Homeಮುಖಪುಟಮೋದಿ ಸರಕಾರದ ಅದಕ್ಷತೆ, ಅಮಾನವೀಯತೆಗಳನ್ನು ತೆರೆದಿಟ್ಟ ಕೊರೋನಾ

ಮೋದಿ ಸರಕಾರದ ಅದಕ್ಷತೆ, ಅಮಾನವೀಯತೆಗಳನ್ನು ತೆರೆದಿಟ್ಟ ಕೊರೋನಾ

ಲಾಕ್‌ಡೌನ್‌ನಿಂದ ಸಣ್ಣ ಉದ್ದಿಮೆಗಳು ಜರ್ಝರಿತವಾಗಿರುವಾಗ, ಎಂದಾದರೂ ಅವರ ಉದ್ಯೋಗ ಅವರಿಗೆ ಮರಳಿ ಸಿಕ್ಕೀತೆ? ಲಾಕ್‌ಡೌನ್‌ನ ಆಘಾತವನ್ನು ಕಡಿಮೆ ಮಾಡಲು ಮತ್ತು ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಯೋಜನೆಯೇನಿದೆ?

- Advertisement -
- Advertisement -

ಸಿದ್ಧಾರ್ಥ ಭಾಟಿಯಾ

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ನರೇಂದ್ರ ಮೋದಿ ಸರಕಾರವು ರಾತೋರಾತ್ರಿ ಜಾರಿಗೆ ತಂದ ನೋಟು ಅಮಾನ್ಯೀಕರಣದಿಂದ ಹಿಡಿದು, ಅಸ್ಸಾಮಿನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ),  ವಿಧಿ 370ಯ ರದ್ದತಿ ಬಳಿಕ ಕಾಶ್ಮೀರದಲ್ಲಿ ಹೇರಲಾದ ಕಠಿಣ ಲಾಕ್‌ಡೌನ್ ಹಾಗೂ ಆರೋಪವೇ ಇಲ್ಲದೆ ಚುನಾಯಿತ ಜನಪ್ರತಿನಿಧಿಗಳ ಬಂಧನ ಮತ್ತು ಇದೀಗ ಅಪಾಯಕಾರಿ ಕೊರೋನ ವೈರಸನ್ನು ದೇಶದೊಳಗೆ ಬರಲು ಬಿಡುವ ಬೇಜವಾಬ್ದಾರಿ ತೋರಿ, ನಂತರ ಯಾವುದೇ ಕಾಲಾವಕಾಶ ನೀಡದೆ, ಯಾವುದೇ ಸಿದ್ಧತೆ ಇಲ್ಲದೇ, ದೇಶಾದ್ಯಂತ ಲಾಕ್‌ಡೌನ್ ಹೇರುವುದರ ಮೂಲಕ ಕೋಟ್ಯಂತರ ಜನರ ಜೀವನದ ಜೊತೆಗೆ ಚೆಲ್ಲಾಟ ಆಡಿದೆ.

ಆ ಮೂಲಕ ಈ ಸರಕಾರ ತನ್ನ ಅದಕ್ಷತೆ ಮಾತ್ರವಲ್ಲ, ಅಸೂಕ್ಷ್ಮ ಮತ್ತು ಅಮಾನವೀಯ ಮುಖವನ್ನೂ ತೋರಿಸಿದೆ. ಈ ವಿವಿಧ ಸಂದರ್ಭಗಳಲ್ಲಿ ಯಾವುದೇ ಯೋಜನೆಗಳಿಲ್ಲದೆ ಸರಕಾರ ಹೇಗೆ ಮುಂದಡಿ ಇಟ್ಟಿತ್ತು ಮತ್ತು ಅವು ವಿಫಲವಾದಾಗ ಜನರ ಸಂಕಷ್ಟಗಳ ಕುರಿತು ಹೇಗೆ ಅಮಾನವೀಯವಾಗಿ, ಯಾಂತ್ರಿಕವಾಗಿ ಪ್ರತಿಕ್ರಿಯಿಸಿತ್ತು ಎಂದು ಹಿಂದಿನ ಲೇಖನದಲ್ಲಿ ಚುಟುಕಾಗಿ ವಿವರಿಸಲಾಗಿತ್ತು.


ಇದನ್ನೂ ಓದಿ: ಕಾರ್ಯತಂತ್ರ ಮಾತ್ರವಲ್ಲ; ಮಾನವೀಯತೆಯೇ ಇಲ್ಲದ ಮೋದಿ ಸರಕಾರ


ಈಗ ದೇಶದಾದ್ಯಂತ ಹರಡುತ್ತಿರುವ ನೋವೆಲ್ರೋ ಕೊರೋನ ವೈರಸ್‌ಗೆ ಸಂಬಂಧಿಸಿದಂತೆ ಮೋದಿ ಸರಕಾರದ ಬೇಜವಾಬ್ದಾರಿ, ಅದಕ್ಷತೆ ಮತ್ತು ಅಮಾನವೀಯತೆಯ ಕುರಿತು ಈ ಬರಹದಲ್ಲಿ ಚುಟುಕಾಗಿ ನೋಡೋಣ.

ಕ್ರಮಬದ್ಧವಾದ ಮತ್ತು ಮಾನವೀಯವಾದ ಪ್ರತಿಕ್ರಿಯೆಯ ಅಗತ್ಯವಿರುವ ಮಾರಣಾಂತಿಕ ನೋವೆಲ್ ಕೊರೋನ ವೈರಸ್ ಹರಡುವಿಕೆಯು- ಈ ಸರಕಾರ ಯೋಜನಾಬದ್ಧವಾಗಿ ಕೆಲಸ ಮಾಡುವುದಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಹಠಾತ್ತಾಗಿ ಹೇರಲಾದ ಲಾಕ್‌ಡೌನ್ ಒಂದು ಯೋಜನೆಯೇನಲ್ಲ. ಬಟ್ಟಲು-ಜಾಗಟೆ ಬಡಿಯಲು ಹೇಳುವುದು ಕೂಡಾ ಖಂಡಿತವಾಗಿಯೂ ಒಂದು ಯೋಜನೆ ಎಂದು ಹೇಳಿಸಿಕೊಳ್ಳುವ ಅರ್ಹತೆ ಹೊಂದಿಲ್ಲ.

ಎರಡನೆಯದಾಗಿ, ಅದರ ಸುತ್ತ ಎಲ್ಲಾ ರೀತಿಯ ಹುಸಿ ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಯ ಹುತ್ತವನ್ನು ಕಟ್ಟಲಾಯಿತು. “ಓಂ” ಎಂದು ಪಠಿಸುವುದರಿಂದ ಉಂಟಾಗುವ ಕಂಪನಗಳು ಇತ್ಯಾದಿ ಬುರುಡೆಗಳು ವಾಟ್ಸಾಪ್‌ನಲ್ಲಿ ಹರಿದಾಡಿದವು. ಇದು ಭಯಂಕರ ಯಶಸ್ಸು ಕಾಣುವುದರ ಮೂಲಕ, ಜನರ ಮಂದೆಯನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಮೋದಿಯ ಖ್ಯಾತಿ ಇನ್ನಷ್ಟು ವಿಸ್ತರಿಸಿತು. ಆದರೆ, ಕೇವಲ ನಾಲ್ಕು ಗಂಟೆಗಳ ಅವಕಾಶವನ್ನಷ್ಟೇ ನೀಡಿ ಹಠಾತ್ತಾಗಿ ಹೇರಿದ ಲಾಕ್‌ಡೌನ್- ಜನರ ಮೇಲೆ, ವಿಶೇಷವಾಗಿ ಬಡವರ ಮೇಲೆ ವಿನಾಶಕಾರಿ ಪರಿಣಾಮವನ್ನು ಉಂಟುಮಾಡಿತು.

ಅಮಿತಾಬ್‌ ಬಚ್ಚನ್‌ ಸಹ ಸುಳ್ಳು ಸುದ್ದಿಯ ಜಾಲಕ್ಕೆ ಬಿದ್ದಿದ್ದರು

ಕ್ರಮೇಣ, ಮಧ್ಯಮ ವರ್ಗದವರು ಕೂಡಾ ಕೆಲವು ಕಷ್ಟಗಳನ್ನು ಅನುಭವಿಸಬೇಕಾದರೂ, ಒಂದು ದಿನಚರಿಗೆ ಹೊಂದಿಕೊಂಡಿದ್ದಾರೆ. ಅವರಲ್ಲಿ ಕೆಲವರು ಮನೆಯಿಂದಲೇ ಕೆಲಸ ಮಾಡಬಹುದು. ಅವರಿಗೆ ವಿರಾಮದ ವೇಳೆ ಕಾಲ ಕಳೆಯಲು ಹಲವಾರು ಅವಕಾಶಗಳು ಇವೆ. ಸಾಮಾಜಿಕ ಜಾಲತಾಣಗಳು ನೆಟ್‌ಫ್ಲಿಕ್ಸ್ ಶಿಫಾರಸುಗಳಿಂದ ತುಂಬಿತುಳುಕುತ್ತಿವೆ. ಆದರೆ, ಬೀದಿಗೆ ಬಿದ್ದಿರುವ ಜನರನ್ನು ಮಾತ್ರ ಗುಂಪು ಸೇರಿಸಿ, ಪಶುಗಳ ಮಂದೆಗಳಂತೆ ಅವರ ಮೇಲೆ ರಾಸಾಯನಿಕಗಳನ್ನು ಸಿಂಪಡಿಸಿ, ಸ್ಟೇಡಿಯಂಗಳಿಗೆ ತಳ್ಳಲಾಗುತ್ತಿದೆ. ಕ್ವಾರಂಟೈನ್ ಮಾಡಲಾಗುತ್ತಿದೆ. ಇವರನ್ನೆಲ್ಲಾ ಪ್ರತ್ಯೇಕಿಸಲಾಗುವುದು. ಆದರೆ, ಅವರಿಗೆ ಮುಂದೇನು ಕಾದಿದೆ?

ಲಾಕ್ ಡೌನ್ ಕಾರಣಕ್ಕೆ ದೆಹಲಿಯಿಂದ ಉತ್ತರ ಪ್ರದೇಶದ ಬರೇಲಿಗೆ ನಡೆದುಬಂದ ವಲಸೆ ಕಾರ್ಮಿಕರಿಗೆ ಪ್ರಾಣಿಗಳಿಗಿಂತಲೂ ಕಡೆಯಾಗಿ ರಾಸಾಯನಿಕ ಔಷಧಿ ಸಿಂಪಡಿಸಿತ್ತಿರುವ ಯುಪಿ ಪೊಲೀಸರ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

Posted by Naanu Gauri on Monday, March 30, 2020

ಅವರನ್ನು ವೈದ್ಯಕೀಯವಾಗಿ ಪರೀಕ್ಷಿಸುವ, ಆಹಾರ ಒದಗಿಸುವ ಜವಾಬ್ದಾರಿ ಹೊರುವವರು ಯಾರು? ನಂತರ ಮುಂದಿನ ಹಂತದಲ್ಲಿ ಅವರಿಗೆ ಸಾರಿಗೆ ಒದಗಿಸಿ, ಅವರವರ ಹಳ್ಳಿಗಳಲ್ಲಿರುವ ಮನೆಗಳಿಗೆ ತಲಪಿಸುವವರು ಯಾರು? ಲಾಕ್‌ಡೌನ್‌ನಿಂದ ಸಣ್ಣ ಉದ್ದಿಮೆಗಳು ಜರ್ಝರಿತವಾಗಿರುವಾಗ, ಎಂದಾದರೂ ಅವರ ಉದ್ಯೋಗ ಅವರಿಗೆ ಮರಳಿ ಸಿಕ್ಕೀತೆ? ಲಾಕ್‌ಡೌನ್‌ನ ಆಘಾತವನ್ನು ಕಡಿಮೆ ಮಾಡಲು ಮತ್ತು ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಯೋಜನೆಯೇನಿದೆ?

ಈ ಕ್ಷಣದಲ್ಲಿ ಸೋಂಕಿನ ಮತ್ತು ಸಾವಿನ ಪ್ರಕರಣಗಳು ಹೆಚ್ಚಿದಲ್ಲಿ ಉಂಟಾಗಬಹುದಾದ ವೈದ್ಯಕೀಯ ತುರ್ತುಸ್ಥಿತಿಯನ್ನು ನಿಭಾಯಿಸುವುದು ಮೊದಲ ಆದ್ಯತೆಗಳಲ್ಲಿ ಒಂದು. ನಮ್ಮ ವೈದ್ಯರು ಮತ್ತು ದಾದಿಯರು ಯಾವುದೇ ಸೂಕ್ತ ಸುರಕ್ಷಾ ಸಾಧನಗಳಿಲ್ಲದೇ ಹಗಲೂರಾತ್ರಿ ದುಡಿಯುತ್ತಿದ್ದಾರೆ.

ಆದರೆ ಅಷ್ಟೇ ಮುಖ್ಯವಾದುದು ಎಂದರೆ, ಹಠಾತ್ ಲಾಕ್‌ಡೌನ್‌ನ ಪರಿಣಾಮವಾಗಿ ಈಗ ಉಂಟಾಗಿರುವ ಪೂರೈಕೆ ಅಡಚಣೆಗಳನ್ನು ನಿವಾರಿಸುವುದು. ಟ್ರಕ್ಕುಗಳು ಹೆದ್ದಾರಿಗಳಲ್ಲಿ ಸಿಕ್ಕಿಬಿದ್ದಿವೆ. ಸರಕುಗಳನ್ನು ತುಂಬಿಸಿ ಇಳಿಸುವ ಕಾರ್ಮಿಕರು ಮಾಯವಾಗಿದ್ದಾರೆ. ಸರಕುಗಳು ಅಂಗಡಿಗಳನ್ನು ಮುಟ್ಟುತ್ತಿಲ್ಲ. ರಾಜ್ಯಗಳು ಮುಚ್ಚಿರುವ ತಮ್ಮ ಗಡಿಗಳನ್ನು ತೆರೆಯಲು ಹಿಂಜರಿಯುತ್ತಿರುವುದರಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಮಾತ್ರ ಸಾಧ್ಯ.

ಇವೆಲ್ಲವನ್ನೂ ಸ್ವಲ್ಪವೇ ಯೋಜನೆಯ ಮೂಲಕ ತಡೆಗಟ್ಟಲು ಸಾಧ್ಯವಿತ್ತು. ಮೊದಲಿಗೆ, ಲಾಕ್‌ಡೌನ್‌ಗೆ ಮೊದಲು ಅಷ್ಟು ಅಲ್ಪ ಸಮಯಾವಕಾಶ ಕೊಡಬೇಕಾದ ಅಗತ್ಯವಿತ್ತೆ? ಈಗಲೂ ಈ ವೈರಸ್ ಮತ್ತು ಅದರ ನಂತರದ ಪರಿಣಾಮಗಳನ್ನು ಎದುರಿಸಲು ಸರಕಾರವು ಸ್ಪಷ್ಟವಾಗಿ ಯೋಚಿಸಿ ಯೋಜನೆಯನ್ನು ರೂಪಿಸಿದರೆ, ಈ ವಿಪತ್ತನ್ನು ನಿಭಾಯಿಸಬಹುದು.

ಆದರೆ, ಅಂತಹಾ ಒಂದು ಯೋಜನೆಯಾಗಲೀ, ಕಾರ್ಯತಂತ್ರವಾಗಲೀ ಇರುವ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಈ ರೀತಿಯ ದಿಢೀರ್ ನಿರ್ಧಾರಗಳ ಮಾದರಿಯನ್ನು ಗಮನಿಸಿದಲ್ಲಿ ಒಂದು ಸ್ಪಷ್ಟವಾದ ಪ್ರಶ್ನೆ ಎದುರಿಗೆ ಬರುತ್ತದೆ. ಅದೆಂದರೆ, ಮೋದಿ ಸರಕಾರದಲ್ಲಿ ಯಾರೂ, ಅಥವಾ ಸ್ವತಃ ಮೋದಿಯೂ ಇಂತಹಾ ಎಡೆಬಿಡಂಗಿ ನಿರ್ಧಾರಗಳಿಗೆ ಮಾನವರು ತೆರಬೇಕಾದ ಬೆಲೆಯ ಬಗ್ಗೆ ಯೋಚಿಸುವುದೇ ಇಲ್ಲವೆ? ಮಹಾರಾಜನಂತೆ ಘೋಷಣೆ ಮಾಡುವುದು, ಬೆಂಕಿ ಆರಿಸುವ ಧೀರ ತಾನೆಂಬಂತೆ ಪೋಸು ಕೊಡುವುದು ಖಂಡಿತವಾಗಿಯೂ ಆತನ ಭಕ್ತರನ್ನು ಮೆಚ್ಚಿಸಬಹುದು. ಆದರೆ, ಆತ ತನ್ನ ದಿಢೀರ್ ನಿರ್ಧಾರಗಳಿಂದ ಜನರಿಗೆ ಉಂಟಾಗುವ ಸಂಕಷ್ಟಗಳ ಬಗ್ಗೆ ಯೋಚಿಸಿರಲೇಬೇಕು ಅಲ್ಲವೇ?

ಈ ಕುರಿತು ಆತ ಯೋಚಿಸದೇ ಇದ್ದರೆ, (ಕಳೆದ ಕೆಲವು  ವರ್ಷಗಳಲ್ಲಿ ನಡೆದ ಘಟನೆಗಳು ಇಂತಹಾ ಗಂಭೀರವಾದ ಸಂಶಯಗಳನ್ನು ಹುಟ್ಟುಹಾಕಿವೆ.) ಅವರಿಗೆ ಜನರಲ್ಲಿ ಆತಂಕ ಉಂಟುಮಾಡುವುದು ಇಷ್ಟದ ಕೆಲಸ ಎಂಬ ತೀರ್ಮಾನಕ್ಕೆ ಬರಲು ಮಾತ್ರ ಸಾಧ್ಯ.

ಯಾಕೆಂದರೆ, ಅದು ತಮ್ಮ ಮೌಲ್ಯ ಕಳೆದುಕೊಂಡ ನೋಟುಗಳನ್ನು ಬದಲಾಯಿಸುವುದಾಗಿರಬಹುದು, ತಮ್ಮ ಪೌರತ್ವ ಸಾಬೀತುಪಡಿಸುವ ದಾಖಲೆಗಳಿಗಾಗಿ ಕಂಬದಿಂದ ಕಂಬಕ್ಕೆ ಅಲೆದಾಡುವುದಿರಬಹುದು, ಅಥವಾ ಇದೀಗ ಭಯಾತಂಕಗಳಿಂದ ತುಂಬಿದ ಜನರು ಪೊಲೀಸರ ಅಮಾನವೀಯ ಲಾಠಿ ಏಟು ತಿನ್ನುತ್ತಾ, ಹೊಟ್ಟೆಗೇನಾದರೂ ಸರಿಹೊಂದಿಸಲು ಪರದಾಡುತ್ತಿರುವುದು ಇಂತಹಾ ಸಂಶಯಕ್ಕೆ ಕಾರಣವಾಗಿದೆ. ಇವುಗಳೆಲ್ಲವೂ ಹೆಚ್ಚಾಗಿ ಬಡವರನ್ನೇ ಕಾಡಿವೆ. ತಾವು ಬೆವರು ಸುರಿಸಿ ಗಳಿಸಿದ ಹಣವನ್ನು ಬದಲಾಯಿಸಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿ ಬಂದವರು ಹೆಚ್ಚಾಗಿ ಅವರೇ. ಈ ಬಿಕ್ಕಟ್ಟು ಕೊನೆಗೊಂಡರೂ ಉದ್ಯೋಗ, ಜೀವನೋಪಾಯ ಕಳೆದುಕೊಂಡು ಬದುಕನ್ನು ಎದುರಿಸಬೇಕಾದವರೂ ಅವರೇ.

ಜೀವನಾವಶ್ಯಕ ವಸ್ತುಗಳಾದ ಹಣ್ಣು ತರಕಾರಿ ಮಾರುತ್ತಿದ್ದ ಜನರ ಮೇಲೆ ಹಲ್ಲೆ ನಡೆಸಿ ರಸ್ತೆಗೆ ಸುರಿದು ಅಮಾನವೀಯತೆ ಮೆರೆದ ಗುಜರಾತ್ ಪೊಲೀಸರ ಮತ್ತೊಂದು ವಿಡಿಯೊ ಮನಕಲಕುತ್ತಿದೆ…

Posted by Naanu Gauri on Tuesday, March 31, 2020

ನೂರಾರು ಮೈಲಿ ನಡೆದಾದರೂ ತಮ್ಮ ಹಳ್ಳಿಗಳಿಗೆ ಸೇರಲು ಪ್ರಯತ್ನಿಸಿದ ಹತಾಶ ಜನರನ್ನೇ ಜವಾಬ್ದಾರಿ ಇಲ್ಲದರೆಂದು ನಿಂದಿಸಿ, ಶಾಪ ಹಾಕುತ್ತಿರುವು ನಾವು ಬದುಕುತ್ತಿರುವ ನಿರ್ದಯಿ ಕಾಲಕ್ಕೆ ಸರಿಹೊಂದುವಂತೆಯೇ ಇದೆ. ಕೋವಿಡ್-19 ಹರಡಿದರೆ, ಅವರನ್ನೇ ದೂರಲಾಗುವುದು. ಅವರನ್ನು ನಗರಗಳಲ್ಲಿ ಸೇರಿಸಿಕೊಳ್ಳಲಾರರು. ತಮ್ಮ ಹಳ್ಳಿಗಳಲ್ಲಿಯೂ ಅವರನ್ನು ಸಂಶಯದಿಂದ ಕಾಣಲಾಗಬಹುದು. ಸರಕಾರ-ರಾಷ್ಟ್ರ ಕೈಬಿಟ್ಟ, ಸಮಾಜ ತಿರಸ್ಕರಿಸಿದ ಈ ಜನರು ತಮ್ಮ ಸ್ವಂತ ನೆಲದಲ್ಲೇ ಮನೆಯಿಲ್ಲದ ನಿರಾಶ್ರಿತರಾಗಲಿದ್ದಾರೆ.

ಕೃಪೆ: ‘ದಿ ವೈರ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...