Homeಅಂಕಣಗಳುಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

- Advertisement -
- Advertisement -

ಸದ್ಯದ ಬಿಜೆಪಿ ಪಾರ್ಟಿಯೊಳಗೆ ರೌಡಿಗಳ ನೂಕುನುಗ್ಗಲು ನೋಡಿದ ಪ್ರತಾಪ ಸಿಮ್ಮ, ರೌಡಿಗಳು ಹೆದರಿ ಬಿಜೆಪಿಯೊಳಕ್ಕೆ ಬರಲುಕಾರಣ ನಮ್ಮ ಮೋದಿಯವರೇ ಎಂದರಂತಲ್ಲಾ; ಮೋದಿ ಉಗ್ರರನ್ನೇ ಅಟ್ಟಾಡಿಸಿಕೊಂಡು ಲಾಠಿ ಬೀಸುತ್ತಿದ್ದಾರೆ, ಆ ಲಾಠಿಗೆ ಸಿಕ್ಕ ಉಗ್ರರ ಕೆನ್ನೆ ಸಿಗಿದು ಹಲ್ಲು ಮುರಿದಿವೆ, ಕಣ್ಣು ಗೋಲಿಯಂತೆ ಆಕಾಶಕ್ಕೆ ಹಾರಿವೆ, ಕಿವಿ ತೂತುಬಿದ್ದು ಕೋಳ ತೊಡಿಸುವಂತಾಗಿವೆ; ಇದನ್ನ ನೋಡಿದ ಕೇಳಿದ ಊರ ರೌಡಿಗಳು, ಸದ್ಯಕ್ಕೆ ನಮ್ಮ ಅಂಗಾಂಗಗಳು ಆರೋಗ್ಯವಾಗಿರಬೇಕಾದರೆ, ಇದ್ದಂತೆಯೇ ಇರಬೇಕಾದರೆ ಮೋದಿ ಪಾರ್ಟಿಗೆ ಹೋಗಿ ಜೈಕಾರ ಹಾಕುವುದು ಬಿಟ್ಟು ಬೇರೆ ದಾರಿಯೇ ಕಾಣುತ್ತಿಲ್ಲ ಆದ್ದರಿಂದ ಬಿಜೆಪಿ ದಾರಿಯೇ ನಮಗೆ ಸೂಕ್ತವೆಂದು ತೀರ್ಮಾನಿಸಿದ್ದಾರೆ ಎಂದರಂತಲ್ಲಾ. ಇದಕ್ಕೆ ಒಂದು ಕಾರಣ ಸೇರಿಸುವುದಾದರೇ ಮೋದಿ ಸರಕಾರದ ಸಮಯದಲ್ಲಿ ಸಾವಿರಾರು ಮುಸ್ಲಿಮರನ್ನು ಸದೆಬಡಿದವರು ದೊಡ್ಡದೊಡ್ಡ ಹುದ್ದೆಗೆ ಏರಿದರು; ಇನ್ನು ಅವರ ಪಾರ್ಟಿಯ ರಾಜಕಾರಣಿಯೊಬ್ಬ ಕೇಸೊಂದರಲ್ಲಿ ಗಡಿಪಾರಾಗಿ ಕೊನೆಗೆ ಗೃಹಮಂತ್ರಿಯಾಗಿ ತನಗಾಗದವರ ಪಟ್ಟಿ ತಯಾರಿಸುತ್ತ ಕುಳಿತಿದ್ದಾರಂತಲ್ಲ. ಇಂತಹ ಜನ ಮುಂದೆ ಏನಾದರೂ ಮಾಡಬಲ್ಲರಾದ್ದರಿಂದ, ಆಡಳಿತ ನಡೆಸುತ್ತಿರುವ ಪಾರ್ಟಿಗೆ ಹೋಗಿ ಅಡಗಿಕೊಳ್ಳುವುದು ಸೂಕ್ತ ಎಂದು ಆಲೋಚಿಸುತ್ತಿರುವಾಗ ಫೈಟರ್ ರವಿ ಎಂಬಾತ ನಾಗಮಂಗಲದ ಕಡೆ ಹೊರಟನಂತಲ್ಲಾ, ಥೂತ್ತೇರಿ.

*****

ಈ ನಾಗಮಂಗಲಕ್ಕೂ ರಾಜಕಾರಣ ಕುಖ್ಯಾತಿಗೂ ಒಂದು ಇತಿಹಾಸವಿದೆ. ಈ ಹಿಂದೆ ಇಲ್ಲಿ ಶಾಸಕ, ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಹೆಚ್.ಟಿ ಕೃಷ್ಣಪ್ಪನವರು, ಹಿಂದೆ ಬಂದರೆ ಒದೆಯದ ಮುಂದೆ ಬಂದರೆ ಹಾಯದ ಗೋವಿನ ರೀತಿಯ ವ್ಯಕ್ತಿ; ಇದನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿದ್ದ ಮತ್ತು ವಕೀಲರಾಗಿದ್ದ ಇವರು ರಾಜಕಾರಣಕ್ಕೆ ಬಂದಿದ್ದು ಕೊಲೆಗಾರ ಅಪರಾಧಿಗಳನ್ನು ಬಿಡಿಸಿದ ಕಾರಣಕ್ಕೆ. ಗುಳುಕಾಯಿ ಹೊಸಳ್ಳಿ ಜನ ಶಾನುಭೋಗರನ್ನೇ ಕೊಲೆ ಮಾಡಿ ಜೈಲಿಗೆ ಹೋದರು. ಅವರನ್ನೆಲ್ಲಾ ನಿರಪರಾಧಿಗಳೆಂದು ತಾಂತ್ರಿಕ ಕಾರಣಗಳ ಮುಖಾಂತರ ಖುಲಾಸೆಗೊಳಿಸಿದರು. ಕೊಲೆಗಾರರನ್ನು ಬಿಡಿಸಿದ ವ್ಯಕ್ತಿ ನಮ್ಮನ್ನ ರಕ್ಷಿಸುತ್ತಾನೆಂದು ಭಾವಿಸಿದ ಜನ ಚುನಾವಣೆಯಲ್ಲಿ ಗೆಲ್ಲಿಸಿ ಶಾಸಕನನ್ನಾಗಿ ಮಾಡಿದರು. ಇವರ ನಂತರ ಬಂದ ಶಿವರಾಮೇಗೌಡ, ಗಂಗಾಧರಮೂರ್ತಿಯ ಕೊಲೆ ಕೇಸಿನಲ್ಲಿ ಸಿಲುಕಿ ಅಂತೂ ಆರೋಪಮುಕ್ತರಾಗಿ ಬಚಾವಾದರು. ಇವರ ನಂತರ ಬಂದ ಚಲುವರಾಯಸ್ವಾಮಿ ಬಳಿಯಿದ್ದ ಕೆಲ ರೌಡಿಗಳು ನಿಷ್ಠಾವಂತ ನಾಯಿಗಳಂತೆ ಬಾಲ ಅಲ್ಲಾಡಿಸಿದರೆ ಹೊರತು ಯಾರ ಮೇಲೂ ದಾಳಿ ಮಾಡಲಿಲ್ಲ. ಇವರ ನಂತರ ಬಂದ ಸುರೇಶ್‌ಗೌಡ ಹೆಚ್‌ಎಎಲ್‌ನ ವಸತಿ ನಿರ್ಮಾಣದ ಸೊಸೈಟಿ ಹಣದ ಅವ್ಯವಹಾರದ ಜೊತೆಗೆ ರೌಡಿಗಳಿಂದಲೂ ಹಣ ಪಡೆದು ಅದನ್ನು ಹಿಂದಿರುಗಿಸದೇ ಇರುವುದರಿಂದ ಆತನನ್ನ ಸೋಲಿಸಲೆಂದೇ ಫೈಟರ್ ರವಿ ಎಂಬ ರೌಡಿ ಬಂದು ಇಡೀ ತಾಲೂಕಿನ ತುಂಬ ಕಟೌಟ್ ಹಾಕಿದ್ದನಂತಲ್ಲಾ. ಏನು ಮಾಡಿದರೂ ರೌಡಿಯಂತೆ ಕಾಣದೆ ಮಠದ ಮೃತ ಸ್ವಾಮಿಯಂತೆ ಕಾಣುತ್ತಿದ್ದಾನೆ ಎಂದು ಜನ ನಗುತ್ತಿದ್ದಾರಲ್ಲಾ, ಥೂತ್ತೇರಿ.

*****

ಹಿಂದೆ ಹೆಚ್ಚು ಯುದ್ಧಗಳಾಗುತ್ತಿದ್ದವು; ದೈಹಿಕವಾಗಿ ಭಲಾಢ್ಯವಾಗಿದ್ದ ಮತ್ತು ತೋಳು ತಿಮಿರಿನ ಜನ ಸೈನ್ಯಕ್ಕೆ ಸೇರಿ ಹತರಾಗುತ್ತಿದ್ದರು. ಅವರ ಹೆಂಡತಿಯರು ಅನಿವಾರ್ಯವಾಗಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದರು. ಇವರೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಶೋಷಿತ ಸಮುದಾಯಗಳ ಜನ. ಸ್ವಾತಂತ್ರ್ಯಾನಂತರ ರಾಜಗುರುಗಳು ನಿರ್ನಾಮವಾಗಿ ಸೈನಿಕರು ಇಲ್ಲವಾದ ಕಾರಣ ಆ ಮನಸ್ಥಿತಿಯವರು ಊರುಗಳಲ್ಲೇ ರೌಡಿಗಳಾದರು; ಅವರು ಆ ತರಹ ಆಗಲು ಒಂದು ಸಣ್ಣ ಕಾರಣ ಸಾಕು, ಮುಂದೆ ಪೊಲೀಸರೇ ಬೆಳೆಸಿ ಭೂಗತಲೋಕ ಸೇರಿಸುತ್ತಾರೆ. ಈ ಭೂಗತ ಲೋಕದ ಕೃತ್ಯಗಳು ಭಯಾನಕ. ರೌಡಿಗಳ ಆಯಸ್ಸು ಮುಗಿದು ಸತ್ತ ಉದಾಹರಣೆ ವಿರಳ. ಭೂಗತ ಲೋಕದ ರಾಜ-ಡಾನ್ ದೈತ್ಯ ದೇಹಿಯಾಗಿರುತ್ತಾನೆ. ಜಯರಾಜ್, ಬಲರಾಮ್, ಫಯಾಜ್, ಕೊತ್ವಾಲ, ಶಿವರಾಂ, ಸುನಿಲ್ ಇತ್ಯಾದಿ ವ್ಯಕ್ತಿಗಳ ಆಕಾರ ನೋಡಿದರೆ ನಿಮಗೆ ತಿಳಿಯುತ್ತದೆ. ಆದರೆ ದೇಹಾಕೃತಿಯಲ್ಲ ದುರ್ಬಲವಾಗಿದ್ದ ಮುತ್ತಪ್ಪ ರೈ ಬುದ್ಧಿವಂತಿಕೆ ಉಪಯೋಗಿಸಿ ಭೂಗತಲೋಕಕ್ಕೆ ಪಿಸ್ತೂಲು ತಂದ ವ್ಯಕ್ತಿ. ಅದನ್ನ ಆತನೇ ಉಪಯೋಗಿಸಬೇಕಿಲ್ಲ; ಕಾಸುಕೊಟ್ಟು ನಿರ್ದೇಶನ ನೀಡಿದರೆ ಸಾಕು; ಯಾವ ಹುಡುಗನಾದರೂ ಆ ಕೆಲಸ ಮಾಡಿ ತಲೆಮರೆಸಿಕೊಳ್ಳಬಲ್ಲ. ಇಂತಹ ಕೆಲಸವನ್ನ ದುಬಾಯಿಯಲ್ಲಿ ಕುಳಿತು ಮಾಡಿ ಯಾವ ಕೇಸುಗಳನ್ನು ಕಡಿಮೆ ಅಂಟಿಸಿಕೊಂಡು ಬದುಕಿದವನು ಈ ಮುತ್ತಪ್ಪ ರೈ. ಅಂತಹ ರೈಗೂ ನಾಗಮಂಗಲದ ಕಡೆ ಚಿಲ್ಲರೆ ರಾಜಕಾರಣಿಯೊಬ್ಬ ಕೋಟ್ಯಂತರ ರೂಪಾಯಿಗಳ ನಾಮ ಎಳೆದು, ನಾಳೆ ಕೊಡುತ್ತೇನೆ ನಾಡಿದ್ದು ಗ್ಯಾರಂಟಿ ಎಂದು ಹೇಳುತ್ತಿರುವಾಗಲೇ ಮುತ್ತಪ್ಪ ರೈ ದೇಹ ತ್ಯಜಿಸಿದ. ಅಂತಹ ಮುತ್ತಪ್ಪನಿಗೆ ಮಣ್ಣು ತಿನ್ನಿಸಿದವರು ಈ ನಾಗಮಂಗಲದ ಮಣ್ಣಿನವನು ಅನ್ನುವುದಾದರೆ ಇನ್ನ ಬಿಜೆಪಿ ರೌಡಿಗಳು ಇಲ್ಲಿ ಉದ್ಧಾರವಾಗುವುದುಂಟೆ, ಥೂತ್ತೇರಿ.

*****

ಬೆಂಗಳೂರಿಂದ ಎರಡೂವರೆ ಗಂಟೆ ಪ್ರಯಾಣದಷ್ಟು ದೂರವಿರುವ ನಾಗಮಂಗಲ ಕೆಲ ರೌಡಿಗಳಿಗೆ ಸುರಕ್ಷಿತ ಜಾಗ. ದರೋಡೆ ಕೇಸೊಂದರಿಂದ ಪರಾರಿಯಾಗಿ ಎಲ್ಲಿ ಅಡಗಿಕೊಳ್ಳಬೇಕೆಂದು ರೌಡಿಗಳೆಲ್ಲಾ ಚರ್ಚಿಸುತ್ತಿರುವಾಗ ಇವರಿಗೆ ಕಾಫಿ, ಸಿಗರೇಟು ತಂದುಕೊಡುತ್ತಿದ್ದ ಹುಡುಗನೊಬ್ಬ ,”ಸಾರ್ ನಾಗಮಂಗಲದತ್ರ ಇರೋ ನಮ್ಮೂರಲ್ಲಿರಿ, ಅಲ್ಲಿಗೆ ಯಾರೂ ಬರಕ್ಕಾಗಲ್ಲ” ಎಂದ. ಮರು ಮಾತನಾಡದ ರೌಡಿಗಳು ಆ ಮುಗ್ದ ಹುಡುಗನ ಹಿಂದೆ ಬಂದು ಅವನ ಮನೆಯೊಳಗೆ ಇಸ್ಪಿಟ್ ಆಡುತ್ತ, ಮಾಂಸ ಮದ್ಯದ ಅಮಲಲ್ಲಿ ತೇಲಾಡುತ್ತಿರುವಾಗ ಹುಡುಗನ ಅಪ್ಪ “ಮಗ ಯಾರ್ಲ ಇವುರು” ಅಂದ. “ಇವುರ್‍ಯೆಲ್ಲ ಬೆಂಗಳೂರು ರೌಡಿಗಳು ಕಣಪ್ಪ, ಯಾವ ಕ್ಯಲಸ ಮಾಡಕ್ಕೂ ಹೇಸದಿಲ್ಲ. ಅದೇನೊ ಮಾಡಿ ಇಲ್ಲಿ ಬಂದವುರೆ ಯಾರಿಗೂ ಹೇಳಬ್ಯಾಡ” ಅಂದ. ಕೂಡಲೇ ಆ ಅಪ್ಪ ರೌಡಿಯೊಬ್ಬನ ಜುಬ್ಬ ಹಾಕಿಕೊಂಡ; ಅದಾಗಲೇ ರೌಡಿಗಳೇ ಕೊಟ್ಟ ವಿಸ್ಕಿ ಕುಡಿದಿದ್ದರಿಂದ, ಊರಮುಂದಿನ ಕಟ್ಟೆಮೇಲೆ ಕುಳಿತು “ಅದ್ಯಾವನನ್ನ ಮಗ ಬತ್ತಿರೋ ಬರ್ಲಿ, ಏನಂತ ತಿಳಕಂಡಿದ್ದಿರಿ ಈ ನನ್ನ? ಬಂದು ಮುಟ್ಟಿ ನೋಡಿ ನಿಮ್ಮ ಕತೆ ಏನಾಯ್ತದೆ ಅಂತ ಗೊತ್ತಾಯ್ತದೆ. ಯಂಥಾ ಜನ ತಂದು ನನ್ನ ಮನಿಲಿ ಮಡಿಕಂಡಿದ್ದಿನಿ ಗೊತ್ತೆ? ಕೊಲೆ ಮಾಡಿ ಜಯಿಸಿಗಂಡೋರು ನನ್ನ ಮನೇಲಿ ಇಸ್ಪೀಟ್ ಆಡ್ತಾ ಅವುರೆ ಗೊತ್ತೆ” ಎಂದು ಅವಾಜ್ ಹಾಕಿದ. ಆತನ ಎದುರು ಜನ ಸೇರತೊಡಗಿದರು. ಇತ್ತ ರೌಡಿಗಳು ಹಿತ್ತಲ ಬಾಗಿಲಿಂದ ಎದ್ದುಬಿದ್ದು ಓಡತೊಡಗಿದರು! ಎಂದಿನಂತೆ ಊರ ಜನಕ್ಕೆ ಆ ಕೊಚ್ಚಿಕೊಂಡ ವ್ಯಕ್ತಿ ಮತ್ತೊಂದು ಸುಳ್ಳು ಹೇಳಿದಂತಾಯ್ತು. ಈಗ ಅಂತಹ ಸ್ಥಿತಿಯಿಲ್ಲ. ಫೈಟರ್ ರವಿ ಕಾರಣಕ್ಕೆ ಬೆಂಗಳೂರು ಕೆಲ ಪುಡಿರೌಡಿಗಳು ಬಂದು ಇಲ್ಲಿನ ತೋಟ ತುಡಿಕೆಯಲ್ಲಿ ಬೇಯುತ್ತಿರುವ ಬಾಡಿಗಾಗಿ ಕಾಯಬಹುದು. ಅಂತೂ ಬಿಜೆಪಿ ಪಾಪದಕೊಡ ರೌಡಿಗಳಿಂದ ತುಂಬತೊಡಗಿದೆಯಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಅನಂತನಾಗ್ ಮೋದಿ ಮೆಚ್ಚಿದ್ದರಲ್ಲಿ ಅಚ್ಚರಿಯೇನಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...