Homeಮುಖಪುಟಕೊರೋನಾ - ಭಾರತದ ಆರ್ಥಿಕತೆ: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರು ಏನೇಳ್ತಾರೆ?

ಕೊರೋನಾ – ಭಾರತದ ಆರ್ಥಿಕತೆ: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರು ಏನೇಳ್ತಾರೆ?

- Advertisement -
- Advertisement -

ಕೊರೋನಾ ವೈರಸ್ ಹಾವಳಿ ಜನರನ್ನು ಸಾವಿನತ್ತ ದೂಡುವ ಆತಂಕ ಒಂದು ಕಡೆಯಾದರೆ, ಮತ್ತೊಂದೆಡೆ ಈ ಕೊರೊನಾ ಲಾಕ್‍ಡೌನ್ ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳುವ ಆತಂಕ ಮತ್ತೊಂದು ಕಡೆ. ಹೀಗೆ ಎರಡು ಆತಂಕಗಳನ್ನು ಒಟ್ಟಿಗೇ ಎದುರಿಸಬೇಕಾದಂತಹ ಸನ್ನಿವೇಶದಲ್ಲಿ ನಾವೆಲ್ಲಾ ಇದ್ದೇವೆ.

ಕೊರೋನ ಕಾರಣಕ್ಕೆ ಉಂಟಾಗುವ ಆರ್ಥಿಕ ದುಸ್ಥಿತಿ ಕೊರೋನಾದಷ್ಟೆ ಅಥವಾ ಅದಕ್ಕಿಂತ ಹೆಚ್ಚು ಜನರ ಜೀವನವನ್ನು ಬಲಿತೆಗೆದುಕೊಳ್ಳುವ ಆತಂಕವನ್ನು ಕೆಲ ಖ್ಯಾತ ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ.

ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಬಂದೆರಗಲಿರುವ (ಆಗಲೇ ಒಂದು ಮಟ್ಟಿಗೆ ಎರಗಿರುವ) ಆರ್ಥಿಕ ಸಂಕಷ್ಟದಿಂದ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಭಾರತದ ಖ್ಯಾತ ಆರ್ಥಿಕ ತಜ್ಞರು ಏನು ಹೇಳಿದ್ದಾರೆ ನೋಡೋಣ.

ಮೊದಲನೆಯದಾಗಿ, “ದ ಎಕನಾಮಿಸ್ಟ್” ಮ್ಯಾಗಜಿನ್‍ನ ಸಂಶೋಧನಾ ಗುಂಪಿನ ಅಧ್ಯಯನದ ಪ್ರಕಾರ ಕೊರೋನದಿಂದಾಗಿ ವಿಶ್ವದ ಒಟ್ಟು ಜಿಡಿಪಿ ಮೊದಲು ನಿರೀಕ್ಷಿಸಿದ್ದ +2.3% ಬೆಳವಣಿಗೆಯ ಬದಲಾಗಿ -2.2%ರಷ್ಟು ನಕಾರಾತ್ಮಕ ಬೆಳವಣಿಗೆ ಸಾಧಿಸಲಿದೆ. ಅಂದರೆ ವಿಶ್ವದ ಒಟ್ಟು ಬೆಳವಣಿಗೆ 4.5%ರಷ್ಟು ಕಡಿಮೆಯಾಗಲಿದೆ.

ಇದು ಟ್ರಿಲಿಯನ್‍ಗಟ್ಟಲೆ ಡಾಲರ್ ನಷ್ಟಕ್ಕೆ ಕಾರಣವಾಗಲಿದೆ.

ಅದೇ ರೀತಿ ಕೊರೋನದಿಂದಾಗಿ ಪಶ್ಚಿಮ ಯೂರೋಪ್ -6%ರಷ್ಟು, ಅಮೆರಿಕ -2.8%, ಚೀನಾ +1% ಮತ್ತು ಭಾರತ +2.1% ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಲಿವೆ.

ಇದರ ಪ್ರಕಾರ ಭಾರತ ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ನಷ್ಟ ಅನುಭವಿಸಲಿದೆ ಎಂದು ಮೇಲ್ನೋಟಕ್ಕೆ ತೋರುತ್ತದೆ.
ಇದೆಲ್ಲಕ್ಕೆ ಅರ್ಥಶಾಸ್ತ್ರಜ್ಞರು ಏನು ಹೇಳುತ್ತಾರೆ ನೋಡೋಣ.

ಅಮತ್ರ್ಯ ಸೆನ್
ನೊಬೆಲ್ ಪುರಸ್ಕೃತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ

ಪ್ರಜಾಪ್ರಭುತ್ವದೊಳಗಿನ ಪರಸ್ಪರ ಸಹಕಾರದಿಂದ ಮಾತ್ರ ಈ ಸಮಸ್ಯೆ ಗೆಲ್ಲಲು ಸಾಧ್ಯ:

ನಾನು ಇದನ್ನು ಕೊರೋನ ವಿರುದ್ದದ ಯುದ್ದ ಅಂತ ಕರೆಯಲ್ಲ. ಯುದ್ದ ಎಂದಾಗ ಅದಕ್ಕೊಬ್ಬನೇ ಒಬ್ಬ ಲೀಡರ್ ಇರ್ತಾನೆ. ಉದಾಹರಣೆಗೆ ನೆಪೋಲಿಯನ್ ಅಥವಾ ಸ್ಟಾಲಿನ್ ಆಗ ಇದ್ದಹಾಗೆ. ಆದರೆ ಈ ಕೊರೋನ ಸೃಷ್ಟಿಸಿರುವ ಸಂಕಷ್ಟವನ್ನು ನಾವೆಲ್ಲಾ ಒಟ್ಟಾಗಿ ಎದುರಿಸಬೇಕಿದೆ. ಹಾಗಾಗಿ ಇದನ್ನು ಯುದ್ದ ಎನ್ನುವುದೇ ಒಂದು ತಪ್ಪು ಹೋಲಿಕೆ.

ಅದರಲ್ಲೂ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಜನರಿಗೆ ಹಲವು ಆದ್ಯತೆಗಳಿರುತ್ತವೆ. ಕೆಲವರಿಗೆ ಕೊರೋನಾ ಓಡಿಸುವುದು ಮಾತ್ರವೇ ಮುಖ್ಯ ಆದ್ಯತೆಯಾಗಿ ಕಂಡರೆ, ಇನ್ನು ಹಲವರಿಗೆ ಅವತ್ತಿನ ಊಟದ ಪ್ರಶ್ನೆಯೇ ಮುಖ್ಯವಾಗಿರುತ್ತದೆ.

ಒಟ್ಟಾರೆ ಈ ಸಂದರ್ಭದಲ್ಲಿ ಮುಖ್ಯವಾಗಿ ಕಲಿಯಬೇಕಾದ ಪಾಠಗಳೆಂದರೆ, 1) ಇದನ್ನು ಪರಸ್ಪರ ಸಹಕಾರದಿಂದಷ್ಟೇ ಎದುರಿಸಲು ಸಾಧ್ಯ. ಪರಸ್ಪರ ಸಹಕಾರಿಯಾಗಿರುವ ಸವಲತ್ತು ನಮ್ಮ ಪ್ರಜಾಪ್ರಭುತ್ವದೊಳಗೆಯೇ ಅಂತರ್ಗತವಾಗಿದೆ. ಸರ್ಕಾರದ ಪಾಲಿಸಿಯನ್ನು ವಿಮರ್ಶಿಸಿದರೆ ಅದನ್ನು ದೇಶವಿರೋಧಿ ಎಂದು ಪರಿಗಣಿಸದೆ ಟೀಕೆಯನ್ನು ಸಕಾರಾತ್ಮಕವಾದ ಸಲಹೆಗಳನ್ನಾಗಿ ಪರಿಗಣಿಸಿ ಕೆಲಸ ಮಾಡುವುದು ಇಂದಿನ ತುರ್ತು ಅಗತ್ಯ.

2) ನಮ್ಮ ಆರೋಗ್ಯ ವ್ಯವಸ್ಥೆ ಅತ್ಯಂತ ದುಸ್ಥಿತಿಯಲ್ಲಿದೆ. ಅದರಲ್ಲೂ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯಂತೂ ಭಾರೀ ಅಭಿವೃದ್ದಿ ಕಾಣಬೇಕಿದೆ. ಈಗ ಕೊರೋನ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುತ್ತಿರುವ ಚೀನಾ, ಕೊರಿಯ, ತೈವಾನಿನಂತ ದೇಶಗಳಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರಗಳ ವ್ಯವಸ್ಥೆ ಭಾರತಕ್ಕಿಂತ ಅತ್ಯುತ್ತಮ ಸ್ಥಿತಿಯಲ್ಲಿವೆ.

ಭಾರತದ ಆರೋಗ್ಯ ವ್ಯವಸ್ಥೆಯನ್ನು ಸರ್ಕಾರದ ವ್ಯವಸ್ಥೆಯಾಗಿಯೇ ಉನ್ನತ ಮಟ್ಡಕ್ಕೇರಿಸುವುದು ಪ್ರಥಮ ಆದ್ಯತೆಯಾಗಬೇಕಿದೆ.

3) ಹಾಗೆಯೇ ಶೈಕ್ಷಣಿಕ ವ್ಯವಸ್ಥೆಯನ್ನು ಕೂಡ ರಾಷ್ಟ್ರೀಕರಣಗೊಳಿಸುವುದು ಪ್ರಥಮ ಆದ್ಯತೆಯಾಗಬೇಕಿದೆ. ಇದಕ್ಕೆ ಯೂರೋಪ್ ದೇಶಗಳ ಉದಾಹರಣೆ ತೆಗೆದುಕೊಳ್ಳಬಹುದಾಗಿದೆ.

4) ಈಗ ಉಂಟಾಗಿರುವ ಅಥವಾ ಇನ್ನೂ ಗಂಭೀರವಾಗಲಿರುವ ಆರ್ಥಿಕ ದುಸ್ಥಿತಿಯ ಭಾರತದಂತಹ ದೇಶದಲ್ಲಿ ನಿಧಾನವಾಗಿ ಸರಿಯಾಗಲಿದೆ. ಆದ್ದರಿಂದ ಆರ್ಥಿಕ ಸಂಕಷ್ಟದ ಕಾರಣ ಒಡ್ಡದೆ ಬಡಜನರಿಗೆ ಸಂಪೂರ್ಣ ಆರ್ಥಿಕ ಬೆಂಬಲ ನೀಡಬೇಕಿದೆ.

ಅರವಿಂದ್ ಸುಬ್ರಮಣ್ಯನ್
ಮಾಜಿ ಮುಖ್ಯ ಆರ್ಥಿಕ ಸಲಹೆಗಾರರು,ಭಾರತ ಸರ್ಕಾರ

ರಾಜ್ಯಗಳಿಗೆ ಅತಿಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ ನೀಡಬೇಕಿದೆ. ಭಾರತಕ್ಕೆ ಈ ಕೊರೋನ ತಂದಿರುವ ಆರ್ಥಿಕ ಸಂಕಷ್ಟ ಮೂರು ಕಾರಣಗಳಿಂದಾಗಿ ಬೇರೆ ದೇಶಗಳಿಗಿಂತ ಹೆಚ್ಚು ಗಂಭೀರ.

1) ಭಾರತದ ಆರ್ಥಿಕತೆಯು ಕೊರೋನ ಬರುವುದಕ್ಕಿಂತ ಮುಂಚೆಯೇ ಹಿನ್ನಡೆಯಲ್ಲಿತ್ತು.

2) ಭಾರತದ ವ್ಯೆದ್ಯಕೀಯ ವ್ಯವಸ್ಥೆ ಮೊದಲಿಂದಲೂ ಅತ್ಯಂತ ದುರ್ಬಲವಾಗಿದ್ದು ಈಗಿನ ಪ್ಯಾಂಡೆಮಿಕ್‍ನ್ನು ಎದುರಿಸುವ ಶಕ್ತಿ ಹೊಂದಿಲ್ಲ ದಿರುವುದು.

3) ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರು.

ದ ಎಕನಾಮಿಸ್ಟ್ ಅಧ್ಯಯನ ಹೇಳಿರುವುದಕ್ಕಿಂತ ಹೆಚ್ಚಿನ ಜಿಡಿಪಿ ನಷ್ಟ ಭಾರತಕ್ಕೆ ಉಂಟಾಗಲಿದೆ. ಇದಕ್ಕೆ ಉದಾಹರಣೆಯಾಗಿ ಈ ಲಾಕ್‍ಡೌನಿಂದ ಕೇವಲ ಒಂದು ತಿಂಗಳ ಜಿಡಿಪಿ ನಷ್ಟವಾದರೂ ಸಹ ಭಾರತದ ಜಿಡಿಪಿ 2.1% ವೇಗದಲ್ಲಿ ಬೆಳೆಯಲು ಸಾಧ್ಯವಿಲ್ಲ.

ಪರಿಸ್ಥಿತಿ ಹೀಗಿದ್ದರೂ ಸಹ ಕೇಂದ್ರ ಸರ್ಕಾರ ಈ ದೇಶದ ಬಡವರಿಗೆ ನೇರ ನಗದು ವರ್ಗಾವಣೆಯ ಮೂಲಕ ಸಹಾಯ ಮಾಡಿದರೆ ಮಾತ್ರ ಬಡವರು ಉಳಿಯಲು ಮತ್ತು ಆರ್ಥಿಕತೆ ಮುಂದೆ ಪುಟಿದೇಳಲು ಸಾಧ್ಯವಾಗುತ್ತದೆ.

ಹಾಗಾಗಿ ಕೇಂದ್ರ ಅಥವಾ ರಾಜ್ಯದ ವಿತ್ತೀಯ ಕೊರತೆಯನ್ನು ಕಡೆಗಣಿಸಿ ಕನಿಷ್ಟ ಒಂಬತ್ತು ಲಕ್ಷ ಕೋಟಿಯಷ್ಟು ಹಣವನ್ನು ಕೇಂದ್ರ ಸರ್ಕಾರ ಆರ್ಥಿಕ ಪುನಶ್ಚೇತನಕ್ಕಾಗಿ ಅದರಲ್ಲೂ ಬಡಜನರಿಗಾಗಿ ವ್ಯಯಿಸಲೇಬೇಕಿದೆ.

ಹಾಗೂ ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಿ ರಾಜ್ಯ ಸರ್ಕಾರಗಳು ಉದಾರವಾಗಿ ಹಣ ಖರ್ಚುಮಾಡುವ ವಾತಾವರಣ ನಿರ್ಮಿಸಬೇಕಿದೆ.

ಇದಕ್ಕಾಗಿ ಹೆಚ್ಚು ನೋಟುಗಳನ್ನು ಪ್ರಿಂಟ್ ಮಾಡಬೇಕಾಗಿ ಬಂದರೂ ಈ ಕೆಲಸ ಅಗತ್ಯವಾಗಿ ಮಾಡಬೇಕಿದೆ.

ಅಮಿತ್ ಸೇರು
ಸೀನಿಯರ್ ಫೆಲೋ, ಹೂಮರ್ ಇನ್ಸ್‍ಟಿಟ್ಯೂಟ್

ಭಾರತ ಜಿಡಿಪಿಯ ಕನಿಷ್ಟ 5%ರಷ್ಟು ಖರ್ಚು ಮಾಡಬೇಕಿದೆ. ಅಮೆರಿಕವು ಈ ಕೊರೋನ ಸಂಕಷ್ಟದಿಂದ ಪಾರಾಗಲು ಎರಡು ಟ್ರಿಲಿಯನ್ ಡಾಲರ್ (ಸುಮಾರು ನೂರೈವತ್ತು ಲಕ್ಷ ಕೋಟಿಗಳು) ಅಂದರೆ ತನ್ನ ಜಿಡಿಪಿಯ 10%ನ್ನು ಮೀಸಲಿರಿಸಿದೆ. ಭಾರತ ಆರ್ಥಿಕವಾಗಿ ಈ ಮೊದಲೇ ಸಂಕಷ್ಟದಲ್ಲಿದ್ದುದು ನಿಜವಾಗಿದ್ದರೂ ಕೂಡ ಈಗಿನ ಮತ್ತಷ್ಟು ಸಂಕಷ್ಟದಿಂದ ಹೊರಬರಲು ಕನಿಷ್ಟ ತನ್ನ ಜಿಡಿಪಿಯ 5%ರನ್ನಾದರೂ ಖರ್ಚು ಮಾಡಲೇಬೇಕು. ಈ ಹಣವನ್ನು ಆದಷ್ಟು ನೇರ ನಗದು ವರ್ಗಾವಣೆ ಮತ್ತು ಇತರ ಸಬ್ಸಿಡಿಗಳಿಗಾಗಿ ಬಳಸಬೇಕಾಗಿದೆ.ಈ ಹಣದಲ್ಲಿ ಮುಖ್ಯ ಭಾಗವನ್ನು ತಕ್ಷಣದ ವೈದ್ಯಕೀಯ ಸಿದ್ದತೆಗೆ ಬಳಸಬೇಕು.

ಕೌಶಿಕ್ ಬಸು
ಕಾರ್ನೆಲ್ ಯೂನಿವರ್ಸಿಟಿ ಪ್ರೋಫೆಸರ್, ಮಾಜಿ ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರ

ಜೀವ ಮೊದಲು ಆರ್ಥಿಕತೆ ಆಮೇಲೆ ಎನ್ನುವುದು ಪೂರ್ಣ ತಪ್ಪು; ಏಕೆಂದರೆ ದರಿದ್ರ ಆರ್ಥಿಕ ಸ್ಥಿತಿ ಕೊರೋನಕ್ಕಿಂತ ಹೆಚ್ಚು ಜನರನ್ನು ಬಲಿಪಡೆಯುತ್ತದೆ.

ಲಾಕ್‍ಡೌನ್ ಎನ್ನುವುದು ಎಕಾನಮಿಯನ್ನೇ ನಿಂತುಹೋಗುವಂತೆ ಮಾಡುವುದನ್ನ ತಡೆಯಲೇಬೇಕಿದೆ. ಲಾಕ್‍ಡೌನಿಂದಾಗಿ ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕುವವರು ಬಡವರು ಮತ್ತು ವಲಸೆ ಕಾರ್ಮಿಕರು.

ವೈರಸ್ ಹಾವಳಿ ತಡೆಯುತ್ತಲೇ ಎಕಾನಮಿ ಅಭಿವೃದ್ದಿಯಾಗುವಂತಹ ಕ್ರಮಗಳನ್ನೂ ಕೈಗೊಳ್ಳಬೇಕು.

ಒಂದು ಕಡೆ ಬಡವರಿಗೆ ವಿಶೇಷ ಪ್ಯಾಕೇಜ್ ಜಾರಿಮಾಡುವುದರ ಜೊತೆ ಲಾಕ್‍ಡೌನನ್ನು ಹಂತಹಂತವಾಗಿ ಸಡಿಲಿಸಲೇಬೇಕು.

ಉದಾಹರಣೆಗೆ, ಏಪ್ರಿಲ್ ಹದಿನಾಲ್ಕರ ನಂತರ ತಮ್ಮ ಕೆಪಾಸಿಟಿಯ ಅರ್ಧದಷ್ಟು ಜನರನ್ನು ತುಂಬಿಕೊಂಡು ಸಂಚರಿಸಲು ರೈಲು ಮತ್ತು ವಿಮಾನಯಾನಕ್ಕೆ ಅನುಮತಿ ಇತ್ಯಾದಿ.

ಕನಿಷ್ಟ ಮುಂದಿನ ಆರು ತಿಂಗಳು ವಿತ್ತೀಯ ಕೊರತೆ ಬಗ್ಗೆ ಚಿಂತಿಸದೆ ಸರ್ಕಾರ ಹಣ ಖರ್ಚು ಮಾಡಬೇಕಿದೆ.

ಅಭಿಜಿತ್ ಬ್ಯಾನರ್ಜಿ
ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರು

ಜನರಿಗೆ ಕೈಗೆ ನಗದು ನೀಡಲೇಬೇಕು. ಜನರ ಕೈಗೆ ನಗದು ನೀಡದಿದ್ದರೆ ಅವರು ಭಾರೀ ಸಂಕಷ್ಟಕ್ಕೆ ಸಿಲುಕುವುದಲ್ಲದೆ, ದೇಶದ ಆರ್ಥಿಕತೆಯ ಚೇತರಿಕೆಯೇ ಕಷ್ಟವಾಗಲಿದೆ. ಜನರಿಗೆ ಉಚಿತ ರೇಷನ್ ನೀಡುವುದರ ಜೊತೆಗೆ ಅವಶ್ಯಕತೆ ಇರುವವರೆಲ್ಲರಿಗೂ ನಗದು ಹಣ ನೀಡಲೇಬೇಕು.ಉದ್ಯಮಗಳಿಗೆ ಸಾಲಮರುಪಾವತಿಗೆ ಐದಾರು ತಿಂಗಳು ಬಡ್ಡಿರಹಿತ ರಜೆ ನೀಡುವಂತೆ ರಿಸರ್ವ್ ಬ್ಯಾಂಕ್ ನಿಯಮಾವಳಿ ರೂಪಿಸಬೇಕು. ಹಾಗೆಯೇ ಈಗ ರೈತರಿಗೆ ಹಿಂಗಾರು ಬೆಳೆ ಕೊಯ್ಲಿನ ಕಾಲವಾಗಿದ್ದು ಕಾರ್ಮಿಕರ ಕೊರತೆಯಿಂದಾಗಿ ಕೊಯ್ಲಿಗೆ ತೊಂದರೆಯಾದರೆ ಬರುವ ವರ್ಷದ ಆಹಾರಕ್ಕೇ ಕೊರತೆ ಒಂದು ಕಡೆಯಾದರೆ ಮತ್ತೊಂದೆಡೆ ಕೋಟ್ಯಂತರ ರೈತರ ಆದಾಯಕ್ಕೆ ಏಟುಬೀಳಲಿದೆ. ಹಾಗಾಗಿ ಹಿಂಗಾರು ಬೆಳೆ ಕೊಯ್ಲಿಗೆ ತೊಂದರೆಯಾಗದಂತ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕಿದೆ.

ಎಸ್ತರ್ ಡುಫ್ಲೊ
ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞೆ

ಈಗ ಬುದ್ದಿವಂತಿಕೆ ಬಳಸುವುದಕ್ಕಿಂತ ತ್ವರಿತವಾಗಿ ಕೆಲಸ ಮಾಡಬೇಕಿದೆ (Don’t think clever but act quickly) ಅವಶ್ಯವುಳ್ಳ ಜನರಿಗೆ ತಕ್ಷಣ ನೇರ ನಗದು ವರ್ಗಾವಣೆ ಮಾಡಬೇಕಾಗಿದೆ. ಈಗಾಗಲೇ ತುಂಬ ವಿಳಂಬವಾಗಿದೆ. ಹಾಗಾಗಿ, ನಿಜವಾಗಿ ಅವಶ್ಯಕತೆಯುಳ್ಳವರು ಯಾರು ಎಂದು ಹುಡುಕಿ ಸಮಯ ವ್ಯಯಿಸದೆ ಒಂದುಮಟ್ಟಿಗೆ ದುರುಪಯೋಗ ಆದರೂ ಪರವಾಗಿಲ್ಲ; ಹಣವನ್ನು ಈಗಲೇ ಜನರಿಗೆ ಹಂಚಲೇಬೇಕಾಗಿದೆ. ಜನಧನ್ ಅಕೌಂಟುಗಳು, ನರೇಗ ಅಕೌಂಟುಗಳು ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಹಣ ಕೊಡಲೇಬೇಕಿದೆ. ಇಲ್ಲದಿದ್ದರೆ, ಜನರು ಬೀದಿಗೆ ಬರುವುದನ್ನು ತಡೆಯಲು ಪೊಲೀಸರಿಗೂ ಕಷ್ಟವಾಗಬಹುದು.

ಸ್ಥೂಲವಾಗಿ ನೋಡಿದಾಗ ಎಲ್ಲ ಅರ್ಥಿಕ ತಜ್ಞರ ಒಟ್ಟಾರೆ ಅಭಿಪ್ರಾಯ ಹೀಗಿದೆ:

1) ಈಗ ಕೇಂದ್ರ ಕೊಟ್ಟಿರುವ ಕೊರೋನ ಅನುದಾನ ಜಿಡಿಪಿಯ ಕೇವಲ 1% ಆಗಿದೆ. ಇದನ್ನು ತಕ್ಷಣ ಕನಿಷ್ಟ 5%ಗೆ ಏರಿಸಬೇಕು.

2) ಈ ಹಣವನ್ನು ಜನರಿಗೆ ನೇರ ನಗದು ವರ್ಗಾವಣೆ ಮಾಡಲು ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಲು ಬಳಸಬೇಕು.

3) ಕೊರೋನ ತಡೆಯುವಲ್ಲಿ ಮತ್ತು ಜನರಿಗೆ ನಗದು ವರ್ಗಾವಣೆ ಮಾಡುವಲ್ಲಿ ರಾಜ್ಯಗಳ ಪಾತ್ರ ಬಹುಮುಖ್ಯವಾದ್ದರಿಂದ ಕೇಂದ್ರವು ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಅನುದಾನವನ್ನು ತಕ್ಷಣವೇ ಕೊಡಬೇಕು.

4) ಈ ಪ್ರಕ್ರಿಯೆಯಲ್ಲಿ ವಿತ್ತೀಯ ಕೊರತೆ ಉಂಟಾಗುವುದನ್ನು ತಕ್ಷಣದಲ್ಲಿ ಕಡೆಗಣಿಸಬೇಕು.

ಒಟ್ಟಾರೆಯಾಗಿ ಕೇಂದ್ರ ಸರಕಾರ ಜಿಡಿಪಿಯ ಕನಿಷ್ಟ 5%ನ್ನು ವ್ಯಯಿಸಿ ಜನರ ಕೈಯಲ್ಲಿ ಹಣ ಓಡಾಡುವಂತೆ ಮಾಡಿದರೆ ಜನರು ಲಾಕ್‍ಡೌನ್ ಪಾಲಿಸಲು ಅನುಕೂಲವಾಗುತ್ತದೆ.

ಇದರಿಂದ ಕೊರೋನ ಹರಡುವಿಕೆಯನ್ನು ತಡೆಗಟ್ಟಲೂ ಅನುಕೂಲವಾಗುತ್ತದೆ.

ಇಷ್ಟಲ್ಲದೆ ತಮಗೆ ಬಂದ ಹಣವನ್ನು ಜನರು ತಮ್ಮ ನಿತ್ಯ ಅವಶ್ಯಕತೆಗಳಿಗೋಸ್ಕರ ಖರ್ಚು ಮಾಡುವುದರಿಂದ ಲಾಕ್‍ಡೌನ್ ಮದ್ಯದಲ್ಲೂ ಆರ್ಥಿಕತೆಯಲ್ಲಿ ಒಂದು ಮಟ್ಟದ ಬೇಡಿಕೆ ಇದ್ದೇ ಇರುತ್ತದೆ. ಇದರಿಂದಾಗಿ ಆರ್ಥಿಕತೆ ಉಳಿಯಲು ಮತ್ತು ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...