಾದೇಶಿಕ ಪಕ್ಷ ಮಾಡಿದೋರ್ಯಾರು ಸಕ್ಸಸ್ ಆಗಿಲವಂತಲ್ಲಾ ಸಾರ್?”

“ಆಗಿಲ್ಲ ಅನ್ನದನ್ನ ನಾನು ಕೂಡ ಗಮನಿಸಿದ್ದೀನಿ. ಮಾನ್ಯ ಎಡೂರಪ್ಪನವರು ಮಾಡಿದ್ರು ಬಿಜೆಪಿನ ಅಧಿಕಾರದಿಂದ ದೂರ ಇಟ್ಟರು. ಆ ನಂತರ ಬಿಜೆಪಿಯವರೇ ಕರದು ಅಧಿಕಾರವನ್ನ ಕೊಟ್ರು. ನಾನು ಕೂಡ ಹಾಗೇ ಮಾಡ್ತಿನಿ ನೋಡಿ.”

“ವಿಜಯನಗರ ಸಾಮ್ರಾಜ್ಯ ಆಳಿದೋರು ತೆಲುಗರಂತೆ! ಅವರ ನಂತರ ನೀವೇನಾದ್ರು ಪವರ್ರಿಗೆ ಬಂದ್ರೆ ಮತ್ತೆ ಕಲ್ಯಾಣ ಕರ್ನಾಟಕ ಸಾಮ್ರಾಜ್ಯ ಸ್ಥಾಪನೆ ಆಗುತ್ತಲ್ಲ ಸಾರ್?”

“ಈಗಲೂ ಕಲ್ಯಾಣ ಕರ್ನಾಟಕ ತೆಲುಗರದ್ದೇ ಆಗಿದೆ ಕಂಡ್ರಿ. ಇಲ್ಲಿನ ಜಿಲ್ಲಾಪಂಚಾಯ್ತಿ ಸದಸ್ಯರು, ಗ್ರಾಮಪಂಚಾಯ್ತಿ ಸದಸ್ಯರು, ಎಮ್ಮೆಲ್ಲೆ, ಮಂತ್ರಿಗಳೆಲ್ಲಾ ತೆಲುಗು ಭಾಷಿಕರು. ಅವರಿಗೊಬ್ಬ ಲೀಡರು ಬೇಕು ಆ ಕೊರತೆಯನ್ನ ನಾನು ತುಂಬತೀನಿ.”

“ಮತ್ತೆ ಸಮಗ್ರ ಕರ್ನಾಟಕದ ಮಾತನಾಡ್ತಿರಿ?”

“ಅದು ಕೂಡ ನಿಜ. ಇಡೀ ಕರ್ನಾಟಕ ಅಭಿವೃದ್ಧಿ ನಮ್ಮ ಕನಸು.”

“ನಿಮ್ಮ ಕನಸು ನನಸಾಗದಕ್ಕೆ ಕರ್ನಾಟಕ ಕಾಯ್ತಯಿದೆ ಸಾರ್, ನೀವು ನಿಮ್ಮ ಕಾರ್ಯಕ್ಷೇತ್ರನ ಎಲ್ಲಾ ಜಿಲ್ಲೆಗೂ ವಿಸ್ತರಿಸಿಕೊಳ್ಳೊದಾದ್ರೆ ನಿಧಿ ತರದ ಗುಡ್ಡಗಳು ನಿಂತಿವೆ, ಕನಕಪುರದ ಕಡೆ ಗ್ರಾನೈಟ್ ಬೆಟ್ಟಗಳಿವೆ, ಇನ್ನ ಪಾಂಡವಪುರದ ಕಡೆ ಪುಟ್ಟರಾಜನ ಬೆಟ್ಟಗಳಿವೆ, ಚಿಕ್ಕಮಗಳೂರಿಗೆ ಬಂದ್ರೆ ಗಣಿ ಗಿರಿಗಳ ಸಾಲೇಯಿದೆ, ಶಿವಮೊಗ್ಗದ ಕಡೆ ಕುಂದಾದ್ರಿ ಕೊಡಚಾದ್ರಿ ಬೆಟ್ಟಗಳಿವೆ. ಇನ್ನ ನಿಮ್ಮಲ್ಲೇ ಕಪ್ಪತ್ತ ಗುಡ್ಡ ಸಾಲಿದೆ. ನೀವು ಯಾವುದೇ ಜಿಲ್ಲೆಗೋದ್ರು ಗಣಿಗುಡ್ಡಗಳಿವೆ ಸಾರ್. ಅವನ್ನೆಲ್ಲಾ ನೆಲಸಮ ಮಾಡಿ ಕಲ್ಯಾಣ ರಾಜ್ಯದ ಕೃಷ್ಣದೇವರಾಯನ ಕಾಲ ಮಾಡಬಹುದು. ನಿಮ್ಮ ಖಾಸಗಿ ದರ್ಬಾರಿನಲ್ಲಿರೊ ಕುರ್ಚಿ ಮೇಲೆ ತಿರುಪತಿ ತಿಮ್ಮಪ್ಪನಿಗೆ ಮಾಡಿಸಿ ಕೊಟ್ಟಂತ ಕಿರೀಟ ಧರಿಸಿ ಕೂತಗಬಹುದು. ಆಗ ಬಿಜೆಪಿ ಕಣ್ಣು ತಪ್ಪಿಸಿ ರಾಮುಲು ಬರ್ತರೆ.”

“ರಾಮುಲು ಬಂದ್ರೆ ಅವರನ್ನೆ ಮುಖ್ಯಮಂತ್ರಿ ಮಾಡ್ತಿನಿ.”

“ನೀವು?”

“ನಾನು ಉಪಮುಖ್ಯಮಂತ್ರಿ ಮತ್ತೆ ಗಣಿಕಾತೆ ತಗೊತಿನಿ.”

ಥೂತ್ತೇರಿ.


ಇದನ್ನೂ ಓದಿ: ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...