Homeಕರ್ನಾಟಕಸ್ಲಂ ನಲ್ಲಿ ಅರಳಿದ `ಭಾವೈಕ್ಯತಾ ವೇದಿಕೆ’

ಸ್ಲಂ ನಲ್ಲಿ ಅರಳಿದ `ಭಾವೈಕ್ಯತಾ ವೇದಿಕೆ’

ಅಬ್ದುಲ್ ಅವರ ಇಡೀ ಕುಟುಂಬವೇ ರಂಗಭೂಮಿಯಲ್ಲಿ ಸಕ್ರಿಯವಾಗಿದೆ. ಹೀಗೆ ಮುಸ್ಲೀಂ ಧರ್ಮದ ಒಂದು ಪಂಗಡವಾದ ಪಿಂಜಾರ ಸಮುದಾಯದ ಇಡೀ ಕುಟುಂಬವೇ ರಂಗದ ಮೇಲೆ ಕಾಣಿಸಿಕೊಳ್ಳುವುದು ಕೂಡ ವಿಶಿಷ್ಠ ಸಂಗತಿಯಾಗಿದೆ.

- Advertisement -
- Advertisement -

| ಅರುಣ್ ಜೋಳದಕೂಡ್ಲಿಗಿ |

ಹೊಸಪೇಟೆಯ ಸಿದ್ಧಲಿಂಗಪ್ಪ ಚೌಕಿಯ 2ನೇ ಕ್ರಾಸ್ ಕೊನೆಯ ಅರಳಿ ಮರದ ಹತ್ತಿರವಿರುವ `ಭಾವೈಕ್ಯತಾ ವೇದಿಕೆ’ಯ ಸಂತ ಶಿಶುನಾಳ ಶರೀಫ ರಂಗಮಂದಿರವಿದೆ. ಇಂಥದ್ದೊಂದು ಕೊಳಗೇರಿಯಲ್ಲಿ ಅರಳಿದ `ಭಾವೈಕ್ಯತಾ ವೇದಿಕೆ’ ರೂಪುಗೊಂಡದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ, ವೇದಿಕೆಯನ್ನು ರೂಪಿಸುವಲ್ಲಿ ತನ್ನನ್ನೇ ತೇಯ್ದುಕೊಂಡ ಪಿ.ಅಬ್ದುಲ್ ಅವರು ತಮ್ಮದೇ ಆತ್ಮಕಥನದ ಮುಖ್ಯ ಎಳೆ ಎಂಬಂತೆ `ಪಯಣ’ ದ ಹೆಜ್ಜೆಗಳನ್ನು ವಿವರಿಸುತ್ತಾರೆ. ಇದು ವೇದಿಕೆಯ ಆತ್ಮಕಥನದಂತೆಯೂ ಕೇಳಿಸತೊಡಗುತ್ತದೆ.

ಅಬ್ದುಲ್ ಅವರು `ಪಿಂಜಾರ’ ಸಮುದಾಯದವರು. ಹತ್ತಿಯನ್ನು ಹದಗೊಳಿಸಿ ದಿಂಬು, ಗಾದಿಯನ್ನು ಹೊಲೆಯುವ `ಪಿಂಜಾರ’ ಸಮುದಾಯ ಮೂಲತಃ ಧಾರ್ಮಿಕ ಸಂಕರತೆಯ ಸೃಷ್ಠಿ. ಅಂತೆಯೇ ಇವರು ಹಿಂದೂಮುಸ್ಲಿಂ ಬೆಸುಗೆಯ ಸಾಂಸ್ಕೃತಿಕ ವಕ್ತಾರರಂತೆ ಕಾಣುತ್ತಾರೆ. ಹಾಗಾಗಿ ಮುಸ್ಲಿಂ ಧರ್ಮದಲ್ಲಿ ಪಿಂಜಾರರು ಒಂದು ಬಗೆಯಲ್ಲಿ ಅಸ್ಪೃಶ್ಯರು. ಮೂಲತಃ ಎರಡು ಸಂಗತಿಗಳನ್ನು ಹೊಲೆದು ಜೋಡಿಸುವ ಈ ಸಮುದಾಯ ಎರಡು ಧರ್ಮಗಳ ಜನರನ್ನು `ಬಂದುತ್ವ’ `ಸಾಮರಸ್ಯ’ದ ನೆಲೆಯಲ್ಲಿ ಹೊಲೆಯುವ ಕೆಲಸವನ್ನೂ ಮಾಡುತ್ತಿದೆ. ಈ ಬಗೆಯ ಸಮುದಾಯಿಕ ಪ್ರಜ್ಞೆಯ ಉತ್ಪನ್ನವಾಗಿಯೂ `ಭಾವೈಕ್ಯತಾ ವೇದಿಕೆ’ ರೂಪುಗೊಂಡಿದೆ.

ಉತ್ತಮ ಪರಿಸರದ ಭಾಗವಾಗಿ ಅಬ್ದುಲ್ ಅವರ ಬಾಲ್ಯ ರೂಪುಗೊಂಡಿತು. ಆಗಲೆ ಅವರ ಒಳಗೊಂದು ಸೌಹಾರ್ಧದ ಕನಸಿನ ಕೂಸು ಮೊಳಕೆಯೊಡೆಯಿತು. ರಂಗಭೂಮಿಯ ಜತೆಗಿನ ನಂಟು ಗಾಢವಾಯಿತು, ಹೋರಾಟದ ಪ್ರಾಥಮಿಕ ಪಾಠವೆಂಬಂತೆ ಗೋಕಾಕ್ ಚಳವಳಿಯಲ್ಲಿ ಉಪವಾಸ ಕೈಗೊಂಡು ಜೈಲುವಾಸವನ್ನೂ ಅನುಭವಿಸಿದರು. ಹೀಗೆ ಅಬ್ದುಲ್ ಅವರಿಗೆ ಪ್ರೇರಕ ಶಕ್ತಿಯಾಗಿದ್ದ ಹೆಚ್.ಇಬ್ರಾಹಿಂ ಸಾಹೇಬರು ಆಗಸ್ಟ್ 1, 2014 ರಲ್ಲಿ ದೇಹತ್ಯಜಿಸಿದರು. ಆ ಹೊತ್ತಿಗೆ ಅವರ ಸೌಹಾರ್ಧದ ಕನಸು ಭಾವೈಕ್ಯತಾ ವೇದಿಕೆ 23 ವರ್ಷ ಪೂರೈಸಿ ಬೆಳ್ಳಿಹಬ್ಬದತ್ತ ಹೆಜ್ಜೆ ಇಟ್ಟಿತ್ತು.

ಇಬ್ರಾಹಿಂ ಸಾಹೇಬ್ರು

ಹೀಗೆ ಅಬ್ದುಲ್ ಅವರು ಇಂತಹ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದು, ಪದವಿವರೆಗೂ ಓದಿ ಕ್ರಾಂತಿಯ ಕನಸೊತ್ತು, ಸಮಾಜವನ್ನು ಬದಲಿಸಬೇಕೆಂಬ ಉತ್ಸಾಹದಲ್ಲಿ ತಾನು ಹುಟ್ಟಿದ ಇದೇ ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿಗೆ ವಾಪಾಸಾದರು. ಮಹಿಳೆಯರ ಕಳ್ಳ ಸಾಗಣೆ ವಿರುದ್ಧ ಸಮುದಾಯದವರು ಹೇಳಿದ ದೂರನ್ನು ದಾಖಲಿಸಿದ್ದಕ್ಕೆ ಹಲ್ಲೆಗೆ ಒಳಗಾದರು, ಊರು ಬಿಟ್ಟು ಓಡಿದರು. ಸುಳ್ಳು ಕೇಸುಗಳ ಜಾಲದಲ್ಲಿ ಸಿಲುಕಿ ಕೆಲಕಾಲ ತಲೆಮರೆಸಿಕೊಂಡರು, ಇಷ್ಟಾಗಿಯೂ ಇದೇ ಚೌಕಿಯಲ್ಲಿ ಏನನ್ನಾದರೂ ಮಾಡಬೇಕೆಂದು ಪಣತೊಟ್ಟರು.

1991 ರಲ್ಲಿ ಹೊಸಪೇಟೆ ಭಾಗದಲ್ಲಿ ನಡೆದ ಕೋಮುಗಲಬೆಯಿಂದಾಗಿ ಇಡೀ ನಗರ ಮತ್ತು ಸುತ್ತಮುತ್ತಣ ಹಳ್ಳಿಗಳಲ್ಲಿ ಆತಂಕದ ಛಾಯೆಯಿತ್ತು. ಸೌಹಾರ್ಧದಿಂದ ಬದುಕುವ ಜನಬದುಕಿನಲ್ಲಿ ದೊಡ್ಡದೊಂದು ಗಾಯವಾಗಿ ನೋಯತೊಡಗಿತ್ತು. ಇಂತಹದ್ದೊಂದು ಗಾಯಕ್ಕೆ ಮುಲಾಮು ಹುಡುಕುವ ಯೋಚನೆ ಅಬ್ದುಲ್ ಅವರನ್ನು ನಿದ್ದೆಗೆಡಿಸಿತು. ಫಲವಾಗಿ ಹೊಸಪೇಟೆಯ ಜಂಬಯ್ಯ ನಾಯಕ, ನಾರಾಯಣ ಭಟ್, ಕಲ್ಲಂಭಟ್, ಪರುಷರಾಮ ಕಲಾಲ್ ಮೊದಲಾದವರು ಸೇರಿ ಚರ್ಚಿಸಿದರು. ಹಿಂದು ಮುಸ್ಲಿಂ ಸೌಹಾರ್ಧತೆಯ ಕುರುಹಾದ ಮೊಹರಂ ಹಾಡುಗಳ ಸ್ಪರ್ಧೆಯನ್ನು ಆಯೋಜಿಸಿದರು. ಈ ಸಮಾವೇಶಕ್ಕೆ ಹೆಸರಿಡುವ ಚರ್ಚೆ ಬಂದಾಗ ಜಂಬಯ್ಯನಾಯಕ ಸೂಚಿಸಿದ `ಭಾವೈಕ್ಯತೆ’ ಎನ್ನುವ ಹೆಸರು ಅಂತಿಮವಾಯ್ತು. ಮುಂದೆ ಅದೇ ಹೆಸರಿನ ವೇದಿಕೆಯೊಂದು ರೂಪುಗೊಂಡಿತು. ಅಬ್ದುಲ್ ವೇದಿಕೆಯ ಖಜಾಂಚಿಯಾದರು. ಇದೀಗ ಇಪ್ಪತ್ತೇಳರ ಹರೆಯದಲ್ಲಿ ವೇದಿಕೆ ತನ್ನದೇ ಆದ ಛಾಪು ಮೂಡಿಸುತ್ತಿದೆ.

ಒಮ್ಮೆ ಚೌಕಿಯಲ್ಲಿ ಹೆಣ್ಣೊಬ್ಬಳ ಅಸಹಜ ಸಾವು ಕೊಲೆಯಾಗಿರಬಹುದೆಂಬ ಪಿಸುಮಾತುಗಳು ಧ್ವನಿಗೂಡಿದಾಗ, ಈ ಘಟನೆ ಅಬ್ದುಲ್ರನ್ನು ಕಾಡುತ್ತದೆ. ಕೂಡಲೆ ತಮ್ಮ ಓಣಿಯ ಹುಡುಗರಿಂದ ಜಾಗೃತಿ ಮೂಡಿಸಲು ಬೀದಿ ನಾಟಕ ರೂಪಿಸುತ್ತಾರೆ. ಅದು ಮನೆಯಿಂದ ಮನೆಗೆ ಹಬ್ಬುತ್ತದೆ. `ಈ ಸಾವು ನ್ಯಾಯವೇ? ಎನ್ನುವ ಪ್ರತಿಧ್ವನಿಯನ್ನು ಮೂಡಿಸುತ್ತದೆ. ಪರಿಣಾಮವಾಗಿ ಇಡೀ ಚೌಕಿಯಲ್ಲಿ ಮಹಿಳೆಯ ಸಾವಿನ ಬಗ್ಗೆ ತಳೆದಿದ್ದ ಮೌನದ ಕಟ್ಟೊಡೆದು, ಪೊಲೀಸರಿಗೆ ದೂರು ಕೊಡಲು ಜನರು ಮುಂದಾಗುತ್ತಾರೆ. ಈ ಪ್ರಯೋಗ ಹೆಣ್ಣಿನ ದಾರುಣ ಅಂತ್ಯಕ್ಕೆ ಹೋರಾಟದ ಆಯಾಮ ನೀಡುತ್ತದೆ. ಈ ಘಟನೆಯೇ ಭಾವೈಕ್ಯತಾ ವೇದಿಕೆಯ ಬಹುಮುಖ್ಯ ಸಂವಹನದ ಗುರುತಾಗಿ `ಬೀದಿನಾಟಕ’ ಮುನ್ನಲೆಗೆ ಬರುತ್ತದೆ.

ಪಿ. ಅಬ್ದುಲ್ಲಾ

ಈತನಕದ ವೇದಿಕೆಯ ಪಯಣದಲ್ಲಿ ಅಭಿನಯಗೊಂಡ ಬೀದಿ ನಾಟಕಗಳ ಸಂಖ್ಯೆ ದೊಡ್ಡದಿದೆ. ಮುಖ್ಯವಾದ ಸಂಗತಿಯೆಂದರೆ ಈ ಯಾವುದೇ ನಾಟಕಗಳು ಕಲೆಗಾಗಿ ಕಲೆ ಎನ್ನುವಂತೆ ಹುಟ್ಟಿದವುಗಳಲ್ಲ. ಬದಲಾಗಿ ಆಯಾ ಕಾಲದ ಬಿಕ್ಕಟ್ಟಿನ ಹೊಟ್ಟೆಯೊಡೆದು ಜೀವತಳೆದವುಗಳು. ಅವುಗಳೆಂದರೆ, ವಿಸರ್ಜನೆ, ಹುಡುಗಿ ಓದಲೇಬೇಕು, `ಕಾಲರಾ’ `ನಾವು ಮನುಜರು’ `ಈ ನೆಲ-ಈ ಜಲ’ `ಅರಿವು’ `ಜೀತಪದ್ದತಿ’ `ಭಾವೈಕ್ಯತೆ’ `ಚುನಾವಣೆ’ `ಏಡ್ಸ್’ `ಫಲ್ಸ್ ಫೋಲಿಯೋ’ `ಓ ಮತದಾರ ಪ್ರಭುವೆ’ `ಕೂಡಿ ಬಾಳೋಣ’ `ಮಗಳು ಮಾತನಾಡಿದಳು’ `ಅಲ್ಲೆ ಇದ್ದೋರು’ `ದೌಡ್ ಗಾಂಧಿ ದೌಡ್’ `ವಿಶ್ವರೂಪ ದರ್ಶನ’ ಹೀಗೆ ಸಾಮಾಜಿಕ ಸಮಸ್ಯೆಗಳಿಗೆ ನಾಟಕದ ಸ್ವರೂಪ ನೀಡಿ ಅದನ್ನು ಬೀದಿಗೆ ತಂದು ಜನರೆದುರು ಅಭಿನಯಿಸಿ ಗೆದ್ದಿದ್ದಾರೆ.

ವೇದಿಕೆಯ ಮುಖ್ಯವಾದ ಅಭಿವ್ಯಕ್ತಿ ಬೀದಿನಾಟಕವಾದರೂ, ರಂಗದಲ್ಲಿ ವಿಶಿಷ್ಠ ಗಮನಾರ್ಹ ನಾಟಕಗಳ ಪ್ರಯೋಗಗಳನ್ನೂ ಮಾಡಿದೆ. ಕುವೆಂಪು ಅವರ `ಧನ್ವಂತರಿ ಚಿಕಿತ್ಸೆ’ ಸಪ್ದಾರ್ ಹಷ್ಮಿಯ `ಕೆಂಪು ಹೂ’ ಲಂಕೇಶರ `ಮುಟ್ಟಿಸಿಕೊಂಡವರು’ ದೇವನೂರು ಮಹಾದೇವ ಅವರ `ಡಾಂಬರು ಬಂದುದು’ ಪರುಶುರಾಮ ಕಲಾಲರ `ಅಕ್ಕ’, ದ.ರಾ. ಬೇಂದ್ರೆಯವರ `ಕುಣಿಯೋಣ ಬಾರಾ’ ರೂಪಕ, ವಿಜ್ಞಾನಿ ಗೆಲಿಲಿಯೋ ಜೀವನ ಆಧಾರಿತ ನಾಟಕ ಹೀಗೆ ಇಂತಹ ಪ್ರಯೋಗಾತ್ಮಕ ನಾಟಕಗಳ ಪಟ್ಟಿಯೂ ದೊಡ್ಡದಿದೆ. ಇದಕ್ಕೆ ಮುಖ್ಯ ಕಾರಣ ಕರ್ನಾಟಕದ ರಂಗಭೂಮಿಯ ಬಹುಮುಖ್ಯರ ಜತೆಗಿನ ಒಡನಾಟ. ಬಿ.ವಿ.ಕಾರಂತ, ಸಿಜಿಕೆ, ಮದೇನೂರು ಸಂಗಣ್ಣ, ಬಸವರಾಜ ಮಲಶೆಟ್ಟಿ, ಸಿ.ಬಸವಲಿಂಗಯ್ಯ, ಶಶಿಧರ ಅಡಪ, ಪ್ರಸನ್ನ, ಮರಿಯಮ್ಮನಹಳ್ಳಿ ಕೆ. ನಾಗರತ್ನಮ್ಮ, ವಿಜಯಾ ಮೊದಲಾದ ರಂಗಕರ್ಮಿಗಳ ಒಡನಾಟವನ್ನು ಪಡೆದಿದೆ. ಅವರೆಲ್ಲರ ಸಲಹೆ ಸೂಚನೆಗಳಿಗೂ ವೇದಿಕೆ ಕಿವಿಗೊಟ್ಟಿದೆ.

ಇದನ್ನು ಓದಿ: 20ನೆ ಶತಮಾನದ ಭಾರತದ ಮುಸ್ಲಿಂ ಮಹಿಳೆಯರ ಅನನ್ಯ ಸಾಧನೆಗಳು

ಅಂತೆಯೇ ನಾನಾಸಂ, ಶಿವಸಂಚಾರ, ರಂಗಾಯಣ ಮುಂತಾದ ನಾಟಕ ಸಂಸ್ಥೆಗಳ ಜತೆಗೂ ಅನೋನ್ಯ ಸಂಬಂಧವಿಟ್ಟುಕೊಂಡಿದೆ. ಭಾವೈಕ್ಯತಾ ವೇದಿಕೆಯ ಮತ್ತೊಂದು ಮುಖ್ಯ ಗುರುತೆಂದರೆ, ಮಕ್ಕಳ ರಂಗಭೂಮಿ. ಮಕ್ಕಳ ಮನೋವಿಕಾಸವನ್ನು ರೂಪಿಸುವ ಮೂಲಕ ಅವರನ್ನು ಆರೋಗ್ಯಕರ ಪ್ರಜೆಯನ್ನಾಗಿಸುವ ಗುರುತರವಾದ ಜವಾಬ್ದಾರಿಯನ್ನು ವೇದಿಕೆ ಸದಾ ನಿರ್ವಹಿಸಿಕೊಂಡು ಬಂದಿದೆ. ಅರ್ಧಕ್ಕೆ ಓದು ನಿಲ್ಲಿಸಿದ ಬಡವರ ಮನೆ ಮಕ್ಕಳು, ಚಿಂದಿ ಆಯುವ ಮಕ್ಕಳು, ಜಾತಿ, ಧರ್ಮದ ಭೇದ ತೊರೆದ ಮಕ್ಕಳಿವರು. ಅವರೆಲ್ಲ ಕೊಳಗೇರಿಯಲ್ಲಿ ಅರಳಿದ ಹೂವಿನಂಥವರು. ಸ್ಕೂಲಿಗೆ ಹೋಗಲು ಪಡಿಪಾಟಲು ಪಡುವಂಥಹ ಈ ಮಕ್ಕಳಿಗೆ ವೇದಿಕೆ ತಾಯಿಯಾಗಿ ಸಾಂತ್ವಾನ ನೀಡುತ್ತದೆ. ಅವರನ್ನೆಲ್ಲ ಕಿನ್ನರಲೋಕಕ್ಕೆ ಕರೆದೊಯ್ದು ಬದುಕಿನ ಕಷ್ಟಗಳನ್ನು ಕೆಲದಿನಗಳಾದರೂ ಮರೆಸುತ್ತದೆ.

ಅಬ್ದುಲ್ ಅವರ ಜತೆ ನಿಂತು ಭಾವೈಕ್ಯತಾ ವೇದಿಕೆಯನ್ನು ರೂಪಿಸಿದವರು ಹಲವರು. ಆರಂಭಕ್ಕೆ ಜಂಬಯ್ಯ ನಾಯಕ, ಕಲ್ಲಂಭಟ್ಟ, ಪರುಶುರಾಮ ಕಲಾಲ ಮೊದಲಾದ ಹಿರಿಯ ಸಂಗಾತಿಗಳು ಜೊತೆಯಾದರೆ, ನಂತರದಲ್ಲಿ ಕಿರಿಯರು ಮಕ್ಕಳು ವೇದಿಕೆಯ ಭಾಗವಾಗತೊಡಗಿದರು. ಕೆಲವೊಮ್ಮೆ ಅಬ್ದುಲ್ ಅವರ ಇಡೀ ಕುಟುಂಬವೇ ರಂಗಭೂಮಿಯಲ್ಲಿ ಸಕ್ರಿಯವಾಗಿದೆ. ಹೀಗೆ ಮುಸ್ಲೀಂ ಧರ್ಮದ ಒಂದು ಪಂಗಡವಾದ ಪಿಂಜಾರ ಸಮುದಾಯದ ಇಡೀ ಕುಟುಂಬವೇ ರಂಗದ ಮೇಲೆ ಕಾಣಿಸಿಕೊಳ್ಳುವುದು ಕೂಡ ವಿಶಿಷ್ಠ ಸಂಗತಿಯಾಗಿದೆ.
ಹೀಗೆ ಬಿಸಿಲನಾಡು ಬಳ್ಳಾರಿಯಲ್ಲಿ ಬೆಳದಿಂಗಳಂತೆ ರೂಪುಗೊಂಡ ಭಾವೈಕ್ಯತಾ ವೇದಿಕೆ. ಹತ್ತಾರು ಹೊಸ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ. ಅಂತೆಯೇ ರಂಗಭೂಮಿಯನ್ನು ಜನಸಾಮಾನ್ಯರ ಕಡುಕಷ್ಟಗಳ ಒಳಗಿಂದಲೂ ತರಬಹುದೆಂಬ ಆತ್ಮವಿಶ್ವಾಸವನ್ನು ಮೂಡಿಸಿದೆ. ಕೋಮು ಸೌಹಾರ್ಧತೆಯನ್ನು ತರುವ ಕಾಣಕ್ಕೆ ಹುಟ್ಟಿಕೊಂಡ ಈ ವೇದಿಕೆ ಮತ್ತೆ ಸೌಹಾರ್ಧ ಕದಡುತ್ತಿರುವ ಈ ಹೊತ್ತಲ್ಲಿ ಮೂಲ ಆಶಯಕ್ಕೆ ಮರಳಬೇಕಿದೆ. ಅಂತೆಯೇ ರಂಗಭೂಮಿಯ ಮೇಲೆ ಸೌಹಾರ್ಧದ ಕಥನಗಳಿಗೆ ಜೀವತುಂಬಬೇಕಿದೆ. ದಣಿವರಿಯದ ರಂಗಕರ್ಮಿ ಪಿ.ಅಬ್ದುಲ್ ಅವರ ಕನಸಿನ ಈ ವೇದಿಕೆ ಮತ್ತಷ್ಟು ರೆಕ್ಕೆಗಳನ್ನು ಹೊಂದಿ ಹಾರಬೇಕಿದೆ. ಜನಪದ ರಂಗಭೂಮಿಗೆ ಹೊಸ ಚೈತನ್ಯ ತುಂಬುವ ಪ್ರಯೋಗಶೀಲತೆಗೂ ಮತ್ತಷ್ಟು ತನ್ನನ್ನು ತೆರೆದುಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...