Homeಮುಖಪುಟ‘ಆತನ ಮುಖ ನೋಡಿದರೆ ಆತ ಮುಗ್ಧ ಅನಿಸುತ್ತದೆ’: ಸುಶಾಂತ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಹೇಳಿಕೆ

‘ಆತನ ಮುಖ ನೋಡಿದರೆ ಆತ ಮುಗ್ಧ ಅನಿಸುತ್ತದೆ’: ಸುಶಾಂತ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಹೇಳಿಕೆ

- Advertisement -
- Advertisement -

ಬಿಹಾರ್‌ದಿಂದ ಬಂದು ಬಾಲಿವುಡ್‌ನಲ್ಲಿ ಯಾವುದೇ ಗಾಡ್‌ಫಾದರ್‌ಗಳ ‘ಆಶೀರ್ವಾದ’ವಿಲ್ಲದೇ, ಸ್ವ-ಪ್ರತಿಭೆಯಿಂದ ಗಮನ ಸೆಳೆದ ಸುಶಾಂತ್ ಸಿಂಗ್ ಸಾವಿನ ಕುರಿತ ಅನುಮಾನ-ಸಂದೇಹಗಳು ಸಂಪೂರ್ಣ ತನಿಖೆ ಮತ್ತು ಅಂತಿಮ ತೀರ್ಪಿನ ನಂತರವಷ್ಟೇ ಗೊತ್ತಾಗಲಿವೆ. ಆದರೆ ಬಾಂಬೆ ಹೈಕೋರ್ಟ್ ‘ಮುಖ ನೋಡಿದರೆ ಆತ ಮುಗ್ಧ’ ಎಂದು ಹೇಳಿದ್ದು ವಿಚಿತ್ರ ಅಲ್ಲವೇ?

ಗುರುವಾರ ಬಾಂಬೆ ಹೈಕೋರ್ಟ್, ‘ಎಂ.ಎಸ್ ಧೋನಿ: ಆ್ಯನ್ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾದಲ್ಲಿನ ಸುಶಾಂತ್‌ಸಿಂಗ್ ಅಭಿನಯವನ್ನು ಹೊಗಳಿದೆಯಲ್ಲದೇ, ನಟನ ಮುಖ, ಮುಖಭಾವದಿಂದ ಆತ ಒಳ್ಳೆಯ ಮನುಷ್ಯನಾಗಿದ್ದ, ಯಾವುದೇ ವ್ಯಸನವಿರದ ವ್ಯಕ್ತಿಯಾಗಿದ್ದ ಎಂಬುದು ಗೊತ್ತಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

ಇಂತಹ ಅಭಿಪ್ರಾಯಗಳಿಗೆ ನ್ಯಾಯ ವ್ಯವಸ್ಥೆಯಲ್ಲಿ ಮಾನ್ಯತೆಯಿದೆಯೇ ಎಂಬ ಬಗ್ಗೆ ನಮ್ಮಂತಹ ಜನಸಾಮಾನ್ಯರಿಗೆ ಗೊತ್ತಿಲ್ಲ. ಮುಖ ಬಿಡಿ, ಅವರ ಜನಪರ ಕಾಳಜಿ, ಸೇವೆ ಪರಿಗಣಿಸಿದ್ದರೆ ಇವತ್ತು ಎಲ್ಗಾರ್ ಸಮಾವೇಶದಲ್ಲಿ ‘ಅಸಂಭವನೀಯ ಆರೋಪಗಳ’ ಅಡಿಯಲ್ಲಿ ಬಂಧಿತರಾದ ಚಿಂತಕರು, ಹೋರಾಟಗಾರರಿಗೆ ಕನಿಷ್ಟ ಜಾಮೀನಾದರೂ ಸಿಗಬೇಕಿತ್ತು ಅಲ್ಲವೆ?

ಈಗ ಗುರುವಾರದ ಕೋರ್ಟ್ ವಿಚಾರಣೆಗೆ ಮತ್ತೆ ಬರೋಣ. ಸುಶಾಂತ್‌ಸಿಂಗ್ ಅವರ ಸಹೋದರಿಯರಾದ ಪ್ರಿಯಾಂಕಾ ಸಿಂಗ್ ಮತ್ತು ಮೀತು ಸಿಂಗ್ ಸಲ್ಲಿಸಿದ್ದ ಪಿಟಿಷನ್ ವಿಚಾರಣೆಯ ತೀರ್ಪನ್ನು ಕಾಯ್ದಿರಿಸುವ ಮುನ್ನ ಎಸ್. ಎಸ್ ಶಿಂಧೆ ಮತ್ತು ಎಂ.ಎಸ್ ಕಾರ್ನಿಕ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ಹೊರ ಹಾಕಿದೆ. ‘ತಮ್ಮ ಸಹೋದರನಿಗಾಗಿ ತಾವು ಮೆಡಿಕಲ್ ಪ್ರಿಸ್ಕಿಪ್ಸನ್ ತಿದ್ದಿದ ಮತ್ತು ಫೋರ್ಜರಿ ಮಾಡಿದ ಆರೋಪವನ್ನು ನಮ್ಮ ಮೇಲೆ ಹೊರಿಸುವ ಎಫ್‌ಐಆರ್ ವಜಾ ಮಾಡಬೇಕು’ ಎಂದು ಸಲ್ಲಿಸಿದ್ದ ಪಿಟಿಷನ್ ವಿಚಾರಣೆಯ ವೇಳೆ ಪೀಠ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಬರಹದ ಉದ್ದೇಶ ಗುರುವಾರ ನ್ಯಾಯಾಲಯದಲ್ಲಿ ನಡೆದ ಬೆಳವಣಿಗಗಳನ್ನು ವರದಿ ಮಾಡುವುದಲ್ಲ. ಬದಲಿಗೆ ‘ಮುಖ ನೋಡಿ ಮೊಳ ಹಾಕುವ’ ಸಂಪ್ರದಾಯ ಇದು ಹೊಸದೋ ಅಥವಾ ಮೊದಲಿನಿಂದಲೂ ಇದೆಯೋ?

ಬಿಹಾರ್ ಚುನಾವಣೆಯಲ್ಲೂ ನಟನ ಸಾವಿನ ದುರಂತವನ್ನು ಬಳಸಿಕೊಳ್ಳಲಾಯಿತು. ವ್ಯಾಟ್ಸಾಪ್ ಚಾಟ್‌ಗಳ ಆಧಾರದಲ್ಲಿ ಮಾಧ್ಯಮಗಳು ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯೇ ‘ಕೊಲೆಗಾರ್ತಿ’ ಎಂದು ಅಂದೇ ತೀರ್ಪು ಕೊಟ್ಟುಬಿಟ್ಟಿದ್ದವು. ಈ ಪ್ರಕರಣಕ್ಕೆ ಡ್ರಗ್ಸ್ ಆಯಾಮವೂ ಸೇರಿಕೊಂಡಿತು. ಅದರ ತನಿಖೆಯೂ ಈಗ ಸ್ಥಗಿತವಾಗಿದೆ.

‘ಆತನ ಮುಖ ನೋಡಿದರೆ, ಅದರಲ್ಲೂ ಧೋನಿ ಕುರಿತಾದ ಸಿನಿಮಾದಲ್ಲಿ ಆತನ ಮುಖ ನೋಡಿದರೆ ಆತ ಮುಗ್ಧ ಮತ್ತು ವ್ಯಸನಿಯಲ್ಲ ಎಂಬುದು ಗೊತ್ತಾಗುತ್ತದೆ ಎಂಬ ಹೇಳಿಕೆ ಒಂಥರಾ ‘ಸಿನಿಮೀಯ ಡೈಲಾಗ್’ ಅನಿಸುತ್ತಿದೆ ಅಲ್ಲವೇ?

ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಸುಶಾಂತ್ ಸಿಂಗ್ ಕೊಲೆಯಾಗಿಲ್ಲ; ಇದು ಆತ್ಮಹತ್ಯೆ: ಮುಂಬೈ ಪೊಲೀಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...