Homeಮುಖಪುಟಅಮೆರಿಕಕ್ಕೆ ಹಾರಿದ ಚೀನಿ ಬಲೂನ್‌: ‘ಇದು ಹಿಂಡನ್‌ಬರ್ಗ್ ಅಲ್ಲ’ ಎಂದ ತಜ್ಞರು

ಅಮೆರಿಕಕ್ಕೆ ಹಾರಿದ ಚೀನಿ ಬಲೂನ್‌: ‘ಇದು ಹಿಂಡನ್‌ಬರ್ಗ್ ಅಲ್ಲ’ ಎಂದ ತಜ್ಞರು

- Advertisement -
- Advertisement -

ಶಂಕಿತ ಚೀನೀ ಕಣ್ಗಾವಲು ಬಲೂನ್ ಈಗ ಸುದ್ದಿಯಲ್ಲಿದೆ. ಸುರಕ್ಷತೆಯ ನಿಟ್ಟಿನಲ್ಲಿ ಅದನ್ನು ಹೊಡೆದುರುಳಿಸಿಲ್ಲ ಎಂದು ಅಮೆರಿಕ ಹೇಳಿಕೊಂಡರೆ, ಮತ್ತೊಂದೆಡೆ ಅಮೆರಿಕದ ತಜ್ಞರು, “ಈ ಬಲೂನುಗಳು ಅದ್ಭುತವಾದ ಕಣ್ಗಾವಲು ವ್ಯವಸ್ಥೆಯಾಗಿದ್ದು, ಅವುಗಳನ್ನು ಶೂಟ್ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.

ವಾಷಿಂಗ್ಟನ್‌ನಲ್ಲಿನ ಮ್ಯಾರಥಾನ್ ಇನಿಶಿಯೇಟಿವ್ ಥಿಂಕ್ ಟ್ಯಾಂಕ್‌ನಲ್ಲಿ ಕಣ್ಗಾವಲು ಬಲೂನ್‌ಗಳ ಪರಿಣಿತರಾಗಿರುವ ವಿಲಿಯಂ ಕಿಮ್ ಪ್ರತಿಕ್ರಿಯಿಸಿದ್ದು, “ಬೀಜಿಂಗ್ ಹೇಳಿಕೊಂಡಂತೆ ಅಮೆರಿಕ ಗಡಿಯ ಹೊರಗಿನಿಂದ ದತ್ತಾಂಶಗಳನ್ನು ಸಂಗ್ರಹಿಸಲು ಚೀನಾದ ಬಲೂನ್ ಉದ್ದೇಶಿಸಿರಬಹುದು, ಆದರೆ ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯೂ ಇದೆ” ಎಂದಿದ್ದಾರೆ.

ಮೂರು ಬಸ್‌ಗಳಷ್ಟು ದೊಡ್ಡದಾದ ಬಿಳಿಯ ಗೋಳಾಕಾರದ ಬಲೂನ್‌ಗಳು ಅಮೆರಿಕದ ಮೇಲೆ ಹಾರಾಡುತ್ತಿವೆ. ಇದು ರಾಜತಾಂತ್ರಿಕ ಚರ್ಚೆಗೆ ಕಾರಣವಾಗಿದೆ. ಪರಮಾಣು ಸೂಕ್ಷ್ಮಪ್ರದೇಶವಾಗಿರುವ ಮೊಂಟಾನಾದಲ್ಲಿ ಈ ಬಲೂನ್‌ಗಳು ಹಾರಾಡುತ್ತಿವೆ ಎಂದು ಪೆಂಟಗನ್ ಹೇಳಿದೆ.

ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಬ್ರಿಗ್ ಜನರಲ್ ಪ್ಯಾಟ್ ರೈಡರ್ ಪ್ರತಿಕ್ರಿಯಿಸಿದ್ದು, “ಸೂಕ್ಷ್ಮ ಮಾಹಿತಿಗಳ ಸಂಗ್ರಹಣೆಯನ್ನು ತಪ್ಪಿಸಲು ಯುಎಸ್ ತಕ್ಷಣವೇ ಕಾರ್ಯನಿರ್ವಹಿಸಿದೆ” ಎಂದು  ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಜಾಗೃತವಾಗಿದ್ದು ಬಲೂನ್ ಅನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಎಂದು ರೈಡರ್ ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ಮುಂದಿನ ವಾರ ನಡೆಯಬೇಕಿದ್ದ ಬೀಜಿಂಗ್ ಪ್ರವಾಸವನ್ನು ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ರದ್ದುಗೊಳಿಸಿದ್ದಾರೆ.

ಹವಾಮಾನ ಸಂಶೋಧನಾ ಬಲೂನ್‌: ಚೀನಾ

ಅಮೆರಿಕಾಕ್ಕೆ ಬಲೂನ್ ಹಾರಿದ್ದರ ಕುರಿತು ಚೀನಾ ಸ್ಪಷ್ಟನೆ ನೀಡಿದ್ದು, “ಹವಾಮಾನ ಸಂಶೋಧನೆಗಾಗಿ ಬಳಸಲಾದ ನಾಗರಿಕ ವಾಯುನೌಕೆ ಇದಾಗಿದೆ. ಗಾಳಿಯ ರಭಸದಿಂದಾಗಿ ಹಾದಿ ತಪ್ಪಿ ಅಮೆರಿಕ ತಲುಪಿದೆ” ಎಂದು ತಿಳಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ “ವಾಯು ನೌಕೆಯು ಅನಪೇಕ್ಷಿತವಾಗಿ ಅಮೆರಿಕಕ್ಕೆ ಪ್ರವೇಶಿಸಿರುವುದಕ್ಕೆ ವಿಷಾದಿಸುತ್ತೇವೆ” ಎಂದಿದೆ.

ಅಮೆರಿಕ ಏಕೆ ಇನ್ನು ಬಲೂನ್‌ ಹೊಡೆದು ಹಾಕಿಲ್ಲ?

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆರಂಭದಲ್ಲಿ ಬಲೂನ್ ಅನ್ನು ಒಡೆದು ಹಾಕಲು ಬಯಸಿದ್ದರು. ಆದರೆ ಅಲ್ಲಿನ ಸ್ಥಳೀಯರ ಸುರಕ್ಷತೆಗಳ ಕುರಿತು ಉನ್ನತ ರಕ್ಷಣಾ ಅಧಿಕಾರಿಗಳು ಬಿಡೆನ್‌ ಅವರಿಗೆ ಸಲಹೆ ನೀಡಿದ್ದರಿಂದ ಕ್ರಮ ಜರುಗಿಸಿಲ್ಲ ಎಂದು ಹಿರಿಯ ಆಡಳಿತ ಅಧಿಕಾರಿಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಕಣ್ಗಾವಲು ಬಲೂನ್‌ಗಳ ಪರಿಣಿತರಾಗಿರುವ ವಿಲಿಯಂ ಕಿಮ್ ಕಾರ್ಯಸಾಧ್ಯತೆ ಬಗ್ಗೆ ವಿವರಿಸಿದ್ದು, “ಈ ಬಲೂನುಗಳಲ್ಲಿ ಹೀಲಿಯಂ ಬಳಸಲಾಗಿದೆ. ಇದು ಹಿಂಡೆನ್ಬರ್ಗ್ ಅಲ್ಲ, ನೀವು ಅದನ್ನು ಶೂಟ್ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.

ಮೇ 6, 1937ರಂದು ಸಂಭವಿಸಿದ ಹಿಂಡನ್‌ಬರ್ಗ್ ವಾಯುನೌಕೆ ದುರಂತ ಇತಿಹಾಸ ಪ್ರಸಿದ್ಧವಾಗಿದೆ. ಅದರಲ್ಲಿ ಹೈಡ್ರೋಜನ್ ಅನಿಲ ಬಳಸಲಾಗಿತ್ತು. ಅದು ಸುಮಾರು 90 ಸೆಕೆಂಡುಗಳಲ್ಲಿ ಸುಟ್ಟುಹೋಗಿತ್ತು.

“ನೀವು ಅದಕ್ಕೆ ಪಂಚ್ ಮೂಲಕ ರಂಧ್ರ ಮಾಡಿದರೆ, ಅದು ತುಂಬಾ ನಿಧಾನವಾಗಿ ಸೋರಿಕೆಯಾಗುತ್ತದೆ” ಎಂದಿದ್ದಾರೆ.

1998ರಲ್ಲಿ ಕೆನಡಾದ ವಾಯುಪಡೆಯು ಬೃಹದಾಕಾರದ ವಾಯುನೌಕೆಯನ್ನು ಹೊಡೆದುರುಳಿಸಲು ಎಫ್-18 ಫೈಟರ್ ಜೆಟ್‌ಗಳನ್ನು ಕಳುಹಿಸಿತ್ತು ಎಂದು ಕಿಮ್ ನೆನಪಿಸಿಕೊಂಡಿದ್ದಾರೆ.

“ಅವರು ಅದರೊಳಗೆ ಸಾವಿರದಷ್ಟು 20-ಮಿಲಿಮೀಟರ್ ಫಿರಂಗಿ ಸುತ್ತುಗಳನ್ನು ಹಾರಿಸಿದರು. ಅದು ಅಂತಿಮವಾಗಿ ಕೆಳಗೆ ಬೀಳಲು ಇನ್ನೂ ಆರು ದಿನಗಳನ್ನು ತೆಗೆದುಕೊಂಡಿತು. ನೀವು ಅವರ ಮೇಲೆ ಗುಂಡು ಹಾರಿಸಿದಾಗ ಇವು ಸ್ಫೋಟಗೊಳ್ಳುವ ವಸ್ತುಗಳಾಗಿರುವುದಿಲ್ಲ” ಎಂದಿದ್ದಾರೆ.

ಹಿಂಡನ್‌ಬರ್ಗ್ ದುರಂತದ ಬಗ್ಗೆ ಕನ್ನಡದ ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆಯವರು ಇತ್ತೀಚೆಗೆ ವಿವರಿಸಿದ್ದು, “ಹೈಡ್ರೊಜನ್‌ (ಜಲಜನಕ) ಇಡೀ ವಿಶ್ವದಲ್ಲೇ ಅತ್ಯಂತ ದಹನಶೀಲ ಅನಿಲ. ತುಸು ಕಿಡಿ ಹೊಮ್ಮಿದರೂ ಸಾಕು ಢಮಾರೆಂದು ಸ್ಫೋಟವಾಗಿ ಅನಿಲ ಉರಿಯುತ್ತದೆ. ಇಂಥ ಬಲೂನಿನಲ್ಲಿ ಸವಾರಿ ಮಾಡಿ, ಅದು ಸ್ಫೋಟವಾಗಿ ಅದಾಗಲೇ ಅನೇಕರು ಪ್ರಾಣ ಕಳಕೊಂಡಿದ್ದರು. ಆದರೆ ಹಿಂಡನ್‌ಬರ್ಗ್‌ ವಿಮಾನ ಎಂದರೆ (ಟೈಟಾನಿಕ್‌ ಥರಾ) ಅತ್ಯಂತ ಮಜಬೂತಾದ, ಅತ್ಯಂತ ಸುಭದ್ರ ವಿಮಾನಗಳೆಂಬ ಪ್ರತೀತಿ ಇತ್ತು” ಎಂದು ವಿವರಿಸಿದ್ದಾರೆ.

(ಹಿಂಡನ್‌ಬರ್ಗ್ ದುರಂತದ ಬಗ್ಗೆ ನಾಗೇಶ್‌ ಹೆಗಡೆಯವರು ಬರೆದಿರುವ ಲೇಖನವನ್ನು ಮೇಲಿನ ಫೇಸ್‌ಬುಕ್‌ ಲಿಂಕ್‌ ಕ್ಲಿಕ್‌ ಮಾಡಿ ಓದಬಹುದು.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...