Homeಅಂಕಣಗಳುಮಾತು ಮರೆತ ಭಾರತ-36; ದಲಿತ್ ಫೈಲ್ಸ್ : ದಲಿತರು ಹಿಂದೂಗಳಲ್ಲ, ದೇಗುಲಕ್ಕೆ ಪ್ರವೇಶವಿಲ್ಲ

ಮಾತು ಮರೆತ ಭಾರತ-36; ದಲಿತ್ ಫೈಲ್ಸ್ : ದಲಿತರು ಹಿಂದೂಗಳಲ್ಲ, ದೇಗುಲಕ್ಕೆ ಪ್ರವೇಶವಿಲ್ಲ

- Advertisement -
- Advertisement -

’ದೇವಸ್ಥಾನದೊಳಗೆ ಹೋಗೋದೂ ಒಂದೇ ಬೆಂಕಿಯೊಳಗೆ ಹೋಗೋದು ಒಂದೇ’ ಈ ಮಾತುಗಳನ್ನಾಡಿದ್ದು 50 ವರ್ಷ ವಯಸ್ಸಿನ ಕೊಪ್ಪಳದ ಮಾದಿಗರ ಹನುಮವ್ವ. ಬುದ್ಧಿ ಬಂದಾಗಿನಿಂದಲೂ ಊರಿನ ದೇಸ್ಥಾನದೊಳಗೆ ಇಂದಲ್ಲ ನಾಳೆ ಪ್ರವೇಶ ಸಿಗುತ್ತದೆ ಎಂದು ಕಾಯುತ್ತಿರುವ ಹನುಮವ್ವನ ಆಸೆ ಇಂದಿಗೂ ತೀರಿಲ್ಲ. ಹನುಮವ್ವ ಅಂತಿಂತ ಗಟ್ಟಿಗಿತ್ತಿಯಲ್ಲ, ಊರಿನ ಮೇಲ್ಜಾತಿಯವರು ಬೆದರಿಕೆ ಒಡ್ಡಿದ್ದರೂ ಸಹ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದವರು.

ಅದೇ ಊರಿನಲ್ಲಿ ದಲಿತ ಜಾತಿಯಾದ ’ದಾಸ’ರ 3 ವರ್ಷದ ವಿನಯ್ ಆಡುತ್ತಿದ್ದಾಗ ಮಳೆ ಬಂದ ಕಾರಣ ಆಶ್ರಯಕ್ಕಾಗಿ ದೇವಸ್ಥಾನದೊಳಗೆ ಕಾಲಿಟ್ಟುಬಿಟ್ಟ. ತಕ್ಷಣವೇ ಇಡೀ ಊರಿನ ಮೇಲ್ಜಾತಿ ಮುಖಂಡರು ಆ ಮಗುವಿನ ಕುಟುಂಬದ ಮೇಲೆ ಮುಗಿಬಿದ್ದರು. ದೇವಸ್ಥಾನ ದಲಿತನ ಪ್ರವೇಶದಿಂದ ಮೈಲಿಗೆಯಾಗಿದೆ, ಹಾಗಾಗಿ ಶುದ್ಧೀಕರಿಸಬೇಕೆಂದು ತೀರ್ಮಾನಿಸಿದರು. ಈ ಶುದ್ಧೀಕರಣಕ್ಕೆ ತಗಲುವ ಖರ್ಚನ್ನು ವಿನಯ್ ಕುಟುಂಬವೇ ಭರಿಸಬೇಕೆಂದು ಮೇಲ್ಜಾತಿ ಮನಸುಗಳು ತೀರ್ಪು ನೀಡಿದವು. ವಿಷಯ ತಿಳಿದ ಜಿಲ್ಲಾಡಳಿತ ಮೇಲ್ಜಾತಿ ಮುಖಂಡರನ್ನು ಬಂಧಿಸಿ ಜಿಲ್ಲೆಯ ಎಲ್ಲಾ ದೇವಸ್ಥಾನಕ್ಕೂ ದಲಿತರಿಗೆ ಪ್ರವೇಶ ನೀಡಬೇಕೆಂದು ತಾಕೀತು ಮಾಡಿತು. ವಿನಯ್ ಕುಟುಂಬವೂ ಸಹ ದೇವಸ್ಥಾನಕ್ಕೆ ಪೊಲೀಸ್ ಬೆಂಗಾವಲಿನಲ್ಲಿ ಪ್ರವೇಶ ಪಡೆಯಿತು. ಒಂದು ದಿನದ ಹರುಷವೂ ಮುಗಿಯಿತು. ವಿನಯ್ ಕುಟುಂಬಕ್ಕೆ ಕಿರುಕುಳ ನೀಡಿದ್ದ ಮೇಲ್ಜಾತಿ ಮುಖಂಡರನ್ನು ಜಾಮೀನಿನಲ್ಲಿ ಬಿಡುಗಡೆಗೊಳ್ಳುವ ಮುನ್ನಾ ದಿನವೇ ವಿನಯ್ ಕುಟುಂಬವನ್ನು ಊರು ಬಿಡುವಂತೆ ಮಾಡಲಾಯಿತು. ಇಲ್ಲದಿದ್ದರೆ ಅನಾಹುತ ಸಂಭವಿಸಬಹುದೆಂದು ಹೇಳಲಾಯಿತು. ಈ ಬೆದರಿಕೆ-ಹೆದರಿಕೆಗೆ ಜಿಲ್ಲಾಡಳಿತ ಬೆಂಗಾವಲು ನೀಡಲಾಗಲಿಲ್ಲ, ಆಗುವುದೂ ಇಲ್ಲ. ಸರ್ಕಾರ ವಿನಯ್‌ನನ್ನು ದತ್ತು ತೆಗೆದುಕೊಂಡು ಓದಿಸುವುದಾಗಿ ಭರವಸೆ ನೀಡಿತು. ಆದರೆ ಆತನ ಕುಟುಂಬ ಈಗ ಊರೂರು ಅಲೆಯುತ್ತ ಅನಾಥವಾಗಿದೆ. ಈ ಭಾಗದ ಮಾದಿಗ ಮತ್ತು ಛಲವಾದಿ ದಲಿತರ ಪಾಡು ಇದೇ ಆಗಿದೆ.

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಹಸಿಹಸಿಯಾಗಿ ಜೀವಂತವಿರುವ ಅಸ್ಪೃಶ್ಯತೆ ಆಚರಣೆಗೆ ಮತ್ತೊಂದು ಸಾಕ್ಷಿ ಕೋಲಾರದ ಮುಳಬಾಗಿಲು. ಇಲ್ಲಿ ದೇವರ ಕಂಬವನ್ನು ದಲಿತ ಯುವಕನೊಬ್ಬ ಮುಟ್ಟಿದ್ದಕ್ಕೆ ಮೇಲ್ಜಾತಿವಾದಿಗಳು 60,000 ರೂಪಾಯಿ ದಂಡ ವಿಧಿಸಿದ್ದರು. ಅಲ್ಲಿನ ದಲಿತರೂ ಸಹ ಹಿಂದೂ ಮೇಲ್ಜಾತಿ ದೇವರುಗಳನ್ನು ಮನೆಯಿಂದ ಹೊರಗೆ ಹಾಕಿ ಅಂಬೇಡ್ಕರ್ ದಾರಿಯನ್ನು ಹಿಡಿಯಲು ಮುಂದಾದರು.

ಇದು ಇಂದು ನಿನ್ನೆಯ ವಿಷಯವಲ್ಲ. ಸನಾತನ ಪರಂಪರೆಯ ಸಮಸ್ಯೆ. ಮಾನವೀಯವಾದ ನಮ್ಮ ಸಂವಿಧಾನ ಈ ಸನಾತನದ ವಿರುದ್ಧವಾಗಿ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಗೊಳಿಸಿದ ನಂತರವೂ ಇಂತಹ ಅಮಾನವೀಯ ಆಚರಣೆಗಳು ಈ ನೆಲದಲ್ಲಿ ಇನ್ನೂ ಜೀವಂತವಾಗಿವೆ. ಅಷ್ಟೇಅಲ್ಲದೇ ಬಹಿರಂಗವಾಗಿ ನಡೆಯುತ್ತವೆ.

ತಮ್ಮ ಹೋರಾಟದ ಆರಂಭಿಕ ಘಟ್ಟದಲ್ಲಿ ಸ್ವತಃ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರೇ ಕಾಳರಾಮ್ ದೇವಸ್ಥಾನ ಪ್ರವೇಶಕ್ಕೆ ಹೋರಾಟ ರೂಪಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಮೇಲ್ಜಾತಿ ಹಿಂದೂಗಳ ಜಡತ್ವವನ್ನು ಅರಿತು ದೇಗುಲ ಪ್ರವೇಶ ಹೋರಾಟದಿಂದಲೇ ದೂರ ಸರಿದರು. ಅಂಬೇಡ್ಕರರು ದೇವಸ್ಥಾನ ಪ್ರವೇಶ ಹೋರಾಟ ಕೈಬಿಟ್ಟು ಇಲ್ಲಿಗೆ ಸುಮಾರು 9 ದಶಕಗಳೇ ಕಳೆದಿವೆ. ಆದರೆ ಇಂದಿಗೂ ದಲಿತರು ದೇವಸ್ಥಾನದ ಬಾಗಿಲುಗಳನ್ನು ತಟ್ಟುತ್ತಲೇ ಇದ್ದಾರೆ. ಅಂಬೇಡ್ಕರ್ ಅವರ ದೂರದೃಷ್ಟಿ ಇವರಿಗೆ ಇಂದಿಗೂ ಅರ್ಥವಾಗಿಲ್ಲದಿರುವುದಕ್ಕೆ ನಾವೆಲ್ಲರೂ ಕಾರಣರಾಗಿದ್ದೇವೆ. ಆದರೆ ಮತ್ತೊಂದು ಕಡೆ ಕೋಲಾರದ ಮುಳಬಾಗಿಲಿನ ದಲಿತ ಕುಟುಂಬ ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯ. ’ನಿನಗೆಲ್ಲಿ ಗೌರವವಿಲ್ಲವೋ ಅಲ್ಲಿ ನಿನ್ನ ಚಪ್ಪಲಿಗಳನ್ನೂ ಸಹ ಬಿಡಬೇಡ’ ಎಂಬ ಅಂಬೇಡ್ಕರರ ಸ್ವಾಭಿಮಾನದ ಮಾತುಗಳನ್ನು ಮುಳಬಾಗಿನ ದಲಿತ ಕುಟುಂಬ ಪಾಲಿಸಿದೆ. ಇದು ಆಶಾದಾಯಕವಾದ ಬೆಳವಣಿಗೆ.

ಇದನ್ನೂ ಓದಿ: ಮಾತು ಮರೆತ ಭಾರತ-35; ಮಿರ್ಯಾಲಗುಡ ಫೈಲ್: ’ಅಪ್ಪನನ್ನು ಗಲ್ಲಿಗೇರಿಸಿ’ ಎಂದ ಅಮೃತಳ ಕತೆ

ಹಾಗೆಂದು ಇಂದಿಗೂ ದೇಗುಲ ಪ್ರವೇಶಕ್ಕಾಗಿಯೇ ಕಾಯುತ್ತಿರುವ ದಲಿತ ಸಮುದಾಯಕ್ಕೆ ನಿಜಸ್ಥಿತಿಯನ್ನು ಸಾರಿಸಾರಿ ಹೇಳಬೇಕಾಗಿದೆ. ಉದಾಹರಣೆಗೆ, 2022ರಲ್ಲಿ ರಾಯಚೂರಿನ ಗ್ರಾಮೀಣ ಕೂಲಿಕಾರ್ಮಿಕರ ಸಂಘವು 56 ಹಳ್ಳಿಗಳನ್ನು ಸಮೀಕ್ಷೆ ಮಾಡಿತು. ಅದರ ಪ್ರಕಾರ 56ರಲ್ಲಿ ಕೇವಲ 9 ಹಳ್ಳಿಗಳಲ್ಲಿ ಮಾತ್ರ ದಲಿತರಿಗೆ ದೇಗುಲ ಪ್ರವೇಶವಿತ್ತು. 2018ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ’ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್’ನ ಪ್ರೊ. ಮಾರುತಿಯವರ ನೇತೃತ್ವದಲ್ಲಿ ಒಂದು ಅಧ್ಯಯನ ನಡೆಯಿತು. ಈ ಅಧ್ಯಯನದ ಪ್ರಕಾರ ಕರ್ನಾಟಕದ ಶೇ.34ರಷ್ಟು ದಲಿತರಿಗೆ ದೇಗುಲ ಪ್ರವೇಶವೇ ಇಲ್ಲ. ಮಾರುತಿಯವರ ಪ್ರಕಾರ ಎಲ್ಲಿ ಅನಕ್ಷರತೆ ಕಡಿಮೆ ಇದೆಯೋ ಹಾಗೂ ಬಡವರು-ಶ್ರೀಮಂತರ ನಡುವಿನ ಅಂತರ ಎಲ್ಲಿ ಹೆಚ್ಚಿದೆಯೋ ಅಲ್ಲಿ ಹೆಚ್ಚಿನ ಜಾತಿ ತಾರತಮ್ಯವಿದೆ. ಎಲ್ಲಿ ದಲಿತರು ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದಾರೋ ಅಲ್ಲಿ ದಲಿತರ ಮೇಲಿನ ತಾರತಮ್ಯ ಕಡಿಮೆ ಆಗುತ್ತಿದೆ. ಜೊತೆಗೆ ದಲಿತರ ಆರ್ಥಿಕ ಸ್ಥಿತಿಗತಿಯೂ ಸಹ ಚನ್ನಾಗಿದೆ.

ಕೊಪ್ಪಳದಲ್ಲಿ ಪದೇಪದೇ ಅಸ್ಪೃಶ್ಯತೆ ಆಚರಣೆಯ ಘಟನೆಗಳು ಹೆಚ್ಚಾಗುತ್ತಲೇ ಇರುವುದಕ್ಕೆ ಕಾರಣ ಅಲ್ಲಿನ ದಲಿತರಲ್ಲಿರುವ ಅಜಾಗೃತಿ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಎಲ್ಲೆಲ್ಲಿ ಲಿಂಗಾಯತರು, ಬ್ರಾಹ್ಮಣರು, ಕುರುಬರು, ಗೌಡರು ಹಾಗೂ ನಾಯಕರ ಪ್ರಾಬಲ್ಯ ಹೆಚ್ಚಿದೆಯೋ ಅಲ್ಲೆಲ್ಲಾ ದಲಿತರ ಮೇಲಿನ ದೌರ್ಜನ್ಯಗಳ ಪ್ರಮಾಣ ಹೆಚ್ಚಿದೆ ಎಂದು ಈ ಸಮೀಕ್ಷೆ ಹೇಳುತ್ತದೆ. ಒಟ್ಟಾರೆ ಕರ್ನಾಟಕದಲ್ಲಿ 2019ರಿಂದ 2021ರ ನಡುವೆ ಶೇ.11ರಷ್ಟು ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿರುವುದಕ್ಕೆ ಕಾರಣ ಹಿಂದೂ ಮೇಲ್ಜಾತಿ ಪರ ನಿಂತಿರುವ ಬಿಜೆಪಿ ಸರ್ಕಾರವೇ ಆಗಿದೆ.

ಕೊನೆಯದಾಗಿ, ದಲಿತರು ಹೋರಾಡಿ ದೇಗುಲ ಪ್ರವೇಸಿದ ಮೇಲೆಯೂ ಅವರ ಜೀವನ ಮತ್ತಷ್ಟು ಚಿಂತಾಜನಕವಾಗುತ್ತದೆ ಎಂಬುವುದಕ್ಕೆ ಈ ಮುಂದಿನ ಪ್ರಕರಣವೇ ಸಾಕ್ಷಿ. ಹಾಸನದ ದಿಂಡಗೂರು ಗ್ರಾಮದಲ್ಲಿ ದೇಗುಲ ಪ್ರವೇಶಕ್ಕೆ ಹೋರಾಡಿದ ದಲಿತ ಯುವಕ ಸಂತೋಷ್ ಇಂದು ಗ್ರಾಮದವರ ಅಘೋಷಿತ ಬಹಿಷ್ಕಾರಕ್ಕೆ ನಲುಗಿಹೋಗಿದ್ದಾನೆ. ಆತನೊಬ್ಬನೇ ಅಲ್ಲ, ಅವನ ಜೊತೆಗೆ ಇಡೀ ಸಮುದಾಯವನ್ನೇ ಮೇಲ್ಜಾತಿಗಳು ಬಹಿಷ್ಕಾರ ಮಾಡಿದ್ದಾರೆ. ಅಲ್ಲಿನ ದಲಿತರು ಹೊಟ್ಟೆಪಾಡಿಗಾಗಿ ದೂರದೂರಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಸವಲತ್ತುಗಳು ಸಿಗದೇ ಸ್ವತಃ ಸಂತೋಷ್ ಕಂಗಾಲಾಗಿದ್ದಾನೆ. ಇನ್ನು ಮುಂದೆ ದೇಗುಲ ಪ್ರವೇಶಕ್ಕಾಗಿ ಒತ್ತಾಯಿಸುವುದಿಲ್ಲವೆಂಬ ಷರತ್ತಿನ ಮೇಲೆ ಅಲ್ಲಿನ ಒಕ್ಕಲಿಗರು ಕೆಲವು ದಲಿತ ಕುಟುಂಬಗಳಿಗೆ ಕೆಲಸ ನೀಡಲು ಒಪ್ಪಿಕೊಂಡಿವೆ.

ಹಾಗಾಗಿ ಇಂದು ದಲಿತರ ಮುಂದೆ, ದೇಗುಲ ಪ್ರವೇಶಕ್ಕಿಂತಲೂ ಹೆಚ್ಚು ಮುಖ್ಯವಾಗಿರುವ ಹಾಗೂ ತುರ್ತಾಗಿರುವ ಕಾರ್ಯಗಳಿವೆ. ಕರ್ನಾಟಕದ ಕೇವಲ ಶೇ.10ರಷ್ಟು ದಲಿತರು ಮಾತ್ರ ಭೂಮಿಯನ್ನು ಹೊಂದಿದ್ದಾರೆ. ದಲಿತರ ಸರಾಸರಿ ಭೂಮಿಯ ಪಾಲು ಕೇವಲ 0.2 ಹೆಕ್ಟೇರ್ ಮಾತ್ರ. ದಲಿತರೊಳಗೆ ಕೂಲಿಕಾರ್ಮಿಕರ ಪ್ರಮಾಣ ಬರೋಬ್ಬರಿ ಶೇ.84. ಶಾಲೆ ಬಿಡುವ ಮಕ್ಕಳ ಸಂಖ್ಯೆಯಲ್ಲಿಯೂ ಸಹ ದಲಿತರದ್ದೇ ಮೇಲುಗೈ. ಪರಿಸ್ಥಿತಿ ಹೀಗಿರುವಾಗ ದಲಿತರು ದೇಗುಲ ಪ್ರವೇಶಕ್ಕೆ ಹಾಕುವ ಶ್ರಮವನ್ನು ಬೇರೆಡೆ ಹಾಕಬೇಕಾಗಿದೆ. ಅದೆಷ್ಟೇ ಬಾಗಿಲು ಬಡಿದರೂ ದೇಗುಲದೊಳಗಿನ ದೇವರ ಕೀಲಿಕೈ ಮೇಲ್ಜಾತಿ ಹಿಂದೂಗಳ ಕೈಲಿದೆ. ಅವರ ಪ್ರಕಾರ ದಲಿತರು ಹಿಂದೂಗಳಲ್ಲ. ದಲಿತರು ಹಿಂದೂಗಳಲ್ಲ ಎಂದು ಪದೇಪದೇ ಮೇಲ್ಜಾತಿ ಹಿಂದೂಗಳು ಘಂಟಾಘೋಷವಾಗಿ ಹೇಳುತ್ತಿರುವಾಗ ತಮ್ಮದಲ್ಲದ ಮನೆಯ ಬಾಗಿಲು ಬಡಿಯುವುದು ದಲಿತರಿಗೂ ಒಳ್ಳೆಯದಲ್ಲ. ಆದಷ್ಟು ಬೇಗ ಬಾಬಾಸಾಹೇಬ್ ಅಂಬೇಡ್ಕರರ ದಾರಿದೀಪ ದಲಿತರ ಕಣ್ಣಿಗೆ ಗೋಚರಿಸಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Dalitharu yavathu hindugalla,ee mathu sariyagide.Dalitaru kanade iruva devarannu bittu kanuva Ambedkar devarige pooje sallisali,tattekasu meljathiyavarige uddaravagalu sahayavagutte.

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...