Homeಮುಖಪುಟಸಿನೆಮಾ ಮತ್ತು ಸಂದೇಶ: ‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು' ಎಂದರೇನು?

ಸಿನೆಮಾ ಮತ್ತು ಸಂದೇಶ: ‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು’ ಎಂದರೇನು?

50ರ, 60ರ ಅಥವಾ 70ರ ದಶಕದಲ್ಲಿ ಒಂದು ಸಂದೇಶವನ್ನಿಟ್ಟುಕೊಂಡ ಚಿತ್ರಗಳನ್ನು ಇಂದು ವಾಟ್ಸ್ಯಾಪ್, ಇನ್‍ಸ್ಟಾಗ್ರಾಮ್‍ಗಳ ಯುಗದಲ್ಲಿ ಅನುಕರಿಸಲಾಗುವುದಿಲ್ಲ.

- Advertisement -
- Advertisement -

‘ಒಂದೊಳ್ಳೇ ಮೆಸೇಜ್ ಇರೋ ಸಿನೆಮಾ ಮಾಡಬೇಕು ಸರ್’

ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ನಂತರ ಅನೇಕ ಸಲ ಕೇಳಿದ್ದು. ಅಲ್ಲೀತನಕ ಇಂಥ ಮಾತನ್ನು ನಾನು ಕೇಳಿಯೇ ಇರಲಿಲ್ಲ.

‘ಸಮಾಜವನ್ನು ಬದಲಿಸಲಿಚ್ಛಿಸುವವರು ರಾಜಕೀಯಕ್ಕೆ ಹೋಗಲಿ, ಸಮಾಜ ಸೇವೆ ಮಾಡಲಿ, ಅವರಿಗೆ ಇಲ್ಲೇನೂ ಕೆಲಸವಿಲ್ಲ’ ಎನ್ನುವ ಅರ್ಥದಲ್ಲಿ ಡೇವಿಡ್ ಮ್ಯಾಮೆಟ್ ತಮ್ಮ ಸಿನೆಮಾ ನಿರ್ದೇಶನದ ಪುಸ್ತಕದಲ್ಲಿ ಬರೆದಿದ್ದರು. ಅಮೇರಿಕದ ಇತಿಹಾಸವನ್ನು ಹಾಲಿವುಡ್ ಪೂರ್ವ ಮತ್ತು ಹಾಲಿವುಡ್ ನಂತರ ಎಂದು ವಿಂಗಡಿಸಬಹುದು, ಅಷ್ಟು ಪರಿಣಾಮ ಬೀರಿದೆ ಹಾಲಿವುಡ್ ಸಮಾಜದ ಮೇಲೆ ಎಂದು ಕೆಲವರು ಡೇವಿಡ್ ಮ್ಯಾಮೆಟ್ ಅವರ ಈ ಮೇಲಿನ ವಾದವನ್ನು ತಿರಸ್ಕರಿಸುತ್ತಾರೆ.

ಕನ್ನಡದ ಮೇರುನಟ ಡಾ. ರಾಜ್‍ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರವನ್ನು ನೋಡಿ ಅನೇಕರು ತಮ್ಮ ಕೆಲಸ ಬಿಟ್ಟು ಹಳ್ಳಿಗೆ ಹೋದರಂತೆ. ಏನಿದು ಮೆಸೇಜ್? ಸಿನೆಮಾ ಒಂದು ಸಂದೇಶವನ್ನು ಕೊಡಬಲ್ಲದೇ? ಮನರಂಜನೆಯೇ ಅದರ ಪ್ರಮುಖ ಕರ್ತವ್ಯವಲ್ಲವೇ? ಸಮಾಜಕ್ಕೆ ಮೆಸೇಜ್ ಕೊಡಲು ನಾವ್ಯಾರು? ಏನಕ್ಕೆ ಕೊಡಬೇಕು ಮೆಸೇಜ್?

ರಾಜ್‍ಕುಮಾರ್ ಹಿರಾನಿ, ತಮ್ಮ ಚಿತ್ರದ ಥೀಮ್‍ಗಳ ಬಗ್ಗೆ ತುಂಬಾ ಗಮನ ಕೊಡುತ್ತಾರೆ. ಅವರ ಮೊದಲ ಚಿತ್ರ ಮುನ್ನಾಭಾಯಿ ಎಮ್.ಬಿ.ಬಿ.ಎಸ್ ಮಾಡುವ ಮುನ್ನ ಅವರ ಮನಸ್ಸಿನಲ್ಲಿದ್ದದ್ದು ಒಂದೇ ವಿಷಯ; ವೈದ್ಯಕೀಯ ಕ್ಷೇತ್ರದ ಬಗ್ಗೆ ಒಂದು ಸಿನೆಮಾ ಮಾಡಬೇಕು ಎನ್ನುವುದು. ಈ ಕಾಲದ ವೈದ್ಯಕೀಯ ಕ್ಷೇತ್ರದ ಬಗ್ಗೆ ಅವರಿಗೆ ತುಂಬಾ ಸಿಟ್ಟೂ ಇತ್ತು. ಹಲವಾರು ವರ್ಷಗಳ ಕಾಲ ಚಿತ್ರಕತೆಯ ಮೇಲೆ ಕೆಲಸ ಮಾಡಿದಾಗ ಮೂಡಿಬಂದಿದ್ದು ಮುನ್ನಾಭಾಯಿ ಎಮ್.ಬಿ.ಬಿ.ಎಸ್. ಧರ್ಮದ ಬಗ್ಗೆ ಸಿನೆಮಾ ಮಾಡಲು ಹೊರಟಾಗ ಮೂಡಿಬಂದಿದ್ದು ಪೀಕೆ. ಹಿರಾನಿಯವರ ಲಗೇ ರಹೋ ಮುನ್ನಾಭಾಯಿ ಸಿನೆಮಾ ನೋಡಿದ ನಂತರ ಅನೇಕರು ಗಾಂಧಿಗಿರಿ ಮಾಡಲು ಶುರು ಮಾಡಿದರು.

Photo Courtesy: The Indian express

2016 ರಲ್ಲಿ ಅತ್ಯುತ್ತಮ ಚಿತ್ರವೆಂದು ಆಸ್ಕರ್ ಪ್ರಶಸ್ತಿ ಪಡೆದ ಸಿನೆಮಾ ‘ಸ್ಪಾಟ್‍ಲೈಟ್’. ಅಮೇರಿಕದ ಬೋಸ್ಟನ್ ಪ್ರದೇಶದಲ್ಲಿ ಹಲವಾರು ರೋಮನ್ ಕ್ಯಾಥಲಿಕ್ ಪಾದ್ರಿಗಳಿಂದ ಆಗಿತ್ತು ಎನ್ನಲಾದ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ಈ ಘಟನೆಗಳನ್ನು ಬಯಲಿಗೆಳೆದ ತನಿಖಾ ಪತ್ರಿಕೋದ್ಯಮದ ಕಥೆಯನ್ನು ಸ್ಪಾಟ್‍ಲೈಟ್ ಚಿತ್ರ ಹೇಳಿತು. ಈ ಚಿತ್ರದಿಂದ ಕ್ಯಾಥೋಲಿಕ್ ಚರ್ಚ್ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು.  ಆದರೆ ಸ್ಪಾಟ್‍ಲೈಟ್ ಚಿತ್ರ ಮಕ್ಕಳ ಮೇಲೆ ದೌರ್ಜನ್ಯ ಮಾಡಬಾರದು ಎನ್ನುವ ಸಂದೇಶ ನೀಡಲು ಈ ಚಿತ್ರವನ್ನು ಮಾಡಿದರೇ? ಅಥವಾ ಪತ್ರಕರ್ತರಿಗೆ ಸಂದೇಶ ನೀಡಲು ಈ ಚಿತ್ರವನ್ನು ಮಾಡಿದರೇ? ಉತ್ತರ ನಾವೆಂದುಕೊಂಡ ಹಾಗೆ. ಆದರೆ ಒಂದು ಮಾತ್ರ ಸತ್ಯ. ಈ ಕಥನಕಾರರು ಮಾಡಲು ಪ್ರಯತ್ನಿಸಿದ್ದು ಆಯಾ ಸಮಸ್ಯೆಯ ಆಳವನ್ನು ಜಾಲಾಡುವುದು. ಹೀಗೇಕೆ ಆಯಿತು ಎನ್ನುವುದಕ್ಕೆ ಉತ್ತರಗಳನ್ನು ಹುಡುಕುವುದು, ಲೈಂಗಿಕ ಕಿರುಕುಳ ಮಾಡಿದ ಪಾದ್ರಿಗಳು ಮಾತ್ರ ತಪ್ಪಿತಸ್ಥರಾ ಅಥವಾ ಇತರರೂ ಇದಕ್ಕೆ ಕಾರಣೀಭೂತರಾ ಎನ್ನುವುದಕ್ಕೆ ಉತ್ತರ ಹುಡುಕುವುದು ಇವರ ಉದ್ದೇಶವಾಗಿತ್ತು. ಕೊನೆಯ ಪ್ರಶ್ನೆಗೆ ಎಷ್ಟು ಆಳವಾಗಿ ಉತ್ತರ ಹುಡುಕುತ್ತಾರೆಂದರೆ, ತಾವೂ, ಈ ಹಗರಣವನ್ನು ಅಂದು ಬಯಲಿಗೆಳಯಲು ಪ್ರಯತ್ನಿಸುತ್ತಿದ್ದ ಪತ್ರಕರ್ತರೂ ಇದಕ್ಕೆ ಒಂದು ರೀತಿಯಲ್ಲಿ ಕಾರಣವಾಗಿದ್ದರು ಎನ್ನುವ ಉತ್ತರವೂ ಸಿಗುತ್ತದೆ.

ಸಮಾಜವನ್ನು ಪ್ರಭಾವಿಸಿದ ಇನ್ನೂ ಕೆಲವು ಚಿತ್ರಗಳ ಬಗ್ಗೆ ನೋಡುವ.

  • ವಾಟರ್‌ಗೇಟ್ ಹಗರಣವನ್ನು ಬಯಲಿಗೆಳೆದ ಘಟನೆಯ ಬಗ್ಗೆ ಆಲ್ ದಿ ಪ್ರೆಸಿಡೆಂಟ್’ಸ್ ಮೆನ್ ಎನ್ನುವ ಚಿತ್ರ ಬಂದ ಮೇಲೆ ಅನೇಕ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡರಂತೆ.
  • ಜಾಸ್ (Jaws) ಎನ್ನುವ ಚಿತ್ರ (ಸಮುದ್ರ ತೀರದಲ್ಲಿ ತಿಮಿಂಗಿಲಗಳ ದಾಳಿಯ ಬಗ್ಗೆಯ ಚಿತ್ರ) ಬಂದ ಮೇಲೆ ಸಮುದ್ರತೀರಕ್ಕೆ ಹೋಗುವ ಪ್ರವಾಸಿಗಳ ಸಂಖ್ಯೆಯಲ್ಲಿ ಇಳಿಮುಖವಾಯಿತಂತೆ.
  • ದಿ ಫೈಟ್ ಕ್ಲಬ್ ಚಿತ್ರ ಬಂದ ನಂತರ ಅಮೇರಿಕದಲ್ಲಿ (ಇತರೆಡೆಯಲ್ಲೂ) ನಿಜವಾದ ಫೈಟ್ ಕ್ಲಬ್‍ಗಳು ಶುರುವಾದವಂತೆ.
  • 2004ರ ದಿ ಡೇ ಆಫ್ಟರ್ ಟುಮಾರೋ ಚಿತ್ರ ಬಂದ ನಂತರ ಜನರಲ್ಲಿ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಹೆಚ್ಚಿನ ಜಾಗರೂಕತೆ ಮೂಡಿಸಿತಂತೆ.

ಹೀಗೆ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇವೆ. ಈ ಎಲ್ಲಾ ಚಿತ್ರಗಳ ಕರ್ತೃರು ಆಯಾ ಸಮಸ್ಯೆಯನ್ನು ಆಳವಾಗಿ ಅರ್ಥೈಸಿಕೊಳ್ಳಲು ಮತ್ತು ಆಯಾ ವಿಷಯಗಳ ಬಗ್ಗೆ ಹುಡುಕಾಟ ಮಾಡಲು ಪ್ರಯತ್ನಿಸುತ್ತಾರೆ. ಅಲೆಕ್ಸಾಂಡರ್ ಪೇನ್‍ನಂತಹ ನಿರ್ದೇಶಕರು ಮನುಷ್ಯನ ಸೋಲು, ಸಾರ್ಥಕತೆಯನ್ನು ಅರ್ಥೈಸಿಕೊಳ್ಳುವ ಹುಡುಕಾಟ ಮಾಡಿದರೆ, ಇನ್ನೂ ಕೆಲವರು ಸಮಾಜಕ್ಕೆ ಕಾಡುವ ಸಮಸ್ಯೆಗಳನ್ನು ತಮ್ಮ ಚಿತ್ರಗಳ ಮೂಲಕ ಕೂಲಂಕಷವಾಗಿ ಪರಿಶೀಲಿಸುವ ಪ್ರಯತ್ನ ಮಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇವರೆಲ್ಲರಿಗೂ ಒಂದು ಕಥೆಯನ್ನು ಹೇಳುವುದು ಮೂಲ ಉದ್ದೇಶವಾಗಿರುತ್ತದೆ.

ಇನ್ನು ಅನೇಕ ಚಿತ್ರಗಳನ್ನು ನೋಡಿದ ನಂತರ, ಹಲವರಿಗೆ ತಮ್ಮ ವ್ಯಕ್ತಿತ್ವಗಳನ್ನು ಪರದೆಯ ಮೇಲೆ ನೋಡಿದಾಗ, ತಮ್ಮ ವ್ಯಕ್ತಿತ್ವ ದೋಷಗಳ ಬಗ್ಗೆ ಸಹಾನುಭೂತಿ ಹೊಂದಿರುವ ಕಥೆಗಳನ್ನು ನೋಡಿದಾ, ಆ ಕಥೆಗಳನ್ನು ಇತರರೂ ನೋಡುತ್ತಾರೆ ಎನ್ನುವ ಭಾವನೆಯಿಂದ ಆ ವ್ಯಕ್ತಿಗಳ ಮೇಲೆ ಎಂತಹ ಗಂಭೀರವಾದ ಸಕಾರಾತ್ಮಕ ಪರಿಣಾಮಗಳಾಗಬಹುದು ಎನ್ನುವುದನ್ನೂ ಪರಿಗಣಿಸಬೇಕು. ನನಗೆ ವೈಯಕ್ತಿಕವಾಗಿ ಇದು ಯಾವುದೇ ಕಥನಕಲೆಯ ಬಹುಮುಖ್ಯ ಉದ್ದೇಶ ಅನಿಸುತ್ತದೆ.

ಸಿನೆಮಾಗಳಿಂದ ಸಮಾಜದಲ್ಲಿ ಬದಲಾಗಿದ್ದು ಏನು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿದರೆ, ಪ್ರಮುಖವಾಗಿ ಸಮಾಜದ ಟ್ರೆಂಡ್‍ಗಳಲ್ಲಿ ಬದಲಾವಣೆ ಆಗಿದ್ದು ಕಾಣಿಸುತ್ತದೆ. ಹಲವಾರು ಸಿನೆಮಾಗಳು ಹಿಟ್ ಆದ ನಂತರ ನಮ್ಮ ಜನರ ಉಡುಪುಗಳಲ್ಲಿ ಬದಲಾವಣೆ ಬಂದಿತ್ತು; ಸೀರೆಯ ಪ್ಯಾಟರ್ನ್‍ಗಳು, ಮೇಕ್‍ಅಪ್ ಮಾಡಿಕೊಳ್ಳುವುದು, ಗಂಡಸರ ಪ್ಯಾಂಟು ಶರ್ಟುಗಳ ವಿನ್ಯಾಸದಲ್ಲಿ ಬದಲಾವಣೆಗಳು (ಹಿಪ್ಪಿ-ಕಟ್ ನೆನಪಿಸಿಕೊಳ್ಳಿ) ಕಂಡುಬಂದಿದ್ದಂತೂ ನಾವು ನೋಡಿದ್ದೇವೆ.

ಇದರೊಂದಿಗೆ ಇನ್ನೆರಡು ಅಂಶಗಳಿವೆ, ಮೊದಲನೆಯದು ನಮ್ಮ ಸಮಾಜದ ಮೇಲೆ ಪರಿಣಾಮ ಬೀರಿದ ಚಿತ್ರಗಳ ಬಂದ ಕಾಲಘಟ್ಟ. ಸುಮಾರು ಒಂದು ಶತಕದ ಹಿಂದೆ ಹುಟ್ಟಿಕೊಂಡ ಸಿನೆಮಾ ಕಲೆ, ಎಲ್ಲಕ್ಕಿಂತ ಪ್ರಭಾವಶಾಲಿಯಾದ ಮನರಂಜನೆಯ ಮಾಧ್ಯಮವಾಗಿದೆ. ನಮ್ಮ ದೇಶದಲ್ಲಿ ಸಾಕ್ಷರತೆಯ ದರ 50ರ ದಶಕದಲ್ಲಿ ಶೇ.20ಕ್ಕಿಂತಲೂ ಕಡಿಮೆಯಿತ್ತು ಎಂದರೆ ಆ ಕಾಲಘಟ್ಟ ಹೇಗಿತ್ತು ಎನ್ನುವುದನ್ನು ಊಹಿಸಲೂ ಅಸಾಧ್ಯ. ಅದರೊಂದಿಗೆ ಮನರಂಜನೆಯ ಮಾಧ್ಯಮಗಳೂ ವಿರಳವಾಗಿದ್ದವು. ಹಾಗಾಗಿ 50ರ, 60ರ ಅಥವಾ 70ರ ದಶಕದಲ್ಲಿ ಒಂದು ಸಂದೇಶವನ್ನಿಟ್ಟುಕೊಂಡ ಚಿತ್ರಗಳನ್ನು ಇಂದು ವಾಟ್ಸ್ಯಾಪ್, ಇನ್‍ಸ್ಟಾಗ್ರಾಮ್‍ಗಳ ಯುಗದಲ್ಲಿ ಅನುಕರಿಸಲಾಗುವುದಿಲ್ಲ.

ಆದರೂ ನಾವು ಮಾಡುವ ಚಿತ್ರಗಳು ಪರಿಣಾಮ ಬೀರಬಹುದು ಎನ್ನುವ ಆಶಾಭಾವನೆಯನ್ನು ಖಂಡಿತ ಹೊಂದಬಹುದು; ಅದಕ್ಕೆ ಅನುಕರಿಸಬೇಕಾದದ್ದು ಆ ಕರ್ತೃರ ಪರಿಶ್ರಮ, ಆಯಾ ಸಮಸ್ಯೆಗಳ ಆಳವಾದ ಅಧ್ಯಯನ ಅದರೊಂದಿಗೆ ಚಿತ್ರಕಥೆ ಮತ್ತು ಸಿನೆಮಾ ಮಾಡುವ ಕಲೆಯನ್ನು ಆಳವಾಗಿ ಅಭ್ಯಸಿಸಿ ಕರಗತ ಮಾಡಿಕೊಳ್ಳುವುದು. ನೀವು ನೀಡಬೇಕೆನ್ನುವ ಸಂದೇಶದ ಹಿಂದಿನ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿದ ತರುವಾಯ ಆ ಸಂದೇಶವೇ ಬದಲಾಗಬಹುದು. ಅಧ್ಯಯನದ ಆಳವೇ ಒಂದು ಸಂದೇಶವಾಗಬಹುದು. ಇಲ್ಲವಾದರೆ, ಹೋಗುವ ಸಂದೇಶ ಒಂದೇ- ‘ನನಗೆ ಸಿನೆಮಾ ಮಾಡಲು ಬರುವುದಿಲ್ಲ ಆದರೂ ಹೇಗೋ ಮಾಡಿದ್ದೀನಿ, ಈಗ ಅನುಭವಿಸಿ’.

  • ರಾಜಶೇಖರ್ ಅಕ್ಕಿ (ರಂಗನಿರ್ದೇಶಕರು ಹಾಗೂ ಸಾಮಾಜಿಕ ಕಾರ್ಯಕರ್ತರು)

ಇದನ್ನೂ ಓದಿ: ಸಂಘರ್ಷ ಮತ್ತು ಸಿನೆಮಾ, ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿ ಬರೆಯುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...