Homeಕರ್ನಾಟಕಚಾನೆಲ್ ಚಿತ್ರಾನ್ನ ಕಾಶಿಯ ಕೊತ್ವಾಲ, ಪ್ರತ್ಯಕ್ಷರಾದ ಸಾಧುಗಳು, ಖಬರ್ ದಾರ್ ಮೆಸೇಜ್

ಚಾನೆಲ್ ಚಿತ್ರಾನ್ನ ಕಾಶಿಯ ಕೊತ್ವಾಲ, ಪ್ರತ್ಯಕ್ಷರಾದ ಸಾಧುಗಳು, ಖಬರ್ ದಾರ್ ಮೆಸೇಜ್

- Advertisement -
- Advertisement -

4ನೇ ಹಂತದ ಮತದಾನದ ಹಿಂದಿನ ದಿನ ರಿಪ್ಲಬಿಕ್ ಟಿವಿಯಲ್ಲಿ, ‘ಸಂಡೇ ಡಿಬೇಟ್ ವಿತ್ ಅರ್ನಾಬ್ ಗೋಸ್ವಾಮಿ’ ಕಾರ್ಯಕ್ರಮದ ಟೈಟಲ್ಲೇ #ModiWaveElection…

ಚರ್ಚೆಯ ಸಂದೇಶ ಏನಾಗಿರಬೇಕು ಎಂಬುದನ್ನು ಮೊದಲೇ ನಿರ್ಧರಿಸಿಯೇ ಗೋಸ್ವಾಮಿ ಕಾರ್ಯಕ್ರಮ ರೂಪಿಸಿರುತ್ತಾರಲ್ಲವಾ? ಚರ್ಚೆ ಶುರುವಾಗುತ್ತಲೇ ಮರಿ ಗೋಸ್ವಾಮಿಗಳಾಗಿರುವ ಅವರ ಅಭಿಮಾನಿಗಳು ತಮ್ಮ ಮನದಿಂಗಿತವನ್ನು ಟ್ವೀಟ್ ಮಾಡಲು ಶುರು ಮಾಡಿಬಿಡುತ್ತಾರೆ.

ಚರ್ಚೆಯಲ್ಲಿ ಬಿಜೆಪಿ ವಿರೋಧಿ ಪ್ಯಾನಲಿಸ್ಟ್ ಅರ್ಥಪೂರ್ಣವಾಗಿ ವಾದ ಮಂಡಿಸತೊಡಗಿದರೆ, ಗೋಸ್ವಾಮಿ ಚೀರಾಡಿ, ಹಾರಾಡಿ ವಿಷಯವನ್ನು ಎತ್ತೆತ್ತಲೋ ಒಯ್ದು ಬಿಡುತ್ತಾರೆ. ಮೊನ್ನೆ ರವಿವಾರವೂ ಅವರೂ ಅದನ್ನೇ ಮಾಡಿದರು. ಇದು ‘ಮೋದಿ ಅಲೆ ಚುನಾವಣೆ’ ಎಂಬ ಅವರ ನಿಲುವನ್ನು ಮುನ್ನೆಲೆಗೆ ತರಲು ಹರಸಾಹಸ ಮಾಡಿದರು….

ಮಂಡ್ಯದ ನಂತರ ನಮ್ಮ ಚಾನೆಲಗಳಿಗೆ ಆಕರ್ಷಕವಾಗಿ ಕಂಡಿದ್ದು ವಾರಣಾಸಿ. ಮೋದಿಯವರ ನಾಮಿನೇಶನ್ ಅವುಗಳ ಪಾಲಿಗೆ ‘ಸ್ವಾಮಿ-ನೇಷನ್’ ಅನಿಸಿರಬೇಕು. ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಚಾನೆಲ್ಲುಗಳಲ್ಲಿ ಎರಡು ದಿನ ವಾರಣಾಸಿಯ ಜಪ. ಪ್ರಧಾನಿಯ ನಾಮಪತ್ರ ಸಲ್ಲಿಕೆ ಓಕೆ, ಜನರಿಗೆ ಅಲ್ಲಿನ ವಾತಾವರಣ ತೋರಿಸಬೇಕು, ಅದೂ ಸರಿ. ಆದರೆ, ರಾಜಕೀಯದೊಂದಿಗೆ ಧಾರ್ಮಿಕತೆಯನ್ನು ಬೆರೆಸಿ, ವೀಕ್ಷಕರಲ್ಲಿ ಕಾಶಿ ವಿಶ್ವನಾಥನ ಬಗ್ಗೆ ಇರಬಹುದಾದ ಭಕ್ತಿಯನ್ನು ಮೋದಿಗೆ ‘ಟ್ರಾನ್ಸ್‍ಫರ್’ ಮಾಡಲು ಹೆಣಗಲಾಯಿತು.

ರಾಜ್ಯದಲ್ಲಿ ಮತದಾನ ಮುಗಿದಿದ್ದರೂ ಕನ್ನಡದ ಚಾನೆಲ್‍ಗಳೂ ಹಿಂದಿಯವರಂತೆ ಉತ್ಸುಕವಾಗಿಯೇ ನಾಮಪತ್ರ ಸಲ್ಲಿಕೆಯನ್ನು ಪ್ರಸಾರ ಮಾಡಿದರು. ಬಹುಷ: ಇದು ಪ್ಯಾಕೇಜ್‍ನ ಭಾಗವಾಗಿರಬಹುದು.

ದಿಗ್ವಿಜಯಕ್ಕೆ ಯುದ್ಧ ಗೆದ್ದ ಸಂಭ್ರಮ. ನೇರ ಪ್ರಸಾರದ ಜೊತೆಗೆ ವಿಶೇಷ ಕಾರ್ಯಕ್ರಮ ಬೇರೆ! ‘ವೈರಿಪಡೆಗೆ ನಮೋ ಖಬರ್‍ದಾರ್ ಮೆಸೇಜ್!’ – ಮೋದಿ ನಾಮಿನೇಶನ್ ಭಾಷಣ ಮಾಡುವ ಮೊದಲೇ ಈ ತರಹದ ಹೆಡ್ಡಿಂಗ್! ಗಂಗಾ ಆರತಿ ಮೂಲಕ ವಿಪಕ್ಷಗಳಿಗೆ ವಾರ್ನಿಂಗ್ ಕೊಟ್ಟರೆಂದೇ? ಅಲ್ಲಿ ಸೇರಿಸಿದ ಜನರನ್ನು ಇಟ್ಟುಕೊಂಡು ದಿಗ್ವಿಜಯ ಹೀಗೆ ಹೇಳಿತೋ ಗೊತ್ತಾಗಲಿಲ್ಲ!

ಟಿವಿ9 ಪಾಲಿಗೆ ಮೋದಿ ‘ಕಾಶಿಯ ಕೊತ್ವಾಲ’… ವಿಶ್ವನಾಥನೇ ಬಲ್ಲ ಇದರ ಮರ್ಮ! ನ್ಯೂಸ್18ನಲ್ಲಿ ವಿಶೇಷ ಕಾರ್ಯಕ್ರಮ- ‘ದಶಾಶ್ವಮೇಧ ರಹಸ್ಯ, ಗಂಗಾ ಆರತಿ (ಅವರ ಪರದೆ ಮೇಲೆ ಗಂಗಾರತಿ ಎಂದಿತ್ತು!) ವಿಸ್ಮಯ, ಪ್ರತ್ಯಕ್ಷರಾದ ಸಾಧುಗಳು’….ಸೂಪರ್ ಮಾಮ! ಪ್ರತ್ಯಕ್ಷವಾಗುವವರೆಗೆ ಸಾಧುಗಳು ಎಲ್ಲಿದ್ದರು? ಅಥವಾ ಮೇಲಿಂದ ಉದುರಿ ಬಿದ್ದರಾ?

ಬಿಟಿವಿಯವರಂತೂ ರಾಧಿಕಾ ಹಿರೇಗೌಡರ್ ಅವರನ್ನೇ ವಾರಣಾಸಿಯಲ್ಲಿ ಲ್ಯಾಂಡ್ ಮಾಡಿಸಿದ್ದರು. ರಾಧಮ್ಮರಂತೂ ‘ಏನ್ ವೈಭವ, ಹಬ್ಬದ ಸಂಭ್ರಮ, ಎಲ್ಲೆಲ್ಲೂ ಎಲ್ಲೆಲ್ಲೂ ಎಲ್ಲೆಲ್ಲೂ…ಎಲ್ಲೆಲ್ಲೂ (ನಾಲ್ಕು ದಿಕ್ಕುಗಳ ಹೊರಳಿದ್ದರಿಂದ 4 ಸಲ ಹೇಳಿದರೋ?)…ಜನ ಸ್ವ-ಇಚ್ಛೆಯಿಂದ ಪಾಲ್ಗೊಂಡು ತಾವೇ ನಗರವನ್ನು ಸಿಂಗರಿಸಿದ್ದಾರೆ…’ -ನಾನ್‍ಸ್ಟಾಪ್ ಹೊಗಳಿಕೆಯಲ್ಲೇ ಕಾಲ ಕಳೆದರು.

ಮುಂದಿನ ಹಂತದ ಚುನಾವಣೆಗಳು ಹಿಂದಿ ಬೆಲ್ಟ್‍ನಲ್ಲೇ ಜಾಸ್ತಿ. ಹೀಗಾಗಿ ಹಿಂದಿ ಚಾನೆಲ್‍ಗಳಿಗೆ ವಿಶೇಷ ಪ್ಯಾಕೇಜ್ ಇದ್ದಂತಿತ್ತು. ಝೀ ಚಾನೆಲ್ ಪಾಲಿಗೆ ಶಿವನೇ ನಾಮಿನೇಶನ್‍ಗೆ ಬಂದಂತಿತ್ತು. ಆಜ್‍ತಕ್‍ನಲ್ಲಿ ನಿರೂಪಕಿ ಮತ್ತು ವಾರಣಾಸಿಯಲ್ಲಿ ಓಡಾಡುತ್ತಿದ್ದ ವರದಿಗಾರ್ತಿಯ ನಡುವಿನ ಮಾತು ಹೇಗಿದ್ದವು ಎಂದರೆ,

-ಯಾ ಪರಿ ಮಂದಿ…ಸಂದಿಗೊಂದಿಯಲ್ಲೆಲ್ಲ ಮಂದಿ…ಅಬಬಾ….ನಾ ನೋಡೆ ಇಲ್‍ಬಿಡು ಇಂತಹ ಸಂಭ್ರಮ…

-ಹೌದು ಹೌದು ನಾವು ನೋಡ್ತಾ ಇದ್ದೇವಲ್ಲ. ನೀನೇ ಲಕ್ಕಿ ಕಣೆ…ವಾರಣಾಸಿಯಲ್ಲೇ ನಿಂತು ಇದನ್ನ ಕಣ್ತುಂಬಿಕೊಳ್ಳೋ ಭಾಗ್ಯ…

-ಧೂಮ್‍ಧಾಮ್ ಸೆ ಆಯೇಗಿ ಸರ್ಕಾರ್

ಈ ಲೈವ್ ವರದಿಯ ಪ್ರಾಯೋಜಕರು: ಬಿಗ್‍ಬಾಸ್ ಡಾಲರ್ ಬನಿಯನ್ ಮತ್ತು ಅಂಡರ್‍ವೇರ್ ಕಂಪನಿ!

‘ವೀಕೆಂಡ್ ವಿಥ್ ರಮೇಶ್’ ನೋಡಿದ ಮೇಲೆ ಅನಿಸಿದ್ದು: ಮೋದಿಯವರನ್ನು ಅತಿಥಿಯಾಗಿ ಕರೆದರೆ ಹೇಗೆ? ಓದಿದ ಸ್ಕೂಲ್, ಚಾ ಮಾರಿದ ಸ್ಟೇಷನ್, ಅವರ ಬಾಲ್ಯದ ಸಹಪಾಠಿಗಳನ್ನು ಕರೆಸಲು ಸಾಧ್ಯವಾ? ಅವರ ತಾಯಿ ಕರೆಸಬಹುದು, ಪತ್ನಿ ಬರುವುದು ಡೌಟು… ಸರ್, ಮಾವಿನ ಹಣ್ಣು ತಿಂದು ತೋರಿಸಿ ಅನ್ನೋದು…..ಇವೆಲ್ಲ ಕಷ್ಟ ಅಲ್ಲವಾ ರಮೇಶ್ ಅರವಿಂದ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...