Homeಅಂಕಣಗಳುನಮ್ಮ ನ್ಯಾಯ ವ್ಯವಸ್ಥೆಯ ನ್ಯಾಯ ಮತ್ತು ಅನ್ಯಾಯ

ನಮ್ಮ ನ್ಯಾಯ ವ್ಯವಸ್ಥೆಯ ನ್ಯಾಯ ಮತ್ತು ಅನ್ಯಾಯ

- Advertisement -
- Advertisement -

 ಗೌರಿ ಲಂಕೇಶ್
14 ಜನವರಿ, 2014 (`ಕಂಡಹಾಗೆ’ ಸಂಪಾದಕೀಯದಿಂದ) |

ನಾನು ಕೋರ್ಟಿಗೆ ಹೋದಾಗಲೆಲ್ಲಾ ಅಲ್ಲಿಗೆ ಬರುವ ತರಹೇವಾರಿ ಜನರನ್ನು ಗಮನಿಸುತ್ತಾ ಕಾಲ ಕಳೆಯುತ್ತೇನೆ. ಹಲವೊಮ್ಮೆ ನನ್ನ ಕುತೂಹಲ ಕೆರಳಿಸಿದವರನ್ನು ಮಾತನಾಡಿಸುತ್ತೇನೆ. ಆಗ ವಿಚಿತ್ರ ರೀತಿಯ ಜನಗಳ, ಸಮಸ್ಯೆ ಬದುಕುಗಳ ಕಿರುನೋಟ ನನಗೆ ದೊರಕುತ್ತದೆ.
ಇತ್ತೀಚೆಗೆ ಕೋರ್ಟ್ ಹಾಲ್ ಒಂದರಲ್ಲಿ ನನ್ನ ಪಕ್ಕ ಸುಮಾರು 50 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕೂತಿದ್ದರು. ಅವರ ಮುಖದಲ್ಲಿ ಆತಂಕ, ಜಿಗುಪ್ಸೆ ತುಂಬಿತ್ತು. ಆಕೆಯೊಂದಿಗೆ ಮಾತನಾಡಿದಾಗ ಗೊತ್ತಾಗಿದ್ದು, ಅವರ ಮನೆಯನ್ನು ಅದ್ಯಾರಿಗೋ ಬಾಡಿಗೆ ಮೇಲೆ ನೀಡಿದ್ದರಂತೆ. ಆದರೆ ಬಾಡಿಗೆದಾರ ಎಂತೆಂತಹದ್ದೋ ತಕರಾರುಗಳನ್ನು ಎತ್ತಿ ಇವರ ವಿರುದ್ದ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದನಂತೆ. ಅ ವ್ಯಾಜ್ಯ ಐದಾರು ವರ್ಷ ನಡೆದು ಇನ್ನೇನು ತೀರ್ಪು ಬರಬೇಕು ಎನ್ನುವಾಗ ತಾನು ಬಾಡಿಗೆ ನೀಡುವುದಾಗಿ ಈ ಮಹಿಳೆಯ ಗಂಡನನ್ನು ಕರೆದನಂತೆ, ಆತನನ್ನು ಭೇಟಿಯಾಗಲೂ ಹೋದ ಗಂಡ ಎರಡು ದಿನವಾದರೂ ಮನೆಗೆ ಹಿಂದಿರುಗಲಿಲ್ಲ. ಬದಲಾಗಿ ಆತನ ಹೆಣ ಬೆಂಗಳೂರಿನ ಕೆರೆಯೊಂದರಲ್ಲಿ ಸಿಕ್ಕಿತು. ಬಾಡಿಗೆದಾರನೇ ಕೊಲೆ ಮಾಡಿಸಿದ್ದಾನೆಂದು ಈಕೆ ಪೊಲೀಸರಿಗೆ ದೂರು ನೀಡಿದರು. ಆದರೆ ಬಾಡಿಗೆದಾರನೊಂದಿಗೆ ಶಾಮೀಲಾದ ಪೊಲೀಸರು ಕೊಲೆಗಡುಕ ಸಿಕ್ಕಿಲ್ಲವೆಂದು ವರದಿ ಸಲ್ಲಿಸಿದರು. ಆಗ ಮಹಿಳೆ ಬಾಡಿಗೆದಾರ ಮತ್ತು ಪೊಲೀಸರ ವಿರುದ್ದ ನ್ಯಾಯಾಲಯದ ಮೊರೆಹೋದರು.
ಇದೆಲ್ಲಾ ನಡೆದು ಬರೋಬ್ಬರಿ 16 ವರ್ಷಗಳಾಗಿವೆ. ಈ ಮಧ್ಯೆ ಈಕೆಯ ಮಕ್ಕಳು ಬೆಳೆದು ನಿಂತಿದ್ದಾರೆ. ಪೊಲೀಸ್ ಅಧಿಕಾರಿ ನಿವೃತ್ತಿ ಪಡೆದು ತನ್ನ ಮನೆ ಸೇರಿದ್ದಾನೆ. ಬಾಡಿಗೆದಾರ ಇನ್ನೂ ಅದೇ ಮನೆಯಲ್ಲಿ ವಾಸಿಸುತ್ತಿದ್ದಾನೆ. ಆದರೆ ಈ ಮಹಿಳೆಯ ಅರ್ಜಿ ಅಂದು ಎಲ್ಲಿತ್ತೋ ಇವತ್ತಿಗೂ ಅಲ್ಲೇ ಇದೆ. ಆಕೆಗೆ ಬಾಡಿಗೆಯೂ ಬಂದಿಲ್ಲ. ಆಸ್ತಿಯೂ ವಾಪಸ್ಸಾಗಿಲ್ಲ, ನ್ಯಾಯವಂತೂ ಸಿಕ್ಕಿಲ್ಲ, ಈ ವ್ಯಾಜ್ಯ ಮ್ಯಾಜಿಸ್ಟ್ರೇಟರ ನಂತರ ಹೈಕೋರ್ಟಿಗೆ ಹೋಗಿ ಅಂತ್ಯಗೊಳ್ಳುವುದು ಇನ್ನು ಎಷ್ಟು ವರ್ಷಕ್ಕೋ?
ಇನ್ನೊಂದು ವಿಚಿತ್ರ ಪ್ರಕರಣ. ಸುಮಾರು 45 ಪ್ರಾಯದ ಈಕೆ ರಾಜ್ಯ ಸರ್ಕಾರಿ ನೌಕರಿಯಲ್ಲಿದ್ದಾರೆ. ಈಕೆಯ ಗಂಡ ಕೇಂದ್ರ ಸರ್ಕಾರದ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದಾನೆ. ಈಕೆ ಮದುವೆಯಾದ ಕೆಲ ವರ್ಷಗಳಲ್ಲೇ ಗಂಡ ಮತ್ತೊಬ್ಬಳನ್ನು ಮದುವೆಯಾದಾಗ ಈಕೆ ಆತನನ್ನು ತೊರೆದು ತಾನಾಯಿತು ತನ್ನ ಪಾಡಾಯಿತು ಎಂದು ಏಕಾಂಗಿ ಜೀವನ ಸಾಗಿಸಲಾರಂಭಿಸಿದಳು. ಆದರೆ ಗಂಡನ ಕಾಟ ಮುಂದುವರೆಯಿತು. ಆತ ಸರ್ಕಾರಿ ನೌಕರನಾದ್ದರಿಂದ ತನ್ನ ಎರಡನೇ ಪತ್ನಿಯ ಬಗ್ಗೆ ದಾಖಲಿಸುವಂತಿಲ್ಲ. ಆದ್ದರಿಂದ ಎರಡನೇ ಪತ್ನಿಯೊಂದಿಗೆ ಮಕ್ಕಳಾದಾಗ ಆತ ಆಸ್ಪತ್ರೆಯಲ್ಲಿ ತಾಯಿಯ ಹೆಸರು ನಮೂದಿಸಬೇಕಿದ್ದ ಜಾಗದಲ್ಲಿ ತನ್ನ ಮೊದಲನೆ ಹೆಂಡತಿಯ ಹೆಸರನ್ನೇ ದಾಖಲಿಸಿದ್ದ. ಇದು ಮೊದಲನೇ ಪತ್ನಿಗೆ ಗೊತ್ತಾದಾಗ ಆಕೆ ಕೆಂಡಾಮಂಡಲವಾದಳು. ತನ್ನ ಬದುಕನ್ನು ಹಾಳು ಮಾಡಿ ಏಕಾಂಗಿಯಾಗಿ ಸದ್ದಿಲ್ಲದೇ ತನ್ನದಲ್ಲದ ಮಕ್ಕಳನ್ನು ತನ್ನ ತಲೆಗೆ ಕಟ್ಟುತ್ತಿರುವ ನಾಳೆ ತನ್ನ ಚೂರುಪಾರು ಆಸ್ತಿಗೂ ಆತನ ಎರಡನೇ ಪತ್ನಿಯ ಮಕ್ಕಳು ತಾವೇ ವಾರಸುದಾರರು ಎಂದು ವಾದಿಸಿದರೆ ಏನು ಗತಿ ಎಂದು ಚಿಂತಿಸಿ ಗಂಡನ ವಿರುದ್ದ ನ್ಯಾಯಾಲಯದ ಮೆಟ್ಟಿಲನ್ನು ಏರಿದಳು. ಆ ಮಕ್ಕಳು ತನ್ನ ಮಕ್ಕಳಲ್ಲ, ಅವರುಗಳ ತಾಯಿ ತಾನಲ್ಲ ಎಂಬ ತೀರ್ಪು ಕೋರಿದಳು.
ಆಕೆ ಇಂಥದ್ದೊಂದು ಅರ್ಜಿ ಸಲ್ಲಿಸಿ, ಈಗ ಹನ್ನೊಂದು ವರ್ಷಗಳಾಗಿವೆ. ಆದರೆ ಅರ್ಜಿ ಮಾತ್ರ ಮುಂದಕ್ಕೆ ಹೋಗದೇ ಎಲ್ಲಿದೆಯೋ ಅಲ್ಲೇ ಇದೆ. ಇದನ್ನೆಲ್ಲಾ ಹೇಳಿದಕ್ಕೆ ಕಾರಣವಿದೆ. ಇವತ್ತು 21 ಹೈಕೋರ್ಟ್‍ಗಳ ಮುಂದೆ ಮೂವತ್ತು ಲಕ್ಷಕ್ಕಿಂತಲೂ ಹೆಚ್ಚು ಕೇಸುಗಳಿವೆ. ಇನ್ನು ಇತರೆ ನ್ಯಾಯಾಲಯಗಳ ಮುಂದೆ ಸುಮಾರು ಮೂರು ಕೋಟಿ ಕೇಸುಗಳಿವೆ. ಅಷ್ಟೇ ಅಲ್ಲ ದೇಶದಾದ್ಯಂತ ಕನಿಷ್ಠ ಮೂರು ಸಾವಿರ ಜಡ್ಜ್‍ಗಳ ಕೊರತೆ ಇದೆ. ಹೀಗಿರುವಾಗ ಈ ಲಕ್ಷಾಂತರ ಕೇಸುಗಳು ಇತ್ಯರ್ಥವಾಗುವುದೆಂದು? ಜನಸಾಮಾನ್ಯರಿಗೆ ನ್ಯಾಯ ಸಿಗುವುದೆಂದು?
ನಮ್ಮ ನ್ಯಾಯ ವ್ಯವಸ್ಥೆಯ ಒಂದು ಮಗ್ಗಲು ಇದಾದರೆ ಇನ್ನೊಂದು ಮಗ್ಗಲು ನಮ್ಮ ಜೈಲಿನಲ್ಲಿರುವ ಎರಡೂವರೆ ಲಕ್ಷ ವಿಚಾರಣಾಧೀನ ಬಂಧಿಗಳು. ಅವರಲ್ಲಿ ಬಹಳಷ್ಟು ಜನ ಐದು ವರ್ಷಕ್ಕಿಂತಲೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ.
ಒಂದು ಅಂದಾಜಿನ ಪ್ರಕಾರ ಬಹಳಷ್ಟು ವಿಚಾರಣಾಧೀನ ಖೈದಿಗಳ ವಿರುದ್ದದ ಕೇಸುಗಳು ಸಾಬೀತಾಗದೆ ಕೊನೆಗೆ ಅವರು ನಿರಪರಾಧಿಗಳು ಎಂದು ಬಿಡುಗಡೆ ಹೊಂದುತ್ತಾರೆ. ಆದರೆ ಅಷ್ಟರ ಮಟ್ಟಿಗೆ ಅವರ ಬದುಕಿನ ಹಲವಾರು ವರ್ಷಗಳು ಜೈಲಿನಲ್ಲೇ ಕಳೆದು ಹೋಗಿರುತ್ತದಲ್ಲದೇ, ಅವರು ಬಿಡುಗಡೆಗೊಂಡು ಹೊರಬರುವ ಹೊತ್ತಿಗೆ ಸಮಾಜದಲ್ಲಿನ ಅವರ ಮಾನ ಮತ್ತು ಬದುಕಿನ ಅವಕಾಶಗಳು ನಾಶವಾಗಿರುತ್ತವೆ. ಹಾಗೆಯೇ ಬಹಳಷ್ಟು ಪ್ರಕರಣಗಳಲ್ಲಿ ವಿಚಾರಣಾಧೀನ ಖೈದಿಯೇ ಆತನ ಸಂಸಾರದ ಆರ್ಥಿಕ ಸ್ತಂಭವಾಗಿರುವುದರಿಂದ ಆತ ಜೈಲಿನಲ್ಲಿರುವಾಗ ಆ ಸಂಸಾರವೇ ಛಿದ್ರಗೊಂಡಿರುತ್ತದೆ. ಇದೆಲ್ಲದರ ಅರ್ಥ ಕೊನೆಗೂ ವಿಚಾರಣಾಧೀನ ಖೈದಿಗೆ ನ್ಯಾಯ ಸಿಕ್ಕರೂ ಅನ್ಯಾಯವಾಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...