Homeಮುಖಪುಟಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

- Advertisement -
- Advertisement -

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ.

ಅರ್ಧ ಗಂಟೆಯಲ್ಲಿ ಮುಗಿದು ಹೋಗುವ ಧಮ್ಮಮ್‌, ಹಿಂಸೆಯಾಚೆ ಅವಿತಿರುವ ಪ್ರೀತಿ ಮತ್ತು ಕಾರುಣ್ಯವನ್ನು ಶೋಧಿಸುವ ಪ್ರಯತ್ನ ಮಾಡಿದೆ. ಮನುಷ್ಯನ ಜಾತಿ ಅಹಂಕಾರದ ಕುರಿತು ಗಂಭೀರವಾದ ಚರ್ಚೆಗೆ ಅವಕಾಶ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಧಮ್ಮಮ್‌’ ಸ್ಟ್ರೀಮ್ ಆಗುತ್ತಿರುವ ಹೊತ್ತಿನಲ್ಲಿಯೇ ತಮಿಳುನಾಡಿನ ಶಿವಗಂಗೈ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿಶೇಷ ನ್ಯಾಯಾಲಯವು, ಮೂವರು ದಲಿತರ ತ್ರಿವಳಿ ಹತ್ಯೆಗೆ ಸಂಬಂಧಿಸಿದಂತೆ 27 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸುದ್ದಿ ಬಂತು. ದಲಿತರ ಆರ್ಥಿಕ ಸ್ವಾವಲಂಬನೆಯೇ ಸವರ್ಣೀಯರ ಅಸಹನೆಗೆ ಕಾರಣವಾಗಿತ್ತು. ಅಗಮುಡಿಯಾರ್ (ಪ್ರಬಲವಾದ ತೇವರ್ ಜಾತಿ ಸಮೂಹದ ಒಂದು ಭಾಗ) ಸಮುದಾಯದವರ ಮನೆಯ ಮುಂದೆ ದಲಿತ ಯುವಕನೊಬ್ಬ ಜೋರಾಗಿ ಫೋನಿನಲ್ಲಿ ಮಾತನಾಡಿದ ಎಂಬುದಷ್ಟೇ ಸವರ್ಣೀಯರ ಅಹಂಗೆ ಪೆಟ್ಟು ನೀಡಿತ್ತು. ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಅಗಮುಡಿಯಾರರು ಮೂವರು ದಲಿತರನ್ನು ಕೊಂದು, ಐವರನ್ನು ಭೀಕರವಾಗಿ ಗಾಯಗೊಳಿಸಿದ್ದರು. ಈ ಪ್ರಕರಣದಲ್ಲಿ 27 ಅಪರಾಧಿಗಳಿಗೆ ಇತ್ತೀಚೆಗಷ್ಟೇ ಶಿಕ್ಷೆ ನೀಡಲಾಗಿದೆ. ಪ.ರಂಜಿತ್ ಅವರ ‘ಧಮ್ಮಮ್‌’ ಕೂಡ ಶಿವಗಂಗೈ ಪ್ರಕರಣವನ್ನು ಕೊಂಚ ನೆನಪಿಸುತ್ತದೆ.

ವಿಶಾಲವಾದ ಗದ್ದೆ ಬಯಲು. ಸುತ್ತಲು ಹಸಿರು. ನಡುವೆ ಇನ್ನೂ ನಾಟಿ ಮಾಡದಿರುವ ಗದ್ದೆ. ಅಲ್ಲೊಬ್ಬ ಶೋಷಿತ ಸಮುದಾಯದ ವ್ಯಕ್ತಿ. ಆತನ ಹೆಸರು ‘ಗುಣ’. ಬದುವಿನಲ್ಲಿ ಬುದ್ಧನ ವಿಗ್ರಹ. ಆ ಶೋಷಿತನ ಪುಟ್ಟ ಮಗಳು ‘ಕೇಮ’.

ಬುದ್ಧನ ಮೇಲೆ ಹತ್ತಿ ನಿಂತು ಹಕ್ಕಿಯಂತೆ ಹಾರುತ್ತೇನೆಂಬ ಸೂಚನೆಗಳನ್ನು ನೀಡುತ್ತಿರುವ ಮಗುವಿಗೆ, “ದೇವರ ಮೇಲೆ ನಿಲ್ಲಬಾರದು. ಕೆಳಗಿಳಿ” ಎಂದು ಗುಣ ಎಚ್ಚರಿಸುತ್ತಾನೆ. “ದೇವರೇ ಇಲ್ಲವೆಂದು ಬುದ್ಧ ಹೇಳಿದ್ದಾನೆ. ಆತನನ್ನು ದೇವರು ಅನ್ನುತ್ತೀಯಲ್ಲ” ಎಂದು ಅಪ್ಪನಿಗೆ ಮಗಳು ತಿರುಗೇಟು ನೀಡುತ್ತಾಳೆ. ಅಪ್ಪಾ ಕಕ್ಕಾಬಿಕ್ಕಿ. ಪ್ರಶ್ನಿಸುವ ರೂಪಕವೇ ಬುದ್ಧ. ಹಳೆಯ ಕಾಲಕ್ಕೆ ಜೋತು ಬಿದ್ದಿರುವ ಅಪ್ಪನ ಎದುರು, ಹೊಸದಾರಿಯ ಹುಡುಕಾಟದಲ್ಲಿರುವ ಮಗು!

ಇದನ್ನೂ ಓದಿರಿ: ಡಬ್‌‌ ಸಿನಿಮಾ ‘ಡೊಳ್ಳು’ ಸಿಂಕ್‌ಸೌಂಡ್‌ ವಿಭಾಗದಲ್ಲಿ ಆಯ್ಕೆ: ‘ರಾಷ್ಟ್ರಪ್ರಶಸ್ತಿ ಲಾಬಿ’ ರಾಜಕಾರಣದ ಕಥೆ ಇದು!

ಈ ಶೋಷಿತ ಸಮುದಾಯದ ಹೊಸತಲೆಮಾರಲ್ಲಿ ಅನ್ಯಾಯವನ್ನು ಪ್ರಶ್ನಿಸುವ, ನ್ಯಾಯೋಚಿತವಾಗಿ ಸಿಡಿದೇಳುವ ಗುಣ ಮನೆಮಾಡಿದೆ. ಇದನ್ನು ಇನ್ನೊಂದು ಬದಿಯಲ್ಲಿರುವವರು ತಮ್ಮ ಅಹಂಕಾರಕ್ಕೆ ಪೆಟ್ಟೆಂದು ಭಾವಿಸುತ್ತಾರೆ. ದಲಿತನ ಸಣ್ಣ ಪ್ರತಿರೋಧವೂ ಬಲಾಢ್ಯರಲ್ಲಿ ದೊಡ್ಡ ಅಸಹನೆಯನ್ನು ಹುಟ್ಟಿಹಾಕಿಬಿಡುತ್ತದೆ. ಸವರ್ಣೀಯರು ಎಸಗುವ ದೌರ್ಜನ್ಯದಲ್ಲಿ ನಿತ್ಯವೂ ನಲುಗುತ್ತಿರುವ ದಲಿತ ಎಲ್ಲ ಹಿಂಸೆಗಳಾಚೆಗೆ ಜಿಗಿದು ಪ್ರೀತಿ, ಮಮತೆ, ಕಾರುಣ್ಯವನ್ನು ಶೋಷಕ ಸಮುದಾಯಕ್ಕೂ ತೋರುವ ಗುಣವೇ ಬೌದ್ಧತತ್ವ.

ಮತ್ತೆ ಮತ್ತೆ ಕಿರಿಕಿರಿ ಮಾಡುತ್ತಲೇ ಇರುವ ಬಲಾಢ್ಯ ಜಾತಿಯ ಸೇಕರ, ದಲಿತನಾದ ಗುಣನನ್ನು ಕಿಚಾಯಿಸುತ್ತಲೇ ಇದ್ದಾನೆ.‌ ದಲಿತನೊಬ್ಬ ಭೂಮಿ ಉಳುಮೆ ಮಾಡುತ್ತಿರುವುದೇ ಈ ಬಲಾಢ್ಯನ ಅಸಹನೆಯ ಮೂಲ ಎಂದು ಬಿಡಿಸಿ ಹೇಳಬೇಕಿಲ್ಲ. ದಲಿತನ ಪುಟ್ಟ ಮಗಳು ಕೇಮ ಆ ಗದ್ದೆಯ ಬದುವಿಯಲ್ಲಿ ಆಟವಾಡುತ್ತಿದ್ದಾಳೆ. ಯಾವುದೇ ಹಿಂಸೆ ನೀಡುವ ಗುರಿ ಇಲ್ಲವಾದರೂ ಆ ಮೀನನ್ನು ಹಿಡಿಯುವ ವ್ಯರ್ಥ ಪ್ರಯತ್ನದಲ್ಲಿ ಆ ಮಗು ತೊಡಗಿದೆ.

ಕಾಲು ಕೆರೆದು ಜಗಳ ಮಾಡಲೆತ್ನಿಸುತ್ತಿರುವ ಸೇಕರ, ಬದುವಿನಲ್ಲಿ ನಡೆದು ಬರುವಾಗ ಕೇಮ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾಳೆ. ಕಿರಿದಾದ ಬದು. ಪಕ್ಕಕ್ಕೆ ಹೆಜ್ಜೆ ಇಟ್ಟರೆ ಕೆಸರು. ತಾನು ಮೊದಲು ನಡೆದು ಬಂದ ಕಾರಣ, ನನಗೆ ಅತ್ತ ಹೋಗಲು ದಾರಿ ನೀಡಬೇಕು ಎಂದು ಕೇಮ ವಾದಿಸುತ್ತಾಳೆ. ಇದನ್ನು ಸಹಿಸದ ಸೇಕರ, ಹಿಂದೆ ಹೋಗುವಂತೆ ಮಗುವನ್ನು ಗದರುತ್ತಾನೆ. ಗುಣ ಕೂಡ ಇದನ್ನು ಗಮನಿಸುತ್ತಾ, ಮುಂದಾಗುವ ಅನಾಹುತವನ್ನು ಊಹಿಸಿ, ಹಳೆಯ ತಲೆಮಾರಿನ ವರಸೆಯನ್ನೂ ತೋರುತ್ತಾ, ‘ಕೇಮ ಬದಿಗೆ ಸರಿಯಮ್ಮ’ ಎನ್ನುತ್ತಾನೆ. ಆದರೆ ಮಗು, “ನಾನು ಮೊದಲು ಬಂದಿದ್ದು, ನಾನೇಕೆ ಜಾಗ” ಬಿಡಲಿ ಎಂದು ನ್ಯಾಯೋಚಿತವಾಗಿ ಪ್ರಶ್ನಿಸುತ್ತದೆ.

ಸೇಕರ ಮುಂದೆ ನುಗ್ಗಲು ಬಂದಾಗ, ಆತನನ್ನು ಗದ್ದೆಯ ಕೆಸರಿಗೆ ನೂಕಿ ಕೇಮ ಮುಂದೆ ಸಾಗುತ್ತಾಳೆ. ಆತನ ಬಿಳಿ ಬಟ್ಟೆಗೆ ಕೆಸರು ಮೆತ್ತಿಕೊಳ್ಳುತ್ತದೆ. ಇದನ್ನೆಲ್ಲ ನೋಡುತ್ತಿದ್ದ ಗುಣ, ಮಗಳನ್ನು ಕಾಪಾಡಲು ಬಂದಾಗ ಆಕಸ್ಮಿಕವಾಗಿ ಬಲಾಢ್ಯನ ರಕ್ತ ಹರಿಯುತ್ತದೆ. ಸೇಕರನ ಮನೆಗೆ ವಿಷಯ ತಿಳಿದು ಆತನ ತಂದೆ, ಕಿರಿಯ ಮಗ ಹಾಗೂ ಹಿರಿಯ ಮಗ ಅಲ್ಲಿಗೆ ಧಾವಿಸುತ್ತಾರೆ.

ಸಾವು, ಬದುಕಿನ ನಡುವೆ ಸೇಕರ ಹೊರಳಾಡುತ್ತಿದ್ದರೂ ಆತನನ್ನು ರಕ್ಷಿಸದೆ ಗುಣನ ಹೆಣ ಉರುಳಿಸಬೇಕೆಂಬುದು ಹಪಾಹಪಿಸುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲೆತ್ನಿಸುವ ದಲಿತ ಅನಿವಾರ್ಯವಾಗಿ ಮಿಕ್ಕವರನ್ನೂ ಗಾಯಗೊಳಿಸಿ ಬಚಾವಾಗುತ್ತಾನೆ. ಆದರೆ ಕೇಮ ತನ್ನ ಅಪ್ಪನಲ್ಲಿ, ಸಾವು ಬದುಕಿನ ನಡುವೆ ಹೊರಳಾಡುತ್ತಿರುವ ಸೇಕರನ್ನು ಆಸ್ಪತ್ರೆಗೆ ಕರೆದೊಯ್ಯೋಣ ಎನ್ನುತ್ತದೆ. ಇದೇ ಕಾರುಣ್ಯ. ಶೋಷಿತ ಸಮುದಾಯದ ಆದಿಮ ಗುಣವದು.

ಇದನ್ನೂ ಓದಿರಿ: ವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

ಯಾರನ್ನೂ ನೋಯಿಸದ, ಅನ್ಯಾಯವನ್ನು ಪ್ರಶ್ನಿಸಿದ ಮಾತ್ರಕ್ಕೆ ದಲಿತ ಸಮುದಾಯ ತಾನೇ ನೋಯುವ ಸಂಕಟ ಇದೆಯಲ್ಲ- ಅದಕ್ಕೆ ಶತಶತಮಾನಗಳ ಚರಿತ್ರೆ ಇದೆ. ಇದರ ಜೊತೆಗೆ ಶೋಷಕ ಸಮುದಾಯದ ಆತ್ಮವಿಮರ್ಶೆಯ ಅಗತ್ಯವನ್ನು ಇಲ್ಲಿ ತೆರೆದಿರುವ ಪ್ರಯತ್ನವನ್ನು ಪ.ರಂಜಿತ್ ಮಾಡಿದ್ದಾರೆ. ಗುದ್ದಾಡಿ ಹೈರಾಣಾಗಿರುವ ಗುಣನ ಮೇಲೆ ಮುಗಿ ಬೀಳಲು ಹೋಗುವ ಸಹೋದರನನ್ನು ಇನ್ನೊಬ್ಬ ಸಹೋದರ ತಡೆಯುವುದು ಕೂಡ ಮನಃ ಪರಿವರ್ತನೆಯ ದಾರಿಯೂ ಹೌದು.

ಶೋಷಿತನ ಕಾರುಣ್ಯವನ್ನು, ಶೋಷಕನ ಮನಃಪರಿವರ್ತನೆಯನ್ನು ರೂಪಕವಾಗಿ ತೆರೆದಿರುವ ಪ್ರಯತ್ನವನ್ನು ಪ.ರಂಜಿತ್ ಮಾಡಿರುವುದು ‘ಧಮ್ಮಮ್‌’ನ ಹೆಗ್ಗಳಿಕೆ. ಧಮ್ಮದ ತಾತ್ವಿಕತೆಯನ್ನು ಹೊಸ ಕಾಲದ ವಿದ್ಯಮಾನಗಳೊಂದಿಗೆ ವಿವರಿಸುವ ಪ್ರಯತ್ನವೂ ಇದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....