Homeಕರ್ನಾಟಕಚಿಕ್ಕೋಡಿ: ಸೆಟಗೊಂಡಿವೆ ಬಿಜೆಪಿಯ “ಕತ್ತಿ’ಗಳು : ಮತ್ತೆ ಡಿಲ್ಲಿಗೆ ಹಾರಲಿದೆ ಕಾಂಗ್ರೆಸ್ ‘ಕುದುರೆ’...

ಚಿಕ್ಕೋಡಿ: ಸೆಟಗೊಂಡಿವೆ ಬಿಜೆಪಿಯ “ಕತ್ತಿ’ಗಳು : ಮತ್ತೆ ಡಿಲ್ಲಿಗೆ ಹಾರಲಿದೆ ಕಾಂಗ್ರೆಸ್ ‘ಕುದುರೆ’…

- Advertisement -
- Advertisement -

| ಮಹಾಲಿಂಗಪ್ಪ ಆಲಬಾಳ |
ಬೆಳಗಾವಿಯ ‘ಸಿಂಡಿಕೇಟ್’ ರಾಜಕಾರಣದ ಭಾಗವಾಗಿರುವ ಚಿಕ್ಕೋಡಿ ಈ ಸಲ ಮತ್ತೆ ಕಾಂಗ್ರೆಸ್ ಪಾಲಾಗುವ ಎಲ್ಲ ಲಕ್ಷಣಗಳು ಎದ್ದು ಹೊಡೆಯುತ್ತಿವೆ. ಏಕೆಂದರೆ ಇಲ್ಲಿ ಬಿಜೆಪಿ ಎತ್ತಿ ಹಿಡಿಯಬೇಕಿದ್ದ ಎರಡೂ ‘ಕತ್ತಿ’ಗಳು ಮಲಗಿದಂತೆ ನಾಟಕ ಆಡುತ್ತಿವೆ. ಹೋರಿಯಂತಿರುವ ಕಾಂಗ್ರೆಸ್‍ನ ‘ಕುದುರೆ’ಗೆ ಇದು ಅನಾಯಾಸವಾಗಿ ಇನ್ನೊಂದು ಗೆಲುವನ್ನು ತಂದು ಕೊಡಲಿದೆ. 2014ರಲ್ಲಿ ‘’ಕತ್ತಿ’ಗಳು ಆ್ಯಕ್ಟೀವ್ ಆಗಿದ್ದಾಗಲೇ ಈ ‘ಕುದುರೆ’ 3 ಸಾವಿರ ಲೀಡ್‍ನಲ್ಲಿ ಗೆದ್ದಿತ್ತು!

ಬೆಳಗಾವಿಯ ಎರಡೂ ಕ್ಷೇತ್ರಗಳಲ್ಲಿ ಮೂರು ‘ಸಿಂಡಿಕೇಟ್’ಗಳದ್ದೇ ಕಾರುಬಾರು. ಜಾರಕಿಹೊಳಿ, ಕತ್ತಿ, ಕೋರೆ ಕುಟುಂಬಗಳು ಇಲ್ಲಿಯ ರಾಜಕಾರಣವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಪ್ರಜಾಪ್ರಭುತ್ವವನ್ನೇ ಅಣಕ ಮಾಡಿ ದಶಕಗಳೇ ಸವೆದವು. ಇದರಡಿ, ಹುಕ್ಕೇರಿ ಕುಟುಂಬವೂ ಈಗ ತನ್ನದೊಂದು ‘ಸಾಮ್ರಾಜ್ಯ’ ವಿಸ್ತರಿಸುತ್ತಿದೆ!

ಪ್ರಕಾಶ್ ಹುಕ್ಕೇರಿ

ವರ್ತಮಾನದ ಚುನಾವಣಾ ರಾಜಕೀಯಕ್ಕೆ ಬರುವುದಾದರೆ, ಇಲ್ಲಿ ಕಾಂಗ್ರೆಸ್‍ನ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಮತ್ತೆ ತುರುಸಿನಲ್ಲಿ ಇದ್ದಾರೆ. ಕಳೆದ ಸಲ ಕೇವಲ 3 ಸಾವಿರ ಚಿಲ್ಲರೆ ಮತಗಳಿಂದ ಸೋತ ರಮೇಶ ಕತ್ತಿಗೆ ಬಿಜೆಪಿ ಟಿಕೆಟ್ ಕೊಡದೇ ಇರುವುದೇ ಕಾಂಗ್ರೆಸ್‍ಗೆ ಲಾಭವಾಗಲಿದೆಯೇನೋ? ಆಗಾಗ ‘ಪ್ರತ್ಯೇಕ ಉತ್ತರ ಕರ್ನಾಟಕ’ ಎಂದೆಲ್ಲ ಅಸಂಬದ್ಧವಾಗಿ ಮಾತಾಡುವ ಬಿಜೆಪಿ ಶಾಸಕ ಉಮೇಶ ಕತ್ತಿಯ ಸಹೋದರ ರಮೇಶ ಕತ್ತಿಗೆ ಟಿಕೆಟ್ ಕೊಡದೇ ಇರುವುದು ಲೋಕಲ್ ಬಿಜೆಪಿ ಪಾಳಯಕ್ಕೆ ತಲೆ ಕೆಡಿಸಿದೆ. ಇಲ್ಲಿವರೆಗೂ ಕತ್ತಿ ಸಹೋದರರು ಬಿಜೆಪಿ ಪ್ರಚಾರಕ್ಕೆ ಬರದೇ ಸೆಟಗೊಂಡಿದ್ದಾರೆ.

ಅಣ್ಣಾ ಸಾಹೇಬ್ ಜೊಲ್ಲೆ

ಇಲ್ಲೀಗ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಎಂಬ ‘ಮೀಸೆ ಮಾವ’ನ ಎದುರು ಬಿಜೆಪಿ ಅಣ್ಣಾಸಾಬ್ ಜೊಲ್ಲೆ ಎಂಬ ಉದ್ಯಮಿಯನ್ನು ಕಣಕ್ಕಿಳಿಸಿದೆ. ಈತ ನಿಪ್ಪಾಣಿಯ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆಯ ಪತಿ. ಮೊದಲ ಸಲ ಶಾಸಕಿಯಾಗಿರುವ ಶಶಿಕಲಾ ‘ಕತ್ತಿ’ಗಳಿಗೇ ಇರಿಯುವಂತೆ ಗಂಡನಿಗೆ ಟಿಕೆಟ್ ತಂದಿದ್ದಾರೆ!

ಈಗ ಅಖಾಡಕ್ಕೆ ಬರೋಣ. ಬಿಜೆಪಿಯ ಅಪ್ಪಾಸಾಹೇಬ ಜೊಲ್ಲೆ ಉದ್ಯಮಿ. ಹಲವಾರು ಶೈಕ್ಷಣಿಕ ಸಂಸ್ಥೆ ನಡೆಸುತ್ತಾರೆ. ಹಲವು ಕೋ-ಆಪರೇಟಿವ್ ಸಂಸ್ಥೆಗಳೂ ಇವೆ. ಇದು ಅವರ ಮೊದಲ ರಾಜಕೀಯ ಫೈಟ್ ಆಗಿರುವುದರಿಂದ, ಅವರ ಪತ್ನಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮೇಲೆಯೇ ಎಲ್ಲ ಭಾರ ಬಿದ್ದಿದೆ ಎನ್ನುವುದಕ್ಕಿಂತ ಅವರು ತಾವಾಗೇ ಭಾರ ಹೊತ್ತುಕೊಂಡು ಗಂಡನಿಗೆ ಟಿಕೆಟ್ ತಂದಿದ್ದಾರೆ. ಈ ಕಾರಣಕ್ಕೇ ಕತ್ತಿ ಸಹೋದರರು ಮುನಿಸಿಕೊಂಡಿದ್ದರಿಂದ ಶಶಿಕಲಾ ಮತ್ತು ಬಿಜೆಪಿಯ ಡಬ್ಬದ ಮೇಲೆ ಲೋಡು ಬಿದ್ದಿದೆ. ಆ ಲೋಡನ್ನು ಹೊತ್ತುಕೊಂಡು ತೆವಳುತ್ತ ಪ್ರಚಾರ ಮಾಡುತ್ತಿದೆ ಬಿಜೆಪಿ.

ಉಮೇಶ್ ಕತ್ತಿ

ಕಾಂಗ್ರೆಸ್ ಮತ್ತು ಬಿಜೆಪಿಯ ಇಬ್ದರೂ ಕ್ಯಾಂಡಿಡೇಟ್‍ಗಳು ಪಂಚಮಸಾಲಿ ಲಿಂಗಾಯಿತರೇ ಆಗಿರುವುದರಿಂದ, ಇತರ ಸಮುದಾಯಗಳ ಮತಗಳು ಇಲ್ಲಿ ನಿರ್ಣಾಯಕ. ಇಲ್ಲಿರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ನಾಲ್ಕು ಸ್ಥಾನ ಹೊಂದಿವೆ. ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ ಕತ್ತಿ ಸಹೋದರನಿಗೆ ಟಿಕೆಟ್ ಸಿಗಲಿಲ್ಲ ಎಂದು ಸೆಟಗೊಂಡಿದ್ದಾರೆ. ಇದೇ ಲೋಕಸಭೆ ವ್ಯಾಪ್ತಿಗೆ ಬರುವ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಫುಲ್ ಇನ್‍ವಾಲ್ವ್ ಆಗಿದ್ದಾರೆ. ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಗೆಲುವು ತರುವ ಜವಾಬ್ದಾರಿಯನ್ನು ಅವರೀಗ ಹೊತ್ತುಕೊಂಡಿದ್ದಾರೆ.

ಸತೀಶ್ ಜಾರಕಿಹೊಳಿ

ಕೃಷ್ಣೆಯ ತಟದಲ್ಲಿ ಹುಲುಸಾಗಿ ಕಬ್ಬು ಬೆಳೆದೂ ನ್ಯಾಯಯುತ ಬೆಲೆಯಿಲ್ಲದೇ ಸಂಕಷ್ಟದಲ್ಲಿರುವ ರೈತರ ಕುರಿತಾಗಲಿ, ಕಬ್ಬಿನ ಗದ್ದೆ, ಸಕ್ಕರೆ ಕಾರ್ಖಾನೆಗಳಲ್ಲಿ ದುಡಿಯುವ ಶ್ರಮಿಕರ ಬಗ್ಗೆಯಾಗಲೀ ಇಲ್ಲಿ ಚರ್ಚೆಯೇ ಇಲ್ಲದಿರುವ ಅಸಹ್ಯ ‘ಡೆಮಾಕ್ರಸಿ’ಯನ್ನು ನಾವು ನೋಡಬೇಕಾಗಿದೆ.
ಈಗಿರುವ ಸಂಸದ ಪ್ರಕಾಶ ಹುಕ್ಕೇರಿ ತಮ್ಮ ಮಗ ಸದಲಗಾ ಶಾಸಕ ಗಣೇಶ ಹುಕ್ಕೇರಿಯ ಒಳಿತನ್ನಷ್ಟೇ ಬಯಸುವವರು. ಉಮೇಶ ಕತ್ತಿಗೆ ಸಹೋದರ ರಮೇಶನ ಬಗ್ಗೆ ಅಷ್ಟೇ ಕಾಳಜಿ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಳ್ಳೆಗೆ ಗಂಡನ ಗೆಲುವಿನದ್ದೇ ಚಿಂತೆ!

ಇಂತಹ ವೈಯಕ್ತಿಕ ಹಿತಾಸಕ್ತಿಯ ರಾಜಕಾರಣದಲ್ಲಿ ಕಾಂಗ್ರೆಸ್ಸಿನ ಪ್ರಕಾಶ ಹುಕ್ಕೇರಿ ಎಂಬ ಸ್ವಾರ್ಥಿ ‘ಕುದುರೆ’ ಮತ್ತೆ ಡಿಲ್ಲಿಗೆ ಹಾರಲಿದೆ. ಬಿಜೆಪಿಯ ಜೋಡು ‘ಕತ್ತಿ’ಗಳಿಗೂ ಇದೇ ಬೇಕಾಗಿದೆಯೇನೋ? ಸದ್ಯಕ್ಕೆ ‘ಕುದುರೆ’ ಗೆಲ್ಲುವುದೇ ಇದ್ದುದರಲ್ಲಿ ಲೇಸು ಎಂಬ ಪರಿಸ್ಥಿತಿಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...