Homeಕರ್ನಾಟಕಟಿಕೆಟ್ ಹಂಚಿಕೆ: ಒಬಿಸಿಗೆ ದಕ್ಕಿದ್ದೆಷ್ಟು? ಮೈತ್ರಿ ಪಕ್ಷಗಳು – 8, ಬಿಜೆಪಿ - 1

ಟಿಕೆಟ್ ಹಂಚಿಕೆ: ಒಬಿಸಿಗೆ ದಕ್ಕಿದ್ದೆಷ್ಟು? ಮೈತ್ರಿ ಪಕ್ಷಗಳು – 8, ಬಿಜೆಪಿ – 1

- Advertisement -
- Advertisement -

ಮೀಸಲೇತರ ಕ್ಷೇತ್ರಗಳಲ್ಲಿ ಬಿಜೆಪಿ 95% ಕ್ಷೇತ್ರಗಳಲ್ಲಿ ಮೇಲ್ಜಾತಿಯವರಿಗೆ ಟಿಕೆಟ್. ಸಮತೋಲನ ಕಾಯ್ದುಕೊಂಡ ಮೈತ್ರಿ ಪಕ್ಷಗಳು. ಮಹಿಳೆಯರಿಗೆ 33% ಬಲುದೂರ.

ಈ ಲೋಕಸಭಾ ಚುನಾವಣೆಯಲ್ಲಿ ಯಾವ್ಯಾವ ಪಕ್ಷಗಳು ಯಾವ್ಯಾವ ಜಾತಿಗಳಿಗೆ ಟಿಕೆಟ್ ನೀಡಿವೆ ಎಂಬುದನ್ನು ಪರಿಶೀಲಿಸಿದರೆ ಆಶ್ಚರ್ಯ ಕಾದಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎರಡು ಎಸ್.ಟಿ. ಮೀಸಲು ಮತ್ತು ಐದು ಎಸ್.ಸಿ. ಮೀಸಲು ಕ್ಷೇತ್ರಗಳಿದ್ದು, ಉಳಿದ 21 ಕ್ಷೇತ್ರಗಳ ಪೈಕಿ ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಓಬಿಸಿ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಇನ್ನೊಂದು ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಿಲ್ಲ. ಅದೇ ಸಂದರ್ಭದಲ್ಲಿ ಮೈತ್ರಿ ಪಕ್ಷಗಳ (ಕಾಂಗ್ರೆಸ್ ಮತ್ತು ಜೆಡಿಎಸ್) ಟಿಕೆಟ್ ನೀಡಿಕೆಯು ವೈವಿಧ್ಯಮಯವಾಗಿದೆ.

ಎಸ್.ಟಿ. ಎಂಬುದು ಪರಿಶಿಷ್ಟ ಪಂಗಡವಾಗಿದ್ದು, ಉಳಿದ ರಾಜ್ಯಗಳಲ್ಲಿ ಆದಿವಾಸಿ-ಗಿರಿಜನರು ಅದರ ಭಾಗವಾಗಿ ಒಂದಷ್ಟು ಪ್ರಾತಿನಿಧ್ಯ ಪಡೆದುಕೊಳ್ಳುತ್ತಾರೆ. ಆದರೆ, ಕರ್ನಾಟಕದಲ್ಲಿ ಹಿಂದೆ ರಾಜ್ಯದ ಕೆಲವು ಭಾಗಗಳನ್ನು ಆಳಿದ ಇತಿಹಾಸವಿರುವ (ಈಗಲೂ ಆ ಕುಟುಂಬಗಳ ಪ್ರತಿನಿಧಿಗಳು ವಿವಿಧ ರಾಜಕೀಯ ಪಕ್ಷಗಳಿಂದ ಟಿಕೆಟ್ ಪಡೆದುಕೊಳ್ಳುತ್ತಿದ್ದಾರೆ) ವಾಲ್ಮೀಕಿ/ನಾಯಕ ಸಮುದಾಯವು ಎಸ್.ಟಿ.ಯ ಭಾಗವಾಗಿದೆ. ಈ ಸಮುದಾಯದವರೇ ಬಳ್ಳಾರಿ ಮತ್ತು ರಾಯಚೂರು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿಗಳಾಗಿ (ಎರಡೂ ಕಾಂಗ್ರೆಸ್) ಕಣಕ್ಕಿಳಿದಿದ್ದಾರೆ.

ಇನ್ನು ಎಸ್.ಸಿ. ಮೀಸಲು ಕ್ಷೇತ್ರಗಳಿಗೆ ಬಂದರೆ, ಐದು ಕ್ಷೇತ್ರಗಳಲ್ಲಿ ಬಿಜೆಪಿಯು ಎರಡು ಎಡಗೈ ಸಮುದಾಯಕ್ಕೆ, ಎರಡು ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ ಸಹ ಎರಡು ಬಲಗೈ ಮತ್ತು ಎರಡು ಎಡಗೈ ಸಮುದಾಯಕ್ಕೆ ನೀಡಿದೆ.ಮತ್ತು ಮೈತ್ರಿಯಿಂದ ವಿಜಯಪುರದಲ್ಲಿ ಲಂಬಾಣಿ ಸಮುದಾಯದ ಸುನೀತಾ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯು ಒಬ್ಬ ಸ್ಪೃಶ್ಯ (ಲಂಬಾಣಿ) ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.

ಉಳಿದ 21 ಕ್ಷೇತ್ರಗಳ ಪೈಕಿ ಬೆಂಗಳೂರು ಕೇಂದ್ರದಲ್ಲಿ ಓಬಿಸಿ ಸಮುದಾಯದ ಪಿ.ಸಿ.ಮೋಹನ್‍ರಿಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ಬಿಟ್ಟರೆ, ರಾಜ್ಯದ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಮೇಲ್ಜಾತಿಗಳಿಗೇ ಮಣೆ ಹಾಕಿದೆ. ಅದರಲ್ಲಿ 7 ಲಿಂಗಾಯಿತರಿಗೆ, 6 ಒಕ್ಕಲಿಗರಿಗೆ, ಮೂರು (ಶೇ.10ಕ್ಕಿಂತ ಹೆಚ್ಚು) ಬ್ರಾಹ್ಮಣರಿಗೆ ಮತ್ತು 1 ಬಂಟ ಸಮುದಾಯಕ್ಕೆ ನೀಡಿದೆ.

ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಿಂದ 5 ಒಕ್ಕಲಿಗರಿಗೆ, 5 ಲಿಂಗಾಯಿತರಿಗೆ, 1 ನಾಮಧಾರಿ ರೆಡ್ಡಿ, 1 ಬಂಟರಿಗೆ ನೀಡಿದ್ದರೆ, ಹಿಂದುಳಿದ ವರ್ಗಗಳಲ್ಲಿ 8 (3 ಕುರುಬರು, 2 ಈಡಿಗರು, 1 ಬಿಲ್ಲವ, 1 ಸವಿತಾ ಸಮಾಜ, 1 ದೇವಳಿ) ಸಮುದಾಯದವರಿಗೆ ಟಿಕೆಟ್ ನೀಡಿದೆ ಮತ್ತು ಒಬ್ಬರು ಮುಸ್ಲಿಮರಿಗೆ ಟಿಕೆಟ್ ನೀಡಿದೆ. ಬಿಜೆಪಿ ಒಬ್ಬರು ಮಹಿಳೆಗೆ ಟಿಕೆಟ್ ನೀಡಿದ್ದರೆ, ಮೈತ್ರಿ ಪಕ್ಷಗಳು ಇಬ್ಬರಿಗೆ ನೀಡಿವೆ. ಬಿಜೆಪಿ ಒಬ್ಬರೂ ಮುಸ್ಲಿಮರಿಗೆ (ಕರ್ನಾಟಕದ ಜನಸಂಖ್ಯೆಯ ಶೇ.13ರಷ್ಟಿರುವ ಸಮುದಾಯ) ಟಿಕೆಟ್ ನೀಡಿಲ್ಲ.

ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.50ಕ್ಕಿಂತ ಹೆಚ್ಚಿರುವ ಜಾತಿ ಸಮುದಾಯಗಳಿಗೆ ಬಿಜೆಪಿ ಪಕ್ಷವು ಇಷ್ಟು ಕಡಿಮೆ ಸಂಖ್ಯೆಯಲ್ಲಿ ಪ್ರಾತಿನಿಧ್ಯ ಕೊಟ್ಟಿದೆ ಮತ್ತು ಈ ಕುರಿತು ಅವರಿಗೆ ಇದೊಂದು ಸಮಸ್ಯೆ ಎಂತಲೂ ಅನಿಸುತ್ತಿಲ್ಲ. ಚುನಾವಣಾ ರಾಜಕಾರಣದಲ್ಲಿ ಗೆಲುವು ಒಂದು ಮಾನದಂಡವಾದಾಗ ಪ್ರಾಬಲ್ಯ ಮತ್ತು ಜಾತಿ ಜನಗಳ ಸಂಖ್ಯೆಯೇ ಮುಖ್ಯವಾಗಿಬಿಡುತ್ತದೆ. ಹಾಗಾಗಿ ಸಂಖ್ಯೆಯಲ್ಲಿ ಸಣ್ಣದಾಗಿರುವ ಜಾತಿಗಳಂತೂ ಅನಾಥವಾಗಿಬಿಡುತ್ತವೆ. ಆದರೆ, ಸಂಖ್ಯೆಯಲ್ಲೂ ದೊಡ್ಡದಾಗಿರುವ ಹಿಂದುಳಿದ ಜಾತಿಗಳಿಗೆ ಬಿಜೆಪಿ ಪ್ರಾತಿನಿಧ್ಯ ಕಲ್ಪಿಸಿಲ್ಲ. ಕಾಂಗ್ರೆಸ್ ಈ ವಿಚಾರದಲ್ಲಿ ಗಣನೀಯವಾದ ಪ್ರಾತಿನಿಧ್ಯವನ್ನು ಕೊಟ್ಟಿದೆ. ಆದರೆ, ಬಹುತೇಕ ಕಾಂಗ್ರೆಸ್‍ಗೇ ಮತ ಹಾಕುವ ಮುಸ್ಲಿಮರಿಗೆ ಈ ರಾಜ್ಯದಲ್ಲಿ ಕನಿಷ್ಠ 3 ಪ್ರಾತಿನಿಧ್ಯವಾದರೂ ಇರಬೇಕಿತ್ತು. ಒಂದೇ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿದೆ. ಮುಸ್ಲಿಮರು ನಿಂತರೆ ಗೆಲ್ಲುವುದಿಲ್ಲ ಎಂಬ ದುರಂತದ ಸ್ಥಿತಿ ಇರುವುದು ವಾಸ್ತವವಾದರೂ ಅದನ್ನು ಸರಿ ಮಾಡುವ ಬಗೆಯ ಕುರಿತು ಆ ಪಕ್ಷ ಯೋಚಿಸಿದಂತೆ ಕಾಣುವುದಿಲ್ಲ.
ಮಹಿಳೆಯರ ವಿಚಾರಕ್ಕೆ ಬರುವುದಾದರೆ, ಯಾವ ಪಕ್ಷಗಳೂ ಬೆನ್ನು ತಟ್ಟಿಕೊಳ್ಳುವ ಹಾಗಿಲ್ಲ. ಈ ಬಾರಿ ತೃಣಮೂಲ ಕಾಂಗ್ರೆಸ್ ಮತ್ತು ಒರಿಸ್ಸಾದ ಬಿಜೆಡಿ ಮಾತ್ರ ಧೈರ್ಯದ ನಿರ್ಧಾರಕ್ಕೆ ಮುಂದಾಗಿವೆ.

ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ವಿಚಾರದಲ್ಲಿ ಅಭಿಪ್ರಾಯಗಳಿಗಾಗಿ ವಿವಿಧ ಪಕ್ಷಗಳು ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಮಾತಾಡಿಸಿದೆವು.
ವಿ.ನಾಗರಾಜು, ದಸಂಸ (ಸಂಯೋಜಕ) ಮುಖಂಡರು
ಇದರಲ್ಲಿ ಸ್ಪಷ್ಟವಾಗುತ್ತದೆ ಇವರು ಎಷ್ಟು ಶೋಷಿತ ಸಮುದಾಯಗಳ ವಿರುದ್ಧವಿದ್ದಾರೆಂಬುದು. ಒಂದು ವೇಳೆ ಎಸ್‍ಸಿ ಮತ್ತು ಎಸ್‍ಟಿ ಮೀಸಲು ಇರದಿರುತ್ತಿದ್ದರೆ, ಅವರಿಗೂ ಟಿಕೆಟ್ ನೀಡುತ್ತಿರಲಿಲ್ಲ. ಮುಖ್ಯವಾಗಿ ಬಿಜೆಪಿಯು ಮನುವಾದಿ ಪಕ್ಷ. ಅವರ ಕಿಚನ್ ಒಳಗೆ ಯಾವ ಕಾರಣಕ್ಕೂ ಶೋಷಿತ ಸಮುದಾಯಗಳನ್ನು ಮತ್ತು ಮುಸ್ಲಿಮರನ್ನು ಬಿಟ್ಟುಕೊಳ್ಳುವುದಿಲ್ಲ. ಹಾಗಾಗಿಯೇ ಹಿಂದುಳಿದ ವರ್ಗದ ನಾಯಕರಿದ್ದರೂ ಅವರು ಮೇಲಕ್ಕೆ ಬಂದರೆ ತಮಗೆ ತೊಂದರೆ ಎಂದು ಭಾವಿಸುತ್ತಾರೆ.

ಬಿ.ಜೆ.ಪುಟ್ಟಸ್ವಾಮಿ, ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರು
ಪಾರ್ಲಿಮೆಂಟ್‍ನಲ್ಲಿ ಗೆಲ್ಲುವ ಅವಕಾಶ ಇರಬೇಕು. ನಮ್ಮಲ್ಲಿ ಹೆಚ್ಚು ಎಸ್ಟಾಬ್ಲಿಷ್ ಆಗಿರುವ ಬ್ಯಾಕ್‍ವರ್ಡ್ ಕ್ಲಾಸ್ ಲೀಡರ್ಸ್ ಇಲ್ಲ. ಬೇರೆ ಪಕ್ಷಗಳಲ್ಲಿ ಮೊದಲಿಂದಲೂ ಎಸ್ಟಾಬ್ಲಿಷ್ ಆಗಿದ್ದಾರೆ. ನಾಲ್ಕು ಕಡೆ ಟಿಕೆಟ್ ಕೊಡಬೇಕೆಂದು ಕೇಳಿದ್ದೆವು. ಆದರೆ, ನಮಗೆ ಸೀಟು ಕೊಡಿ ಎಂದು ಕೇಳಿದವರೇ ಇಬ್ಬರು. ಹಿಂದುಳಿದ ವರ್ಗಗಳಿಗೆ ಯಡಿಯೂರಪ್ಪನವರೇ ಆದ್ಯತೆ ಕೊಟ್ಟು ಮಠಮಾನ್ಯಗಳಿಗೆ ಹಣ ಕೊಟ್ಟರು.

ಭಗವಂತ ಖೂಬಾ ಅವರನ್ನು ಹಿಂದುಳಿದ ವರ್ಗವೆಂದ ಪುಟ್ಟಸ್ವಾಮಿ
ಪತ್ರಿಕೆಯ ವತಿಯಿಂದ ಪುಟ್ಟಸ್ವಾಮಿಯವರನ್ನು ಸಂಪರ್ಕಿಸಿದಾಗ ಭಗವಂತ ಖೂಬಾ ಅವರಿಗೂ ಕೊಟ್ಟಿದೆ, ಅವರು ಹಿಂದುಳಿದ ವರ್ಗ ಎಂದರು. ವಾಸ್ತವದಲ್ಲಿ ಭಗವಂತ ಖೂಬಾ ಅವರು ದೀಕ್ಷಾ ಲಿಂಗಾಯಿತರಾಗಿದ್ದಾರೆ. ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡರೆ ಕರ್ನಾಟಕದಲ್ಲಿ ಒಕ್ಕಲಿಗರು, ಲಿಂಗಾಯಿತರೂ ಒಬಿಸಿ ಅಡಿಯಲ್ಲಿ ಮೀಸಲಾತಿ ಪಡೆಯುತ್ತಾರೆ. ಹಾಗಾಗಿಯೇ ಮೋದಿಯವರ ಮೇಲ್ಜಾತಿಗೆ 10% ಮೀಸಲಾತಿಯು ನಿಜವಾದ ಅರ್ಥದಲ್ಲಿ ಲಭ್ಯವಾಗುವುದು ಬ್ರಾಹ್ಮಣರಿಗೆ. ಹೀಗಿದ್ದರೂ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರು ಎರಡು ಸೀಟು ಕೊಟ್ಟಿದ್ದೇವೆ ಎಂದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆಯ ಶಿವರಾಂ
ಬಿಜೆಪಿ ಪಕ್ಷವು ಸಮಾನತೆಯ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿಯಾಗಿದ್ದು, ಅವರು ಮನುಸಂಸ್ಕøತಿಯನ್ನು ಮರುಸ್ಥಾಪಿಸಲು ಯೋಚಿಸುವವರು. 3% ಇರುವ ಬ್ರಾಹ್ಮಣರಿಗೆ ಮೇಲ್ಜಾತಿಗಳ ಬಡವರಿಗೆ ಮೀಸಲಾತಿ ಕಲ್ಪಿಸುವ ಹೆಸರಿನಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿದವರು. ಹಾಗಾಗಿ ಅವರು ಈ ರೀತಿ ಮಾಡಿದ್ದಾರೆ.

ಕೆ.ಆರ್.ಗೋಪಾಲಕೃಷ್ಣ, ಸಾಮಾಜಿಕ ಕಾರ್ಯಕರ್ತರು, ಮೈಸೂರು
ಬಿಜೆಪಿಗೂ ಸಾಮಾಜಿಕ ನ್ಯಾಯಕ್ಕೂ ಸಂಬಂಧವಿಲ್ಲ. ಏಕಮುಖಿ ಸಂಸ್ಕೃತಿಯ ಪ್ರತಿಪಾದಕರಿಗೆ ಬಹುಮುಖಿ ಸಂಸ್ಕೃತಿಯ ವೈವಿಧ್ಯದ ಮಹತ್ವದ ಅರಿವು ಅರ್ಥವಾಗುವುದು ಹೇಗೆ? ಜಾತಿ ಆಧಾರದಲ್ಲಿ ಶೋಷಣೆ, ತಾರತಮ್ಯ, ಆಸ್ತಿಯ ಮೇಲಿನ ಅಧಿಕಾರ ಇರುವ ಈ ದೇಶದಲ್ಲಿ ರಾಜಕೀಯ ಪ್ರಾತಿನಿಧ್ಯವನ್ನಾದರೂ ಕಲ್ಪಿಸುವುದಕ್ಕೆ ಪಕ್ಷಗಳು ಯೋಚಿಸಬೇಕು. ಮೀಸಲಾತಿ ಇರದಿದ್ದರೆ ಒಬ್ಬ ದಲಿತರಿಗೂ ಅವರು ಟಿಕೆಟ್ ನೀಡುತ್ತಿರಲಿಲ್ಲ ಎಂಬ ಅನಿಸಿಕೆ ಮುಂದಿಟ್ಟರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...