Homeಅಂಕಣಗಳುಮಾತು ಮರೆತ ಭಾರತ; ಬೆಲ್ಚಿ ಫೈಲ್: ಭಾರತವನ್ನು ಬೆಚ್ಚಿ ಬೀಳಿಸಿದ ದಲಿತರ ನರಮೇಧ

ಮಾತು ಮರೆತ ಭಾರತ; ಬೆಲ್ಚಿ ಫೈಲ್: ಭಾರತವನ್ನು ಬೆಚ್ಚಿ ಬೀಳಿಸಿದ ದಲಿತರ ನರಮೇಧ

- Advertisement -
- Advertisement -

ದಲಿತರು ಎಚ್ಚೆತ್ತು ತಿರುಗಿಬಿದ್ದರೆ ದಲಿತೇತರರ ದೃಷ್ಟಿಯಲ್ಲಿ ನಾಯಕರಾಗುವುದಿಲ್ಲ. ಖಳನಾಯಕರೋ ಅಥವಾ ಉಗ್ರವಾದಿಗಳೋ ಆಗಿಬಿಡುತ್ತಾರೆ. ಇಂತಹ ಒಂದು ಪ್ರಕರಣಕ್ಕೆ ಮುಖ್ಯ ಉದಾಹರಣೆ ಬೆಲ್ಚಿ. ಬಿಹಾರದ ಗಡಿ ಭಾಗದ ಪುಟ್ಟ ಹಳ್ಳಿಯೇ ಬೆಲ್ಚಿ. ಪಾಟ್ನಾದಿಂದ ಸುಮಾರು 90 ಕಿಮೀ ದೂರದಲ್ಲಿದೆ. ಇಂದಿಗೂ ಸಹ ಕಳೆಕಟ್ಟಿಕೊಳ್ಳದೆ ಕುಗ್ರಾಮವಾಗಿಯೇ ಉಳಿದಿದೆ. ಮೇ 27, 1977ರಂದು ದೇಶವನ್ನೇ ಬೆಚ್ಚಿಬೀಳಿಸಿದ ಘಟನೆಯೊಂದು ಇಲ್ಲಿ ನಡೆದಿತ್ತು. ಅಲ್ಲಿ ನಡೆದ ನರಮೇಧವು ಕರ್ನಾಟಕದ ಚಿಂತಾಮಣಿ ತಾಲ್ಲೂಕಿನ ಗೊಲ್ಲಹಳ್ಳಿ ಶಿವಪ್ರಸಾದ್ ಎಂಬ ಯುವಕನನ್ನೂ ಕಾಡಿತ್ತು. ಬೆಚ್ಚಿ ಬೀಳಿಸಿ ಆಕ್ರೋಶಭರಿತರನ್ನಾಗಿಸಿ ಪ್ರತಿಕ್ರಿಯಿಸುವಂತೆ ಮಾಡಿತ್ತು. ಆಗ ಮೂಡಿದ ಕವಿತೆಯೇ ಮುಂದೆ ಹಾಡಾಗಿ ಕೆಂಡವಾಯಿತು.

ಕಾಶಿ ಕಂಚಿ ಕಾಳಹಸ್ತಿ
ಕಾಣುವಂತ ಕಣ್ಣಿಗೆ
ಬೆಲ್ಚಿ ಪಿಪ್ರ ಕೆಸ್ತಾರ
ಕಾಣಲಿಲ್ಲ ಯಾಕೆ?

ಎಂಬ ಸಾಲುಗಳನ್ನು ಕವಿ ಗೊಲ್ಲಹಳ್ಳಿ ಶಿವಪ್ರಸಾದ್ ಅವರಿಂದ ಬರೆಸಿತ್ತು ಈ ಘಟನೆ. ಹಾಗಾದರೆ ಅಲ್ಲಿ ನಡೆದದ್ದಾದರೂ ಏನು?

ಎಪ್ಪತ್ತರ ದಶಕದಲ್ಲಿ ಹಲವು ರಾಜಕೀಯ ಸ್ಥಿತ್ಯಂತರಗಳು ನಡೆದವು. 1977ರಷ್ಟೊತ್ತಿಗೆ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಕಳೆದುಕೊಂಡಿತ್ತು. ಜನತಾ ಪಕ್ಷದ ಮೊರಾರ್ಜಿ ದೇಸಾಯಿಯವರ ಸರ್ಕಾರ ರಚನೆಯಾಗಿತ್ತು. ಬಿಹಾರದಲ್ಲಿ ಜನತಾ ಪಕ್ಷದ ಕರ್ಪೂರಿ ಠಾಕೂರ್ ಮುಖ್ಯಮಂತ್ರಿಯಾಗಿದ್ದರು. ಬೆಲ್ಚಿಯ ನರಮೇಧದ ನಂತರ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಕುಗ್ರಾಮವಾದ ಬೆಲ್ಚಿಯನ್ನು ಆನೆಯ ಮೇಲೆ ಕುಳಿತು ಪ್ರವೇಶಿಸಿದ್ದ ಇಂದಿರಾಗಾಂಧಿಯವರು ದಿನಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ್ದರು.

ಬೆಲ್ಚಿಯಲ್ಲಿ ಎರಡು ಭೂಮಾಲೀಕ ತಂಡಗಳ ನಡುವೆ ವೈಷಮ್ಯವಿತ್ತು. ಒಂದು ಭೂಮಾಲೀಕ ತಂಡದ ನಾಯಕ ಮಹಾವೀರ್ ಹಾಗೂ ಮತ್ತೊಂದರ ನಾಯಕ ಪರಶುರಾಮ್. ಇಬ್ಬರೂ ಕುರ್ಮಿ ಜಾತಿಗೆ ಸೇರಿದವರು. ಇವರಿಬ್ಬರ ನಡುವೆಯೂ ಆಗಾಗ ಕಲಹಗಳು ಏರ್ಪಡುತ್ತಿದ್ದವು. ಇವರಿಬ್ಬರ ಬೆನ್ನಿಗೆ ರಾಜಕೀಯ ನಾಯಕರ ಬಲವೂ ಇತ್ತು. ಇವರಿಬ್ಬರದ್ದು ಭೂಮಾಲೀಕರ ನಡುವಿನ ಸಂಘರ್ಷವಾದರೇ ಬೆಲ್ಚಿಯ ದಲಿತ ಯುವತಿಯನ್ನು ಮದುವೆಯಾಗಿದ್ದ ಸಿದ್ದೇಶ್ವರ ಪಾಸ್ವಾನ್ ದಲಿತ ಕೂಲಿಗಳನ್ನು ಸಂಘಟಿಸುವ ಕೆಲಸಕ್ಕೆ ಇಳಿದು ಈ ಇಬ್ಬರು ಭೂಮಾಲೀಕರ ದ್ವೇಷ ಕಟ್ಟಿಕೊಂಡಿದ್ದನು. ಕಿಲ್ವೇನ್ಮಣಿಯಲ್ಲಿ ನಡೆದಂತೆ ಇಲ್ಲಿಯೂ ಸಹ ಕೃಷಿ ಕೂಲಿಗಳು ಕೂಲಿಯ ಹಣವನ್ನು ಹೆಚ್ಚು ಮಾಡಬೇಕೆಂದು ಆಗ್ರಹಿಸುತ್ತಿದ್ದರು.

ಮಹಾವೀರ್ ಮಹತೋ ಹಾಗೂ ಪರಶುರಾಮ್ ಅವರ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತರನ್ನೂ ಹಾಗೂ ಹಿಂದುಳಿದ ಜಾತಿಯ ಸೋನಾರರನ್ನೂ ಆ ಭೂಮಾಲೀಕರು ಶೋಷಿಸುತ್ತಿದ್ದರು. ಮಹಾವೀರನ ದಬ್ಬಾಳಿಕೆ ಬಹಳವೇ ಹೆಚ್ಚಾದಾಗ ಕೃಷಿ ಕೂಲಿಗಳ ರಕ್ಷಣೆಗೆ ಸಿದ್ದೇಶ್ವರ ಪಾಸ್ವಾನ್ ಧಾವಿಸುತ್ತಿದ್ದನು. ಇದೇ ರೀತಿ ಹಲವು ಸಂಘರ್ಷಗಳು ಏರ್ಪಟ್ಟು ಮಹಾವೀರ್ ಮತ್ತು ಪರಶುರಾಮ್ ಎದುರು ದಿನಬೆಳಗಾಗುವುದರೊಳಗಾಗಿ ಸಿದ್ದೇಶ್ವರ ಪಾಸ್ವಾನ್ ಪ್ರಭಾವ ಬೆಳೆಸಿಕೊಂಡಿದ್ದ. ಕೃಷಿಕೂಲಿಗಳು ಅವನನ್ನು ’ಸಿಂಗ್ವ’ ಎನ್ನುವಷ್ಟು ಎತ್ತರಕ್ಕೆ ಬೆಳೆದನು. ತನ್ನ ವೈರಿಗಳ ಹಿಂದೆ ಬಲಿಷ್ಠ ರಾಜಕಾರಣಿಗಳಿರುವುದನ್ನು ಅರಿತು ತನ್ನದೇ ತಂಡವನ್ನು ಕಟ್ಟಿಕೊಂಡನು. ಹೇಗಿದ್ದರೂ ಪೊಲೀಸ್ ವ್ಯವಸ್ಥೆ ಯಾವಾಗಲೂ ಮೇಲ್ಜಾತಿ ಪರವೇ ಇರುವುದರಿಂದ ಇಲ್ಲಿ ಸಿಂಗ್ವ ಮೇಲೆಯೂ ಕೇಸುಗಳು ದಾಖಲಾದವು. ಹಾಗಂತ ಸಿಂಗ್ವ ಕೈಕಟ್ಟಿ ಕೂತವನೂ ಅಲ್ಲ. ಏಟಿಗೆ ಎದಿರೇಟು ಕೊಟ್ಟವನೇ. ಜಗಳಕ್ಕೆ ಕಾಲು ಕೆರೆದು ನಿಲ್ಲುತ್ತಿದ್ದವನೇ. ಭೂಮಾಲೀಕರ ಬಂದೂಕುಗಳ ವಿರುದ್ಧ ತಾನೂ ಬಂದೂಕಿನ ತಂಡ ಕಟ್ಟಿದವನೇ. ಈ ಹಿಂದೆ ಅವನ ಮೇಲೆ ಎರಡು ಬಾರಿ ಆಕ್ರಮಣವಾಗಿತ್ತಾದರೂ ಎದುರಿಸಿ ನಿಂತಿದ್ದನು. ಹಾಗಾಗಿ ಬಿಹಾರದ ಆಸ್ತಾಮ ತಾಲ್ಲೂಕಿನಲ್ಲಿ ಮೂರನೆಯ ಹೆಸರೂ ಕೇಳಿಬಂದಿತು. ಆ ಹೆಸರೇ ಸಿಂಗ್ವ. ಈತನ ಪ್ರಾಬಲ್ಯ ಅದೆಷ್ಟರ ಮಟ್ಟಿಗೆ ಬೆಳೆಯಿತೆಂದರೆ ಆಸ್ತಾಮದ ಶಾಸಕ ಇಂದ್ರದೇವ್ ಚೌಧರಿ ಹಾಗೂ ಮತ್ತೊಬ್ಬ ರಾಜಕಾರಣಿ ಅರುಣ್ ಚೌಧರಿ ಈತನನ್ನು ತಮ್ಮ ಪರವಾಗಿ ಕೆಲಸ ಮಾಡಲು ಆಹ್ವಾನಿಸುವಷ್ಟು! ಆದರೆ ಈ ಇಬ್ಬರ ಗೆಳೆತನದ ಆಹ್ವಾನವೂ ಅನುಮಾನಾಸ್ಪದವಾದ್ದು ಎಂಬುದು ಸಿಂಗ್ವನಿಗೆ ಅರ್ಥವಾಗದೇ ಹೋದದ್ದು ವಿಪರ್ಯಾಸ.

ಅಂದು ಮೇ 27, 1977. ಸಿಂಗ್ವನ ತಿರುಗಿ ಬೀಳುವಿಕೆಯನ್ನು ತಡೆದುಕೊಳ್ಳಲಾಗದೇ ಪರಿತಪಿಸುತ್ತಿದ್ದ ಮಹಾವೀರ್ ಹಾಗೂ ಪರಶುರಾಮ್ ಆತನನ್ನು ರಾಜಿ ಸಂಧಾನಕ್ಕೆ ಮನೆಗೆ ಕರೆಯುತ್ತಾರೆ. ಇವರ ಸಂಚನ್ನು ತಿಳಿದೇ ಮಹಾವೀರನ ಮನೆಗೆ ಬರುವ ಸಿಂಗ್ವನ ಜೊತೆಗೆ ಹತ್ತು ಮಂದಿ ಕೃಷಿಕೂಲಿಗಳೂ ಇರುತ್ತಾರೆ. ಅವರ ಬಳಿಯೂ ಶಸ್ತ್ರವಿರುತ್ತದೆ. ಆದರೆ ರಾಜಿ ಸಂಧಾನಕ್ಕೆ ಶಸ್ತ್ರಗಳನ್ನು ಕೆಳಗಿಡುವಂತೆ ಮಾತುಕತೆಯಾಗುತ್ತದೆ. ಬಳಿಕ ಸಿಂಗ್ವನ ತಂಡ ನಿಶ್ಯಸ್ತ್ರವಾಗಿ ನಿಲ್ಲುತ್ತದೆ. ಇದೇ ಸಮಯವನ್ನು ಬಳಸಿಕೊಂಡು ಪರಶುರಾಮನ ತಂಡ ತನ್ನ 40 ಬಂದೂಕುಧಾರಿಗಳೊಂದಿಗೆ ಗುಟ್ಟಾಗಿ ಒಳಬಂದು ಸಿಂಗ್ವನನ್ನೂ ಹಾಗೂ ಆತನ ಹತ್ತು ಸ್ನೇಹಿತರನ್ನೂ ಮರಗಳಿಗೆ ಕಟ್ಟಿ ಹಾಕುತ್ತಾರೆ. ಕುರ್ಮಿ ಜನಾಂಗದ ಮಹಿಳೆಯರು ಹಾಗೂ ಮಕ್ಕಳು ಅವರನ್ನು ಸುಡುವ ಸಲುವಾಗಿ ಒಣಗಿದ ಸೌದೆಗಳನ್ನು ಹೆಕ್ಕಿ ತರುತ್ತಾರೆ. ಬಂದೂಕಿನ ನಳಿಕೆಯನ್ನು ತಲೆಯ ಬಳಿ ಇಟ್ಟು ಆ ಹನ್ನೊಂದು ಕೃಷಿ ಕೂಲಿಗಳನ್ನೂ ಕೊಂದುಹಾಕುತ್ತಾರೆ. ನಂತರ ಅವರ ದೇಹಗಳಿಗೆ ಬೆಂಕಿ ಹಚ್ಚುತ್ತಾರೆ. ಸತ್ತ 11 ಕೃಷಿಕೂಲಿಗಳಲ್ಲಿ 9 ಜನ ದಲಿತರೂ ಹಾಗೂ ಮೂವರು ಹಿಂದುಳಿದ ಜಾತಿಯವರೂ ಇರುತ್ತಾರೆ. ಸತತ ಐದು ವರ್ಷಗಳ ಕೃಷಿಕೂಲಿಗಳ ಹೋರಾಟಕ್ಕೆ ಬೃಹತ್ ಹಿನ್ನಡೆಯಾಗುತ್ತದೆ. ಅಂದು ಆ ಘಟನೆ ನಡೆಯುವಾಗ ಇಂದ್ರದೇವ್ ಚೌಧರಿ ಹಾಗೂ ಅರುಣ್ ಚೌಧರಿ ಅಲ್ಲಿಯೇ ಇರುತ್ತಾರೆ.

ಎಂದಿನಂತೆ ಬೇಕಂತಲೇ ತಡವಾಗಿ ಬಂದ ಪೊಲೀಸರು ಮಹಾವೀರ್ ಹಾಗೂ ಪರಶುರಾಮ್ ಮೇಲೆ ಕೇಸು ದಾಖಲಿಸುತ್ತಾರೆ. ಬೇಲ್ ಸಿಗುತ್ತದೆ. ನಂತರ ವಿಚಾರಣೆ ನಡೆದು, ಸೆಷನ್ ಕೋರ್ಟ್ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್ ಮಹಾವೀರ್ ಮತ್ತು ಪರಶುರಾಮನಿಗೆ ಮರಣದಂಡನೆ ವಿಧಿಸುತ್ತದೆ. ಇತರೆ 13 ಜನರಿಗೂ ಜೀವಾವಧಿ ಶಿಕ್ಷೆ ವಿಧಿಸುತ್ತದೆ. ಆದರೆ ಮುಂದೆ ಅವರೆಲ್ಲರಿಗೂ ಸುಪ್ರೀಂ ಕೋರ್ಟ್ ಬೇಲ್ ನೀಡುತ್ತದೆ.

ರಂಗಕರ್ಮಿ ಸಿಜಿಕೆ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ’ಬೆಲ್ಚಿ’ ಬೀದಿ ನಾಟಕ ರೂಪುಗೊಂಡು ಬಿಹಾರದ ಬೆಲ್ಚಿ ನರಮೇಧವನ್ನು ಕರ್ನಾಟಕಕ್ಕೆ ಪರಿಚಯಿಸಿತ್ತು. ಬೆಲ್ಚಿಯ ನರಮೇಧದ ವಿರುದ್ಧ ಕರ್ನಾಟಕದಲ್ಲಿಯೂ ದಲಿತ ಸಂಘರ್ಷ ಸಮಿತಿ ಹೋರಾಟ ರೂಪಿಸಿತ್ತು. ನಾಡೋಜ ಸಿದ್ದಲಿಂಗಯ್ಯನವರ ’ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತ್ವಾರಣ’ ಹಾಡು ಹೋರಾಟದ ಭಾಗವಾಗಿದ್ದು ಈ ನಾಟಕದಿಂದಲೇ ಆಗಿದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬೆಲ್ಚಿಯಂತಹ ದುರ್ಘಟನೆಯ ನಂತರವೂ ಈ ದೇಶದಲ್ಲಿ ದಲಿತರ ಮಾರಣಹೋಮ ನಿಂತಿಲ್ಲ. ಇದು ಈ ದೇಶದ ದುರಂತ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...