Homeಕರೋನಾ ತಲ್ಲಣಕೊವ್ಯಾಕ್ಸಿನ್: ಒಂದು ಪೊಲಿಟಿಕಲ್ ಜುಮ್ಲಾ, ಆತ್ಮ್‌ನಿರ್ಭರ್ ಹಪಾಹಪಿಗೊಂದು ನಿದರ್ಶನ

ಕೊವ್ಯಾಕ್ಸಿನ್: ಒಂದು ಪೊಲಿಟಿಕಲ್ ಜುಮ್ಲಾ, ಆತ್ಮ್‌ನಿರ್ಭರ್ ಹಪಾಹಪಿಗೊಂದು ನಿದರ್ಶನ

ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ 110% ಸುರಕ್ಷಿತ ಎಂದು ಯಾವುದೇ ದತ್ತಾಂಶಗಳ ಆಧಾರವಿಲ್ಲದೇ ಘೋಷಣೆ ಮಾಡಿರುವ ವಿಷಯವಾರು ತಜ್ಞರ ಸಮಿತಿಯ ಸದಸ್ಯರ ಹೆಸರು ಸಾರ್ವಜನಿಕ ವಲಯಕ್ಕೆ ಗೊತ್ತೇ ಇಲ್ಲ.

- Advertisement -
- Advertisement -

ರಾಜಕಾರಣಿಗಳ ವರಸೆಯಲ್ಲಿ ಹಲವು ವಿಜ್ಞಾನಿಗಳು ಕೂಡ ಇದರ ಸಮರ್ಥನೆ ಮಾಡುತ್ತಿರುವುದು, ಒಟ್ಟಿನಲ್ಲಿ ಮೋದಿಯ ’ಆತ್ಮನಿರ್ಭರ್ ಭಾರತ್’ನಲ್ಲಿ ಒಂದು ದೇಸಿ ಲಸಿಕೆ ಅಭಿವೃದ್ಧಿಯಾಗಿತು ಎಂಬುದನ್ನು ತೋರಿಸುವುದಕ್ಕೆ! ಹಾಗಾಗಿ ಇದೊಂದು ಪಾಲಿಟಿಕಲ್ ಜುಮ್ಲಾ ಅಷ್ಟೇ.

ಕೊವ್ಯಾಕ್ಸಿನ್ ಲಸಿಕೆಗೆ ಔಷಧ ನಿಯಂತ್ರಕರು ಅನುಮತಿ ನೀಡಿರುವುದರ ಹಿಂದೆ ವಿಶ್ವಾಸಾರ್ಹವಲ್ಲದ ವೈಜ್ಞಾನಿಕೇತರ ಕಾರಣಗಳಿವೆ. ಈ ಲಸಿಕೆ ಮೂರನೆ ಹಂತದ ಟ್ರಯಲ್ ಪೂರ್ಣಗೊಳಿಸಿಲ್ಲ, ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ದತ್ತಾಂಶವನ್ನೂ ಪ್ರಕಟಿಸಿಲ್ಲ.

ಇದನ್ನೂ ಓದಿ: ಪ್ರಯೋಗ ಪೂರೈಸದ ಲಸಿಕೆಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆಯೆ?: ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರ್‌ಟಿಐ ಕಾರ್ಯಕರ್ತ

ರಾಜಕಾರಣಿಗಳು ಮತ್ತು ರಾಜಕೀಯ ವಿಶ್ಲೇಷಕರೇನೋ ತಮ್ಮದೇ ಕಾರಣಗಳಿಗಾಗಿ ಈ ಲಸಿಕೆ ಬಳಕೆಯ ಸಮ್ಮತ್ತಿಯನ್ನು ಸಾರ್ವಜನಿಕ ಆರೋಗ್ಯದ ನೆಪದಲ್ಲಿ ಬೆಂಬಲಿಸುತ್ತಾರೆ. ಆದರೆ ವೈಜ್ಞಾನಿಕ ಸಮುದಾಯದ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವ ಹಲವರು ಕೂಡ ಇದನ್ನು ಕುರುಡಾಗಿ ಬೆಂಬಲಿಸುವುದನ್ನು ನೋಡಿದರೆ, ಮೋದಿಯವರ ಆತ್ಮನಿರ್ಭರ್ ಭಾರತದಲ್ಲಿ ಒಂದು ದೇಸಿ ಲಸಿಕೆ ತಯಾರಾಗಿತು ಎಂದು ಸಾಧಿಸುವ ಹಠವೇ ಎದ್ದು ಕಾಣುತ್ತಿದೆ. ಸೀರಂ ಕಂಪನಿಯ ಕೊವಿಶೀಲ್ಡ್ ಬಳಕೆಗೆ ಅನುಮತಿ ನೀಡುವ ಸಂದರ್ಭದಲ್ಲೇ ಇದಕ್ಕೂ ಅನುಮತಿ ನೀಡಿರುವುದು ಇದೇ ಉದ್ದೇಶಕ್ಕಾಗಿ.

ಭಾರತ ರಿಪಬ್ಲಿಕ್‌ನ ಉನ್ನತ ನ್ಯಾಯಾಂಗವು ಜನ ಪ್ರತಿರೋಧದ ಅಲೆಗಳನ್ನು ತಡೆಯಲು ಹಿಂಜರಿಂಯುತ್ತಿರುವ ಒಳ್ಳೆಯ ಬೆಳವಣಿಗೆಯ ನಡುವೆಯೇ ಔಷಧ ನಿಯಂತ್ರಕರು ’ನಿಯಂತ್ರಿತ ಬಳಕೆ’ ಎಂದು ಭಾಷಾ ನೈಪುಣ್ಯತೆಯ ಹೊದಿಕೆಯಲ್ಲಿ ಈ ಲಸಿಕೆಗೆ ಅನುಮತಿ ನೀಡಿದ್ದಾರೆ.

ಈ ಕ್ರಮದಿಂದ ಅಂತಹ ದೊಡ್ಡ ಪೊಲಿಟಿಕಲ್ ರಿಸ್ಕ್ ಏನೂ ಇಲ್ಲ, ಇದನ್ನು ಮ್ಯಾನೇಜ್ ಮಾಡಬಹುದು ಎಂದು ಮೋದಿ ಸರ್ಕಾರ ಅಂದಾಜಿಸಿರಬಹುದು. ಮೂರನೆ ಹಂತದಲ್ಲಿ ಲಸಿಕೆಯ ಸಮಸ್ಯೆಗಳು ಕಾಣಿಸಿದರೆ, ಅದನ್ನು ಕೈಬಿಡಬೇಕಾಗಬಹುದು. ಸಮಸ್ಯೆಗಳು ನಂತರದಲ್ಲಿ ಗೋಚರಿಸಿದರೆ ಸಾರ್ವಜನಿಕರ ’ಶಾರ್ಟ್ ಮೆಮರಿ’ ಮತ್ತು ಜನರನ್ನು ಬೇರೆ ವಿಷಯಗಳತ್ತ ತಿರುಗಿಸುವ ಸರ್ಕಾರದ ’ಕುಶಲತೆ’ಯಿಂದಾಗಿ ಅದು ಮುಚ್ಚಿಯೂ ಹೋಗಬಹುದು.

ಇದನ್ನೂ ಓದಿ: ಮಧ್ಯಪ್ರದೇಶ: ‘ಇದು ಪ್ರಯೋಗ’ ಎಂದು ಹೇಳದೆ ಸಾರ್ವಜನಿಕರಿಗೆ ಲಸಿಕೆ ನೀಡಿದ ಖಾಸಗಿ ಆಸ್ಪತ್ರೆ!

ಸಾರ್ವಜನಿಕ ಆರೋಗ್ಯ ಮತ್ತು ಮೋದಿ ಸರ್ಕಾರದ ’ರಾಜಕೀಯ ಆರೋಗ್ಯ’ಕ್ಕೆ ಮುಂದೆ ಒದಗಬಹುದಾದ ರಿಸ್ಕ್ ಅನ್ನು ಹೇಗೋ ಸಂಭಾಳಿಸಬಹುದು, ಆದರೆ ಆರೋಗ್ಯ ಸೇವೆ ಮತ್ತು ಫಾರ್ಮಾಟಿಕ್ಸ್‌ನಲ್ಲಿ ಭಾರತಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆಗೆ ಒದಗುವ ರಿಸ್ಕ್ ಅನ್ನು ನಿವಾರಿಸಲಾಗದು. ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ 110% ಸುರಕ್ಷಿತ ಎಂದು ಯಾವುದೇ ದತ್ತಾಂಶಗಳ ಆಧಾರವಿಲ್ಲದೇ ಘೋಷಣೆ ಮಾಡಿರುವ ವಿಷಯವಾರು ತಜ್ಞರ ಸಮಿತಿಯ ಸದಸ್ಯರ ಹೆಸರು ಸಾರ್ವಜನಿಕ ವಲಯಕ್ಕೆ ಗೊತ್ತೇ ಇಲ್ಲ.

’ನಾವು ತಜ್ಞರು, ನಮ್ಮನ್ನು ನಂಬಿ’, ’ಭಾರತೀಯ ವಿಜ್ಞಾನಿಗಳನ್ನು ನಂಬಿ’ ಎಂಬ ರಮಿಸುವ ಆಟಗಳು ದೇಶದೊಳಗಡೆಯಷ್ಟೇ ಯಶಸ್ವಿಯಾಗಬಹುದು. ಆದರೆ ವಿದೇಶಿ ಕ್ಷೇತ್ರದಲ್ಲಿ ಇಂತದ್ದೆಲ್ಲ ನಡೆಯಲಾರದು. ಈ ಕಾರಣಕ್ಕೇ ಸಾಕಷ್ಟು ಪಾರದರ್ಶಕತೆ, ವ್ಯಾಪಕ ಟ್ರಯಲ್ಸ್ ಮತ್ತು ವೈಜ್ಞಾನಿಕ ಪುರಾವೆ ಹೊಂದಿರುವ ಪಾಶ್ಚಾತ್ಯ ಲಸಿಕೆಗಳಿಗೆ ರಷ್ಯಾ ಮತ್ತು ಚೀನಾದ ಲಸಿಕೆಗಳಿಗಿಂತ ಹೆಚ್ಚು ಬೇಡಿಕೆಯಿದೆ.

ಲಸಿಕೆ ಮತ್ತು ಔಷಧಿ ತಯಾರಿಕೆಯಲ್ಲಿ ಜಗತ್ತಿನ ಪ್ರಮುಖ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಮೋದಿ ಸರ್ಕಾರ ಈ ಹೆಮ್ಮೆಗೆ ಮಸುಕಾಗದಂತೆ ಈ ದೇಸಿ ಕೈಗಾರಿಕೆಗೆ ಉತ್ತೇಜನ ನೀಡಬೇಕು. ಈ ಸರ್ಕಾರ ನೆನಪಿನಲ್ಲಿ ಇಡಬೇಕು: ’ಅಹಿಂಸಾ’ ಎಂಬುದು ಮೂಲಧರ್ಮ. ವೈದ್ಯಕೀಯದಲ್ಲಿ ಮೂಲಧರ್ಮ “primum non nocere”… ಇವೆರಡರ ಅರ್ಥ ಒಂದೇ: ‘Do No Harm’

ಕೃಪೆ: ದಿ ಪ್ರಿಂಟ್- ನಿತಿನ್ ಪೈ (ತಕ್ಷಶಿಲಾ ಸಂಸ್ಥೆಯ ನಿರ್ದೇಶಕರು)
ಅನುವಾದ: ಮಲ್ಲನೌಡರ್‌ ಪಿ.ಕೆ

ಇದನ್ನೂ ಓದಿ: ‘ಲಸಿಕೆಯಲ್ಲಿ ಹಂದಿ ಮಾಂಸವಿಲ್ಲ’ – ಆಧಾರರಹಿತ ಸುದ್ದಿ ಕಡೆಗಣಿಸಲು ಮುಸ್ಲಿಂ ವಿದ್ವಾಂಸರ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....