Homeಕರ್ನಾಟಕಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ದೇವೇಗೌಡರ ಮುದ್ರೆ!

ಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ದೇವೇಗೌಡರ ಮುದ್ರೆ!

- Advertisement -
- Advertisement -

| ನೀಲಗಾರ |

ಕಳೆದ ವಾರ ‘ಆಗಿಯೇಬಿಟ್ಟಿತಾ ಜೆಡಿಎಸ್-ಬಿಜೆಪಿ ಮೈತ್ರಿ?’ ಎಂಬ ವರದಿ ನಮ್ಮಲ್ಲಿ ಪ್ರಕಟವಾಗಿತ್ತು. ಮೇಲ್ನೋಟಕ್ಕೆ ಕುಮಾರಸ್ವಾಮಿಯವರ ಸಿದ್ಧಾಂತಹೀನ ದುಡುಕಿನ ಹೇಳಿಕೆಯಂತೆ ಕಂಡಿದ್ದ ಬೆಂಬಲದ ಹೇಳಿಕೆಯ ಹಿಂದೆ ಸ್ಪಷ್ಟ ಲೆಕ್ಕಾಚಾರವಿತ್ತು. ಸಿದ್ಧಾಂತಕ್ಕೂ ಅವರಿಗೂ ಸಂಬಂಧ ಹೇಗೂ ಇರಲಿಲ್ಲ. ಆದರೆ ಜೆಡಿಎಸ್‌ನ ಅಸ್ತಿತ್ವವೇ ಅಲುಗಾಡುತ್ತಿದೆ ಎಂಬುದನ್ನು ವಿವರಿಸುವ ನಾಲ್ಕು ಅಂಶಗಳನ್ನು ಆ ವರದಿಯಲ್ಲಿ ಬರೆಯಲಾಗಿತ್ತು.

ಇದೀಗ ದೇವೇಗೌಡರು ಒಂದು ಹೆಜ್ಜೆ ಮುಂದೆ ಹೋಗಿ, ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಅಭಯವನ್ನು ನೀಡಿದ್ದಾರೆ. ಬಹಳ ನಾಜೂಕಿನಿಂದ ಅದಕ್ಕೆ ಬೇಕಾದ ಸಮರ್ಥನೆಯನ್ನೂ ಕೊಡುವ ಪ್ರಯತ್ನ ಮಾಡಿದ್ದಾರೆ. ‘ಸಿದ್ದರಾಮಯ್ಯ ಅಹಿಂದ ನಾಯಕ. ನಾನು ಯಾವ ಹಿಂದ ನಾಯಕನೋ ಗೊತ್ತಿಲ್ಲ. ಅವರು ಬೇಕಾದರೆ ಇನ್ನೊಂದು ಚುನಾವಣೆ ಬರಲಿ ಎಂತಲೂ ಹೇಳಬಹುದು. ನಾನು ಅಷ್ಟು ಶಕ್ತನಲ್ಲ. ಹಾಗಾಗಿ ಚುನಾವಣೆ ಬರುವುದು ಬೇಡ’ ಎಂದಿದ್ದಾರೆ. ದೇವೇಗೌಡರು ಖುದ್ದಾಗಿ ಫೋನ್ ಮಾಡಿ ಯಡಿಯೂರಪ್ಪನವರ ಹತ್ತಿರ ಮಾತಾಡಿದ್ದಾರೆ ಎಂತಲೂ ಹೇಳಲಾಗುತ್ತಿದೆ.

ಕಳೆದ ವಾರವೇ ಹೇಳಿದ್ದಂತೆ ಹಲವು ಶಾಸಕರು ಬಿಜೆಪಿಯ ಕಡೆಗೆ ಒಲವು ತೋರಿಸಿರುವುದು ಸ್ಪಷ್ಟವಿತ್ತು ಮತ್ತು ಬಿಜೆಪಿಯು ಘಾತುಕತನದಿಂದ ಇನ್ನಷ್ಟು ಜನರನ್ನು ಸೆಳೆದುಕೊಳ್ಳುವುದೂ ಕಷ್ಟವಿರಲಿಲ್ಲ. ಈ ವಾರದ ಬೆಳವಣಿಗೆ ಎಂದರೆ ಜೆಡಿಎಸ್‌ನ ವಿಧಾನಪರಿಷತ್ತಿನ ಸದಸ್ಯರು ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ಸೇರಿದಂತೆ ಹಲವರು ಸಭೆಯೊಂದನ್ನು ನಡೆಸಿದರು ಮತ್ತು ರೆಸಾರ್ಟ್ವೊಂದಕ್ಕೆ ಜೊತೆಗೂಡಿ ಹೋಗುವ ಕುರಿತೂ ಚರ್ಚಿಸಿದರು. ಶಾಸಕರ ಅಸಮಾಧಾನ ತಣಿಸಲು ದೇವೇಗೌಡರು ಸಭೆ ಕರೆದರೆ, ಕುಮಾರಸ್ವಾಮಿ ಲಂಡನ್ ವಿಮಾನ ಹತ್ತಿದ್ದರು. ಇಂತಹ ಹಲವು ಸಂದರ್ಭಗಳಲ್ಲಿ ತಂದೆ, ಮಗ ಏನೋ ಭಿನ್ನ ನಿಲುವು ತಳೆದಂತೆ ಮಾಡುವುದು, ಸಭೆಯಲ್ಲಿ ತನ್ನ ಅಸಹಾಯಕತೆಯನ್ನು ತಂದೆ ಮಗನ ಮೇಲೆ ಅಥವಾ ಮಗ ತಂದೆಯ ಮೇಲೆ ಹಾಕುವುದು ಇವೆಲ್ಲವೂ ಸಂದಿಗ್ಧವನ್ನು ಮ್ಯಾನೇಜ್ ಮಾಡುವ ಗೌಡರ ಕುಟುಂಬದ ವಿಧಾನಗಳಲ್ಲಿ ಒಂದು. ಆದರೆ, ಅಂತಿಮವಾಗಿ ಇಬ್ಬರೂ ಒಂದೇ ನಿಲುವಿಗೆ ಬಂದಿರುತ್ತಾರೆ. ಇದರಲ್ಲಿ ನಿಜಕ್ಕೂ ದೊಡ್ಡಗೌಡರು ಮತ್ತು ಎಚ್‌ಡಿಕೆ ನಡುವಿನ ಅಭಿಪ್ರಾಯಬೇಧವೂ ಕೆಲಸ ಮಾಡದಿರುವುದಿಲ್ಲ. ಆದರೆ ಅದನ್ನೇ ಭಿನ್ನಮತ ನಿಭಾಯಿಸುವ ಅಸ್ತ್ರವಾಗಿ ಬಳಸುವ ಚಾಕಚಕ್ಯತೆ ಅವರಿಗೆ ಸಿದ್ಧಿಸಿದೆ.

ಈಗಲೂ ಅದೇ ಆಗಿದೆ. ಎಚ್‌ಡಿಕೆ ಹೇಳಿದ್ದನ್ನೇ ಗೌಡರೂ ಹೇಳಿದ್ದಾರೆ. ಕಾರಣಗಳನ್ನು ಅವರ ರೀತಿಯಲ್ಲಿ ಅವರೂ, ಇವರ ರೀತಿಯಲ್ಲಿ ಇವರೂ ಹೇಳಿದ್ದಾರಷ್ಟೇ. ‘ಸಿದ್ದರಾಮಯ್ಯರಿಂದಲೇ ಮೈತ್ರಿ ಸರ್ಕಾರ ಬಿದ್ದಿತು ಎಂದು ನನಗೆ ಈಗ ಮನವರಿಕೆಯಾಗಿದೆ’ ಎಂದು ದೊಡ್ಡ ಗೌಡರು ಇಂದು ಹೇಳಿದ್ದಾರೆ. ಅಂದರೆ ಇಡೀ ಕಾಂಗ್ರೆಸ್ ಪಕ್ಷಕ್ಕಿಂತ ಸಿದ್ದರಾಮಯ್ಯರನ್ನು ಗುರಿ ಮಾಡುವುದು, ಬಿಜೆಪಿಯ ಜೊತೆಗೆ ಕೈ ಜೋಡಿಸುವುದು ಮತ್ತು ಆ ಮೂಲಕ ಅಹಿಂದ ವರ್ಸಸ್ ಮೇಲ್ಜಾತಿ ಧ್ರುವೀಕರಣಕ್ಕೆ ಬೇಕಾದ ಕಥನ ಸಿದ್ಧ ಮಾಡುತ್ತಾ ಹೋಗುವುದು ಇದರ ಹಿಂದಿನ ಲೆಕ್ಕಾಚಾರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಅನ್ನು ಕೈ ಹಿಡಿದಿದ್ದು ಇದೇ ಆಗಿತ್ತು. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಇದಕ್ಕೆ ಒಂದಷ್ಟು ಧಕ್ಕೆ ಬಂದಿತ್ತು. ಈಗ ಮತ್ತೆ ಧ್ರುವೀಕರಣಕ್ಕೆ ಪ್ರಯತ್ನಿಸಿ ತಮ್ಮ ನೆಲೆ ಉಳಿಸಿಕೊಳ್ಳುವ ಯತ್ನ ಮಾಡುತ್ತಿರುವುದನ್ನು ಗೌಡರು ಇಂದು ಲೆಕ್ಕಾಚಾರ ಹಾಕಿ ಆಡಿದ ಮಾತುಗಳಲ್ಲಿ ನೋಡಬಹುದು.

ಅತ್ತ ಶರದ್‌ಪವಾರ್ ಜೊತೆಗೂ ಆಪ್ತರಾಗಿರುವ ದೇವೇಗೌಡರು ಹರಿಯಾಣ ಹಾಗೂ ಮಹಾರಾಷ್ಟ್ರಗಳಲ್ಲಿ ಅತಂತ್ರ ಪರಿಸ್ಥಿತಿ ಉಂಟಾದ ನಂತರ ಬಿಜೆಪಿಯ ಜೊತೆಗೆ ಕೈ ಜೋಡಿಸಲಾರರು ಎಂಬ ಮಾತು ಜೆಡಿಎಸ್ ವಲಯಗಳಲ್ಲಿತ್ತು. ಆದರೆ ಕರ್ನಾಟಕದ ಮಟ್ಟಿಗೆ ಜೆಡಿಎಸ್ ಪರಿಸ್ಥಿತಿ ಕಷ್ಟವಿತ್ತು. ಈಗಲೇ ಚುನಾವಣೆ ನಡೆದರೆ ಬಹಳವೇ ಕಷ್ಟವಿದೆ ಎಂಬ ದೇವೇಗೌಡರ ಮಾತು ಸುಳ್ಳಲ್ಲ. ರಾಜ್ಯಗಳ ಮಟ್ಟಿಗೆ ಏನೇ ವ್ಯತ್ಯಾಸ ಉಂಟಾದರೂ, ಕೇಂದ್ರದಲ್ಲಿ ಮೋದಿ-ಶಾರನ್ನು ಅಲುಗಾಡಿಸುವ ಶಕ್ತಿ ಸದ್ಯಕ್ಕಂತೂ ಕಾಣುತ್ತಿಲ್ಲ. ಹೀಗಾಗಿ ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎನ್ನುವಷ್ಟು ದೂರಾಲೋಚನೆ ಪಳಗಿದ ರಾಜಕಾರಣಿಗಳಿಗೆ ಇರುವುದಿಲ್ಲವೇ?

ಹೀಗಾಗಿ ಈ ಸಾರಿ ಗೌಡರು ಯಾವ ಹಿಂಜರಿಕೆಯನ್ನೂ ತೋರಿಲ್ಲ. ಹಿಂದಿನ ಸಾರಿ ಜೆಡಿಎಸ್ ಬಿಜೆಪಿ ಮೈತ್ರಿಯಾದಾಗಲಾದರೂ ‘ಕೋಮುವಾದ, ಜಾತ್ಯಾತೀತತೆ’ ಇತ್ಯಾದಿ ಮಾತುಗಳು ಅವರ ಬಾಯಿಂದ ಬಂದಿದ್ದವು. ಆದರೆ ಈ ಸಾರಿ ಕೇವಲ ಸಿದ್ದರಾಮಯ್ಯರಿಗೆ ವಿರೋಧ ಮಾತ್ರವಲ್ಲದೇ ಯಡಿಯೂರಪ್ಪನವರ ಸರ್ಕಾರಕ್ಕೆ ಅಭಯವನ್ನೂ ನೀಡುವ ಸ್ಪಷ್ಟತೆಯನ್ನೂ ಅವರು ನೀಡಿಬಿಟ್ಟಿದ್ದಾರೆ. ಅದರ ಜೊತೆ ಜೊತೆಗೇ ಮುಂದಿನ ಯೋಜನೆಯನ್ನೂ ಪ್ರಕಟಿಸಿದ್ದಾರೆ. ಅದು – ಪಕ್ಷವನ್ನು ಕಟ್ಟುವುದು. ಸೈದ್ಧಾಂತಿಕ ಅವಕಾಶವಾದಿತನದ ಬಗ್ಗೆ ಏನೇ ಟೀಕೆ ಇದ್ದರೂ ಮೆಚ್ಚಿಕೊಳ್ಳಬೇಕಾದ್ದು ಗೌಡರ ಈ ಗುಣವನ್ನು.

ಏನು ತಿಪ್ಪರಲಾಗ ಹಾಕಿದರೂ ಯಡಿಯೂರಪ್ಪನವರ ಸರ್ಕಾರವು ಪೂರ್ಣಾವಧಿ ಬಾಳಲಾರದು ಎಂಬುದು ಖಚಿತ. ಹಾಗಾಗಿ ಒಂದಷ್ಟು ಕಾಲ ಸರ್ಕಾರವನ್ನು ಉಳಿಸಿ, ಅಷ್ಟು ಅವಧಿಯನ್ನು ಮುಂದಿನ ಚುನಾವಣೆಗೆ ತಯಾರಿ ಮಾಡಿಕೊಂಡರೆ ಒಳ್ಳೆಯದು ಎಂಬ ಮುಂದಾಲೋಚನೆ ಅವರದ್ದು. ಹೇಗೂ ಮುಂದೆಯೂ ಎರಡರಲ್ಲೊಂದು ಪಕ್ಷಕ್ಕೆ ತಮ್ಮ ಜೊತೆಗೆ ಮೈತ್ರಿ ಮಾಡಿಕೊಳ್ಳಲೇಬೇಕಾದಷ್ಟು ಅನಿವಾರ್ಯತೆಯಿರುವ ಅತಂತ್ರತೆ ಉಂಟಾಗುವಷ್ಟು ಪಕ್ಷ ಬೆಳೆಸುವುದಷ್ಟೇ ಸಾಧ್ಯ. ಆ ಮಧ್ಯೆ ಮಾಡಬೇಕಿರುವುದು ಸಿದ್ದರಾಮಯ್ಯರನ್ನು ಹಣಿಯುವುದಷ್ಟೇ.

ಬಹುಶಃ ಸಿದ್ದರಾಮಯ್ಯನವರ ಬೆಳವಣಿಗೆ ಇರುವುದೂ ಯಡಿಯೂರಪ್ಪ, ದೇವೇಗೌಡ ರಾಜಕಾರಣವನ್ನು ವಿರೋಧಿಸುವುದರಲ್ಲೇ ಇರಬಹುದು. ಹಾಗಾಗಿ ಕರ್ನಾಟಕದ ರಾಜಕಾರಣವು ಮತ್ತೆ 2018ರ ಹೊತ್ತಿಗೇ ಬಂದು ನಿಂತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...