Homeಅಂಕಣಗಳುಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

ಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

- Advertisement -
- Advertisement -

ಮಿರ್ಚ್‌ಪುರ, ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಗ್ರಾಮ. ಸಿಂಧೂ ಬಯಲಿನ ನಾಗರಿಕತೆಗೆ ಸಂಬಂಧಿಸಿದ ರಾಖೀಗರಿ ಸ್ಥಳ ಇಲ್ಲಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮದಲ್ಲಿ ಜಾಟ್ ಜನಾಂಗ ಅತ್ಯಧಿಕ ಸಂಖ್ಯೆಯಲ್ಲಿದ್ದರೂ ದಲಿತರು ಸಹ ಶೇ.18ರಷ್ಟಿದ್ದಾರೆ. ದಲಿತರಲ್ಲಿ ವಾಲ್ಮೀಕಿ ಸಮುದಾಯದ (ಕರ್ನಾಟಕದ ವಾಲ್ಮೀಕಿ ಸಮುದಾಯ ಬೇರೆ) ಜನಸಂಖ್ಯೆಯೇ ಹೆಚ್ಚಿದ್ದು ಓಟ್ ಬ್ಯಾಂಕ್ ರಾಜಕಾರಣದಲ್ಲಿ ಗಮನಾರ್ಹವಾದ ಪಾತ್ರವನ್ನೇ ಹೊಂದಿದ್ದರು. ಆದರೆ ಇಂದು ಈ ವಾಲ್ಮೀಕಿ ಸಮುದಾಯದ ಒಂದು ಕುಟುಂಬವೂ ಸಹ ಮಿರ್ಚ್‌ಪುರದಲ್ಲಿ ವಾಸವಾಗಿಲ್ಲ. ಜಾಟರು ನಡೆಸಿದ ಅಮಾನವೀಯ ದೌರ್ಜನ್ಯಕ್ಕೆ ಬೇಸತ್ತು ಭಾರತದಾದ್ಯಂತ ಚದುರಿಹೋಗಿದ್ದಾರೆ. ದಲಿತರು ನೂರಾರು ವರ್ಷಗಳಿಂದ ಬಾಳಿ ಬದುಕಿದ್ದ ಊರು ಬಿಟ್ಟುಹೋಗಲು ಕಾರಣವೇನು? ಮುಂದೆ ಮಿರ್ಚ್‌ಪುರ ಫೈಲ್ ಕತೆಯನ್ನು ನೋಡೋಣ.

ದಲಿತರಾದ ವಾಲ್ಮೀಕಿ ಸಮುದಾಯದ ಜಯಪ್ರಕಾಶ ಕುಟುಂಬ ನಾಯಿಯೊಂದನ್ನು ಸಾಕಿತ್ತು. ಏಪ್ರಿಲ್ 19, 2010ರ ರಾತ್ರಿ ಊರಿಗೆ ಬೈಕಿನಲ್ಲಿ ಮರಳಿದ ಹಿಂದೂ ಮೇಲ್ಜಾತಿ ಜಾಟ್ ಯುವಕರ ಗುಂಪನ್ನು ಕಂಡು ಆ ನಾಯಿ ಬೊಗಳಿತು. ತಮ್ಮನ್ನು ಕಂಡು ಬೊಗಳಿದ ನಾಯಿ ದಲಿತರು ಸಾಕಿರುವುದೆಂದು ತಿಳಿದಿದ್ದ ಜಾಟ್ ಯುವಕರಿಗೆ ಅದನ್ನು ಸಹಿಸಲಾಗಲಿಲ್ಲ. ಹಾಗಾಗಿ ಅ ಯುವಕರಲ್ಲೊಬ್ಬ ಆ ಸಾಕುನಾಯಿಯ ಮೇಲೆ ಇಟ್ಟಿಗೆಯನ್ನು ತೂರಿಯೋಬಿಟ್ಟ. ಇದನ್ನು ಕಂಡ ದಲಿತ ಕುಟುಂಬದ ಯೋಗೇಶ್ ಆ ಯುವಕರಿಗೆ ಬುದ್ಧಿವಾದ ಹೇಳಿದ. ’ನಾಯಿ ಬೊಗಳುವುದು ಸಹಜ; ಅದಕ್ಕೆಲ್ಲ ಇಟ್ಟಿಗೆಯಿಂದ ಹೊಡೆಯುವುದ’ ಎಂದು ಪ್ರಶ್ನಿಸಿದ. ಆಗ ಅಲ್ಲಿ ಎರಡು ಗುಂಪುಗಳ ನಡುವೆ ಸಣ್ಣ ಗಲಾಟೆಯೂ ನಡೆಯಿತು. ಆದರೆ ಊರಿನವರೆಲ್ಲರೂ ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿ ಸಮಾಧಾನ ಪಡಿಸಿದ್ದರು.

ಇದಾದ ಮಾರನೇ ದಿನದಿಂದಲೇ ನಾಯಿ ಸಾಕಿದ್ದ ದಲಿತ ಸಮುದಾಯದವರು ತಮ್ಮ ಕ್ಷಮೆ ಕೇಳಬೇಕೆಂದು ಜಾಟ್ ಸಮುದಾಯದವರು ಒತ್ತಾಯಿಸಿದರು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದೂ ಧಮಕಿ ಹಾಕಿದರು. ಇದಕ್ಕೆ ದಲಿತ ಯುವಕರು ಒಪ್ಪಲಿಲ್ಲವಾದರೂ, ದಲಿತ ಮುಖಂಡರಾದ ವೀರ್ ಭನ್ ಮತ್ತು ಕರಣ್ ಸಿಂಗ್ ಅವರುಗಳು ಕ್ಷಮೆ ಕೇಳಲು ಜಾಟ್ ಕುಟುಂಬದ ಮನೆಗೆ ಹೋಗಿಯೇಬಿಟ್ಟರು. ಜಾಟ್ ಮುಖ್ಯಸ್ಥನ ಮನೆಯ ಮುಂದೆ ನಿಂತು ಕ್ಷಮೆ ಕೇಳಿದ ದಲಿತ ಹಿರೀಕರಿಬ್ಬರಿಗೂ ಜಾಟರು ಅಮಾನವೀಯವಾಗಿ ಥಳಿಸಿದರು. ಅವರಿಬ್ಬರಲ್ಲಿ ಒಬ್ಬರು ತೀವ್ರ ಗಾಯಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೂ ಸೇರಿಸಲಾಯಿತು. ಪೊಲೀಸ್ ಸ್ಟೇಷನ್ನಿನಲ್ಲಿ ದೂರನ್ನು ದಾಖಲಿಸಲಾಯಿತು.

ಇದಾದ ಮಾರನೇ ದಿನ ಅಂದರೆ ಏಪ್ರಿಲ್ 20, 2010ರಂದು ದಾರಿಯಲ್ಲಿ ಹೋಗುತ್ತಿದ್ದ ದಲಿತ ಯುವಕರನ್ನುದ್ದೇಶಿಸಿ ಜಾಟ್ ಯುವಕನೊಬ್ಬ ’ನಿಮ್ಮ ಮನೆಗಳನ್ನ ಸುಟ್ಟುಹಾಕ್ತೀವಿ ನೋಡಿ’ ಎಂದಿದ್ದನು. ಆಗಲೂ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಈ ಜಗಳಕ್ಕೆ ಸಂಬಂಧಿಸಿದಂತೆ ಊರಿನ ಜಾಟ್ ಜನರೆಲ್ಲರೂ ಒಂದೆಡೆ ಸೇರಿದರು. ಅದರಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ಈ ಜಗಳಕ್ಕೆ ಸಂಬಂಧಿಸಿದಂತೆ ’ದಲಿತರು ಜಾಟ್ ಯುವಕನೊಬ್ಬನನ್ನು ಸುಖಾಸುಮ್ಮನೆ ಥಳಿಸಿದ್ದಾರೆ’ ಎಂಬ ಸುಳ್ಳು ಸುದ್ದಿಯನ್ನು ಜಾಟರು ಊರಲ್ಲೆಲ್ಲಾ ಹಬ್ಬಿಸಿದರು.

ಈ ಮೇಲಿನ ಮೂರೂ ಘಟನೆಗಳು ಮಿರ್ಚ್‌ಪುರದಲ್ಲಿ ದಲಿತರ ವಿರುದ್ಧ ಬಹುದೊಡ್ಡ ಸಂಚನ್ನು ರೂಪಿಸಿದವು. ಏಪ್ರಿಲ್ 21ರಂದು ಇದ್ದಕ್ಕಿದ್ದಂತೆ ಸುಮಾರು 100-150 ಜನಸಂಖ್ಯೆಯ ಜಾಟ್ ಯುವಕರ ತಂಡವೊಂದು ಲಾಠಿ, ಕಲ್ಲು, ಪೆಟ್ರೋಲ್ ಹಿಡಿದು ಗುಂಪುಗೂಡಿತು. ಅಲ್ಲೇನಾಗುತ್ತಿದೆ ಎಂಬುದನ್ನು ತಿಳಿಯುವಷ್ಟರಲ್ಲಿ ದಲಿತರ ಮನೆಗಳ ಮೇಲೆ ಕಲ್ಲುಗಳನ್ನು ತೂರಲಾಯಿತು. ಕೆಲವೇ ನಿಮಿಷಗಳಲ್ಲಿ ಜಾಟರ ಮತ್ತೊಂದು ಗುಂಪು ಸಹ ಜೊತೆಗೂಡಿಕೊಂಡಿದ್ದರಿಂದ ಅವರ ಸಂಖ್ಯೆ 400ಕ್ಕೆ ಏರಿತು. ಕೆಲವು ವರದಿಗಳ ಪ್ರಕಾರ ಅದು 1000 ಮುಟ್ಟಿತ್ತು. ಜಾಟರ ಮುಂದೆ ಜನಸಂಖ್ಯೆಯಲ್ಲಿ ಕಡಿಮೆ ಇದ್ದ ದಲಿತರ ಗುಂಪು ಸಹ ಸುಮ್ಮನೆ ಹೆದರಿ ಕುಳಿತುಕೊಳ್ಳದೆ ಅಥವಾ ಓಡಿಹೋಗದೇ ಕೈಗೆ ಸಿಕ್ಕ ಕಲ್ಲು ಮತ್ತು ಇಟ್ಟಿಗೆಗಳನ್ನು ಜಾಟರತ್ತ ತೂರಿ ತಿರುಗೇಟು ನೀಡಿತು. ಪರಿಸ್ಥಿತಿ ತಾರಕಕ್ಕೇರುತ್ತಿರುವುದನ್ನು ಕಂಡ ಹಿರಿಯ ಮುಖಂಡರುಗಳು ಎರಡೂ ಗುಂಪಿನ ಯುವಕರಿಗೆ ಬುದ್ಧಿ ಹೇಳಿ ಈಗಲೇ ಸಭೆ ಸೇರಿ ವಿಷಯ ಬಗೆಹರಿಸಿಕೊಳ್ಳೋಣವೆಂದು ತಿಳಿಸಿದರು. ಈ ರಾಜಿ ಸಂಧಾನ ಸಭೆಯನ್ನು ಪೊಲೀಸ್ ಅಧಿಕಾರಿಯೊಬ್ಬರು ನಡೆಸಿದ್ದರೆಂದೇ ಹೇಳಲಾಗುತ್ತದೆ. ಇದರ ಪರಿಣಾಮವಾಗಿ ದಲಿತ ಮತ್ತು ಜಾಟ್ ಸಮುದಾಯದ ಪುರುಷರು ಪಂಚಾಯ್ತಿ ಸೇರಿದರು. ಹೀಗೆ ಮಾತುಕತೆ ಆರಂಭಿಸುವಷ್ಟರಲ್ಲಿ ದಲಿತ ಕೇರಿಯ ಕಡೆಯಿಂದ ಮಹಿಳೆಯರ ಕೂಗು ಮುಗಿಲುಮುಟ್ಟಿತು. ಕ್ಷಣ ಮಾತ್ರದಲ್ಲಿ ದಲಿತ ಕೇರಿಯನ್ನು ಕಡುಗಪ್ಪಿನ ಹೊಗೆ ಆವರಿಸಿತ್ತು. ದಲಿತರ ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ದಲಿತರು ತಮ್ಮ ಮನೆಗಳತ್ತ ಓಡಿ ವಯಸ್ಸಾದವರನ್ನು, ಮಕ್ಕಳನ್ನು ಹಾಗೂ ಕೈಗೆ ಸಿಕ್ಕಷ್ಟು ಸಾಮಾನುಗಳನ್ನು ರಕ್ಷಿಸಿಕೊಂಡರು. ಆದರೆ 70 ವರ್ಷದ ತಾರಾ ಚಂದ್ ಹಾಗೂ ಆತನ ಪೋಲಿಯೋ ಪೀಡಿತ ಕೊನೆಯ ಮಗಳಿಬ್ಬರೂ ಮನೆಯಿಂದ ಹೊರಬರಲಾರದೇ ಜಾಟರಿತ್ತ ಬೆಂಕಿಗೆ ಗುಡಿಸಲಿನಲ್ಲಿಯೇ ಆಹುತಿಯಾಗಿದ್ದರು. ಈ ಭೀಕರ ಮಾರಣಹೋಮದಲ್ಲಿ 51 ದಲಿತರು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದರು. ಸುಮಾರು 18 ಮನೆಗಳು ಸುಟ್ಟು ಕರಕಲಾಗಿದ್ದವು. ಹಿಂದೂ ಮೇಲ್ಜಾತಿಗಳೊಳಗೆ ತುಂಬಿರುವ ಸನಾತನ ಜಾತಿಪ್ರಜ್ಞೆಯಿಂದ, ಕ್ಷುಲ್ಲಕ ಕಾರಣಕ್ಕೆ ದಲಿತರಿಬ್ಬರನ್ನೂ ಹಾಗೂ ಮಿರ್ಚ್‌ಪುರದ ದಲಿತರು ಕಟ್ಟಿಕೊಂಡಿದ್ದ ಬದುಕನ್ನು ಸುಟ್ಟುಹಾಕಿತ್ತು.

ಈ ಘಟನೆಯಿಂದ ಭಯಭೀತರಾದ ದಲಿತರು ಊರುಬಿಟ್ಟು ವಾಸಕ್ಕಾಗಿ ಅಲೆದಾಡಿದರು. ಸುಮಾರು 150 ವಾಲ್ಮೀಕಿ ದಲಿತರು ಕೊನೆಗೆ ಕನ್ನಾಟ್ ನಗರದ ವಾಲ್ಮೀಕಿ ಮಂದಿರದಲ್ಲಿ ತಿಂಗಳಾನುಗಟ್ಟಲೆ ಕಾಲದೂಡಿ ಉಸಿರಾಡಿದರು. ಜಾಟರಿಂದ ಬೆದರಿಕೆಗಳು ಪದೇಪದೇ ಬರುತ್ತಿದ್ದ ಕಾರಣ 2011ರಷ್ಟೊತ್ತಿಗೆ 12 ಕುಟುಂಬಗಳು ಊರುಬಿಟ್ಟವು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 254 ವಾಲ್ಮೀಕಿ ದಲಿತ ಕುಟುಂಬಗಳು ಊರುಬಿಟ್ಟು ದೇಶದಾದ್ಯಂತ ಚದುರಿಹೋಗಿದ್ದಾರೆ. ನೂರಾರು ವರ್ಷಗಳ ಕಾಲ ಒಂದೆಡೆ ನೆಲೆಸಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದ ಈ ದಲಿತ ಕುಟುಂಬಗಳು ಜಾಟರ ದೌರ್ಜನ್ಯಕ್ಕೆ ಬಲಿಯಾಗಿ ತಮ್ಮ ಜನ್ಮಸ್ಥಾನವನ್ನು ಬಿಟ್ಟು ಊರೂರು ಅಲೆಯುತ್ತಿದ್ದಾರೆ.

ಈ ನರಮೇಧಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು 103 ಜನ ಆರೋಪಿಗಳನ್ನು ಬಂಧಿಸಿದರು. ಅದೂ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಕಾರಣಕ್ಕೆ! ಜನವರಿ 2011ರಷ್ಟೊತ್ತಿಗೆ ಅವರಲ್ಲಿ 98 ಆರೋಪಿಗಳನ್ನು ತಿಹಾರ್ ಜೈಲಿಗೆ ಹಾಕಲಾಯಿತು. ಇದರ ವಿರುದ್ಧ ಜಾಟರು ಬೀದಿಗಿಳಿದು ಹೋರಾಡಿದ್ದರು. ಇದರ ಪರಿಣಾಮವಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸೆಪ್ಟೆಂಬರ್ 24ರಂದು 82 ಜನರನ್ನು ಖುಲಾಸೆಗೊಳಿಸಿದ ಕೋರ್ಟ್ ಕೇವಲ 15 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿತು. ಆದರೆ ಅವರ್‍ಯಾರಿಗೂ ಕೊಲೆ ಮಾಡಿದ್ದಕ್ಕೆ ಶಿಕ್ಷೆ ಆಗಲಿಲ್ಲ. ಆದರೆ ಹೈಕೋರ್ಟ್ ಈ ಮೇಲಿನ ತೀರ್ಪನ್ನು ಅನೂರ್ಜಿತಗೊಳಿಸಿ 12 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

2017ರಲ್ಲಿ ಮತ್ತೆ 40 ವಾಲ್ಮೀಕಿ ಕುಟುಂಬಗಳು ಇದೇ ಮಿರ್ಚ್‌ಪುರವನ್ನು ಬಿಟ್ಟು ಹೊರಹೋದವು. ಇದಕ್ಕೆ ಕಾರಣ ದಲಿತ ಯುವಕ ಸೈಕಲ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಟರು ಏಕಾಏಕಿ ಆತನನ್ನು ಥಳಿಸಿದ್ದಾಗಿತ್ತು. ಇಂದು ಮಿರ್ಚ್‌ಪುರದಲ್ಲಿ ವಾಸಿಸುತ್ತಿರುವ ಬೆರಳೆಣಿಕೆಯಷ್ಟು ದಲಿತ ಕುಟುಂಬಗಳೂ ಸಹ ಊರು ಬಿಡುವ ಸಿದ್ಧತೆಯಲ್ಲಿವೆ. ಕಾಶ್ಮೀರಿ ಪಂಡಿತರು ಕಾಣುವ ಕಣ್ಣುಗಳಿಗೆ ಮಿರ್ಚ್‌ಪುರದ ವಾಲ್ಮೀಕಿಗಳು ಕಾಣುವರೇ?

ಕೊನೆಯದಾಗಿ ಇನ್ನೊಂದು ವಿಚಾರವನ್ನು ನೆನಪಿಸುತ್ತೇನೆ. 2010ರಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. 2017ರಲ್ಲಿ ಬಿಜೆಪಿ ಸರ್ಕಾರವಿತ್ತು.


ಇದನ್ನೂ ಓದಿ: ಮಾತು ಮರೆತ ಭಾರತ; ಭೀಮಾ ಕೊರೆಗಾಂವ್ ಫೈಲ್: ಅಂಬೇಡ್ಕರ್ ಮನೆತನದ ಸದಸ್ಯನನ್ನೇ ಜೈಲಿಗಟ್ಟಿದ ಬಿಜೆಪಿ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...