Homeಪುಸ್ತಕ ವಿಮರ್ಶೆದೀಪವಿರದ ದಾರಿಯಲ್ಲಿ: ಸಲಿಂಗಪ್ರೇಮವನ್ನು ಪ್ರಧಾನವಸ್ತುವಾಗಿರಿಸಿಕೊಂಡಿರುವ ಕೃತಿಯಲ್ಲಿ ಸಂಕೀರ್ಣತೆಯ ಕೊರತೆ

ದೀಪವಿರದ ದಾರಿಯಲ್ಲಿ: ಸಲಿಂಗಪ್ರೇಮವನ್ನು ಪ್ರಧಾನವಸ್ತುವಾಗಿರಿಸಿಕೊಂಡಿರುವ ಕೃತಿಯಲ್ಲಿ ಸಂಕೀರ್ಣತೆಯ ಕೊರತೆ

- Advertisement -
- Advertisement -

ಹೊಸ ತಲೆಮಾರು ತನ್ನದೇ ರೀತಿಯಲ್ಲಿ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿದೆ. ವಿಶೇಷವೆಂದರೆ ಸಮಕಾಲೀನ ಸಾಮಾಜಿಕ ಬಿಕ್ಕಟ್ಟುಗಳೇ ಕೃತಿಗಳ ವಸ್ತುಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರಾವಳಿ ಸೀಮೆಯವರಾದ ಸುಶಾಂತ್ ಕೋಟ್ಯಾನ್ ಅವರ ’ದೀಪವಿರದ ದಾರಿಯಲ್ಲಿ’ ಕಾದಂಬರಿಯು ಪುರುಷ ಸಲಿಂಗರತಿಯನ್ನು ಪ್ರಧಾನ ಭೂಮಿಕೆಯನ್ನಾಗಿ ರೂಪಿಸಿಕೊಂಡಿದೆ.

ಈ ಕಾದಂಬರಿಯು ಯಕ್ಷಗಾನದ ಸ್ತ್ರೀವೇಷಧಾರಿಗಳಾದ ಸುಕೇಶ, ರಘುಪತಿ ಹಾಗೂ ಸಂಜೀವ-ಇವರ ಲೈಂಗಿಕ ಜೀವನದ ಕತೆಯನ್ನು ನವಿರಾದ ಭಾಷಿಕ ಧಾಟಿಯಲ್ಲಿ ನಿರೂಪಿಸುತ್ತದೆ. ಇದರೊಳಗೆ ಇನ್ನೂ ಹಲವರ ಕತೆಗಳು ಕೂಡ ಸೇರಿಕೊಳ್ಳುತ್ತವೆ. ಕಾದಂಬರಿಯ ತುಂಬ ಆವರಿಸಿಕೊಂಡಿರುವ ಸುಕೇಶನೇ ಇದರ ಕಥಾ ನಾಯಕ; ಈತ ತನ್ನೊಳಗಿನ ಹೆಣ್ಣು ಜೀವವನ್ನು ಪೋಷಿಸಿಕೊಳ್ಳುತ್ತಾನೆ; ಗಂಡು ದೇಹದೊಳಗಿರುವ ಹೆಣ್ಣನ್ನು ಪ್ರೀತಿಸುವ ಗಂಡಿಗಾಗಿ ಹಂಬಲಿಸುತ್ತಾನೆ. ಈ ನಿಟ್ಟಿನಲ್ಲಿ ಸುಕೇಶನಲ್ಲಿ ಅಂತಸ್ಥವಾಗಿರುವ ಹೆಣ್ಣಿನ ಆಸೆ, ಆಕಾಂಕ್ಷೆ, ಆಯ್ಕೆ ಹಾಗೂ ನಿರಾಕರಣೆಗಳೇ ಈ ಕಾದಂಬರಿಯ ಕಥನವನ್ನು ಮುನ್ನಡೆಸಿಕೊಂಡು ಹೋಗುತ್ತವೆ. ಕಾದಂಬರಿಯು ಇವುಗಳ ಪರಿಣಾಮಗಳನ್ನು ಒಂದು ಸೂತ್ರಬದ್ಧ ಚೌಕಟ್ಟಿನಲ್ಲಿ ಆಪ್ತವಾದ ಶೈಲಿಯಲ್ಲಿ ಓದುಗರಿಗೆ ದಾಟಿಸುವುದರಲ್ಲಿ ಸಫಲವಾಗಿದೆ.

ಕೆಲವು ವರ್ಷಗಳ ಹಿಂದೆಯಷ್ಟೇ ಸರ್ವೋಚ್ಚ ನ್ಯಾಯಾಲಯವು ಸಲಿಂಗಪ್ರೇಮ ಅಪರಾಧ ಅಲ್ಲ ಎಂದು ತೀರ್ಪು ನೀಡಿತು. ಅದರೂ ಇದಕ್ಕೆ ಸಾಮಾಜಿಕ ಮಾನ್ಯತೆಯಾಗಲಿ, ಒಪ್ಪಿಗೆಯಾಗಲಿ ವ್ಯಾಪಕವಾಗಿಲ್ಲ. ನಮ್ಮದು ಅತಿ ಮಡಿವಂತಿಕೆಯ ಸಮಾಜವಾಗಿ ಇನ್ನೂ ಮುಂದುವರೆದಿದೆ. ಆದರೆ ಪುರುಷನಿಗೆ ವಿವಾಹೇತರ ಲೈಂಗಿಕ ಸಂಬಂಧವು ಸಂಭ್ರಮಿಸುವ ಪ್ರತಿಷ್ಠೆಯಾಗಿರುತ್ತದೆ. ಇದೇ ಸಂಗತಿಯು ಹೆಣ್ಣಿಗೆ ಅವಮಾನ, ನಿಂದನೆ, ಅಪಹಾಸ್ಯ ಮತ್ತು ನಿಷೇಧಗಳನ್ನು ತಂದೊಡ್ಡುತ್ತವೆ. ಈ ಹಿನ್ನೆಲೆಯಲ್ಲಿ ಕಾದಂಬರಿಯ ಪಾತ್ರಗಳಾದ ರವೀಂದ್ರ, ಆಕಾಶ್ ಹಾಗೂ ಅನೇಕ ಪುರುಷರು ನೈತಿಕತೆಯಿಲ್ಲದೆ ಲಜ್ಜಾಹೀನರಾಗಿ ನಡೆದುಕೊಳ್ಳುತ್ತಾರೆ. ರಘುಪತಿಯ ಹೆಂಡತಿ ಪರಪುರುಷನೊಂದಿಗೆ ಹೋಗುವುದನ್ನು ಕಾದಂಬರಿಯು ಓಡಿಹೋದವಳೆಂದು ಜರೆಯುತ್ತದೆ. ಇಂತಹ ಲಿಂಗತ್ವ ಆಧಾರಿತ ತಾರತಮ್ಯದ ಬಗ್ಗೆ ಕಾದಂಬರಿಯ ನಿರೂಪಕ ತಟಸ್ಥನಾಗಿದ್ದಾನೆ.

ಸುಶಾಂತ್ ಕೋಟ್ಯಾನ್

ಜೈವಿಕವಾಗಿ ಗಂಡಾಗಿರುವ ಎಷ್ಟೋ ಜನ ಹೆಣ್ಣಾಗಲು ಇಚ್ಛಿಸುವುದನ್ನು ಅಸಹಜವಾಗಿ ಕಾಣುವ ಭಾವ ಇಲ್ಲಿ ಬಹುತೇಕರಿಗೆ ನೆಲೆಯೂರಿದೆ. ಸಾಮಾಜಿಕವಾಗಿಯೂ ಇದು ಅಸ್ವಾಭಾವಿಕ ಮತ್ತು ಅನೈಸರ್ಗಿಕವೆಂಬ ನಂಬಿಕೆ ಇಲ್ಲಿ ದೊಡ್ಡದಾಗಿ ಬೆಳೆದಿದೆ. ಕಾದಂಬರಿಯು ಮೇಲ್ನೋಟಕ್ಕೆ ಇಂತಹ ಮನಸ್ಥಿತಿಯನ್ನು ಪ್ರಶ್ನಿಸುತ್ತಿರುವಂತೆ ತೋರುತ್ತದೆ. ಗಂಡಸರ ಲೈಂಗಿಕ ವಿಕೃತಿಗಳನ್ನು ತೆರೆದು ತೋರಿಸುತ್ತದೆ. ಅವರಿಗೆ ಸಾಮಾಜಿಕವಾಗಿ ದೊರಕಿರುವ ಇಂತಹ ಸ್ವಾತಂತ್ರ್ಯದ ಬಗ್ಗೆ ದೂಷಿಸುತ್ತದೆ. ಸುದರ್ಶನ, ಸುಕೇಶನಿಗೆ ಕೆಲಸ ಕೊಡಿಸುವುದಾಗಿ ಹೇಳಿ ಲೈಂಗಿಕವಾಗಿ ಪೀಡಿಸುವುದನ್ನು ಹಾಗೂ ರವೀಂದ್ರ ತನ್ನ ಹೆಂಡತಿ ತವರಿಗೆ ಹೋದಾಗ ಪುನಃ ಸುಕೇಶನಿಗೆ ಗಂಟು ಬೀಳುವ ಸನ್ನಿವೇಶಗಳನ್ನು ಈ ನೆಲೆಯಿಂದ ಗಮನಿಸಬಹುದು. ಆದರೆ ಲೈಂಗಿಕವಾಗಿ ಸ್ವೇಚ್ಛಾಚಾರವನ್ನು ಅನುಭವಿಸುವ ಗಂಡಿನ ಬಗ್ಗೆ ಕಾದಂಬರಿ ಖಚಿತ ನಿಲುವುಗಳನ್ನು ವ್ಯಕ್ತಪಡಿಸುವುದಿಲ್ಲ. ಅದು ವ್ಯಕ್ತಿಗತ ನೆಲೆಗಷ್ಟೇ ಸೀಮಿತವಾಗುತ್ತದೆ.

ಯಾವ ಅಂಶಗಳು ಈ ಕಾದಂಬರಿಯ ಶಕ್ತಿಯಾಗಿದೆಯೋ ಅವುಗಳೇ ಅದರ ದುರ್ಬಲ ಸಂಗತಿಯಾಗಿದೆ. ಕಾದಂಬರಿಯ ಕೇಂದ್ರ ಭಿತ್ತಿಯಲ್ಲಿರುವ ಸುಕೇಶನ ಪಾತ್ರವು ಗಟ್ಟಿಯಾಗಿ ಮೂಡಿಬರಲಿಲ್ಲ. ಇದಕ್ಕೆ ಕಾರಣವೆಂದರೆ ಈತ ತನ್ನ ಪ್ರತಿಯೊಂದು ಸಮಸ್ಯೆಗಳಿಗೂ ಬೇರೆಯವರಲ್ಲಿ ಸಾಂತ್ವನ ಪಡೆಯಲು ಬಯಸುತ್ತಾನೆ. ಕಾದಂಬರಿಯು ಹಲವು ಕಡೆಯಲ್ಲಿ ಸುಕೇಶನನ್ನು ’ಗಂಡು ದೇಹದೊಳಗಿನ ಹೆಣ್ಣು ಮನಸ್ಸು’ ಎಂದು ವರ್ಣಿಸುತ್ತದೆ. ಸುಕೇಶ ತಾನು ಇಷ್ಟಪಡುವ ರವೀಂದ್ರ ಬೇರೆ ಹುಡುಗಿಯನ್ನು ಮದುವೆಯಾಗುವ ಸಂದರ್ಭದಲ್ಲಿಯು ತನಗೆ ಆಸರೆಯಾಗಿ ಇರಬೇಕೆಂದು ಕೇಳುತ್ತಾನೆ; ನಂತರದಲ್ಲಿ ವಿಧುರನಾಗಿರುವ ಆಕಾಶನ ಹೆಂಡತಿಯ ಸ್ಥಾನವನ್ನು ತುಂಬುವ ದೈನಸ್ಥಿತಿಗೆ ಇಳಿಯಬೇಕಾಗುತ್ತದೆ. ಹೀಗಾಗಿ ಕಾದಂಬರಿಯಲ್ಲಿ ಹೆಣ್ಣೆಂದರೆ ಎಂದಿಗೂ ಗಂಡಿನ ಅಧೀನವಾಗಿಯೇ ಇರುವಂತೆ ಚಿತ್ರಿಸಿದ್ದು ಯಥಾಸ್ಥಿತಿವಾದದ ಸಮರ್ಥನೆಯೇ ಆಗಿದೆ. ಕೊನೆಯ ಭಾಗದಲ್ಲಿ ಬರುವ ಸುಕೇಶನ ಅಸಹಾಯಕತೆ ಮತ್ತು ಗೋಳಾಟವು ಕಾದಂಬರಿಯಲ್ಲಿ ಬರಿ ರೋದನವಾಗಿ ಕೇಳಿಸುವಂತಾಗಿದೆ.

’ದೀಪವಿರದ ದಾರಿಯಲ್ಲಿ’ ಕಾದಂಬರಿಯಲ್ಲಿ ಸುಕೇಶ, ಸಂಜೀವ, ರಘುಪತಿ-ಇವರೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಗಂಡಸರ ಲೈಂಗಿಕ ತೃಷೆಗೆ ಬಲಿಪಶುಗಳೇ ಆಗಿದ್ದಾರೆ. ಲಿಂಗ ಪರಿವರ್ತಿಸಿಕೊಂಡಿರುವ ಸುನಂದಾ ಮತ್ತು ಮಂದಾಕಿನಿಯಂತಹವರ ಬದುಕು ಇನ್ನೂ ಹೀನಾಯವಾಗುತ್ತದೆ. ಇವರ ಬಾಳು ಬರಿ ಕತ್ತಲಿನಿಂದಲೇ ತುಂಬಿರುತ್ತದೆ ಎಂಬ ನೇತ್ಯಾತ್ಮಕ ನಿಟ್ಟಿನಿಂದಲೇ ಕಾದಂಬರಿಯನ್ನು ಹೆಣೆಯಲಾಗಿದೆ. ಕಾದಂಬರಿಯ ಶೀರ್ಷಿಕೆಯು ಕೂಡ ಅದನ್ನೇ ಧ್ವನಿಸುತ್ತದೆ. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಕಾದಂಬರಿಯು ಯಾವ ಧೋರಣೆಗಳನ್ನು ಹೊಂದಿದೆ ಎನ್ನುವುದು ಸ್ಪಷ್ಟವಾಗುವುದಿಲ್ಲ. ಆದರೆ ಸಲಿಂಗಪ್ರೇಮದ ವ್ಯಕ್ತಿಗಳ ಅಸ್ಮಿತೆಗೆ ಸಾಮಾಜಿಕ ಒಪ್ಪಿಗೆ ಇಲ್ಲದಿರುವುದನ್ನು ಕಾದಂಬರಿಯು ತೀವ್ರ ಅನುಕಂಪದ ದೃಷ್ಟಿಕೋನದಿಂದಲೇ ನೋಡುತ್ತದೆ.

ನಮ್ಮ ಕಾಲದಲ್ಲಿ ಸಲಿಂಗಪ್ರೇಮದಂತಹ ಸೂಕ್ಷ್ಮ ಮತ್ತು ಸಂಕೀರ್ಣ ವಿಷಯವನ್ನು ಒಂದು ಕಾದಂಬರಿಯಾಗಿ ಬರೆದಿರುವುದು ಮುಖ್ಯ ಸಂಗತಿಯಾಗಿದೆ. ಈ ಕಾದಂಬರಿಯು ಸರಳ ಮತ್ತು ನೇರವಾದ ಕಥನ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಆದರೆ ಸಲಿಂಗಪ್ರೇಮದ ಸಂಕೀರ್ಣ ನೆಲೆಗಳನ್ನು ಶೋಧಿಸಲು ಇಲ್ಲಿ ಲೇಖಕರಿಗೆ ಸಾಧ್ಯವಾಗಿಲ್ಲ. ಆದರೂ ಭಾಷೆಯ ಹೊಸತನ, ನಿರೂಪಣೆಯ ಭಾವತೀವ್ರತೆಯಿಂದ ಕಾದಂಬರಿಯು ಆಪ್ತಭಾವವನ್ನು ಮೂಡಿಸುತ್ತದೆ.

ಡಾ. ಸುಭಾಷ್ ರಾಜಮಾನೆ

ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಯಾರು ಭಾರತ ಮಾತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...