Homeಕರ್ನಾಟಕರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆ ಸಂವಿಧಾನ ವಿರೋಧಿ ಕೆಲಸ ಏಕೆಂದರೆ....

ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆ ಸಂವಿಧಾನ ವಿರೋಧಿ ಕೆಲಸ ಏಕೆಂದರೆ….

- Advertisement -
- Advertisement -

ಕರ್ನಾಟಕ ಸರಕಾರ ಪಠ್ಯಪುಸ್ತಕಗಳನ್ನು ಅಕ್ರಮವಾಗಿ ಪರಿಷ್ಕರಿಸಲು ಅನುವು ಮಾಡಿಕೊಟ್ಟಿರುವುದು ಮತ್ತು ಆ ಅಕ್ರಮಗಳನ್ನು ಈಗ ಸಕ್ರಮಗೊಳಿಸಲು ಮುಂದಾಗಿರುವುದು ಇತ್ಯಾದಿಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಇಡೀ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ನಡೆಯುತ್ತಿರುವ ಹುನ್ನಾರದ ಭಾಗವಾಗಿ ಕಾಣಿಸುತ್ತದೆ. ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಅನುಸರಿಸಿದ ಮಾರ್ಗ, ಪರಿಷ್ಕರಣೆ ಮಾಡಲು ಸರಕಾರ ಆರಿಸಿಕೊಂಡ ವ್ಯಕ್ತಿಗಳ ಹಿನ್ನೆಲೆ ಮತ್ತು ಪರಿಷ್ಕರಣೆಯ ಹೆಸರಿನಲ್ಲಿ ಪಠ್ಯಗಳಲ್ಲಿ ಮಾಡಿದ ಬದಲಾವಣೆಗಳು ಇತ್ಯಾದಿಗಳೆಲ್ಲವೂ ಒಂದಲ್ಲಒಂದು ರೀತಿಯಲ್ಲಿ ಸಂವಿಧಾನವನ್ನು ಅಣಕಿಸುವ ವಿಚಾರಗಳೇ ಆಗಿವೆ.

ಎಲ್ಲದಕ್ಕಿಂತಲೂ ಮುಖ್ಯವಾಗಿರುವ ಸಂವಿಧಾನ ವಿರೋಧಿ ನಡೆ ಎಂದರೆ ಹತ್ತನೆಯ ತರಗತಿಯ ಪರಿಷ್ಕೃತ ಕನ್ನಡ ಪಠ್ಯದಲ್ಲಿ ಆರ್.ಎಸ್.ಎಸ್ ಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಅವರ ಭಾಷಣದ ಬರಹರೂಪವನ್ನು ಸೇರಿಸಿರುವುದು. ಉಳಿದ ಬದಲಾವಣೆಗಳೆಲ್ಲಾ ಮುನ್ನೆಲೆಗೆ ಬಂದಿರುವ ಕಾರಣ ಈ ಸೇರ್ಪಡೆಯ ಬಗ್ಗೆ ನಡೆಯಬೇಕಾಗಿರುವಷ್ಟು ಚರ್ಚೆಗಳು ನಡೆಯುತ್ತಿಲ್ಲ. ಅದೇನೇ ಇರಲಿ, ಇದು ಎಲ್ಲದಕ್ಕಿಂತಲೂ ಹೆಚ್ಚು ಗಂಭೀರ ವಿಚಾರ.

ಹತ್ತನೆಯ ತರಗತಿಯ ಪರಿಷ್ಕೃತ ಕನ್ನಡ ಪಠ್ಯಪುಸ್ತಕವನ್ನು ಊಹಿಸಿಕೊಳ್ಳಿ. ಮಕ್ಕಳು ಪುಸ್ತಕ ತೆರೆದಾಗ ಮೊದಲಿಗೆ ಕಾಣಿಸಿಕೊಳ್ಳುವುದು ಸಂವಿಧಾನದ ಪ್ರಸ್ತಾವನೆ. ಮುಂದಿನ ಪುಟದಲ್ಲಿ ಸಾಮಾನ್ಯವಾಗಿ ಎಲ್ಲಾ ಪಠ್ಯಪುಸ್ತಕಗಳಲ್ಲೂ ಇರುವಂತೆ ಸಂವಿಧಾನ-ಪ್ರಣೀತ ಪ್ರತಿಜ್ಞೆ ಕಾಣಿಸಿಕೊಳ್ಳಬಹುದು – ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಮತ್ತು ಅದರ ಶ್ರೀಮಂತ ಮತ್ತು ವಿಭಿನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತೇನೆ… ಪುಟ ತಿರುಗಿಸುತ್ತಾ ಹೋದಂತೆ ಓದಲು ಸಿಗುವುದು ಅರ್.ಎಸ್.ಎಸ್ ಸಂಸ್ಥಾಪಕರ ಭಾಷಣದ ಪಠ್ಯ! ದೇಶದ ಪಠ್ಯಪುಸ್ತಕಗಳ ಚರಿತ್ರೆಯಲ್ಲೇ
ಇದಕ್ಕಿಂತ ದೊಡ್ಡ ವಿರೋಧಾಭಾಸ ಎಂದೂ ಕಾಣಿಸಿರಲಾರದು. ಆರ್.ಎಸ್.ಎಸ್ ಒಂದು ದೇಶಭಕ್ತ ಸಂಘಟನೆ ಆಗಿರುವಾಗ, ಅದರ ಸ್ಥಾಪಕರ ಭಾಷಣವನ್ನು ಪಠ್ಯದಲ್ಲಿ ಸೇರಿಸಿದರೆ ತಪ್ಪೇನು ಅಂತ ಹಲವಾರು ವಾದಿಸುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಸರಿಯಾದ ಪ್ರಶ್ನೆ ಆತನ ಅನ್ನಿಸಬಹುದು. ಆದರೆ ವಿಷಯ ಅಷ್ಟೊಂದು ಸಲೀಸಾಗಿಲ್ಲ.

ಅರ್.ಎಸ್.ಎಸ್ ದೇಶಭಕ್ತ ಸಂಘಟನೆಯೇ ಇರಬಹುದು. ಆದರೆ ಆರ್.ಎಸ್.ಎಸ್‌ನವರಿಗೆ ಭಕ್ತಿ ಇರುವುದು ಅವರ ಕಲ್ಪನೆಯ ಭಾರತದ ಮೇಲೆಯೇ ಹೊರತು ಸಂವಿಧಾನದ ಮೂಲಕ ’ಭಾರತದ ಜನರಾದ ನಾವು (We the People) ರೂಪಿಸಿದ ದೇಶದ ಮೇಲಲ್ಲ. ಸಂವಿಧಾನವನ್ನು ಸಂಘ ಎಷ್ಟರಮಟ್ಟಿಗೆ ಒಪ್ಪಿದೆ ಎನ್ನುವುದರ ಬಗ್ಗೆ ಗೊಂದಲವಿದೆ. ಆ ಸಂಘಟನೆಯನ್ನು ಕಾಲಕಾಲಕ್ಕೆ ಮುನ್ನಡೆಸಿದವರು ಈ ದೇಶದ ಸಂವಿಧಾನವನ್ನು ಖಂಡಿಸಿದ್ದಾರೆ, ದೇಶದ ಜನ ವಿವಿಧ ರಾಜ್ಯಗಳ ನೆಲ-ಜಲ-ಭಾಷೆಗಳಿಗೆ ಬದ್ಧರಾಗಿರುವುದನ್ನು ವಿರೋಧಿಸಿದ್ದಾರೆ, ಅರ್ಥಾತ್ ಒಕ್ಕೂಟ ವ್ಯವಸ್ಥೆಯ ಬಗ್ಗೆ ಅವರಿಗೆ ವಿರೋಧವಿದೆ. ಸಂವಿಧಾನ ಸಾರುವ ಸಮಾನತೆಯ ಬಗ್ಗೆ ಅವರಿಗೆ ಒಲವಿಲ್ಲ. ಸಂವಿಧಾನ ಎತ್ತಿಹಿಡಿಯುವ ಧರ್ಮನಿರಪೇಕ್ಷತೆಯ ನೆರಳು ಕಂಡರೆ ಅವರಿಗೆ ಆಗುವುದಿಲ್ಲ. ಸಂವಿಧಾನದ ಜೀವಾಳವಾದ ಬಹುತ್ವ ಅವರಿಗೆ ಕೂಡಿ ಬರುವುದಿಲ್ಲ. ಹೀಗೆ ಸಂವಿಧಾನದ ಮೌಲ್ಯಗಳ ಬಗ್ಗೆ ಮೂಲಭೂತ ಸಹಮತವೇ ಇಲ್ಲದ ಸಂಘಟನೆಯೊಂದರ ಸಂಸ್ಥಾಪಕರ ಬರೆಹವನ್ನು ಪಠ್ಯಪುಸ್ತಕಕ್ಕೆ ಸೇರಿಸುವ ಮೂಲಕ ಸರಕಾರ ಏನು ಮಾಡಲು ಹೊರಟಿದೆ? ಸಂವಿಧಾನದ ಪ್ರಸ್ತುತೆಗೆ ನೇರಾನೇರ ಸವಾಲು ಹಾಕುವಷ್ಟು ಧೈರ್ಯ ಆಳುವ ಪಕ್ಷಕ್ಕೆ ಇಲ್ಲ. ಆದಕಾರಣ ಸಂವಿಧಾನವನ್ನು ಎಂದೂ ಮನಸಾ ಸ್ವೀಕರಿಸದ ಸಂಘಟನೆಯೊಂದರ ಸ್ಥಾಪಕರಿಗೆ ಈ ರೀತಿಯ ಅಧಿಕೃತ ಮಾನ್ಯತೆ ದೊರಕಿಸಿಕೊಡುವ ಮೂಲಕ ಸಂವಿಧಾನವನ್ನು ಪರೋಕ್ಷವಾಗಿ ಅಮಾನ್ಯಗೊಳಿಸುವ ಮತ್ತು ಅವಮಾನಿಸುವ ಹುನ್ನಾರದ ವಾಸನೆ ಇಲ್ಲಿ ಅನುಭವಕ್ಕೆ ಬರುತ್ತದೆ. ಇದರ ಮುಂದುವರಿದ ಭಾಗವಾಗಿಯೇ ’ಅಂಬೇಡ್ಕರ್ ಸಂವಿಧಾನ ಶಿಲ್ಪಿ’ ಎನ್ನುವ ವಾಕ್ಯವನ್ನು ಜಾಣತನದಿಂದ ಕಿತ್ತುಹಾಕಲಾಗಿದೆ. ಒಮ್ಮೆ ಅಂಬೇಡ್ಕರ್ ಮತ್ತು ಸಂವಿಧಾನದ ಅವಿನಾಭಾವ ಸಂಬಂಧವನ್ನು ಜನಮನದಿಂದ ಮಾಸುವ ಹಾಗೆ ಮಾಡಿದರೆ ಮತ್ತೆ ಸಂವಿಧಾನವನ್ನು ಬೇಕಾದಂತೆ ಬದಲಿಸುವುದು ಬಲು ಸುಲಭ.

ಸಂವಿಧಾನ ಪ್ರಜ್ಞೆಗೆ ಪ್ರತಿಯಾಗಿ ಪಠ್ಯಪುಸ್ತಕ ಬದಲಾವಣೆಯ ಹಿನ್ನೆಲೆಯಲ್ಲಿ ಕೆಲಸಮಾಡುತ್ತಿರುವ ಹಿಂದುತ್ವ ಸಂಘಟನೆಗಳು ಬೆಳೆಸುವ ಪ್ರಜ್ಞೆ ಎಂತಹದ್ದಿರಬಹುದು ಎನ್ನುವುದನ್ನು ತಿಳಿಯಲು ಬಹುದೊಡ್ಡ ಸಾಕ್ಷಿ ಎಂದರೆ ಈಗ ವಿವಾದದ ಸುಳಿಯಲ್ಲಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರು. ಅವರು ನಾಡಗೀತೆಯ ವಿಕಾರ ರೂಪವನ್ನು ಮೆಚ್ಚಿ ಅನುಮೋದಿಸಿದ್ದು, ನಾಡ ಧ್ವಜವನ್ನು ಅವಹೇಳನ ಮಾಡಿದ್ದು, ಬಸವಣ್ಣನವರ ಬಗ್ಗೆ ಹಿಂದಿನ ಪಠ್ಯದಲ್ಲಿದ್ದ ನೈಜ ಚಿತ್ರಣವನ್ನು ಬದಲಿಸಿ ಬಸವಾನುಯಾಯಿಗಳ ಅಸಮಾಧಾನಕ್ಕೆ ಕಾರಣವಾಗುವ ರೀತಿಯ ಪರಿಷ್ಕರಣೆಗಳನ್ನು ಮಾಡಿದ್ದು ಇತ್ಯಾದಿಗಳೆಲ್ಲದರ ಹಿಂದಿನ ಪ್ರೇರಕ ಶಕ್ತಿಯೂ ಆ ಪ್ರಜ್ಞೆ ತಾನೇ? ಹಾಗಾಗಿಯೇ ಸಂವಿಧಾನಕ್ಕೆ ಬದ್ಧರಾಗಿ ಬಹುತ್ವದ ಸಂಸ್ಕೃತಿಯನ್ನು ಆರಾಧಿಸುವವರು ಮತ್ತು ಆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬಳವಳಿಯಾಗಿ ನೀಡಬೇಕೆನ್ನುವವರು, ಈಗ ಸಂವಿಧಾನ ಕಿತ್ತೊಗೆಯುವ ಪ್ರಜ್ಞೆಯ ಮೂಲದಲ್ಲಿರುವ ವ್ಯಕ್ತಿಯ ಭಾಷಣ ಪಠ್ಯಪುಸ್ತಕಕ್ಕೆ ಸೇರಿರುವುದರಿಂದ ಆತಂಕಗೊಂಡಿದ್ದಾರೆ.

ಪರಿಷ್ಕೃತ ಪಠ್ಯಪುಸ್ತಕದಲ್ಲಿ ಯಾವುದೇ ಕಾರಣಕ್ಕೂ ಸೇರಬಾರದಾಗಿದ್ದ ಇನ್ನೊಂದು ಪಠ್ಯವಿದೆ. ಅದರ ವಸ್ತು ಏನೇ ಇರಲಿ, ಅದನ್ನು ಬರೆದ ವ್ಯಕ್ತಿಯ ಕಾರಣಕ್ಕಾಗಿ ಅದು ಪಠ್ಯಪುಸ್ತಕದಲ್ಲಿ ಸೇರಬಾರದಿತ್ತು. ಅದನ್ನು ಬರೆದಿರುವುದು ಕರ್ನಾಟಕದಲ್ಲಿ ಪ್ರಸಿದ್ಧ ವಾಗ್ಮಿ ಎಂದು ಗುರುತಿಸಿಕೊಳ್ಳುವ ಓರ್ವ ವ್ಯಕ್ತಿ. ಈ ವಾಗ್ಮಿ ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಸುಳ್ಳುಗಳನ್ನು ಹಾಗೂ ತಿರುಚಿದ ಸತ್ಯಗಳನ್ನು ಯಾವುದೇ ರೀತಿಯ ಅಂಜಿಕೆ ಅಳುಕು ಇಲ್ಲದೆ ಪ್ರಚಾರ ಮಾಡುತ್ತಿದ್ದಾರೆ. ಸುಳ್ಳುಗಳನ್ನೇ ಬಳಸಿ ಒಬ್ಬ ನಾಯಕನನ್ನು ಯದ್ವಾತದ್ವಾ ವೈಭವೀಕರಿಸುತ್ತಿದ್ದಾರೆ. ಬಳಸಬಾರದ ಭಾಷೆ ಬಳಸಿ ಮತೀಯ ದ್ವೇಷ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಜನಜನಿತವಾಗಿದೆ. ಇವೆಲ್ಲಾ ಬರೀಯ ಅಪಾದನೆಗಳಲ್ಲ; ಪೂರಕವಾದ ಸಾಕ್ಷಾಧಾರಗಳು ಸಿಗುತ್ತವೆ. ಅವರ ಸುಳ್ಳುಗಳನ್ನೇ ಬಳಸಿಕೊಂಡು ತಮಾಷೆಯ ವಿಡಿಯೋಗಳನ್ನು ಮಾಡಿ ಹಂಚಲಾಗುತ್ತಿದೆ. ಅದಕ್ಕೆಂದೇ ಮೀಸಲಾದ ಯುಟ್ಯೂಬ್ ಗುಂಪುಗಳಿವೆ. ಇಂತಹ ಹಿನ್ನೆಲೆಯುಳ್ಳ ವ್ಯಕ್ತಿಯ ಬರಹವನ್ನು ಪಠ್ಯದಲ್ಲಿ ಸೇರಿಸಿರುವ ಏಕೈಕ ಕಾರಣ ಎಂದರೆ ಅವರು ದೇಶಭಕ್ತಿಯನ್ನು ಪ್ರೇರೇಪಿಸುವ ಭಾಷಣಗಳಿಗೆ ಹೆಸರುವಾಸಿ ಆಗಿದ್ದಾರೆ ಎಂಬುದಂತೆ. ಇಲ್ಲಿ ದೇಶ ಪ್ರೇಮ ಎಂದರೆ ಹಿಂದೂ ರಾಷ್ಟ್ರದ ಪ್ರತಿಪಾದನೆ ಅಥವಾ ಉಗ್ರ ಹಿಂದುತ್ವದ ಪ್ರತಿಪಾದನೆ ಎಂದು ಅರ್ಥ. ಅವರು ಮಾಡುವ ಭಾಷಣಗಳೆಲ್ಲಾ ಬಹುತೇಕ ಈ ರೀತಿಯವುಗಳೇ. ಜನರ ನಡುವೆ ದ್ವೇಷ ಸೃಷ್ಟಿಸುವ, ಜಾಣ ಸುಳ್ಳುಗಳನ್ನು ಬಿತ್ತರಿಸುವ ಮೂಲಕ ಯಾರಾದರೂ ದೇಶ ಪ್ರೇಮವನ್ನು ಸೃಷ್ಟಿಸಲು ಮುಂದಾಗುತ್ತಿದ್ದಾರೆ ಎಂದರೆ ಅವರು ಈ ದೇಶದ ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ. ಆದುದರಿಂದ ಅಂತಹ ಹಿನ್ನೆಲೆಯ ವ್ಯಕ್ತಿಯ ಬರಹಗಳನ್ನು ಪಠ್ಯಕ್ಕೆ ಸೇರಿಸುವುದು ಎಂದರೆ ಅದು ಕೂಡಾ ಸಂವಿಧಾನಕ್ಕೆ ಮಾಡುವ ಅವಮಾನ ಅಂತಲೇ ಭಾವಿಸಬೇಕಾಗುತ್ತದೆ.

ಅಕ್ರಮವಾಗಿರಲಿ, ಸಕ್ರಮವಾಗಿರಲಿ. ಪರಿಷ್ಕರಣೆ ಎಂದ ಮೇಲೆ ಕೆಲವೊಂದು ವಿಷಯಗಳನ್ನು ತೆಗೆಯುವುದು, ಕೆಲವೊಂದನ್ನು ಸೇರಿಸಿಕೊಳ್ಳುವುದು ಇದ್ದದ್ದೆ. ಆದರೆ ಈಗ ಪರಿಷ್ಕರಣೆಯ ಹೆಸರಲ್ಲಿ ಪಠ್ಯದಿಂದ ಕಿತ್ತು ಹಾಕಿದ್ದನ್ನು ಗಮನಿಸಿದರೆ ಅದರ ಹಿಂದಿನ ಸಂವಿಧಾನ ವಿರೋಧಿ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಾದೇಶಿಕತೆಗೆ ಸಂಬಂಧಿಸಿದ ವಿಚಾರಗಳನ್ನು ಕಿತ್ತುಹಾಕಿರುವುದು ಅಥವಾ ಪ್ರಾದೇಶಿಕತೆ ಎಂದರೆ ಅದೇನೋ ದೊಡ್ಡ ರಾಷ್ಟ್ರ ವಿರೋಧಿ ಪರಿಕಲ್ಪನೆ ಎನ್ನುವಂತೆ ಬಿಂಬಿಸಿರುವುದು, ಪ್ರಾದೇಶಿಕ ನಾಯಕರಿಗೆ ಮತ್ತು ಪ್ರಾದೇಶಿಕ ಸಾಧುಸಂತರಿಗೆ ಸಂಬಂಧಿಸಿದ ವಿವರಗಳನ್ನು ಕೈಬಿಟ್ಟಿರುವುದು ಸಂವಿಧಾನ ಎತ್ತಿಹಿಡಿಯುವ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ವಿರೋಧಿ ಮನೋಸ್ಥಿತಿಗೆ ಸಾಕ್ಷಿ. ಅದೇ ರೀತಿ, ಒಂದು ಜಾತಿಗೆ ಸೇರಿದ ದಾರ್ಶನಿಕರನ್ನು ಬಹುವಚನ ಬಳಸಿ ಗೌರವದಿಂದ ಸಂಭೋದಿಸಿ, ಇತರ ಸಮುದಾಯಗಳಿಗೆ ಸೇರಿದ ದಾರ್ಶನಿಕರ ಹೆಸರುಗಳನ್ನೂ ಏಕವಚನ ಬಳಸಿ-ಕೇವಲವಾಗಿ ಸಂಭೋದಿಸಿದ್ದು ಸಂವಿಧಾನ ತೋರಿಸಿಕೊಡುವ ಸಮಾನತೆ ಮತ್ತು ವ್ಯಕ್ತಿ ಗೌರವಗಳ ಆಶಯಕ್ಕೆ ವಿರೋಧವಾಗಿದೆ. ಅದೇ ರೀತಿ ಕಾಲ್ಪನಿಕ ಕತೆಗಳನ್ನು ಚರಿತ್ರೆ ಅಂತ ಚಿತ್ರಿಸುವ ಮೂಲಕ, ಮನುಸ್ಮೃತಿಯನ್ನು ವೈಭವೀಕರಿಸುವ ಮೂಲಕ ಸಂವಿಧಾನ ಪ್ರತಿಪಾದಿಸುವ ವೈಜ್ಞಾನಿಕ ಮನೋಭಾವದ ಆಶಯಕ್ಕೆ ವಿರೋಧವಾಗಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಇಡೀ ಪರಿಷ್ಕರಣೆಯನ್ನು ಮಾಡುವಲ್ಲಿ ಯಾವುದೇ ರೀತಿಯ ಸೂಕ್ತ ಆಡಳಿತಾತ್ಮಕ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎನ್ನುವುದು ಕೂಡಾ ಸಂವಿಧಾನಕ್ಕೆ ಮಾಡಿದ ಅಪಚಾರ. ಸಂವಿಧಾನ ಪ್ರಕಾರ ಸರಕಾರ ತಾನು ಮಾಡುವ ಒಂದು ಸಣ್ಣ ಕೆಲಸವನ್ನು ಕೂಡಾ ಕ್ರಮಬದ್ಧವಾಗಿ, ಸೂಕ್ತ ಕಾನೂನಿನ ಹಿನ್ನೆಲೆಯಲ್ಲೇ ಮಾಡಬೇಕಾಗುತ್ತದೆ. ಆದರೆ ಈ ಸಮಿತಿಗೆ ಪರಿಷ್ಕರಣೆಯ ಜವಾಬ್ದಾರಿಯನ್ನು ಕಾನೂನು ರೀತಿಯಲ್ಲಿ ವಹಿಸದೆ ಇದ್ದರೂ ಅದು ಆ ಕೆಲಸವನ್ನು ಮಾಡಿದ್ದು ಮತ್ತು ಅದಕ್ಕೆ ಸರಕಾರ ’ಘಟನೋತ್ತರ’ ಅನುಮೋದನೆ ನೀಡುವುದು ಇತ್ಯಾದಿ ಏನನ್ನು ತೋರಿಸುತ್ತದೆ ಎಂದರೆ ಕರ್ನಾಟಕದಲ್ಲೀಗ ಆಡಳಿತ ನಡೆಯುವುದು ಸಂವಿಧಾನಾತ್ಮಕವಾಗಿ ಅಲ್ಲ, ಬೇಕಾಬಿಟ್ಟಿಯಾಗಿ ಎಂದು. ಉತ್ತರ ಪ್ರದೇಶದ ಬುಲ್ಡೋಜರ್ ಆಡಳಿತ ಇನ್ನೊಂದು ಮಾದರಿ ಇದು.


ಇದನ್ನೂ ಓದಿ: ಇದನ್ನೂ ಓದಿ: ಪಠ್ಯ ಪರಿಷ್ಕರಣೆ; ಸಂವಿಧಾನದ ಮೇಲೂ ದಾಳಿ, ಮತ್ತೊಂದು ಕಡೆ ಸಂವಿಧಾನಶಿಲ್ಪಿಯ ಮೇಲೆಯೂ!

ಇದನ್ನೂ ಓದಿ: ಪಠ್ಯಪುಸ್ತಕ ಹಗರಣ – ‘ಬರಗೂರು ಸಮಿತಿ ಹಿಂದೆ ತುಕ್ಡೆ ಗ್ಯಾಂಗ್‌’: ಸಚಿವ ಬಿಸಿ ನಾಗೇಶ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...