Homeಅಂಕಣಗಳುಅನಂತನಾಗ್ ಮೋದಿ ಮೆಚ್ಚಿದ್ದರಲ್ಲಿ ಅಚ್ಚರಿಯೇನಿಲ್ಲ!

ಅನಂತನಾಗ್ ಮೋದಿ ಮೆಚ್ಚಿದ್ದರಲ್ಲಿ ಅಚ್ಚರಿಯೇನಿಲ್ಲ!

- Advertisement -
- Advertisement -

ನಮ್ಮ ಸಿನಿಮಾರಂಗದ ಒಂದೆರೆಡು ಸುದ್ದಿಗಳು ಶಾನೆ ಸ್ವಾರಸ್ಯವಾಗಿವೆಯಂತಲ್ಲಾ! ಗೋಳಿನ ದನಿಯಿಂದ ಹಾಸ್ಯನಟನಾಗಿ ಮೇಲೆ ಬಂದ ಕೋಮಲ್, ಅದು ಬಿಟ್ಟು ಹೀರೋ ಆದಾಗ ಜನ ತಿರಸ್ಕರಿಸಿದರು. ತನ್ನನ್ನು ಜನ ಹೇಗೆ ನೋಡಲು ಬಯಸುತ್ತಾರೆ ಎಂಬುದನ್ನು ಯಾವುದೇ ನಟ ಮೊದಲು ಗ್ರಹಿಸಿಕೊಳ್ಳಬೇಕು. ಅದಾಗದಿದ್ದರೆ, ಜೋತಿಷ್ಯದ ಮೊರೆ ಹೋಗುತ್ತಾರೆ; ಆದರೆ ಕೋಮಲ್ ಜ್ಯೋತಿಷ್ಯಕ್ಕಾಗಿ ದೂರ ಹೋಗದೆ ತನ್ನ ಅಣ್ಣನನ್ನೆ ಆಶ್ರಯಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಈಗ ಜ್ಯೋತಿಷಿಯಂತೆ ಜಾತಕ ಹಿಡಿದು ಗ್ರಹಗತಿಗಳ ಸ್ಥಾನ ಗುರುತಿಸಿ ನಿಮಗೆ ಯಾವ ಗ್ರಹದ ಕಾಟವಿದೆ ಎಂದೆಲ್ಲಾ ಕರಾರುವಕ್ಕಾಗಿ ಹೇಳುತ್ತಾರಂತೆ; ಅಲ್ಲಿಗೆ ಈ ಮಾಜಿ ಹಾಸ್ಯನಟ ದಶರಸ ನಟನಾಗಿರುವ ಸುದ್ದಿ ಕೋಮಲ್‌ರಿಂದ ಹೊರಬಿದ್ದಿದೆ. ನಿನಗೆ ಕೇತು ದೆಸೆಯಿಂದ ಕೇಡಾಗಿದೆ ಎಂದು ತಮ್ಮನಿಗೆ ಹೇಳಿ ಆತ ಐದು ವರ್ಷ ಮೂಲೆಯಲ್ಲಿ ಕೂರುವಂತೆ ಮಾಡಿದ ಈ ಆಧುನಿಕ ಜ್ಯೋತಿಷಿ ಆ ಅವಧಿಯಲ್ಲಿ ತಾನೇ ಮೆರೆಯಲು ಯೋಚಿಸಿದ್ದರಾ? ದಾಯಾದಿ ಮತ್ಸರ ಹೀಗೆ ಎಂದು ಹೇಳಲು ಬರುವುದಿಲ್ಲ. ಕೇತುವಿನಿಂದ ಕೇಡಾಗುತ್ತದೆಂದು ಐದು ವರ್ಷ ಮನೆಯಲ್ಲಿರಲು ತನ್ನ ತಮ್ಮನಿಗೆ ಹೇಳಿದ ಜಗ್ಗೇಶ ತನ್ನ ಜಾತಕ ಕುಂಡಲಿ ಹರಡಿಕೊಂಡು ಗ್ರಹಗತಿಗಳ ಸ್ಥಾನಗಳನ್ನು ಗ್ರಹಿಸಿ ತನ್ನ ಸಿನಿಮಾ ತೋತಾಪುರಿ ತೋಪೆದ್ದೋಗುವ ಸತ್ಯವನ್ನು ಗ್ರಹಿಸಬಹುದಿತಲ್ಲಾ. ಆದ್ದರಿಂದ ಧಿಡೀರನೆ ಉದ್ಭವಿಸಿರುವ ಈ ಉದಯೋನ್ಮುಖ ಬಿಜೆಪಿ ಜ್ಯೋತಿಷಿಯಿಂದ ಹುಷಾರಾಗಿರಿ ಎಂದು ಕಾಂಗೈಗಳು ಪ್ರಚಾರ ಮಾಡುತ್ತಿವೆಯಂತಲ್ಲಾ, ಥೂತ್ತೇರಿ.

******

ಮಾತನಾಡಿಸಿದ ಕೂಡಲೇ ಸೋಮಾರಿ ಮತ್ತು ಜವಬ್ದಾರಿಯಿಲ್ಲದ ಸ್ವಾರ್ಥಿಯಂತೆ ಕಾಣುವ ಅನಂತನಾಗ್ ಹೀರೋ ಆಗಿ ನಲವತ್ತಾರು ವರ್ಷ ತುಂಬಿರುವ ಈ ಸಂದರ್ಭದಲ್ಲಿ ನಾನು ಮೋದಿಯ ಕಟ್ಟಾ ಅಭಿಮಾನಿ ಎಂದುಬಿಟ್ಟಿದ್ದಾರಲ್ಲಾ. ಇಂತಹ ಮಾತು ಇಂತವರ ಬಾಯಲ್ಲಿ ಸುಮ್ಮಸುಮ್ಮನೆ ಬರುವುದಿಲ್ಲ. ಯಾಕೆಂದರೆ ಇಂತವರ ಬಾಯನ್ನೇ ನೋಡುತ್ತಿರುವ ಆರೆಸ್ಸೆಸ್ಸಿಗರು ತಮ್ಮ ಅಜೆಂಡಾಗಳ ರಿಜಿಸ್ಟರಿನಲ್ಲಿ ತಮ್ಮ ಪರ ಮಾತನಾಡಿದವರ ಹೆಸರನ್ನು ದಾಖಲಿಸಿಕೊಂಡು ಅವರನ್ನು ಸ್ಥಾನಮಾನ ಬಿರುದು ಬಾವಲಿಗಳ ಪಟ್ಟಿಗಳಿಗೆ ಸೇರಿಸಿಕೊಳ್ಳುತ್ತವೆ. 1985ರಲ್ಲಿ ಇದೇ ಅನಂತನಾಗ್ ರಾಮಕೃಷ್ಣ ಹೆಗಡೆ ಹೇಳಿದರೆ ನಾನು ಹಾಳು ಬಾವಿಗೂ ಬೀಳಬಲ್ಲೆ ಎಂದುಬಿಟ್ಟಿದ್ದರು. ಆ ಕೂಡಲೇ ಹೆಗಡೆ ಹಾಳು ಬಾವಿ ಮುಚ್ಚಿ ನಜೀರ್ ಸಾಹೇಬರು ಬೋರ್‌ವೆಲ್ ಮುಖಾಂತರ ಜನರಿಗೆ ನೀರುಕೊಡುವ ವ್ಯವಸ್ಥೆ ಮಾಡಿದ್ದು ಈಗ ಇತಿಹಾಸ. ಆದರೆ ಹೆಗಡೆಯವರು ಎಂತಹ ಕಿಲಾಡಿಯೆಂದರೆ ಅನಂತನಾಗ್‌ಗೆ ತಾನೇ ಸಹಾಯ ಮಾಡುವುದರ ಬದಲು ಪಟೇಲರಿಗೆ ಹೇಳಿ ಮಂತ್ರಿ ಮಾಡಿಸಿದರು. ಪಟೇಲರ ಯಣ್ಣೆಪಾರ್ಟಿಗೆ ಒಬ್ಬ ಗುಂಡಿನ ಗೆಳೆಯ ಸಿಕ್ಕಂತಾಯ್ತು. ನಗರಾಭಿವೃದ್ಧಿ ಸಚಿವನಾಗಿ ಈತ ಮಾಡಿದ ಸಾಧನೆ ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಕೆಲವು ದಿನ ಖಾತೆಯೇ ಇಲ್ಲದೆ ಮಂತ್ರಿಯಾಗಿದ್ದ ದಾಖಲೆ ಮಾತ್ರ ಈತನ ಹೆಸರಿನಲ್ಲಿ ಹಾಗೇಯೇ ಇದೆ. ಅನಂತನಾಗ್ ಎಂಬ ನಟನ ಬಾಯಿಂದ ಮೋದಿ ಹೊಗಳಿಕೆ ಮಾತು ಸುಮ್ಮಸುಮ್ಮನೆ ಬರುವುದಿಲ್ಲ. ಮೋದಿ ಸರಕಾರದಿಂದ ಅದ್ಯಾವ ಸ್ಥಾನಮಾನ ಪ್ರಶಸ್ತಿ ಸಿಗುತ್ತದೋ ನೋಡಬೇಕೆಂಬುದು ಆತನನ್ನು ಕಂಡರಾಗದವರ ಅಭಿಪ್ರಾಯವಾಗಿದೆಯಲ್ಲಾ, ಥೂತ್ತೇರಿ.

*******

ಈ ದೇಶದಲ್ಲಿ ಮೀಸಲಾತಿ ವಿರೋಧಿಗಳೆಲ್ಲಾ ಹಠಾತ್ತನೆ ಮೀಸಲಾತಿಗಾಗಿ ಹೋರಾಟ ಶುರು ಮಾಡಿಕೊಂಡಿದ್ದಾರಲ್ಲಾ. ಇದೊಂದು ರೀತಿ ಬಸವಣ್ಣನವರ ವಚನದಂತೆ ’ಏರಿಯೇ ಕೆರೆನೀರು ಕುಡಿದಂತೆ, ಬೇಲಿಯೇ ಹೊಲಮೇಯ್ದು ಬಿಸಾಡಿದಂತಲ್ಲಾ’. ಹಿಂದಣದನ್ನು ನೆನಪಿಸಿಕೊಳ್ಳುವುದಾದರೆ, ಮಂಡಲ ವರದಿ ವಿರುದ್ದ ತಿರುಗಿ ಬಿದ್ದ ಬಿಜೆಪಿಯವರು ಕಂಡವರ ಮಕ್ಕಳಿಗೆ ಬೆಂಕಿ ಹಚ್ಚಿದರು. ಉತ್ತರ ಭಾರತದಲ್ಲಿ ಒಕ್ಕಲಿಗರನ್ನು ಮೀಸಲಾತಿಯ ಮಂಡಲ ಕಮೀಷನ್ ಒಳಗೆ ಸೇರಿಸಿದ್ದನ್ನು ಅರಿಯದ ಒಕ್ಕಲಿಗರು ಇಲ್ಲಿ ಮಂಡಲದ ವಿರುದ್ಧ ಪ್ರತಿಭಟಿಸಿದರು. ಮಂಡಲದೊಳಗೆ ನೀವೂ ಇದ್ದೀರಿ ಎಂದು ಯಾರೂ ಹೇಳಲಿಲ್ಲ. ಏಕೆಂದರೆ ನಮ್ಮನ್ನಾಳುವ ಜನ ಮಂಡಲ ಕಮಿಷನ್ ವರದಿಯನ್ನೇ ಓದಿಕೊಂಡಿರಲಿಲ್ಲ. ಈಗ ಈ ಸಮುದಾಯದ ಪ್ರತಿನಿಧಿ ರಾಜಕಾರಣಿಗಳು ಮೀಸಲಾತಿ ಗಲಭೆ ಎಬ್ಬಿಸಲಿದ್ದಾರಲ್ಲಾ. ಹೊಸ ತಲೆಮಾರು ಇದಕ್ಕೆ ಹುಚ್ಚೆದ್ದು ಕುಣಿಯಬಹುದು. ಈಗ ಮೀಸಲು ಗಲಭೆ ಬೇಕಿರುವುದು ಮುಂದುವರಿದ ರಾಜಕಾರಣಿಗಳಿಗೆ. ಉದ್ಯೋಗಗಳೇ ಇಲ್ಲದಿದ್ದರೂ ಎಲ್ಲರೂ ಮೀಸಲು ಕೇಳುವಂತೆ ಮಾಡಿ ಮೀಸಲನ್ನೆ ರದ್ದು ಮಾಡುವ ಸಂಚಿಗಾಗಿ ಬಿಜೆಪಿ ಕಾಯುತ್ತಿದೆಯಂತಲ್ಲಾ, ಥೂತ್ತೇರಿ.

******

ಕರ್ನಾಟಕ ಈವರೆಗೆ ಕಂಡರಿಯದ ಧಾರಾಳತನದ ಮುಖ್ಯಮಂತ್ರಿಗಳು ಏನೂ ಕೇಳಿದರೂ ಕೊಡುವಂತಹ ಕೊಡುಗೈ ದಾನಿಗಳಾಗಿದ್ದಾರಂತಲ್ಲಾ. ಮೀಸಲಾತಿ ವಿಷಯ ಬಂದರೆ ಎಷ್ಟು ಪರಸೆಂಟ್ ಬೇಕು ಹೇಳಿ ಎಂದು ಅವರೇ ಕೇಳುತ್ತಾರೆ. ಅಡಿಕೆ ತೋಟಕ್ಕೆ ಎಲೆಚುಕ್ಕೆ ರೋಗಬಂದು ಯಕ್ಕುಟ್ಟಿ ಹೋಗಿದೆ ಸ್ವಾಮಿ ಎಂದರೆ ಅದರ ಕೊತೆಗೆ ಹವಮಾನ ವೈಪರೀತ್ಯದಿಂದ ಉಂಟಾದ ನಷ್ಟವನ್ನು ಸೇರಿಸಿ ಕೇಳಿ ಎನ್ನುತ್ತಾರೆ. ಇನ್ನ ಶರಾವತಿ ಡ್ಯಾಮಿನ ಹಿನ್ನೀರಿಗೆ ಸಿಕ್ಕಿ ದಿಕ್ಕಾಪಾಲಾದ ಜನರು ಭೂಮಿ ಹಕ್ಕಿನ ಪತ್ರ ಕೇಳಿದರೆ, ಡಿಸೆಂಬರ್ ಒಳಗೆ ಹಿನ್ನೀರಿನಲ್ಲೇ ಹಕ್ಕುಪತ್ರ ಕೊಡುತ್ತೇನೆ ಎನ್ನುತ್ತಾರೆ, ಜೊತೆಗೆ ನೂರಾರು ಕೋಟಿ ರೂಗಳ ಕಾಮಗಾರಿ ಕಲ್ಲುಗಳನ್ನು ಸತ್ತವರ ಗೋರಿಕಲ್ಲುಗಳಂತೆ ನೆಡುತ್ತ ಹೋಗುತ್ತಿದ್ದಾರೆ. ಆದರೆ ಕಬ್ಬಿನ ಬೆಂಬಲ ಬೆಲೆಗಾಗಿ ಹೋರಾಟ ಮಾಡುತ್ತಿರುವ ರೈತರ ಕಡೆ ತಿರುಗಿ ನೋಡಿಲ್ಲ. ಅಕಸ್ಮಾತ್ ಅಲ್ಲಿಗೆ ಹೋದದ್ದಾದರೆ ರೈತರು ಹಿಡಿದು ಉರುಳುಸೇವೆ ಮಾಡಿಸುತ್ತಾರೆಂಬ ಇಲ್ಲದ ಮಾಹಿತಿಯನ್ನ ತಾವೇ ಊಹಿಸಿಕೊಂಡು ಸದ್ಯಕ್ಕೆ ಪರಿಹಾರ ಕಾಣದ ಅಡಿಕೆ ಚುಕ್ಕೆರೋಗ ಇರುವ ಜಾಗ ಹುಡುಕುತ್ತ ಹೊರಟರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆಯನ್ನು ಸರಿಯಾಗಿ ನೋಡಿದ್ದೀರ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...