Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತಕಕ್ಕಸು ಗುಂಡೀಲಿ ತರ್ಕಾರಿ ಬ್ಯೆಳ್ಕಂಡು ತಿನ್ಕಳಿ !

ಕಕ್ಕಸು ಗುಂಡೀಲಿ ತರ್ಕಾರಿ ಬ್ಯೆಳ್ಕಂಡು ತಿನ್ಕಳಿ !

- Advertisement -
- Advertisement -

ಎಲ್ಲರಿಗೂ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ ಅಂತ. ಬನ್ನಿ ಈ ವಾರದ ಆಘಾತಕಾರಿ ಸುದ್ದಿಗಳು ಏನೇನಿವೆ ಎಂದು ಒಂಚೂರು ಬಗ್ಗಿ ನೋಡೋಣ.

ಹಾರೆಸ್ಸೆಸ್‍ಗೆ ಬಂತು ಮುಸ್ಲಿಮರ ಮೇಲೆ ಯದ್ವಾತದ್ವಾ ಲವ್ವು: ಎಲೆಕ್ಷನ್ ಟೈಮಲ್ಲಿ ಶುರುವಾಯ್ತು ಕುರಾನ್ ಮೇಲೆ ಪ್ಯಾರು..
ದಿನದ ಇಪ್ಪತ್ನಾಲ್ಕೂ ತಾಸೂ ದೇಶದ ಮುಸ್ಲಿಮರ ಮೇಲೆ ಕತ್ತಿ, ಕೊಡಲಿ, ಮಚ್ಚು, ಬ್ಲೇಡು, ಗರಗಸ ಹೀಗೆ ಕೈಗೆ ಸಿಕ್ಕಿದ್ದೆಲ್ಲವನ್ನೂ ಮಸೆದು ಕೊಯಕೊಯ ಅನ್ನುವ ಹಾರೆಸ್ಸೆಸ್ ಎಂಬ ಬ್ರಿಟಿಷರಿಗೆ ಗುಲಾಮಗಿರಿ ಮಾಡುತ್ತಿದ್ದ ಗೂಢಚಾರಿಗಳ ಸಂಸ್ಥೆಗೆ ಇದ್ದಕ್ಕಿದ್ದಂತೆ ಮುಸ್ಲಿಮರ ಮೇಲೆ ಪ್ಯಾರ್‍ಗೆ ಆಗ್ಬುಟ್ಟೈತೆ ಎಂಬ ನಸುಗುನ್ನಿ ನ್ಯೂಸೊಂದು ನಮಗೆ ಲಭ್ಯವಾಗಿದೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿರುವ ಈ ಸಂದರ್ಭದಲ್ಲಿ ಹಾರೆಸ್ಸೆಸ್ ಬುಡ್ಡಾಗಳು ಅಯೋಧ್ಯೆಯಲ್ಲಿ ಕುರಾನ್ ಪಠಣ ಮತ್ತು ನಮಾಜ್ ಪ್ರೋಗ್ರಾಂ ಹಮ್ಮಿಕೊಂಡಿದ್ದಾರೆ. ಮುಸ್ಲಿಮರ ಓಟು ನಮಗೆ ಬೇಡವೇ ಬೇಡ ಎಂದು ಈಗ ಅಬ್ಬೇಪಾರಿ ಪರಿಸ್ಥಿತಿಗೆ ತಲುಪಿರುವ ಹಾರೆಸ್ಸೆಸ್.. ಇದೀಗ ಸಾಬರ ಗಡ್ಡಕ್ಕೆ ಕೊಬ್ರಿ ಎಣ್ಣೆ ಸವರಿ ‘ಗಡ್ಡ ಎಳೀತೀವಿ ಮಿಠಾಯಿ ಕೊಡಿ’ ಎಂದು ಗಡ್ಡ ನೀವಲು ಹೊರಟಿರುವುದು ನಿಜಕ್ಕೂ ಅವರು ತಲುಪಿರುವ ದರ್ವೇಸಿ ಗತಿಗೆ ಸಾಕ್ಷಿಯಾಗಿದೆಯೆಂದು ತಿಳಿದು ಬಂದಿದೆ.
.                                       *****
ಅಚ್ಛೇದಿನ್ ಕೊಡ್ತೀವಿ ಅಂತ ಜನರ ಓಟು ತಗೊಂಡ್ರು; ಟಾಯ್ಲೆಟ್ ಗೊಬ್ಬರದಲ್ಲಿ ಬೆಳೆದ ತರಕಾರಿ ತಿನ್ನಿ ಅಂದ್ರು
ಬಾಲಿವುಡ್ ಚಿತ್ರರಂಗದ ಒನ್ & ಓನ್ಲಿ ಕೆನಡಾ ಮೂಲದ ದೇಶಭಕ್ತ ನಟ ಅಕ್ಷಯ್‍ಕುಮಾರ್ ಕಡೆಯಿಂದ ಸುದ್ದಿಯೊಂದು ಎಗರಿ ಬಂದಿದೆ. ಅತ್ಯುತ್ತಮ ಗುಣಮಟ್ಟದ ತರಕಾರಿಗಳು ಮತ್ತು ಉತ್ಕøಷ್ಟ ರುಚಿಗಾಗಿ ನಿಮ್ಮ ಮನೆಯ ಕಕ್ಕಸ್ಸುಗುಂಡಿಯ ಗೊಬ್ಬರದಲ್ಲಿ ನೀವೇ ತರಕಾರಿ ಬೆಳೆದು ಚಪ್ಪರಿಸಿಕೊಂಡು ತಿನ್ನಿರೆಂದು ಅಕ್ಷಯ್ ಕುಮಾರ್ ಕೇಂದ್ರ ಸರ್ಕಾರದ ಜಾಹೀರಾತಿನಲ್ಲಿ ಹೇಳಿ ಕಾಸೆತ್ತಿಕೊಂಡು ಹೋಗಿದ್ದಾರೆ. ಅಧಿಕಾರಕ್ಕೆ ಬಂದ್ರೆ ನಿಮ್ಮ ಶರ್ಟು ಜೇಬಿನೊಳಕ್ಕೆ ಸ್ವರ್ಗವನ್ನೇ ಪ್ಯಾಕ್ ಮಾಡಿ ಇಡ್ತೀವಿ ಅಂತ ಬೊಗಳಿದ್ದ ದ್ವೇಷಭಕ್ತರ ಕಮಲ ಪಕ್ಷದವರು ಕೊನೆಗೆ ನಿಮ್ಮದೇ ಸ್ವಂತದೇ ಮಲದ ಗೊಬ್ಬರದಲ್ಲಿ ನಿಮಗಿಷ್ಟ ಬಂದ ತರಕಾರಿ ಬೆಳೆದುಕೊಂಡು ಚಪ್ಪರಿಸಿಕೊಂಡು ತಿನ್ನಿ ಎನ್ನುತ್ತಿದ್ದಾರೆ, ಇದಕ್ಕೆ ಅಕ್ಷಯ್‍ಕುಮಾರ್‍ನಂತಹ ಗುಲಾಮರ ಗುಲಾಮನು ಜಾಹಿರಾತಿನಲ್ಲಿ ನಟಿಸಿ ನಾನೂ ಮನುಷ್ಯರ ಮಲದಲ್ಲಿ ಬೆಳೆದ ತರಕಾರಿ ತಿನ್ನುತ್ತೇನೆಂದು ಎದೆ ತಟ್ಟಿಕೊಂಡು ಹೇಳಿರುವುದು ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾಗಿದೆ.
.                                       *****
ಹಾಫ್‍ಮೆಂಟ್ಲು ಆದಿತ್ಯನಾಥ ಬಿತ್ತು ಫುಲ್‍ಮೆಂಟ್ಲು ಡ್ರೀಮ್ ಪ್ಯಾಕೇಜು: 2000 ವರ್ಷದ ಹಿಂದೆ ಇಂಡಿಯಾಗು ಕೊರಿಯಾಗು ಆಯ್ತಂತೆ ಮ್ಯಾರೇಜು
ಯುಪಿ ರಾಜ್ಯದಲ್ಲಿ ಕಂಡಕಂಡ ಟಾಯ್ಲೆಟ್ಟುಗಳಿಗೆಲ್ಲ ಕೇಸರಿ ಬಣ್ಣ ಹೊಡೆದುಕೊಂಡು ಆರಾಮಾಗಿ ಓಡಾಡುತ್ತಿರುವ ಅಲ್ಲಿನ ಸನ್ಯಾಸಿ ಸಿಎಂ ಯೋಗಿ ಹಾದಿತ್ಯನಾಥ ಅಲಿಯಾಸ್ ಅಜಯ್‍ಸಿಂಗ್ ಭಿಷ್ಟ್ ಎಂಬ ತಲೆತಿಕ್ಕಲು ಐಲು ಗಿರಾಕಿಯ ತಲೆಯಲ್ಲಿರುವ ನಟ್ಟು ಬೋಲ್ಟುಗಳೆಲ್ಲ ತೊಪತೊಪನೆ ಉದುರಿ ಹೋಗಿರುವ ವರ್ತಮಾನ ಇದೀಗತಾನೇ ಲಭ್ಯವಾಗಿದೆ. ಜನರ ಬದುಕನ್ನು ಹಸನು ಮಾಡು ಪುಣ್ಯದ ಕೆಲಸವೊಂದನ್ನು ಬಿಟ್ಟು ಮಿಕ್ಕೆಲ್ಲ ಕೋತಿಚೇಷ್ಟೆ ಮಾಡಿಕೊಂಡು ತಿರುಗುತ್ತಿರುವ ಈ ಬೋಳುಮಂಡೆ ಸೋಂಬೇರಿ ಸಿಎಂ ಇತ್ತೀಚೆಗಷ್ಟೇ ಒಂದು ಬ್ರೈನ್‍ಲೆಸ್ ಹೇಳಿಕೆಯೊಂದನ್ನು ಕೊಟ್ಟು ನಗೆಪಾಟಲಿಗೆ ಈಡಾಗಿದೆ. ಅಯೋಧ್ಯೆಯ ರಾಜಕುಮಾರಿಯನ್ನು 2 ಸಾವಿರ ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ರಾಜಕುಮಾರನಿಗೆ ಕೊಟ್ಟು ಮದುವೆ ಮಾಡಲಾಗಿತ್ತು ಎಂದಿದ್ದಾನೆÀ ಯುಪಿ ರಾಜ್ಯದ ಸನ್ಯಾಸಿ ಸಿಎಂ, ಈ ಬಗ್ಗೆ ಅಧಿಕೃತ ಮಾಹಿತಿ ಎಲ್ಲಿಂದ ಲಭಿಸಿತು? ಆವಾಗ ನೀವು ಯಾವ ಕುದುರೆಲಾಯದಲ್ಲಿ ಲಂಗೋಟಿ ಹಾಕ್ಕೊಂಡು ಸೆಗಣಿ ಎತ್ತುತ್ತ ಇದನ್ನೆಲ್ಲ ಗಮನಿಸಿದಿರಿ.. ಎಂಬ ಪತ್ರಕರ್ತರ ಪ್ರಶ್ನೆಗೆ ತೀವ್ರವಾಗಿ ಬೇಜಾರು ಮಾಡಿಕೊಂಡ ಈ ಕೆಪರಗೇಡಿಯು, ಪ್ರಶ್ನೆ ಕೇಳಿದ ಟಿವಿ ಚಾನೆಲ್‍ನ ಮೈಕನ್ನು ಕೈಗೆತ್ತಿಕೊಂಡು ತನ್ನ ಬಾಣಲಿತಲೆಗೆ ¥sಟ್ ಫಟ್ ಫಟ್ ಎಂದು ಹೊಡೆದುಕೊಂಡು ತಮ್ಮ ಅಸಮಾಧಾನವನ್ನು ಹೊರಹಾಕಿಲ್ಲವೆಂದು ತಿಳಿದುಬಂದಿದೆ.
.                                       *****
ಸನಾತನಿ ಸಂಘಿ-ಮಂಕಿಗಳ ಭ್ರಮೆಯ ರೋಗವಾಯ್ತು ವಿಪರೀತ: ಲಂಗೋಟಿಗೆ ಬಿದ್ದ ಬೆಂಕಿಗೆ ಮಾಡ್ತಿದ್ದಾರೆ ತೋಂ ತಕಿಟ ತಕಧಿಮಿತ
ಇತ್ತೀಚೆಗೆ ಯಾರ ಕಣ್ಣಿಗೂ ಕಾಣದ್ದೆಲ್ಲ ಭ್ರಮೆಯಲ್ಲೇ ನುಗುರುಕೊಂಡು ಓಡಾಡುವ ಸಂಘಿ ಮಂಕಿಗಳಿಗೆ ಕಾಣುತ್ತಿರುವುದು ಆಶ್ಚರ್ಯದ ವಿಷಯವೇ ಸರಿ. ದನದ ಮೂತ್ರದಲ್ಲಿ ಜಗತ್ತಿನ ಎಲ್ಲ ಕಾಯಿಲೆಗಳಿಗೂ ಔಷಧಿ ಕಂಡುಹಿಡಿದ ಈ ಇಂಕಿ ಮಂಕಿ ಪಾಂಕಿಗಳು ಇದೀಗ ತಮ್ಮ ಎಂಜಲುಕಾಸಿನ ದೊರೆ ಅಂಬಾನಿಯು ಇನ್ನೂ ಸ್ಥಾಪಿಸದೇ ಇರುವ ಸಂಸ್ಥೆಯೊಂದು ಕಂಡುಬಿಟ್ಟಿದೆಯಂತೆ. ‘ಜಿಯೋ ಇನ್ಸ್‍ಟಿಟ್ಯೂಟ್’ ಎಂಬ ಅಸ್ತಿತ್ವದಲ್ಲೇ ಇಲ್ಲದ ಅಂಬಾನಿಯ ಸಂಸ್ಥೆಯು ದೇಶದ ಅತ್ಯುತ್ತಮ ಸಂಸ್ಥೆಗಳಲ್ಲೊಂದು ಎಂದು ತಮ್ಮ ಗುಲಾಮಿ ಸರ್ಕಾರದ ಮೂಲದ ಘೋಷಿಸಿರುವ ಈ ಸಾಂಪ್ ಸಂಘಿಗಳು ಈ ಮೂಲಕ ತಾವು ಹ್ಯಾಲೂಸಿನೇಷನ್ ರೋಗದಿಂದ ನರಳಾಡಿ ಹುಳ ಬಿದ್ದು ಒದ್ದಾಡುತ್ತಿದ್ದೇವೆಂದು ಘಂಟಾಘೋಷವಾಗಿ ಸಾರಿಬಿಟ್ಟಿದ್ದಾರೆÉ. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಸಂಘಿಗಳ ಮಾನಸಿಕ ಅಸ್ವಸ್ಥತೆಯ ಮೇಲೆ ಮುಗಿಬಿದ್ದ ಅಷ್ಟಿಷ್ಟು ಮಾಧ್ಯಮಗಳು ಸಂಘಿಗಳ ಲಂಗೋಟಿಗೆ ಸೀಮೆಎಣ್ಣೆ ಎರಚಿ ಕಡ್ಡಿ ಗೀರಿದ್ದಾರೆಂದು, ಉರಿ ತಡೆಯಲಾಗದೆ ಸಂಘಿ-ಮಂಕಿಗಳು ಲಡಕಾಸಿ ನೃತ್ಯ ಮಾಡುತ್ತ ಉರಿ ಶಮನ ಮಾಡಿಕೊಳ್ಳುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
.                                       *****

ಹೆಡ್ಡಪ್ಪನ ಮರೆಗುಳಿ ಅಧ್ವಾನಗಳಿಗೆ ಸ್ಕೋಪಕ್ಕ ಆದ್ರು ಕಕ್ಕಾಬಿಕ್ಕಿ: ಇವರಿಗೆ ಕೊಡೋದು ಅವ್ರಿಗೆ, ಅವ್ರಿಗೆ ಕೊಡೋದು ಇವ್ರಿಗೆ..
ಹತ್ತನ್ನೆರಡು ವರ್ಷಗಳ ಹಿಂದೆ 38 ಎಮ್ಮೆಲ್ಲೆಗಳನ್ನು ಹೊಂದಿದ್ದ ಕುಮಾರಣ್ಣನನ್ನು ಸಿಎಂ ಮಾಡಿ ಅಪ್ಪಿ ಮುದ್ದಾಡಿ ಲೊಚಲೊಚನೆ ಕಿಸ್ಸು ಕೊಟ್ಟಿದ್ದ ಕರ್ನಾಟಕ ಕಮಲ ಪಕ್ಷದವರು ಇದೀಗ, ಅದೇ ರೀತಿ ಕಾಂಗ್ರೆಸ್ ಕುಮಾರಣ್ಣನನ್ನು ಸಿಎಂ ಮಾಡಿರುವುದಕ್ಕೆ ಚಡ್ಡಿಯೊಳಗೆ ಓತಿಕ್ಯಾತ ಹೊಕ್ಕಂತೆ ಆಡುತ್ತಿರುವುದು ಬಯಲಾಗಿದೆ. ಸತ್ಯಹರಿಶ್ಚಂದ್ರ ದೇವರಪಾದ ಸೇರಿದ ಮೇಲೆ ಮತ್ತೆ ಶಿಕಾರಿಪುರದಲ್ಲಿ ರೈಸ್ ಮಿಲ್ ರೈಟರಾಗಿ ಮರುಜನ್ಮ ಪಡೆದು ಹುಟ್ಟಿರೋದೇ ನಾನು ಎಂಬಂತೆ ನೈತಿಕತೆಯ ಭಾಷಣ ಬೊಗಳುತ್ತಿರುವ ಹೆಡ್ಯೂರಪ್ಪನಿಗೆ ತನ್ನ ಹಳೆಯ ಬ್ಲಾಕಂಡ್ ವೈಟ್ ಡ್ರಾಮಾಗಳು ನೆನಪಾಗದಿರುವುದಕ್ಕೆ ನಿವೃತ್ತ ಕುಮಾರಿ ಸ್ಕೋಪಕ್ಕನಿಗೆ ಶ್ಯಾನೆ ಬೇಜಾರಾಗಿದೆಯಂತೆ. ಹಳೆಯದೆಲ್ಲವನ್ನೂ ಮರೆತು ಇನ್ನೇನೋ ಹೊಸ ಅಧ್ವಾನ ಮಾಡಿ ಮಾಡಿ ಎಲ್ರಿಂದಲೂ ಬೈಸಿಕೊಳ್ಳುವ ಹೆಡ್ಯೂರಪ್ಪ.. ಮನೆಯಲ್ಲಿ ಡ್ರೈವರನ್ನು ಸ್ಕೋಪÀಕ್ಕನೆಂದೂ, ಸ್ಕೋಪಕ್ಕನನ್ನು ಡ್ರೈವರೆಂದು ಕನ್ ಫ್ಯೂಸು ಮಾಡಿಕೊಂಡು ಇವರಿಗೆ ಕೊಡೋದನ್ನ ಅವರಿಗೆ ಕೊಟ್ಟು, ಅವರಿಗೆ ಕೊಡೋದನ್ನ ಇವರಿಗೆ ಕೊಟ್ಟು ಎಡವಟ್ಟಿನ ಮೇಲೆ ಎಡವಟ್ಟು ಮಾಡ್ತಿರುವುದು ಸ್ಕೋಪಕ್ಕನ ಚಿಂತೆಗೆ ಕಾರಣವಾಗಿದೆಯಂತೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ಮುಂದಿನವಾರ ಇಂಥಹದೇ ಅನಾಹುತಕಾರಿ ಸುದ್ದಿಗಳೊಡನೆ ನಿಮಗೆ ಸಿಗುತ್ತೇನೆ. ಅಲ್ಲೀತನಕ ಸಲಾಂ ನಮಸ್ತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...