Homeಮುಖಪುಟಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

- Advertisement -
- Advertisement -

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ.

ಅರ್ಧ ಗಂಟೆಯಲ್ಲಿ ಮುಗಿದು ಹೋಗುವ ಧಮ್ಮಮ್‌, ಹಿಂಸೆಯಾಚೆ ಅವಿತಿರುವ ಪ್ರೀತಿ ಮತ್ತು ಕಾರುಣ್ಯವನ್ನು ಶೋಧಿಸುವ ಪ್ರಯತ್ನ ಮಾಡಿದೆ. ಮನುಷ್ಯನ ಜಾತಿ ಅಹಂಕಾರದ ಕುರಿತು ಗಂಭೀರವಾದ ಚರ್ಚೆಗೆ ಅವಕಾಶ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಧಮ್ಮಮ್‌’ ಸ್ಟ್ರೀಮ್ ಆಗುತ್ತಿರುವ ಹೊತ್ತಿನಲ್ಲಿಯೇ ತಮಿಳುನಾಡಿನ ಶಿವಗಂಗೈ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿಶೇಷ ನ್ಯಾಯಾಲಯವು, ಮೂವರು ದಲಿತರ ತ್ರಿವಳಿ ಹತ್ಯೆಗೆ ಸಂಬಂಧಿಸಿದಂತೆ 27 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸುದ್ದಿ ಬಂತು. ದಲಿತರ ಆರ್ಥಿಕ ಸ್ವಾವಲಂಬನೆಯೇ ಸವರ್ಣೀಯರ ಅಸಹನೆಗೆ ಕಾರಣವಾಗಿತ್ತು. ಅಗಮುಡಿಯಾರ್ (ಪ್ರಬಲವಾದ ತೇವರ್ ಜಾತಿ ಸಮೂಹದ ಒಂದು ಭಾಗ) ಸಮುದಾಯದವರ ಮನೆಯ ಮುಂದೆ ದಲಿತ ಯುವಕನೊಬ್ಬ ಜೋರಾಗಿ ಫೋನಿನಲ್ಲಿ ಮಾತನಾಡಿದ ಎಂಬುದಷ್ಟೇ ಸವರ್ಣೀಯರ ಅಹಂಗೆ ಪೆಟ್ಟು ನೀಡಿತ್ತು. ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಅಗಮುಡಿಯಾರರು ಮೂವರು ದಲಿತರನ್ನು ಕೊಂದು, ಐವರನ್ನು ಭೀಕರವಾಗಿ ಗಾಯಗೊಳಿಸಿದ್ದರು. ಈ ಪ್ರಕರಣದಲ್ಲಿ 27 ಅಪರಾಧಿಗಳಿಗೆ ಇತ್ತೀಚೆಗಷ್ಟೇ ಶಿಕ್ಷೆ ನೀಡಲಾಗಿದೆ. ಪ.ರಂಜಿತ್ ಅವರ ‘ಧಮ್ಮಮ್‌’ ಕೂಡ ಶಿವಗಂಗೈ ಪ್ರಕರಣವನ್ನು ಕೊಂಚ ನೆನಪಿಸುತ್ತದೆ.

ವಿಶಾಲವಾದ ಗದ್ದೆ ಬಯಲು. ಸುತ್ತಲು ಹಸಿರು. ನಡುವೆ ಇನ್ನೂ ನಾಟಿ ಮಾಡದಿರುವ ಗದ್ದೆ. ಅಲ್ಲೊಬ್ಬ ಶೋಷಿತ ಸಮುದಾಯದ ವ್ಯಕ್ತಿ. ಆತನ ಹೆಸರು ‘ಗುಣ’. ಬದುವಿನಲ್ಲಿ ಬುದ್ಧನ ವಿಗ್ರಹ. ಆ ಶೋಷಿತನ ಪುಟ್ಟ ಮಗಳು ‘ಕೇಮ’.

ಬುದ್ಧನ ಮೇಲೆ ಹತ್ತಿ ನಿಂತು ಹಕ್ಕಿಯಂತೆ ಹಾರುತ್ತೇನೆಂಬ ಸೂಚನೆಗಳನ್ನು ನೀಡುತ್ತಿರುವ ಮಗುವಿಗೆ, “ದೇವರ ಮೇಲೆ ನಿಲ್ಲಬಾರದು. ಕೆಳಗಿಳಿ” ಎಂದು ಗುಣ ಎಚ್ಚರಿಸುತ್ತಾನೆ. “ದೇವರೇ ಇಲ್ಲವೆಂದು ಬುದ್ಧ ಹೇಳಿದ್ದಾನೆ. ಆತನನ್ನು ದೇವರು ಅನ್ನುತ್ತೀಯಲ್ಲ” ಎಂದು ಅಪ್ಪನಿಗೆ ಮಗಳು ತಿರುಗೇಟು ನೀಡುತ್ತಾಳೆ. ಅಪ್ಪಾ ಕಕ್ಕಾಬಿಕ್ಕಿ. ಪ್ರಶ್ನಿಸುವ ರೂಪಕವೇ ಬುದ್ಧ. ಹಳೆಯ ಕಾಲಕ್ಕೆ ಜೋತು ಬಿದ್ದಿರುವ ಅಪ್ಪನ ಎದುರು, ಹೊಸದಾರಿಯ ಹುಡುಕಾಟದಲ್ಲಿರುವ ಮಗು!

ಇದನ್ನೂ ಓದಿರಿ: ಡಬ್‌‌ ಸಿನಿಮಾ ‘ಡೊಳ್ಳು’ ಸಿಂಕ್‌ಸೌಂಡ್‌ ವಿಭಾಗದಲ್ಲಿ ಆಯ್ಕೆ: ‘ರಾಷ್ಟ್ರಪ್ರಶಸ್ತಿ ಲಾಬಿ’ ರಾಜಕಾರಣದ ಕಥೆ ಇದು!

ಈ ಶೋಷಿತ ಸಮುದಾಯದ ಹೊಸತಲೆಮಾರಲ್ಲಿ ಅನ್ಯಾಯವನ್ನು ಪ್ರಶ್ನಿಸುವ, ನ್ಯಾಯೋಚಿತವಾಗಿ ಸಿಡಿದೇಳುವ ಗುಣ ಮನೆಮಾಡಿದೆ. ಇದನ್ನು ಇನ್ನೊಂದು ಬದಿಯಲ್ಲಿರುವವರು ತಮ್ಮ ಅಹಂಕಾರಕ್ಕೆ ಪೆಟ್ಟೆಂದು ಭಾವಿಸುತ್ತಾರೆ. ದಲಿತನ ಸಣ್ಣ ಪ್ರತಿರೋಧವೂ ಬಲಾಢ್ಯರಲ್ಲಿ ದೊಡ್ಡ ಅಸಹನೆಯನ್ನು ಹುಟ್ಟಿಹಾಕಿಬಿಡುತ್ತದೆ. ಸವರ್ಣೀಯರು ಎಸಗುವ ದೌರ್ಜನ್ಯದಲ್ಲಿ ನಿತ್ಯವೂ ನಲುಗುತ್ತಿರುವ ದಲಿತ ಎಲ್ಲ ಹಿಂಸೆಗಳಾಚೆಗೆ ಜಿಗಿದು ಪ್ರೀತಿ, ಮಮತೆ, ಕಾರುಣ್ಯವನ್ನು ಶೋಷಕ ಸಮುದಾಯಕ್ಕೂ ತೋರುವ ಗುಣವೇ ಬೌದ್ಧತತ್ವ.

ಮತ್ತೆ ಮತ್ತೆ ಕಿರಿಕಿರಿ ಮಾಡುತ್ತಲೇ ಇರುವ ಬಲಾಢ್ಯ ಜಾತಿಯ ಸೇಕರ, ದಲಿತನಾದ ಗುಣನನ್ನು ಕಿಚಾಯಿಸುತ್ತಲೇ ಇದ್ದಾನೆ.‌ ದಲಿತನೊಬ್ಬ ಭೂಮಿ ಉಳುಮೆ ಮಾಡುತ್ತಿರುವುದೇ ಈ ಬಲಾಢ್ಯನ ಅಸಹನೆಯ ಮೂಲ ಎಂದು ಬಿಡಿಸಿ ಹೇಳಬೇಕಿಲ್ಲ. ದಲಿತನ ಪುಟ್ಟ ಮಗಳು ಕೇಮ ಆ ಗದ್ದೆಯ ಬದುವಿಯಲ್ಲಿ ಆಟವಾಡುತ್ತಿದ್ದಾಳೆ. ಯಾವುದೇ ಹಿಂಸೆ ನೀಡುವ ಗುರಿ ಇಲ್ಲವಾದರೂ ಆ ಮೀನನ್ನು ಹಿಡಿಯುವ ವ್ಯರ್ಥ ಪ್ರಯತ್ನದಲ್ಲಿ ಆ ಮಗು ತೊಡಗಿದೆ.

ಕಾಲು ಕೆರೆದು ಜಗಳ ಮಾಡಲೆತ್ನಿಸುತ್ತಿರುವ ಸೇಕರ, ಬದುವಿನಲ್ಲಿ ನಡೆದು ಬರುವಾಗ ಕೇಮ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾಳೆ. ಕಿರಿದಾದ ಬದು. ಪಕ್ಕಕ್ಕೆ ಹೆಜ್ಜೆ ಇಟ್ಟರೆ ಕೆಸರು. ತಾನು ಮೊದಲು ನಡೆದು ಬಂದ ಕಾರಣ, ನನಗೆ ಅತ್ತ ಹೋಗಲು ದಾರಿ ನೀಡಬೇಕು ಎಂದು ಕೇಮ ವಾದಿಸುತ್ತಾಳೆ. ಇದನ್ನು ಸಹಿಸದ ಸೇಕರ, ಹಿಂದೆ ಹೋಗುವಂತೆ ಮಗುವನ್ನು ಗದರುತ್ತಾನೆ. ಗುಣ ಕೂಡ ಇದನ್ನು ಗಮನಿಸುತ್ತಾ, ಮುಂದಾಗುವ ಅನಾಹುತವನ್ನು ಊಹಿಸಿ, ಹಳೆಯ ತಲೆಮಾರಿನ ವರಸೆಯನ್ನೂ ತೋರುತ್ತಾ, ‘ಕೇಮ ಬದಿಗೆ ಸರಿಯಮ್ಮ’ ಎನ್ನುತ್ತಾನೆ. ಆದರೆ ಮಗು, “ನಾನು ಮೊದಲು ಬಂದಿದ್ದು, ನಾನೇಕೆ ಜಾಗ” ಬಿಡಲಿ ಎಂದು ನ್ಯಾಯೋಚಿತವಾಗಿ ಪ್ರಶ್ನಿಸುತ್ತದೆ.

ಸೇಕರ ಮುಂದೆ ನುಗ್ಗಲು ಬಂದಾಗ, ಆತನನ್ನು ಗದ್ದೆಯ ಕೆಸರಿಗೆ ನೂಕಿ ಕೇಮ ಮುಂದೆ ಸಾಗುತ್ತಾಳೆ. ಆತನ ಬಿಳಿ ಬಟ್ಟೆಗೆ ಕೆಸರು ಮೆತ್ತಿಕೊಳ್ಳುತ್ತದೆ. ಇದನ್ನೆಲ್ಲ ನೋಡುತ್ತಿದ್ದ ಗುಣ, ಮಗಳನ್ನು ಕಾಪಾಡಲು ಬಂದಾಗ ಆಕಸ್ಮಿಕವಾಗಿ ಬಲಾಢ್ಯನ ರಕ್ತ ಹರಿಯುತ್ತದೆ. ಸೇಕರನ ಮನೆಗೆ ವಿಷಯ ತಿಳಿದು ಆತನ ತಂದೆ, ಕಿರಿಯ ಮಗ ಹಾಗೂ ಹಿರಿಯ ಮಗ ಅಲ್ಲಿಗೆ ಧಾವಿಸುತ್ತಾರೆ.

ಸಾವು, ಬದುಕಿನ ನಡುವೆ ಸೇಕರ ಹೊರಳಾಡುತ್ತಿದ್ದರೂ ಆತನನ್ನು ರಕ್ಷಿಸದೆ ಗುಣನ ಹೆಣ ಉರುಳಿಸಬೇಕೆಂಬುದು ಹಪಾಹಪಿಸುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲೆತ್ನಿಸುವ ದಲಿತ ಅನಿವಾರ್ಯವಾಗಿ ಮಿಕ್ಕವರನ್ನೂ ಗಾಯಗೊಳಿಸಿ ಬಚಾವಾಗುತ್ತಾನೆ. ಆದರೆ ಕೇಮ ತನ್ನ ಅಪ್ಪನಲ್ಲಿ, ಸಾವು ಬದುಕಿನ ನಡುವೆ ಹೊರಳಾಡುತ್ತಿರುವ ಸೇಕರನ್ನು ಆಸ್ಪತ್ರೆಗೆ ಕರೆದೊಯ್ಯೋಣ ಎನ್ನುತ್ತದೆ. ಇದೇ ಕಾರುಣ್ಯ. ಶೋಷಿತ ಸಮುದಾಯದ ಆದಿಮ ಗುಣವದು.

ಇದನ್ನೂ ಓದಿರಿ: ವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

ಯಾರನ್ನೂ ನೋಯಿಸದ, ಅನ್ಯಾಯವನ್ನು ಪ್ರಶ್ನಿಸಿದ ಮಾತ್ರಕ್ಕೆ ದಲಿತ ಸಮುದಾಯ ತಾನೇ ನೋಯುವ ಸಂಕಟ ಇದೆಯಲ್ಲ- ಅದಕ್ಕೆ ಶತಶತಮಾನಗಳ ಚರಿತ್ರೆ ಇದೆ. ಇದರ ಜೊತೆಗೆ ಶೋಷಕ ಸಮುದಾಯದ ಆತ್ಮವಿಮರ್ಶೆಯ ಅಗತ್ಯವನ್ನು ಇಲ್ಲಿ ತೆರೆದಿರುವ ಪ್ರಯತ್ನವನ್ನು ಪ.ರಂಜಿತ್ ಮಾಡಿದ್ದಾರೆ. ಗುದ್ದಾಡಿ ಹೈರಾಣಾಗಿರುವ ಗುಣನ ಮೇಲೆ ಮುಗಿ ಬೀಳಲು ಹೋಗುವ ಸಹೋದರನನ್ನು ಇನ್ನೊಬ್ಬ ಸಹೋದರ ತಡೆಯುವುದು ಕೂಡ ಮನಃ ಪರಿವರ್ತನೆಯ ದಾರಿಯೂ ಹೌದು.

ಶೋಷಿತನ ಕಾರುಣ್ಯವನ್ನು, ಶೋಷಕನ ಮನಃಪರಿವರ್ತನೆಯನ್ನು ರೂಪಕವಾಗಿ ತೆರೆದಿರುವ ಪ್ರಯತ್ನವನ್ನು ಪ.ರಂಜಿತ್ ಮಾಡಿರುವುದು ‘ಧಮ್ಮಮ್‌’ನ ಹೆಗ್ಗಳಿಕೆ. ಧಮ್ಮದ ತಾತ್ವಿಕತೆಯನ್ನು ಹೊಸ ಕಾಲದ ವಿದ್ಯಮಾನಗಳೊಂದಿಗೆ ವಿವರಿಸುವ ಪ್ರಯತ್ನವೂ ಇದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...