Homeಕರ್ನಾಟಕಅಮಾಯಕ ಹಿಂದೂ ಹುಡುಗ ಶ್ರೇಯಸ್ ಸಾವಿಗೆ ಭಜರಂಗಿಗಳು ಕಾರಣರೇ? 

ಅಮಾಯಕ ಹಿಂದೂ ಹುಡುಗ ಶ್ರೇಯಸ್ ಸಾವಿಗೆ ಭಜರಂಗಿಗಳು ಕಾರಣರೇ? 

- Advertisement -
- Advertisement -

“ನನ್ನ ಮಗ ಯಾರ ತಂಟೆಗೂ ಹೋಗೋನಲ್ಲ… ಮನೆಯ ಜಗುಲಿ ಮೇಲೆ ತನ್ನ ಪಾಡಿಗೆ ತಾನು ಕುಳಿತಿದ್ದವನನ್ನು ಬಿಜೆಪಿಯ ಪಾತಕ ಸ್ವಭಾವದ ಇಬ್ಬರು ಪುಢಾರಿಗಳು ಪ್ಲಾನ್‌ಮಾಡಿ ಏಳು ಕಿ.ಮೀ ದೂರದ ದುರ್ಗಮ ಕಾಡಿನ ಹೊಳೆ ಹತ್ತಿರ ಕರೆದೊಯ್ದು ಕಗ್ಗೊಲೆ ಮಾಡಿದ್ದಾರೆ… ಅಲ್ಲಿಗೆ ಹೋಗಲು ಸರಿಯಾದ ದಾರಿಯೂ ಇಲ್ಲ…. ಏಳೆಂಟು ಅಡಿಯಷ್ಟು ಆಳ ನೀರು ಹರಿವ ಆ ಹೊಳೆಗೆ ಮೀನು ಹಿಡಿಯಲಿಕ್ಕೂ ಯಾರೂ ಹೋಗೋದಿಲ್ಲ…. ಅಂಥ ಕಡೆ ನನ್ನ ಮಗನ ಕರೆದೊಯ್ದು ಕೊಂದು ಹಾಕಿದ್ದಾರೆ…. ನನ್ನ ಮನೆ ದೀಪವೇ ಆರಿಹೋಗಿದೆ…” ಎಂದು ಆ ತಾಯಿ ಭೋರೆಂದು ಬಿಕ್ಕಳಿಸುವಾಗ ಎಂಥವರ ಕರುಳು ಚುರ್ ಅನ್ನದೇ ಇರದು!!

ಆಕೆ ಬ್ರಹ್ಮಾವರ ತಾಲ್ಲೂಕಿನ ಹೊಸೂರು ಗ್ರಾಮದ ಕುರ್ಪಾಡಿಯಲ್ಲಿ ಬೀಡಿ ಕಟ್ಟಿ ಬದುಕು ಸಾಗಿಸುವ ಶೋಭಾ ಶೇರ್ವೆಗಾರ್. ಗಂಡನಿಗೆ ಅನಾರೋಗ್ಯ, ಇರುವ ಚೂರುಪಾರು ಬಂಗಾರ ಗಿರವಿಯಿಟ್ಟು, ಕೂಲಿ ಮಾಡಿ ತನ್ನೆರಡು ಮಕ್ಕಳನ್ನು ಓದಿಸುತ್ತಿದ್ದ ಆಕೆ ಹಿರಿಯ ಮಗ ಶ್ರೇಯಸ್‌ನನ್ನು ಅನ್ಯಾಯವಾಗಿ ಕಳಕೊಂಡ ನೋವಿನಲ್ಲಿ ಜರ್ಜರಿತಳಾಗಿಹೋಗಿದ್ದಾಳೆ. ವಯಸ್ಸಿನಲ್ಲಿ ಶ್ರೇಯಸ್‌ಗಿಂತ ಎರಡು ಪಟ್ಟು ದೊಡ್ಡವನಾದ ಸದಾನಂದ ಪೂಜಾರಿ ಮತ್ತಾತನ ಶಿಷ್ಯ ಯೋಗೀಶ್ ಪೂಜಾರಿ ಎಂಬ ರೌಡಿಗಳೇ ಕೊಲೆ ಮಾಡಿದ್ದಾರೆಂದು ಆಕೆ ನೇರಾನೇರ ಹೇಳುತ್ತ ಬಾಯ್ಬಾಯಿ ಬಡಿದುಕೊಳ್ಳುತ್ತಿದ್ದಾಳೆ. ಈ ಇಬ್ಬರೂ ಪಕ್ಕಾ ಭಜರಂಗಿ ಭೂಪರು ಹಲವು ದೋನಂಬರ್ ದಂಧೆ-ದೊಂಬಿಯ ಈ ಧೀರರ ಬಗ್ಗೆ ಕರ್ಜೆ-ಕಳ್ತೂರು, ಹೊಸೂರು ಪರಿಸರದಲ್ಲಿ ಯಾರೊಬ್ಬರಲ್ಲೂ ಒಳ್ಳೆಯ ಅಭಿಪ್ರಾಯವಿಲ್ಲ.

ಸದಾನಂದ ಪೂಜಾರಿ

ಆ ತಾಯಿ ಆರೋಪಿಸುತ್ತಿರುವ ಸದಾನಂದ ಪೂಜಾರಿ ಯಾರು ಎಂದು ಹುಡುಕಿದರೆ ಗಾಬರಿಯಾಗುತ್ತದೆ. ಹುಡುಗಿಯರಂತೂ ಸದಾನಂದ ಪೂಜಾರಿಯ ನೆರಳು ಕಂಡರೇ ಸಾಕು, ದೂರದಲ್ಲೇ ಅದೃಶ್ಯರಾಗಿ ಬಿಡುತ್ತಾರೆ. ಇಂಥ ಸದಾನಂದ ಪೂಜಾರಿಯ ದಾದಾಗಿರಿ ಯಾವ ರೇಂಜಿಗಿದೆಯೆಂದರೆ, ಕೌಬ್ರಿಗೇಡ್, ಅನೈತಿಕ ಪೊಲೀಸ್ ಪಡೆಯೂ ಆತ ಖತರ್‌ನಾಕ್ ಅಂತಲೇ ಬ್ರಾಂಡ್ ಮಾಡಿಬಿಟ್ಟಿದೆ!! ಆದರೆ ಪೊಲೀಸರು ಮಾತ್ರ ಅದ್ಯಾಕೋ ಸುಮ್ಮನಿದ್ದಾರೆ. ಖಡಕ್ ಎಸ್ಪಿ ನಿಶಾ ಜೇಮ್ಸ್‌ಗೂ ಏನು ಮಾಡೋದಂತಲೇ ಹೊಳೆಯುತ್ತಿಲ್ಲ. ಉಡುಪಿ-ಬ್ರಹ್ಮಾವರದ ಶಾಸಕ ರಂಗೀಲಾ ರಘುಪತಿಭಟ್ಟನ ಅತ್ಯಾಪ್ತ ಸರ್ಕಲ್ಲಿನ ಧಾಂಡಿಗ ಈ ಸದಾನಂದ ಪೂಜಾರಿ ಎಂಬುದೇ ಪೊಲೀಸರ ಕೈಕಟ್ಟಿಹಾಕಿಬಿಟ್ಟಿದೆಯೆಂದು ಜನರಾಡಿಕೊಳ್ಳುತ್ತಿದ್ದಾರೆ…….

ಯೋಗೇಶ್

ಅಂದು ನವೆಂಬರ್ ಐದನೇ ತಾರೀಖು ಮಧ್ಯಾಹ್ನ 12;30ರ ಸುಮಾರಿಗೆ ಪಕ್ಕದ ಮನೆಯ ರಾಕೇಶ್ ಎಂಬ ಹುಡುಗ ಬಂದು ಮೀನು ಹಿಡಿಯಲು ಹೋಗೋಣ ಎಂದು ಶ್ರೇಯಸ್‌ನ ಕರೆದಿದ್ದಾರೆ. ಇಲ್ಲ ನಂಗೆ ಓದೋದಿದೆ ಎಂದು ಹೇಳಿದ್ದಾನೆ ಶ್ರೇಯಸ್. ಒತ್ತಾಯ ಮಾಡಿ ತನ್ನ ಬೈಕಲ್ಲಿ ರಾಕೇಶ್ ಆತನ ಕರೆದುಕೊಂಡು ಮುಡಿಸಾಲು ಹೊಳೆಬಳಿ ಹೋಗಿದ್ದಾನೆ. ಅಲ್ಲಿ ಸದಾನಂದ ಪೂಜಾರಿ ತನ್ನ ಚೇಲಾ ಯೋಗೀಶ್ ಜೊತೆ ತೋಟೆ (ಸ್ಫೋಟಕ) ಹಾಕಿ ಮೀನು ಹಿಡಿಯುತ್ತಿರುತ್ತಾನೆ. ಕೆಲದಿನಗಳ ಹಿಂದೆ ಸಂತೆಕಟ್ಟೆಯಲ್ಲಿ ನಡೆದ ಶಾರದೋತ್ಸವ ಮೆರವಣಿಗೆ ಸಂದರ್ಭದಲ್ಲಿ ಶ್ರೇಯಸ್ ಮತ್ತವನ ಗೆಳೆಯರ ಮೇಲೆ ವಿನಾಕಾರಣ ಮುಗಿಬಿದ್ದಿದ್ದ ಸದಾನಂದ ಪೂಜಾರಿ-ಯೋಗೀಶ್ ಪೂಜಾರಿ ಕಂಡಾಗ ಆತ ಗಾಬರಿಗೆ ಬಿದ್ದಿರಬೇಕು. ಯಾಕೆ ಉಪಾಯವಾಗಿ ರಾಕೇಶ್ ತನ್ನನ್ನು ವೈರಿಗಳ ಕೈಗೆ ಕೊಡುತ್ತಿದ್ದಾನೆಂಬ ಭಯಕ್ಕೂ ಬಿದ್ದಿರಲೇಬೇಕು.

ಹುಡುಗಿ ಒಬ್ಬಳ ವಿಷಯವಾಗಿ ಸದಾನಂದ ಪೂಜಾರಿ ಮತ್ತು ಶ್ರೇಯಸ್ ನಡುವೆ ವೈಮನಸ್ಸು ಬೆಳೆದಿತ್ತು. ಸುರಸುಂದರಾಂಗನೂ, ಪ್ರತಿಭಾನ್ವಿತ ವಿದ್ಯಾರ್ಥಿಯೂ, ಪ್ರಸಿದ್ಧ ವಾಲಿಬಾಲ್ ಪಟುವೂ ಆಗಿದ್ದ ಶ್ರೇಯಸ್‌ಗೆ ಬುಡಕಟ್ಟು ಸಮುದಾಯದ ಚೆಂದದ ಸಹಪಾಠಿ ಜತೆ ಅನ್ಯೋನ್ಯ ಗೆಳೆತನವಿತ್ತು. ಆ ಬಡವರ ಮನೆ ಹುಡುಗಿ ಮೇಲೆ ಸದಾನಂದ ಕಣ್ಣುಹಾಕಿದ್ದ. ಹೇಗಾದರೂ ಮಾಡಿ ಆಕೆಯನ್ನು ತನ್ನ ಅಡ್ಡೆಗೆ ತಂದುಬಿಡುವಂತೆ ಶ್ರೇಯಸ್‌ಗೆ  ಆತ ಒತ್ತಡ ಹಾಕುತ್ತಲೇ ಇದ್ದ. ಇದೇ ಕಾರಣಕ್ಕೆ ಶಾರದೋತ್ಸವ ಹೊತ್ತಲ್ಲಿ ಶ್ರೇಯಸ್‌ಗೆ ಹೆದರಿಸಲು ಸದಾನಂದ ಗ್ಯಾಂಗ್ ಕಟ್ಟಿಕೊಂಡುಹೋಗಿದ್ದ. ಶ್ರೇಯಸ್‌ನ ಪಳಗಿಸಲು ವಿಫಲವಾಗಿದ್ದ ಸದಾನಂದ ಆತನ ಮನ ಒಲಿಸಲಿಕ್ಕೋ ಅಥವಾ ಬೆದರಿಸಲಿಕ್ಕೋ ಭೀಭತ್ಸ ಹೊಳೆ ಹತ್ತಿರ ಕರೆಸಿಕೊಂಡಿದ್ದನಾ ಎಂಬ ಅನುಮಾನ ಊರಲ್ಲಿ ಮಡುಗಟ್ಟಿದೆ.

ಹೊಳೆಯಿಂದ ಹೊರತಂದ ಶ್ರೇಯಸ್‌ನ ಮೃತದೇಹ ಕಂಡವರಿಗೆ ಅದು ನೀರಿಗೆ ಬಿದ್ದು ಸಾವು ಅನ್ನಿಸುತ್ತಿಲ್ಲ. ಕೊಲೆ ಎಂಬ ಅನುಮಾನ ಮೂಡಲು ಇದಕ್ಕೆ ಬಲವಾದ ಸಾಂದರ್ಭಿಕ ಸಾಕ್ಷ್ಯಗಳೂ ಇವೆ. ತಾವು ನೀರಿಗೆ ಬಿದ್ದ ಶ್ರೇಯಸ್‌ನ ಬಚಾಯಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎನ್ನುತ್ತಿರುವ ಸದಾನಂದ ಮತ್ತು ಯೋಗೀಶನ ಬಟ್ಟೆ ಒಂಚೂರು ಒದ್ದೆಯಾಗಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಶ್ರೇಯಸ್‌ನ ಕುತ್ತಿಗೆಯಲ್ಲಿ ಗಾಯದ ಗುರುತೂ ಇತ್ತು. ನಡುವಯಸ್ಸಿಗೆ ಹತ್ತಿರವಿರುವ ಸದಾನಂದನೊಂದಿಗೆ ಹತ್ತೊಂಬತ್ತರ ಪೋರ ಶ್ರೇಯಸ್‌ಗೆ ಮೀನು ಹಿಡಿಯಲು ಜತೆಯಾಗಿ ಹೋಗುವಂತ ದೋಸ್ತಿ ಇರಲು ಸಾಧ್ಯವೇ ಇಲ್ಲ. ಅಲ್ಲದೆ ಹುಡುಗಿ ವಿಷಯವಾಗಿ ಸದಾನಂದ ಸತಾಯಿಸಲು ಶುರುಮಾಡಿದ ನಂತರವಂತೂ ಶ್ರೇಯಸ್ ಆತನ ಫೋನ್ ಕಾಲ್ ಕೂಡ ಸ್ವೀಕರಿಸದೆ ಅವಾಯ್ಡ್ ಮಾಡುತ್ತಿದ್ದನಂತೆ ಎನ್ನುವ ಅವನ ಸ್ನೇಹಿತರು ಶ್ರೇಯಸ್‌ನ ಹೆಣ ಕಂಡ ಹತ್ತಿರದವರು ಆತ ನೀರೇ ಕುಡಿದಿಲ್ಲವೆಂದು ದೃಢವಾಗಿ ಹೇಳುತ್ತಾರೆ.

ಇದೆಲ್ಲ ಸಹಜವಾಗೇ ಕೊಲೆಯ ಶಂಕೆ ಮೂಡಿಸುತ್ತದೆ. ಹೆಣಸಿಕ್ಕ ನಂತರ ಬ್ರಹ್ಮಾವರದ ಪೊಲೀಸರ ವರ್ತನೆಯೂ ಏನೋ ಮುಚ್ಚಿಹಾಕಲು ತಿಣುಕಾಡುತ್ತಿರುವಂತಿದೆ. ಮಣಿಪಾಲದಲ್ಲಿ ಪೋಸ್ಟ್ಮಾರ್ಟಮ್ ನಡೆಯುತ್ತಿದ್ದಾಗ ಸಬ್‌ಇನ್ಸ್ಪೆಕ್ಟರ್ ರಾಘವೇಂದ್ರ ವೈದ್ಯರ ಬಳಿಯೇ ಇದ್ದದ್ದು ಏಕೆ? ಪ್ರಕರಣ ನಡೆದು ಎರಡು ವಾರವಾದರೂ ಪೊಲೀಸರೇಕೆ ಹುಡುಗನ ತಾಯ್ತಂದೆಯ ಹೇಳಿಕೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ? ಶಾಸಕ ರಘುಪತಿ ಭಟ್ಟರ ರಹಸ್ಯ ನಿರ್ದೇಶನ ಪೊಲೀಸರು ಪಾಲಿಸುತ್ತಿದ್ದಾರಾ? ಸದಾನಂದ ಪೂಜಾರಿಯ “ಇತಿಹಾಸ” ಗೊತ್ತಿದ್ದೂ ಪೊಲೀಸರೇಕೆ ಕಾನೂನಿನ ಕುಣಿಕೆ ಬಿಗಿಮಾಡುತ್ತಿಲ್ಲಾ? ಇಂಥ ಚರ್ಚೆ ಈಗ ಉಡುಪಿ-ಬ್ರಹ್ಮಾವರದಾದ್ಯಂತ ಬಿರುಸಾಗಿ ಸಾಗಿದೆ.

ಶ್ರೇಯಸ್‌ನ ಸಂಶಯಾಸ್ಪದ ಸಾವಿನ ಪ್ರಕರಣದಲ್ಲಿ ಸದಾನಂದ ಪೂಜಾರಿ “ಅಮಾಯಕ”ನೆಂದು ಹೇಳಲು ಸ್ಥಳೀಯರಿಗೆ ಕಾರಣಗಳೇ ಸಿಗುತ್ತಿಲ್ಲ. ಸದ್ಯಕ್ಕೆ ಅಕ್ರಮ ಮರಳು ದಂಧೆಯಲ್ಲಿ ಹೆಬ್ರಿ ಪೊಲೀಸ್ ಸ್ಟೇಷನ್‌ನಲ್ಲೇ ರೌಡಿ ಶೀಟರ್ ಎಂಬ ಕೀರ್ತಿಯೂ ಇದೆ. ತನಗೆ ಎಮ್ಮೆಲ್ಲೆ ಸಾಹೇಬರ ಬಲವಿರುವುದರಿಂದ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುತ್ತೇನೆಂಬ ಪೊಗರಿನ ಸದಾನಂದ ಕರ್ಜೆ ಪರಿಸರದಲ್ಲಿ ಬಾರಾಭಾನ್ಗಡಿ ಮಾಡುತ್ತಲೇ ಇದ್ದಾನೆ.  ಕೆಲವು ದಿನಗಳ ಹಿಂದೆ ಪಾಪದವರೊಬ್ಬರ ಮನೆಯ ಗೇಟು ಕಿತ್ತು ಎಲ್ಲೋ ಎಸೆದಿದ್ದ ಸದಾನಂದನ ಗ್ಯಾಂಗ್ ಮೇಲೆ ಕಂಪ್ಲೇಂಟೂ ಆಗಿದೆ. ಕಳೆದ ಡಿಸೆಂಬರ್‌ನಲ್ಲಿ ಕರ್ಜೆಯ ಮಹಾಲಿಂಗೇಶ್ವರ ದೇವಳದ ಆನುವಂಶಿಕ ಮೊಕ್ತೇಸರ ಮತ್ತು ಅರ್ಚಕನ ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಪ್ರಕರಣ ಕೇಸೂ ಈ ಗ್ಯಾಂಗಿನ ಮೇಲಿದೆ. ದಿನಕ್ಕೊಂದು ಅನಾಹುತ-ಅವ್ಯವಹಾರ ಮಾಡುವ ಸದಾನಂದನ ತಂಡ ಮುಗ್ಧ ಶ್ರೇಯಸ್‌ನ ಸಾಯಿಸಿಲ್ಲವೆಂದು ಹೇಳೋದಾದರೂ ಎನ್ನುವುದು ಊರವರ ಅಭಿಪ್ರಾಯ.

ದುರ್ಬಲ-ಅಸಹಾಯಕ ಶ್ರೇಯಸ್ ಹೆತ್ತವರಿಗೆ ಎಸ್ಪಿ ನಿಶಾ ಮೇಡಮ್ ನ್ಯಾಯ ಕೊಡಿಸುವರಾ? ಒಂದು ವಾರದಲ್ಲಿ ಸರಿಯಾದ ತನಿಖೆ ನಡೆಯದಿದ್ದರೆ ಎಸ್ಪಿ ಕಚೇರಿ ಎದುರು ಧರಣಿ ಕುಳಿತುಕೊಳ್ಳುವುದಾಗಿ ಮಾಜಿ ಶಾಸಕ ಪ್ರಮೋದ್ ಮಧ್ವಾರಾಜ್ ಆವಾಜ್ ಹಾಕಿದ್ದಾರೆ. ಆಗಲೇ ಹತ್ತು ದಿನ ಕಳೆದಿದೆ. ಶ್ರೇಯಸ್ ತಾಯ್ತಂದೆ ಪ್ರಮೋದ್‌ರನ್ನು ನಂಬಿಕೊಂಡಿದ್ದಾರೆ. ಏಳು ಮೀನುಗಾರರ ಸುವರ್ಣ ತ್ರಿಭುಜ ನೋಟನ್ನು ಮುಳುಗಿಸಿದ ನೇವಿ ಹಡಗು ಐಎಸ್‌ಎಸ್ ಕೊಚ್ಚಿನ್ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತಲುಪಿಸದ ಪ್ರಮೋದ್ ಮಧ್ವರಾಜ್ ಶ್ರೇಯಸ್ ಕೇಸ್ ಗಂಭೀರವಾಗಿ ಪರಿಗಣಿಸಿದ್ದಾರಾ? ಎಂಬ ಪ್ರಶ್ನೆ ಏಳುವುದು ಸಹಜವಾಗಿದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಆದರೆ ಕೇಂದ್ರ ಮತ್ತು ರಾಜ್ಯ; ಎರಡೂ ಕಡೆ ಮನುವಾದಿಗಳೇ ಅಧಿಕಾರದಲ್ಲಿ ಇರುವುದರಿಂದ ಇದು ಸಾಧ್ಯವಾ?

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...