Homeಅಂಕಣಗಳುಮೆರಿಟ್, ಮೀಸಲಾತಿ ಮತ್ತು ವೈದ್ಯಕೀಯ ಶಿಕ್ಷಣ ವಾಸ್ತವಗಳೇನು?

ಮೆರಿಟ್, ಮೀಸಲಾತಿ ಮತ್ತು ವೈದ್ಯಕೀಯ ಶಿಕ್ಷಣ ವಾಸ್ತವಗಳೇನು?

- Advertisement -
- Advertisement -

ಜರ್ವೇಶನ್‍ನಿಂದ ಡಾಕ್ಟರಾದೋರು ಎಂಥಾ ಚಿಕಿತ್ಸೆ ಕೊಡ್ತಾರೆ?’ ‘35% ಮಾಕ್ರ್ಸ್ ತಗೊಂಡು ಡಾಕ್ಟರ್ ಆದೋನು ಅವನೆಂಥಾ ಡಾಕ್ಟರ್?’ ಎಂಬ ಮಾತುಗಳು ಈಗ ಹಾದಿಬೀದಿಯಲ್ಲಿ ಕೇಳಿಬರುತ್ತಿವೆ. ಇಂಥಾ ವಾದವನ್ನು ಮುಂದಿಡುವ `ಮೆರಿಟ್‍ಪಂಥೀಯ’ ಜನ ತಮ್ಮ ವಾದಕ್ಕೆ ಯಾವ ಸೂಕ್ತ ಆಧಾರಗಳನ್ನೂ ಕೊಡದಿದ್ದರೂ, ತಮ್ಮ ಒಣತರ್ಕಗಳನ್ನು ಮಾತ್ರ ತೇಲಿ ಬಿಡುತ್ತಿದ್ದಾರೆ. ಕಾರ್ಪೊರೇಟ್ ಮೀಡಿಯಾಗಳು ಮಾತ್ರ ಇಂಥ ಪರಮಸತ್ಯವನ್ನು ಪದೇಪದೇ ಬಿತ್ತರಿಸುವುದರಿಂದ ಈ ಬಗ್ಗೆ ಸಹಜವಾಗಿ ಸಮಾಜದಲ್ಲಿ ಒಂದಷ್ಟು ಗೊಂದಲ ಏರ್ಪಟ್ಟಿದೆ.
ಕಟುಸತ್ಯಗಳನ್ನು ಸಾರಿ ಹೇಳುತ್ತಿರುವ ವಾಸ್ತವಗಳನ್ನು ನೋಡೋಣ. ಮುಖ್ಯವಾಹಿನಿ ಪತ್ರಿಕೆಯಾದ ಟೈಮ್ಸ್ ಆಫ್ ಇಂಡಿಯಾ ಕಳೆದ ವರ್ಷ ಮೆಡಿಕಲ್‍ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ನೀಟ್ ಪರೀಕ್ಷೆಯ ಅಂಕಗಳ ಮಾಹಿತಿ ಪಡೆದು ವಿಶ್ಲೇಷಣೆಗೆ ಒಳಪಡಿಸಿ ವರದಿಯೊಂದನ್ನು ತಯಾರಿಸಿದೆ. ಆ ವರದಿ ಪ್ರಕಾರ ದೇಶಾದ್ಯಂತ 409 ಕಾಲೇಜುಗಳಲ್ಲಿ ಒಟ್ಟು 56,000 ವಿದ್ಯಾರ್ಥಿಗಳು ಮೆಡಿಕಲ್‍ಗೆ ದಾಖಲಾಗಿದ್ದಾರೆ. ಅದರಲ್ಲಿ 39,000 ವಿದ್ಯಾರ್ಥಿಗಳು ಸರಕಾರಿ ಕೋಟಾದಡಿಯಲ್ಲೂ, 17,000 ಜನ ವಿದ್ಯಾರ್ಥಿಗಳು ಖಾಸಗಿ ಕೋಟಾದಲ್ಲಿ ದಾಖಲಾತಿ ಪಡೆದಿದ್ದಾರೆ. ಸರಕಾರಿ ಕೋಟಾದಲ್ಲಿ(ಅಂದರೆ ಮೀಸಲಾತಿಯನ್ನೂ ಒಳಗೊಂಡಿದ್ದು) ಪ್ರವೇಶ ಪಡೆದ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಕ್ಕೂ, ಹೆಚ್ಚು ಶುಲ್ಕ ಪಾವತಿಸಿ ಆಯ್ಕೆಯಾದ ಶ್ರೀಮಂತ ಮತ್ತು ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಗುಣಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಸಂಬಂಧಿತ ನೀಟ್ ಪರೀಕ್ಷೆಯಲ್ಲಿ ಗರಿಷ್ಟ ಒಟ್ಟು 720 ಅಂಕಗಳಲ್ಲಿ ಸರಕಾರಿ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳು ಸರಾಸರಿ 448 ಅಂಕಗಳನ್ನು(62%) ಪಡೆದಿದ್ದರೆ, ಮ್ಯಾನೇಜ್‍ಮೆಂಟ್ ಕೋಟಾದ ವಿದ್ಯಾರ್ಥಿಗಳು ಸರಾಸರಿ 306(42%) ಅಂಕಗಳನ್ನು ಪಡೆದಿದ್ದಾರೆ. ಹಣಬಲದಿಂದ ಮೆಡಿಕಲ್ ಸೀಟು ಪಡೆದವರು ಸರ್ಕಾರಿ ಕೋಟಾದಡಿ ಆಯ್ಕೆಯಾದವರಿಗಿಂತ 20% ಕಡಿಮೆ ಅಂಕ ಗಳಿಸಿದ್ದಾರೆ ಎಂಬ ಸತ್ಯ ಆಶ್ಚರ್ಯವಾದರೂ ಅದೇ ಕಹಿಸತ್ಯ. ಇನ್ನು ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ಮತ್ತಷ್ಟು ಹೀನಾಯ. ನೀಟ್ ಪರೀಕ್ಷೆಯಲ್ಲಿ ಎನ್‍ಆರ್‍ಐಗಳು ಗಳಿಸಿರುವ ಸರಾಸರಿ ಕೇವಲ 221 ಅಂಕಗಳು(29%).
ಒಟ್ಟು ಸರ್ಕಾರಿ ಕೋಟಾದ ವಿವರಣೆಗಳಿಗೆ ಹೋದರೆ ಮತ್ತಷ್ಟು ಕಣ್ಣು ತೆರೆಸುವ ಮಾಹಿತಿ ಸಿಗುತ್ತದೆ. ಉದಾಹರಣೆಗೆ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳ ಸರಾಸರಿ ಅಂಕ 398(53%). ಮ್ಯಾನೇಜ್‍ಮೆಂಟ್ ಕೋಟಾದಡಿ ಬಂದ ವಿದ್ಯಾರ್ಥಿಗಳ ಸರಾಸರಿ 306 ಅಂಕ(42%). ಅಂದರೆ ಮೀಸಲಾತಿಯಲ್ಲಿ ಬಂದ ಪರಿಶಿಷ್ಟ ವಿದ್ಯಾರ್ಥಿಗಳು ಹಣಬಲದ ವಿದ್ಯಾರ್ಥಿಗಳಿಗಿಂತಲೂ 11% ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ಪಂಜಾಬ್‍ನ ನೀಟ್ ಪರೀಕ್ಷೆಯ ವಿಶ್ಲೇಷಣೆಯೂ ಇದೇ ಕತೆಯನ್ನು ಹೇಳುತ್ತಿದೆ. ಇಲ್ಲಿ ಸರ್ಕಾರಿ ಕೋಟಾದ ವಿದ್ಯಾರ್ಥಿಗಳು ಗಳಿಸಿದ್ದ ಅಂಕ ಗರಿಷ್ಟ 86% ರಿಂದ ಕನಿಷ್ಟ 75%. ಆದರೆ ಖಾಸಗಿ ಕೋಟಾದಡಿಯ ವಿದ್ಯಾರ್ಥಿಗಳ ಅಂಕ 73% ರಿಂದ 65% ಮಾತ್ರ. ಪ್ರೈವೇಟ್ ಯೂನಿವರ್ಸಿಟಿಗಳೆಂದು ಕರೆದುಕೊಳ್ಳುವ ಸಂಸ್ಥೆಗಳ ಸ್ಥಿತಿ ಇನ್ನೂ ಅಧ್ವಾನ. ಕನಿಷ್ಟ 41% ಅಂಕ ಗಳಿಸಿದವರಿಗೂ ಇಲ್ಲಿ ಮೆಡಿಕಲ್ ಸೀಟ್ ಲಭ್ಯವಾಗಿದೆ. ಈ ಅಂಕಿ ಅಂಶಗಳು ಏನನ್ನು ಹೇಳುತ್ತಿವೆ? ಅನಾದಿಯಿಂದಲೂ `ಮೆರಿಟ್‍ಪಂಥೀಯ’ ವಾಕ್ಪಟುಗಳು ಹೇಳುತ್ತಿರುವುದು ಅಪ್ಪಟ ಸುಳ್ಳು ಎಂಬುದನ್ನು ಮೇಲಿನ ಅಂಕಿಅಂಶಗಳು ಅನುಮಾನಕ್ಕೆಡೆಯಿಲ್ಲದಂತೆ ಸಾರಿ ಹೇಳುತ್ತಿವೆ.
ದೇಶಿಯ ಮತ್ತು ಅಂತರರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಗಳು ದೇಶದುದ್ದಕ್ಕೂ ಆರೋಗ್ಯ ಸೇವೆಯ ಹೆಸರಲ್ಲಿ ಹಲವು ಖಾಸಗಿ ಕಾಲೇಜು ಮತ್ತು ಆಸ್ಪತ್ರೆಗಳನ್ನು ತೆರೆದು ಕೂತಿವೆ. ಇದರ ಪರಿಣಾಮವೆಂಬಂತೆ 1974ರಲ್ಲಿ ಶೇ.18ರಷ್ಟಿದ್ದ ಖಾಸಗಿ ಆಸ್ಪತ್ರೆಗಳು 2014 ಹೊತ್ತಿಗೆ ಶೇ.75ರಷ್ಟು ಹೆಚ್ಚಾಗಿವೆ. 1974ರಲ್ಲಿ ಶೇ.21ರಷ್ಟು ಹಾಸಿಗೆಗಳನ್ನು ಹೊಂದಿದ್ದ ಖಾಸಗಿ ಆಸ್ಪತ್ರೆಗಳು 2014 ರಷ್ಟೊತ್ತಿಗೆ ಶೇ.54ಕ್ಕೇರಿಸಿಕೊಂಡಿವೆ. ಶೇ.75ರಷ್ಟು ಔಷಧಾಲಯಗಳು, ಶೇ.80 ರಷ್ಟು ಅರ್ಹ ವೈದ್ಯರನ್ನು ಖಾಸಗಿ ಆಸ್ಪತ್ರೆಗಳು ಹೊಂದಿವೆ. ಶೇ.60ರಷ್ಟು ಒಳರೋಗಿಗಳು, ಶೇ.80ರಷ್ಟು ಹೊರರೋಗಿಗಳು ಖಾಸಗಿ ಆಸ್ಪತ್ರೆಯ ಸಂಪರ್ಕದಲ್ಲಿದ್ದಾರೆ. ಇಲ್ಲಿಂದ ಮುಂದೆ ಇದು ದೊಡ್ಡ ಬಂಡವಾಳ ಹೂಡುವ ಕ್ಷೇತ್ರವಾಗಿ ಮಾರ್ಪಟ್ಟು ಲಾಭ ಮತ್ತು ಅತಿಲಾಭದ ಲೆಕ್ಕಾಚಾರದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ತೊಡಗಿವೆ. ಇದಕ್ಕೆ ಬೇಕಾದ ಸಂಪನ್ಮೂಲವನ್ನು ಸೃಷ್ಟಿಸುವ ನಿಟ್ಟಿನಲ್ಲಿ ವೈದ್ಯಕೀಯ ವಿದ್ಯಾಸಂಸ್ಥೆಗಳು ರೂಪುಗೊಂಡವು. ಅದರಲ್ಲೂ ಸರ್ಕಾರಿ ವೈದ್ಯಕೀಯ ವಿದ್ಯಾಸಂಸ್ಥೆಗಳನ್ನು ದೂರತಳ್ಳಿ ಖಾಸಗಿ ಸಂಸ್ಥೆಗಳು ಬೇರುಬಿಡತೊಡಗಿದವು. ಇದರ ಫಲವೆಂಬಂತೆ 1950ರಲ್ಲಿ ಶೇ.4ರಷ್ಟಿದ್ದ ಖಾಸಗಿ ವೈದ್ಯಕೀಯ ವಿದ್ಯಾಸಂಸ್ಥೆಗಳು 2014ರಲ್ಲಿ ಶೇ.54ರಷ್ಟು ಹೆಚ್ಚಾದವು. ಈ ಖಾಸಗಿ ಮೆಡಿಕಲ್ ಕಾಲೇಜುಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ತಮ್ಮ ಶುಲ್ಕವನ್ನು ಹತ್ತಾರು ಪಟ್ಟು ಹೆಚ್ಚು ಮಾಡುತ್ತಲೇ ಬಂದಿವೆ. ಇದರಿಂದ ‘ವೈದ್ಯಸೇವೆ’ ಎಂಬ ಪದವನ್ನು ಅಚ್ಚುಕಟ್ಟಾಗಿ ದೂರಸರಿಸಿ ವೈದ್ಯಲೋಕವನ್ನು ಹಣ ಹೂಡಿ ಹಣ ಗಳಿಸುವ ದಂಧೆಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿವೆ.
ಮೀಸಲಾತಿಯಿಂದ ಪ್ರತಿಭೆಗೆ ಧಕ್ಕೆ ಒದಗುತ್ತಿದೆ ಎನ್ನುವವರು ಇದಕ್ಕೆ ಏನು ಹೇಳುತ್ತಿದ್ದಾರೆ. ಸರಾಸರಿ ಅಂಕ ಗಳಿಕೆಯಲ್ಲೂ ಕಡಿಮೆ ಇರುವ ಅನೇಕ ವಿದ್ಯಾರ್ಥಿಗಳು ಖಾಸಗಿ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದು ವೈದ್ಯಕೀಯ ಪದವಿಯನ್ನು ಪಡೆಯುತ್ತಿದ್ದಾರೆ. ಹಾಗಿದ್ದರೆ ಇವರೆಲ್ಲ ಪ್ರತಿಭಾವಂತರೆ? ಅರ್ಹತೆಯನ್ನು ಅಂಕಗಳಲ್ಲಿ ಅಳೆದು ‘ಮೀಸಲಾತಿಯಿಂದ ಕಡಿಮೆ ಅಂಕಗಳಿಸಿ ಬಂದವರು ವೈದ್ಯ ವೃತ್ತಿಯನ್ನು ಸರಿಯಾಗಿ ನಿಭಾಯಿಸಬಲ್ಲರೆ’ ಎನ್ನುವವರೇನೂ ಇಲ್ಲಿ ಕಡಿಮೆಯಿಲ್ಲ. ಕಡಿಮೆ ಅಂಕ ಗಳಿಸಿ ದುಡ್ಡಿನಿಂದ ಸೀಟು ಖರೀದಿಸುತ್ತಿರುವ ಹಣವಂತ ಪಡೆಗೆ ಅರ್ಹತೆಯ ಮಾನದಂಡವನ್ನು ಇವರೆಲ್ಲ ಹಿಡಿಯಬಲ್ಲರೆ? ಇವರ ಯಾವ ಮನಸ್ಸುಗಳೂ ಇದರ ಬಗ್ಗೆ ಚಕಾರ ಎತ್ತುವುದಿಲ್ಲ. ಹೋಗಲಿ, ಇಂತಹ ವಿದ್ಯಾರ್ಥಿಗಳಿಂದ ಎಂತಹ ಸಾರ್ವಜನಿಕ ಸೇವೆಯನ್ನು ನಿರೀಕ್ಷಿಸಲು ಸಾಧ್ಯ? ಈ ಪ್ರಶ್ನೆಯನ್ನು ಇವರಿಗೆ ಕೇಳುವ ಬದಲು ಮೀಸಲಾತಿಯಿಂದ ಬಂದವರಿಗೆ ಕೇಳಲಾಗುತ್ತಿದೆ. ದುಡ್ಡು ಕೊಟ್ಟು ಬಂದವರು ದುಡ್ಡನ್ನು ಸಂಪಾದಿಸಲಷ್ಟೇ ಯೋಚಿಸುತ್ತಾರೆ. ದುಡ್ಡು ಗಳಿಸಬೇಕು ಎನ್ನುವುದರ ಕಡೆ ಇವರ ತುಡಿತವಿದೆ. ಇಲ್ಲಿ ಹಣವೇ ಮೆರಿಟ್ ಆಗುತ್ತಿದೆ. ಇಂತವರಿಂದ ಗುಣಮಟ್ಟವನ್ನು ಅಪೇಕ್ಷಿಸಲು ಸಾಧ್ಯವೇ? ಅಪೇಕ್ಷಿಸಿದರೆ ಎಂತಹ ಗುಣಮಟ್ಟವನ್ನು ಅಪೇಕ್ಷಿಸಬಹುದು. ಇದೊಂದು ರೀತಿಯಲ್ಲಿ ಹಗಲು ದರೋಡೆಗೆ ಪ್ರೇರಣೆ ನೀಡಿದಂತೆಯೇ ಸರಿ. ಹಣವನ್ನು ದ್ವಿಗುಣಗೊಳಿಸುವ ಕಾರಣದಿಂದಾಗಿಯೇ ಕಾರ್ಪೊರೇಟ್ ಸಂಸ್ಥೆಗಳು ವೈದ್ಯಕೀಯ ಕ್ಷೇತ್ರದ ಮೇಲೆ ಅಪಾರ ಬಂಡವಾಳ ಹೂಡಿ, `ಮೀಸಲಾತಿ ವರ್ಸಸ್ ಮೆರಿಟ್’ ಎಂಬ ಅಪ್ಪಟ ಜನವಿರೋಧಿ ಸುಳ್ಳನ್ನು ಹರಡುತ್ತಿದೆ. ಆದರೆ ಭಾರತದ ವಾಸ್ತವಗಳು ಇವರ ದುರ್ಬಲ ಕಲ್ಪನೆಗಳನ್ನು ಮೀರಿ ಬೆಳೆಯುತ್ತಿವೆ. ಈ ದೇಶದ ಜನತಂತ್ರ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತೆಯನ್ನು ಉಳಿಸುವುದೆಂದರೆ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವುದು, ಆ ವಾಸ್ತವಗಳ ಬೆಳಕಲ್ಲಿ ಹೊಸ ಭಾರತವನ್ನು ಕಟ್ಟುವುದೇ ಆಗಿದೆ.
ಯಾವ ಕ್ಷೇತ್ರದಲ್ಲಿ ಪದೇ ಪದೇ ಮೀಸಲಾತಿಯ ವಿರೋಧಿ ಹೇಳಿಕೆಗಳು ಹೊರಬಂದು ಪ್ರತಿಭೆ ಪ್ರಶ್ನೆಯನ್ನು ಮುಂದಿಡಲಾಗುತ್ತಿದೆಯೋ ಆ ಕ್ಷೇತ್ರದಲ್ಲಿಯೇ ದುಡ್ಡಿನಿಂದ ಪದವಿಯನ್ನು ಕೊಳ್ಳುವ ದಂಧೆ ಎಗ್ಗಿಲ್ಲದೇ ಸಾಗಿದೆ. ಈ ಪಿಡುಗು ವೈದ್ಯಕೀಯ ಶಿಕ್ಷಣಕ್ಕೆ ಮಾತ್ರ ಸೀಮಿತವಾದುದಲ್ಲ; ಪೇಮೆಂಟ್ ಕೋಟಾ ಹೆಸರಿನಲ್ಲಿ ಯಾವ ಪದವಿಯ ಅಂಕಗಳಿಗೂ ಮಾನ್ಯತೆ ಕೊಡದೆ ತುಂಬಲಾಗುತ್ತಿದೆ. ಅಂಕ ಕಡಿಮೆ ಇದ್ದರೂ ಹಣ ಕೊಟ್ಟು ಯಾವ ಪದವಿಗಾದರೂ ಸೇರಬಹುದು. ಆದರೆ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಸರಾಸರಿ ಅಂಕ ಹೊಂದಿರುವ ವಿದ್ಯಾರ್ಥಿಗಳು ಮೀಸಲಾತಿ ಕೋಟಾದಲ್ಲಿ ಬಂದರೆ ಅರ್ಹತೆ, ಪ್ರತಿಭೆ ಮಾನದಂಡದ ಪ್ರಶ್ನೆಯನ್ನು ಮುಂಚೂಣಿಗೆ ತಂದು ಹುಯಿಲೆಬ್ಬಿಸಲಾಗುತ್ತದೆ. ಇನ್ನೊಂದು ಅಂಶವನ್ನು ಸ್ಪಷ್ಟಪಡಿಸುವುದಾದರೆ ಇಂದು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಸಾಮಾನ್ಯ ವರ್ಗಕ್ಕೆ ನಿಗದಿಯಾಗುವ ಅಂಕಗಳಿಗಿಂತ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನಿಗದಿತಗೊಳ್ಳುವ ಅಂಕ ಒಂದೆರಡು ಕಡಿಮೆ ಅಂಕಗಳಷ್ಟು ಮಾತ್ರ. ಈ ಸತ್ಯ ನಮ್ಮೆಲ್ಲರ ಕಣ್ಣೆದುರಿಗೇ ಇದ್ದರೂ ಪೂರ್ವಗ್ರಹಪೀಡಿತ ಮನಸ್ಥಿತಿಯವರು ಕಣ್ಣುತೆರೆಯಲು ಸಿದ್ಧರಿಲ್ಲ. ಅದಕ್ಕೇನು ಮಾಡುವುದು?

– ಡಾ. ಉಮಾಶಂಕರ್ ಹೆಚ್.ಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...