Homeಮುಖಪುಟಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

- Advertisement -
- Advertisement -

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ.

ಅರ್ಧ ಗಂಟೆಯಲ್ಲಿ ಮುಗಿದು ಹೋಗುವ ಧಮ್ಮಮ್‌, ಹಿಂಸೆಯಾಚೆ ಅವಿತಿರುವ ಪ್ರೀತಿ ಮತ್ತು ಕಾರುಣ್ಯವನ್ನು ಶೋಧಿಸುವ ಪ್ರಯತ್ನ ಮಾಡಿದೆ. ಮನುಷ್ಯನ ಜಾತಿ ಅಹಂಕಾರದ ಕುರಿತು ಗಂಭೀರವಾದ ಚರ್ಚೆಗೆ ಅವಕಾಶ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಧಮ್ಮಮ್‌’ ಸ್ಟ್ರೀಮ್ ಆಗುತ್ತಿರುವ ಹೊತ್ತಿನಲ್ಲಿಯೇ ತಮಿಳುನಾಡಿನ ಶಿವಗಂಗೈ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿಶೇಷ ನ್ಯಾಯಾಲಯವು, ಮೂವರು ದಲಿತರ ತ್ರಿವಳಿ ಹತ್ಯೆಗೆ ಸಂಬಂಧಿಸಿದಂತೆ 27 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸುದ್ದಿ ಬಂತು. ದಲಿತರ ಆರ್ಥಿಕ ಸ್ವಾವಲಂಬನೆಯೇ ಸವರ್ಣೀಯರ ಅಸಹನೆಗೆ ಕಾರಣವಾಗಿತ್ತು. ಅಗಮುಡಿಯಾರ್ (ಪ್ರಬಲವಾದ ತೇವರ್ ಜಾತಿ ಸಮೂಹದ ಒಂದು ಭಾಗ) ಸಮುದಾಯದವರ ಮನೆಯ ಮುಂದೆ ದಲಿತ ಯುವಕನೊಬ್ಬ ಜೋರಾಗಿ ಫೋನಿನಲ್ಲಿ ಮಾತನಾಡಿದ ಎಂಬುದಷ್ಟೇ ಸವರ್ಣೀಯರ ಅಹಂಗೆ ಪೆಟ್ಟು ನೀಡಿತ್ತು. ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಅಗಮುಡಿಯಾರರು ಮೂವರು ದಲಿತರನ್ನು ಕೊಂದು, ಐವರನ್ನು ಭೀಕರವಾಗಿ ಗಾಯಗೊಳಿಸಿದ್ದರು. ಈ ಪ್ರಕರಣದಲ್ಲಿ 27 ಅಪರಾಧಿಗಳಿಗೆ ಇತ್ತೀಚೆಗಷ್ಟೇ ಶಿಕ್ಷೆ ನೀಡಲಾಗಿದೆ. ಪ.ರಂಜಿತ್ ಅವರ ‘ಧಮ್ಮಮ್‌’ ಕೂಡ ಶಿವಗಂಗೈ ಪ್ರಕರಣವನ್ನು ಕೊಂಚ ನೆನಪಿಸುತ್ತದೆ.

ವಿಶಾಲವಾದ ಗದ್ದೆ ಬಯಲು. ಸುತ್ತಲು ಹಸಿರು. ನಡುವೆ ಇನ್ನೂ ನಾಟಿ ಮಾಡದಿರುವ ಗದ್ದೆ. ಅಲ್ಲೊಬ್ಬ ಶೋಷಿತ ಸಮುದಾಯದ ವ್ಯಕ್ತಿ. ಆತನ ಹೆಸರು ‘ಗುಣ’. ಬದುವಿನಲ್ಲಿ ಬುದ್ಧನ ವಿಗ್ರಹ. ಆ ಶೋಷಿತನ ಪುಟ್ಟ ಮಗಳು ‘ಕೇಮ’.

ಬುದ್ಧನ ಮೇಲೆ ಹತ್ತಿ ನಿಂತು ಹಕ್ಕಿಯಂತೆ ಹಾರುತ್ತೇನೆಂಬ ಸೂಚನೆಗಳನ್ನು ನೀಡುತ್ತಿರುವ ಮಗುವಿಗೆ, “ದೇವರ ಮೇಲೆ ನಿಲ್ಲಬಾರದು. ಕೆಳಗಿಳಿ” ಎಂದು ಗುಣ ಎಚ್ಚರಿಸುತ್ತಾನೆ. “ದೇವರೇ ಇಲ್ಲವೆಂದು ಬುದ್ಧ ಹೇಳಿದ್ದಾನೆ. ಆತನನ್ನು ದೇವರು ಅನ್ನುತ್ತೀಯಲ್ಲ” ಎಂದು ಅಪ್ಪನಿಗೆ ಮಗಳು ತಿರುಗೇಟು ನೀಡುತ್ತಾಳೆ. ಅಪ್ಪಾ ಕಕ್ಕಾಬಿಕ್ಕಿ. ಪ್ರಶ್ನಿಸುವ ರೂಪಕವೇ ಬುದ್ಧ. ಹಳೆಯ ಕಾಲಕ್ಕೆ ಜೋತು ಬಿದ್ದಿರುವ ಅಪ್ಪನ ಎದುರು, ಹೊಸದಾರಿಯ ಹುಡುಕಾಟದಲ್ಲಿರುವ ಮಗು!

ಇದನ್ನೂ ಓದಿರಿ: ಡಬ್‌‌ ಸಿನಿಮಾ ‘ಡೊಳ್ಳು’ ಸಿಂಕ್‌ಸೌಂಡ್‌ ವಿಭಾಗದಲ್ಲಿ ಆಯ್ಕೆ: ‘ರಾಷ್ಟ್ರಪ್ರಶಸ್ತಿ ಲಾಬಿ’ ರಾಜಕಾರಣದ ಕಥೆ ಇದು!

ಈ ಶೋಷಿತ ಸಮುದಾಯದ ಹೊಸತಲೆಮಾರಲ್ಲಿ ಅನ್ಯಾಯವನ್ನು ಪ್ರಶ್ನಿಸುವ, ನ್ಯಾಯೋಚಿತವಾಗಿ ಸಿಡಿದೇಳುವ ಗುಣ ಮನೆಮಾಡಿದೆ. ಇದನ್ನು ಇನ್ನೊಂದು ಬದಿಯಲ್ಲಿರುವವರು ತಮ್ಮ ಅಹಂಕಾರಕ್ಕೆ ಪೆಟ್ಟೆಂದು ಭಾವಿಸುತ್ತಾರೆ. ದಲಿತನ ಸಣ್ಣ ಪ್ರತಿರೋಧವೂ ಬಲಾಢ್ಯರಲ್ಲಿ ದೊಡ್ಡ ಅಸಹನೆಯನ್ನು ಹುಟ್ಟಿಹಾಕಿಬಿಡುತ್ತದೆ. ಸವರ್ಣೀಯರು ಎಸಗುವ ದೌರ್ಜನ್ಯದಲ್ಲಿ ನಿತ್ಯವೂ ನಲುಗುತ್ತಿರುವ ದಲಿತ ಎಲ್ಲ ಹಿಂಸೆಗಳಾಚೆಗೆ ಜಿಗಿದು ಪ್ರೀತಿ, ಮಮತೆ, ಕಾರುಣ್ಯವನ್ನು ಶೋಷಕ ಸಮುದಾಯಕ್ಕೂ ತೋರುವ ಗುಣವೇ ಬೌದ್ಧತತ್ವ.

ಮತ್ತೆ ಮತ್ತೆ ಕಿರಿಕಿರಿ ಮಾಡುತ್ತಲೇ ಇರುವ ಬಲಾಢ್ಯ ಜಾತಿಯ ಸೇಕರ, ದಲಿತನಾದ ಗುಣನನ್ನು ಕಿಚಾಯಿಸುತ್ತಲೇ ಇದ್ದಾನೆ.‌ ದಲಿತನೊಬ್ಬ ಭೂಮಿ ಉಳುಮೆ ಮಾಡುತ್ತಿರುವುದೇ ಈ ಬಲಾಢ್ಯನ ಅಸಹನೆಯ ಮೂಲ ಎಂದು ಬಿಡಿಸಿ ಹೇಳಬೇಕಿಲ್ಲ. ದಲಿತನ ಪುಟ್ಟ ಮಗಳು ಕೇಮ ಆ ಗದ್ದೆಯ ಬದುವಿಯಲ್ಲಿ ಆಟವಾಡುತ್ತಿದ್ದಾಳೆ. ಯಾವುದೇ ಹಿಂಸೆ ನೀಡುವ ಗುರಿ ಇಲ್ಲವಾದರೂ ಆ ಮೀನನ್ನು ಹಿಡಿಯುವ ವ್ಯರ್ಥ ಪ್ರಯತ್ನದಲ್ಲಿ ಆ ಮಗು ತೊಡಗಿದೆ.

ಕಾಲು ಕೆರೆದು ಜಗಳ ಮಾಡಲೆತ್ನಿಸುತ್ತಿರುವ ಸೇಕರ, ಬದುವಿನಲ್ಲಿ ನಡೆದು ಬರುವಾಗ ಕೇಮ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾಳೆ. ಕಿರಿದಾದ ಬದು. ಪಕ್ಕಕ್ಕೆ ಹೆಜ್ಜೆ ಇಟ್ಟರೆ ಕೆಸರು. ತಾನು ಮೊದಲು ನಡೆದು ಬಂದ ಕಾರಣ, ನನಗೆ ಅತ್ತ ಹೋಗಲು ದಾರಿ ನೀಡಬೇಕು ಎಂದು ಕೇಮ ವಾದಿಸುತ್ತಾಳೆ. ಇದನ್ನು ಸಹಿಸದ ಸೇಕರ, ಹಿಂದೆ ಹೋಗುವಂತೆ ಮಗುವನ್ನು ಗದರುತ್ತಾನೆ. ಗುಣ ಕೂಡ ಇದನ್ನು ಗಮನಿಸುತ್ತಾ, ಮುಂದಾಗುವ ಅನಾಹುತವನ್ನು ಊಹಿಸಿ, ಹಳೆಯ ತಲೆಮಾರಿನ ವರಸೆಯನ್ನೂ ತೋರುತ್ತಾ, ‘ಕೇಮ ಬದಿಗೆ ಸರಿಯಮ್ಮ’ ಎನ್ನುತ್ತಾನೆ. ಆದರೆ ಮಗು, “ನಾನು ಮೊದಲು ಬಂದಿದ್ದು, ನಾನೇಕೆ ಜಾಗ” ಬಿಡಲಿ ಎಂದು ನ್ಯಾಯೋಚಿತವಾಗಿ ಪ್ರಶ್ನಿಸುತ್ತದೆ.

ಸೇಕರ ಮುಂದೆ ನುಗ್ಗಲು ಬಂದಾಗ, ಆತನನ್ನು ಗದ್ದೆಯ ಕೆಸರಿಗೆ ನೂಕಿ ಕೇಮ ಮುಂದೆ ಸಾಗುತ್ತಾಳೆ. ಆತನ ಬಿಳಿ ಬಟ್ಟೆಗೆ ಕೆಸರು ಮೆತ್ತಿಕೊಳ್ಳುತ್ತದೆ. ಇದನ್ನೆಲ್ಲ ನೋಡುತ್ತಿದ್ದ ಗುಣ, ಮಗಳನ್ನು ಕಾಪಾಡಲು ಬಂದಾಗ ಆಕಸ್ಮಿಕವಾಗಿ ಬಲಾಢ್ಯನ ರಕ್ತ ಹರಿಯುತ್ತದೆ. ಸೇಕರನ ಮನೆಗೆ ವಿಷಯ ತಿಳಿದು ಆತನ ತಂದೆ, ಕಿರಿಯ ಮಗ ಹಾಗೂ ಹಿರಿಯ ಮಗ ಅಲ್ಲಿಗೆ ಧಾವಿಸುತ್ತಾರೆ.

ಸಾವು, ಬದುಕಿನ ನಡುವೆ ಸೇಕರ ಹೊರಳಾಡುತ್ತಿದ್ದರೂ ಆತನನ್ನು ರಕ್ಷಿಸದೆ ಗುಣನ ಹೆಣ ಉರುಳಿಸಬೇಕೆಂಬುದು ಹಪಾಹಪಿಸುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲೆತ್ನಿಸುವ ದಲಿತ ಅನಿವಾರ್ಯವಾಗಿ ಮಿಕ್ಕವರನ್ನೂ ಗಾಯಗೊಳಿಸಿ ಬಚಾವಾಗುತ್ತಾನೆ. ಆದರೆ ಕೇಮ ತನ್ನ ಅಪ್ಪನಲ್ಲಿ, ಸಾವು ಬದುಕಿನ ನಡುವೆ ಹೊರಳಾಡುತ್ತಿರುವ ಸೇಕರನ್ನು ಆಸ್ಪತ್ರೆಗೆ ಕರೆದೊಯ್ಯೋಣ ಎನ್ನುತ್ತದೆ. ಇದೇ ಕಾರುಣ್ಯ. ಶೋಷಿತ ಸಮುದಾಯದ ಆದಿಮ ಗುಣವದು.

ಇದನ್ನೂ ಓದಿರಿ: ವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

ಯಾರನ್ನೂ ನೋಯಿಸದ, ಅನ್ಯಾಯವನ್ನು ಪ್ರಶ್ನಿಸಿದ ಮಾತ್ರಕ್ಕೆ ದಲಿತ ಸಮುದಾಯ ತಾನೇ ನೋಯುವ ಸಂಕಟ ಇದೆಯಲ್ಲ- ಅದಕ್ಕೆ ಶತಶತಮಾನಗಳ ಚರಿತ್ರೆ ಇದೆ. ಇದರ ಜೊತೆಗೆ ಶೋಷಕ ಸಮುದಾಯದ ಆತ್ಮವಿಮರ್ಶೆಯ ಅಗತ್ಯವನ್ನು ಇಲ್ಲಿ ತೆರೆದಿರುವ ಪ್ರಯತ್ನವನ್ನು ಪ.ರಂಜಿತ್ ಮಾಡಿದ್ದಾರೆ. ಗುದ್ದಾಡಿ ಹೈರಾಣಾಗಿರುವ ಗುಣನ ಮೇಲೆ ಮುಗಿ ಬೀಳಲು ಹೋಗುವ ಸಹೋದರನನ್ನು ಇನ್ನೊಬ್ಬ ಸಹೋದರ ತಡೆಯುವುದು ಕೂಡ ಮನಃ ಪರಿವರ್ತನೆಯ ದಾರಿಯೂ ಹೌದು.

ಶೋಷಿತನ ಕಾರುಣ್ಯವನ್ನು, ಶೋಷಕನ ಮನಃಪರಿವರ್ತನೆಯನ್ನು ರೂಪಕವಾಗಿ ತೆರೆದಿರುವ ಪ್ರಯತ್ನವನ್ನು ಪ.ರಂಜಿತ್ ಮಾಡಿರುವುದು ‘ಧಮ್ಮಮ್‌’ನ ಹೆಗ್ಗಳಿಕೆ. ಧಮ್ಮದ ತಾತ್ವಿಕತೆಯನ್ನು ಹೊಸ ಕಾಲದ ವಿದ್ಯಮಾನಗಳೊಂದಿಗೆ ವಿವರಿಸುವ ಪ್ರಯತ್ನವೂ ಇದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...