Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತಕಕ್ಕಸು ಗುಂಡೀಲಿ ತರ್ಕಾರಿ ಬ್ಯೆಳ್ಕಂಡು ತಿನ್ಕಳಿ !

ಕಕ್ಕಸು ಗುಂಡೀಲಿ ತರ್ಕಾರಿ ಬ್ಯೆಳ್ಕಂಡು ತಿನ್ಕಳಿ !

- Advertisement -
- Advertisement -

ಎಲ್ಲರಿಗೂ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ ಅಂತ. ಬನ್ನಿ ಈ ವಾರದ ಆಘಾತಕಾರಿ ಸುದ್ದಿಗಳು ಏನೇನಿವೆ ಎಂದು ಒಂಚೂರು ಬಗ್ಗಿ ನೋಡೋಣ.

ಹಾರೆಸ್ಸೆಸ್‍ಗೆ ಬಂತು ಮುಸ್ಲಿಮರ ಮೇಲೆ ಯದ್ವಾತದ್ವಾ ಲವ್ವು: ಎಲೆಕ್ಷನ್ ಟೈಮಲ್ಲಿ ಶುರುವಾಯ್ತು ಕುರಾನ್ ಮೇಲೆ ಪ್ಯಾರು..
ದಿನದ ಇಪ್ಪತ್ನಾಲ್ಕೂ ತಾಸೂ ದೇಶದ ಮುಸ್ಲಿಮರ ಮೇಲೆ ಕತ್ತಿ, ಕೊಡಲಿ, ಮಚ್ಚು, ಬ್ಲೇಡು, ಗರಗಸ ಹೀಗೆ ಕೈಗೆ ಸಿಕ್ಕಿದ್ದೆಲ್ಲವನ್ನೂ ಮಸೆದು ಕೊಯಕೊಯ ಅನ್ನುವ ಹಾರೆಸ್ಸೆಸ್ ಎಂಬ ಬ್ರಿಟಿಷರಿಗೆ ಗುಲಾಮಗಿರಿ ಮಾಡುತ್ತಿದ್ದ ಗೂಢಚಾರಿಗಳ ಸಂಸ್ಥೆಗೆ ಇದ್ದಕ್ಕಿದ್ದಂತೆ ಮುಸ್ಲಿಮರ ಮೇಲೆ ಪ್ಯಾರ್‍ಗೆ ಆಗ್ಬುಟ್ಟೈತೆ ಎಂಬ ನಸುಗುನ್ನಿ ನ್ಯೂಸೊಂದು ನಮಗೆ ಲಭ್ಯವಾಗಿದೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿರುವ ಈ ಸಂದರ್ಭದಲ್ಲಿ ಹಾರೆಸ್ಸೆಸ್ ಬುಡ್ಡಾಗಳು ಅಯೋಧ್ಯೆಯಲ್ಲಿ ಕುರಾನ್ ಪಠಣ ಮತ್ತು ನಮಾಜ್ ಪ್ರೋಗ್ರಾಂ ಹಮ್ಮಿಕೊಂಡಿದ್ದಾರೆ. ಮುಸ್ಲಿಮರ ಓಟು ನಮಗೆ ಬೇಡವೇ ಬೇಡ ಎಂದು ಈಗ ಅಬ್ಬೇಪಾರಿ ಪರಿಸ್ಥಿತಿಗೆ ತಲುಪಿರುವ ಹಾರೆಸ್ಸೆಸ್.. ಇದೀಗ ಸಾಬರ ಗಡ್ಡಕ್ಕೆ ಕೊಬ್ರಿ ಎಣ್ಣೆ ಸವರಿ ‘ಗಡ್ಡ ಎಳೀತೀವಿ ಮಿಠಾಯಿ ಕೊಡಿ’ ಎಂದು ಗಡ್ಡ ನೀವಲು ಹೊರಟಿರುವುದು ನಿಜಕ್ಕೂ ಅವರು ತಲುಪಿರುವ ದರ್ವೇಸಿ ಗತಿಗೆ ಸಾಕ್ಷಿಯಾಗಿದೆಯೆಂದು ತಿಳಿದು ಬಂದಿದೆ.
.                                       *****
ಅಚ್ಛೇದಿನ್ ಕೊಡ್ತೀವಿ ಅಂತ ಜನರ ಓಟು ತಗೊಂಡ್ರು; ಟಾಯ್ಲೆಟ್ ಗೊಬ್ಬರದಲ್ಲಿ ಬೆಳೆದ ತರಕಾರಿ ತಿನ್ನಿ ಅಂದ್ರು
ಬಾಲಿವುಡ್ ಚಿತ್ರರಂಗದ ಒನ್ & ಓನ್ಲಿ ಕೆನಡಾ ಮೂಲದ ದೇಶಭಕ್ತ ನಟ ಅಕ್ಷಯ್‍ಕುಮಾರ್ ಕಡೆಯಿಂದ ಸುದ್ದಿಯೊಂದು ಎಗರಿ ಬಂದಿದೆ. ಅತ್ಯುತ್ತಮ ಗುಣಮಟ್ಟದ ತರಕಾರಿಗಳು ಮತ್ತು ಉತ್ಕøಷ್ಟ ರುಚಿಗಾಗಿ ನಿಮ್ಮ ಮನೆಯ ಕಕ್ಕಸ್ಸುಗುಂಡಿಯ ಗೊಬ್ಬರದಲ್ಲಿ ನೀವೇ ತರಕಾರಿ ಬೆಳೆದು ಚಪ್ಪರಿಸಿಕೊಂಡು ತಿನ್ನಿರೆಂದು ಅಕ್ಷಯ್ ಕುಮಾರ್ ಕೇಂದ್ರ ಸರ್ಕಾರದ ಜಾಹೀರಾತಿನಲ್ಲಿ ಹೇಳಿ ಕಾಸೆತ್ತಿಕೊಂಡು ಹೋಗಿದ್ದಾರೆ. ಅಧಿಕಾರಕ್ಕೆ ಬಂದ್ರೆ ನಿಮ್ಮ ಶರ್ಟು ಜೇಬಿನೊಳಕ್ಕೆ ಸ್ವರ್ಗವನ್ನೇ ಪ್ಯಾಕ್ ಮಾಡಿ ಇಡ್ತೀವಿ ಅಂತ ಬೊಗಳಿದ್ದ ದ್ವೇಷಭಕ್ತರ ಕಮಲ ಪಕ್ಷದವರು ಕೊನೆಗೆ ನಿಮ್ಮದೇ ಸ್ವಂತದೇ ಮಲದ ಗೊಬ್ಬರದಲ್ಲಿ ನಿಮಗಿಷ್ಟ ಬಂದ ತರಕಾರಿ ಬೆಳೆದುಕೊಂಡು ಚಪ್ಪರಿಸಿಕೊಂಡು ತಿನ್ನಿ ಎನ್ನುತ್ತಿದ್ದಾರೆ, ಇದಕ್ಕೆ ಅಕ್ಷಯ್‍ಕುಮಾರ್‍ನಂತಹ ಗುಲಾಮರ ಗುಲಾಮನು ಜಾಹಿರಾತಿನಲ್ಲಿ ನಟಿಸಿ ನಾನೂ ಮನುಷ್ಯರ ಮಲದಲ್ಲಿ ಬೆಳೆದ ತರಕಾರಿ ತಿನ್ನುತ್ತೇನೆಂದು ಎದೆ ತಟ್ಟಿಕೊಂಡು ಹೇಳಿರುವುದು ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾಗಿದೆ.
.                                       *****
ಹಾಫ್‍ಮೆಂಟ್ಲು ಆದಿತ್ಯನಾಥ ಬಿತ್ತು ಫುಲ್‍ಮೆಂಟ್ಲು ಡ್ರೀಮ್ ಪ್ಯಾಕೇಜು: 2000 ವರ್ಷದ ಹಿಂದೆ ಇಂಡಿಯಾಗು ಕೊರಿಯಾಗು ಆಯ್ತಂತೆ ಮ್ಯಾರೇಜು
ಯುಪಿ ರಾಜ್ಯದಲ್ಲಿ ಕಂಡಕಂಡ ಟಾಯ್ಲೆಟ್ಟುಗಳಿಗೆಲ್ಲ ಕೇಸರಿ ಬಣ್ಣ ಹೊಡೆದುಕೊಂಡು ಆರಾಮಾಗಿ ಓಡಾಡುತ್ತಿರುವ ಅಲ್ಲಿನ ಸನ್ಯಾಸಿ ಸಿಎಂ ಯೋಗಿ ಹಾದಿತ್ಯನಾಥ ಅಲಿಯಾಸ್ ಅಜಯ್‍ಸಿಂಗ್ ಭಿಷ್ಟ್ ಎಂಬ ತಲೆತಿಕ್ಕಲು ಐಲು ಗಿರಾಕಿಯ ತಲೆಯಲ್ಲಿರುವ ನಟ್ಟು ಬೋಲ್ಟುಗಳೆಲ್ಲ ತೊಪತೊಪನೆ ಉದುರಿ ಹೋಗಿರುವ ವರ್ತಮಾನ ಇದೀಗತಾನೇ ಲಭ್ಯವಾಗಿದೆ. ಜನರ ಬದುಕನ್ನು ಹಸನು ಮಾಡು ಪುಣ್ಯದ ಕೆಲಸವೊಂದನ್ನು ಬಿಟ್ಟು ಮಿಕ್ಕೆಲ್ಲ ಕೋತಿಚೇಷ್ಟೆ ಮಾಡಿಕೊಂಡು ತಿರುಗುತ್ತಿರುವ ಈ ಬೋಳುಮಂಡೆ ಸೋಂಬೇರಿ ಸಿಎಂ ಇತ್ತೀಚೆಗಷ್ಟೇ ಒಂದು ಬ್ರೈನ್‍ಲೆಸ್ ಹೇಳಿಕೆಯೊಂದನ್ನು ಕೊಟ್ಟು ನಗೆಪಾಟಲಿಗೆ ಈಡಾಗಿದೆ. ಅಯೋಧ್ಯೆಯ ರಾಜಕುಮಾರಿಯನ್ನು 2 ಸಾವಿರ ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ರಾಜಕುಮಾರನಿಗೆ ಕೊಟ್ಟು ಮದುವೆ ಮಾಡಲಾಗಿತ್ತು ಎಂದಿದ್ದಾನೆÀ ಯುಪಿ ರಾಜ್ಯದ ಸನ್ಯಾಸಿ ಸಿಎಂ, ಈ ಬಗ್ಗೆ ಅಧಿಕೃತ ಮಾಹಿತಿ ಎಲ್ಲಿಂದ ಲಭಿಸಿತು? ಆವಾಗ ನೀವು ಯಾವ ಕುದುರೆಲಾಯದಲ್ಲಿ ಲಂಗೋಟಿ ಹಾಕ್ಕೊಂಡು ಸೆಗಣಿ ಎತ್ತುತ್ತ ಇದನ್ನೆಲ್ಲ ಗಮನಿಸಿದಿರಿ.. ಎಂಬ ಪತ್ರಕರ್ತರ ಪ್ರಶ್ನೆಗೆ ತೀವ್ರವಾಗಿ ಬೇಜಾರು ಮಾಡಿಕೊಂಡ ಈ ಕೆಪರಗೇಡಿಯು, ಪ್ರಶ್ನೆ ಕೇಳಿದ ಟಿವಿ ಚಾನೆಲ್‍ನ ಮೈಕನ್ನು ಕೈಗೆತ್ತಿಕೊಂಡು ತನ್ನ ಬಾಣಲಿತಲೆಗೆ ¥sಟ್ ಫಟ್ ಫಟ್ ಎಂದು ಹೊಡೆದುಕೊಂಡು ತಮ್ಮ ಅಸಮಾಧಾನವನ್ನು ಹೊರಹಾಕಿಲ್ಲವೆಂದು ತಿಳಿದುಬಂದಿದೆ.
.                                       *****
ಸನಾತನಿ ಸಂಘಿ-ಮಂಕಿಗಳ ಭ್ರಮೆಯ ರೋಗವಾಯ್ತು ವಿಪರೀತ: ಲಂಗೋಟಿಗೆ ಬಿದ್ದ ಬೆಂಕಿಗೆ ಮಾಡ್ತಿದ್ದಾರೆ ತೋಂ ತಕಿಟ ತಕಧಿಮಿತ
ಇತ್ತೀಚೆಗೆ ಯಾರ ಕಣ್ಣಿಗೂ ಕಾಣದ್ದೆಲ್ಲ ಭ್ರಮೆಯಲ್ಲೇ ನುಗುರುಕೊಂಡು ಓಡಾಡುವ ಸಂಘಿ ಮಂಕಿಗಳಿಗೆ ಕಾಣುತ್ತಿರುವುದು ಆಶ್ಚರ್ಯದ ವಿಷಯವೇ ಸರಿ. ದನದ ಮೂತ್ರದಲ್ಲಿ ಜಗತ್ತಿನ ಎಲ್ಲ ಕಾಯಿಲೆಗಳಿಗೂ ಔಷಧಿ ಕಂಡುಹಿಡಿದ ಈ ಇಂಕಿ ಮಂಕಿ ಪಾಂಕಿಗಳು ಇದೀಗ ತಮ್ಮ ಎಂಜಲುಕಾಸಿನ ದೊರೆ ಅಂಬಾನಿಯು ಇನ್ನೂ ಸ್ಥಾಪಿಸದೇ ಇರುವ ಸಂಸ್ಥೆಯೊಂದು ಕಂಡುಬಿಟ್ಟಿದೆಯಂತೆ. ‘ಜಿಯೋ ಇನ್ಸ್‍ಟಿಟ್ಯೂಟ್’ ಎಂಬ ಅಸ್ತಿತ್ವದಲ್ಲೇ ಇಲ್ಲದ ಅಂಬಾನಿಯ ಸಂಸ್ಥೆಯು ದೇಶದ ಅತ್ಯುತ್ತಮ ಸಂಸ್ಥೆಗಳಲ್ಲೊಂದು ಎಂದು ತಮ್ಮ ಗುಲಾಮಿ ಸರ್ಕಾರದ ಮೂಲದ ಘೋಷಿಸಿರುವ ಈ ಸಾಂಪ್ ಸಂಘಿಗಳು ಈ ಮೂಲಕ ತಾವು ಹ್ಯಾಲೂಸಿನೇಷನ್ ರೋಗದಿಂದ ನರಳಾಡಿ ಹುಳ ಬಿದ್ದು ಒದ್ದಾಡುತ್ತಿದ್ದೇವೆಂದು ಘಂಟಾಘೋಷವಾಗಿ ಸಾರಿಬಿಟ್ಟಿದ್ದಾರೆÉ. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಸಂಘಿಗಳ ಮಾನಸಿಕ ಅಸ್ವಸ್ಥತೆಯ ಮೇಲೆ ಮುಗಿಬಿದ್ದ ಅಷ್ಟಿಷ್ಟು ಮಾಧ್ಯಮಗಳು ಸಂಘಿಗಳ ಲಂಗೋಟಿಗೆ ಸೀಮೆಎಣ್ಣೆ ಎರಚಿ ಕಡ್ಡಿ ಗೀರಿದ್ದಾರೆಂದು, ಉರಿ ತಡೆಯಲಾಗದೆ ಸಂಘಿ-ಮಂಕಿಗಳು ಲಡಕಾಸಿ ನೃತ್ಯ ಮಾಡುತ್ತ ಉರಿ ಶಮನ ಮಾಡಿಕೊಳ್ಳುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
.                                       *****

ಹೆಡ್ಡಪ್ಪನ ಮರೆಗುಳಿ ಅಧ್ವಾನಗಳಿಗೆ ಸ್ಕೋಪಕ್ಕ ಆದ್ರು ಕಕ್ಕಾಬಿಕ್ಕಿ: ಇವರಿಗೆ ಕೊಡೋದು ಅವ್ರಿಗೆ, ಅವ್ರಿಗೆ ಕೊಡೋದು ಇವ್ರಿಗೆ..
ಹತ್ತನ್ನೆರಡು ವರ್ಷಗಳ ಹಿಂದೆ 38 ಎಮ್ಮೆಲ್ಲೆಗಳನ್ನು ಹೊಂದಿದ್ದ ಕುಮಾರಣ್ಣನನ್ನು ಸಿಎಂ ಮಾಡಿ ಅಪ್ಪಿ ಮುದ್ದಾಡಿ ಲೊಚಲೊಚನೆ ಕಿಸ್ಸು ಕೊಟ್ಟಿದ್ದ ಕರ್ನಾಟಕ ಕಮಲ ಪಕ್ಷದವರು ಇದೀಗ, ಅದೇ ರೀತಿ ಕಾಂಗ್ರೆಸ್ ಕುಮಾರಣ್ಣನನ್ನು ಸಿಎಂ ಮಾಡಿರುವುದಕ್ಕೆ ಚಡ್ಡಿಯೊಳಗೆ ಓತಿಕ್ಯಾತ ಹೊಕ್ಕಂತೆ ಆಡುತ್ತಿರುವುದು ಬಯಲಾಗಿದೆ. ಸತ್ಯಹರಿಶ್ಚಂದ್ರ ದೇವರಪಾದ ಸೇರಿದ ಮೇಲೆ ಮತ್ತೆ ಶಿಕಾರಿಪುರದಲ್ಲಿ ರೈಸ್ ಮಿಲ್ ರೈಟರಾಗಿ ಮರುಜನ್ಮ ಪಡೆದು ಹುಟ್ಟಿರೋದೇ ನಾನು ಎಂಬಂತೆ ನೈತಿಕತೆಯ ಭಾಷಣ ಬೊಗಳುತ್ತಿರುವ ಹೆಡ್ಯೂರಪ್ಪನಿಗೆ ತನ್ನ ಹಳೆಯ ಬ್ಲಾಕಂಡ್ ವೈಟ್ ಡ್ರಾಮಾಗಳು ನೆನಪಾಗದಿರುವುದಕ್ಕೆ ನಿವೃತ್ತ ಕುಮಾರಿ ಸ್ಕೋಪಕ್ಕನಿಗೆ ಶ್ಯಾನೆ ಬೇಜಾರಾಗಿದೆಯಂತೆ. ಹಳೆಯದೆಲ್ಲವನ್ನೂ ಮರೆತು ಇನ್ನೇನೋ ಹೊಸ ಅಧ್ವಾನ ಮಾಡಿ ಮಾಡಿ ಎಲ್ರಿಂದಲೂ ಬೈಸಿಕೊಳ್ಳುವ ಹೆಡ್ಯೂರಪ್ಪ.. ಮನೆಯಲ್ಲಿ ಡ್ರೈವರನ್ನು ಸ್ಕೋಪÀಕ್ಕನೆಂದೂ, ಸ್ಕೋಪಕ್ಕನನ್ನು ಡ್ರೈವರೆಂದು ಕನ್ ಫ್ಯೂಸು ಮಾಡಿಕೊಂಡು ಇವರಿಗೆ ಕೊಡೋದನ್ನ ಅವರಿಗೆ ಕೊಟ್ಟು, ಅವರಿಗೆ ಕೊಡೋದನ್ನ ಇವರಿಗೆ ಕೊಟ್ಟು ಎಡವಟ್ಟಿನ ಮೇಲೆ ಎಡವಟ್ಟು ಮಾಡ್ತಿರುವುದು ಸ್ಕೋಪಕ್ಕನ ಚಿಂತೆಗೆ ಕಾರಣವಾಗಿದೆಯಂತೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ಮುಂದಿನವಾರ ಇಂಥಹದೇ ಅನಾಹುತಕಾರಿ ಸುದ್ದಿಗಳೊಡನೆ ನಿಮಗೆ ಸಿಗುತ್ತೇನೆ. ಅಲ್ಲೀತನಕ ಸಲಾಂ ನಮಸ್ತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....