Homeಅಂಕಣಗಳುನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

- Advertisement -
- Advertisement -

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಉದಯವಾದ ಸುದ್ದಿಕೇಳಿ ಗಣಿಮಣ್ಣು ತಿಂದಷ್ಟು ಖುಷಿಯಾಯ್ತಲ್ಲಾ. ಇದಕ್ಕೆ ಕಾರಣರಾದ ಜನಾರ್ಧನ ರೆಡ್ಡಿಯವರಿಗೆ ಪೋನ್ ಮಾಡಿ ಶುಭಾಶಯ ಹೇಳಬೇಕೆನಿಸಿ ಪೋನ್ ಮಾಡಿದರೆ ರಿಂಗಾಯ್ತು. ರಿಂಗ್‌ಟೋನ್: ‘ತಿರುಪತಿ ಗಿರಿವಾಸ ಶ್ರೀ ವೆಂಕಟೇಶ, ನೀನೊಲಿದ ಮನೆ ಮನೆಯು ಲಕ್ಷ್ಮೀನಿವಾಸ….’

“ಹಲೋ ಯಾರು?”

“ನಾನು ಸಾರ್ ಪತ್ರಕರ್ತ ಯಾಹು ಅಂತ.”

“ಯಾವೂ ಅಂದ್ರೆ ಯಾರು?”

“ನಿಮ್ಮತ್ರ ಈ ಹಿಂದೆ ಒಬ್ಬ ವಕೀಲ, ಮತ್ತೊಬ್ಬ ಪತ್ರಕರ್ತ ಕಂ ಪ್ರೊಫೆಸರ್ ಇದ್ರಲ್ಲ ಸಾರ್ ಅವರ ಆತ್ಮೀಯ ಗೆಳೆಯ ಸಾರ್.”

“ಭಾಳ ಒಳ್ಳೆದು. ಏನು ಹೇಳಿ ಇವರೆ.”

“ನಿಮ್ಮನ್ನ ಅಭಿನಂದಿಸೋದಕ್ಕೆ ಪೋನ್ ಮಾಡಿದೆ ಸಾರ್. ಅಂತೂ ನಮ್ಮ ಕರ್ನಾಟಕ್ಕೆ ಇಂತದೊಂದು ಪಾರ್ಟಿ ಬೇಕಿತ್ತು ಸಾರ್.”

“ಅದಕ್ಕಾಗಿ ನಾನು ಪಾರ್ಟಿ ಸ್ಥಾಪನೆ ಮಾಡಿದೆ, ಯಾಕಂದ್ರೆ ಕಲ್ಯಾಣ ಕರ್ನಾಟಕ ಅಂತ ಹೇಳಿ ಬರೀ ನಾಮಕರಣ ಮಾಡಿದ್ರು, ಆದ್ರೆ ಅಭಿವೃದ್ಧಿ ಕೆಲಸಗಳು ಏನೂ ಆಗಿಲ್ಲ.”

“ನಿಜ ಸಾರ್ ಶ್ರೀಕೃಷ್ಣದೇವರಾಯನ ಕಾಲದಿಂದ್ಲೂ ಆಭಿವೃದ್ಧಿ ಆಗಲಿಲ್ಲ. ಕಡೆಗೆ ನಮ್ಮ ಸಂಪತ್ತನ್ನೆಲ್ಲಾ ತುಂಬಿಕೊಂಡು ಆಂಧ್ರಕ್ಕೋದ್ರು.”

“ನಾನು ಕಲ್ಯಾಣ ಕರ್ನಾಟಕನ ಅಷ್ಟೇ ಅಭಿವೃದ್ಧಿ ಮಾಡಲ್ಲ, ಇಡೀ ಕರ್ನಾಟಕನ ಅಭಿವೃದ್ಧಿ ಮಾಡತಕ್ಕಂತ ಕಾರ್ಯಕ್ರಮ ತಯಾರು ಮಾಡಿದ್ದಿನಿ.”

“ಆ ಅಭಿವೃದ್ಧಿಲಿ ಗಣಿ ಗುಡ್ಡಗಳು ಇವೆಯಾ ಸಾರ್?”

“ಇಲ್ಲ, ಜನರ ಮೂಲಭೂತ ಸಮಸ್ಯೆಗಳಿವೆ.”

“ಜನರ ಸಮಸ್ಯೆ ನಿವಾರಿಸಕ್ಕೆ ಹಣ ಬೇಕಲ್ಲವ ಸಾರ್. ಅದನ್ನ ಎಲ್ಲಿಂದ ತರ್ತಿರಿ? ಕೇಂದ್ರ ಸರಕಾರ ಹಣಕೊಡಲಿಲ್ಲ ಅಂದರೆ ಯಂಗೆ ಮಾಡ್ತಿರಿ?”

“ನಾನು ಹ್ಯಾಗೊ ಮಾಡ್ತಿನಿ. ಮೊದಲಿಂದ ನಾನು ನನ್ನ ಗುರಿಲಿ ಸೋತವನಲ್ಲ, ಈಗಲೂ ಸೋಲಲ್ಲ.”

“ಸೋಲಬೇಡಿ ಸಾರ್.. ವಿಧಾನಸೌಧದ ವರಾಂಡದಲ್ಲಿ ನಿಮ್ಮ ಗ್ರೀನ್ ಕಲರ್ ರೋಲ್ಸ್‌ರಾಯ್ ಕಾರ್ ನಿಂತಿರದ್ದನ್ನ ನೋಡಕ್ಕೆ ನನ್ನ ಕಣ್ಣಿಗೆ ಹಬ್ಬ ಸಾರ್.”

“ನಾನು ನನ್ನ ರೋಲ್ಸ್‌ರಾಯ್ ಕಾರಲ್ಲಿ ಬಂದೇ ಬರ್ತಿನಿ ಯಾಹೂ.”

“ನಿಮ್ಮಂತವರ ಕಾರ್ಯಕ್ಷೇತ್ರದ ತಾಣದಂಗಿದ್ದ ಬಿಜೆಪಿ ಯಾಕೆ ಬಿಟ್ರಿ ಸಾರ್?”

“ಬಿಜೆಪಿ ಇವತ್ತು ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ರೆ ಅದು ನನ್ನಿಂದ. ಮೊದಲು ಕುಮಾರಸ್ವಾಮಿಗೆ ಏನು ಬೇಕೋ ಅದನ್ನ ಕೊಟ್ಟು ಅಧಿಕಾರದಲ್ಲಿ ಪಾಲು ಪಡೆದೆವು. ನಂತರ ಬಹುಮತ ಬರದೇ ಹೋದಾಗ ಶಾಸಕರಿಗೆ ಏನು ಬೇಕೋ ಅದು ಕೊಟ್ಟು, ಅವರಿಂದ ರಾಜಿನಾಮೆ ಕೊಡಿಸಿ ಚುನಾವಣೆ ಮಾಡಿ ಎಡೂರಪ್ಪನ್ನ ಮುಖ್ಯಮಂತ್ರಿ ಮಾಡಿದ್ದು ನಾವು. ಅದಕ್ಕಾಗಿ ನಾವು ಗಣಿಯಿಂದ ಬಂದ ಹಣವನ್ನು ಖರ್ಚು ಮಾಡಿದೆವು.”

“ಆ ನಂತರ ಸರಕಾರ ಬಂದಾಗ ಅಕ್ರಮ ಮಾಡಿ ಹಣ ಮಾಡಿಕಂಡ್ರಲ್ಲ ಸಾರ್. ಗಣಿ ಹಣನ ರಾಜಕಾರಣಕ್ಕೆ ಹಾಕಿದ್ರಿ. ಪವರ್ರಿಗೆ ಬಂದಾಗ ಗೋರಿ ಕಂಡ್ರಿ..”

“ಅದು ಸರಿ, ಪರಿಣಾಮಗಳನ್ನ ಅನುಭವಿಸಿದವರು ನಾವು, ಜೈಲಿಗೆ ಹೋಗಿದ್ದು ನಾನು, ನಮ್ಮ ತಾಯಿ ಸಮಾನರಾಗಿದ್ದ ಸುಷ್ಮಸ್ವರಾಜ್ ಕೂಡ ಅವುರ್ಯಾರೊ ನನಿಗೆ ಗೊತ್ತೆಯಿಲ್ಲ ಅಂದುಬುಟ್ರು. ಇನ್ನ ತಂದೆ ಸಮಾನರಾದ ಎಡೂರಪ್ಪನೂ ನಮ್ಮ ಸಹಾಯಕ್ಕೆ ಬರಲಿಲ್ಲ..”

“ಬರಲಿಲ್ಲ ಅಂದ್ರೆ ಅವರಿಗೂ ನಿಮ್ಮ ಮೇಲೆ ಸಿಟ್ಟಿತ್ತಲ್ಲ ಸಾರ್. ಅವರ ಆತ್ಮೀಯರಾಗಿದ್ದ ಶೋಭ ಕರಂದ್ಲಾಜೆಯವರ್ನ ಸಂಪುಟದಿಂದ ತಗಿಬೇಕು ಅಂದ್ರಿ, ತಗದ್ರು. ಇನ್ನ ನಿಮ್ಮನ್ನ ವಿಚಾರಿಸಿಗಳಕ್ಕೆ ಅಂತ ಕಳಿಸಿದ್ದ ಡಿ.ಸಿನ ಕೂಡಲೇ ವರ್ಗಮಾಡಿ ಅಂದಾಗ ಮಾಡಿದ್ರು. ಒಂದೇ ವಾರಕ್ಕೆ ಎಸ್ಪಿ ಡಿ.ಸಿ ವರ್ಗ ಮಾಡಿಸಿದ್ದು ನೀವೇ ಇರಬೇಕು.”

“ಯಾರು ಸರಕಾರವನ್ನ ತಂದ್ರೋ ಅವರಿಗೇ ಕಿರುಕುಳ ಕೊಡೋ ಅಧಿಕಾರಿಗಳನ್ನ ಹಾಕಿದ್ರೆ ಸುಮ್ಮನಿರಬೇಕಾಗುತ್ತ?”

“ಆಗಲ್ಲ ಸಾರ್. ನೀವು ಬಿಜೆಪಿ ಅನ್ನೋ ಪಾರ್ಟಿನ ಅರ್ಥಮಾಡಿಕೊಬೇಕಾಗಿತ್ತು. ಅವರ ಮೋಸದ ಇತಿಹಾಸ ದೊಡ್ಡದಿದೆ.”

“ನಂಬಿದವರ ಕತ್ತು ಕುಯ್ಯತರೆ ಅಂತ ಗೊತ್ತಿರಲಿಲ್ಲ ಕಂಡ್ರಿ.”

“ಕತ್ತು ಕುಯ್ಯಲ್ಲ ಸಾರ್ ಅವುರು. ನೀವೇ ಪಾಷಣ ತಿಂದು ಸಾಯಂಗೆ ಮಾಡ್ತರೆ. ಇದೇ ಎಡೂರಪ್ಪ ಜೈಲಿಗೋಗಿದ್ದಾಗ ಬೆಂಗಳೂರಿಗೆ ಅಡ್ವಾನಿ ಬಂದಿದ್ರು. ಎಡೂರಪ್ಪನ್ನ ನೋಡಕ್ಕೆ ಹೋಗಿದ್ರಾ? ಅದೇ ಅಡ್ವಾನಿ ಈಗೆಲ್ಯವುರೆ, ಬಾಬರಿ ಮಸೀದಿ ಕೆಡಹಿದ ಕಲ್ಯಾಣಸಿಂಗ ಏನಾದ್ರು, ಹುಬ್ಬಳಿ ಈದ್ಗಾ ಮೈದಾನದಲ್ಲಿ ಬಾವುಟ ಹಾರಿಸಿದ ಉಮಾಭಾರತಿ ಏನಾದ್ರು, ಶಿವಸೇನೆ ಏನಾಗಿದೆ, ಗೋವಾ ಕತೆ ಏನಾಗಿದೆ. ಕುತಂತ್ರದಿಂದ್ಲೆ ಪಾರ್ಟಿ ಕಟ್ಟಿ ಆಡಳಿತ ಮಾಡದು ಅವರ ಹುಟ್ಟುಗುಣ. ನೀವು ನಿಮ್ಮ ಬಗ್ಗೆ ಯೋಚನೆ ಮಾಡಿದ್ರೆ ಇಷ್ಟೊಂದು ಗಣಿ ಲೂಟಿ ಮಾಡೋ ಅಗತ್ಯ ಇರಲಿಲ್ಲ ಅಲ್ಲವ ಸಾರ್?”

“ಹೌದು, ಇವರಿಗೋಸ್ಕರ ಜಾಸ್ತಿ ಮಾಡಬೇಕಾಯ್ತು.”

“ಗಣಿಕಳ್ರು ಅಂತ ಹೆಸರು ಪಡದೋರು ನೀವು. ಅಧಿಕಾರ ಮಾಡ್ತ ಸರಕಾರನೆ ಕೊಳ್ಳೆ ಹೊಡಿತಾಯಿರೋರು ಅವುರು.”

“ಅದಕೆ ನಾನು ಅವರನ್ನ ಸುಮ್ಮನೆ ಬಿಡಬಾರ್ದು ಅಂತ ಕಲ್ಯಾಣ ಪ್ರಗತಿ ಪಕ್ಷ ಮಾಡಿದ್ದಿನಿ.”

“ಪ್ರಾದೇಶಿಕ ಪಕ್ಷ ಮಾಡಿದೋರ್ಯಾರು ಸಕ್ಸಸ್ ಆಗಿಲವಂತಲ್ಲಾ ಸಾರ್?”

“ಆಗಿಲ್ಲ ಅನ್ನದನ್ನ ನಾನು ಕೂಡ ಗಮನಿಸಿದ್ದೀನಿ. ಮಾನ್ಯ ಎಡೂರಪ್ಪನವರು ಮಾಡಿದ್ರು ಬಿಜೆಪಿನ ಅಧಿಕಾರದಿಂದ ದೂರ ಇಟ್ಟರು. ಆ ನಂತರ ಬಿಜೆಪಿಯವರೇ ಕರದು ಅಧಿಕಾರವನ್ನ ಕೊಟ್ರು. ನಾನು ಕೂಡ ಹಾಗೇ ಮಾಡ್ತಿನಿ ನೋಡಿ.”

“ವಿಜಯನಗರ ಸಾಮ್ರಾಜ್ಯ ಆಳಿದೋರು ತೆಲುಗರಂತೆ! ಅವರ ನಂತರ ನೀವೇನಾದ್ರು ಪವರ್ರಿಗೆ ಬಂದ್ರೆ ಮತ್ತೆ ಕಲ್ಯಾಣ ಕರ್ನಾಟಕ ಸಾಮ್ರಾಜ್ಯ ಸ್ಥಾಪನೆ ಆಗುತ್ತಲ್ಲ ಸಾರ್?”

“ಈಗಲೂ ಕಲ್ಯಾಣ ಕರ್ನಾಟಕ ತೆಲುಗರದ್ದೇ ಆಗಿದೆ ಕಂಡ್ರಿ. ಇಲ್ಲಿನ ಜಿಲ್ಲಾಪಂಚಾಯ್ತಿ ಸದಸ್ಯರು, ಗ್ರಾಮಪಂಚಾಯ್ತಿ ಸದಸ್ಯರು, ಎಮ್ಮೆಲ್ಲೆ, ಮಂತ್ರಿಗಳೆಲ್ಲಾ ತೆಲುಗು ಭಾಷಿಕರು. ಅವರಿಗೊಬ್ಬ ಲೀಡರು ಬೇಕು ಆ ಕೊರತೆಯನ್ನ ನಾನು ತುಂಬತೀನಿ.”

“ಮತ್ತೆ ಸಮಗ್ರ ಕರ್ನಾಟಕದ ಮಾತನಾಡ್ತಿರಿ?”

“ಅದು ಕೂಡ ನಿಜ. ಇಡೀ ಕರ್ನಾಟಕ ಅಭಿವೃದ್ಧಿ ನಮ್ಮ ಕನಸು.”

“ನಿಮ್ಮ ಕನಸು ನನಸಾಗದಕ್ಕೆ ಕರ್ನಾಟಕ ಕಾಯ್ತಯಿದೆ ಸಾರ್, ನೀವು ನಿಮ್ಮ ಕಾರ್ಯಕ್ಷೇತ್ರನ ಎಲ್ಲಾ ಜಿಲ್ಲೆಗೂ ವಿಸ್ತರಿಸಿಕೊಳ್ಳೊದಾದ್ರೆ ನಿಧಿ ತರದ ಗುಡ್ಡಗಳು ನಿಂತಿವೆ, ಕನಕಪುರದ ಕಡೆ ಗ್ರಾನೈಟ್ ಬೆಟ್ಟಗಳಿವೆ, ಇನ್ನ ಪಾಂಡವಪುರದ ಕಡೆ ಪುಟ್ಟರಾಜನ ಬೆಟ್ಟಗಳಿವೆ, ಚಿಕ್ಕಮಗಳೂರಿಗೆ ಬಂದ್ರೆ ಗಣಿ ಗಿರಿಗಳ ಸಾಲೇಯಿದೆ, ಶಿವಮೊಗ್ಗದ ಕಡೆ ಕುಂದಾದ್ರಿ ಕೊಡಚಾದ್ರಿ ಬೆಟ್ಟಗಳಿವೆ. ಇನ್ನ ನಿಮ್ಮಲ್ಲೇ ಕಪ್ಪತ್ತ ಗುಡ್ಡ ಸಾಲಿದೆ. ನೀವು ಯಾವುದೇ ಜಿಲ್ಲೆಗೋದ್ರು ಗಣಿಗುಡ್ಡಗಳಿವೆ ಸಾರ್. ಅವನ್ನೆಲ್ಲಾ ನೆಲಸಮ ಮಾಡಿ ಕಲ್ಯಾಣ ರಾಜ್ಯದ ಕೃಷ್ಣದೇವರಾಯನ ಕಾಲ ಮಾಡಬಹುದು. ನಿಮ್ಮ ಖಾಸಗಿ ದರ್ಬಾರಿನಲ್ಲಿರೊ ಕುರ್ಚಿ ಮೇಲೆ ತಿರುಪತಿ ತಿಮ್ಮಪ್ಪನಿಗೆ ಮಾಡಿಸಿ ಕೊಟ್ಟಂತ ಕಿರೀಟ ಧರಿಸಿ ಕೂತಗಬಹುದು. ಆಗ ಬಿಜೆಪಿ ಕಣ್ಣು ತಪ್ಪಿಸಿ ರಾಮುಲು ಬರ್ತರೆ.”

“ರಾಮುಲು ಬಂದ್ರೆ ಅವರನ್ನೆ ಮುಖ್ಯಮಂತ್ರಿ ಮಾಡ್ತಿನಿ.”

“ನೀವು?”

“ನಾನು ಉಪಮುಖ್ಯಮಂತ್ರಿ ಮತ್ತೆ ಗಣಿಕಾತೆ ತಗೊತಿನಿ.”

ಥೂತ್ತೇರಿ.


ಇದನ್ನೂ ಓದಿ: ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...