Homeಮುಖಪುಟಅಮೆರಿಕಕ್ಕೆ ಹಾರಿದ ಚೀನಿ ಬಲೂನ್‌: ‘ಇದು ಹಿಂಡನ್‌ಬರ್ಗ್ ಅಲ್ಲ’ ಎಂದ ತಜ್ಞರು

ಅಮೆರಿಕಕ್ಕೆ ಹಾರಿದ ಚೀನಿ ಬಲೂನ್‌: ‘ಇದು ಹಿಂಡನ್‌ಬರ್ಗ್ ಅಲ್ಲ’ ಎಂದ ತಜ್ಞರು

- Advertisement -
- Advertisement -

ಶಂಕಿತ ಚೀನೀ ಕಣ್ಗಾವಲು ಬಲೂನ್ ಈಗ ಸುದ್ದಿಯಲ್ಲಿದೆ. ಸುರಕ್ಷತೆಯ ನಿಟ್ಟಿನಲ್ಲಿ ಅದನ್ನು ಹೊಡೆದುರುಳಿಸಿಲ್ಲ ಎಂದು ಅಮೆರಿಕ ಹೇಳಿಕೊಂಡರೆ, ಮತ್ತೊಂದೆಡೆ ಅಮೆರಿಕದ ತಜ್ಞರು, “ಈ ಬಲೂನುಗಳು ಅದ್ಭುತವಾದ ಕಣ್ಗಾವಲು ವ್ಯವಸ್ಥೆಯಾಗಿದ್ದು, ಅವುಗಳನ್ನು ಶೂಟ್ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.

ವಾಷಿಂಗ್ಟನ್‌ನಲ್ಲಿನ ಮ್ಯಾರಥಾನ್ ಇನಿಶಿಯೇಟಿವ್ ಥಿಂಕ್ ಟ್ಯಾಂಕ್‌ನಲ್ಲಿ ಕಣ್ಗಾವಲು ಬಲೂನ್‌ಗಳ ಪರಿಣಿತರಾಗಿರುವ ವಿಲಿಯಂ ಕಿಮ್ ಪ್ರತಿಕ್ರಿಯಿಸಿದ್ದು, “ಬೀಜಿಂಗ್ ಹೇಳಿಕೊಂಡಂತೆ ಅಮೆರಿಕ ಗಡಿಯ ಹೊರಗಿನಿಂದ ದತ್ತಾಂಶಗಳನ್ನು ಸಂಗ್ರಹಿಸಲು ಚೀನಾದ ಬಲೂನ್ ಉದ್ದೇಶಿಸಿರಬಹುದು, ಆದರೆ ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯೂ ಇದೆ” ಎಂದಿದ್ದಾರೆ.

ಮೂರು ಬಸ್‌ಗಳಷ್ಟು ದೊಡ್ಡದಾದ ಬಿಳಿಯ ಗೋಳಾಕಾರದ ಬಲೂನ್‌ಗಳು ಅಮೆರಿಕದ ಮೇಲೆ ಹಾರಾಡುತ್ತಿವೆ. ಇದು ರಾಜತಾಂತ್ರಿಕ ಚರ್ಚೆಗೆ ಕಾರಣವಾಗಿದೆ. ಪರಮಾಣು ಸೂಕ್ಷ್ಮಪ್ರದೇಶವಾಗಿರುವ ಮೊಂಟಾನಾದಲ್ಲಿ ಈ ಬಲೂನ್‌ಗಳು ಹಾರಾಡುತ್ತಿವೆ ಎಂದು ಪೆಂಟಗನ್ ಹೇಳಿದೆ.

ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಬ್ರಿಗ್ ಜನರಲ್ ಪ್ಯಾಟ್ ರೈಡರ್ ಪ್ರತಿಕ್ರಿಯಿಸಿದ್ದು, “ಸೂಕ್ಷ್ಮ ಮಾಹಿತಿಗಳ ಸಂಗ್ರಹಣೆಯನ್ನು ತಪ್ಪಿಸಲು ಯುಎಸ್ ತಕ್ಷಣವೇ ಕಾರ್ಯನಿರ್ವಹಿಸಿದೆ” ಎಂದು  ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಜಾಗೃತವಾಗಿದ್ದು ಬಲೂನ್ ಅನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಎಂದು ರೈಡರ್ ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ಮುಂದಿನ ವಾರ ನಡೆಯಬೇಕಿದ್ದ ಬೀಜಿಂಗ್ ಪ್ರವಾಸವನ್ನು ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ರದ್ದುಗೊಳಿಸಿದ್ದಾರೆ.

ಹವಾಮಾನ ಸಂಶೋಧನಾ ಬಲೂನ್‌: ಚೀನಾ

ಅಮೆರಿಕಾಕ್ಕೆ ಬಲೂನ್ ಹಾರಿದ್ದರ ಕುರಿತು ಚೀನಾ ಸ್ಪಷ್ಟನೆ ನೀಡಿದ್ದು, “ಹವಾಮಾನ ಸಂಶೋಧನೆಗಾಗಿ ಬಳಸಲಾದ ನಾಗರಿಕ ವಾಯುನೌಕೆ ಇದಾಗಿದೆ. ಗಾಳಿಯ ರಭಸದಿಂದಾಗಿ ಹಾದಿ ತಪ್ಪಿ ಅಮೆರಿಕ ತಲುಪಿದೆ” ಎಂದು ತಿಳಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ “ವಾಯು ನೌಕೆಯು ಅನಪೇಕ್ಷಿತವಾಗಿ ಅಮೆರಿಕಕ್ಕೆ ಪ್ರವೇಶಿಸಿರುವುದಕ್ಕೆ ವಿಷಾದಿಸುತ್ತೇವೆ” ಎಂದಿದೆ.

ಅಮೆರಿಕ ಏಕೆ ಇನ್ನು ಬಲೂನ್‌ ಹೊಡೆದು ಹಾಕಿಲ್ಲ?

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆರಂಭದಲ್ಲಿ ಬಲೂನ್ ಅನ್ನು ಒಡೆದು ಹಾಕಲು ಬಯಸಿದ್ದರು. ಆದರೆ ಅಲ್ಲಿನ ಸ್ಥಳೀಯರ ಸುರಕ್ಷತೆಗಳ ಕುರಿತು ಉನ್ನತ ರಕ್ಷಣಾ ಅಧಿಕಾರಿಗಳು ಬಿಡೆನ್‌ ಅವರಿಗೆ ಸಲಹೆ ನೀಡಿದ್ದರಿಂದ ಕ್ರಮ ಜರುಗಿಸಿಲ್ಲ ಎಂದು ಹಿರಿಯ ಆಡಳಿತ ಅಧಿಕಾರಿಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಕಣ್ಗಾವಲು ಬಲೂನ್‌ಗಳ ಪರಿಣಿತರಾಗಿರುವ ವಿಲಿಯಂ ಕಿಮ್ ಕಾರ್ಯಸಾಧ್ಯತೆ ಬಗ್ಗೆ ವಿವರಿಸಿದ್ದು, “ಈ ಬಲೂನುಗಳಲ್ಲಿ ಹೀಲಿಯಂ ಬಳಸಲಾಗಿದೆ. ಇದು ಹಿಂಡೆನ್ಬರ್ಗ್ ಅಲ್ಲ, ನೀವು ಅದನ್ನು ಶೂಟ್ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.

ಮೇ 6, 1937ರಂದು ಸಂಭವಿಸಿದ ಹಿಂಡನ್‌ಬರ್ಗ್ ವಾಯುನೌಕೆ ದುರಂತ ಇತಿಹಾಸ ಪ್ರಸಿದ್ಧವಾಗಿದೆ. ಅದರಲ್ಲಿ ಹೈಡ್ರೋಜನ್ ಅನಿಲ ಬಳಸಲಾಗಿತ್ತು. ಅದು ಸುಮಾರು 90 ಸೆಕೆಂಡುಗಳಲ್ಲಿ ಸುಟ್ಟುಹೋಗಿತ್ತು.

“ನೀವು ಅದಕ್ಕೆ ಪಂಚ್ ಮೂಲಕ ರಂಧ್ರ ಮಾಡಿದರೆ, ಅದು ತುಂಬಾ ನಿಧಾನವಾಗಿ ಸೋರಿಕೆಯಾಗುತ್ತದೆ” ಎಂದಿದ್ದಾರೆ.

1998ರಲ್ಲಿ ಕೆನಡಾದ ವಾಯುಪಡೆಯು ಬೃಹದಾಕಾರದ ವಾಯುನೌಕೆಯನ್ನು ಹೊಡೆದುರುಳಿಸಲು ಎಫ್-18 ಫೈಟರ್ ಜೆಟ್‌ಗಳನ್ನು ಕಳುಹಿಸಿತ್ತು ಎಂದು ಕಿಮ್ ನೆನಪಿಸಿಕೊಂಡಿದ್ದಾರೆ.

“ಅವರು ಅದರೊಳಗೆ ಸಾವಿರದಷ್ಟು 20-ಮಿಲಿಮೀಟರ್ ಫಿರಂಗಿ ಸುತ್ತುಗಳನ್ನು ಹಾರಿಸಿದರು. ಅದು ಅಂತಿಮವಾಗಿ ಕೆಳಗೆ ಬೀಳಲು ಇನ್ನೂ ಆರು ದಿನಗಳನ್ನು ತೆಗೆದುಕೊಂಡಿತು. ನೀವು ಅವರ ಮೇಲೆ ಗುಂಡು ಹಾರಿಸಿದಾಗ ಇವು ಸ್ಫೋಟಗೊಳ್ಳುವ ವಸ್ತುಗಳಾಗಿರುವುದಿಲ್ಲ” ಎಂದಿದ್ದಾರೆ.

ಹಿಂಡನ್‌ಬರ್ಗ್ ದುರಂತದ ಬಗ್ಗೆ ಕನ್ನಡದ ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆಯವರು ಇತ್ತೀಚೆಗೆ ವಿವರಿಸಿದ್ದು, “ಹೈಡ್ರೊಜನ್‌ (ಜಲಜನಕ) ಇಡೀ ವಿಶ್ವದಲ್ಲೇ ಅತ್ಯಂತ ದಹನಶೀಲ ಅನಿಲ. ತುಸು ಕಿಡಿ ಹೊಮ್ಮಿದರೂ ಸಾಕು ಢಮಾರೆಂದು ಸ್ಫೋಟವಾಗಿ ಅನಿಲ ಉರಿಯುತ್ತದೆ. ಇಂಥ ಬಲೂನಿನಲ್ಲಿ ಸವಾರಿ ಮಾಡಿ, ಅದು ಸ್ಫೋಟವಾಗಿ ಅದಾಗಲೇ ಅನೇಕರು ಪ್ರಾಣ ಕಳಕೊಂಡಿದ್ದರು. ಆದರೆ ಹಿಂಡನ್‌ಬರ್ಗ್‌ ವಿಮಾನ ಎಂದರೆ (ಟೈಟಾನಿಕ್‌ ಥರಾ) ಅತ್ಯಂತ ಮಜಬೂತಾದ, ಅತ್ಯಂತ ಸುಭದ್ರ ವಿಮಾನಗಳೆಂಬ ಪ್ರತೀತಿ ಇತ್ತು” ಎಂದು ವಿವರಿಸಿದ್ದಾರೆ.

(ಹಿಂಡನ್‌ಬರ್ಗ್ ದುರಂತದ ಬಗ್ಗೆ ನಾಗೇಶ್‌ ಹೆಗಡೆಯವರು ಬರೆದಿರುವ ಲೇಖನವನ್ನು ಮೇಲಿನ ಫೇಸ್‌ಬುಕ್‌ ಲಿಂಕ್‌ ಕ್ಲಿಕ್‌ ಮಾಡಿ ಓದಬಹುದು.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...