Homeಅಂಕಣಗಳುಮಾತು ಮರೆತ ಭಾರತ; ಬೆಲ್ಚಿ ಫೈಲ್: ಭಾರತವನ್ನು ಬೆಚ್ಚಿ ಬೀಳಿಸಿದ ದಲಿತರ ನರಮೇಧ

ಮಾತು ಮರೆತ ಭಾರತ; ಬೆಲ್ಚಿ ಫೈಲ್: ಭಾರತವನ್ನು ಬೆಚ್ಚಿ ಬೀಳಿಸಿದ ದಲಿತರ ನರಮೇಧ

- Advertisement -
- Advertisement -

ದಲಿತರು ಎಚ್ಚೆತ್ತು ತಿರುಗಿಬಿದ್ದರೆ ದಲಿತೇತರರ ದೃಷ್ಟಿಯಲ್ಲಿ ನಾಯಕರಾಗುವುದಿಲ್ಲ. ಖಳನಾಯಕರೋ ಅಥವಾ ಉಗ್ರವಾದಿಗಳೋ ಆಗಿಬಿಡುತ್ತಾರೆ. ಇಂತಹ ಒಂದು ಪ್ರಕರಣಕ್ಕೆ ಮುಖ್ಯ ಉದಾಹರಣೆ ಬೆಲ್ಚಿ. ಬಿಹಾರದ ಗಡಿ ಭಾಗದ ಪುಟ್ಟ ಹಳ್ಳಿಯೇ ಬೆಲ್ಚಿ. ಪಾಟ್ನಾದಿಂದ ಸುಮಾರು 90 ಕಿಮೀ ದೂರದಲ್ಲಿದೆ. ಇಂದಿಗೂ ಸಹ ಕಳೆಕಟ್ಟಿಕೊಳ್ಳದೆ ಕುಗ್ರಾಮವಾಗಿಯೇ ಉಳಿದಿದೆ. ಮೇ 27, 1977ರಂದು ದೇಶವನ್ನೇ ಬೆಚ್ಚಿಬೀಳಿಸಿದ ಘಟನೆಯೊಂದು ಇಲ್ಲಿ ನಡೆದಿತ್ತು. ಅಲ್ಲಿ ನಡೆದ ನರಮೇಧವು ಕರ್ನಾಟಕದ ಚಿಂತಾಮಣಿ ತಾಲ್ಲೂಕಿನ ಗೊಲ್ಲಹಳ್ಳಿ ಶಿವಪ್ರಸಾದ್ ಎಂಬ ಯುವಕನನ್ನೂ ಕಾಡಿತ್ತು. ಬೆಚ್ಚಿ ಬೀಳಿಸಿ ಆಕ್ರೋಶಭರಿತರನ್ನಾಗಿಸಿ ಪ್ರತಿಕ್ರಿಯಿಸುವಂತೆ ಮಾಡಿತ್ತು. ಆಗ ಮೂಡಿದ ಕವಿತೆಯೇ ಮುಂದೆ ಹಾಡಾಗಿ ಕೆಂಡವಾಯಿತು.

ಕಾಶಿ ಕಂಚಿ ಕಾಳಹಸ್ತಿ
ಕಾಣುವಂತ ಕಣ್ಣಿಗೆ
ಬೆಲ್ಚಿ ಪಿಪ್ರ ಕೆಸ್ತಾರ
ಕಾಣಲಿಲ್ಲ ಯಾಕೆ?

ಎಂಬ ಸಾಲುಗಳನ್ನು ಕವಿ ಗೊಲ್ಲಹಳ್ಳಿ ಶಿವಪ್ರಸಾದ್ ಅವರಿಂದ ಬರೆಸಿತ್ತು ಈ ಘಟನೆ. ಹಾಗಾದರೆ ಅಲ್ಲಿ ನಡೆದದ್ದಾದರೂ ಏನು?

ಎಪ್ಪತ್ತರ ದಶಕದಲ್ಲಿ ಹಲವು ರಾಜಕೀಯ ಸ್ಥಿತ್ಯಂತರಗಳು ನಡೆದವು. 1977ರಷ್ಟೊತ್ತಿಗೆ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಕಳೆದುಕೊಂಡಿತ್ತು. ಜನತಾ ಪಕ್ಷದ ಮೊರಾರ್ಜಿ ದೇಸಾಯಿಯವರ ಸರ್ಕಾರ ರಚನೆಯಾಗಿತ್ತು. ಬಿಹಾರದಲ್ಲಿ ಜನತಾ ಪಕ್ಷದ ಕರ್ಪೂರಿ ಠಾಕೂರ್ ಮುಖ್ಯಮಂತ್ರಿಯಾಗಿದ್ದರು. ಬೆಲ್ಚಿಯ ನರಮೇಧದ ನಂತರ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಕುಗ್ರಾಮವಾದ ಬೆಲ್ಚಿಯನ್ನು ಆನೆಯ ಮೇಲೆ ಕುಳಿತು ಪ್ರವೇಶಿಸಿದ್ದ ಇಂದಿರಾಗಾಂಧಿಯವರು ದಿನಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ್ದರು.

ಬೆಲ್ಚಿಯಲ್ಲಿ ಎರಡು ಭೂಮಾಲೀಕ ತಂಡಗಳ ನಡುವೆ ವೈಷಮ್ಯವಿತ್ತು. ಒಂದು ಭೂಮಾಲೀಕ ತಂಡದ ನಾಯಕ ಮಹಾವೀರ್ ಹಾಗೂ ಮತ್ತೊಂದರ ನಾಯಕ ಪರಶುರಾಮ್. ಇಬ್ಬರೂ ಕುರ್ಮಿ ಜಾತಿಗೆ ಸೇರಿದವರು. ಇವರಿಬ್ಬರ ನಡುವೆಯೂ ಆಗಾಗ ಕಲಹಗಳು ಏರ್ಪಡುತ್ತಿದ್ದವು. ಇವರಿಬ್ಬರ ಬೆನ್ನಿಗೆ ರಾಜಕೀಯ ನಾಯಕರ ಬಲವೂ ಇತ್ತು. ಇವರಿಬ್ಬರದ್ದು ಭೂಮಾಲೀಕರ ನಡುವಿನ ಸಂಘರ್ಷವಾದರೇ ಬೆಲ್ಚಿಯ ದಲಿತ ಯುವತಿಯನ್ನು ಮದುವೆಯಾಗಿದ್ದ ಸಿದ್ದೇಶ್ವರ ಪಾಸ್ವಾನ್ ದಲಿತ ಕೂಲಿಗಳನ್ನು ಸಂಘಟಿಸುವ ಕೆಲಸಕ್ಕೆ ಇಳಿದು ಈ ಇಬ್ಬರು ಭೂಮಾಲೀಕರ ದ್ವೇಷ ಕಟ್ಟಿಕೊಂಡಿದ್ದನು. ಕಿಲ್ವೇನ್ಮಣಿಯಲ್ಲಿ ನಡೆದಂತೆ ಇಲ್ಲಿಯೂ ಸಹ ಕೃಷಿ ಕೂಲಿಗಳು ಕೂಲಿಯ ಹಣವನ್ನು ಹೆಚ್ಚು ಮಾಡಬೇಕೆಂದು ಆಗ್ರಹಿಸುತ್ತಿದ್ದರು.

ಮಹಾವೀರ್ ಮಹತೋ ಹಾಗೂ ಪರಶುರಾಮ್ ಅವರ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತರನ್ನೂ ಹಾಗೂ ಹಿಂದುಳಿದ ಜಾತಿಯ ಸೋನಾರರನ್ನೂ ಆ ಭೂಮಾಲೀಕರು ಶೋಷಿಸುತ್ತಿದ್ದರು. ಮಹಾವೀರನ ದಬ್ಬಾಳಿಕೆ ಬಹಳವೇ ಹೆಚ್ಚಾದಾಗ ಕೃಷಿ ಕೂಲಿಗಳ ರಕ್ಷಣೆಗೆ ಸಿದ್ದೇಶ್ವರ ಪಾಸ್ವಾನ್ ಧಾವಿಸುತ್ತಿದ್ದನು. ಇದೇ ರೀತಿ ಹಲವು ಸಂಘರ್ಷಗಳು ಏರ್ಪಟ್ಟು ಮಹಾವೀರ್ ಮತ್ತು ಪರಶುರಾಮ್ ಎದುರು ದಿನಬೆಳಗಾಗುವುದರೊಳಗಾಗಿ ಸಿದ್ದೇಶ್ವರ ಪಾಸ್ವಾನ್ ಪ್ರಭಾವ ಬೆಳೆಸಿಕೊಂಡಿದ್ದ. ಕೃಷಿಕೂಲಿಗಳು ಅವನನ್ನು ’ಸಿಂಗ್ವ’ ಎನ್ನುವಷ್ಟು ಎತ್ತರಕ್ಕೆ ಬೆಳೆದನು. ತನ್ನ ವೈರಿಗಳ ಹಿಂದೆ ಬಲಿಷ್ಠ ರಾಜಕಾರಣಿಗಳಿರುವುದನ್ನು ಅರಿತು ತನ್ನದೇ ತಂಡವನ್ನು ಕಟ್ಟಿಕೊಂಡನು. ಹೇಗಿದ್ದರೂ ಪೊಲೀಸ್ ವ್ಯವಸ್ಥೆ ಯಾವಾಗಲೂ ಮೇಲ್ಜಾತಿ ಪರವೇ ಇರುವುದರಿಂದ ಇಲ್ಲಿ ಸಿಂಗ್ವ ಮೇಲೆಯೂ ಕೇಸುಗಳು ದಾಖಲಾದವು. ಹಾಗಂತ ಸಿಂಗ್ವ ಕೈಕಟ್ಟಿ ಕೂತವನೂ ಅಲ್ಲ. ಏಟಿಗೆ ಎದಿರೇಟು ಕೊಟ್ಟವನೇ. ಜಗಳಕ್ಕೆ ಕಾಲು ಕೆರೆದು ನಿಲ್ಲುತ್ತಿದ್ದವನೇ. ಭೂಮಾಲೀಕರ ಬಂದೂಕುಗಳ ವಿರುದ್ಧ ತಾನೂ ಬಂದೂಕಿನ ತಂಡ ಕಟ್ಟಿದವನೇ. ಈ ಹಿಂದೆ ಅವನ ಮೇಲೆ ಎರಡು ಬಾರಿ ಆಕ್ರಮಣವಾಗಿತ್ತಾದರೂ ಎದುರಿಸಿ ನಿಂತಿದ್ದನು. ಹಾಗಾಗಿ ಬಿಹಾರದ ಆಸ್ತಾಮ ತಾಲ್ಲೂಕಿನಲ್ಲಿ ಮೂರನೆಯ ಹೆಸರೂ ಕೇಳಿಬಂದಿತು. ಆ ಹೆಸರೇ ಸಿಂಗ್ವ. ಈತನ ಪ್ರಾಬಲ್ಯ ಅದೆಷ್ಟರ ಮಟ್ಟಿಗೆ ಬೆಳೆಯಿತೆಂದರೆ ಆಸ್ತಾಮದ ಶಾಸಕ ಇಂದ್ರದೇವ್ ಚೌಧರಿ ಹಾಗೂ ಮತ್ತೊಬ್ಬ ರಾಜಕಾರಣಿ ಅರುಣ್ ಚೌಧರಿ ಈತನನ್ನು ತಮ್ಮ ಪರವಾಗಿ ಕೆಲಸ ಮಾಡಲು ಆಹ್ವಾನಿಸುವಷ್ಟು! ಆದರೆ ಈ ಇಬ್ಬರ ಗೆಳೆತನದ ಆಹ್ವಾನವೂ ಅನುಮಾನಾಸ್ಪದವಾದ್ದು ಎಂಬುದು ಸಿಂಗ್ವನಿಗೆ ಅರ್ಥವಾಗದೇ ಹೋದದ್ದು ವಿಪರ್ಯಾಸ.

ಅಂದು ಮೇ 27, 1977. ಸಿಂಗ್ವನ ತಿರುಗಿ ಬೀಳುವಿಕೆಯನ್ನು ತಡೆದುಕೊಳ್ಳಲಾಗದೇ ಪರಿತಪಿಸುತ್ತಿದ್ದ ಮಹಾವೀರ್ ಹಾಗೂ ಪರಶುರಾಮ್ ಆತನನ್ನು ರಾಜಿ ಸಂಧಾನಕ್ಕೆ ಮನೆಗೆ ಕರೆಯುತ್ತಾರೆ. ಇವರ ಸಂಚನ್ನು ತಿಳಿದೇ ಮಹಾವೀರನ ಮನೆಗೆ ಬರುವ ಸಿಂಗ್ವನ ಜೊತೆಗೆ ಹತ್ತು ಮಂದಿ ಕೃಷಿಕೂಲಿಗಳೂ ಇರುತ್ತಾರೆ. ಅವರ ಬಳಿಯೂ ಶಸ್ತ್ರವಿರುತ್ತದೆ. ಆದರೆ ರಾಜಿ ಸಂಧಾನಕ್ಕೆ ಶಸ್ತ್ರಗಳನ್ನು ಕೆಳಗಿಡುವಂತೆ ಮಾತುಕತೆಯಾಗುತ್ತದೆ. ಬಳಿಕ ಸಿಂಗ್ವನ ತಂಡ ನಿಶ್ಯಸ್ತ್ರವಾಗಿ ನಿಲ್ಲುತ್ತದೆ. ಇದೇ ಸಮಯವನ್ನು ಬಳಸಿಕೊಂಡು ಪರಶುರಾಮನ ತಂಡ ತನ್ನ 40 ಬಂದೂಕುಧಾರಿಗಳೊಂದಿಗೆ ಗುಟ್ಟಾಗಿ ಒಳಬಂದು ಸಿಂಗ್ವನನ್ನೂ ಹಾಗೂ ಆತನ ಹತ್ತು ಸ್ನೇಹಿತರನ್ನೂ ಮರಗಳಿಗೆ ಕಟ್ಟಿ ಹಾಕುತ್ತಾರೆ. ಕುರ್ಮಿ ಜನಾಂಗದ ಮಹಿಳೆಯರು ಹಾಗೂ ಮಕ್ಕಳು ಅವರನ್ನು ಸುಡುವ ಸಲುವಾಗಿ ಒಣಗಿದ ಸೌದೆಗಳನ್ನು ಹೆಕ್ಕಿ ತರುತ್ತಾರೆ. ಬಂದೂಕಿನ ನಳಿಕೆಯನ್ನು ತಲೆಯ ಬಳಿ ಇಟ್ಟು ಆ ಹನ್ನೊಂದು ಕೃಷಿ ಕೂಲಿಗಳನ್ನೂ ಕೊಂದುಹಾಕುತ್ತಾರೆ. ನಂತರ ಅವರ ದೇಹಗಳಿಗೆ ಬೆಂಕಿ ಹಚ್ಚುತ್ತಾರೆ. ಸತ್ತ 11 ಕೃಷಿಕೂಲಿಗಳಲ್ಲಿ 9 ಜನ ದಲಿತರೂ ಹಾಗೂ ಮೂವರು ಹಿಂದುಳಿದ ಜಾತಿಯವರೂ ಇರುತ್ತಾರೆ. ಸತತ ಐದು ವರ್ಷಗಳ ಕೃಷಿಕೂಲಿಗಳ ಹೋರಾಟಕ್ಕೆ ಬೃಹತ್ ಹಿನ್ನಡೆಯಾಗುತ್ತದೆ. ಅಂದು ಆ ಘಟನೆ ನಡೆಯುವಾಗ ಇಂದ್ರದೇವ್ ಚೌಧರಿ ಹಾಗೂ ಅರುಣ್ ಚೌಧರಿ ಅಲ್ಲಿಯೇ ಇರುತ್ತಾರೆ.

ಎಂದಿನಂತೆ ಬೇಕಂತಲೇ ತಡವಾಗಿ ಬಂದ ಪೊಲೀಸರು ಮಹಾವೀರ್ ಹಾಗೂ ಪರಶುರಾಮ್ ಮೇಲೆ ಕೇಸು ದಾಖಲಿಸುತ್ತಾರೆ. ಬೇಲ್ ಸಿಗುತ್ತದೆ. ನಂತರ ವಿಚಾರಣೆ ನಡೆದು, ಸೆಷನ್ ಕೋರ್ಟ್ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್ ಮಹಾವೀರ್ ಮತ್ತು ಪರಶುರಾಮನಿಗೆ ಮರಣದಂಡನೆ ವಿಧಿಸುತ್ತದೆ. ಇತರೆ 13 ಜನರಿಗೂ ಜೀವಾವಧಿ ಶಿಕ್ಷೆ ವಿಧಿಸುತ್ತದೆ. ಆದರೆ ಮುಂದೆ ಅವರೆಲ್ಲರಿಗೂ ಸುಪ್ರೀಂ ಕೋರ್ಟ್ ಬೇಲ್ ನೀಡುತ್ತದೆ.

ರಂಗಕರ್ಮಿ ಸಿಜಿಕೆ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ’ಬೆಲ್ಚಿ’ ಬೀದಿ ನಾಟಕ ರೂಪುಗೊಂಡು ಬಿಹಾರದ ಬೆಲ್ಚಿ ನರಮೇಧವನ್ನು ಕರ್ನಾಟಕಕ್ಕೆ ಪರಿಚಯಿಸಿತ್ತು. ಬೆಲ್ಚಿಯ ನರಮೇಧದ ವಿರುದ್ಧ ಕರ್ನಾಟಕದಲ್ಲಿಯೂ ದಲಿತ ಸಂಘರ್ಷ ಸಮಿತಿ ಹೋರಾಟ ರೂಪಿಸಿತ್ತು. ನಾಡೋಜ ಸಿದ್ದಲಿಂಗಯ್ಯನವರ ’ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತ್ವಾರಣ’ ಹಾಡು ಹೋರಾಟದ ಭಾಗವಾಗಿದ್ದು ಈ ನಾಟಕದಿಂದಲೇ ಆಗಿದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬೆಲ್ಚಿಯಂತಹ ದುರ್ಘಟನೆಯ ನಂತರವೂ ಈ ದೇಶದಲ್ಲಿ ದಲಿತರ ಮಾರಣಹೋಮ ನಿಂತಿಲ್ಲ. ಇದು ಈ ದೇಶದ ದುರಂತ.

LEAVE A REPLY

Please enter your comment!
Please enter your name here

- Advertisment -

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...