Homeಅಂಕಣಗಳುಯತ್ನಾಳಶಾಹಿಯ ಚದುರಂಗದಾಟ

ಯತ್ನಾಳಶಾಹಿಯ ಚದುರಂಗದಾಟ

- Advertisement -
- Advertisement -

ಮನ್ನೆ ಏನಾತಪಾ ಅಂದರ ನಮ್ಮ ಬಿಜಾಪುರದ ಬಸನಗೌಡರು ಜನಪರ ಹೋರಾಟಗಾರ ಹಾಗೂ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿ ಅವರ ಬಗ್ಗೆ ಅಪದ್ಧ ಅಪದ್ಧ ಮಾತಾಡ್ಯಾರ.

ಯತ್ನಾಳಗೌಡರು ದೊರೆಸ್ವಾಮಿ ಅವರನ್ನ ಪಾಕಿಸ್ತಾನದ ಏಜಂಟ ಅಂತ ಕರದಾರ. ನಕಲಿ ದೇಶಭಕ್ತ ಅಂತ ಹೆಸರು ಇಟ್ಟಾರ. “ಅವರೇನು ಸಾವರಕರನ ಗತೆ ದೇಶಪ್ರೇಮಿನಾ? ಬ್ರಿಟಿಷರ ಲಾಠಿ ಏಟು ತಿಂದಾರ?” ಅಂತ ಕೇಳ್ಯಾರ. ಇದು ಬರೇ ಒಬ್ಬ ಎಮ್ಮೆಲ್ಲೇ ಒಬ್ಬ ಹಿರಿಯ ಹೋರಾಟಗಾರರ ಬಗ್ಗೆ ಬಡಬಡಿಸಿದ್ದು ಅಂತ ತಿಳಕೋಬ್ಯಾಡ್ರಿ. ಅದು ಅಷ್ಟ ಸಿಂಪಲ್ಲಾದ ವಿಷಯ ಅಲ್ಲ. ಇದು ಇಲ್ಲಿಗೇ ಮುಗಿಯಂಗಿಲ್ಲ. ಇದು ಈಗ ಸುರು ಆಗೇದ. ದೊರೆಸ್ವಾಮಿಯವರನ್ನೇ ಬಿಡಲಾರದವರು ಇನ್ನು ಮತ್ತ ಯಾರನ್ನು ಬಿಟ್ಟಾರು? ಹಳ್ಳಿ ಊರಾಗ ಗೌಡನ ಕಪಾಳಕ್ಕ ಹೊಡೆದ ಹುಡುಗಾ ಉಳಿದವರನ್ನ ಬರೇ ಬೆದರಿಕೆಯಿಂದಲೇ ಮುಗಿಸಿಬಿಟ್ಟನಂತ, ಹಂಗಾತು ಇದು ಕತಿ.

ಉಪಚುನಾವಣೆಯೊಳಗ ಮಹಿಳಾ ಶಾಸಕಿಯೊಬ್ಬರನ್ನ ಹಂಗಿಸಲಿಕ್ಕೆ ಯತ್ನಾಳರು ಒಂದು ಕುಚೋದ್ಯ ಮಾಡತಿದ್ದರು. ಅವರು ಏನು ಮಾಡ್ಯಾರ? ಡ್ಯಾಶ್ -ಡ್ಯಾಶ್. ಇವರೇನು ಮಾಡ್ಯಾರ? ಡ್ಯಾಶ್- ಡ್ಯಾಶ್ ಅಂತ ಹೋದಲ್ಲೆ – ಬಂದಲ್ಲೆ ಭಾಷಣ ಮಾಡತಿದ್ದರು. ಅದರ ಹಂಗನ ಇದು ಬರೇ ಟಿಆರ್‍ಪಿ ಸಲುವಾಗಿ ಮಾಡಿದ ಡ್ಯಾಶ್ ಡ್ಯಾಶ್ ಭಾಷಣ ಅಂತ ತಿಳಕೋಬ್ಯಾಡ್ರಿ ಮತ್ತ.

ಇದು ಒಂದು ವೈರಲ್ ಆಗುವ ಸಾಧ್ಯತೆ ಇರುವ ರೋಗ. ಎಲ್ಲಾ ಉದಾರವಾದಿಗಳನ್ನ, ಪ್ರಗತಿಪರರನ್ನ, ಕೆಳಗಿನವರನ್ನ ಮ್ಯಾಲೆ ಎತ್ತಲಿಕ್ಕೆ ಕೈ ಎತ್ತಿದವರನ್ನ ಸಂಶಯದಿಂದ ನೋಡೋ ಜಡ್ಡು. ಈಗ ನಮ್ಮ ಭವ್ಯ ಭಾರತದಾಗ ಈ ಗುಮಾನಿಯ ರೋಗ ಸುರು ಆಗೇದ. ಅದು ಕೊರೋನಾ ವೈರಸ್ಸಿಗಿಂತ ಅಪಾಯಕಾರಿ. ಆಳುವ ಪಕ್ಷದವರನ್ನ, ಅಧಿಕಾರಶಾಹಿಯನ್ನ, ಯಾರೋ ಒಬ್ಬ ಜನಪ್ರಿಯ ನಾಯಕನನ್ನ ವಿರೋಧ ಮಾಡೋದನ್ನ ದೇಶದ್ರೋಹ ಅಂತ ಥೂತ್ಕರಿಸೋ ಅಸಹ್ಯವಾದ ಆಟ ಈಗ ಸುರು ಆಗೇದ. ಇದು ಯತ್ನಾಳ ಒಬ್ಬರ ಮಾತಲ್ಲ. ಅವರು ಈ ಚದುರಂಗದ ಆಟದಾಗ ಒಬ್ಬ ಬಡ ಪ್ಯಾದೆ ಅಷ್ಟ. ಇವು ಯತ್ನಾಳಶಾಹಿ ದಿನಗಳು. ಎಲ್ಲ ನಾಗರಿಕರನ್ನ ಪೇದೆಗಳನ್ನಾಗಿ ಮಾಡಿ, ಕೆಲವು ಪೇದೆಗಳನ್ನ ರಾಜರನ್ನಾಗಿ ಮಾಡಿ ಆಟ ಮುಗಿಸೋ ಮಂತ್ರಿಗಳ ಷಡ್ಯಂತ್ರ.

ಇಲ್ಲೆ ವ್ಯವಸ್ಥೆಯ ವಿರುದ್ಧ ಮಾತಾಡುವ -ಹೋರಾಟಗಾರರು, ಸಾಹಿತಿಗಳು, ಚಿಂತಕರು, ಕಲಾವಿದರು, ಶಿಲ್ಪಿ, ನಾಟಕಕಾರರು, ಚಿತ್ರಕತೆಗಾರರು, ನಟ-ನಟಿಯರು, ನಿರ್ದೇಶಕರು – ಯಾರನ್ನೂ ಸಹಿಸಲಾರದ ಮನಸ್ಥಿತಿ ತಯಾರಾಗಲಿಕ್ಕೆ ಹತ್ತೇದ. ಈ ಪಟ್ಟಿ ಬೆಳಕೋತ ಹೋಗತದ. ಇದು ಯಾವುದೇ ಹೊಸ ವಿಷಯವನ್ನ ಮಾತಾಡುವ, ಪ್ರಚಾರ ಮಾಡುವ- ತಿಳಿ ಹೇಳುವ ಯಾರನ್ನೂ ಸಹಿಸಲಾರದು. ಅವರನ್ನ ಅವಮಾನ ಮಾಡಿ, ಅವರಿಗೆ, ಅವರ ವ್ಯಕ್ತಿತ್ವಕ್ಕ, ಅವರ ವಿಚಾರಕ್ಕ ಕಿಮ್ಮತ್ತು ಇಲ್ಲಾ ಅನ್ನೋ ಹಂಗ ಮಾಡಿ ಅವರನ್ನ ಜನರ ಮನಸ್ಸಿನಿಂದಾ ದೂರ ಸರಿಸಿ ಬಿಡೋ ಸಂಚು ಇದು. ಯಾರಿಗೆ ತಮ್ಮ ಬಲದ ಬಗ್ಗೆ, ಜಾಣತನದ ಬಗ್ಗೆ ಸಂಶಯ ಇರತದೋ ಅವರು ಇತರರ ಮೌಲ್ಯಗಳ ಬಗ್ಗೆ, ಸಂಶಯ ವ್ಯಕ್ತಪಡಿಸತಾರ. ದೊಡ್ಡ ದೊಡ್ಡ ಸ್ಥಾನದಾಗ ಇರೋವರು ಇಂಥಾ ಮಾತಾಡಲಿಕ್ಕೆ ಹತ್ತಿದಾಗ ಸಣ್ಣ ವಯಸ್ಸಿನ ಹುಡುಗರು, ಕುರುಡ ಬೆಂಬಲಿಗರು ಹೌದು ಹೌದು ಅಂತ ಚಪ್ಪಾಳೆ ತಟ್ಟತಾರ. ಅವಕಾಶ ಸಿಕ್ಕರ ಈ ವಿಚಾರಗಳನ್ನ ಹಿಂಸೆಯಿಂದ ಎದುರಿಸಲಿಕ್ಕೂ ತಯಾರಾಗತಾರ. ಅದಕ್ಕ ಮಹಾತ್ಯಾಗ ಅನ್ನೋ ಹೆಸರು ಕೊಡತಾರ.

ಎಲ್ಲ ಕಡೆಯಿಂದ ಉದಾರ ವಿಚಾರ ಬರೋದನ್ನ ನಿಲ್ಲಿಸಬೇಕು, ಬರೇ ನಮ್ಮ ವಿಚಾರ ತುಂಬಿ ತುಳುಕಬೇಕು ಅಂಥೇಳಿ ಅಡ್ನಾಡಿ ಪ್ರಯತ್ನ ಮಾಡತಾರ. ಅದಕ್ಕ ಎಲ್ಲಾ ವಿಶ್ವವಿದ್ಯಾಲಯದಾಗೂ ‘ನಮ್ಮ ವಿಚಾರದ ಜನಾ ಇರಬೇಕು’ ಅನ್ನೋದರ ಮ್ಯಾಲೆ ನೇಮಕಾತಿ ಆಗ್ಯಾವು. ಆ ಮನುಷ್ಯ ಆ ಕೆಲಸಕ್ಕ ಯೋಗ್ಯ ಇದ್ದಾನೋ ಇಲ್ಲವೋ ಅನ್ನೋದರ ಬಗ್ಗೆ ಯಾರೂ ವಿಚಾರ ಮಾಡಲಿಕ್ಕೆ ಹತ್ತಿಲ್ಲ.

ಎಲ್ಲ ಪ್ರಗತಿಪರರನ್ನ, ಮುಂದಾಲೋಚನೆ ಉಳ್ಳವರನ್ನ, ಸಮಾನತಾವಾದಿಗಳನ್ನ, ವೈಜ್ಞಾನಿಕ ಮನೋಭಾವ ಇದ್ದವರನ್ನ, ಕಮ್ಯುನಿಸ್ಟ ಅಂತನೋ, ದೇಶದ್ರೋಹಿ ಅಂತನೋ, ವೈರಿದೇಶದ ಏಜೆಂಟ ಅಂತನೋ ಪಟ್ಟ ಕಟ್ಟಿ ಬಿಡುವುದು ಸಹಜ ಆಗೇತಿ. ಇದು ಭಯಂಕರ ಅಪಾಯಕಾರಿ. ಇದನ್ನ ತಲಿ ಸಮಾ ಇರೋರೆಲ್ಲಾ ವಿರೋಧಿಸಬೇಕು. ಮೂರ್ಖರ ರಾಜ್ಯದಾಗ ಬುದ್ಧಿವಂತರಾಗಿರೋದು ತಪ್ಪು ಅಂತಂತಾರ ಖರೆ. ಆದರೆ ಸುತ್ತಲಿನ ಮೂರ್ಖರ ಹುಚ್ಚುತನ ನೋಡಿಕೊಂಡು ಸುಮ್ಮನಿದ್ದರ ಅವರಿಗೂ ಇವರಿಗೂ ಏನೂ ವ್ಯತ್ಯಾಸ ಉಳಿಯಂಗಿಲ್ಲ. ಇಷ್ಟೇಲ್ಲಾ ರಾಜಾರೋಷವಾಗಿ ನಡೀಲಿಕ್ಕೆ ಹತ್ತಿದಾಗ ಇವರೆಲ್ಲಾ ಹೆಂಗ ಸುಮ್ಮನಿದ್ದರು, ಅಂತ ನಾಳೆ ಹುಟ್ಟುವವರು ತಮ್ಮ ಹಿರಿಯರನ್ನ ಆಡಿಕೊಳ್ಳೋಹಂಗಾಗತದ.

ಸುಳ್ಳು ಅನ್ನೋದು ಸೆರಗಿನ್ಯಾಗಿನ ಕೆಂಡ. ಅದನ್ನ ಕಟ್ಟಿಕೊಂಡು ಯತ್ನಾಳಶಾಹಿ ಅಪಾಯಕಾರಿ ಆಟ ಆಡಲಿಕ್ಕೆ ಹತ್ತೇದ. ಬ್ಯಾರೆಯವರ ಮನಿಗೆ ಬೆಂಕಿ ಹಚ್ಚಲಿಕ್ಕೆ ನಾವು ಅದನ್ನು ಉಪಯೋಗಿಸಬಹುದು. ಆದರ ಅದು ಕಡೀಕೆ ಎಲ್ಲಾರಿಗೂ ಹತ್ತಿಕೊಳ್ಳೋದ. ಇದನ್ನ ತಿಳಕೊಳ್ಳಲಾರದವರು ಹಾಡಾಡಿ ಕುಣೀಲಿಕ್ಕೆ ಹತ್ಯಾರ. ಹಾಡು ಮುಗಿಯೋದರಾಗ ಸೆರಗು ಸುಟ್ಟು ಹೋಗಿರತದ. ಕೆಂಡ ಮೈಗೆಲ್ಲಾ ಮೆತ್ತಿಕೊಂಡಿರತದ. ಅಷ್ಟರಾಗ ಸತ್ಯ ಅನ್ನೋ ತಣ್ಣೀರಿನ ಝರಿ ಯೊಳಗ ಜಿಗೀಬೇಕು. ಎಲ್ಲಾ ಸಮಾ ಆಗೋತನಕಾ ತೇಲಿಕೋತ ಹೋಗಬೇಕು.

ನಮ್ಮ ಇಂದಿನ ಸಂಕಟವನ್ನ, ಅದಕ್ಕ ಉತ್ತರವಾಗಿ ಆಶಾವಾದವನ್ನ ತೋರಿಸೋ ಅಮೀರ ಕಜಲಬಾಷ ಅವರ ಒಂದು ಗಜಲ್ಲಿನ ಸಾಲು ಹಿಂಗವ

ಪೂರ್ತೆ ಹಾಳ ಬಿದ್ದದ ಈ ಊರು
ಇಂಥಾದರಾಗ ಕನ್ನಡಿ ಮಾರಾಕ ಬಂದೇವಲ್ಲಾ,
ನಾವೆಷ್ಟು ಹುಚ್ಚರಿರಬೇಕು ನೋಡು
ಅವರು ನಮ್ಮನ್ನ ಬಿಟ್ಟು ಅಡ್ಯಾಡಿದರೇನಾತು,
ನಾವು-ನಾವ ಭೆಟ್ಟಿ ಆಗಕೋತ ಇರಲಿಕ್ಕೆ,
ಮಾತಾಡಿಕೋತ ಹೋಗಲಿಕ್ಕೆ
ನೆವಾ ಹುಡಕಲಿಕ್ಕೆ ಬಂದೇವೆಲ್ಲಾ
ನಾವೆಷ್ಟು ಹುಚ್ಚರಿರಬೇಕು ನೋಡು
ಆದರ ಕತ್ತಲದಾಗ ಎಷ್ಟು ದಿನಾಂತ ಇರೋದು?
ಒಂದ ಸಣ್ಣ ದೀಪ ಹಚ್ಚಬೇಕೂಂತ ಹೊಂಟೆವೆಲ್ಲಾ
ನಾವು ಎಷ್ಟು ಹುಚ್ಚರಿರಬೇಕು ನೋಡು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...