Homeಮುಖಪುಟಅಮೆರಿಕಕ್ಕೆ ಹಾರಿದ ಚೀನಿ ಬಲೂನ್‌: ‘ಇದು ಹಿಂಡನ್‌ಬರ್ಗ್ ಅಲ್ಲ’ ಎಂದ ತಜ್ಞರು

ಅಮೆರಿಕಕ್ಕೆ ಹಾರಿದ ಚೀನಿ ಬಲೂನ್‌: ‘ಇದು ಹಿಂಡನ್‌ಬರ್ಗ್ ಅಲ್ಲ’ ಎಂದ ತಜ್ಞರು

- Advertisement -
- Advertisement -

ಶಂಕಿತ ಚೀನೀ ಕಣ್ಗಾವಲು ಬಲೂನ್ ಈಗ ಸುದ್ದಿಯಲ್ಲಿದೆ. ಸುರಕ್ಷತೆಯ ನಿಟ್ಟಿನಲ್ಲಿ ಅದನ್ನು ಹೊಡೆದುರುಳಿಸಿಲ್ಲ ಎಂದು ಅಮೆರಿಕ ಹೇಳಿಕೊಂಡರೆ, ಮತ್ತೊಂದೆಡೆ ಅಮೆರಿಕದ ತಜ್ಞರು, “ಈ ಬಲೂನುಗಳು ಅದ್ಭುತವಾದ ಕಣ್ಗಾವಲು ವ್ಯವಸ್ಥೆಯಾಗಿದ್ದು, ಅವುಗಳನ್ನು ಶೂಟ್ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.

ವಾಷಿಂಗ್ಟನ್‌ನಲ್ಲಿನ ಮ್ಯಾರಥಾನ್ ಇನಿಶಿಯೇಟಿವ್ ಥಿಂಕ್ ಟ್ಯಾಂಕ್‌ನಲ್ಲಿ ಕಣ್ಗಾವಲು ಬಲೂನ್‌ಗಳ ಪರಿಣಿತರಾಗಿರುವ ವಿಲಿಯಂ ಕಿಮ್ ಪ್ರತಿಕ್ರಿಯಿಸಿದ್ದು, “ಬೀಜಿಂಗ್ ಹೇಳಿಕೊಂಡಂತೆ ಅಮೆರಿಕ ಗಡಿಯ ಹೊರಗಿನಿಂದ ದತ್ತಾಂಶಗಳನ್ನು ಸಂಗ್ರಹಿಸಲು ಚೀನಾದ ಬಲೂನ್ ಉದ್ದೇಶಿಸಿರಬಹುದು, ಆದರೆ ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯೂ ಇದೆ” ಎಂದಿದ್ದಾರೆ.

ಮೂರು ಬಸ್‌ಗಳಷ್ಟು ದೊಡ್ಡದಾದ ಬಿಳಿಯ ಗೋಳಾಕಾರದ ಬಲೂನ್‌ಗಳು ಅಮೆರಿಕದ ಮೇಲೆ ಹಾರಾಡುತ್ತಿವೆ. ಇದು ರಾಜತಾಂತ್ರಿಕ ಚರ್ಚೆಗೆ ಕಾರಣವಾಗಿದೆ. ಪರಮಾಣು ಸೂಕ್ಷ್ಮಪ್ರದೇಶವಾಗಿರುವ ಮೊಂಟಾನಾದಲ್ಲಿ ಈ ಬಲೂನ್‌ಗಳು ಹಾರಾಡುತ್ತಿವೆ ಎಂದು ಪೆಂಟಗನ್ ಹೇಳಿದೆ.

ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಬ್ರಿಗ್ ಜನರಲ್ ಪ್ಯಾಟ್ ರೈಡರ್ ಪ್ರತಿಕ್ರಿಯಿಸಿದ್ದು, “ಸೂಕ್ಷ್ಮ ಮಾಹಿತಿಗಳ ಸಂಗ್ರಹಣೆಯನ್ನು ತಪ್ಪಿಸಲು ಯುಎಸ್ ತಕ್ಷಣವೇ ಕಾರ್ಯನಿರ್ವಹಿಸಿದೆ” ಎಂದು  ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಜಾಗೃತವಾಗಿದ್ದು ಬಲೂನ್ ಅನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಎಂದು ರೈಡರ್ ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ಮುಂದಿನ ವಾರ ನಡೆಯಬೇಕಿದ್ದ ಬೀಜಿಂಗ್ ಪ್ರವಾಸವನ್ನು ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ರದ್ದುಗೊಳಿಸಿದ್ದಾರೆ.

ಹವಾಮಾನ ಸಂಶೋಧನಾ ಬಲೂನ್‌: ಚೀನಾ

ಅಮೆರಿಕಾಕ್ಕೆ ಬಲೂನ್ ಹಾರಿದ್ದರ ಕುರಿತು ಚೀನಾ ಸ್ಪಷ್ಟನೆ ನೀಡಿದ್ದು, “ಹವಾಮಾನ ಸಂಶೋಧನೆಗಾಗಿ ಬಳಸಲಾದ ನಾಗರಿಕ ವಾಯುನೌಕೆ ಇದಾಗಿದೆ. ಗಾಳಿಯ ರಭಸದಿಂದಾಗಿ ಹಾದಿ ತಪ್ಪಿ ಅಮೆರಿಕ ತಲುಪಿದೆ” ಎಂದು ತಿಳಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ “ವಾಯು ನೌಕೆಯು ಅನಪೇಕ್ಷಿತವಾಗಿ ಅಮೆರಿಕಕ್ಕೆ ಪ್ರವೇಶಿಸಿರುವುದಕ್ಕೆ ವಿಷಾದಿಸುತ್ತೇವೆ” ಎಂದಿದೆ.

ಅಮೆರಿಕ ಏಕೆ ಇನ್ನು ಬಲೂನ್‌ ಹೊಡೆದು ಹಾಕಿಲ್ಲ?

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆರಂಭದಲ್ಲಿ ಬಲೂನ್ ಅನ್ನು ಒಡೆದು ಹಾಕಲು ಬಯಸಿದ್ದರು. ಆದರೆ ಅಲ್ಲಿನ ಸ್ಥಳೀಯರ ಸುರಕ್ಷತೆಗಳ ಕುರಿತು ಉನ್ನತ ರಕ್ಷಣಾ ಅಧಿಕಾರಿಗಳು ಬಿಡೆನ್‌ ಅವರಿಗೆ ಸಲಹೆ ನೀಡಿದ್ದರಿಂದ ಕ್ರಮ ಜರುಗಿಸಿಲ್ಲ ಎಂದು ಹಿರಿಯ ಆಡಳಿತ ಅಧಿಕಾರಿಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಕಣ್ಗಾವಲು ಬಲೂನ್‌ಗಳ ಪರಿಣಿತರಾಗಿರುವ ವಿಲಿಯಂ ಕಿಮ್ ಕಾರ್ಯಸಾಧ್ಯತೆ ಬಗ್ಗೆ ವಿವರಿಸಿದ್ದು, “ಈ ಬಲೂನುಗಳಲ್ಲಿ ಹೀಲಿಯಂ ಬಳಸಲಾಗಿದೆ. ಇದು ಹಿಂಡೆನ್ಬರ್ಗ್ ಅಲ್ಲ, ನೀವು ಅದನ್ನು ಶೂಟ್ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.

ಮೇ 6, 1937ರಂದು ಸಂಭವಿಸಿದ ಹಿಂಡನ್‌ಬರ್ಗ್ ವಾಯುನೌಕೆ ದುರಂತ ಇತಿಹಾಸ ಪ್ರಸಿದ್ಧವಾಗಿದೆ. ಅದರಲ್ಲಿ ಹೈಡ್ರೋಜನ್ ಅನಿಲ ಬಳಸಲಾಗಿತ್ತು. ಅದು ಸುಮಾರು 90 ಸೆಕೆಂಡುಗಳಲ್ಲಿ ಸುಟ್ಟುಹೋಗಿತ್ತು.

“ನೀವು ಅದಕ್ಕೆ ಪಂಚ್ ಮೂಲಕ ರಂಧ್ರ ಮಾಡಿದರೆ, ಅದು ತುಂಬಾ ನಿಧಾನವಾಗಿ ಸೋರಿಕೆಯಾಗುತ್ತದೆ” ಎಂದಿದ್ದಾರೆ.

1998ರಲ್ಲಿ ಕೆನಡಾದ ವಾಯುಪಡೆಯು ಬೃಹದಾಕಾರದ ವಾಯುನೌಕೆಯನ್ನು ಹೊಡೆದುರುಳಿಸಲು ಎಫ್-18 ಫೈಟರ್ ಜೆಟ್‌ಗಳನ್ನು ಕಳುಹಿಸಿತ್ತು ಎಂದು ಕಿಮ್ ನೆನಪಿಸಿಕೊಂಡಿದ್ದಾರೆ.

“ಅವರು ಅದರೊಳಗೆ ಸಾವಿರದಷ್ಟು 20-ಮಿಲಿಮೀಟರ್ ಫಿರಂಗಿ ಸುತ್ತುಗಳನ್ನು ಹಾರಿಸಿದರು. ಅದು ಅಂತಿಮವಾಗಿ ಕೆಳಗೆ ಬೀಳಲು ಇನ್ನೂ ಆರು ದಿನಗಳನ್ನು ತೆಗೆದುಕೊಂಡಿತು. ನೀವು ಅವರ ಮೇಲೆ ಗುಂಡು ಹಾರಿಸಿದಾಗ ಇವು ಸ್ಫೋಟಗೊಳ್ಳುವ ವಸ್ತುಗಳಾಗಿರುವುದಿಲ್ಲ” ಎಂದಿದ್ದಾರೆ.

ಹಿಂಡನ್‌ಬರ್ಗ್ ದುರಂತದ ಬಗ್ಗೆ ಕನ್ನಡದ ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆಯವರು ಇತ್ತೀಚೆಗೆ ವಿವರಿಸಿದ್ದು, “ಹೈಡ್ರೊಜನ್‌ (ಜಲಜನಕ) ಇಡೀ ವಿಶ್ವದಲ್ಲೇ ಅತ್ಯಂತ ದಹನಶೀಲ ಅನಿಲ. ತುಸು ಕಿಡಿ ಹೊಮ್ಮಿದರೂ ಸಾಕು ಢಮಾರೆಂದು ಸ್ಫೋಟವಾಗಿ ಅನಿಲ ಉರಿಯುತ್ತದೆ. ಇಂಥ ಬಲೂನಿನಲ್ಲಿ ಸವಾರಿ ಮಾಡಿ, ಅದು ಸ್ಫೋಟವಾಗಿ ಅದಾಗಲೇ ಅನೇಕರು ಪ್ರಾಣ ಕಳಕೊಂಡಿದ್ದರು. ಆದರೆ ಹಿಂಡನ್‌ಬರ್ಗ್‌ ವಿಮಾನ ಎಂದರೆ (ಟೈಟಾನಿಕ್‌ ಥರಾ) ಅತ್ಯಂತ ಮಜಬೂತಾದ, ಅತ್ಯಂತ ಸುಭದ್ರ ವಿಮಾನಗಳೆಂಬ ಪ್ರತೀತಿ ಇತ್ತು” ಎಂದು ವಿವರಿಸಿದ್ದಾರೆ.

(ಹಿಂಡನ್‌ಬರ್ಗ್ ದುರಂತದ ಬಗ್ಗೆ ನಾಗೇಶ್‌ ಹೆಗಡೆಯವರು ಬರೆದಿರುವ ಲೇಖನವನ್ನು ಮೇಲಿನ ಫೇಸ್‌ಬುಕ್‌ ಲಿಂಕ್‌ ಕ್ಲಿಕ್‌ ಮಾಡಿ ಓದಬಹುದು.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...