Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-2)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-2)

- Advertisement -
- Advertisement -

ಪ್ರಿನ್ಸ್, ಜನರಲ್ ಎಪಾಂಚಿನ್ ಮನೆಯ ಮುಖ್ಯದ್ವಾರದ ಕರೆಗಂಟೆಯನ್ನ ಬಾರಿಸಿದಾಗ ಮಧ್ಯಾಹ್ನ ಹನ್ನೊಂದು ಗಂಟೆಯಾಗಿತ್ತು. ಜನರಲ್ ಆ ಮನೆಯ ಮೊದಲನೆಯ ಮಹಡಿಯಲ್ಲಿ ವಾಸವಾಗಿದ್ದ; ಅದೊಂದು ಅವನ ಪದವಿಗೆ ತಕ್ಕಂತಹ ಸಾಧಾರಣವಾದ ವಸತಿ. ಸಮವಸ್ತ್ರವನ್ನ ಧರಿಸಿದ ಸೇವಕನೊಬ್ಬ ಬಾಗಿಲು ತೆರೆದ. ಈ ವ್ಯಕ್ತಿಗೆ ಪ್ರಿನ್ಸ್ ಸುದೀರ್ಘವಾದ ವಿವರಣೆಯನ್ನ ನೀಡಲೇಬೇಕಾದಂತಹ ಪರಿಸ್ಥಿತಿ ಉಂಟಾಯಿತು. ಸೇವಕ ಅವನನ್ನು ಮತ್ತು ಅವನ ಕೈಲಿದ್ದ ಗಂಟನ್ನು ಬಹಳ ಅನುಮಾನಾಸ್ಪದವಾಗಿ ನೋಡತೊಡಗಿದ. ತಾನು ನಿಜವಾಗಲೂ ಪ್ರಿನ್ಸ್ ಮೂಯಿಶ್ಕಿನ್ ಅನ್ನುವುದರ ಬಗ್ಗೆ ಮೇಲಿಂದಮೇಲೆ ಕೊಟ್ಟ ಭರವಸೆಗಳ ನಂತರ ಕೊನೆಗೂ, ಮತ್ತು ಖಂಡಿತವಾಗಿಯೂ ಜನರಲ್‌ನನ್ನು ವ್ಯವಹಾರಿಕ ಕಾರಣಗಳಿಗೋಸ್ಕರ ನೋಡಲೇಬೇಕೆಂದು ಹೇಳಿದಾಗ, ದಿಗ್ಭ್ರಮೆಗೊಂಡ ಸೇವಕ ಅವನನ್ನು ಸಣ್ಣದಾದ ನಿರೀಕ್ಷಣಾ ಕೊಠಡಿಗೆ ಸೇರಿದಂತಿದ್ದ ಜನರಲ್‌ನ ಓದುವ ಕೊಠಡಿಯ ಪಕ್ಕದಲ್ಲಿದ್ದ ಕೊಠಡಿಯನ್ನು ತೋರಿಸಿ ಅವನನ್ನು ಇನ್ನೊಬ್ಬ ಸೇವಕನ ಸುಪರ್ದಿಗೆ ಬಿಟ್ಟುಹೋದ. ಇಲ್ಲಿದ್ದ ಸೇವಕನ ಕರ್ತವ್ಯವೇನೆಂದರೆ ದಿನದ ಇಡೀ ಬೆಳಗಿನ ಸಮಯವೆಲ್ಲಾ ಈ ಕೊಠಡಿಯಲ್ಲಿಯೇ ಇದ್ದು, ಭೇಟಿ ಮಾಡಲು ಬಂದವರ ಬಗ್ಗೆ ಜನರಲ್‌ಗೆ ತಿಳಿಸುವುದು. ಈ ಎರಡನೇ ವ್ಯಕ್ತಿ, ಒಂದು ಕೋಟನ್ನು ಧರಿಸಿದ್ದ, ಮತ್ತು ಸುಮಾರು ನಲವತ್ತು ವರ್ಷ ವಯಸ್ಸಿನವನಾಗಿದ್ದ; ಇವನು ಜನರಲ್‌ನ ವಿಶೇಷ ಓದುವ ಕೊಠಡಿಯಲ್ಲಿನ ಸೇವಕನಾಗಿದ್ದ, ಮತ್ತು ತನ್ನ ವಿಶೇಷವಾದ ಮಹತ್ವದ ಬಗ್ಗೆ ಸದಾ ಅರಿವುಳ್ಳವನಂತೆ ಇರುತ್ತಿದ್ದ.

“ಪಕ್ಕದ ಕೋಣೆಯಲ್ಲಿ ದಯವಿಟ್ಟು ಕಾಯುತ್ತಿರು ಮತ್ತು ನಿನ್ನ ಆ ಗಂಟನ್ನು ಇಲ್ಲಿಯೇ ಇಡು” ಅಂತ ಬಾಗಿಲು ಕಾಯುವ ವ್ಯಕ್ತಿ ತನ್ನದೇ ಆದ ಆರಾಮ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾ ಹೇಳಿದ. ಅವನ ಪಕ್ಕದಲ್ಲಿಯೇ ಪ್ರಿನ್ಸ್ ಇನ್ನೊಂದು ಕುರ್ಚಿಯಲ್ಲಿ ತನ್ನ ಮಂಡಿಗಳ ಮೇಲೆ ಗಂಟನ್ನು ಇಟ್ಟುಕೊಂಡು ಆಸೀನನಾಗುತ್ತಿದ್ದದನ್ನು ಅವನು ತೀವ್ರವಾದ ಆಶ್ಚರ್ಯದಿಂದ ನೋಡಿದ.

“ನಿನಗೆ ಅಭ್ಯಂತರವಿಲ್ಲದಿದ್ದರೆ, ನಾನು ಇಲ್ಲಿಯೇ ನಿನ್ನ ಜೊತೆ ಕುಳಿತುಕೊಳ್ಳುತ್ತೇನೆ” ಎಂದು ಪ್ರಿನ್ಸ್ ಹೇಳಿದ; “ನಾನು ಅಲ್ಲಿಗಿಂತ ಇಲ್ಲೇ ಕುಳಿತುಕೊಳ್ಳಲು ಇಷ್ಟಪಡುತ್ತೇನೆ.”

“ಓ, ನೀನಿಲ್ಲಿರುವ ಹಾಗಿಲ್ಲ. ನೀನೊಬ್ಬ ಸಂದರ್ಶಕ. ಹೇಳಬೇಕೆಂದರೆ ಅತಿಥಿ. ನೀನು ಜನರಲ್‌ನನ್ನೇ ಖುದ್ದಾಗಿ ನೋಡಲು ಬಂದಿರುವೆಯಾ?”

ಕಣ್ಣಿಗೆ ರಾಚುವಂತಿದ್ದ ಆ ರೀತಿಯ ಕೊಳಕು ಮನುಷ್ಯ ಜನರಲ್‌ನನ್ನು ಭೇಟಿ ಮಾಡಲು ಬಂದಿರುವುದನ್ನ ಆ ಮನುಷ್ಯನಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಮತ್ತು ಇನ್ನೊಮ್ಮೆ ಪ್ರಶ್ನಿಸಲು ನಿರ್ಧರಿಸಿ ಕೇಳಿದ.

“ಹೌದು ಅವರ ಜೊತೆ ನನ್ನ ವ್ಯವಹಾರವೊಂದಿದೆ” ಪ್ರಿನ್ಸ್ ಶುರುಮಾಡಿದ.

“ನಿನ್ನ ವ್ಯವಹಾರ ಏನಿರಬಹುದು ಎಂದು ನಾನು ನಿನ್ನನ್ನು ಕೇಳುವುದಿಲ್ಲ; ನಿನ್ನ ವಿಷಯದ ಬಗ್ಗೆ ಜನರಲ್‌ಗೆ ತಿಳಿಸುವುದು ಮಾತ್ರ ನನ್ನ ಕೆಲಸ; ಕಾರ್ಯದರ್ಶಿ ಬರುವವರೆಗೂ ನಾನದನ್ನ ಮಾಡುವುದಕ್ಕಾಗುವುದಿಲ್ಲ.”

ಆ ಮನುಷ್ಯನಲ್ಲಿನ ಇವನ ಬಗ್ಗೆಯ ಅನುಮಾನ ಜಾಸ್ತಿಯಾಗುತ್ತಾ ಹೋಯಿತು ಅನ್ನಿಸುತ್ತದೆ. ಪ್ರತಿದಿನ ಅಲ್ಲಿಗೆ ಬರುವ ಸಂದರ್ಶಕರಿಗಿಂತ ಈ ಪ್ರಿನ್ಸ್ ವಿಭಿನ್ನವಾಗಿದ್ದ. ಜನರಲ್ ವ್ಯವಹಾರ ಸಂಬಂಧಿತವಾಗಿ ವಿವಿಧ ರೀತಿಯ ಸಂದರ್ಶಕರನ್ನ ಭೇಟಿಯಾಗುತ್ತಿದ್ದರೂ ಕೂಡ, ಈ ಸೇವಕ ಸದರಿ ಸಂದರ್ಶಕನ ಬಗ್ಗೆ ಮಾತ್ರ ಬಹಳಷ್ಟು ಅನುಮಾನಗಳನ್ನ ಹೊಂದಿದ್ದ. ಈ ಸಂದರ್ಭದಲ್ಲಿ ಕಾರ್ಯದರ್ಶಿಯು ಒಬ್ಬ ಮಧ್ಯವರ್ತಿಯಾಗಿರುವುದು ಅಗತ್ಯ ಎಂದು ಅವನು ತಿಳಿದಿದ್ದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

“ನಿಜವಾಗಲೂ ನೀನು ವಿದೇಶದಿಂದ ಬರುತ್ತಿದ್ದೀಯ?”

ಅವನು ಕೊನೆಗೂ ಸ್ವಲ್ಪ ಗೊಂದಲಕ್ಕೊಳಗಾದವನಂತೆ ವಿಚಾರಿಸಿಯೇಬಿಟ್ಟ. ಅವನು ತನ್ನ ವಾಕ್ಯವನ್ನ “ನೀನು ನಿಜವಾಗಲೂ ಪ್ರಿನ್ಸ್ ಮೂಯಿಶ್ಕಿನ್ ಅಲ್ಲ ಅಲ್ಲವಾ?” ಎಂಬ ಅರ್ಥ ಬರುವ ರೀತಿಯಲ್ಲಿ ಶುರುಮಾಡಿದ.

“ಹೌದು, ನೇರವಾಗಿ ರೈಲಿನಿಂದ ಬರುತ್ತಿದ್ದೇನೆ! ನೀನು ’ಖಂಡಿತವಾಗಿಯೂ ಪ್ರಿನ್ಸ್ ಮೂಯಿಶ್ಕಿನ್ ಅಲ್ಲ ಅಲ್ಲವಾ?’ ಅಂತ ಕೇಳುವುದು ಈಗಷ್ಟೇ ನಿನ್ನ ಉದ್ದೇಶವಾಗಿತ್ತಲ್ಲವಾ? ಆದರೆ ಆ ರೀತಿ ಕೇಳಲು ನಿನ್ನ ಸಭ್ಯತೆ ನಿನಗೆ ಅಡ್ಡ ಬಂದಿತಲ್ಲವ?”

“ಹಾ!” ಆಶ್ಚರ್ಯಗೊಂಡ ಸೇವಕ ಗುನುಗುಟ್ಟಿದ.

“ನಾನು ನಿನ್ನನ್ನು ಮೋಸಗೊಳಿಸುತ್ತಿಲ್ಲ ಎಂದು ಭರವಸೆ ಕೊಡುತ್ತೇನೆ; ನನ್ನ ಉಡುಗೆ ಈ ರೀತಿ ಇರುವುದಕ್ಕೆ ಮತ್ತು ಒಂದು ಗಂಟನ್ನು ಜೊತೆಯಲ್ಲಿ ತಂದಿರುವುದರ ಬಗ್ಗೆ, ನೀನೇನೂ ನನಗೋಸ್ಕರ ಉತ್ತರಿಸಬೇಕಾಗಿಲ್ಲ. ಆಶ್ಚರ್ಯಪಡಬೇಕಾದ್ದೂ ಇಲ್ಲ. ಸತ್ಯ ಸಂಗತಿ ಏನೆಂದರೆ ನನ್ನ ಈಗಿನ ಪರಿಸ್ಥಿತಿ ಅಷ್ಟೊಂದು ಉತ್ತಮವಾಗೇನೂ ಇಲ್ಲ.”

“ಅಯ್ಯೊ! ಇಲ್ಲ, ನನಗೆ ಅದರ ಬಗ್ಗೆ ಹೆದರಿಕೆಯೇನೂ ಇಲ್ಲ. ನೋಡು; ನಾನೀಗ ನಿನ್ನ ಉಪಸ್ಥಿತಿಯನ್ನ ಜನರಲ್‌ಗೆ ತಿಳಿಸಬೇಕು, ವಿಷಯ ಅಷ್ಟೇ. ಕಾರ್ಯದರ್ಶಿ ಇನ್ನೇನು ಸೀದ ಬಂದೇಬಿಡುತ್ತಾನೆ, ನೀನು ಇಲ್ಲಿಗೆ ಬಂದಿರುವುದು, ಈ ಪ್ರಶ್ನೆ ಕೇಳಿದ್ದಕ್ಕೆ ನನ್ನನ್ನು ಕ್ಷಮಿಸು, ಅಂದರೆ ನೀನು ಇಲ್ಲಿಗೆ ಬಂದಿರುವುದು ಬಿಕ್ಷೆ ಬೇಡುವುದಕ್ಕಾಗಿ ಅಲ್ಲದೇ ಇದ್ದರೆ, ಅಥವ ನೀನು ಅದೇ ಕಾರಣಕ್ಕಾಗಿ ಬಂದಿದ್ದರೆ ತಿಳಿಸಿಬಿಡು.”

“ಓ, ಖಂಡಿತ ಇಲ್ಲ ಪ್ರೀತಿಪಾತ್ರನೆ, ಈ ವಿಷಯದಲ್ಲಿ ನೀನು ನಿರಾಳವಾಗಿರಬಹುದು. ನಾನು ಬಂದಿರುವುದು ಬೇರೆಯದೇ ಆದ ವಿಷಯಕ್ಕೆ.”

“ನಿನ್ನನ್ನು ಆ ರೀತಿ ಕೇಳಿದ್ದಕ್ಕೆ ನೀನು ಕ್ಷಮಿಸಬೇಕು, ನಿನಗೆ ಗೊತ್ತಲ್ಲ, ನಿನ್ನ ಹೊರನೋಟ ಆ ರೀತಿ ಕೇಳುವಂತೆ ಪ್ರೇರೇಪಿಸಿತು. ಆದರೆ ಕಾರ್ಯದರ್ಶಿಗೋಸ್ಕರ ಸ್ವಲ್ಪ ಕಾಯುತ್ತಿರು; ಜನರಲ್ ಈಗ ಕಾರ್ಯನಿರತರಾಗಿದ್ದಾರೆ, ಆದರೆ ಖಂಡಿತವಾಗಿಯೂ ಕಾರ್ಯದರ್ಶಿ ಸದ್ಯದಲ್ಲೇ ಆಚೆಗೆ ಬರುತ್ತಾನೆ.”

“ಓ.. ನೋಡು ನಾನಿನ್ನೂ ಸ್ವಲ್ಪಕಾಲ ಕಾಯಬೇಕಾದರೆ, ನಿನಗೆ ಬೇಸರವಾಗದಿದ್ದಲ್ಲಿ ಇಲ್ಲಿ ಧೂಮಪಾನ ಮಾಡಲು ಯಾವುದಾದರೂ ಸ್ಥಳವನ್ನ ತೋರಿಸುತ್ತೀಯ? ನನ್ನದೇ ಆದ ಪೈಪ್ ಮತ್ತು ಹೊಗೆಸೊಪ್ಪು ನನ್ನ ಬಳಿ ಇದೆ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ ಅಧ್ಯಾಯ-1; ಭಾಗ-2

“ಧೂಮಪಾನ?” ಆ ಮನುಷ್ಯ ಅವಾಕ್ಕಾಗಿ ತಿರಸ್ಕಾರದಿಂದ ಮತ್ತು ಆಶ್ಚರ್ಯಚಕಿತನಾಗಿ ಕೇಳಿದ, ತನ್ನ ಕಿವಿಯನ್ನೇ ತಾನು ನಂಬದವನಂತೆ, ಪ್ರಿನ್ಸ್‌ನ ಕಡೆಗೆ ಪಿಳಿಪಿಳಿ ನೋಡುತ್ತಾ. “ಇಲ್ಲ ಸರ್, ನೀವಿಲ್ಲಿ ಧೂಮಪಾನ ಮಾಡುವ ಹಾಗಿಲ್ಲ, ನೀವು ಯಾವುದೇ ಸಂಕೋಚವಿಲ್ಲದೆ ಇಂತಹ ಆಲೋಚನೆ ಮಾಡಿದ್ದರ ಬಗ್ಗೆಯೇ ನನಗೆ ಆಶ್ಚರ್ಯವಾಗುತ್ತಿದೆ, ನನ್ನ ಪ್ರಕಾರ ಇದೊಂದು ಸಲ್ಲದ ಆಲೋಚನೆ.”

“ಓ, ನಾನು ಹೇಳಿದ್ದು ಈ ಕೋಣೆಯಲ್ಲೇ ಎಂದಲ್ಲ! ನನಗೂ ಗೊತ್ತು ಇಲ್ಲಿ ಧೂಮಪಾನ ಮಾಡುವ ಹಾಗಿಲ್ಲ ಅಂತ, ನಾನು ಇನ್ನ್ಯಾವುದಾದರೊ ಕೋಣೆಗೆ ಧೂಮಪಾನ ಮಾಡಲು ಹೋಗುತ್ತೇನೆ, ನೀನು ಎಲ್ಲಿ ತೋರಿಸುತ್ತೀಯೊ ಅಲ್ಲಿಗೆ. ನಾನು ಬಹಳವಾಗಿ ಈ ಧೂಮಪಾನದ ಚಟ ಬೆಳೆಸಿಕೊಂಡಿದ್ದೇನೆ, ಮೂರು ಗಂಟೆಗಳಿಂದ ನಾನು ಒಂದು ಪಫ್‌ಅನ್ನೂ ಎಳೆದಿಲ್ಲ; ಏನೇ ಆದರೂ ನಿನ್ನಿಷ್ಟದಂತೆ ಆಗಲಿ.”

“ಈ ರೀತಿಯ ವ್ಯಕ್ತಿಯ ಬಗ್ಗೆ ನಾನು ಅದು ಹೇಗೆ ಜನರಲ್‌ಗೆ ತಿಳಿಸಲಿ?” ಸೇವಕ ಗೊಣಗಿಕೊಂಡ. “ಮೊದಲನೆಯದಾಗಿ ನೀನು ಈ ಕೋಣೆಯಲ್ಲಿರುವುದೇ ಅಸಮಂಜಸವಾದದ್ದು; ನೀನು ನಿರೀಕ್ಷಣಾ ಕೋಣೆಯಲ್ಲಿಯೇ ಇರಬೇಕಾಗಿತ್ತು. ಕಾರಣು ನೀನೂ ಒಂದು ಬಗೆಯ ಸಂದರ್ಶಕನೇ, ನಿಜವಾಗಲೂ ಹೇಳಬೇಕೆಂದರೆ ಒಬ್ಬ ಅತಿಥಿ. ಈಗ ಇದಕ್ಕೋಸ್ಕರವೇ ನಾನು ಉತ್ತರ ಕೊಡಬೇಕಾಗುತ್ತದೆ. ನೀನಿಲ್ಲೇ ಟಿಕಾಣಿ ಹೂಡಲು ಬಂದಿಲ್ಲ ತಾನೆ?” ಪುನಃ ಪ್ರಿನ್ಸ್‌ನ ಗಂಟಿನ ಕಡೆಗೆ ವಿಚಲಿತನಾದವನಂತೆ ನೋಡುತ್ತಾ ಹೇಳಿದ.

“ಇಲ್ಲ, ಆ ರೀತಿಯೇನೂ ಇಲ್ಲ. ಅವರು ನನ್ನನ್ನು ಇಲ್ಲೇ ಇರಲು ಆಹ್ವಾನಿಸಿದರೂ ಕೂಡ ನಾನಿಲ್ಲಿ ವಾಸಿಸುವುದು ಅಸಂಭವ. ನಾನು ಬಂದಿರುವುದು ಸುಮ್ಮನೇ ಅವರ ಪರಿಚಯವನ್ನ ಮಾಡಿಕೊಳ್ಳುವುದಕ್ಕೋಸ್ಕರ ಅಷ್ಟೇ, ಮತ್ತು ಇನ್ನ್ಯಾವುದಕ್ಕೂ ಅಲ್ಲ.”

“ಪರಿಚಯ ಮಾಡಿಕೊಳ್ಳುವುದಕ್ಕಾ?” ಆ ಮನುಷ್ಯ ಬೆರಗುಗೊಂಡು ಮತ್ತು ಇಮ್ಮಡಿಯಾದ ಅನುಮಾನದಿಂದ ಕೇಳಿದ. “ಹಾಗಾದರೆ ಜನರಲ್ ಜೊತೆ ವ್ಯವಹಾರವಿದೆ ಎಂದು ಯಾಕೆ ಹೇಳಿದೆ?”

“ಅಂದರೆ, ಒಂದು ಸಣ್ಣ ವ್ಯವಹಾರ ಅಷ್ಟೆ. ಸ್ವಲ್ಪ ಸಲಹೆಗಾಗಿ ಜನರಲ್‌ನನ್ನು ಕೇಳುತ್ತೇನೆ; ಆದರೆ ನನ್ನ ಮುಖ್ಯ ಉದ್ದೇಶ ಕೇವಲ ನನ್ನನ್ನು ಪರಿಚಯಿಸಿಕೊಳ್ಳುವುದು ಮಾತ್ರ, ಕಾರಣ ನಾನು ಪ್ರಿನ್ಸ್ ಮೂಯಿಶ್ಕಿನ್, ಮತ್ತು ಮೇಡಮ್ ಎಪಾಂಚಿನ್ ಆ ಮೂಯಿಶ್ಕಿನ್ ಕುಟುಂಬದ ಉಳಿದಿರುವ ಒಂದೇ ಕುಡಿ, ಅವಳು ಮತ್ತು ನನ್ನನ್ನು ಬಿಟ್ಟರೆ ಮೂಯಿಶ್ಕಿನ್‌ಗಳಲ್ಲಿ ಇನ್ನ್ಯಾರೂ ಉಳಿದಿಲ್ಲ.”

“ಏನು, ನೀನು ಸಂಬಂಧಿಕ ಹಾಗಾದರೆ, ಹೌದ?” ಸೇವಕ ಕೇಳಿದ. ಅವನೆಷ್ಟು ದಿಗ್ಭ್ರಮೆಗೊಂಡ ಎಂದರೆ ಅವನೀಗ ಆದಷ್ಟು ಎಚ್ಚರವಹಿಸಲು ಶುರುಮಾಡಿದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-3)

“ಹಾಗಂತಲೇ ಹೇಳುವುದಕ್ಕಾಗುವುದಿಲ್ಲ. ಆದರೂ ಎಳೆದು ನೋಡಿದರೆ ನಾನೂ ಕೂಡ ದೂರದ ಸಂಬಂಧಿ. ಎಷ್ಟು ದೂರದ ಸಂಬಂಧಿ ಎಂದರೆ ಯಾರೂ ಗಮನಕ್ಕೆ ತೆಗೆದುಕೊಳ್ಳಲಾರದಷ್ಟು. ನಾನು ಒಮ್ಮೆ ನಿನ್ನ ಯಜಮಾನಿಗೆ ವಿದೇಶದಿಂದ ಕಾಗದ ಬರೆದಿದ್ದೆ, ಆದರೆ ಅವರು ಉತ್ತರಿಸಲಿಲ್ಲ. ಏನೇ ಆದರೂ, ನಾನು ಈ ಊರಿಗೆ ಬಂದ ತಕ್ಷಣ ಅವರ ಪರಿಚಯ ಮಾಡಿಕೊಳ್ಳುವುದು ಸಮಂಜಸ ಎಂದು ಪರಿಗಣಿಸಿದೆ. ನಾನಿದನ್ನೆಲ್ಲಾ ನಿನಗೆ ಹೇಳುತ್ತಿರುವುದು ನಿನ್ನ ಮನಸ್ಸಿನಲ್ಲಿರುವ ಗೊಂದಲವನ್ನ ನಿವಾರಿಸುವುದಕ್ಕೋಸ್ಕರ, ಯಾಕೆಂದರೆ ನೀನು ನನ್ನ ಕಾರಣಕ್ಕೋಸ್ಕರ ಗೊಂದಲಗೊಂಡಂತೆ ಕಾಣುತ್ತದೆ. ಈಗ ನೀನು ಮಾಡಬೇಕಾದದ್ದಿಷ್ಟೆ. ಮೂಯಿಶ್ಕಿನ್ ಅನ್ನುವವನು ಬಂದಿದ್ದಾನೆ ಅಂತ ಜನರಲ್‌ಗೆ ನಿವೇದಿಸಿದರಷ್ಟೆ ಸಾಕು; ನನ್ನ ಭೇಟಿಯ ಉದ್ದೇಶ ಸಾಕಷ್ಟು ನೇರವಾದದ್ದು. ಅವರು ಬರಮಾಡಿಕೊಂಡರೆ ತುಂಬಾ ಸಂತೋಷಕರವಾಗಿರುತ್ತದೆ, ಬರಮಾಡಿಕೊಳ್ಳದೇ ಇದ್ದರೆ ಅದೂ ಕೂಡ ಅಷ್ಟೇ ಸಂತೋಷಕರದ್ದಾಗಿರುತ್ತದೆ. ಆದರೆ ಅವರು ಖಂಡಿತವಾಗಿಯೂ ನನ್ನನ್ನು ಬರಮಾಡಿಕೊಳ್ಳುತ್ತಾರೆ ಅನ್ನುವುದು ನನ್ನ ನಂಬಿಕೆ: ಮೇಡಮ್ ಎಪಾಂಚಿನ್‌ಗೆ ಖಂಡಿತವಾಗಿಯೂ ಅವರ ಕುಟುಂಬದ ಉಳಿದಿರುವ ಒಬ್ಬನೇ ಸದಸ್ಯನನ್ನು ನೋಡುವ ಕುತೂಹಲ ಇದ್ದೇ ಇರುತ್ತದೆ, ಅವಳ ಮ್ಯೂಶಿಕಿನ್ ವಂಶಾವಳಿಯ ಬಗ್ಗೆ ಅವಳು ಹೆಮ್ಮೆಪಡುತ್ತಾಳೆ, ನಾನಿದನ್ನು ಅನೇಕ ಬಾರಿ ಕೇಳಿ ತಿಳಿದುಕೊಂಡಿದ್ದೇನೆ.”

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....