Homeಕರ್ನಾಟಕರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆ ಸಂವಿಧಾನ ವಿರೋಧಿ ಕೆಲಸ ಏಕೆಂದರೆ....

ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆ ಸಂವಿಧಾನ ವಿರೋಧಿ ಕೆಲಸ ಏಕೆಂದರೆ….

- Advertisement -
- Advertisement -

ಕರ್ನಾಟಕ ಸರಕಾರ ಪಠ್ಯಪುಸ್ತಕಗಳನ್ನು ಅಕ್ರಮವಾಗಿ ಪರಿಷ್ಕರಿಸಲು ಅನುವು ಮಾಡಿಕೊಟ್ಟಿರುವುದು ಮತ್ತು ಆ ಅಕ್ರಮಗಳನ್ನು ಈಗ ಸಕ್ರಮಗೊಳಿಸಲು ಮುಂದಾಗಿರುವುದು ಇತ್ಯಾದಿಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಇಡೀ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ನಡೆಯುತ್ತಿರುವ ಹುನ್ನಾರದ ಭಾಗವಾಗಿ ಕಾಣಿಸುತ್ತದೆ. ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಅನುಸರಿಸಿದ ಮಾರ್ಗ, ಪರಿಷ್ಕರಣೆ ಮಾಡಲು ಸರಕಾರ ಆರಿಸಿಕೊಂಡ ವ್ಯಕ್ತಿಗಳ ಹಿನ್ನೆಲೆ ಮತ್ತು ಪರಿಷ್ಕರಣೆಯ ಹೆಸರಿನಲ್ಲಿ ಪಠ್ಯಗಳಲ್ಲಿ ಮಾಡಿದ ಬದಲಾವಣೆಗಳು ಇತ್ಯಾದಿಗಳೆಲ್ಲವೂ ಒಂದಲ್ಲಒಂದು ರೀತಿಯಲ್ಲಿ ಸಂವಿಧಾನವನ್ನು ಅಣಕಿಸುವ ವಿಚಾರಗಳೇ ಆಗಿವೆ.

ಎಲ್ಲದಕ್ಕಿಂತಲೂ ಮುಖ್ಯವಾಗಿರುವ ಸಂವಿಧಾನ ವಿರೋಧಿ ನಡೆ ಎಂದರೆ ಹತ್ತನೆಯ ತರಗತಿಯ ಪರಿಷ್ಕೃತ ಕನ್ನಡ ಪಠ್ಯದಲ್ಲಿ ಆರ್.ಎಸ್.ಎಸ್ ಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಅವರ ಭಾಷಣದ ಬರಹರೂಪವನ್ನು ಸೇರಿಸಿರುವುದು. ಉಳಿದ ಬದಲಾವಣೆಗಳೆಲ್ಲಾ ಮುನ್ನೆಲೆಗೆ ಬಂದಿರುವ ಕಾರಣ ಈ ಸೇರ್ಪಡೆಯ ಬಗ್ಗೆ ನಡೆಯಬೇಕಾಗಿರುವಷ್ಟು ಚರ್ಚೆಗಳು ನಡೆಯುತ್ತಿಲ್ಲ. ಅದೇನೇ ಇರಲಿ, ಇದು ಎಲ್ಲದಕ್ಕಿಂತಲೂ ಹೆಚ್ಚು ಗಂಭೀರ ವಿಚಾರ.

ಹತ್ತನೆಯ ತರಗತಿಯ ಪರಿಷ್ಕೃತ ಕನ್ನಡ ಪಠ್ಯಪುಸ್ತಕವನ್ನು ಊಹಿಸಿಕೊಳ್ಳಿ. ಮಕ್ಕಳು ಪುಸ್ತಕ ತೆರೆದಾಗ ಮೊದಲಿಗೆ ಕಾಣಿಸಿಕೊಳ್ಳುವುದು ಸಂವಿಧಾನದ ಪ್ರಸ್ತಾವನೆ. ಮುಂದಿನ ಪುಟದಲ್ಲಿ ಸಾಮಾನ್ಯವಾಗಿ ಎಲ್ಲಾ ಪಠ್ಯಪುಸ್ತಕಗಳಲ್ಲೂ ಇರುವಂತೆ ಸಂವಿಧಾನ-ಪ್ರಣೀತ ಪ್ರತಿಜ್ಞೆ ಕಾಣಿಸಿಕೊಳ್ಳಬಹುದು – ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಮತ್ತು ಅದರ ಶ್ರೀಮಂತ ಮತ್ತು ವಿಭಿನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತೇನೆ… ಪುಟ ತಿರುಗಿಸುತ್ತಾ ಹೋದಂತೆ ಓದಲು ಸಿಗುವುದು ಅರ್.ಎಸ್.ಎಸ್ ಸಂಸ್ಥಾಪಕರ ಭಾಷಣದ ಪಠ್ಯ! ದೇಶದ ಪಠ್ಯಪುಸ್ತಕಗಳ ಚರಿತ್ರೆಯಲ್ಲೇ
ಇದಕ್ಕಿಂತ ದೊಡ್ಡ ವಿರೋಧಾಭಾಸ ಎಂದೂ ಕಾಣಿಸಿರಲಾರದು. ಆರ್.ಎಸ್.ಎಸ್ ಒಂದು ದೇಶಭಕ್ತ ಸಂಘಟನೆ ಆಗಿರುವಾಗ, ಅದರ ಸ್ಥಾಪಕರ ಭಾಷಣವನ್ನು ಪಠ್ಯದಲ್ಲಿ ಸೇರಿಸಿದರೆ ತಪ್ಪೇನು ಅಂತ ಹಲವಾರು ವಾದಿಸುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಸರಿಯಾದ ಪ್ರಶ್ನೆ ಆತನ ಅನ್ನಿಸಬಹುದು. ಆದರೆ ವಿಷಯ ಅಷ್ಟೊಂದು ಸಲೀಸಾಗಿಲ್ಲ.

ಅರ್.ಎಸ್.ಎಸ್ ದೇಶಭಕ್ತ ಸಂಘಟನೆಯೇ ಇರಬಹುದು. ಆದರೆ ಆರ್.ಎಸ್.ಎಸ್‌ನವರಿಗೆ ಭಕ್ತಿ ಇರುವುದು ಅವರ ಕಲ್ಪನೆಯ ಭಾರತದ ಮೇಲೆಯೇ ಹೊರತು ಸಂವಿಧಾನದ ಮೂಲಕ ’ಭಾರತದ ಜನರಾದ ನಾವು (We the People) ರೂಪಿಸಿದ ದೇಶದ ಮೇಲಲ್ಲ. ಸಂವಿಧಾನವನ್ನು ಸಂಘ ಎಷ್ಟರಮಟ್ಟಿಗೆ ಒಪ್ಪಿದೆ ಎನ್ನುವುದರ ಬಗ್ಗೆ ಗೊಂದಲವಿದೆ. ಆ ಸಂಘಟನೆಯನ್ನು ಕಾಲಕಾಲಕ್ಕೆ ಮುನ್ನಡೆಸಿದವರು ಈ ದೇಶದ ಸಂವಿಧಾನವನ್ನು ಖಂಡಿಸಿದ್ದಾರೆ, ದೇಶದ ಜನ ವಿವಿಧ ರಾಜ್ಯಗಳ ನೆಲ-ಜಲ-ಭಾಷೆಗಳಿಗೆ ಬದ್ಧರಾಗಿರುವುದನ್ನು ವಿರೋಧಿಸಿದ್ದಾರೆ, ಅರ್ಥಾತ್ ಒಕ್ಕೂಟ ವ್ಯವಸ್ಥೆಯ ಬಗ್ಗೆ ಅವರಿಗೆ ವಿರೋಧವಿದೆ. ಸಂವಿಧಾನ ಸಾರುವ ಸಮಾನತೆಯ ಬಗ್ಗೆ ಅವರಿಗೆ ಒಲವಿಲ್ಲ. ಸಂವಿಧಾನ ಎತ್ತಿಹಿಡಿಯುವ ಧರ್ಮನಿರಪೇಕ್ಷತೆಯ ನೆರಳು ಕಂಡರೆ ಅವರಿಗೆ ಆಗುವುದಿಲ್ಲ. ಸಂವಿಧಾನದ ಜೀವಾಳವಾದ ಬಹುತ್ವ ಅವರಿಗೆ ಕೂಡಿ ಬರುವುದಿಲ್ಲ. ಹೀಗೆ ಸಂವಿಧಾನದ ಮೌಲ್ಯಗಳ ಬಗ್ಗೆ ಮೂಲಭೂತ ಸಹಮತವೇ ಇಲ್ಲದ ಸಂಘಟನೆಯೊಂದರ ಸಂಸ್ಥಾಪಕರ ಬರೆಹವನ್ನು ಪಠ್ಯಪುಸ್ತಕಕ್ಕೆ ಸೇರಿಸುವ ಮೂಲಕ ಸರಕಾರ ಏನು ಮಾಡಲು ಹೊರಟಿದೆ? ಸಂವಿಧಾನದ ಪ್ರಸ್ತುತೆಗೆ ನೇರಾನೇರ ಸವಾಲು ಹಾಕುವಷ್ಟು ಧೈರ್ಯ ಆಳುವ ಪಕ್ಷಕ್ಕೆ ಇಲ್ಲ. ಆದಕಾರಣ ಸಂವಿಧಾನವನ್ನು ಎಂದೂ ಮನಸಾ ಸ್ವೀಕರಿಸದ ಸಂಘಟನೆಯೊಂದರ ಸ್ಥಾಪಕರಿಗೆ ಈ ರೀತಿಯ ಅಧಿಕೃತ ಮಾನ್ಯತೆ ದೊರಕಿಸಿಕೊಡುವ ಮೂಲಕ ಸಂವಿಧಾನವನ್ನು ಪರೋಕ್ಷವಾಗಿ ಅಮಾನ್ಯಗೊಳಿಸುವ ಮತ್ತು ಅವಮಾನಿಸುವ ಹುನ್ನಾರದ ವಾಸನೆ ಇಲ್ಲಿ ಅನುಭವಕ್ಕೆ ಬರುತ್ತದೆ. ಇದರ ಮುಂದುವರಿದ ಭಾಗವಾಗಿಯೇ ’ಅಂಬೇಡ್ಕರ್ ಸಂವಿಧಾನ ಶಿಲ್ಪಿ’ ಎನ್ನುವ ವಾಕ್ಯವನ್ನು ಜಾಣತನದಿಂದ ಕಿತ್ತುಹಾಕಲಾಗಿದೆ. ಒಮ್ಮೆ ಅಂಬೇಡ್ಕರ್ ಮತ್ತು ಸಂವಿಧಾನದ ಅವಿನಾಭಾವ ಸಂಬಂಧವನ್ನು ಜನಮನದಿಂದ ಮಾಸುವ ಹಾಗೆ ಮಾಡಿದರೆ ಮತ್ತೆ ಸಂವಿಧಾನವನ್ನು ಬೇಕಾದಂತೆ ಬದಲಿಸುವುದು ಬಲು ಸುಲಭ.

ಸಂವಿಧಾನ ಪ್ರಜ್ಞೆಗೆ ಪ್ರತಿಯಾಗಿ ಪಠ್ಯಪುಸ್ತಕ ಬದಲಾವಣೆಯ ಹಿನ್ನೆಲೆಯಲ್ಲಿ ಕೆಲಸಮಾಡುತ್ತಿರುವ ಹಿಂದುತ್ವ ಸಂಘಟನೆಗಳು ಬೆಳೆಸುವ ಪ್ರಜ್ಞೆ ಎಂತಹದ್ದಿರಬಹುದು ಎನ್ನುವುದನ್ನು ತಿಳಿಯಲು ಬಹುದೊಡ್ಡ ಸಾಕ್ಷಿ ಎಂದರೆ ಈಗ ವಿವಾದದ ಸುಳಿಯಲ್ಲಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರು. ಅವರು ನಾಡಗೀತೆಯ ವಿಕಾರ ರೂಪವನ್ನು ಮೆಚ್ಚಿ ಅನುಮೋದಿಸಿದ್ದು, ನಾಡ ಧ್ವಜವನ್ನು ಅವಹೇಳನ ಮಾಡಿದ್ದು, ಬಸವಣ್ಣನವರ ಬಗ್ಗೆ ಹಿಂದಿನ ಪಠ್ಯದಲ್ಲಿದ್ದ ನೈಜ ಚಿತ್ರಣವನ್ನು ಬದಲಿಸಿ ಬಸವಾನುಯಾಯಿಗಳ ಅಸಮಾಧಾನಕ್ಕೆ ಕಾರಣವಾಗುವ ರೀತಿಯ ಪರಿಷ್ಕರಣೆಗಳನ್ನು ಮಾಡಿದ್ದು ಇತ್ಯಾದಿಗಳೆಲ್ಲದರ ಹಿಂದಿನ ಪ್ರೇರಕ ಶಕ್ತಿಯೂ ಆ ಪ್ರಜ್ಞೆ ತಾನೇ? ಹಾಗಾಗಿಯೇ ಸಂವಿಧಾನಕ್ಕೆ ಬದ್ಧರಾಗಿ ಬಹುತ್ವದ ಸಂಸ್ಕೃತಿಯನ್ನು ಆರಾಧಿಸುವವರು ಮತ್ತು ಆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬಳವಳಿಯಾಗಿ ನೀಡಬೇಕೆನ್ನುವವರು, ಈಗ ಸಂವಿಧಾನ ಕಿತ್ತೊಗೆಯುವ ಪ್ರಜ್ಞೆಯ ಮೂಲದಲ್ಲಿರುವ ವ್ಯಕ್ತಿಯ ಭಾಷಣ ಪಠ್ಯಪುಸ್ತಕಕ್ಕೆ ಸೇರಿರುವುದರಿಂದ ಆತಂಕಗೊಂಡಿದ್ದಾರೆ.

ಪರಿಷ್ಕೃತ ಪಠ್ಯಪುಸ್ತಕದಲ್ಲಿ ಯಾವುದೇ ಕಾರಣಕ್ಕೂ ಸೇರಬಾರದಾಗಿದ್ದ ಇನ್ನೊಂದು ಪಠ್ಯವಿದೆ. ಅದರ ವಸ್ತು ಏನೇ ಇರಲಿ, ಅದನ್ನು ಬರೆದ ವ್ಯಕ್ತಿಯ ಕಾರಣಕ್ಕಾಗಿ ಅದು ಪಠ್ಯಪುಸ್ತಕದಲ್ಲಿ ಸೇರಬಾರದಿತ್ತು. ಅದನ್ನು ಬರೆದಿರುವುದು ಕರ್ನಾಟಕದಲ್ಲಿ ಪ್ರಸಿದ್ಧ ವಾಗ್ಮಿ ಎಂದು ಗುರುತಿಸಿಕೊಳ್ಳುವ ಓರ್ವ ವ್ಯಕ್ತಿ. ಈ ವಾಗ್ಮಿ ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಸುಳ್ಳುಗಳನ್ನು ಹಾಗೂ ತಿರುಚಿದ ಸತ್ಯಗಳನ್ನು ಯಾವುದೇ ರೀತಿಯ ಅಂಜಿಕೆ ಅಳುಕು ಇಲ್ಲದೆ ಪ್ರಚಾರ ಮಾಡುತ್ತಿದ್ದಾರೆ. ಸುಳ್ಳುಗಳನ್ನೇ ಬಳಸಿ ಒಬ್ಬ ನಾಯಕನನ್ನು ಯದ್ವಾತದ್ವಾ ವೈಭವೀಕರಿಸುತ್ತಿದ್ದಾರೆ. ಬಳಸಬಾರದ ಭಾಷೆ ಬಳಸಿ ಮತೀಯ ದ್ವೇಷ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಜನಜನಿತವಾಗಿದೆ. ಇವೆಲ್ಲಾ ಬರೀಯ ಅಪಾದನೆಗಳಲ್ಲ; ಪೂರಕವಾದ ಸಾಕ್ಷಾಧಾರಗಳು ಸಿಗುತ್ತವೆ. ಅವರ ಸುಳ್ಳುಗಳನ್ನೇ ಬಳಸಿಕೊಂಡು ತಮಾಷೆಯ ವಿಡಿಯೋಗಳನ್ನು ಮಾಡಿ ಹಂಚಲಾಗುತ್ತಿದೆ. ಅದಕ್ಕೆಂದೇ ಮೀಸಲಾದ ಯುಟ್ಯೂಬ್ ಗುಂಪುಗಳಿವೆ. ಇಂತಹ ಹಿನ್ನೆಲೆಯುಳ್ಳ ವ್ಯಕ್ತಿಯ ಬರಹವನ್ನು ಪಠ್ಯದಲ್ಲಿ ಸೇರಿಸಿರುವ ಏಕೈಕ ಕಾರಣ ಎಂದರೆ ಅವರು ದೇಶಭಕ್ತಿಯನ್ನು ಪ್ರೇರೇಪಿಸುವ ಭಾಷಣಗಳಿಗೆ ಹೆಸರುವಾಸಿ ಆಗಿದ್ದಾರೆ ಎಂಬುದಂತೆ. ಇಲ್ಲಿ ದೇಶ ಪ್ರೇಮ ಎಂದರೆ ಹಿಂದೂ ರಾಷ್ಟ್ರದ ಪ್ರತಿಪಾದನೆ ಅಥವಾ ಉಗ್ರ ಹಿಂದುತ್ವದ ಪ್ರತಿಪಾದನೆ ಎಂದು ಅರ್ಥ. ಅವರು ಮಾಡುವ ಭಾಷಣಗಳೆಲ್ಲಾ ಬಹುತೇಕ ಈ ರೀತಿಯವುಗಳೇ. ಜನರ ನಡುವೆ ದ್ವೇಷ ಸೃಷ್ಟಿಸುವ, ಜಾಣ ಸುಳ್ಳುಗಳನ್ನು ಬಿತ್ತರಿಸುವ ಮೂಲಕ ಯಾರಾದರೂ ದೇಶ ಪ್ರೇಮವನ್ನು ಸೃಷ್ಟಿಸಲು ಮುಂದಾಗುತ್ತಿದ್ದಾರೆ ಎಂದರೆ ಅವರು ಈ ದೇಶದ ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ. ಆದುದರಿಂದ ಅಂತಹ ಹಿನ್ನೆಲೆಯ ವ್ಯಕ್ತಿಯ ಬರಹಗಳನ್ನು ಪಠ್ಯಕ್ಕೆ ಸೇರಿಸುವುದು ಎಂದರೆ ಅದು ಕೂಡಾ ಸಂವಿಧಾನಕ್ಕೆ ಮಾಡುವ ಅವಮಾನ ಅಂತಲೇ ಭಾವಿಸಬೇಕಾಗುತ್ತದೆ.

ಅಕ್ರಮವಾಗಿರಲಿ, ಸಕ್ರಮವಾಗಿರಲಿ. ಪರಿಷ್ಕರಣೆ ಎಂದ ಮೇಲೆ ಕೆಲವೊಂದು ವಿಷಯಗಳನ್ನು ತೆಗೆಯುವುದು, ಕೆಲವೊಂದನ್ನು ಸೇರಿಸಿಕೊಳ್ಳುವುದು ಇದ್ದದ್ದೆ. ಆದರೆ ಈಗ ಪರಿಷ್ಕರಣೆಯ ಹೆಸರಲ್ಲಿ ಪಠ್ಯದಿಂದ ಕಿತ್ತು ಹಾಕಿದ್ದನ್ನು ಗಮನಿಸಿದರೆ ಅದರ ಹಿಂದಿನ ಸಂವಿಧಾನ ವಿರೋಧಿ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಾದೇಶಿಕತೆಗೆ ಸಂಬಂಧಿಸಿದ ವಿಚಾರಗಳನ್ನು ಕಿತ್ತುಹಾಕಿರುವುದು ಅಥವಾ ಪ್ರಾದೇಶಿಕತೆ ಎಂದರೆ ಅದೇನೋ ದೊಡ್ಡ ರಾಷ್ಟ್ರ ವಿರೋಧಿ ಪರಿಕಲ್ಪನೆ ಎನ್ನುವಂತೆ ಬಿಂಬಿಸಿರುವುದು, ಪ್ರಾದೇಶಿಕ ನಾಯಕರಿಗೆ ಮತ್ತು ಪ್ರಾದೇಶಿಕ ಸಾಧುಸಂತರಿಗೆ ಸಂಬಂಧಿಸಿದ ವಿವರಗಳನ್ನು ಕೈಬಿಟ್ಟಿರುವುದು ಸಂವಿಧಾನ ಎತ್ತಿಹಿಡಿಯುವ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ವಿರೋಧಿ ಮನೋಸ್ಥಿತಿಗೆ ಸಾಕ್ಷಿ. ಅದೇ ರೀತಿ, ಒಂದು ಜಾತಿಗೆ ಸೇರಿದ ದಾರ್ಶನಿಕರನ್ನು ಬಹುವಚನ ಬಳಸಿ ಗೌರವದಿಂದ ಸಂಭೋದಿಸಿ, ಇತರ ಸಮುದಾಯಗಳಿಗೆ ಸೇರಿದ ದಾರ್ಶನಿಕರ ಹೆಸರುಗಳನ್ನೂ ಏಕವಚನ ಬಳಸಿ-ಕೇವಲವಾಗಿ ಸಂಭೋದಿಸಿದ್ದು ಸಂವಿಧಾನ ತೋರಿಸಿಕೊಡುವ ಸಮಾನತೆ ಮತ್ತು ವ್ಯಕ್ತಿ ಗೌರವಗಳ ಆಶಯಕ್ಕೆ ವಿರೋಧವಾಗಿದೆ. ಅದೇ ರೀತಿ ಕಾಲ್ಪನಿಕ ಕತೆಗಳನ್ನು ಚರಿತ್ರೆ ಅಂತ ಚಿತ್ರಿಸುವ ಮೂಲಕ, ಮನುಸ್ಮೃತಿಯನ್ನು ವೈಭವೀಕರಿಸುವ ಮೂಲಕ ಸಂವಿಧಾನ ಪ್ರತಿಪಾದಿಸುವ ವೈಜ್ಞಾನಿಕ ಮನೋಭಾವದ ಆಶಯಕ್ಕೆ ವಿರೋಧವಾಗಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಇಡೀ ಪರಿಷ್ಕರಣೆಯನ್ನು ಮಾಡುವಲ್ಲಿ ಯಾವುದೇ ರೀತಿಯ ಸೂಕ್ತ ಆಡಳಿತಾತ್ಮಕ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎನ್ನುವುದು ಕೂಡಾ ಸಂವಿಧಾನಕ್ಕೆ ಮಾಡಿದ ಅಪಚಾರ. ಸಂವಿಧಾನ ಪ್ರಕಾರ ಸರಕಾರ ತಾನು ಮಾಡುವ ಒಂದು ಸಣ್ಣ ಕೆಲಸವನ್ನು ಕೂಡಾ ಕ್ರಮಬದ್ಧವಾಗಿ, ಸೂಕ್ತ ಕಾನೂನಿನ ಹಿನ್ನೆಲೆಯಲ್ಲೇ ಮಾಡಬೇಕಾಗುತ್ತದೆ. ಆದರೆ ಈ ಸಮಿತಿಗೆ ಪರಿಷ್ಕರಣೆಯ ಜವಾಬ್ದಾರಿಯನ್ನು ಕಾನೂನು ರೀತಿಯಲ್ಲಿ ವಹಿಸದೆ ಇದ್ದರೂ ಅದು ಆ ಕೆಲಸವನ್ನು ಮಾಡಿದ್ದು ಮತ್ತು ಅದಕ್ಕೆ ಸರಕಾರ ’ಘಟನೋತ್ತರ’ ಅನುಮೋದನೆ ನೀಡುವುದು ಇತ್ಯಾದಿ ಏನನ್ನು ತೋರಿಸುತ್ತದೆ ಎಂದರೆ ಕರ್ನಾಟಕದಲ್ಲೀಗ ಆಡಳಿತ ನಡೆಯುವುದು ಸಂವಿಧಾನಾತ್ಮಕವಾಗಿ ಅಲ್ಲ, ಬೇಕಾಬಿಟ್ಟಿಯಾಗಿ ಎಂದು. ಉತ್ತರ ಪ್ರದೇಶದ ಬುಲ್ಡೋಜರ್ ಆಡಳಿತ ಇನ್ನೊಂದು ಮಾದರಿ ಇದು.


ಇದನ್ನೂ ಓದಿ: ಇದನ್ನೂ ಓದಿ: ಪಠ್ಯ ಪರಿಷ್ಕರಣೆ; ಸಂವಿಧಾನದ ಮೇಲೂ ದಾಳಿ, ಮತ್ತೊಂದು ಕಡೆ ಸಂವಿಧಾನಶಿಲ್ಪಿಯ ಮೇಲೆಯೂ!

ಇದನ್ನೂ ಓದಿ: ಪಠ್ಯಪುಸ್ತಕ ಹಗರಣ – ‘ಬರಗೂರು ಸಮಿತಿ ಹಿಂದೆ ತುಕ್ಡೆ ಗ್ಯಾಂಗ್‌’: ಸಚಿವ ಬಿಸಿ ನಾಗೇಶ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...