Homeಚಳವಳಿಟ್ವಿಟ್ಟರ್‌ ಜಾತಿವಾದ ಮಾಡುತ್ತಿದೆ, ತಳಸಮುದಾಯಗಳನ್ನು ಕಡೆಗಣಿಸುತ್ತಿದೆ - ಪ್ರೊ.ದಿಲೀಪ್‌ ಮಂಡಲ್‌

ಟ್ವಿಟ್ಟರ್‌ ಜಾತಿವಾದ ಮಾಡುತ್ತಿದೆ, ತಳಸಮುದಾಯಗಳನ್ನು ಕಡೆಗಣಿಸುತ್ತಿದೆ – ಪ್ರೊ.ದಿಲೀಪ್‌ ಮಂಡಲ್‌

- Advertisement -
- Advertisement -

ಟ್ವಿಟ್ಟರ್‌ ಜಾತಿವಾದ ಮಾಡುತ್ತಿದ್ದು, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ಎಂದು ಹಿರಿಯ ಪತ್ರಕರ್ತರಾದ ಪ್ರೊ.ದಿಲೀಪ್‌ ಮಂಡಲ್‌ ಆರೋಪಿಸಿದ್ದಾರೆ.

ಟ್ವಿಟ್ಟರ್‌ ಒರಿಜಿನಲ್‌ ಆದ, ಹೆಚ್ಚು ಬಳಕೆಯ ಖಾತೆಗಳನ್ನು ವೆರಿಫೈಡ್‌ ಮಾಡುತ್ತದೆ. ಅದಕ್ಕಾಗಿ ಖಾತೆಯ ಹೆಸರಿನ ಮುಂದೆ ’ಬ್ಲೂ ಟಿಕ್’ ಚಿಹ್ನೆ ಹಾಕುತ್ತದೆ. ಇದು ಪ್ರಮುಖ ವ್ಯಕ್ತಿಗಳನ್ನು ಗುರುತಿಸಲು, ಅವರ ಖಾತೆಯನ್ನು ದೃಢೀಕರಿಸಲು ಅನುವಾಗುತ್ತದೆ. ಉದಾಹರಣೆಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಅಥವಾ ಬಾಲಿವುಡ್‌ ತಾರೆ ಅಮೀರ್‌ ಖಾನ್‌ರವರ ಹೆಸರಿನಲ್ಲಿ ಹಲವಾರು ಖಾತೆಗಳಿದ್ದಾಗ ಜನರಿಗೆ ಗೊಂದಲವಾಗಬಾರದೆಂದು ಒರಿಜಿನಲ್‌ ಖಾತೆಗೆ ಟ್ವಿಟ್ಟರ್‌ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡಿರುತ್ತದೆ.

ಈ ವೆರಿಫೈಡ್‌ ವಿಚಾರದಲ್ಲಿ ಟ್ವಿಟ್ಟರ್‌ ಜಾತಿವಾದಿಯಾಗಿ ನಡೆದುಕೊಳ್ಳುತ್ತಿದೆ ಎಂದು ಹಲವಾರು ತಳಸಮುದಾಯದ ಚಿಂತಕರು, ಹೋರಾಟಗಾರರು ಆರೋಪಿಸಿದ್ದಾರೆ. ಇದನ್ನು ಹಿರಿಯ ಪತ್ರಕರ್ತ ಪ್ರೊ.ದಿಲೀಪ್‌ ಮಂಡಲ್‌ರವರು ಮೊದಲು ಆರಂಭಿಸಿದರು. ಜಾತಿ ತಾರತಮ್ಯದ ಹಲವಾರು ಮುಖಗಳನ್ನು ಟ್ವಿಟ್ಟರ್‌ ಮೂಲಕ ಅನಾವರಣ ಮಾಡುತ್ತಿದ್ದ ಅವರ ಖಾತೆಯನ್ನು ಟ್ವಿಟ್ಟರ್‌ ಯಾವುದೇ ಕಾರಣವಿಲ್ಲದೇ ಬ್ಲಾಕ್‌ ಮಾಡಿತು. ಆಗ ಅವರು ಟ್ವಿಟ್ಟರ್‌ ವಿರುದ್ಧ ಅಭಿಯಾನ ಆರಂಭಿಸಿದರು.

ಮೊದಲಿಗೆ ಸ್ಯಾಕ್‌ಮಣಿಸ್‌ ಮಹೇಶ್ವರಿ ಎಂಬುದಾಗಿ ಅವರು ಟ್ರೆಂಡ್‌ ಮಾಡಿದರು. ಅದನ್ನು ಟ್ವಿಟ್ಟರ್‌ ತೆಗೆದುಹಾಕಿತು. ನಂತರ ಕ್ಯಾಸ್ಟಿಸ್ಟ್‌ ಟ್ವಿಟ್ಟರ್‌ ಎಂದು ಆನಂತರ ಜೈಭೀಮ್‌ ಟ್ವಿಟ್ಟರ್‌ ಎಂದು ಟ್ರೆಂಡ್‌ ಮಾಡಿ ಲಕ್ಷಾಂತರ ಜನರ ಗಮನಸೆಳೆದರು. ಇದಾದ ನಂತರ ಟ್ವಿಟ್ಟರ್‌ ಎಚ್ಚೆತ್ತುಕೊಂಡು ಅವರ ಅಕೌಂಟ್‌ಗೆ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡಿತು.

ಆಗ ಅವರು ಕೇವಲ ನನ್ನೊಬ್ಬನದು ಮಾತ್ರವಲ್ಲದೇ ದೇಶದ ಎಲ್ಲಾ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಟ್ವಿಟ್ಟರ್‌ ಖಾತೆಗಳಿಗೂ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡುವಂತೆ ಆಗ್ರಹಿಸಿದರು. #verifySCSTOBCMinority ಹ್ಯಾಷ್‌ಟ್ಯಾಗ್‌ ನೀಡಿದರು. ಆನಂತರ ಈ ವಿಚಾರವಾಗಿ ಇಂದು, ಭೀಮ್ ಆರ್ಮಿ ಮುಂಬೈ ತಂಡವು ಟ್ವಿಟ್ಟರ್ ಇಂಡಿಯಾ ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನೆಯನ್ನು ನಡೆಸಿ ಇಡೀದಿನ ಟ್ವಟ್ಟರ್‌ ಕಚೇರಿಯನ್ನು ಬಂದ್‌ಮಾಡಿತ್ತು. ಆಗ ಟ್ವಿಟ್ಟರ್‌ನವರು ಭೀಮ್‌ ಆರ್ಮಿ ಸಂಘಟಕರೊಡನೆ ಸಭೆ ಕರೆದಿದ್ದರು.

ಇದನ್ನೂ ಓದಿ: ’ಜೈಭೀಮ್‌ ಟ್ವಿಟ್ಟರ್‌’ ಮೊಳಗಿದ ಘೋಷಗಳು: ಟ್ವಿಟ್ಟರ್‌ನ ಜಾತೀಯತೆಗೆ ಭಾರೀ ಪ್ರತಿರೋಧ…

ಪಾ. ರಂಜಿತ್‌ ಎಂಬ ತಮಿಳು ನಿರ್ದೇಶಕರು ಕಾಲ ಮತ್ತು ಕಬಾಲಿಯಂತಹ ಸಾವಿರಾರು ಕೋಟಿ ಬಂಡವಾಳದ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಭಾರತದ ಅತ್ಯಂತ ಯಶಸ್ವಿ ಚಿತ್ರಗಳ ನಿರ್ದೇಶಕರಾಗಿದ್ದು, ಟ್ವಿಟ್ಟರ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಳನ್ನು ಹೊಂದಿರುವ ಅಂಬೇಡ್ಕರೈಟ್ ಆಗಿದ್ದಾರೆ. ಅವರ ಖಾತೆಯನ್ನು ವೈರಫೈ ಮಾಡಿಲ್ಲ ಏಕೆ ಎಂದು ಟ್ವಿಟರ್ ಇಂಡಿಯಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅದೇ ರೀತಿಯಾಗಿ ನೂರಾರು ಜನರ ಉದಾಹರಣೆಯನ್ನು ದಿಲೀಪ್‌ ಮಂಡಲ್‌ರವರು ಟ್ವಿಟ್ಟರ್‌ನಲ್ಲಿ ಹೆಸರಿಸಿದ್ದಾರೆ. ಕಾಕಾವಾಣಿ ಎಂಬುವವರು ಒಂದೂವರೆ ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಟ್ರೈಬಲ್‌ ಆರ್ಮಿ 12ಸಾವರ ಅನುಯಾಯಿಗಳನ್ನು ಹೊಂದಿದೆ. ಜೈಭೀಮ್‌ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್‌ ರಾವಣ್‌ರವರು 67 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇಂತಹ ಅಸಂಖ್ಯ ತಳಸಮುದಾಯದವರ ಟ್ವಿಟ್ಟರ್‌ ಅಕೌಂಟ್‌ ವೆರಿಫೈ ಆಗಿಲ್ಲ. ಆದರೆ ಕೇವಲ 27 ಜನ ಫಾಲೋವರ್ಸ್‌ಗಳನ್ನು ಹೊಂದಿರುವ ಜೈ ಶಾ ಅಕೌಂಟ್‌ ವೈರಿಫೈ ಆಗಿದೆ. 877 ಫಾಲೋವರ್ಸ್‌ಗಳನ್ನು ಹೊಂದಿರುವ ಹಿಂದೂ ವಿಶ್ವ ಎಂಬುವವರ ಅಕೌಂಟ್‌ ವರಿಫೈ ಆಗಲು ಕಾರಣವೇನು? ಎಂದು ಕಿಡಿಕಾರಿದ್ದಾರೆ.

ಇದು ಕೇವಲ ವೆರಿಫೈ ವಿಷಯ ಮಾತ್ರವಲ್ಲ. ಟ್ವಿಟ್ಟರ್‌ನಲ್ಲಿ ತಳಸಮುದಾಯ ವಿಷಯ, ಸುದ್ದಿಗಳನ್ನು, ಬರಹಗಳನ್ನು ಸಹ ಹೆಚ್ಚು ಜನರಿಗೆ ತಲುಪದಂತೆ ಟ್ವಿಟ್ಟರ್‌ ತಡಯುತ್ತಿದೆ ಎಂದು ದಿಲೀಪ್‌ ಮಂಡಲ್‌ರವರ ಆರೋಪಿಸಿದ್ದಾರೆ. ಇದಕ್ಕೆ ಟ್ವಿಟ್ಟರ್‌ ಇಂಡಿಯಾದ ಆಯಾಕಟ್ಟಿಯ ಹುದ್ದೆಗಳಲ್ಲಿ ಕುಳಿತಿರುವ ಜಾತಿವಾದಿಗಳೇ ಕಾರಣ ಎಂದು ದೂರಿದ್ದಾರೆ.

ಇದ್ಯಾವುದಕ್ಕೂ ಟ್ವಿಟ್ಟರ್‌ ಬಳಿ ಉತ್ತರವಿಲ್ಲ. ಮುಕ್ತ ಮತ್ತ ಸ್ವತಂತ್ರ ಎಂದು ಭಾವಿಸುವ ಸೋಷಿಯಲ್‌ ಫ್ಲಾಟ್‌ಫಾರಂಗಳು ಸಹ ಹೇಗೆ ಜಾತಿವಾದಿಗಳಾಗಿವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಹಾಗಾಗಿ ಇದರ ವಿರುದ್ಧ ಹೋರಾಟ ನಡೆಯುತ್ತಿದೆ ಎಂದು ದಿಲೀಪ್‌ ಮಂಡಲ್‌ ಹೇಳಿದ್ದಾರೆ.

ಈ ಹಿಂದೆಯೂ ಸಹ 7 ಜನ ಮಹಿಳೆಯರೊಂದಿಗೆ ಟ್ವಿಟ್ಟರ್‌ ಸಿಇಓ ಸಭೆ ಮಾಡುವಾಗ ಸ್ಮಾಶ್ ಬ್ರಾಹ್ಮಿನಿಕಲ್ ಪೆಟ್ರಿಯಾರ್ಕಿ ಎಂಬ ಚಿತ್ರ ನೀಡಿದಾಗ ದೊಡ್ಡ ವಿವಾದವಾಗಿತ್ತು. ಅದು ನಿಜ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...