Homeಮುಖಪುಟಧರ್ಮಾಧಾರಿತ ಪೌರತ್ವ: ಇಂದಿನ ಭಾರತದ ಬಗ್ಗೆ 70 ವರ್ಷಗಳ ಹಿಂದೆಯೇ ಚರ್ಚಿಸಿದ್ದ ಸಂವಿಧಾನ ಸಭೆ

ಧರ್ಮಾಧಾರಿತ ಪೌರತ್ವ: ಇಂದಿನ ಭಾರತದ ಬಗ್ಗೆ 70 ವರ್ಷಗಳ ಹಿಂದೆಯೇ ಚರ್ಚಿಸಿದ್ದ ಸಂವಿಧಾನ ಸಭೆ

ಭಾರತೀಯ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಇಂದು ವ್ಯಕ್ತಪಡಿಸಲಾಗುತ್ತಿರುವ ಅಭಿಪ್ರಾಯಗಳನ್ನು ಸಂವಿಧಾನ ಸಭೆಯು 70 ವರ್ಷಗಳ ಹಿಂದೆಯೇ ಚರ್ಚಿಸಿತ್ತು.

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನವಂಬರ್ 1948ರಲ್ಲಿ ಸದಸ್ಯ ಝಡ್.ಎಚ್. ಲಾರಿ ಅವರು ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಸಂವಿಧಾನ ಸಭೆಯಲ್ಲಿ ತನ್ನ ವಾದವನ್ನು ಮಂಡಿಸುತ್ತಿದ್ದಾಗ ಅವರನ್ನು ಮತ್ತೆಮತ್ತೆ ಅಣಕಿಸಲಾಗಿತ್ತು. ಯುನೈಟೆಡ್ ಪ್ರಾವಿನ್ಸಸ್ (ಬಹುತೇಕ ಈಗಿನ ಉತ್ತರ ಪ್ರದೇಶ)ನ ಈ ಮುಸ್ಲಿಮ್ ನಾಯಕನಲ್ಲಿ ಕೆಲವು ಸದಸ್ಯರು, ಪಾಕಿಸ್ತಾನದಲ್ಲಿ “ನಿಮ್ಮ ನಾಯಕರು” ಅಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಅವರ ಭಾರತೀಯ ಪೌರತ್ವವನ್ನೇ ಪ್ರಶ್ನೆ ಮಾಡಿದ್ದರು.

“ನಾನು ನನ್ನ ಹಕ್ಕುಗಳನ್ನು ಪಾಕಿಸ್ತಾನಕ್ಕೆ ಅಡವು ಇಟ್ಟಿಲ್ಲ. ಪಾಕಿಸ್ತಾನ ಏನು ಮಾಡುತ್ತದೆ, ಏನು ಮಾಡುವುದಿಲ್ಲ ಎಂಬುದು ನನಗೆ ಸಂಬಂಧಿಸಿದ ವಿಷಯವಲ್ಲ” ಎಂದು ಅವರು ಅಂತವರಿಗೆ ಸರಿಯಾದ ಉತ್ತರವನ್ನೇ ನೀಡಿದ್ದರು. “ಭಾರತೀಯ ಮುಸ್ಲಿಮರು ಈ ಮಣ್ಣಿನ ಮಕ್ಕಳು. ಆದುದರಿಂದ ನಾವು ಭಾರತೀಯ ಪೌರರ ಹಕ್ಕುಗಳನ್ನು ಕೇಳುತ್ತಿದ್ದೇವೆ” ಎಂದು ವಕೀಲರಾದ ಅವರು ಹೇಳಿದ್ದರು.

ಇದೀಗ ಏಳು ದಶಕಗಳ ನಂತರ ಮುಸ್ಲಿಂ ಸಮುದಾಯವನ್ನು ಅದೇ ರೀತಿಯ, ಅಥವಾ ಅದಕ್ಕಿಂತ ಹೆಚ್ಚಿನ ಸಾರ್ವಜನಿಕ ಅಣಕಕ್ಕೆ ಗುರಿಪಡಿಸಲಾಗುತ್ತಿದೆ. ದೇಶದ ಪೌರತ್ವ ಕಾಯಿದೆಗೆ ಧಾರ್ಮಿಕ ಮಾನದಂಡ ನೀಡುವ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ಎನ್‌ಪಿಎ ಮತ್ತು ಎನ್‌ಆರ್‌ಸಿ ವಿರುದ್ಧ ಲಕ್ಷಾಂತರ ಭಾರತೀಯರು ಬೀದಿಗಿಳಿದಿರುವ ಹೊತ್ತಿನಲ್ಲಿ ಅಂದು ಸಂವಿಧಾನ ಸಭೆಯಲ್ಲಿ ಎತ್ತಲಾಗಿದ್ದ ಕೆಲವು ಪ್ರಶ್ನೆಗಳನ್ನೇ ಈಗ ಎತ್ತಲಾಗುತ್ತಿದೆ.

ಸಂವಿಧಾನದ ಕುರಿತು ಹಲವಾರು ಭಯಗಳು, ಅಸಮ್ಮತಿಗಳು ಮತ್ತು ಟೀಕೆಗಳು ಇದ್ದ ಹೊರತಾಗಿಯೂ, ಭಾರತದ ಭವಿಷ್ಯ ಏನಾಗಿರಬೇಕು ಎಂಬದಕ್ಕಿಂತ ಹೆಚ್ಚಾಗಿ, ಏನಾಗಿರಬಾರದು ಎಂಬ ವಿವೇಕ ಅಂದು ಜಯಿಸಿತ್ತು. ಆಗಲೂ ಭಾರತವನ್ನು ಬಹುಸಂಖ್ಯಾತರ ದೇಶವನ್ನಾಗಿ ಮಾಡುವುದರ ಪರವಾಗಿ ಬೊಬ್ಬೆಗಳು ಇದ್ದರೂ, ಅದನ್ನು ಜಾತ್ಯಾತೀತ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು ಎಂದು ಅಂಬೇಡ್ಕರ್ ಮತ್ತು ನೆಹರೂ ನೇತೃತ್ವದಲ್ಲಿ ಸಂವಿಧಾನ ಸಭೆಯ ಸದಸ್ಯರು ನಿರ್ಣಾಯಕವಾಗಿ ನಿರ್ಧರಿಸಿದ್ದರು. ಆಗ ನಡೆದ ಚರ್ಚೆಗಳು ಇಂದಿನ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲು ನೆರವಾಗಬಹುದು.

ರಕ್ತವೇ? ಹುಟ್ಟೇ?

ಸಂವಿಧಾನ ಸಭೆಯಲ್ಲಿ ನಡೆದ ಅತ್ಯಂತ ಕಠಿಣವಾದ ಕದನವು, ಭಾರತದ ಪೌರತ್ವವನ್ನು ಯಾವ ಆಧಾರದಲ್ಲಿ ನಿರ್ಣಯಿಸಬೇಕು ಎಂಬುದಾಗಿತ್ತು. ಇದು ಲೆಕ್ಸ್ ಸೋಲಿ (lex soli) ಅಂದರೆ, ಜನ್ಮಸ್ಥಾನದ ಕಾನೂನು ಮತ್ತು ಲೆಕ್ಸ್ ಸಾಂಗ್ವಿನಿಸ್ (lex sanguinis) ಅಂದರೆ, ರಕ್ತ ಸಂಬಂಧದ ಕಾನೂನುಗಳೆರಡರ ಪ್ರಕಾರವೂ ಪೌರತ್ವವು ನಿರ್ಧಾರವಾಗುತ್ತದೆ ಎಂದು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್ ವಾದಿಸಿದ್ದರು. ಸಂವಿಧಾನದಲ್ಲಿರುವ “ನಾವು ಜನರು” ಎಂಬ ಉಲ್ಲೇಖದಂತೆ ದೇಶದಲ್ಲಿ ಹುಟ್ಟಿದ ಎಲ್ಲರನ್ನೂ ಯಾವುದೇ ಧರ್ಮದ ಹಂಗಿಲ್ಲದೆ ಭಾರತೀಯ ಪ್ರಜೆಗಳೆಂದು ಪರಿಗಣಿಸಬೇಕು ಎಂದು ಹಲವರು ವಾದಿಸಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ ಎಲ್ಲಿಯೇ ಹುಟ್ಟಿದ್ದರೂ ರಕ್ತಸಂಬಂಧ, ನಿರ್ದಿಷ್ಟ ಜನಾಂಗಕ್ಕೆ ಸೇರಿದವರಿಗೆ ಪೌರತ್ವ ನೀಡಬೇಕು ಎಂದು ಕೆಲವರು ವಾದಿಸಿದ್ದರು. ಇಂದು ಇದೇ ವಾದ ಸಿಎಎ ಮೂಲಕ ಮತ್ತೆ ತಲೆಯೆತ್ತಿದೆ. ಅದರ ಪ್ರಕಾರ ನಿರ್ದಿಷ್ಟ ಜನಾಂಗಕ್ಕೆ, ಅಥವಾ ಧರ್ಮಕ್ಕೆ ಸೇರದ ಜನರು (ಮುಖ್ಯವಾಗಿ ಮುಸ್ಲಿಮರು) ಸಮಾನ ಹಕ್ಕುಗಳನ್ನು ಹೊಂದಿಲ್ಲ ಮತ್ತು ಅವರನ್ನು ನೈಸರ್ಗಿಕ ಪೌರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಸಿಎಎ ಬೆಂಬಲಿಗರ ವಾದವಾಗಿದೆ.

ಜಾತ್ಯಾತೀತತೆ ಅಪರಾಧವೇ?

ಧರ್ಮಾಧರಿತ ಪೌರತ್ವವನ್ನು ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರೂ ಮತ್ತು ಹಲವಾರು ಇತರರು ವಿರೋಧಿಸಿದ್ದರು. ಆದರೆ ಕೆಲವರು- ನಾಝಿ ಜರ್ಮನಿಯ ತತ್ವಗಳು ಮತ್ತು ಫ್ಯಾಸಿಸ್ಟ್ ಇಟಲಿಯ ತತ್ವಗಳಿಂದ ಪ್ರಭಾವಿತರಾಗಿ ಅವುಗಳನ್ನು ಮೆಚ್ಚಿ ಅನುಸರಿಸುತ್ತಿದ್ದ ಕೆಲವು ಸಂಘಟನೆಗಳಿಗೆ ಸೇರಿದವರೇ ಧರ್ಮ ಮತ್ತು ಪೌರತ್ವಗಳ ನಡುವೆ ಸಂಬಂಧ ಕಲ್ಪಿಸಲು ಪಟ್ಟುಹಿಡಿದಿದ್ದರು. (ಅವರೇ ಇಂದಿಲ್ಲಿ ಅಧಿಕಾರ ಹಿಡಿದಿದ್ದಾರೆ.)  ಇವರಲ್ಲಿ ಪ್ರಮುಖರೆಂದರೆ ಪಿ. ಎಸ್. ದೇಶ್‌ಮುಖ್. ಅವರು ಆಗಸ್ಟ್ 11, 1949ರಂದು ಮಾಡಿದ ಭಾಷಣದ ಸಾರಾಂಶ ಕೆಳಗಿದೆ:

ಡಾ. ಬಿ.ಆರ್.  ಅಂಬೇಡ್ಕರ್ ಅವರ ಪೌರತ್ವ ಕುರಿತ ವ್ಯಾಖ್ಯಾನವು  ಭಾರತೀಯ ಪೌರತ್ವವನ್ನು “ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಪೌರತ್ವ”ವನ್ನಾಗಿ ಮಾಡುವುದೆಂದು ದೇಶ್‌ಮುಖ್ ಅವರು ಭಾವಿಸಿದ್ದರು. ಹುಟ್ಟಿನಿಂದ ಪೌರತ್ವ ನೀಡುವ ಕುರಿತು ಅವರಿಗೆ ಅಸಮಾಧಾನವಿತ್ತು. ಕರಡು ವಿಧಿಯನ್ನು ಸ್ವೀಕರಿಸಿದರೆ ಮುಂಬಯಿ ಬಂದರಿನ ಮೂಲಕ ಪ್ರಯಾಣಿಸುವ ಮಹಿಳೆಯೊಬ್ಬಳು ಹೆತ್ತ ಮಗುವಿಗೂ ಪೌರತ್ವ ನೀಡಬೇಕಾಗುತ್ತದೆ ಎಂದು ಅವರು ವಾದಿಸಿದ್ದರು ದೇಶ್‌ಮುಖ್ ಅವರು ಕನಿಷ್ಟ ಎರಡು ತಿದ್ದುಪಡಿಗಳಿಗೆ ಬೇಡಿಕೆ ಇಟ್ಟಿದ್ದರು.

ಮೊದಲನೆಯದು ಕೇವಲ ಭಾರತದಲ್ಲಿ ಹುಟ್ಟುವುದು ಸಾಕಾಗದು; ಮಗು ಭಾರತೀಯ ಹೆತ್ತವರಿಗೆ ಹುಟ್ಟಿರಬೇಕು ಎಂಬುದು. ಎರಡನೆಯದೆಂದರೆ, ಹಿಂದೂಗಳು ಮತ್ತು ಸಿಕ್ಖರು ಪ್ರಪಂಚದ ಯಾವುದೇ ಕಡೆಯಲ್ಲಿ ವಾಸಿಸುತ್ತಿದ್ದರೂ ಭಾರತೀಯ ಪೌರತ್ವಕ್ಕೆ ಅರ್ಹರಾಗಿರಬೇಕು ಎಂಬುದು.

ಇದೇ ಅಭಿಪ್ರಾಯಗಳು ನರೇಂದ್ರ ಮೋದಿ ಚುನಾವಣಾ ಗೆಲುವಿನ ನಂತರ ಮೇ 2019ರಂದು ಮಾಡಿದ ಭಾಷಣದಲ್ಲಿ ಪ್ರತಿಫಲಿಸಿದೆ. ಅದರಲ್ಲಿ ಅವರು ಜಾತ್ಯತೀತ ಪರಿಕಲ್ಪನೆಯನ್ನು ದೂರಿ, ಯಾವ ರಾಜಕೀಯ ಪಕ್ಷವೂ ಜಾತ್ಯತೀತತೆಯ ಮುಖವಾಡದ ಹಿಂದೆ ಅಡಗುವ ಧೈರ್ಯ ತೋರಿಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಪೌರತ್ವದ ಪ್ರಶ್ನೆ ಎದ್ದಿದೆ. ದೇಶವನ್ನು ತಳಮಳಕ್ಕೆ ದೂಡಿದೆ. ಇದು 1948ರ ನಾಝಿ, ಫ್ಯಾಸಿಸ್ಟ್ ಬೆಂಬಲಿಗರ ಪ್ರಯತ್ನವನ್ನು ಮುಂದುವರಿಸುವ ಯತ್ನ.

(ಜಾತ್ಯತೀತತೆಯ ಪರವಾಗಿ ಸಂವಿಧಾನ ಸಭೆಯಲ್ಲಿ ಅಂದು ನಡೆದ ಚರ್ಚೆಗಳ ಕುರಿತು ಪ್ರತ್ಯೇಕ ಲೇಖನವನ್ನು ನಿರೀಕ್ಷಿಸಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...