Homeಅಂಕಣಗಳುಯತ್ನಾಳಶಾಹಿಯ ಚದುರಂಗದಾಟ

ಯತ್ನಾಳಶಾಹಿಯ ಚದುರಂಗದಾಟ

- Advertisement -
- Advertisement -

ಮನ್ನೆ ಏನಾತಪಾ ಅಂದರ ನಮ್ಮ ಬಿಜಾಪುರದ ಬಸನಗೌಡರು ಜನಪರ ಹೋರಾಟಗಾರ ಹಾಗೂ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿ ಅವರ ಬಗ್ಗೆ ಅಪದ್ಧ ಅಪದ್ಧ ಮಾತಾಡ್ಯಾರ.

ಯತ್ನಾಳಗೌಡರು ದೊರೆಸ್ವಾಮಿ ಅವರನ್ನ ಪಾಕಿಸ್ತಾನದ ಏಜಂಟ ಅಂತ ಕರದಾರ. ನಕಲಿ ದೇಶಭಕ್ತ ಅಂತ ಹೆಸರು ಇಟ್ಟಾರ. “ಅವರೇನು ಸಾವರಕರನ ಗತೆ ದೇಶಪ್ರೇಮಿನಾ? ಬ್ರಿಟಿಷರ ಲಾಠಿ ಏಟು ತಿಂದಾರ?” ಅಂತ ಕೇಳ್ಯಾರ. ಇದು ಬರೇ ಒಬ್ಬ ಎಮ್ಮೆಲ್ಲೇ ಒಬ್ಬ ಹಿರಿಯ ಹೋರಾಟಗಾರರ ಬಗ್ಗೆ ಬಡಬಡಿಸಿದ್ದು ಅಂತ ತಿಳಕೋಬ್ಯಾಡ್ರಿ. ಅದು ಅಷ್ಟ ಸಿಂಪಲ್ಲಾದ ವಿಷಯ ಅಲ್ಲ. ಇದು ಇಲ್ಲಿಗೇ ಮುಗಿಯಂಗಿಲ್ಲ. ಇದು ಈಗ ಸುರು ಆಗೇದ. ದೊರೆಸ್ವಾಮಿಯವರನ್ನೇ ಬಿಡಲಾರದವರು ಇನ್ನು ಮತ್ತ ಯಾರನ್ನು ಬಿಟ್ಟಾರು? ಹಳ್ಳಿ ಊರಾಗ ಗೌಡನ ಕಪಾಳಕ್ಕ ಹೊಡೆದ ಹುಡುಗಾ ಉಳಿದವರನ್ನ ಬರೇ ಬೆದರಿಕೆಯಿಂದಲೇ ಮುಗಿಸಿಬಿಟ್ಟನಂತ, ಹಂಗಾತು ಇದು ಕತಿ.

ಉಪಚುನಾವಣೆಯೊಳಗ ಮಹಿಳಾ ಶಾಸಕಿಯೊಬ್ಬರನ್ನ ಹಂಗಿಸಲಿಕ್ಕೆ ಯತ್ನಾಳರು ಒಂದು ಕುಚೋದ್ಯ ಮಾಡತಿದ್ದರು. ಅವರು ಏನು ಮಾಡ್ಯಾರ? ಡ್ಯಾಶ್ -ಡ್ಯಾಶ್. ಇವರೇನು ಮಾಡ್ಯಾರ? ಡ್ಯಾಶ್- ಡ್ಯಾಶ್ ಅಂತ ಹೋದಲ್ಲೆ – ಬಂದಲ್ಲೆ ಭಾಷಣ ಮಾಡತಿದ್ದರು. ಅದರ ಹಂಗನ ಇದು ಬರೇ ಟಿಆರ್‍ಪಿ ಸಲುವಾಗಿ ಮಾಡಿದ ಡ್ಯಾಶ್ ಡ್ಯಾಶ್ ಭಾಷಣ ಅಂತ ತಿಳಕೋಬ್ಯಾಡ್ರಿ ಮತ್ತ.

ಇದು ಒಂದು ವೈರಲ್ ಆಗುವ ಸಾಧ್ಯತೆ ಇರುವ ರೋಗ. ಎಲ್ಲಾ ಉದಾರವಾದಿಗಳನ್ನ, ಪ್ರಗತಿಪರರನ್ನ, ಕೆಳಗಿನವರನ್ನ ಮ್ಯಾಲೆ ಎತ್ತಲಿಕ್ಕೆ ಕೈ ಎತ್ತಿದವರನ್ನ ಸಂಶಯದಿಂದ ನೋಡೋ ಜಡ್ಡು. ಈಗ ನಮ್ಮ ಭವ್ಯ ಭಾರತದಾಗ ಈ ಗುಮಾನಿಯ ರೋಗ ಸುರು ಆಗೇದ. ಅದು ಕೊರೋನಾ ವೈರಸ್ಸಿಗಿಂತ ಅಪಾಯಕಾರಿ. ಆಳುವ ಪಕ್ಷದವರನ್ನ, ಅಧಿಕಾರಶಾಹಿಯನ್ನ, ಯಾರೋ ಒಬ್ಬ ಜನಪ್ರಿಯ ನಾಯಕನನ್ನ ವಿರೋಧ ಮಾಡೋದನ್ನ ದೇಶದ್ರೋಹ ಅಂತ ಥೂತ್ಕರಿಸೋ ಅಸಹ್ಯವಾದ ಆಟ ಈಗ ಸುರು ಆಗೇದ. ಇದು ಯತ್ನಾಳ ಒಬ್ಬರ ಮಾತಲ್ಲ. ಅವರು ಈ ಚದುರಂಗದ ಆಟದಾಗ ಒಬ್ಬ ಬಡ ಪ್ಯಾದೆ ಅಷ್ಟ. ಇವು ಯತ್ನಾಳಶಾಹಿ ದಿನಗಳು. ಎಲ್ಲ ನಾಗರಿಕರನ್ನ ಪೇದೆಗಳನ್ನಾಗಿ ಮಾಡಿ, ಕೆಲವು ಪೇದೆಗಳನ್ನ ರಾಜರನ್ನಾಗಿ ಮಾಡಿ ಆಟ ಮುಗಿಸೋ ಮಂತ್ರಿಗಳ ಷಡ್ಯಂತ್ರ.

ಇಲ್ಲೆ ವ್ಯವಸ್ಥೆಯ ವಿರುದ್ಧ ಮಾತಾಡುವ -ಹೋರಾಟಗಾರರು, ಸಾಹಿತಿಗಳು, ಚಿಂತಕರು, ಕಲಾವಿದರು, ಶಿಲ್ಪಿ, ನಾಟಕಕಾರರು, ಚಿತ್ರಕತೆಗಾರರು, ನಟ-ನಟಿಯರು, ನಿರ್ದೇಶಕರು – ಯಾರನ್ನೂ ಸಹಿಸಲಾರದ ಮನಸ್ಥಿತಿ ತಯಾರಾಗಲಿಕ್ಕೆ ಹತ್ತೇದ. ಈ ಪಟ್ಟಿ ಬೆಳಕೋತ ಹೋಗತದ. ಇದು ಯಾವುದೇ ಹೊಸ ವಿಷಯವನ್ನ ಮಾತಾಡುವ, ಪ್ರಚಾರ ಮಾಡುವ- ತಿಳಿ ಹೇಳುವ ಯಾರನ್ನೂ ಸಹಿಸಲಾರದು. ಅವರನ್ನ ಅವಮಾನ ಮಾಡಿ, ಅವರಿಗೆ, ಅವರ ವ್ಯಕ್ತಿತ್ವಕ್ಕ, ಅವರ ವಿಚಾರಕ್ಕ ಕಿಮ್ಮತ್ತು ಇಲ್ಲಾ ಅನ್ನೋ ಹಂಗ ಮಾಡಿ ಅವರನ್ನ ಜನರ ಮನಸ್ಸಿನಿಂದಾ ದೂರ ಸರಿಸಿ ಬಿಡೋ ಸಂಚು ಇದು. ಯಾರಿಗೆ ತಮ್ಮ ಬಲದ ಬಗ್ಗೆ, ಜಾಣತನದ ಬಗ್ಗೆ ಸಂಶಯ ಇರತದೋ ಅವರು ಇತರರ ಮೌಲ್ಯಗಳ ಬಗ್ಗೆ, ಸಂಶಯ ವ್ಯಕ್ತಪಡಿಸತಾರ. ದೊಡ್ಡ ದೊಡ್ಡ ಸ್ಥಾನದಾಗ ಇರೋವರು ಇಂಥಾ ಮಾತಾಡಲಿಕ್ಕೆ ಹತ್ತಿದಾಗ ಸಣ್ಣ ವಯಸ್ಸಿನ ಹುಡುಗರು, ಕುರುಡ ಬೆಂಬಲಿಗರು ಹೌದು ಹೌದು ಅಂತ ಚಪ್ಪಾಳೆ ತಟ್ಟತಾರ. ಅವಕಾಶ ಸಿಕ್ಕರ ಈ ವಿಚಾರಗಳನ್ನ ಹಿಂಸೆಯಿಂದ ಎದುರಿಸಲಿಕ್ಕೂ ತಯಾರಾಗತಾರ. ಅದಕ್ಕ ಮಹಾತ್ಯಾಗ ಅನ್ನೋ ಹೆಸರು ಕೊಡತಾರ.

ಎಲ್ಲ ಕಡೆಯಿಂದ ಉದಾರ ವಿಚಾರ ಬರೋದನ್ನ ನಿಲ್ಲಿಸಬೇಕು, ಬರೇ ನಮ್ಮ ವಿಚಾರ ತುಂಬಿ ತುಳುಕಬೇಕು ಅಂಥೇಳಿ ಅಡ್ನಾಡಿ ಪ್ರಯತ್ನ ಮಾಡತಾರ. ಅದಕ್ಕ ಎಲ್ಲಾ ವಿಶ್ವವಿದ್ಯಾಲಯದಾಗೂ ‘ನಮ್ಮ ವಿಚಾರದ ಜನಾ ಇರಬೇಕು’ ಅನ್ನೋದರ ಮ್ಯಾಲೆ ನೇಮಕಾತಿ ಆಗ್ಯಾವು. ಆ ಮನುಷ್ಯ ಆ ಕೆಲಸಕ್ಕ ಯೋಗ್ಯ ಇದ್ದಾನೋ ಇಲ್ಲವೋ ಅನ್ನೋದರ ಬಗ್ಗೆ ಯಾರೂ ವಿಚಾರ ಮಾಡಲಿಕ್ಕೆ ಹತ್ತಿಲ್ಲ.

ಎಲ್ಲ ಪ್ರಗತಿಪರರನ್ನ, ಮುಂದಾಲೋಚನೆ ಉಳ್ಳವರನ್ನ, ಸಮಾನತಾವಾದಿಗಳನ್ನ, ವೈಜ್ಞಾನಿಕ ಮನೋಭಾವ ಇದ್ದವರನ್ನ, ಕಮ್ಯುನಿಸ್ಟ ಅಂತನೋ, ದೇಶದ್ರೋಹಿ ಅಂತನೋ, ವೈರಿದೇಶದ ಏಜೆಂಟ ಅಂತನೋ ಪಟ್ಟ ಕಟ್ಟಿ ಬಿಡುವುದು ಸಹಜ ಆಗೇತಿ. ಇದು ಭಯಂಕರ ಅಪಾಯಕಾರಿ. ಇದನ್ನ ತಲಿ ಸಮಾ ಇರೋರೆಲ್ಲಾ ವಿರೋಧಿಸಬೇಕು. ಮೂರ್ಖರ ರಾಜ್ಯದಾಗ ಬುದ್ಧಿವಂತರಾಗಿರೋದು ತಪ್ಪು ಅಂತಂತಾರ ಖರೆ. ಆದರೆ ಸುತ್ತಲಿನ ಮೂರ್ಖರ ಹುಚ್ಚುತನ ನೋಡಿಕೊಂಡು ಸುಮ್ಮನಿದ್ದರ ಅವರಿಗೂ ಇವರಿಗೂ ಏನೂ ವ್ಯತ್ಯಾಸ ಉಳಿಯಂಗಿಲ್ಲ. ಇಷ್ಟೇಲ್ಲಾ ರಾಜಾರೋಷವಾಗಿ ನಡೀಲಿಕ್ಕೆ ಹತ್ತಿದಾಗ ಇವರೆಲ್ಲಾ ಹೆಂಗ ಸುಮ್ಮನಿದ್ದರು, ಅಂತ ನಾಳೆ ಹುಟ್ಟುವವರು ತಮ್ಮ ಹಿರಿಯರನ್ನ ಆಡಿಕೊಳ್ಳೋಹಂಗಾಗತದ.

ಸುಳ್ಳು ಅನ್ನೋದು ಸೆರಗಿನ್ಯಾಗಿನ ಕೆಂಡ. ಅದನ್ನ ಕಟ್ಟಿಕೊಂಡು ಯತ್ನಾಳಶಾಹಿ ಅಪಾಯಕಾರಿ ಆಟ ಆಡಲಿಕ್ಕೆ ಹತ್ತೇದ. ಬ್ಯಾರೆಯವರ ಮನಿಗೆ ಬೆಂಕಿ ಹಚ್ಚಲಿಕ್ಕೆ ನಾವು ಅದನ್ನು ಉಪಯೋಗಿಸಬಹುದು. ಆದರ ಅದು ಕಡೀಕೆ ಎಲ್ಲಾರಿಗೂ ಹತ್ತಿಕೊಳ್ಳೋದ. ಇದನ್ನ ತಿಳಕೊಳ್ಳಲಾರದವರು ಹಾಡಾಡಿ ಕುಣೀಲಿಕ್ಕೆ ಹತ್ಯಾರ. ಹಾಡು ಮುಗಿಯೋದರಾಗ ಸೆರಗು ಸುಟ್ಟು ಹೋಗಿರತದ. ಕೆಂಡ ಮೈಗೆಲ್ಲಾ ಮೆತ್ತಿಕೊಂಡಿರತದ. ಅಷ್ಟರಾಗ ಸತ್ಯ ಅನ್ನೋ ತಣ್ಣೀರಿನ ಝರಿ ಯೊಳಗ ಜಿಗೀಬೇಕು. ಎಲ್ಲಾ ಸಮಾ ಆಗೋತನಕಾ ತೇಲಿಕೋತ ಹೋಗಬೇಕು.

ನಮ್ಮ ಇಂದಿನ ಸಂಕಟವನ್ನ, ಅದಕ್ಕ ಉತ್ತರವಾಗಿ ಆಶಾವಾದವನ್ನ ತೋರಿಸೋ ಅಮೀರ ಕಜಲಬಾಷ ಅವರ ಒಂದು ಗಜಲ್ಲಿನ ಸಾಲು ಹಿಂಗವ

ಪೂರ್ತೆ ಹಾಳ ಬಿದ್ದದ ಈ ಊರು
ಇಂಥಾದರಾಗ ಕನ್ನಡಿ ಮಾರಾಕ ಬಂದೇವಲ್ಲಾ,
ನಾವೆಷ್ಟು ಹುಚ್ಚರಿರಬೇಕು ನೋಡು
ಅವರು ನಮ್ಮನ್ನ ಬಿಟ್ಟು ಅಡ್ಯಾಡಿದರೇನಾತು,
ನಾವು-ನಾವ ಭೆಟ್ಟಿ ಆಗಕೋತ ಇರಲಿಕ್ಕೆ,
ಮಾತಾಡಿಕೋತ ಹೋಗಲಿಕ್ಕೆ
ನೆವಾ ಹುಡಕಲಿಕ್ಕೆ ಬಂದೇವೆಲ್ಲಾ
ನಾವೆಷ್ಟು ಹುಚ್ಚರಿರಬೇಕು ನೋಡು
ಆದರ ಕತ್ತಲದಾಗ ಎಷ್ಟು ದಿನಾಂತ ಇರೋದು?
ಒಂದ ಸಣ್ಣ ದೀಪ ಹಚ್ಚಬೇಕೂಂತ ಹೊಂಟೆವೆಲ್ಲಾ
ನಾವು ಎಷ್ಟು ಹುಚ್ಚರಿರಬೇಕು ನೋಡು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...