Homeನ್ಯಾಯ ಪಥಪೌರತ್ವ ವಸೂಲಿ - ನಾಝಿ ಜರ್ಮನಿಯಿಂದ ಕಲಿಯಬೇಕಾದುದು...

ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು…

- Advertisement -
- Advertisement -

ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ, ಪೌರತ್ವಕ್ಕೆ ಧರ್ಮವನ್ನು ಮಾನದಂಡವನ್ನಾಗಿಸುವ ಪ್ರಯತ್ನಕ್ಕೆ ಮುಂದಾಗಿರುವ ಬಹುಶಃ ಜಗತ್ತಿನ ಒಂದೇ ಒಂದು ರಾಷ್ಟ್ರವಾಗಿರಬಹುದು ಭಾರತ. ಇದು ನೆರೆಯ ಮೂರು ರಾಷ್ಟ್ರಗಳ ಅಭ್ಯರ್ಥಿಗಳಿಗೆ ಮಾತ್ರ ಬಾಧಕವಾಗಿರುವ ನಿಯಮವಾಗಿದೆ. ಇದೇ ಸಂದರ್ಭ, ದೇಶವ್ಯಾಪಿಯಾಗಿ ರಾಷ್ಟ್ರೀಯ ಪೌರತ್ವ ಕಾಯ್ದೆ ಎನ್ನುವ ಪೌರತ್ವ ನಿರ್ಣಯ ಪರಿಶೀಲನೆಯನ್ನು ಬಹುಬೇಗನೆ ಆರಂಭಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಪಾರ್ಲಿಮೆಂಟ್‍ನಲ್ಲಿ ಪ್ರಸ್ತಾವಿಸಿದ್ದೂ ಆಯಿತು. ಎಲ್ಲವನ್ನೂ ಒಂದೇ ದೃಷ್ಟಿಕೋನದಲ್ಲಿ ನೋಡಿದರೆ, ಈ ಆಜ್ಞಾಧಾರಕ ಪ್ರಚಾರ ಕೋಲಾಹಲವು ದೇಶದ ಮತೀಯ ಅಲ್ಪಸಂಖ್ಯಾತರ ಅತಿ ಅಪಾಯಕರವಾದ ಭವಿಷ್ಯದ ಕಡೆಗೆ ಬೊಟ್ಟು ಮಾಡುತ್ತದೆ ಎಂದು ತಿಳಿಯಬಹುದು.

1933ರಲ್ಲಿ ಜರ್ಮನಿಯಲ್ಲಿ ನಾಝಿಗಳು ಅಧಿಕಾರದ ಗದ್ದುಗೆ ಏರಿದಾಗ ಯಹೂದಿಗಳಿಗೇನಾಯಿತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಸೂಕ್ತವೆನಿಸುತ್ತದೆ. ಯಹೂದಿಯರ ವಿರುದ್ಧ ವಿವೇಚನೆಯನ್ನು ಸಾರುವ ಕಾನೂನು ತಿದ್ದುಪಡಿಗಳ ಮೂಲಕವಾಗಿತ್ತು ನಾಝಿ ಆಳ್ವಿಕೆಯ ಆರಂಭ ಘಟ್ಟ. ಭಾರತ 1930ರ ಮತ್ತು ನಲ್ವತ್ತರ ದಶಕಗಳ ಜರ್ಮನಿಯ ಹಾಗಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳಬಹುದು. ಆದರೆ ಯಹೂದಿಗಳನ್ನು ಸ್ಪಷ್ಟವಾಗಿ ಗುರಿಯಿಟ್ಟು, ಕೊನೆಗೆ ಉನ್ಮೂಲನೆಗೆ ವಿಧೇಯರಾಗುವಂತೆ ಮಾಡಿದ ಇತಿಹಾಸವನ್ನು ಸ್ಮರಿಸದೇ ಇರಲಾಗದು. ನಾಝಿಗಳ ಅಂದಿನ ಗುರಿ ಆರು ದಶಲಕ್ಷದಷ್ಟು ಯಹೂದಿಗಳಾಗಿದ್ದರು. ಕಾನೂನು ತಿದ್ದುಪಡಿಗೊಳಿಸುವ ಹಾಗೂ ಮುಂದುವರಿದ ಬೀದಿಕಾಳಗಗಳ ಮೂಲಕವಾಗಿತ್ತು ಅದರ ಪ್ರಾರಂಭ.

ನಾಝಿ ಜರ್ಮನಿಯಲ್ಲಿ ಏನಾಯಿತು?
ಆರ್ಯ ವಂಶದಿಂದ ಯಹೂದಿಗಳನ್ನು ಬೇರ್ಪಡಿಸಿ ಅವರ ಆರ್ಥಿಕ, ಸಾಮಾಜಿಕ, ರಾಜಕೀಯ ಹಕ್ಕುಗಳನ್ನು ಕೊನೆಗೊಳಿಸುವ ಉದ್ದೇಶದಿಂದ, ನಾಝಿ ಪಕ್ಷವು ಇಪ್ಪತ್ತೈದು ಕಾರ್ಯತಂತ್ರಗಳನ್ನು ರೂಪಿಸಿದ್ದು 1920 ರಲ್ಲಾಗಿತ್ತು. ಆಗಿನ್ನೂ ಅವರು ಅಧಿಕಾರದಲ್ಲಿರಲಿಲ್ಲ. 1933 ರಲ್ಲಿ ಅಧಿಕಾರದ ಗದ್ದುಗೆ ಏರಿದ ಕೂಡಲೇ ನಾಝಿಗಳು ತಮ್ಮ ಲಕ್ಷ್ಯ ಸಾಧನೆಗಾಗಿ ಯಹೂದಿಗಳನ್ನು ಒಂಟಿಯಾಗಿಸುವ ಕಾನೂನುಗಳು ಮತ್ತು ನಿಯಂತ್ರಣಗಳನ್ನು ಹೇರಲಾರಂಭಿಸಿದರು. ರಾಷ್ಟ್ರಮಟ್ಟದಿಂದ ಪ್ರಾಂತಗಳವರೆಗೂ ವಿವಿಧ ವಲಯಗಳಾಗಿ 2000 ಕ್ಕೂ ಹೆಚ್ಚು ಕಾನೂನು ತಿದ್ದುಪಡಿಗಳನ್ನು ಜಾರಿಗೊಳಿಸಿದರು. ಈ ಸೆಮಿಟಿಕ್ ವಿರೋಧಿ ನಿಯಮಗಳಲ್ಲಿ ಕೆಲವೊಂದನ್ನು ಇಲ್ಲಿ ಜೋಡಿಸುವ ಪ್ರಯತ್ನ ಮಾಡಲಾಗಿದೆ. (ಬ್ರಿಟಿಷ್ ಲೈಬ್ರರಿಯಿಂದ ಮತ್ತು ಇತರ ಮೂಲಗಳಿಂದ ಸಂಗ್ರಹಿಸಲಾಗಿದೆ)

1933: ಯಹೂದಿಗಳನ್ನು ಸರ್ಕಾರಿ ಸೇವೆಗಳು ಮತ್ತು ವಕೀಲ ಹುದ್ದೆಗಳಿಂದ ತಡೆಯುವುದು, ಸರಕಾರಿ ಶಾಲೆಗಳಲ್ಲಿ ಯಹೂದಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಮಿತಿಗೊಳಿಸುವುದು, ಸ್ಥಳೀಯ ಯಹೂದಿಗಳ ಮತ್ತು ಅನಪೇಕ್ಷಿತರ ಪೌರತ್ವವನ್ನು ತಡೆಹಿಡಿಯುವುದು, ಮಾಧ್ಯಮ ಸಂಸ್ಥೆಗಳಿಂದ ಅವರನ್ನು ದೂರ ಇಡುವುದು, ಮೃಗಬಲಿ ನಿಷೇಧ ಸೇರಿದಂತೆ ಹಲವು ಹೊಸ ಕಾನೂನುಗಳು ಬರತೊಡಗಿದವು.

1934: ಮೆಡಿಕಲ್, ಡೆಂಟಲ್, ಫಾರ್ಮಸಿ, ಕಾನೂನು ಸಂಬಂಧಪಟ್ಟಂತಹ ಪರೀಕ್ಷೆಗಳಿಂದ ಯಹೂದಿ ವಿದ್ಯಾರ್ಥಿಗಳನ್ನು ತಡೆಯಲಾಯಿತು. ಮುಂದೆ ಸೈನಿಕ ಸೇವೆಗೂ ಅವಕಾಶಗಳು ನೀಡದಂತೆ ನಿಯಮಗಳು ಬಂದವು.

1935: ಹಿಟ್ಲರ್‌ನ ನ್ಯೂರಂಬರ್ಗ್ ಕಾನೂನುಗಳು ಬಂದವು. ಯಹೂದಿಗಳಿಗೆ ಪೌರತ್ವ ಮತ್ತು ಮತದಾನದ ಹಕ್ಕನ್ನು ನಿಷೇಧಿಸುವುದರ ಜೊತೆಗೆ, ಜರ್ಮನ್ ಪ್ರಜೆ ಅಥವಾ ಜರ್ಮನಿಯರ ರಕ್ತ ಸಂಬಂಧಿಯಾಗಿ ಹುಟ್ಟಿದವರೊಂದಿಗೆ ವಿವಾಹ ಮತ್ತು ಲೈಂಗಿಕ ಸಂಬಂಧಗಳನ್ನೂ ನಿಷೇಧಿಸುವ ಕಾನೂನುಗಳಾಗಿತ್ತು ಅದು.

1935-36: ಪಾರ್ಕ್‍ಗಳು, ರೆಸ್ಟೋರೆಂಟ್‍ಗಳು ಹಾಗೂ ಸ್ವಿಮ್ಮಿಂಗ್ ಪೂಲ್‍ಗಳಲ್ಲಿ ಯಹೂದಿಗಳ ಪ್ರವೇಶವನ್ನು ತಡೆಯಲಾಯಿತು. ಇಲೆಕ್ಟ್ರಿಕಲ್ ಆಪ್ಟಿಕಲ್ ಉಪಕರಣಗಳು, ಸೈಕಲ್‍ಗಳು, ಟೈಪ್‍ರೈಟರ್‍ಗಳು, ರೆಕೋರ್ಡ್‍ಗಳಂತಹ ಯಾವುದೇ ವಸ್ತುಗಳನ್ನು ಉಪಯೋಗಿಸಬಾರದು. ಜರ್ಮನ್ ಶಾಲೆಗಳಲ್ಲೂ ಮತ್ತು ವಿಶ್ವವಿದ್ಯಾಲಯಗಳಲ್ಲಿ ಯಹೂದಿ ವಿದ್ಯಾರ್ಥಿಗಳನ್ನು ಹೊರದಬ್ಬಲಾಯಿತು. ಯಹೂದಿ ಅಧ್ಯಾಪಕರಿಗೆ ಸರ್ಕಾರಿ ಉದ್ಯೋಗ ನೀಡಲು ನಿರಾಕರಿಸಲಾಯಿತು.

1938 : ಯಹೂದಿಗಳಿಗೆ ಪ್ರತ್ಯೇಕ ಐಡೆಂಟಿಟಿ ಕಾರ್ಡುಗಳನ್ನು ನೀಡಲ್ಪಟ್ಟವು. ಚಿತ್ರಮಂದಿರಗಳು, ಸಂಗೀತ ಶಾಲೆಗಳು ,ಬೀಚ್‍ಗಳು, ರೆಸಾರ್ಟ್‍ಗಳು ಸೇರಿದಂತೆ ಹಲವು ಕಡೆಗಳಲ್ಲಿ ಪ್ರವೇಶ ನಿಷೇಧ. ಹೆಸರಿನ ಜೊತೆ ಸಾರಾ, ಇಸ್ರಾಯಿಲ್ ಎಂದು ಸೇರಿಸುವುದು ಕಡ್ಡಾಯವಾಯಿತು. ಯಹೂದಿ ಪಾಸ್‍ಪೋರ್ಟ್‍ಗಳಲ್ಲಿ ಗುರುತಿಗಾಗಿ ‘ಜೆ’ ಎಂಬ ಕೆಂಪು ಬಣ್ಣದ ಅಕ್ಷರವನ್ನು ಸ್ಟಾಂಪ್ ಮಾಡಲಾಯಿತು. ಆ ವರ್ಷ ನವೆಂಬರ್ ಒಂಬತ್ತರ ರಾತ್ರಿಯು “ಒಡೆದ ಗಾಜಿನ ರಾತ್ರಿ” ಎಂದು ಇತಿಹಾಸವು ಬರೆಯಿತು. ಆ ದಿನ ನಾಝಿ ಕ್ರೌರ್ಯವು ಮುಗಿಲು ಮುಟ್ಟಿತ್ತು. ದೇಶದೆಲ್ಲೆಡೆ ಯಹೂದಿಗಳ ಮೇಲೆ ಹಿಂಸಾತ್ಮಕ ಅಕ್ರಮಗಳು ನಡೆದವು. ಸಾವಿರಾರು ಸಿನಗೋಗುಗಳು ಅಗ್ನಿಗಾಹುತಿಯಾದವು. ಅಂಗಡಿ ಮುಂಗಟ್ಟುಗಳನ್ನು ಧ್ವಂಸಕ್ಕೊಳಗಾದವು.

1939: ಅನೇಕ ಯಹೂದಿ ಕುಟುಂಬಗಳು ಬರಿಗಾಲಲ್ಲಿ ವಲಸೆ ಹೋಗಬೇಕಾಯಿತು. ಯಹೂದಿ ಬಾನುಲಿಗಳು ಅಪಹರಿಸಲ್ಪಟ್ಟವು. ಎಲ್ಲರೂ ಸ್ವರ್ಣ ಮತ್ತು ಬೆಳ್ಳಿ ಆಭರಣಗಳಂತಹ ಬೆಲೆಬಾಳುವ ವಸ್ತುಗಳನ್ನು ನಯಾ ಪೈಸೆಯ ನಷ್ಟ ಪರಿಹಾರವಿಲ್ಲದೇ ಸರಕಾರಕ್ಕೆ ಹಸ್ತಾಂತರಿಸಬೇಕೆಂಬ ಆಜ್ಞೆ ಹೊರಡಿಸಲಾಯಿತು. ಯಹೂದಿ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ.

1940: ಯಹೂದಿಗಳ ಟೆಲಿಫೋನ್‍ಗಳು ಅಪಹರಿಸಲ್ಪಟ್ಟವು. ಬಟ್ಟೆಬರೆಗಳಿಗಿದ್ದ ಯುದ್ಧದ ಸಮಯದ ರೇಷನ್ ಸೌಲಭ್ಯ ನಿಂತು ಹೋದವು.

1941: ಯಹೂದಿಗಳಿಗೆ ಸಾರ್ವಜನಿಕ ದೂರವಾಣಿಗಳ ಮೇಲೆ ನಿಷೇಧ ಹೇರಿಕೆ. ನಾಯಿಗಳನ್ನು ಸಾಕುವುದೋ, ದೇಶಾಂತರ ಹೋಗುವುದೋ ಮಾಡುವಂತಿಲ್ಲ.

1942: ಚಳಿಗೆ ಉಪಯೋಗಿಸುತ್ತಿದ್ದ ಫರ್ ಜಾಕೆಟ್‍ಗಳು ಮತ್ತು ಕಂಬಳಿ ಹೊದಿಕೆಗಳನ್ನು ಬಳಸದಂತೆ ನಿಷೇಧಿಸಲಾಯಿತು. ಅಲ್ಲದೇ ಮೊಟ್ಟೆ ಹಾಗೂ ಹಾಲಿನಂತಹ ಆಹಾರಗಳನ್ನೂ ಖರೀದಿಸುವಂತಿಲ್ಲ.
ಕಾನೂನು ತಿದ್ದುಪಡಿಗಳ ಕೆಲವೊಂದು ಸ್ಯಾಂಪಲ್‍ಗಳಷ್ಟೇ ಇದು. ಜೀವನದಲ್ಲಿ ಯಹೂದಿಗಳು, ರೋಮನ್ನರು, ಲೈಂಗಿಕ ಅಲ್ಪಸಂಖ್ಯಾತರು, ಕಾರ್ಮಿಕ ಸಂಘಗಳ ಕಾರ್ಯಕರ್ತರು, ಕಮ್ಯೂನಿಸ್ಟ್‍ಗಳು, ಸೋಶಿಯಲ್ ಡೆಮೊಕ್ರೆಟ್‍ಗಳು, ಕರಿಯರು ಮುಂತಾದ ಆರ್ಯೇತರರ ಜೊತೆ ವ್ಯವಸ್ಥಿತವಾಗಿ ಪ್ರತ್ಯೇಕಿಸಲ್ಪಟ್ಟು, ಪೀಡನೆಗೂ ಗುರಿಯಾಗಿ ಅಂತಿಮವಾಗಿ ಅತಿ ದಾರುಣವಾದ ರೀತಿಯಲ್ಲಿ ಹತ್ಯೆಗೈಯ್ಯಲ್ಪಟ್ಟರು. ಇಂತಹ, ಭಯಾನಕ ಅತಿಕ್ರಮಕ್ಕೂ ಮುನ್ನ ತಂದಂತಹ ಕಾನೂನುಗಳಾಗಿದ್ದವು ಅವು. ನಾಝಿ ಗೂಂಡಾ ಪಡೆ ಈ ನಿಯಮಗಳನ್ನು ಕಾರ್ಯರೂಪಕ್ಕೆ ತಂದರು. ಹಿನ್ನೆಲೆಯಲ್ಲಿ ಫ್ಯಾಸಿಸ್ಟ್ ಅಧಿಕಾರಿಗಳು ಮತ್ತು ಅವರ ನೇತಾರ ಅಡಾಲ್ಫ್ ಹಿಟ್ಲರ್ ಜೊತೆಸೇರಿ ಅನುಮತಿ ನೀಡಿದರು.

ಪೌರತ್ವ ತಿದ್ದುಪಡಿ ಕಾಯ್ದೆಯ ಆಶಯಬೇರುಗಳು:
ನಾಝಿಗಳು ಮಾಡಿದ ಎಲ್ಲಾ ಕೆಲಸಗಳನ್ನೂ ಶ್ಲಾಘಿಸಿದವರು ಆರೆಸ್ಸೆಸಿಗರು ಎಂಬುದು ನೆನೆಪಿರಲಿ. ಸರಸಂಘಚಾಲಕ ಎಂ.ಎಸ್ ಗೋಳ್ವಾಲ್ಕರ್ ಅವರ ಪ್ರಸಿದ್ಧ ಕೃತಿ ‘ವಿ ಅವರ್ ನೇಶನ್ ಹುಡ್ ಡಿಫೈನ್ಡ್’ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸೆಮಿಟಕ್ ವಂಶವನ್ನು ಅಥವಾ ಯಹೂದಿಗಳನ್ನು ದೇಶದಿಂದ ಉನ್ಮೂಲನೆಗೈದು ಜರ್ಮನಿ ಜಗತ್ತನ್ನೇ ನಿಬ್ಬೆರಗಾಗಿಸಿತು. ವಿಶೇಷವಾದ ವಂಶಾಭಿಜಾತ್ಯ ಪ್ರಜ್ಞೆಯಾಗಿತ್ತು ಅಲ್ಲಿ ಉದಯಗೊಂಡದ್ದು. ಆಳವಾಗಿ ಬೇರೂರಿದ ವೈವಿಧ್ಯತೆಗಳಿರುವ ವಂಶಗಳನ್ನು ಮತ್ತು ಸಂಸ್ಕøತಿಯನ್ನು ಹೇಗೆ ಸಮೀಕರಿಸಿ ಏಕೀಕರಿಸಬಹುದು ಎಂಬುದನ್ನು ಜರ್ಮನಿ ಮಾಡಿ ತೋರಿಸಿತು. ಇದು ನಮಗೆ ಹಿಂದುಸ್ತಾನಿಗೆ ಕಲಿಯುವುದಕ್ಕೂ ಹಾಗೂ ಅಳವಡಿಸುವುದಕ್ಕೂ ಇರುವಂತಹ ಪಾಠವಾಗಿದೆ. (ಪುಟ: 87-88)

ಗೋಳ್ವಾಲ್ಕರ್ ಹಿಂದೂ ರಾಷ್ಟ್ರವನ್ನು ವ್ಯಾಖ್ಯಾನಿಸುವುದು ಈ ರೀತಿಯಾಗಿದೆ. “ರಾಷ್ಟ್ರೀಯತೆ ಅಥವಾ ಹಿಂದೂ ವಂಶ, ಧರ್ಮ, ಸಂಸ್ಕತಿ, ಭಾಷೆ ಸವಿಶೇಷತೆಗಳನ್ನು ಸ್ವಾಧೀನಪಡಿಸದವರು ನಿಜವಾದ ರಾಷ್ಟ್ರೀಯ ಜೀವನದಿಂದ ಹೊರಗೆ ನಿಲ್ಲುತ್ತಾರೆ. ( ಪುಟ 99)

ಬರೀ ವಂಶ, ಧರ್ಮ, ಸಾಂಸ್ಕೃತಿಕ ವೈವಿಧ್ಯತೆಗಳನ್ನು ಕೊಂಡಾಡುವವರನ್ನು ವಿದೇಶಿಗಳಾಗಿ ಪರಿಗಣಿಸಬೇಕೆಂದು ಅವರು ಉಪದೇಶಿಸುತ್ತಾರೆ ( ಪುಟ 101).

ಮುಂದುವರಿಯುತ್ತಾ ಹೇಳುತ್ತಾರೆ “ ಹಿಂದುಸ್ತಾನಿನ ವಿದೇಶಿ ವಂಶಜರು ಒಂದೋ ಇಲ್ಲಿನ ಭಾಷೆ ಮತ್ತು ಸಂಸ್ಕ್ಕತಿಯನ್ನು ಸ್ವೀಕರಿಸಬೇಕು. ಹಿಂದೂ ಧರ್ಮವನ್ನು ಅವರು ಆದರದಿಂದ ಕಾಣಲು ಕಲಿಯಬೇಕು. ಹಿಂದುತ್ವ ಮತ್ತು ಹಿಂದೂ ಸಂಸ್ಕೃತಿಯ ಮಹತ್ವತೆಗಲ್ಲದೆ ಪ್ರೋತ್ಸಾಹ ಕೊಡಬಾರದು. ಹಿಂದೂ ಸಂಸ್ಕøತಿಯೊಂದಿಗೆ ವಿಲೀನಗೊಳ್ಳಲು ಅವರು ಅವರೊಳಗಿನ ವಿಭಿನ್ನ ಅಸ್ತಿತ್ವವನ್ನು ತೊರೆಯಬೇಕು. ಇಲ್ಲವಾದರೆ, ಹಿಂದೂ ರಾಷ್ಟ್ರಕ್ಕೆ ಮಣಿದು, ಮರು ಮಾತನಾಡದೆ, ಯಾವ ಹಕ್ಕುಗಳಿಗೂ ಅರ್ಹರಾಗದೆ, ಪೌರತ್ವ ಹಕ್ಕುಗಳಲ್ಲೂ ಕೂಡಾ ಪ್ರಾಶಸ್ತ್ಯವಿಲ್ಲದ ನೆಲೆಯಲ್ಲಿ ಅವರಿಗೆ ಇಲ್ಲಿ ಜೀವಿಸಬಹುದು” (ಪುಟ105).

ಅಂತಿಮ ಪ್ರಯೋಗವನ್ನು ಗಮನಿಸಿ. ಪ್ರಸ್ತುತ ದಿನಗಳಲ್ಲಿ ನರೇಂದ್ರ ಮೋದಿ ಸರಕಾರವು ಎತ್ತಿಕಟ್ಟಿ ತರುವಂತದ್ದೂ ಇದೇ ಆಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಅದರ ಒಂದು ಭಾಗವಾಗಿದೆ ಅಷ್ಟೇ. ರಾಷ್ಟ್ರೀಯ ಪೌರತ್ವ ನೋಂದಣಿಯು ಮುಂದೆ ಆಳವಾದ ಹಾಗೂ ವಿಸ್ತಾರವಾದ ವ್ಯಾಪ್ತಿಯ ವಿಭಜನೆಗೆ ಕಾರಣವಾಗುತ್ತದೆ ಎಂಬುದು ಸ್ಪಷ್ಟ.

ಭಾರತ ಈ ರೀತಿಯ ದುಸ್ಥಿತಿಗೆ ಎಂದೂ ತಲುಪಿಲ್ಲ. ಈಗ ಪೌರತ್ವ ತಿದ್ದುಪಡಿ ಕಾನೂನಿಗೆ ವಿರುದ್ಧವಾಗಿ ಜನ ಧ್ವನಿಗೂಡಿಸುವಂತೆಯೇ, ಸರಕಾರದ ಈ ಕ್ರಮದ ವಿರುದ್ಧವೂ ನಾಲ್ಕು ದಿಕ್ಕುಗಳಿಂದಲೂ ಉಗ್ರ ಹೋರಾಟ ಹಾಗೂ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಇತಿಹಾಸದ ಪಾಠಗಳು ನಾವು ಕಲಿಯಲೇಬೇಕಿದೆ. ಇಲ್ಲವಾದರೆ ಅದು ಪುನರಾವರ್ತನೆಗೊಳ್ಳುವಾಗ ನಾವು ದೂಷಣೆಗೆ ವಿಧೇಯರಾಗಬೇಕಾಗುತ್ತದೆ.

(ಲೇಖಕರು ಮಂಗಳೂರಿನ ಅರೆಬಿಕ್ ಶಿಕ್ಷಣ ಸಂಸ್ಥೆಯೊಂದರಲ್ಲಿ ಅಧ್ಯಾಪಕರು. ಲೇಖನದಲ್ಲಿರುವ ಅಭಿಪ್ರಾಯಗಳು ವ್ಯಕ್ತಿಗತವಾದವು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...