Homeಕರ್ನಾಟಕಚಿಕ್ಕೋಡಿ: ಸೆಟಗೊಂಡಿವೆ ಬಿಜೆಪಿಯ “ಕತ್ತಿ’ಗಳು : ಮತ್ತೆ ಡಿಲ್ಲಿಗೆ ಹಾರಲಿದೆ ಕಾಂಗ್ರೆಸ್ ‘ಕುದುರೆ’...

ಚಿಕ್ಕೋಡಿ: ಸೆಟಗೊಂಡಿವೆ ಬಿಜೆಪಿಯ “ಕತ್ತಿ’ಗಳು : ಮತ್ತೆ ಡಿಲ್ಲಿಗೆ ಹಾರಲಿದೆ ಕಾಂಗ್ರೆಸ್ ‘ಕುದುರೆ’…

- Advertisement -
- Advertisement -

| ಮಹಾಲಿಂಗಪ್ಪ ಆಲಬಾಳ |
ಬೆಳಗಾವಿಯ ‘ಸಿಂಡಿಕೇಟ್’ ರಾಜಕಾರಣದ ಭಾಗವಾಗಿರುವ ಚಿಕ್ಕೋಡಿ ಈ ಸಲ ಮತ್ತೆ ಕಾಂಗ್ರೆಸ್ ಪಾಲಾಗುವ ಎಲ್ಲ ಲಕ್ಷಣಗಳು ಎದ್ದು ಹೊಡೆಯುತ್ತಿವೆ. ಏಕೆಂದರೆ ಇಲ್ಲಿ ಬಿಜೆಪಿ ಎತ್ತಿ ಹಿಡಿಯಬೇಕಿದ್ದ ಎರಡೂ ‘ಕತ್ತಿ’ಗಳು ಮಲಗಿದಂತೆ ನಾಟಕ ಆಡುತ್ತಿವೆ. ಹೋರಿಯಂತಿರುವ ಕಾಂಗ್ರೆಸ್‍ನ ‘ಕುದುರೆ’ಗೆ ಇದು ಅನಾಯಾಸವಾಗಿ ಇನ್ನೊಂದು ಗೆಲುವನ್ನು ತಂದು ಕೊಡಲಿದೆ. 2014ರಲ್ಲಿ ‘’ಕತ್ತಿ’ಗಳು ಆ್ಯಕ್ಟೀವ್ ಆಗಿದ್ದಾಗಲೇ ಈ ‘ಕುದುರೆ’ 3 ಸಾವಿರ ಲೀಡ್‍ನಲ್ಲಿ ಗೆದ್ದಿತ್ತು!

ಬೆಳಗಾವಿಯ ಎರಡೂ ಕ್ಷೇತ್ರಗಳಲ್ಲಿ ಮೂರು ‘ಸಿಂಡಿಕೇಟ್’ಗಳದ್ದೇ ಕಾರುಬಾರು. ಜಾರಕಿಹೊಳಿ, ಕತ್ತಿ, ಕೋರೆ ಕುಟುಂಬಗಳು ಇಲ್ಲಿಯ ರಾಜಕಾರಣವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಪ್ರಜಾಪ್ರಭುತ್ವವನ್ನೇ ಅಣಕ ಮಾಡಿ ದಶಕಗಳೇ ಸವೆದವು. ಇದರಡಿ, ಹುಕ್ಕೇರಿ ಕುಟುಂಬವೂ ಈಗ ತನ್ನದೊಂದು ‘ಸಾಮ್ರಾಜ್ಯ’ ವಿಸ್ತರಿಸುತ್ತಿದೆ!

ಪ್ರಕಾಶ್ ಹುಕ್ಕೇರಿ

ವರ್ತಮಾನದ ಚುನಾವಣಾ ರಾಜಕೀಯಕ್ಕೆ ಬರುವುದಾದರೆ, ಇಲ್ಲಿ ಕಾಂಗ್ರೆಸ್‍ನ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಮತ್ತೆ ತುರುಸಿನಲ್ಲಿ ಇದ್ದಾರೆ. ಕಳೆದ ಸಲ ಕೇವಲ 3 ಸಾವಿರ ಚಿಲ್ಲರೆ ಮತಗಳಿಂದ ಸೋತ ರಮೇಶ ಕತ್ತಿಗೆ ಬಿಜೆಪಿ ಟಿಕೆಟ್ ಕೊಡದೇ ಇರುವುದೇ ಕಾಂಗ್ರೆಸ್‍ಗೆ ಲಾಭವಾಗಲಿದೆಯೇನೋ? ಆಗಾಗ ‘ಪ್ರತ್ಯೇಕ ಉತ್ತರ ಕರ್ನಾಟಕ’ ಎಂದೆಲ್ಲ ಅಸಂಬದ್ಧವಾಗಿ ಮಾತಾಡುವ ಬಿಜೆಪಿ ಶಾಸಕ ಉಮೇಶ ಕತ್ತಿಯ ಸಹೋದರ ರಮೇಶ ಕತ್ತಿಗೆ ಟಿಕೆಟ್ ಕೊಡದೇ ಇರುವುದು ಲೋಕಲ್ ಬಿಜೆಪಿ ಪಾಳಯಕ್ಕೆ ತಲೆ ಕೆಡಿಸಿದೆ. ಇಲ್ಲಿವರೆಗೂ ಕತ್ತಿ ಸಹೋದರರು ಬಿಜೆಪಿ ಪ್ರಚಾರಕ್ಕೆ ಬರದೇ ಸೆಟಗೊಂಡಿದ್ದಾರೆ.

ಅಣ್ಣಾ ಸಾಹೇಬ್ ಜೊಲ್ಲೆ

ಇಲ್ಲೀಗ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಎಂಬ ‘ಮೀಸೆ ಮಾವ’ನ ಎದುರು ಬಿಜೆಪಿ ಅಣ್ಣಾಸಾಬ್ ಜೊಲ್ಲೆ ಎಂಬ ಉದ್ಯಮಿಯನ್ನು ಕಣಕ್ಕಿಳಿಸಿದೆ. ಈತ ನಿಪ್ಪಾಣಿಯ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆಯ ಪತಿ. ಮೊದಲ ಸಲ ಶಾಸಕಿಯಾಗಿರುವ ಶಶಿಕಲಾ ‘ಕತ್ತಿ’ಗಳಿಗೇ ಇರಿಯುವಂತೆ ಗಂಡನಿಗೆ ಟಿಕೆಟ್ ತಂದಿದ್ದಾರೆ!

ಈಗ ಅಖಾಡಕ್ಕೆ ಬರೋಣ. ಬಿಜೆಪಿಯ ಅಪ್ಪಾಸಾಹೇಬ ಜೊಲ್ಲೆ ಉದ್ಯಮಿ. ಹಲವಾರು ಶೈಕ್ಷಣಿಕ ಸಂಸ್ಥೆ ನಡೆಸುತ್ತಾರೆ. ಹಲವು ಕೋ-ಆಪರೇಟಿವ್ ಸಂಸ್ಥೆಗಳೂ ಇವೆ. ಇದು ಅವರ ಮೊದಲ ರಾಜಕೀಯ ಫೈಟ್ ಆಗಿರುವುದರಿಂದ, ಅವರ ಪತ್ನಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮೇಲೆಯೇ ಎಲ್ಲ ಭಾರ ಬಿದ್ದಿದೆ ಎನ್ನುವುದಕ್ಕಿಂತ ಅವರು ತಾವಾಗೇ ಭಾರ ಹೊತ್ತುಕೊಂಡು ಗಂಡನಿಗೆ ಟಿಕೆಟ್ ತಂದಿದ್ದಾರೆ. ಈ ಕಾರಣಕ್ಕೇ ಕತ್ತಿ ಸಹೋದರರು ಮುನಿಸಿಕೊಂಡಿದ್ದರಿಂದ ಶಶಿಕಲಾ ಮತ್ತು ಬಿಜೆಪಿಯ ಡಬ್ಬದ ಮೇಲೆ ಲೋಡು ಬಿದ್ದಿದೆ. ಆ ಲೋಡನ್ನು ಹೊತ್ತುಕೊಂಡು ತೆವಳುತ್ತ ಪ್ರಚಾರ ಮಾಡುತ್ತಿದೆ ಬಿಜೆಪಿ.

ಉಮೇಶ್ ಕತ್ತಿ

ಕಾಂಗ್ರೆಸ್ ಮತ್ತು ಬಿಜೆಪಿಯ ಇಬ್ದರೂ ಕ್ಯಾಂಡಿಡೇಟ್‍ಗಳು ಪಂಚಮಸಾಲಿ ಲಿಂಗಾಯಿತರೇ ಆಗಿರುವುದರಿಂದ, ಇತರ ಸಮುದಾಯಗಳ ಮತಗಳು ಇಲ್ಲಿ ನಿರ್ಣಾಯಕ. ಇಲ್ಲಿರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ನಾಲ್ಕು ಸ್ಥಾನ ಹೊಂದಿವೆ. ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ ಕತ್ತಿ ಸಹೋದರನಿಗೆ ಟಿಕೆಟ್ ಸಿಗಲಿಲ್ಲ ಎಂದು ಸೆಟಗೊಂಡಿದ್ದಾರೆ. ಇದೇ ಲೋಕಸಭೆ ವ್ಯಾಪ್ತಿಗೆ ಬರುವ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಫುಲ್ ಇನ್‍ವಾಲ್ವ್ ಆಗಿದ್ದಾರೆ. ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಗೆಲುವು ತರುವ ಜವಾಬ್ದಾರಿಯನ್ನು ಅವರೀಗ ಹೊತ್ತುಕೊಂಡಿದ್ದಾರೆ.

ಸತೀಶ್ ಜಾರಕಿಹೊಳಿ

ಕೃಷ್ಣೆಯ ತಟದಲ್ಲಿ ಹುಲುಸಾಗಿ ಕಬ್ಬು ಬೆಳೆದೂ ನ್ಯಾಯಯುತ ಬೆಲೆಯಿಲ್ಲದೇ ಸಂಕಷ್ಟದಲ್ಲಿರುವ ರೈತರ ಕುರಿತಾಗಲಿ, ಕಬ್ಬಿನ ಗದ್ದೆ, ಸಕ್ಕರೆ ಕಾರ್ಖಾನೆಗಳಲ್ಲಿ ದುಡಿಯುವ ಶ್ರಮಿಕರ ಬಗ್ಗೆಯಾಗಲೀ ಇಲ್ಲಿ ಚರ್ಚೆಯೇ ಇಲ್ಲದಿರುವ ಅಸಹ್ಯ ‘ಡೆಮಾಕ್ರಸಿ’ಯನ್ನು ನಾವು ನೋಡಬೇಕಾಗಿದೆ.
ಈಗಿರುವ ಸಂಸದ ಪ್ರಕಾಶ ಹುಕ್ಕೇರಿ ತಮ್ಮ ಮಗ ಸದಲಗಾ ಶಾಸಕ ಗಣೇಶ ಹುಕ್ಕೇರಿಯ ಒಳಿತನ್ನಷ್ಟೇ ಬಯಸುವವರು. ಉಮೇಶ ಕತ್ತಿಗೆ ಸಹೋದರ ರಮೇಶನ ಬಗ್ಗೆ ಅಷ್ಟೇ ಕಾಳಜಿ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಳ್ಳೆಗೆ ಗಂಡನ ಗೆಲುವಿನದ್ದೇ ಚಿಂತೆ!

ಇಂತಹ ವೈಯಕ್ತಿಕ ಹಿತಾಸಕ್ತಿಯ ರಾಜಕಾರಣದಲ್ಲಿ ಕಾಂಗ್ರೆಸ್ಸಿನ ಪ್ರಕಾಶ ಹುಕ್ಕೇರಿ ಎಂಬ ಸ್ವಾರ್ಥಿ ‘ಕುದುರೆ’ ಮತ್ತೆ ಡಿಲ್ಲಿಗೆ ಹಾರಲಿದೆ. ಬಿಜೆಪಿಯ ಜೋಡು ‘ಕತ್ತಿ’ಗಳಿಗೂ ಇದೇ ಬೇಕಾಗಿದೆಯೇನೋ? ಸದ್ಯಕ್ಕೆ ‘ಕುದುರೆ’ ಗೆಲ್ಲುವುದೇ ಇದ್ದುದರಲ್ಲಿ ಲೇಸು ಎಂಬ ಪರಿಸ್ಥಿತಿಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...