Homeಕರೋನಾ ತಲ್ಲಣಕೊವ್ಯಾಕ್ಸಿನ್: ಒಂದು ಪೊಲಿಟಿಕಲ್ ಜುಮ್ಲಾ, ಆತ್ಮ್‌ನಿರ್ಭರ್ ಹಪಾಹಪಿಗೊಂದು ನಿದರ್ಶನ

ಕೊವ್ಯಾಕ್ಸಿನ್: ಒಂದು ಪೊಲಿಟಿಕಲ್ ಜುಮ್ಲಾ, ಆತ್ಮ್‌ನಿರ್ಭರ್ ಹಪಾಹಪಿಗೊಂದು ನಿದರ್ಶನ

ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ 110% ಸುರಕ್ಷಿತ ಎಂದು ಯಾವುದೇ ದತ್ತಾಂಶಗಳ ಆಧಾರವಿಲ್ಲದೇ ಘೋಷಣೆ ಮಾಡಿರುವ ವಿಷಯವಾರು ತಜ್ಞರ ಸಮಿತಿಯ ಸದಸ್ಯರ ಹೆಸರು ಸಾರ್ವಜನಿಕ ವಲಯಕ್ಕೆ ಗೊತ್ತೇ ಇಲ್ಲ.

- Advertisement -
- Advertisement -

ರಾಜಕಾರಣಿಗಳ ವರಸೆಯಲ್ಲಿ ಹಲವು ವಿಜ್ಞಾನಿಗಳು ಕೂಡ ಇದರ ಸಮರ್ಥನೆ ಮಾಡುತ್ತಿರುವುದು, ಒಟ್ಟಿನಲ್ಲಿ ಮೋದಿಯ ’ಆತ್ಮನಿರ್ಭರ್ ಭಾರತ್’ನಲ್ಲಿ ಒಂದು ದೇಸಿ ಲಸಿಕೆ ಅಭಿವೃದ್ಧಿಯಾಗಿತು ಎಂಬುದನ್ನು ತೋರಿಸುವುದಕ್ಕೆ! ಹಾಗಾಗಿ ಇದೊಂದು ಪಾಲಿಟಿಕಲ್ ಜುಮ್ಲಾ ಅಷ್ಟೇ.

ಕೊವ್ಯಾಕ್ಸಿನ್ ಲಸಿಕೆಗೆ ಔಷಧ ನಿಯಂತ್ರಕರು ಅನುಮತಿ ನೀಡಿರುವುದರ ಹಿಂದೆ ವಿಶ್ವಾಸಾರ್ಹವಲ್ಲದ ವೈಜ್ಞಾನಿಕೇತರ ಕಾರಣಗಳಿವೆ. ಈ ಲಸಿಕೆ ಮೂರನೆ ಹಂತದ ಟ್ರಯಲ್ ಪೂರ್ಣಗೊಳಿಸಿಲ್ಲ, ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ದತ್ತಾಂಶವನ್ನೂ ಪ್ರಕಟಿಸಿಲ್ಲ.

ಇದನ್ನೂ ಓದಿ: ಪ್ರಯೋಗ ಪೂರೈಸದ ಲಸಿಕೆಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆಯೆ?: ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರ್‌ಟಿಐ ಕಾರ್ಯಕರ್ತ

ರಾಜಕಾರಣಿಗಳು ಮತ್ತು ರಾಜಕೀಯ ವಿಶ್ಲೇಷಕರೇನೋ ತಮ್ಮದೇ ಕಾರಣಗಳಿಗಾಗಿ ಈ ಲಸಿಕೆ ಬಳಕೆಯ ಸಮ್ಮತ್ತಿಯನ್ನು ಸಾರ್ವಜನಿಕ ಆರೋಗ್ಯದ ನೆಪದಲ್ಲಿ ಬೆಂಬಲಿಸುತ್ತಾರೆ. ಆದರೆ ವೈಜ್ಞಾನಿಕ ಸಮುದಾಯದ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವ ಹಲವರು ಕೂಡ ಇದನ್ನು ಕುರುಡಾಗಿ ಬೆಂಬಲಿಸುವುದನ್ನು ನೋಡಿದರೆ, ಮೋದಿಯವರ ಆತ್ಮನಿರ್ಭರ್ ಭಾರತದಲ್ಲಿ ಒಂದು ದೇಸಿ ಲಸಿಕೆ ತಯಾರಾಗಿತು ಎಂದು ಸಾಧಿಸುವ ಹಠವೇ ಎದ್ದು ಕಾಣುತ್ತಿದೆ. ಸೀರಂ ಕಂಪನಿಯ ಕೊವಿಶೀಲ್ಡ್ ಬಳಕೆಗೆ ಅನುಮತಿ ನೀಡುವ ಸಂದರ್ಭದಲ್ಲೇ ಇದಕ್ಕೂ ಅನುಮತಿ ನೀಡಿರುವುದು ಇದೇ ಉದ್ದೇಶಕ್ಕಾಗಿ.

ಭಾರತ ರಿಪಬ್ಲಿಕ್‌ನ ಉನ್ನತ ನ್ಯಾಯಾಂಗವು ಜನ ಪ್ರತಿರೋಧದ ಅಲೆಗಳನ್ನು ತಡೆಯಲು ಹಿಂಜರಿಂಯುತ್ತಿರುವ ಒಳ್ಳೆಯ ಬೆಳವಣಿಗೆಯ ನಡುವೆಯೇ ಔಷಧ ನಿಯಂತ್ರಕರು ’ನಿಯಂತ್ರಿತ ಬಳಕೆ’ ಎಂದು ಭಾಷಾ ನೈಪುಣ್ಯತೆಯ ಹೊದಿಕೆಯಲ್ಲಿ ಈ ಲಸಿಕೆಗೆ ಅನುಮತಿ ನೀಡಿದ್ದಾರೆ.

ಈ ಕ್ರಮದಿಂದ ಅಂತಹ ದೊಡ್ಡ ಪೊಲಿಟಿಕಲ್ ರಿಸ್ಕ್ ಏನೂ ಇಲ್ಲ, ಇದನ್ನು ಮ್ಯಾನೇಜ್ ಮಾಡಬಹುದು ಎಂದು ಮೋದಿ ಸರ್ಕಾರ ಅಂದಾಜಿಸಿರಬಹುದು. ಮೂರನೆ ಹಂತದಲ್ಲಿ ಲಸಿಕೆಯ ಸಮಸ್ಯೆಗಳು ಕಾಣಿಸಿದರೆ, ಅದನ್ನು ಕೈಬಿಡಬೇಕಾಗಬಹುದು. ಸಮಸ್ಯೆಗಳು ನಂತರದಲ್ಲಿ ಗೋಚರಿಸಿದರೆ ಸಾರ್ವಜನಿಕರ ’ಶಾರ್ಟ್ ಮೆಮರಿ’ ಮತ್ತು ಜನರನ್ನು ಬೇರೆ ವಿಷಯಗಳತ್ತ ತಿರುಗಿಸುವ ಸರ್ಕಾರದ ’ಕುಶಲತೆ’ಯಿಂದಾಗಿ ಅದು ಮುಚ್ಚಿಯೂ ಹೋಗಬಹುದು.

ಇದನ್ನೂ ಓದಿ: ಮಧ್ಯಪ್ರದೇಶ: ‘ಇದು ಪ್ರಯೋಗ’ ಎಂದು ಹೇಳದೆ ಸಾರ್ವಜನಿಕರಿಗೆ ಲಸಿಕೆ ನೀಡಿದ ಖಾಸಗಿ ಆಸ್ಪತ್ರೆ!

ಸಾರ್ವಜನಿಕ ಆರೋಗ್ಯ ಮತ್ತು ಮೋದಿ ಸರ್ಕಾರದ ’ರಾಜಕೀಯ ಆರೋಗ್ಯ’ಕ್ಕೆ ಮುಂದೆ ಒದಗಬಹುದಾದ ರಿಸ್ಕ್ ಅನ್ನು ಹೇಗೋ ಸಂಭಾಳಿಸಬಹುದು, ಆದರೆ ಆರೋಗ್ಯ ಸೇವೆ ಮತ್ತು ಫಾರ್ಮಾಟಿಕ್ಸ್‌ನಲ್ಲಿ ಭಾರತಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆಗೆ ಒದಗುವ ರಿಸ್ಕ್ ಅನ್ನು ನಿವಾರಿಸಲಾಗದು. ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ 110% ಸುರಕ್ಷಿತ ಎಂದು ಯಾವುದೇ ದತ್ತಾಂಶಗಳ ಆಧಾರವಿಲ್ಲದೇ ಘೋಷಣೆ ಮಾಡಿರುವ ವಿಷಯವಾರು ತಜ್ಞರ ಸಮಿತಿಯ ಸದಸ್ಯರ ಹೆಸರು ಸಾರ್ವಜನಿಕ ವಲಯಕ್ಕೆ ಗೊತ್ತೇ ಇಲ್ಲ.

’ನಾವು ತಜ್ಞರು, ನಮ್ಮನ್ನು ನಂಬಿ’, ’ಭಾರತೀಯ ವಿಜ್ಞಾನಿಗಳನ್ನು ನಂಬಿ’ ಎಂಬ ರಮಿಸುವ ಆಟಗಳು ದೇಶದೊಳಗಡೆಯಷ್ಟೇ ಯಶಸ್ವಿಯಾಗಬಹುದು. ಆದರೆ ವಿದೇಶಿ ಕ್ಷೇತ್ರದಲ್ಲಿ ಇಂತದ್ದೆಲ್ಲ ನಡೆಯಲಾರದು. ಈ ಕಾರಣಕ್ಕೇ ಸಾಕಷ್ಟು ಪಾರದರ್ಶಕತೆ, ವ್ಯಾಪಕ ಟ್ರಯಲ್ಸ್ ಮತ್ತು ವೈಜ್ಞಾನಿಕ ಪುರಾವೆ ಹೊಂದಿರುವ ಪಾಶ್ಚಾತ್ಯ ಲಸಿಕೆಗಳಿಗೆ ರಷ್ಯಾ ಮತ್ತು ಚೀನಾದ ಲಸಿಕೆಗಳಿಗಿಂತ ಹೆಚ್ಚು ಬೇಡಿಕೆಯಿದೆ.

ಲಸಿಕೆ ಮತ್ತು ಔಷಧಿ ತಯಾರಿಕೆಯಲ್ಲಿ ಜಗತ್ತಿನ ಪ್ರಮುಖ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಮೋದಿ ಸರ್ಕಾರ ಈ ಹೆಮ್ಮೆಗೆ ಮಸುಕಾಗದಂತೆ ಈ ದೇಸಿ ಕೈಗಾರಿಕೆಗೆ ಉತ್ತೇಜನ ನೀಡಬೇಕು. ಈ ಸರ್ಕಾರ ನೆನಪಿನಲ್ಲಿ ಇಡಬೇಕು: ’ಅಹಿಂಸಾ’ ಎಂಬುದು ಮೂಲಧರ್ಮ. ವೈದ್ಯಕೀಯದಲ್ಲಿ ಮೂಲಧರ್ಮ “primum non nocere”… ಇವೆರಡರ ಅರ್ಥ ಒಂದೇ: ‘Do No Harm’

ಕೃಪೆ: ದಿ ಪ್ರಿಂಟ್- ನಿತಿನ್ ಪೈ (ತಕ್ಷಶಿಲಾ ಸಂಸ್ಥೆಯ ನಿರ್ದೇಶಕರು)
ಅನುವಾದ: ಮಲ್ಲನೌಡರ್‌ ಪಿ.ಕೆ

ಇದನ್ನೂ ಓದಿ: ‘ಲಸಿಕೆಯಲ್ಲಿ ಹಂದಿ ಮಾಂಸವಿಲ್ಲ’ – ಆಧಾರರಹಿತ ಸುದ್ದಿ ಕಡೆಗಣಿಸಲು ಮುಸ್ಲಿಂ ವಿದ್ವಾಂಸರ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...