Homeಅಂಕಣಗಳುಮಾತು ಮರೆತ ಭಾರತ-36; ದಲಿತ್ ಫೈಲ್ಸ್ : ದಲಿತರು ಹಿಂದೂಗಳಲ್ಲ, ದೇಗುಲಕ್ಕೆ ಪ್ರವೇಶವಿಲ್ಲ

ಮಾತು ಮರೆತ ಭಾರತ-36; ದಲಿತ್ ಫೈಲ್ಸ್ : ದಲಿತರು ಹಿಂದೂಗಳಲ್ಲ, ದೇಗುಲಕ್ಕೆ ಪ್ರವೇಶವಿಲ್ಲ

- Advertisement -
- Advertisement -

’ದೇವಸ್ಥಾನದೊಳಗೆ ಹೋಗೋದೂ ಒಂದೇ ಬೆಂಕಿಯೊಳಗೆ ಹೋಗೋದು ಒಂದೇ’ ಈ ಮಾತುಗಳನ್ನಾಡಿದ್ದು 50 ವರ್ಷ ವಯಸ್ಸಿನ ಕೊಪ್ಪಳದ ಮಾದಿಗರ ಹನುಮವ್ವ. ಬುದ್ಧಿ ಬಂದಾಗಿನಿಂದಲೂ ಊರಿನ ದೇಸ್ಥಾನದೊಳಗೆ ಇಂದಲ್ಲ ನಾಳೆ ಪ್ರವೇಶ ಸಿಗುತ್ತದೆ ಎಂದು ಕಾಯುತ್ತಿರುವ ಹನುಮವ್ವನ ಆಸೆ ಇಂದಿಗೂ ತೀರಿಲ್ಲ. ಹನುಮವ್ವ ಅಂತಿಂತ ಗಟ್ಟಿಗಿತ್ತಿಯಲ್ಲ, ಊರಿನ ಮೇಲ್ಜಾತಿಯವರು ಬೆದರಿಕೆ ಒಡ್ಡಿದ್ದರೂ ಸಹ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದವರು.

ಅದೇ ಊರಿನಲ್ಲಿ ದಲಿತ ಜಾತಿಯಾದ ’ದಾಸ’ರ 3 ವರ್ಷದ ವಿನಯ್ ಆಡುತ್ತಿದ್ದಾಗ ಮಳೆ ಬಂದ ಕಾರಣ ಆಶ್ರಯಕ್ಕಾಗಿ ದೇವಸ್ಥಾನದೊಳಗೆ ಕಾಲಿಟ್ಟುಬಿಟ್ಟ. ತಕ್ಷಣವೇ ಇಡೀ ಊರಿನ ಮೇಲ್ಜಾತಿ ಮುಖಂಡರು ಆ ಮಗುವಿನ ಕುಟುಂಬದ ಮೇಲೆ ಮುಗಿಬಿದ್ದರು. ದೇವಸ್ಥಾನ ದಲಿತನ ಪ್ರವೇಶದಿಂದ ಮೈಲಿಗೆಯಾಗಿದೆ, ಹಾಗಾಗಿ ಶುದ್ಧೀಕರಿಸಬೇಕೆಂದು ತೀರ್ಮಾನಿಸಿದರು. ಈ ಶುದ್ಧೀಕರಣಕ್ಕೆ ತಗಲುವ ಖರ್ಚನ್ನು ವಿನಯ್ ಕುಟುಂಬವೇ ಭರಿಸಬೇಕೆಂದು ಮೇಲ್ಜಾತಿ ಮನಸುಗಳು ತೀರ್ಪು ನೀಡಿದವು. ವಿಷಯ ತಿಳಿದ ಜಿಲ್ಲಾಡಳಿತ ಮೇಲ್ಜಾತಿ ಮುಖಂಡರನ್ನು ಬಂಧಿಸಿ ಜಿಲ್ಲೆಯ ಎಲ್ಲಾ ದೇವಸ್ಥಾನಕ್ಕೂ ದಲಿತರಿಗೆ ಪ್ರವೇಶ ನೀಡಬೇಕೆಂದು ತಾಕೀತು ಮಾಡಿತು. ವಿನಯ್ ಕುಟುಂಬವೂ ಸಹ ದೇವಸ್ಥಾನಕ್ಕೆ ಪೊಲೀಸ್ ಬೆಂಗಾವಲಿನಲ್ಲಿ ಪ್ರವೇಶ ಪಡೆಯಿತು. ಒಂದು ದಿನದ ಹರುಷವೂ ಮುಗಿಯಿತು. ವಿನಯ್ ಕುಟುಂಬಕ್ಕೆ ಕಿರುಕುಳ ನೀಡಿದ್ದ ಮೇಲ್ಜಾತಿ ಮುಖಂಡರನ್ನು ಜಾಮೀನಿನಲ್ಲಿ ಬಿಡುಗಡೆಗೊಳ್ಳುವ ಮುನ್ನಾ ದಿನವೇ ವಿನಯ್ ಕುಟುಂಬವನ್ನು ಊರು ಬಿಡುವಂತೆ ಮಾಡಲಾಯಿತು. ಇಲ್ಲದಿದ್ದರೆ ಅನಾಹುತ ಸಂಭವಿಸಬಹುದೆಂದು ಹೇಳಲಾಯಿತು. ಈ ಬೆದರಿಕೆ-ಹೆದರಿಕೆಗೆ ಜಿಲ್ಲಾಡಳಿತ ಬೆಂಗಾವಲು ನೀಡಲಾಗಲಿಲ್ಲ, ಆಗುವುದೂ ಇಲ್ಲ. ಸರ್ಕಾರ ವಿನಯ್‌ನನ್ನು ದತ್ತು ತೆಗೆದುಕೊಂಡು ಓದಿಸುವುದಾಗಿ ಭರವಸೆ ನೀಡಿತು. ಆದರೆ ಆತನ ಕುಟುಂಬ ಈಗ ಊರೂರು ಅಲೆಯುತ್ತ ಅನಾಥವಾಗಿದೆ. ಈ ಭಾಗದ ಮಾದಿಗ ಮತ್ತು ಛಲವಾದಿ ದಲಿತರ ಪಾಡು ಇದೇ ಆಗಿದೆ.

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಹಸಿಹಸಿಯಾಗಿ ಜೀವಂತವಿರುವ ಅಸ್ಪೃಶ್ಯತೆ ಆಚರಣೆಗೆ ಮತ್ತೊಂದು ಸಾಕ್ಷಿ ಕೋಲಾರದ ಮುಳಬಾಗಿಲು. ಇಲ್ಲಿ ದೇವರ ಕಂಬವನ್ನು ದಲಿತ ಯುವಕನೊಬ್ಬ ಮುಟ್ಟಿದ್ದಕ್ಕೆ ಮೇಲ್ಜಾತಿವಾದಿಗಳು 60,000 ರೂಪಾಯಿ ದಂಡ ವಿಧಿಸಿದ್ದರು. ಅಲ್ಲಿನ ದಲಿತರೂ ಸಹ ಹಿಂದೂ ಮೇಲ್ಜಾತಿ ದೇವರುಗಳನ್ನು ಮನೆಯಿಂದ ಹೊರಗೆ ಹಾಕಿ ಅಂಬೇಡ್ಕರ್ ದಾರಿಯನ್ನು ಹಿಡಿಯಲು ಮುಂದಾದರು.

ಇದು ಇಂದು ನಿನ್ನೆಯ ವಿಷಯವಲ್ಲ. ಸನಾತನ ಪರಂಪರೆಯ ಸಮಸ್ಯೆ. ಮಾನವೀಯವಾದ ನಮ್ಮ ಸಂವಿಧಾನ ಈ ಸನಾತನದ ವಿರುದ್ಧವಾಗಿ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಗೊಳಿಸಿದ ನಂತರವೂ ಇಂತಹ ಅಮಾನವೀಯ ಆಚರಣೆಗಳು ಈ ನೆಲದಲ್ಲಿ ಇನ್ನೂ ಜೀವಂತವಾಗಿವೆ. ಅಷ್ಟೇಅಲ್ಲದೇ ಬಹಿರಂಗವಾಗಿ ನಡೆಯುತ್ತವೆ.

ತಮ್ಮ ಹೋರಾಟದ ಆರಂಭಿಕ ಘಟ್ಟದಲ್ಲಿ ಸ್ವತಃ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರೇ ಕಾಳರಾಮ್ ದೇವಸ್ಥಾನ ಪ್ರವೇಶಕ್ಕೆ ಹೋರಾಟ ರೂಪಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಮೇಲ್ಜಾತಿ ಹಿಂದೂಗಳ ಜಡತ್ವವನ್ನು ಅರಿತು ದೇಗುಲ ಪ್ರವೇಶ ಹೋರಾಟದಿಂದಲೇ ದೂರ ಸರಿದರು. ಅಂಬೇಡ್ಕರರು ದೇವಸ್ಥಾನ ಪ್ರವೇಶ ಹೋರಾಟ ಕೈಬಿಟ್ಟು ಇಲ್ಲಿಗೆ ಸುಮಾರು 9 ದಶಕಗಳೇ ಕಳೆದಿವೆ. ಆದರೆ ಇಂದಿಗೂ ದಲಿತರು ದೇವಸ್ಥಾನದ ಬಾಗಿಲುಗಳನ್ನು ತಟ್ಟುತ್ತಲೇ ಇದ್ದಾರೆ. ಅಂಬೇಡ್ಕರ್ ಅವರ ದೂರದೃಷ್ಟಿ ಇವರಿಗೆ ಇಂದಿಗೂ ಅರ್ಥವಾಗಿಲ್ಲದಿರುವುದಕ್ಕೆ ನಾವೆಲ್ಲರೂ ಕಾರಣರಾಗಿದ್ದೇವೆ. ಆದರೆ ಮತ್ತೊಂದು ಕಡೆ ಕೋಲಾರದ ಮುಳಬಾಗಿಲಿನ ದಲಿತ ಕುಟುಂಬ ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯ. ’ನಿನಗೆಲ್ಲಿ ಗೌರವವಿಲ್ಲವೋ ಅಲ್ಲಿ ನಿನ್ನ ಚಪ್ಪಲಿಗಳನ್ನೂ ಸಹ ಬಿಡಬೇಡ’ ಎಂಬ ಅಂಬೇಡ್ಕರರ ಸ್ವಾಭಿಮಾನದ ಮಾತುಗಳನ್ನು ಮುಳಬಾಗಿನ ದಲಿತ ಕುಟುಂಬ ಪಾಲಿಸಿದೆ. ಇದು ಆಶಾದಾಯಕವಾದ ಬೆಳವಣಿಗೆ.

ಇದನ್ನೂ ಓದಿ: ಮಾತು ಮರೆತ ಭಾರತ-35; ಮಿರ್ಯಾಲಗುಡ ಫೈಲ್: ’ಅಪ್ಪನನ್ನು ಗಲ್ಲಿಗೇರಿಸಿ’ ಎಂದ ಅಮೃತಳ ಕತೆ

ಹಾಗೆಂದು ಇಂದಿಗೂ ದೇಗುಲ ಪ್ರವೇಶಕ್ಕಾಗಿಯೇ ಕಾಯುತ್ತಿರುವ ದಲಿತ ಸಮುದಾಯಕ್ಕೆ ನಿಜಸ್ಥಿತಿಯನ್ನು ಸಾರಿಸಾರಿ ಹೇಳಬೇಕಾಗಿದೆ. ಉದಾಹರಣೆಗೆ, 2022ರಲ್ಲಿ ರಾಯಚೂರಿನ ಗ್ರಾಮೀಣ ಕೂಲಿಕಾರ್ಮಿಕರ ಸಂಘವು 56 ಹಳ್ಳಿಗಳನ್ನು ಸಮೀಕ್ಷೆ ಮಾಡಿತು. ಅದರ ಪ್ರಕಾರ 56ರಲ್ಲಿ ಕೇವಲ 9 ಹಳ್ಳಿಗಳಲ್ಲಿ ಮಾತ್ರ ದಲಿತರಿಗೆ ದೇಗುಲ ಪ್ರವೇಶವಿತ್ತು. 2018ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ’ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್’ನ ಪ್ರೊ. ಮಾರುತಿಯವರ ನೇತೃತ್ವದಲ್ಲಿ ಒಂದು ಅಧ್ಯಯನ ನಡೆಯಿತು. ಈ ಅಧ್ಯಯನದ ಪ್ರಕಾರ ಕರ್ನಾಟಕದ ಶೇ.34ರಷ್ಟು ದಲಿತರಿಗೆ ದೇಗುಲ ಪ್ರವೇಶವೇ ಇಲ್ಲ. ಮಾರುತಿಯವರ ಪ್ರಕಾರ ಎಲ್ಲಿ ಅನಕ್ಷರತೆ ಕಡಿಮೆ ಇದೆಯೋ ಹಾಗೂ ಬಡವರು-ಶ್ರೀಮಂತರ ನಡುವಿನ ಅಂತರ ಎಲ್ಲಿ ಹೆಚ್ಚಿದೆಯೋ ಅಲ್ಲಿ ಹೆಚ್ಚಿನ ಜಾತಿ ತಾರತಮ್ಯವಿದೆ. ಎಲ್ಲಿ ದಲಿತರು ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದಾರೋ ಅಲ್ಲಿ ದಲಿತರ ಮೇಲಿನ ತಾರತಮ್ಯ ಕಡಿಮೆ ಆಗುತ್ತಿದೆ. ಜೊತೆಗೆ ದಲಿತರ ಆರ್ಥಿಕ ಸ್ಥಿತಿಗತಿಯೂ ಸಹ ಚನ್ನಾಗಿದೆ.

ಕೊಪ್ಪಳದಲ್ಲಿ ಪದೇಪದೇ ಅಸ್ಪೃಶ್ಯತೆ ಆಚರಣೆಯ ಘಟನೆಗಳು ಹೆಚ್ಚಾಗುತ್ತಲೇ ಇರುವುದಕ್ಕೆ ಕಾರಣ ಅಲ್ಲಿನ ದಲಿತರಲ್ಲಿರುವ ಅಜಾಗೃತಿ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಎಲ್ಲೆಲ್ಲಿ ಲಿಂಗಾಯತರು, ಬ್ರಾಹ್ಮಣರು, ಕುರುಬರು, ಗೌಡರು ಹಾಗೂ ನಾಯಕರ ಪ್ರಾಬಲ್ಯ ಹೆಚ್ಚಿದೆಯೋ ಅಲ್ಲೆಲ್ಲಾ ದಲಿತರ ಮೇಲಿನ ದೌರ್ಜನ್ಯಗಳ ಪ್ರಮಾಣ ಹೆಚ್ಚಿದೆ ಎಂದು ಈ ಸಮೀಕ್ಷೆ ಹೇಳುತ್ತದೆ. ಒಟ್ಟಾರೆ ಕರ್ನಾಟಕದಲ್ಲಿ 2019ರಿಂದ 2021ರ ನಡುವೆ ಶೇ.11ರಷ್ಟು ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿರುವುದಕ್ಕೆ ಕಾರಣ ಹಿಂದೂ ಮೇಲ್ಜಾತಿ ಪರ ನಿಂತಿರುವ ಬಿಜೆಪಿ ಸರ್ಕಾರವೇ ಆಗಿದೆ.

ಕೊನೆಯದಾಗಿ, ದಲಿತರು ಹೋರಾಡಿ ದೇಗುಲ ಪ್ರವೇಸಿದ ಮೇಲೆಯೂ ಅವರ ಜೀವನ ಮತ್ತಷ್ಟು ಚಿಂತಾಜನಕವಾಗುತ್ತದೆ ಎಂಬುವುದಕ್ಕೆ ಈ ಮುಂದಿನ ಪ್ರಕರಣವೇ ಸಾಕ್ಷಿ. ಹಾಸನದ ದಿಂಡಗೂರು ಗ್ರಾಮದಲ್ಲಿ ದೇಗುಲ ಪ್ರವೇಶಕ್ಕೆ ಹೋರಾಡಿದ ದಲಿತ ಯುವಕ ಸಂತೋಷ್ ಇಂದು ಗ್ರಾಮದವರ ಅಘೋಷಿತ ಬಹಿಷ್ಕಾರಕ್ಕೆ ನಲುಗಿಹೋಗಿದ್ದಾನೆ. ಆತನೊಬ್ಬನೇ ಅಲ್ಲ, ಅವನ ಜೊತೆಗೆ ಇಡೀ ಸಮುದಾಯವನ್ನೇ ಮೇಲ್ಜಾತಿಗಳು ಬಹಿಷ್ಕಾರ ಮಾಡಿದ್ದಾರೆ. ಅಲ್ಲಿನ ದಲಿತರು ಹೊಟ್ಟೆಪಾಡಿಗಾಗಿ ದೂರದೂರಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಸವಲತ್ತುಗಳು ಸಿಗದೇ ಸ್ವತಃ ಸಂತೋಷ್ ಕಂಗಾಲಾಗಿದ್ದಾನೆ. ಇನ್ನು ಮುಂದೆ ದೇಗುಲ ಪ್ರವೇಶಕ್ಕಾಗಿ ಒತ್ತಾಯಿಸುವುದಿಲ್ಲವೆಂಬ ಷರತ್ತಿನ ಮೇಲೆ ಅಲ್ಲಿನ ಒಕ್ಕಲಿಗರು ಕೆಲವು ದಲಿತ ಕುಟುಂಬಗಳಿಗೆ ಕೆಲಸ ನೀಡಲು ಒಪ್ಪಿಕೊಂಡಿವೆ.

ಹಾಗಾಗಿ ಇಂದು ದಲಿತರ ಮುಂದೆ, ದೇಗುಲ ಪ್ರವೇಶಕ್ಕಿಂತಲೂ ಹೆಚ್ಚು ಮುಖ್ಯವಾಗಿರುವ ಹಾಗೂ ತುರ್ತಾಗಿರುವ ಕಾರ್ಯಗಳಿವೆ. ಕರ್ನಾಟಕದ ಕೇವಲ ಶೇ.10ರಷ್ಟು ದಲಿತರು ಮಾತ್ರ ಭೂಮಿಯನ್ನು ಹೊಂದಿದ್ದಾರೆ. ದಲಿತರ ಸರಾಸರಿ ಭೂಮಿಯ ಪಾಲು ಕೇವಲ 0.2 ಹೆಕ್ಟೇರ್ ಮಾತ್ರ. ದಲಿತರೊಳಗೆ ಕೂಲಿಕಾರ್ಮಿಕರ ಪ್ರಮಾಣ ಬರೋಬ್ಬರಿ ಶೇ.84. ಶಾಲೆ ಬಿಡುವ ಮಕ್ಕಳ ಸಂಖ್ಯೆಯಲ್ಲಿಯೂ ಸಹ ದಲಿತರದ್ದೇ ಮೇಲುಗೈ. ಪರಿಸ್ಥಿತಿ ಹೀಗಿರುವಾಗ ದಲಿತರು ದೇಗುಲ ಪ್ರವೇಶಕ್ಕೆ ಹಾಕುವ ಶ್ರಮವನ್ನು ಬೇರೆಡೆ ಹಾಕಬೇಕಾಗಿದೆ. ಅದೆಷ್ಟೇ ಬಾಗಿಲು ಬಡಿದರೂ ದೇಗುಲದೊಳಗಿನ ದೇವರ ಕೀಲಿಕೈ ಮೇಲ್ಜಾತಿ ಹಿಂದೂಗಳ ಕೈಲಿದೆ. ಅವರ ಪ್ರಕಾರ ದಲಿತರು ಹಿಂದೂಗಳಲ್ಲ. ದಲಿತರು ಹಿಂದೂಗಳಲ್ಲ ಎಂದು ಪದೇಪದೇ ಮೇಲ್ಜಾತಿ ಹಿಂದೂಗಳು ಘಂಟಾಘೋಷವಾಗಿ ಹೇಳುತ್ತಿರುವಾಗ ತಮ್ಮದಲ್ಲದ ಮನೆಯ ಬಾಗಿಲು ಬಡಿಯುವುದು ದಲಿತರಿಗೂ ಒಳ್ಳೆಯದಲ್ಲ. ಆದಷ್ಟು ಬೇಗ ಬಾಬಾಸಾಹೇಬ್ ಅಂಬೇಡ್ಕರರ ದಾರಿದೀಪ ದಲಿತರ ಕಣ್ಣಿಗೆ ಗೋಚರಿಸಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Dalitharu yavathu hindugalla,ee mathu sariyagide.Dalitaru kanade iruva devarannu bittu kanuva Ambedkar devarige pooje sallisali,tattekasu meljathiyavarige uddaravagalu sahayavagutte.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...