Homeಚಳವಳಿಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಸಿಗಲು ಕಾರಣರಾದ ನಿಜವಾದ ಶಿಕ್ಷಣದ ಸಂತ ಅನಿಲ್ ಸದ್ಗೋಪಾಲ್

ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಸಿಗಲು ಕಾರಣರಾದ ನಿಜವಾದ ಶಿಕ್ಷಣದ ಸಂತ ಅನಿಲ್ ಸದ್ಗೋಪಾಲ್

ಭೊಪಾಲ್ ನಲ್ಲಿ ಸಂಭವಿಸಿದ ಅನಿಲ ದುರಂತ ಮತ್ತು ಅದರಿಂದಾದ ಸಾವು-ನೋವುಗಳನ್ನು ನೋಡಿ ನೊಂದರು. ಅಲ್ಲಿಂದ ಅವರು ಸಂತ್ರಸ್ಥ ಕುಟುಂಬಗಳಿಗೆ ನ್ಯಾಯಯುತ ಪರಿಹಾರಕ್ಕಾಗಿ ಹೋರಾಟಗಳನ್ನು ಮುನ್ನಡೆಸಿದರು.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಬಯೋಕೆಮೆಸ್ಟ್ರಿ ಮತ್ತು ಮಾಲಿಕ್ಯುಲರ್ ಬಯಾಲಿಜಿ ವಿಷಯದಲ್ಲಿ 1963ರಲ್ಲಿಯೇ ಅಮೇರಿಕಾಕ್ಕೆ ಹೋಗಿ ಸಂಶೋಧನೆ ನಡೆಸಿದ್ದ ಅನಿಲ್ ಸದ್ಗೋಪಾಲ್‍ರವರು ಭಾರತಕ್ಕೆ ಬಂದು ಮಾಡಿದ್ದು ಏನು ಗೊತ್ತೇ? ಮಧ್ಯಪ್ರದೇಶದ ಹೋಶಂಗಬಾದ್ ಜಿಲ್ಲೆಯ ಪಲಿಯ ಪಿಪಾರಿಯ ಎಂಬ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಕೃಷಿ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಪಾಠ ಮಾಡುತ್ತಿದ್ದರು. ವೈಜ್ಞಾನಿಕ ರೀತಿಯಲ್ಲಿ ಪಶು ಸಂಗೋಪನೆ ಮತ್ತು ಕಡಿಮೆ ಖರ್ಚಿನಲ್ಲಿ ನೀರಾವರಿಯ ವಿಧಾನಗಳ ಕುರಿತು ಪಾಠ ಮಾಡುತ್ತಿದ್ದ ಇವರ ನಂತರ 1972ರಲ್ಲಿ ಮಕ್ಕಳ ವಿಜ್ಞಾನ ಕಲಿಕೆಯ ಮೇಲೆ ಗಮನ ಹರಿಸಿದರು.

ನಂತರ ಇದು ಹೋಶಂಗಬಾದ್ ಸೈನ್ಸ್ ಟೀಚಿಂಗ್ ಪ್ರೊಗ್ರಾಮ್ ಎಂದೇ ಪ್ರಖ್ಯಾತವಾಯಿತು. ಅನಿಲ್ ಸದ್ಗೋಪಾಲ್ ರವರು ಕಿಶೋರ್ ಭಾರತಿ ಎಂಬ ತಮ್ಮ ಸಂಸ್ಥೆಯ ಮೂಲಕ 16 ಶಾಲೆಗಳಲ್ಲಿ ಆರಂಭಿಸಿದ ಈ ಮಾತೃಭಾಷೆಯಲ್ಲಿ ವಿಜ್ಞಾನ ಕಲಿಕೆ ಕಾರ್ಯಕ್ರಮ ಯಶಸ್ವಿಯಾದ್ದರಿಂದ ಸರ್ಕಾರ ಇಡೀ ಹೋಶಂಗಬಾದ್ ಜಿಲ್ಲೆಗೆ ವಿಸ್ತರಿಸಿತು. ಇದಕ್ಕೂ ಮೊದಲು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‍ನಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ್ದ ಅನಿಲ್ ಸದ್ಗೋಪಾಲ್‍ರವರು ಅಲ್ಲಿಂದ, ದೆಹಲಿ ವಿ.ವಿಯಿಂದ ಎಲ್ಲಾ ಕಡೆಗಳಿಂದ ವಿಜ್ಞಾನಿಗಳು ಈ ಪ್ರಯೋಗದಲ್ಲಿ ಪಾಲುದಾರರಾಗುವಂತೆ ಮಾಡಿದರು.

1982ರಲ್ಲಿ ಏಕಲವ್ಯ ಸಂಸ್ಥೆ ಆರಂಭಿಸಿ ಶಾಲಾ ಮಕ್ಕಳೊಡನೆ ಕೆಲಸ ಮಾಡುತ್ತಿದ್ದ ಸದ್ಗೋಪಾಲ್‍ರವರು 1984ರಲ್ಲಿ ಪಕ್ಕದ ಭೊಪಾಲ್ ನಲ್ಲಿ ಸಂಭವಿಸಿದ ಅನಿಲ ದುರಂತ ಮತ್ತು ಅದರಿಂದಾದ ಸಾವು-ನೋವುಗಳನ್ನು ನೋಡಿ ನೊಂದರು. ಅಲ್ಲಿಂದ ಅವರು ಸಂತ್ರಸ್ಥ ಕುಟುಂಬಗಳಿಗೆ ನ್ಯಾಯಯುತ ಪರಿಹಾರಕ್ಕಾಗಿ ಹೋರಾಟಗಳನ್ನು ಮುನ್ನಡೆಸಿದರು.

ಸದ್ಗೋಪಾಲ್‍ರವರ ಅಪಾರ ವಿದ್ವತ್ತು ಮತ್ತು ಜ್ಞಾನವನ್ನು ಮನಗಂಡಿದ್ದ ಭಾರತ ಸರ್ಕಾರ 1990ರಲ್ಲಿ ಆಚಾರ್ಯ ರಾಮಮೂರ್ತಿ ರಿವ್ಯೂ ಕಮಿಟಿಗೆ ಇವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು. 1986ರ ಹೊಸ ಶಿಕ್ಷಣ ನೀತಿಯನ್ನು ವಿಮರ್ಶೆಗೊಳಪಡಿಸುವುದು ಇವರ ಜವಾಬ್ದಾರಿಯಾಗಿತ್ತು. ಆದರೆ ಶಿಕ್ಷಣ ಸಾರ್ವತ್ರಿಕರಣದಿಂದ ಹಿಂದೆ ಸರಿಯುವ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿದ್ದರಿಂದ ಅವರು ಆ ಸಮಿತಿಗೆ ರಾಜಿನಾಮೆ ನೀಡಿ ಹೊರಬಂದರು.

ಇದೇ ಸಂದರ್ಭದಲ್ಲಿ ಛತ್ತಿಸ್‍ಘಡ ಮುಕ್ತಿ ಮೋರ್ಚಾದ ಸ್ಥಾಪಕರಾಗಿದ್ದ ಬಹುದೊಡ್ಡ ಹೋರಾಟ ಹೋರಾಟಗಾರ ಶಂಕರ್ ಗುಹಾ ನಿಯೋಗಿಯವರ ಹತ್ಯೆಯಾಗಿತ್ತು. ಈ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಪುಸ್ತಕ ಬರೆಯಲು ಸದ್ಗೋಪಾಲ್‍ರವರು 1992 ರಲ್ಲಿ ದೆಹಲಿಗೆ ಬಂದರು. 1994ರಲ್ಲಿ ದೆಹಲಿ ವಿ.ವಿಯಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. 1998ರಿಂದ 2001ರವರೆಗೆ ಡಿರ್ಪಾಟೆಮೆಂಟ್ ಆಫ್ ಎಜುಕೇಷನ್‍ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

ವಿಜ್ಞಾನ ಚಳವಳಿಯಲ್ಲಿ ಸದಾ ಮುಂದಿದ್ದ ಇವರು ಜನ ವಿಜ್ಞಾನ ಚಳವಳಿ ಜಾಥಾದ ಮುಖ್ಯಸ್ಥರಾಗಿದ್ದರು. 2004ರಲ್ಲಿ ಇವರನ್ನು ಸೆಂಟ್ರಲ್ ಅಡ್ವೈಸರಿ ಬೋರ್ಡ್ ಆಫ್ ಎಜುಕೇಷನ್‍ನ ಸದಸ್ಯರನ್ನಾಗಿ ನೇಮಿಸಲಾಯಿತು. ಆನಂತರ 2005ರಲ್ಲಿ ಈಗ ಜಾರಿಯಲ್ಲಿರುವ ಆರ್‍ಟಿಈ ಶಿಕ್ಷಣ ಹಕ್ಕು ಕಾಯ್ದೆಯ ರಚನಾ ಸಮಿತಿಯ ಸದಸ್ಯರಾಗಿದ್ದರು. ದೇಶದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಸಮಾನ ಶಿಕ್ಷಣವನ್ನು ಜಾರಿಗೊಳಿಸುವುದು, ತಾರತಮ್ಯವನ್ನು ನಿವಾರಿಸುವಂತಹ ಮಹತ್ವದ ಅಂಶಗಳನ್ನು ಅದರಲ್ಲಿ ಇವರು ಸೇರಿಸಿದ್ದರು. ಆದರೆ ಇವರು ಭಾಗವಾಗಿದ್ದ ಸಮಿತಿ ಸಲ್ಲಿಸಿದ ವರದಿಯನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ಮಂಡಿಸಿತು. ಇದರಿಂದ ಬೇಸರಗೊಂಡ ಇವರು ತಮ್ಮ ವಿರೋಧವನ್ನು ದಾಖಲಿಸಿ ಸಮಿತಿಗೆ ರಾಜಿನಾಮೇ ನೀಡ ಹೊರಬಂದರು.

ಆಗ ಅವರು ಆರ್‍ಟಿಈಯನ್ನು ಜಾರಿಗೊಳಿಸುವ ಮುನ್ನ ತಿದ್ದುಪಡಿ ಮಾಡಬೇಕೆಂಬ ಆಂದೋಲನವನ್ನು ಶುರು ಮಾಡಿದರು. ಸಮಾನ ಶಾಲೆಯನ್ನು ಜಾರಿಗೆ ತರಬೇಕೇಂಬುದು ಅವರ ಪ್ರಮುಖ ಹಕ್ಕೊತ್ತಾಯವಾಗಿತ್ತು.

ಒಂದು ಹಳ್ಳಿಯನ್ನು/ ನಗರದ ನಿಗಧಿತ ಪ್ರದೇಶ ತೆಗೆದುಕೊಂಡರೆ ಅಲ್ಲಿ ಒಂದೇ ಸುಸಜ್ಜಿತ ಸರ್ಕಾರಿ ಶಾಲೆ ಇರಬೇಕು. ಆ ನೆರಹೊರೆಯ ಎಲ್ಲಾ ಜಾತಿ ವರ್ಗದ ಮಕ್ಕಳು ಅದೇ ಶಾಲೆಗೆ ಬರಬೇಕು. (ಶ್ರೀಮಂತ – ಬಡವ, ಮೇಲುಜಾತಿ-ತಳಸಮುದಾಯ ಎಲ್ಲರೂ ಸೇರಿ) ಆಗ ಅಲ್ಲಿನ ಶಿಕ್ಷಕರು ಅತ್ಯುತ್ತಮವಾಗಿ ಬೋಧಿಸುವುದಲ್ಲದೇ ಉತ್ತಮ ಗುಣಮಟ್ಟದ ಶಿಕ್ಷಣ ಸಾಧ್ಯ ಎಂಬುದು ಇವರ ಕನಸಾಗಿತ್ತು. ಇದನ್ನೇ ನೆರೆಹೊರೆ ಆಧಾರಿತ ಸಮಾನ ಶಾಲಾ ಪದ್ದತಿಯೆಂದು ಕರೆದು ಇದರ ಜಾರಿಗಾಗಿ ಒತ್ತಾಯಿಸಿದರು.

ನಂತರ 2009ರಲ್ಲಿ ಇವರು ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯನ್ನು ಪ್ರಾರಂಭಿಸಿದರು. ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳು, ಚಳವಳಿಗಾರರು ಎಲ್ಲರನ್ನು ಒಳಗೊಂಡಿರುವ ಈ ವೇದಿಕೆ ಶಿಕ್ಷಣದ ವ್ಯಾಪರವನ್ನು ತಡೆಗಟ್ಟಿ ಸಮಾನ ಶಾಲೆಗಳು ಜಾರಿಯಾಗಬೇಕೆಂದು ಒತ್ತಾಯಿಸುತ್ತಿದೆ. ಅನಿಲ್ ಸದ್ಗೋಪಾಲ್‍ರವರು ಹಲವು ಬಾರಿ ಕರ್ನಾಟಕಕ್ಕೂ ಬಂದು ಶಿಕ್ಷಣದ ಕುರಿತು ಹಲವು ಮಹತ್ವದ ಉಪನ್ಯಾಸಗಳನ್ನು ನೀಡಿದ್ದಾರೆ.

79 ವರ್ಷದ ಇಂತಹ ಸರಳಜೀವಿ, ಈಗಲೂ ದಿನಕ್ಕೆ ನಿಜವಾಗಿಯೂ 18ಗಂಟೆಗಿಂತಲೂ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಈ ಶಿಕ್ಷಣ ಸಂತನನ್ನು ಜ್ಞಾಪಿಸಿಕೊಳ್ಳಲು ಒಂದು ಕಾರಣವಿದೆ. ಮೊನ್ನೆಯಷ್ಟೇ ಇವರಿಗೆ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ವತಿಯಿಂದ ಕೊಡಲಾಗುವ ಹೋಮಿಬಾಬ ಅವಾರ್ಡ್ ಪಡೆದಿದ್ದಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ಶಿಕ್ಷಣ ಮತ್ತು ವಿಜ್ಞಾನ ಚಳವಳಿಯಲ್ಲಿ ತೊಡಗಿಸಿಕೊಳ್ಳುವವರಿಗೆ ಕೊಡಲಾಗುವ ಈ ಪ್ರಶಸ್ತಿ ಅನಿಲ್ ಸದ್ಗೋಪಾಲ್‍ರವರು ವಿಜ್ಞಾನ ಚಳವಳಿಗೆ ನೀಡಿದ ಜೀವಮಾನದ ಸಾಧನೆಗಾಗಿ ನೀಡಲಾಗಿದೆ.

ಪ್ರಶಸ್ತಿ ಪಡೆದು ಮಾತನಾಡಿರುವ ಅನಿಲ್ ಸದ್ಗೋಪಾಲ್‍ರವರು ಈ ಪ್ರಶಸ್ತಿ ನಮ್ಮ ಇಡೀ ತಂಡಕ್ಕೆ ಸೇರಬೇಕು. ಅವರಿಲ್ಲದಿದ್ದರೆ ನಾನೊಬ್ಬನೇ 1972ರಿಂದ ಇಲ್ಲಿವರೆಗೂ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನುವ ಮೂಲಕ ತಮ್ಮ ವಿನಯತೆಯನ್ನು ಮೆರೆದಿದ್ದಾರೆ. ಅವರ ಹೋರಾಟಕ್ಕೆ ಜಯ ಸಿಗಲೆಂದು ಆಶಿಸೋಣ.

ಇದನ್ನು ಓದಿ: ಅತ್ಯುತ್ತಮ ಶಿಕ್ಷಣ ನೀಡುವ ರಾಷ್ಟ್ರಗಳಲ್ಲಿ ಫಿನ್‍ಲ್ಯಾಂಡ್ ನಂಬರ್ 1 ಆಗಿದ್ದು ಹೇಗೆ ಗೊತ್ತೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...