Homeಚಳವಳಿಟ್ವಿಟ್ಟರ್‌ ಜಾತಿವಾದ ಮಾಡುತ್ತಿದೆ, ತಳಸಮುದಾಯಗಳನ್ನು ಕಡೆಗಣಿಸುತ್ತಿದೆ - ಪ್ರೊ.ದಿಲೀಪ್‌ ಮಂಡಲ್‌

ಟ್ವಿಟ್ಟರ್‌ ಜಾತಿವಾದ ಮಾಡುತ್ತಿದೆ, ತಳಸಮುದಾಯಗಳನ್ನು ಕಡೆಗಣಿಸುತ್ತಿದೆ – ಪ್ರೊ.ದಿಲೀಪ್‌ ಮಂಡಲ್‌

- Advertisement -
- Advertisement -

ಟ್ವಿಟ್ಟರ್‌ ಜಾತಿವಾದ ಮಾಡುತ್ತಿದ್ದು, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ಎಂದು ಹಿರಿಯ ಪತ್ರಕರ್ತರಾದ ಪ್ರೊ.ದಿಲೀಪ್‌ ಮಂಡಲ್‌ ಆರೋಪಿಸಿದ್ದಾರೆ.

ಟ್ವಿಟ್ಟರ್‌ ಒರಿಜಿನಲ್‌ ಆದ, ಹೆಚ್ಚು ಬಳಕೆಯ ಖಾತೆಗಳನ್ನು ವೆರಿಫೈಡ್‌ ಮಾಡುತ್ತದೆ. ಅದಕ್ಕಾಗಿ ಖಾತೆಯ ಹೆಸರಿನ ಮುಂದೆ ’ಬ್ಲೂ ಟಿಕ್’ ಚಿಹ್ನೆ ಹಾಕುತ್ತದೆ. ಇದು ಪ್ರಮುಖ ವ್ಯಕ್ತಿಗಳನ್ನು ಗುರುತಿಸಲು, ಅವರ ಖಾತೆಯನ್ನು ದೃಢೀಕರಿಸಲು ಅನುವಾಗುತ್ತದೆ. ಉದಾಹರಣೆಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಅಥವಾ ಬಾಲಿವುಡ್‌ ತಾರೆ ಅಮೀರ್‌ ಖಾನ್‌ರವರ ಹೆಸರಿನಲ್ಲಿ ಹಲವಾರು ಖಾತೆಗಳಿದ್ದಾಗ ಜನರಿಗೆ ಗೊಂದಲವಾಗಬಾರದೆಂದು ಒರಿಜಿನಲ್‌ ಖಾತೆಗೆ ಟ್ವಿಟ್ಟರ್‌ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡಿರುತ್ತದೆ.

ಈ ವೆರಿಫೈಡ್‌ ವಿಚಾರದಲ್ಲಿ ಟ್ವಿಟ್ಟರ್‌ ಜಾತಿವಾದಿಯಾಗಿ ನಡೆದುಕೊಳ್ಳುತ್ತಿದೆ ಎಂದು ಹಲವಾರು ತಳಸಮುದಾಯದ ಚಿಂತಕರು, ಹೋರಾಟಗಾರರು ಆರೋಪಿಸಿದ್ದಾರೆ. ಇದನ್ನು ಹಿರಿಯ ಪತ್ರಕರ್ತ ಪ್ರೊ.ದಿಲೀಪ್‌ ಮಂಡಲ್‌ರವರು ಮೊದಲು ಆರಂಭಿಸಿದರು. ಜಾತಿ ತಾರತಮ್ಯದ ಹಲವಾರು ಮುಖಗಳನ್ನು ಟ್ವಿಟ್ಟರ್‌ ಮೂಲಕ ಅನಾವರಣ ಮಾಡುತ್ತಿದ್ದ ಅವರ ಖಾತೆಯನ್ನು ಟ್ವಿಟ್ಟರ್‌ ಯಾವುದೇ ಕಾರಣವಿಲ್ಲದೇ ಬ್ಲಾಕ್‌ ಮಾಡಿತು. ಆಗ ಅವರು ಟ್ವಿಟ್ಟರ್‌ ವಿರುದ್ಧ ಅಭಿಯಾನ ಆರಂಭಿಸಿದರು.

ಮೊದಲಿಗೆ ಸ್ಯಾಕ್‌ಮಣಿಸ್‌ ಮಹೇಶ್ವರಿ ಎಂಬುದಾಗಿ ಅವರು ಟ್ರೆಂಡ್‌ ಮಾಡಿದರು. ಅದನ್ನು ಟ್ವಿಟ್ಟರ್‌ ತೆಗೆದುಹಾಕಿತು. ನಂತರ ಕ್ಯಾಸ್ಟಿಸ್ಟ್‌ ಟ್ವಿಟ್ಟರ್‌ ಎಂದು ಆನಂತರ ಜೈಭೀಮ್‌ ಟ್ವಿಟ್ಟರ್‌ ಎಂದು ಟ್ರೆಂಡ್‌ ಮಾಡಿ ಲಕ್ಷಾಂತರ ಜನರ ಗಮನಸೆಳೆದರು. ಇದಾದ ನಂತರ ಟ್ವಿಟ್ಟರ್‌ ಎಚ್ಚೆತ್ತುಕೊಂಡು ಅವರ ಅಕೌಂಟ್‌ಗೆ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡಿತು.

ಆಗ ಅವರು ಕೇವಲ ನನ್ನೊಬ್ಬನದು ಮಾತ್ರವಲ್ಲದೇ ದೇಶದ ಎಲ್ಲಾ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಟ್ವಿಟ್ಟರ್‌ ಖಾತೆಗಳಿಗೂ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡುವಂತೆ ಆಗ್ರಹಿಸಿದರು. #verifySCSTOBCMinority ಹ್ಯಾಷ್‌ಟ್ಯಾಗ್‌ ನೀಡಿದರು. ಆನಂತರ ಈ ವಿಚಾರವಾಗಿ ಇಂದು, ಭೀಮ್ ಆರ್ಮಿ ಮುಂಬೈ ತಂಡವು ಟ್ವಿಟ್ಟರ್ ಇಂಡಿಯಾ ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನೆಯನ್ನು ನಡೆಸಿ ಇಡೀದಿನ ಟ್ವಟ್ಟರ್‌ ಕಚೇರಿಯನ್ನು ಬಂದ್‌ಮಾಡಿತ್ತು. ಆಗ ಟ್ವಿಟ್ಟರ್‌ನವರು ಭೀಮ್‌ ಆರ್ಮಿ ಸಂಘಟಕರೊಡನೆ ಸಭೆ ಕರೆದಿದ್ದರು.

ಇದನ್ನೂ ಓದಿ: ’ಜೈಭೀಮ್‌ ಟ್ವಿಟ್ಟರ್‌’ ಮೊಳಗಿದ ಘೋಷಗಳು: ಟ್ವಿಟ್ಟರ್‌ನ ಜಾತೀಯತೆಗೆ ಭಾರೀ ಪ್ರತಿರೋಧ…

ಪಾ. ರಂಜಿತ್‌ ಎಂಬ ತಮಿಳು ನಿರ್ದೇಶಕರು ಕಾಲ ಮತ್ತು ಕಬಾಲಿಯಂತಹ ಸಾವಿರಾರು ಕೋಟಿ ಬಂಡವಾಳದ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಭಾರತದ ಅತ್ಯಂತ ಯಶಸ್ವಿ ಚಿತ್ರಗಳ ನಿರ್ದೇಶಕರಾಗಿದ್ದು, ಟ್ವಿಟ್ಟರ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಳನ್ನು ಹೊಂದಿರುವ ಅಂಬೇಡ್ಕರೈಟ್ ಆಗಿದ್ದಾರೆ. ಅವರ ಖಾತೆಯನ್ನು ವೈರಫೈ ಮಾಡಿಲ್ಲ ಏಕೆ ಎಂದು ಟ್ವಿಟರ್ ಇಂಡಿಯಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅದೇ ರೀತಿಯಾಗಿ ನೂರಾರು ಜನರ ಉದಾಹರಣೆಯನ್ನು ದಿಲೀಪ್‌ ಮಂಡಲ್‌ರವರು ಟ್ವಿಟ್ಟರ್‌ನಲ್ಲಿ ಹೆಸರಿಸಿದ್ದಾರೆ. ಕಾಕಾವಾಣಿ ಎಂಬುವವರು ಒಂದೂವರೆ ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಟ್ರೈಬಲ್‌ ಆರ್ಮಿ 12ಸಾವರ ಅನುಯಾಯಿಗಳನ್ನು ಹೊಂದಿದೆ. ಜೈಭೀಮ್‌ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್‌ ರಾವಣ್‌ರವರು 67 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇಂತಹ ಅಸಂಖ್ಯ ತಳಸಮುದಾಯದವರ ಟ್ವಿಟ್ಟರ್‌ ಅಕೌಂಟ್‌ ವೆರಿಫೈ ಆಗಿಲ್ಲ. ಆದರೆ ಕೇವಲ 27 ಜನ ಫಾಲೋವರ್ಸ್‌ಗಳನ್ನು ಹೊಂದಿರುವ ಜೈ ಶಾ ಅಕೌಂಟ್‌ ವೈರಿಫೈ ಆಗಿದೆ. 877 ಫಾಲೋವರ್ಸ್‌ಗಳನ್ನು ಹೊಂದಿರುವ ಹಿಂದೂ ವಿಶ್ವ ಎಂಬುವವರ ಅಕೌಂಟ್‌ ವರಿಫೈ ಆಗಲು ಕಾರಣವೇನು? ಎಂದು ಕಿಡಿಕಾರಿದ್ದಾರೆ.

ಇದು ಕೇವಲ ವೆರಿಫೈ ವಿಷಯ ಮಾತ್ರವಲ್ಲ. ಟ್ವಿಟ್ಟರ್‌ನಲ್ಲಿ ತಳಸಮುದಾಯ ವಿಷಯ, ಸುದ್ದಿಗಳನ್ನು, ಬರಹಗಳನ್ನು ಸಹ ಹೆಚ್ಚು ಜನರಿಗೆ ತಲುಪದಂತೆ ಟ್ವಿಟ್ಟರ್‌ ತಡಯುತ್ತಿದೆ ಎಂದು ದಿಲೀಪ್‌ ಮಂಡಲ್‌ರವರ ಆರೋಪಿಸಿದ್ದಾರೆ. ಇದಕ್ಕೆ ಟ್ವಿಟ್ಟರ್‌ ಇಂಡಿಯಾದ ಆಯಾಕಟ್ಟಿಯ ಹುದ್ದೆಗಳಲ್ಲಿ ಕುಳಿತಿರುವ ಜಾತಿವಾದಿಗಳೇ ಕಾರಣ ಎಂದು ದೂರಿದ್ದಾರೆ.

ಇದ್ಯಾವುದಕ್ಕೂ ಟ್ವಿಟ್ಟರ್‌ ಬಳಿ ಉತ್ತರವಿಲ್ಲ. ಮುಕ್ತ ಮತ್ತ ಸ್ವತಂತ್ರ ಎಂದು ಭಾವಿಸುವ ಸೋಷಿಯಲ್‌ ಫ್ಲಾಟ್‌ಫಾರಂಗಳು ಸಹ ಹೇಗೆ ಜಾತಿವಾದಿಗಳಾಗಿವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಹಾಗಾಗಿ ಇದರ ವಿರುದ್ಧ ಹೋರಾಟ ನಡೆಯುತ್ತಿದೆ ಎಂದು ದಿಲೀಪ್‌ ಮಂಡಲ್‌ ಹೇಳಿದ್ದಾರೆ.

ಈ ಹಿಂದೆಯೂ ಸಹ 7 ಜನ ಮಹಿಳೆಯರೊಂದಿಗೆ ಟ್ವಿಟ್ಟರ್‌ ಸಿಇಓ ಸಭೆ ಮಾಡುವಾಗ ಸ್ಮಾಶ್ ಬ್ರಾಹ್ಮಿನಿಕಲ್ ಪೆಟ್ರಿಯಾರ್ಕಿ ಎಂಬ ಚಿತ್ರ ನೀಡಿದಾಗ ದೊಡ್ಡ ವಿವಾದವಾಗಿತ್ತು. ಅದು ನಿಜ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಥಳಾಂತರಗೊಂಡ ಅಕ್ಬರ್ ನಗರ ನಿವಾಸಿಗಳನ್ನು SIR ನಿಂದ ಹೊರಗಿಟ್ಟಿರುವ ಬಗ್ಗೆ ಪರಿಶೀಲಿಸಲು ಲಕ್ನೋ ಚುನಾವಣಾ ಅಧಿಕಾರಿಗೆ ಸುಪ್ರೀಂ ಸೂಚನೆ

ಉತ್ತರ ಪ್ರದೇಶದಲ್ಲಿ ತಮ್ಮ ಮನೆಗಳನ್ನು ನೆಲಸಮಗೊಳಿಸಿ, ಸ್ಥಳಾಂತರದ ನಂತರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಿಂದ ತಮ್ಮನ್ನು ಹೊರಗಿಡಲಾಗಿದೆ ಎಂದು ಆರೋಪಿಸಿ ಅಕ್ಬರ್ ನಗರದ ಮಾಜಿ ನಿವಾಸಿಗಳು ಎತ್ತಿರುವ ದೂರುಗಳನ್ನು...

‘ವಯಸ್ಕರು ಒಟ್ಟಿಗೆ ವಾಸಿಸಲು ನಿರ್ಧರಿಸುವುದು ಅಪರಾಧವಲ್ಲ..’; ಅಂತರಧರ್ಮೀಯ ಜೋಡಿ ಕುರಿತು ಕೋರ್ಟ್ ಮಹತ್ವದ ತೀರ್ಪು

"ಅಂತರ್ಧರ್ಮೀಯರಾದ ಇಬ್ಬರು ವಯಸ್ಕ ವ್ಯಕ್ತಿಗಳು, ಅವರು ತಮ್ಮ ಸ್ವತಂತ್ರ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ನಿರ್ಧರಿಸುತ್ತಾರೆ, ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನು ಅವರನ್ನು ತಡೆಯಲು ಅಥವಾ ಅಂತರಧರ್ಮೀಯ ವಿವಾಹಗಳನ್ನು ನಿಷೇಧಿಸಲು ಸಾಧ್ಯವಿಲ್ಲ" ಎಂದು...

ಗೋರಖ್‌ಪುರದ ಏಮ್ಸ್‌ನಲ್ಲಿ ನಾಗಾಲ್ಯಾಂಡ್ ವೈದ್ಯೆಗೆ ಕಿರುಕುಳ; ಜನಾಂಗೀಯ ನಿಂದನೆ

ಉತ್ತರ ಪ್ರದೇಶದ ಗೋರಖ್‌ಪುರದ ಏಮ್ಸ್‌ನಲ್ಲಿ ನಿಯೋಜಿತರಾಗಿದ್ದ ನಾಗಾಲ್ಯಾಂಡ್‌ನ ಮೂರನೇ ವರ್ಷದ ನಿವಾಸಿ ವೈದ್ಯರ ಮೇಲೆ ಭಾನುವಾರ ಸಂಜೆ ಸಂಸ್ಥೆಯ ಆವರಣದ ಬಳಿ ಮೂವರು ಜನಾಂಗೀಯ ನಿಂದನೆ, ಕಿರುಕುಳ ಮತ್ತು ದೈಹಿಕ ಹಲ್ಲೆ ನಡೆಸಿದ್ದಾರೆ...

‘2026 ರಲ್ಲಿ ಸಮುದ್ರವನ್ನು ಪ್ರಾಬಲ್ಯಗೊಳಿಸುತ್ತೇವೆ’: ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿಯಿಂದ ಭಾರತಕ್ಕೆ ಬಹಿರಂಗ ಬೆದರಿಕೆ

2008ರ ಮುಂಬೈ ದಾಳಿಯ ಭೀಕರತೆಯನ್ನು ಪ್ರತಿಧ್ವನಿಸುವ ಕಟು ಬೆದರಿಕೆಯಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಭಾರತದಲ್ಲಿ ಮತ್ತೊಮ್ಮೆ ಸಮುದ್ರ ಮಾರ್ಗವನ್ನು ಬಳಸಿಕೊಂಡು 26/11 ಮಾದರಿಯ ದಾಳಿಯನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ...

ಕೇರಳ ಹೆಸರು ಇನ್ನು ಮುಂದೆ ‘ಕೇರಳಂ’; ಕೇಂದ್ರ ಸಚಿವ ಸಂಪುಟ ಅನುಮೋದನೆ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. "ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ...

ನಾಡೋಜ ಗೌರವ ತಿರಸ್ಕರಿಸಿದ ಹಿರಿಯ ಚಿಂತಕ ಡಾ ಜಿ. ರಾಮಕೃಷ್ಣ; ರಾಜ್ಯಪಾಲರಿಂದ ಗೌರವ ಸ್ವೀಕರಿಸದಿರಲು ನಿರ್ಧಾರ

ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ನಾಡೋಜ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಸ್ವೀಕರಿಸಲು ನಿರಾಕರಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಕ್ಯಾಂಪಸ್‌ನ ‘ನವರಂಗ’ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆಯುವ 34ನೇ ನುಡಿಹಬ್ಬದಲ್ಲಿ...

‘ಕೇರಳ ಸಂಪೂರ್ಣ ಸಾಮರಸ್ಯದಿಂದ ಬದುಕುತ್ತಿದೆ, ಸಿನಿಮಾದಲ್ಲಿ ತಪ್ಪು ಚಿತ್ರಣವಿದೆ’: ‘ದಿ ಕೇರಳ ಸ್ಟೋರಿ 2’ ಕುರಿತು ಕೇರಳ ಹೈಕೋರ್ಟ್

ವಿವಾದಾತ್ಮಕ 'ದಿ ಕೇರಳ ಸ್ಟೋರಿ 2 -ಗೋಸ್ ಬಿಯಾಂಡ್' ಸಿನಿಮಾಗೆ ಸರ್ಟಿಫಿಕೇಟ್ ನೀಡಿರುವ ಕುರಿತು ಕೇರಳ ಹೈಕೋರ್ಟ್ ಮಂಗಳವಾರ (ಫೆ.24) ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (ಸಿಬಿಎಫ್‌ಸಿ) ಪ್ರಶ್ನಿಸಿದೆ ಎಂದು ಕಾನೂನು ಸುದ್ದಿ...

‘ಸರ್ವಾಧಿಕಾರಿ ಪ್ರವೃತ್ತಿ, ಹೇಡಿತನಕ್ಕೆ ಸಾಕ್ಷಿ’ : ಯುವ ಕಾಂಗ್ರೆಸ್‌ ನಾಯಕರ ಬಂಧನ ಖಂಡಿಸಿದ ರಾಹುಲ್ ಗಾಂಧಿ

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ಪಕ್ಷದ ಇತರ ಸದಸ್ಯರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಇದು ಸರ್ವಾಧಿಕಾರಿ ಪ್ರವೃತ್ತಿ ಮತ್ತು...

‘ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ’; ನ್ಯಾಯಮೂರ್ತಿ ಉಜ್ವಲ್  ಭೂಯಾನ್

ಹೊಸದಿಲ್ಲಿ: ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಘನತೆಯ ಭರವಸೆ ನೀಡುತ್ತದೆ. ಆದರೆ ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ...

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ; ಎಎಸ್ಎ ಪ್ರತಿಭಟನೆ

ದಲಿತ ವಿದ್ಯಾರ್ಥಿಯ ಮೇಲೆ ಜಾತಿ ಆಧಾರಿತ ಹಲ್ಲೆ ನಡೆದಿದ್ದರೂ ಪ್ರಕರಣದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ಆಡಳಿತಾತ್ಮಕ ನಿಷ್ಕ್ರಿಯತೆ ಇದೆ ಎಂದು ಆರೋಪಿಸಿ, ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎಎಸ್ಎ) ಸೋಮವಾರ (ಫೆ.23) ಪ್ರತಿಭಟನೆ ನಡೆಸಿತು...