Homeರಾಜಕೀಯಕಾಂಗ್ರೆಸ್ಸುವೆ, ಜೇಡಿಯೆಸ್ಸುವೆ ಸೇರಿ ಮಾಡ್ಕ್ಯಂಡಿರೋ ಸಮ್ಮಿಸ್ರ ಸರ್ಕಾರ

ಕಾಂಗ್ರೆಸ್ಸುವೆ, ಜೇಡಿಯೆಸ್ಸುವೆ ಸೇರಿ ಮಾಡ್ಕ್ಯಂಡಿರೋ ಸಮ್ಮಿಸ್ರ ಸರ್ಕಾರ

- Advertisement -
- Advertisement -

`ಕಾಂಗ್ರೆಸ್ಸುವೆ, ಜೇಡಿಯೆಸ್ಸುವೆ ಸೇರಿ ಮಾಡ್ಕ್ಯಂಡಿರೋ ಸಮ್ಮಿಸ್ರ ಸರ್ಕಾರುದೊಳಗೆ ಶ್ಯಾನೆ ನ್ಯೆಲಬಾಂಬುಗಳು ಅವೆ. ಅವು ಯಾವಾಗ ಬೇಕಾದ್ರು ಢಮೀಲ್ ಅನಬೈದು. ಅವು ಢಂ ಅಂದೇಟಿಗೆ ಈ ಸರ್ಕಾರ ಬಿದ್ದೋಯ್ತದೆ ನೋಡ್ಕಂಡಿರಿ. ನಾ ದಿಟವುನೇ ಹ್ಯೇಳ್ತೀನಿ, ಸುಳ್ಳು ಪಳ್ಳು ನಂಗೆ ಬರಾಕಿಲ್ಲ. ನಾವು ಈ ಎಲ್ಡೂ ಪಕ್ಸುದ ಯಾರ್ನೂವೆ ಸಂಪರ್ಕಿಸಿಲ್ಲ. ಆದ್ರುವೇ, ಲೋಕ್ಸಭೆ ಎಲೆಕ್ಷನ್ ಒಳೀಕೆ ಈ ಗೋರ್ಮೆಂಟ್ ಬಿದ್ದೋಗದ್ರಲ್ಲಿ ಡೌಟೇ ಇಲ್ಲಾ ಕಣ್ರ. ಯಾಕಂದ್ರೆ ನ್ಯೆಲಬಾಂಬುಗಳು ಅಷ್ಟು ಸ್ಟ್ರಾಂಗಾಗವೆ’

– ಯೆಮ್ಪಿ ರೇಣುಕಾಚಾರ್ಯ, ನರ್ಸ್ ವೃತ್ತಿಗೆ ಅಪಾರ ಗೌರವ ಕೊಡೊ ಬಿಎಸ್‍ವೈ ಮಾನಸಪುತ್ರ

*****

`
ನೋಡಿ, ನಾವು ಈರಸೈವ ಲಿಂಗಾಯುತ್ರು ರಾಜಕೀಯುದಾಗೆ ಶ್ಯಾನೆ ವೀಕ್ ಆಗ್ತಾ ಇದೀವಿ. ನಾವ್ಯೆಲ್ರುವೆ ಒಗ್ಗಟ್ಟಾಗಬ್ಯೇಕಿದೆ. ಬ್ಯಾರೆಬ್ಯಾರೆ ಸಮುದಾಯುದವ್ರು, ಅವುರ ರಾಜಕೀಯ ನಾಯುಕ್ರ ಬಗ್ಗೆ `ನಮ್ಮವೃ’ ಅಂತ ಎದೆಯ ತಟಿಗಂಡು ಹ್ಯೇಳ್ಕಬೇಕಾರೆ, ನಾವ್ಯಾಕೆ ಯಡ್ಯೋರಪ್ನೋರನ್ನ ನಂ ಸಮಾಜುದ ಧ್ಯೀಮಂತ ನಾಯುಕ ಅಂತ ಹ್ಯೇಳ್ಕಬಾರುದು. ಅದ್ರಲ್ಲಿ ಏನೂ ತ್ಯೆಪ್ಪಿಲ್ಲ. ಕಳುದ ಯೆಲೆಕ್ಸೆನ್ನಾಗೆ ವರುಣಾ ಕ್ಸೇತ್ರುದಿಂದ ಯಡ್ಯೋರಪ್ನೋರ ಮಗ ಇಜಯೇಂದ್ರ ಕಂಟೆಸ್ಟ್ ಮಾಡಿದ್ದ್ರೆ, ಆ ಭಾಗುದ ಐದಾರು ಕ್ಸೇತೃಗುಳಲ್ಲಿ ಬೀಜೇಪಿ ಗ್ಯೆಲ್ತಿತ್ತು, ಸುಲುಬವಾಗಿ ಸರ್ಕಾರನೂ ಮಾಡ್ತಿತ್ತು. ಈ ಮಾತ್ನ ನಾನು ಹ್ಯೇಳ್ತಿಲ್ಲ, ಜ್ಯನ ನನ್ನತ್ರ ಹ್ಯೇಳ್ತಾ ಅವುರೆ..’
– ಸ್ರೀ ಸ್ರೀ ಸಿದ್ದಲಿಂಗ ಸ್ವಾಮಿಗಳು, ನಡೆದಾಡೊ ದೇವರಿರುವ ತುಮಕೂರು ಮಠದ ಅಧ್ಯಕ್ಷರು

*****

`ದೇಖೋ ಬಾಯಿಸಾಬ್, ಈ ಅತ್ಯಾಚಾರ ಅನ್ನೋದು ಏನದೆ, ಅದು ನಂ ಸಮಾಜುದ ಸಹಜ ಸೋಸಿಯಲ್ ಪ್ರದೂಷಣೆ ಅದೆ. ಅದುನ್ನ ತಡಿಯೋಕೆ ಯಾರಿಂದ್ಲೂ ಸಾದ್ಯ ಇಲ್ರ. ನಮ್ಮಂತ ನರಮನುಸ್ಯರ ಕಥೆಯ ಬ್ಯಿಡಿ. ಸಾಕ್ಸಾತ್ ಸ್ರೀ ರಾಮಚಂದ್ರ ಪ್ರಭುವೇ ಮತ್ತೆ ಹ್ವುಟ್ಟಿ ಬಂದ್ರೂ, ಆತುನಿಗೂ ಇದುನ್ನ ತಡಿಯೋಕೆ ಆಗಕ್ಕಿಲ್ಲ ಅಂತೀನಿ’
– ಸುರೇಂದ್ರ ಸಿಂಗ್, ರಾಮರಾಜ್ಯದ ಅಂಬಾಸಿಡರ್ರು ಯೋಗಿ ಆದಿತ್ಯನಾಥರ ಬೆಟಾಲಿಯನ್‍ನ ಬಿಜೆಪಿ ಶಾಸಕ

*****

`ರೈತೃ ಆತುಮಹತ್ಯೆಯ ಮಾಡ್ಕ್ಯಂತಿರೋದು ನಿಜ. ಆದುರೆ, ಹಿಂಗೆ ರೈತೃ ಸಾಯ್ತಾ ಇರೋದು ಇದೇ ಮೊದುಲುನೇ ಕಿತಾ ಏನು ಅಲ್ವಲ್ಲಾ. ಅದು ಹಳೇ ಸಮಸ್ಯೆ. ಶ್ಯಾನೆ ವರ್ಸುಗಳಿಂದ ಅವುರು ಆತುಮಹತ್ಯೆಯ ಮಾಡ್ಕ್ಯಂತಲೇ ಬಂದವುರೆ. ಅದುಕ್ಕೆ ನಮ್ಮುನ್ನ್ಯಾಕೆ ದೂರುತೀರಿ. ಆಕ್ಚುಲೀ, ನಂ ಮ್ವೋದಿಯವುರ ಸರ್ಕಾರ ಬಂದ ಮ್ಯಾಲೆ ರೈತುರ ಉದ್ದಾರಕ್ಕೆ ಅಂತ ಬೆಂಬುಲ ಬೆಲೆಯ ಜ್ಯಾಸ್ತಿ ಮಾಡ್ಯವುರೆ, ಕೃಷಿ ಸಾಲ ಮನ್ನಾ ಮಾಡ್ಯವುರೆ (?), ಬೆಳೆ ಇಮೆಯ ಮಾಡಿಕೊಟ್ಟವುರೆ. ಆದ್ರೂ ರೈತೃ ಸಾಯ್ತಾಲೆ ಅವುರೆ ಅಂದ್ರೆ, ಅದುಕ್ಕೆ ಬ್ಯಾರೇದೆ ಕಾರುಣ ಇರ್ಬೇಕು..’
– ಸುರೇಶ್ ಪ್ರಭು, ಹೊಲದಿಂದ ಹೊಲಕ್ಕೆ ಟ್ರಿಪ್ ಮಾಡುತ್ತಿರುವ ರೈತಬಂಧು ಮೋದಿಯವರ ಸಂಪುಟದ ಕಾಮರ್ಸ್ ಮಂತ್ರಿ

*****

`ಈ ಬೀಜೇಪಿಯವುರು ಅಮಾಯುಕ ಹುಡುಗ್ರನ್ನ ಬಲಿಕ್ವೊಟ್ಟು, ಬಾಬುರಿ ಮಸೀದಿಯ ಕ್ಯೆಡುವಿ ಹಾಕಿದ್ರು. ಭಗುವಂತ ರಾಮುನ ಹೆಸುರಲ್ಲಿ ರಾಜಕೀಯವ ಮಾಡಿ, ಅಧಿಕಾರುವ ಪಡಕಂಡ್ರು. ಆದ್ರುವೆ ರಾಮಮಂದಿರುವ ಕಟ್ಟುಲೇ ಇಲ್ಲ. ಪರ್ದಾನಿ ಮ್ವೋದಿ ಸಾಹೇಬರು ಅಂಡ್ ಎಗುಸ್ಟ್ರಾ ಬೀಜೇಪಿ ಲೀಡ್ರುಗಳಿಗೆ ದಿಟವಾಗುಲೂ ಧಂ ಇದ್ದ್ರೆ, ಅಯೋಧ್ಯನಾಗೆ ಮೊದಲು ರಾಮಮಂದಿರುಕ್ಕೆ ಅಡಿಪಾಯುವ ಹಾಕಿ, ಆಮ್ಯಾಕೆ ಎಂಪಿ ಯೆಲೆಕ್ಸನ್ ಪ್ರಚಾರುಕ್ಕೆ ಇಳೀಲಿ. ಈ ಬೀಜೇಪಿನೋರು ಮ್ವೋದಿ ಹೆಸುರಲ್ಲಿ ಕತ್ತೆಯ ನಿಲ್ಲಿಸಿದ್ರೂ, ಗ್ಯೆಲ್ಲುತ್ತೆ ಅನ್ಕೊಂಡು, ಟಿಕೇಟುಗಳ ಮಾರಾಟ ಮಾಡ್ತಾ ಅವುರೆ. ನಾಚ್ಯಿಕೆ ಆಗ್ಬೇಕು…’
– ಎಸ್ಕೆ ಬೆಳ್ಳುಬ್ಬಿ, ಜೆಡಿಎಸ್ ನಿರಾಶ್ರಿತ ಶಿಬಿರದಲ್ಲಿ ನಿಟ್ಟುಸಿರು ಬಿಡುತ್ತಿರುವ ಮಾಜಿ ಬಿಜೆಪಿಗ

*****

`ದ್ಯೇವರು ಇದಾನೆ ಅನ್ನೋದಕ್ಕೆ ಯಾವನಾರ ಒಂದ್ ಸಾಕ್ಷಿಯ ನೀಡ್ಲಪ್ಪಾ, ಆ ಕೂಡ್ಲೇ ನಾನು ನನ್ನ ಸ್ಥಾನುಕ್ಕೆ ರಾಜೀನಾಮೆಯ ಕೊಟ್ಟುಬುಡ್ತೀನಿ. ದ್ಯೇವುರ ಪಾಸ್‍ಪೋರ್ಟ್ ಸೈಜಿನ ಲೈವ್‍ಫೋಟೊ, ಅಥುವಾ ಮನುಸ್ಯರ ಜ್ವತೆ ಆತ ತ್ಯೆಗಿಸಿಕೊಂಡಿರೊ ಸೆಲ್ಫಿ, ಅಥುವಾ ನಾನು ದ್ಯೇವುರ ಕೂಟೆ ಮಾತಾಡಿದೀನಿ ಅನ್ನೋದುಕ್ಕೆ ಯಾರಾದ್ರು ಪುರಾವೆ ತಂದ್ರೆ ನನ್ನ ರಾಜೀನಾಮೆ ಫಿಕ್ಸು…’
– ರೊಡ್ರಿಗೊ ಡುಟೆರ್ಟಾ, ವಿಲಕ್ಷಣ ವ್ಯಕ್ತಿತ್ವದ ಕ್ರೂರ ಸ್ವಭಾವದ ಫಿಲಿಫೈನ್ಸ್ ಅಧ್ಯಕ್ಷ

*****

`ದ್ಯಾವೇಗೋಡ್ರು ಜಾತುಕವ ಶ್ಯಾನೆ ನಂಬುತಾರೆ. ಅವುರದು ಮತ್ತು ರೇವಣ್ಣುಂದೂ ಜ್ಯಾತುಕ ಹ್ವೊಂದಾಣಿಕೆ ಆಯ್ತವೆ. ಆದ್ರೆ ಕುಮಾರ್ಸೋಮಿಗಳುದ್ದೇ ಒಸಿ ಇಂಡಿಪೆಂಡೆಂಟು. ಅಟ್ಟು ದಿ ಸೇಮ್ ಠೇಮ್, ದ್ಯಾವೇಗೋಡ್ರು ಜಾತುಕವೂ ಸಿದ್ರಾಮಯ್ಯುನ ಜ್ಯಾತುಕವೂ ತಾಳೆ ಆಗ್ತವೆ. ಅದುಕ್ಕೆ ಅವುರಿಬ್ರು ಒಂದಾದಾಗ ಅಧಿಕಾರ ಸಿಕ್ತದೆ, ದೂರದೂರ ಆದ ಕೂಡ್ಲೆ ಅಧಿಕಾರುವೂ ಕೈಬಿಟ್ಟು ಹೋಯ್ತದೆ. ಈ ಜ್ಯಾತುಕ ಹ್ಯೇಳೋರ್ದೂ ಒಂದ್ ದ್ವೊಡ್ಡ್ ಲಾಬಿ ಐತಿ ನೋಡ್ರಿ ಮತಾ….. ಬೈದುಬೈ ಜ್ಯಾತುಕವ ನೋಡಿಯೇ ನಾವು ಟಿಕೇಟ್ ಕೊಟ್ಟಿದ್ದು ಬ್ಯಾರೇ ಮಾತು ಬಿಡ್ರಿ…’
– ಬಸವರಾಜ ಬೊಮ್ಮಾಯಿ, ಯಡ್ಯೂರಪ್ಪ ಸಿಎಂಗಿರಿಯಲ್ಲಿ ನೀರಾವರಿ ಮಂತ್ರಿಯಾಗೊ ಕನವರಿಕೆಯಲ್ಲಿರುವ ಕನಸುಗಾರ

*****

`ರೈತೃ ತಮ್ಮತಮ್ಮ ಹೊಲಗುಳು, ಗೆದ್ದೆಗುಳಲ್ಲಿ ವೇದ ಮಂತೃಗುಳನ್ನ ಹ್ಯೇಳಿಕಂಡು, `ಬ್ರಹ್ಮಾಂಡ ಬ್ಯಾಸಾಯ’ವ ಅಳುವಡಿಸಿಕೊಂಡ್ರೆ, ಭತ್ತದ ಫಸಲು ವೈನಾಗಿ ಬತ್ತದೆ. ಆದಾಯುವೂ ಹೆಚ್ಚಾಯ್ತದೆ. ಬೈದುಬೈ, ರೈತುರ ಇಳುವರಿಗೆ ಜ್ಯಾಸ್ತಿ ಮಾಡೊ ಸಲುವಾಗೇ ನಂ ಬೀಜೇಪಿ ಸರ್ಕಾರ ಗೋವಾದಗೆ `ಶಿವಯೋಗ್ ಬ್ರಹ್ಮಾಂಡ ಬ್ಯಾಸಾಯ’ ಅನ್ನೋ ಯೋಜುನೆಯ ಜ್ಯಾರಿಗೆ ತಂದದೆ. ನೋಡ್ತಾ ಇರಿ, ಇನ್ನು ಮ್ಯಾಲೆ ರೈತೃ ಹ್ಯೆಂಗೆ ಉದ್ದಾರ ಆಯ್ತಾರೆ ಅಂತ’
– ವಿಜಯ್ ಸರ್ದೇಸಾಯಿ, ಟೂರಿಸಂ ಆದಾಯವಿರುವ ಗೋವಾ ರಾಜ್ಯದ ಬಿಜೆಪಿ ಕೃಷಿ ಮಂತ್ರಿ

*****

`ಬರಾಕಿಲ್ಲ, ಬರಾಕಿಲ್ಲ, ಬರಾಕಿಲ್ಲ.. ನಾನು ಸತ್ರುವೇ ಇಂಡಿಯಾಕ್ಕೆ ಬರಾಕಿಲ್ಲ. ನನಿಗೊತ್ತು ನನ್ನ ಕರ್ಕಂಡ್ಹೋಗಿ, ನೋಡಿ ಮಲ್ಯನ್ನ ಹಿಡ್ಕ್ಯಂಬಂದೀವಿ ಅಂತ ಜನುಕ್ಕೆ ತೋರ್ಸಿ ವೋಟು ಹಾಕಿಸಿಗಣಕ್ಕೆ ಪ್ಲ್ಯಾನು ಮಾಡ್ಯವುರೆ. ಬೇಕಾರೆ ಲಂಡನ್ನಾಗಿರೊ ನನ್ನ ಆಸ್ತಿಗುಳ ವಸ ಪಡಿಸ್ಕ್ಯಣಲಿ. ನನ್ನ ಅಭ್ಯಂತುರುವೆ ಇಲ್ಲ. ಆದ್ರೆ ಅವ್ಯಾವು ನನ್ನ ಹೆಸುರಿನ್ಯಾಗೆ ಇಲ್ಲ… ಕಿಲಕಿಲಾ…
– ವಿಜಯ್ ಮಲ್ಯ, ಹೆಂಡದ ದೊರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...