Homeಮುಖಪುಟದೈಹಿಕ ತಪಸ್ಸು, ಮನದ ಸಾಧನೆ ಹಾಗೂ ವೈಚಾರಿಕ ಮಂಥನದ ಯಾತ್ರೆ

ದೈಹಿಕ ತಪಸ್ಸು, ಮನದ ಸಾಧನೆ ಹಾಗೂ ವೈಚಾರಿಕ ಮಂಥನದ ಯಾತ್ರೆ

- Advertisement -
- Advertisement -

ಐದು ತಿಂಗಳವರೆಗೆ ದೇಶದ ರಸ್ತೆಗಳಲ್ಲಿ 3700 ಕಿಲೊಮೀಟರ್ ಅಳೆದು ಈ ಭಾರತ್ ಜೋಡೊ ಯಾತ್ರೆ ಸಾಧಿಸುವುದಾದರೂ ಏನು? 7ನೆಯ ಸೆಪ್ಟೆಂಬರ್‌ನಂದು ಕನ್ಯಾಕುಮಾರಿಯಿಂದ ಈ ಯಾತ್ರೆ ಶುರುವಾದಾಗ ಈ ಪ್ರಶ್ನೆ ಎಲ್ಲಾ ಯಾತ್ರಿಗಳ ಎದುರಿಗೆ ಕಾಣಿಸಿಕೊಂಡಿತ್ತು. ಆದರೆ ಗಾಂಧೀಜಿಯ ಪುಣ್ಯತಿಥಿಯ ದಿನದಂದು, ಜೋರಾಗಿ ಸುರಿಯುತ್ತಿರುವ ಹಿಮದ ನಡುವೆಯೇ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯವಾದಾಗ ಅದಕ್ಕೆ ಉತ್ತರ ಸ್ಪಷ್ಟವಾಗಿತ್ತು.

ನಮ್ಮ ಪರಂಪರೆಯಲ್ಲಿ ಯಾವುದೇ ಯಾತ್ರೆ ಕೇವಲ ರಸ್ತೆ ಅಳೆಯಲು ಅಥವಾ ಪಿಕ್ನಿಕ್‌ಗಾಗಿ ಅಥವಾ ಕಸರತ್ತು ಮಾಡಲು ಆಗಿರುವುದಿಲ್ಲ. ಗೌತಮ ಬುದ್ಧನಿಂದ ಹಿಡಿದು ಮಹಾತ್ಮ ಗಾಂಧಿಯ ತನಕ ಎಲ್ಲಾ ಯಾತ್ರೆಗಳು ಶರೀರವನ್ನು ದಂಡಿಸುವುದಕ್ಕಿಂತ ಹೆಚ್ಚಾಗಿ ವಿಚಾರದ ಹಾಗೂ ಮಾನಸ ಯಾತ್ರೆಗಳಾಗಿವೆ. ಶರೀರದ ಚಲನೆಯು ದೇಶ ಮತ್ತು ಸಮಾಜವನ್ನು ಅಲುಗಾಡಿಸುವ ಮಾಧ್ಯಮವಾಗಿರುತ್ತದೆ. ಭಾರತ ಜೋಡೊ ಯಾತ್ರೆಯ ಉದ್ದೇಶವೂ ಇದೇ ಆಗಿತ್ತು. ಇದು ಶಾರೀರಿಕ ತಪಸ್ಸಿನ ಮುಖಾಂತರ ವೈಚಾರಿಕ ಮಂಥನ ಹಾಗೂ ಮನಸ್ಸಿನ ಸಾಧನದ ಯಾತ್ರೆಯಾಗಿದೆ.

ಈ ಯಾತ್ರೆಯ ಶಾರೀರಿಕ ತಪಸ್ಸಿನ ಬಗೆ ಅರ್ಥಮಾಡಿಕೊಳ್ಳಲು ದೇಶಕ್ಕೆ ಇನ್ನೂ ಸಮಯ ಹಿಡಿಯಲಿದೆ. ಜನತೆಗೆ ರಾಹುಲ್ ಗಾಂಧಿಯ ಟಿ-ಶರ್ಟ್ ಅಂತೂ ಕಾಣಿಸಿತು, ಆದರೆ ಈ ಸಂಪೂರ್ಣ ಪರಿಶ್ರಮದ ಹಿಂದೆ ಲಕ್ಷಾಂತರ ಜನರ ತಪಸ್ಸು ಇನ್ನೂ ಕಣ್ಣಿಗೆ ಬಿದ್ದಿಲ್ಲ. ಪ್ರತಿ ದಿನ ಸುಮಾರು 20ರಿಂದ 25 ಕಿಲೋಮೀಟರ್ ಕಾಲ್ನಡಿಗೆ, ಎಲ್ಲಾ ರೀತಿಯ ಹವಾಮಾನವನ್ನು ಎದುರಿಸುವುದು ಹಾಗೂ ಎಲ್ಲಾ ರೀತಿಯ ಮನಸ್ಥಿತಿ ಮತ್ತು ಸನ್ನಿವೇಶಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು, ಇವೆಲ್ಲವೂ ಸಣ್ಣ ವಿಷಯಗಳೇನಲ್ಲ. ಈ ಯಾತ್ರೆಯು ದೇಶದ ಎಲ್ಲಾ ರೀತಿಯ ಪ್ರದೇಶಗಳನ್ನು ಹಾಗೂ ಎಲ್ಲಾ ರೀತಿಯ ಹವಾಮಾನಗಳನ್ನು ನೋಡಿದೆ. ಸುಡು ಬಿಸಿಲು, ಮೈಕೊರೆಯುವ ಚಳಿ, ಧಾರಾಕಾರ ಮಳೆ ಹಾಗೂ ಜೋರಾದ ಹಿಮಪಾತ. ಈ ಯಾತ್ರೆಯ ಒಬ್ಬ ಸಹಯಾತ್ರಿಯಾಗಿ, ಪ್ರತಿಯೊಬ್ಬ ಯಾತ್ರಿಯ ಪಾದಗಳಲ್ಲಿ ಗುಳ್ಳೆಗಳು, ಎಲ್ಲಾ ರೀತಿಯ ರೋಗಗಳು, ಎಲುಬು ಕೊರೆಯುವ ಚಳಿಯ ನಡುವೆ ಉರುಳಿಹೋದ ಟೆಂಟ್‌ಗಳು- ಇವೆಲ್ಲವಕ್ಕೂ ನಾನು ಖುದ್ದು ಸಾಕ್ಷಿಯಾಗಿದ್ದೇನೆ. ಈ ದೈಹಿಕ ತಪಸ್ಸು, ಯಾತ್ರೆಯ ಸಂದೇಶವನ್ನು ಪ್ರಾಮಾಣಿಕವಾಗಿಸಿದೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಕಾಣಿಸದೇ ಇರುವ ಶ್ರದ್ಧೆಯನ್ನು ಸಾಮಾನ್ಯ ಜನರ ಮನಸ್ಸಿನಲ್ಲಿ ತುಂಬಿದೆ. ಪ್ರತಿದಿನ ಕಷ್ಟ ಸಹಿಸುವ ರೂಢಿಯು ಸ್ವತಃ ಯಾತ್ರಿಗಳನ್ನೂ ಒಳಗಿನಿಂದ ಬದಲಿಸಿದೆ, ಅವರನ್ನು ನಿಜವಾದ ಅರ್ಥದಲ್ಲಿ ಭಾರತ್ ಜೋಡೊದ ಸಂದೇಶವಾಹಕರನ್ನಾಗಿಸಿದೆ.

ಕಾಲ್ನಡಿಗೆಯ ಈ ಯಾತ್ರೆಯ ಜೊತೆಜೊತೆಗೇ ಒಂದು ವಿಚಾರದ ಯಾತ್ರೆಯೂ ನಡೆಯುತ್ತಲಿತ್ತು. ಸ್ವತಃ ರಾಹುಲ್ ಗಾಂಧಿ ಈ ವೈಚಾರಿಕ ಮಂಥನದ ಪ್ರಮುಖ ವಾಹಕ ಹಾಗೂ ಉದ್ಘೋಷಕರಾದರು. “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಬಂದಿದ್ದೇನೆ”- ಈ ಮಾತಂತೂ ಒಂದು ಸಿನೆಮಾ ಡಯಲಾಗ್‌ನಷ್ಟು ಜನಪ್ರಿಯವಾಗಿದೆ. ಶ್ರೀನಗರದಲ್ಲಿ ಅವರ ಸಮಾರೋಪ ಮಾತುಗಳು ಈ ಡಯಲಾಗ್‌ನ ತಾತ್ವಿಕತೆಯನ್ನು ಬಹಿರಂಗಪಡಿಸುತ್ತದೆ. ಇದನ್ನು ಗಂಗಾ-ಜಮುನಾ ಶಿಷ್ಟಾಚಾರ ಅಂದುಕೊಳ್ಳಿ ಅಥವಾ ಕಶ್ಮೀರಿಯತ್ ಅನ್ನಿ. ಬೇಕಾದರೆ ಸಂತರ ಪರಂಪರೆಯಿಂದ ನೋಡಿ ಕಲಿತುಕೊಳ್ಳಿ ಅಥವಾ ಮಹಾತ್ಮಾ ಗಾಂಧಿಯ ಪರಂಪರೆಯಿಂದಾಗಲೂ- ನಮ್ಮ ಸಾಂಸ್ಕೃತಿಕ ಪರಂಪರೆ ಜೋಡಿಸುವುದಾಗಿದೆಯೇ ಹೊರತು ಒಡೆಯುವುದಲ್ಲ. ನಮ್ಮ ಸಂವಿಧಾನದ ಪ್ರಸ್ತಾವನೆಯ ’ಬಂಧುತ್ವ’ವು ಇದೇ ತತ್ವವನ್ನು ಬರಹರೂಪದಲ್ಲಿ ಇಳಿಸಿದೆ. ತನ್ನ ಅಜ್ಜಿ ಮತ್ತು ತಂದೆಯ ಹತ್ಯೆ ಆದಾಗ ಬಂದ ದೂರವಾಣಿ ಕರೆಗಳನ್ನು ಉಲ್ಲೇಖಿಸುತ್ತ ರಾಹುಲ್ ಗಾಂಧಿ ಮಾರ್ಮಿಕವಾಗಿ ಈ ಯಾತ್ರೆಯ ಉದ್ದೇಶವನ್ನು ತಿಳಿಸಿದ್ದಾರೆ: ಇನ್ನು ಮುಂದೆ ಯಾವುದೇ ಮಗುವಿಗೆ ಇಂತಹ ದೂರವಾಣಿ ಕರೆಗಳು ಬರದೇ ಇರಲಿ ಎಂಬುದಕ್ಕೇ ಈ ಯಾತ್ರೆ. ದ್ವೇಷ, ಹಿಂಸೆ ಹಾಗೂ ಆತಂಕದ ರಾಜಕೀಯದ ವಿರುದ್ಧದ ಆಳವಾದ ಹೇಳಿಕೆ ಇದಾಗಿದೆ.

ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ?: ಪಾದಯಾತ್ರೆಗಳ ಇತಿಹಾಸ ಏನು ಹೇಳುತ್ತದೆ?

ಸ್ನೇಹದ ಈ ಭಾವನೆಯ ಜೊತೆಜೊತೆಗೆ ಭಾರತ ಜೋಡೊ ಯಾತ್ರೆಯು ಸಮಾನತೆಯ ತತ್ವವನ್ನೂ ಪದೇ ಪದೇ ಸ್ಪಷ್ಟಪಡಿಸಿದೆ. ದೀರ್ಘ ಸಮಯದ ನಂತರ ದೇಶದಲ್ಲಿ ಹೆಚ್ಚುತ್ತಿರುವ ವಿಷಮತೆಯ ಬಗ್ಗೆ ರಾಜಕೀಯ ಮುಖ್ಯವಾಹಿನಿಯಲ್ಲಿ ಕಾಳಜಿ ವ್ಯಕ್ತಪಡಿಸಲಾಗಿದೆ. ಬಹುಶಃ ಮೊದಲ ಬಾರಿ ಒಂದು ದೊಡ್ಡ ಪಕ್ಷದ ನಾಯಕನೊಬ್ಬ ಅದಾನಿ ಹಾಗೂ ಅಂಬಾನಿಯ ಹೆಸರನ್ನು ಎತ್ತುವ ಧೈರ್ಯ ತೋರಿಸಿದ್ದಾರೆ. ದಲಿತ, ಆದಿವಾಸಿ ಹಾಗೂ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕಾಳಜಿಯು ತೋರಿಕೆಯ ಮಾತು ಅಥವಾ ಜುಮ್ಲೆಬಾಜಿಯನ್ನು ಮೀರಿ ಕೆಲವು ಗಟ್ಟಿಯಾದ ಕಾಂಕ್ರೀಟ್ ಪ್ರಸ್ತಾಪಗಳಲ್ಲಿ ವ್ಯಕ್ತಗೊಂಡಿದೆ. ಮಹಿಳೆಯರ ಮತ್ತು ಲೈಂಗಿಕ ಭೇದಭಾವದ ಬಲಿಪಶುಗಳಾದ ಎಲ್ಲಾ ವರ್ಗಗಳ ನೋವು ಪ್ರತಿಯೊಂದು ಹೆಜ್ಜೆಯಲ್ಲಿ ದಾಖಲಿಸಲಾಗಿದೆ. ನೋವಿನಿಂದ ನೋವಿನ ಸಂಬಂಧ ಬೆಸೆದ ಈ ವಿಚಾರ ಯಾತ್ರೆಯು ಒಂದು ವೈಚಾರಿಕ ದಿಕ್ಕು ನೀಡುವ ಕೆಲಸವನ್ನು ಮಾಡಿದೆ. ಈ ದಿಕ್ಕು ಅತ್ಯಂತ ಹೊಸದು ಅಥವಾ ವಿಶಿಷ್ಟ ಅಂತೇನೂ ಅಲ್ಲ. ಇದು ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಸ್ವಧರ್ಮಕ್ಕೆ ಒಂದು ಹೊಸ ಸಂದರ್ಭ ತೋರಿಸಿದೆ.

ದೇಹ ಮತ್ತು ವಿಚಾರದ ಯಾತ್ರೆಯಿಂದಲೂ ಮುಂದೆ ಹೋಗಿ ಭಾರತ ಜೋಡೊ ಯಾತ್ರೆಯು ಆಧ್ಯಾತ್ಮಿಕ ಯಾತ್ರೆಯೂ ಆಗಿತ್ತು. ಪಾದಯಾತ್ರೆಯು ಮನಸ್ಸಿನ ಸಾಧನೆಯ ಅತ್ಯುತ್ತಮ ಸಹಜ ಮಾರ್ಗವಾಗಿದೆ. ಈ ಯಾತ್ರೆಯು ದೇಶದಲ್ಲಿ ಆವರಿಸಿದ ನಿರಾಸೆ, ಅಸಹಾಯಕತೆ ಮತ್ತು ಒಬ್ಬಂಟಿತನದ ಭಾವನೆಯನ್ನು ಒಡೆದುಹಾಕಿದೆ. ಸುಳ್ಳು ಮತ್ತು ದ್ವೇಷದ ವಿರುದ್ಧ ಶಸ್ತ್ರತ್ಯಾಗ ಮಾಡಿದ ನಾಗರಿಕರಿಗೆ ಇನ್ನೊಮ್ಮೆ ಧೈರ್ಯ ತುಂಬಿದೆ. “ಹೆದರಬೇಡಿ” ಎಂಬ ಸರಳ ಮಂತ್ರವು ಕೋಟ್ಯಂತರ ಭಾರತೀಯರ ಮನದಲ್ಲಿ ಶಕ್ತಿ ತುಂಬಿದೆ. ಕಾಶ್ಮೀರ ಕಣಿವೆಯಲ್ಲಿ ಸಿಕ್ಕ ಅಪಾರ ಸ್ನೇಹವು, ಈ ದೇಶದಲ್ಲಿ ಹೊಸ ಭರವಸೆಯ ಸಂಚಲನವನ್ನು ಸಾಧ್ಯವಾಗಿಸಿತು ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಇದು ಕೇವಲ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷಕ್ಕಲ್ಲದೇ ಭಾರತಕ್ಕೂ ಒಂದು ಒಳ್ಳೆಯ ಸುದ್ದಿ. ನಂಬಿಕೆ, ನಿರೀಕ್ಷೆಯ ಮೇಲೆಯೇ ಈ ಜಗತ್ತು ಉಳಿದುಕೊಂಡಿದೆ ಎನ್ನಲಾಗುತ್ತದೆ; ಯಾವುದೇ ಸಮಾಜಕ್ಕೆ ಈ ನಂಬಿಕೆ ಎಲ್ಲಕ್ಕಿಂತ ದೊಡ್ಡ ಬಂಡವಾಳ.

ನಂಬಿಕೆಯ/ಆಸೆಯ ದೀಪ ಬೆಳಗಿಸುವುದು ದೊಡ್ಡ ಕೆಲಸವೇ ಸರಿ. ಆದರೆ ಅದಕ್ಕಿಂತ ದೊಡ್ಡ ಕೆಲಸ ಆ ನಂಬಿಕೆಯನ್ನು ಜೀವಂತವಾಗಿಟ್ಟುಕೊಳ್ಳುವುದು. ಈ ನಿಟ್ಟಿನಲ್ಲಿ ಭಾರತ ಜೋಡೊದ ಈ ಅಭೂತಪೂರ್ವ ಯಶಸ್ಸು ಈ ಯಾತ್ರೆಯೊಂದಿಗೆ ಸಂಬಂಧಿಸಿದ ಪ್ರತಿಯೊಬ್ಬ ಭಾರತೀಯರ ಹೆಗಲಿನ ಮೇಲೆ ದೊಡ್ಡ ಜವಾಬ್ದಾರಿಯನ್ನು ಹಾಕಿದೆ. ಈ ಯಾತ್ರೆಯು ಬಂಜರು ಭೂಮಿಯಲ್ಲಿ ನೇಗಿಲನ್ನು ಎಳೆದಿದೆ; ಆದರೆ ಈಗ ಜವಾಬ್ದಾರಿ ಇರುವುದು ಇದರಲ್ಲಿ ಬೀಜ ಬಿತ್ತುವುದು ಹಾಗೂ ನೀರು ಗೊಬ್ಬರ ಎರೆಯುವುದು. ದೇಶದ ಪ್ರತಿಯೊಂದು ಬಾಗಿಲ ಮೇಲೆ ಈ ವಿಚಾರ ತಟ್ಟುವವರೆಗೆ, ದೇಶದ ಪ್ರತಿಯೊಂದು ಹೃದಯವನ್ನು ಮುಟ್ಟುವ ತನಕ ಈ ಯಾತ್ರೆಯ ಉದ್ದೇಶ ಸಫಲವಾಗುವುದಿಲ್ಲ. ಯಾವತ್ತು ಪ್ರತಿಯೊಬ್ಬ ಭಾರತೀಯ ಸುಳ್ಳನ್ನು ಸುಳ್ಳು ಎಂದು ಹೇಳಲು ಕಲಿಯುವಳೋ/ನೋ ಹಾಗೂ ದ್ವೇಷವನ್ನು ತಿರಸ್ಕರಿಸುತ್ತಾಳೋ/ನೋ ಅಂದು ಭಾರತ ಜೋಡೊ ಯಾತ್ರೆ ಸಫಲವಾಗುವುದು. ಈ ನಿಟ್ಟಿನಲ್ಲಿ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯಗೊಂಡಿಲ್ಲ, ಬದಲಿಗೆ ನಿಜವಾದ ಅರ್ಥದಲ್ಲಿ ಭಾರತವನ್ನು ತನ್ನ ಸ್ವಧರ್ಮದೊಂದಿಗೆ ಪುನಃ ಜೋಡಿಸುವ ಯಾತ್ರೆಯನ್ನು ಪ್ರಾರಂಭಿಸಿದೆ.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...