Homeಅಂಕಣಗಳುಮಾತು ಮರೆತ ಭಾರತ; ಚುಂಡೂರು ಫೈಲ್ಸ್: ಅಟ್ರಾಸಿಟಿ ಕಾಯ್ದೆಯ ಹೊಸ್ತಿಲಲ್ಲಿ ದಲಿತರ ನರಮೇಧ

ಮಾತು ಮರೆತ ಭಾರತ; ಚುಂಡೂರು ಫೈಲ್ಸ್: ಅಟ್ರಾಸಿಟಿ ಕಾಯ್ದೆಯ ಹೊಸ್ತಿಲಲ್ಲಿ ದಲಿತರ ನರಮೇಧ

- Advertisement -
- Advertisement -

ಅದು 1991ನೇ ಇಸವಿಯ ಆಗಸ್ಟ್ ತಿಂಗಳು. ಭಾರತ ದೇಶವು 45ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿತ್ತು. ಸಂಭ್ರಮಾಚರಣೆಗೆ ಇನ್ನೊಂದು ವಾರವಿತ್ತಷ್ಟೆ. ಆ ಆಗಸ್ಟ್ 6ರ ಸಂಜೆ ಆಂಧ್ರಪ್ರದೇಶದ ತೆನಾಲಿ ಬಳಿಯಿರುವ ಚುಂಡೂರು ಗ್ರಾಮದಲ್ಲಿನ ದಲಿತರು ರೌರವ ನರಕ ನೋಡಿದರು. ಈ ದೇಶದಲ್ಲಿ ಇದನ್ನು ಆಶ್ಚರ್ಯವೆನ್ನಬೇಕೋ, ಅಥವಾ ಸಾಮಾನ್ಯ ಸಂಗತಿಯೆನ್ನಬೇಕೋ ಕೊಲೆಗಾರರಿಗೆ ಪೊಲೀಸರು ನೀಡಿದ ಸಹಾಯದಿಂದಲೇ ಈ ಕೊಲೆಗಳು ನಡೆದುಹೋಗಿದ್ದವು.

ಅದು ಚುಂಡೂರು. ಗುಂಟೂರು ಜಿಲ್ಲೆಯ ಗ್ರಾಮಪಂಚಾಯಿತಿ. ವೇಮೂರು ವಿಧಾನಸಭಾ ಕ್ಷೇತ್ರದಲ್ಲಿದೆ. ಈ ಚುಂಡೂರು ಬ್ರಿಟಿಷರ ಕಾಲದಲ್ಲಿ ಹಲವು ಯೋಜನೆಗಳನ್ನು ಕಂಡ ಗ್ರಾಮವಾಗಿತ್ತು. ಮದ್ರಾಸ್-ಕಲಕತ್ತಾ ರೈಲು ಮಾರ್ಗ ಈ ಗ್ರಾಮದ ಪಕ್ಕದಲ್ಲಿಯೇ ಹಾದುಹೋಗುತ್ತಿತ್ತು. ಈ ಕಾರಣವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನೂ ಚುಂಡೂರಿನ ಜನ ಭೇಟಿಯಾಗಿದ್ದರು. ಬ್ರಿಟಿಷರು ಇಲ್ಲೊಂದು ಪೊಲೀಸ್ ಠಾಣೆಯನ್ನೂ ಸಹ ತೆರೆದಿದ್ದರು. ಇಡೀ ಗುಂಟೂರು ಜಿಲ್ಲೆಯ ಭೂಮಿಯೆಲ್ಲಾ ಕೃಷ್ಣಾ ನದಿಯಿಂದ ಹಚ್ಚಹಸಿರಾಗಿತ್ತು. ಈ ಭೂಮಿಯೆಲ್ಲ ರೆಡ್ಡಿಗಳ ಪಾಲಾಗಿತ್ತು. ಹಾಗೆಯೇ ಚುಂಡೂರಿನ ಸುಮಾರು 3000 ಎಕರೆ ಜಮೀನಿನಲ್ಲಿ ಬರೋಬ್ಬರಿ 2500 ಎಕರೆ ಜಮೀನು ರೆಡ್ಡಿ ಭೂಮಾಲೀಕರದ್ದಾಗಿತ್ತು. ಅವರ ಜಮೀನುಗಳಲ್ಲಿನ ದಲಿತರು ಕೂಲಿಗಳಾಗಿ ಕೆಲಸ ನಿರ್ವಹಿಸುತ್ತಿದ್ದರು. ಭೂಮಾಲೀಕತೆಯ ವಿಚಾರದಲ್ಲಿ ಅಲ್ಲಿನ ಪರಿಸ್ಥಿತಿ ಇಂದಿಗೂ ಹಾಗೆಯೇ ಇದೆ. ಆದರೆ ದಲಿತರು ಗ್ರಾಮ ತೊರೆದು ಪಟ್ಟಣ ಸೇರಿಕೊಂಡಿದ್ದಾರೆ.

ಇಂದಿಗೂ ಚುಂಡೂರಿನ ದಲಿತರು ಹಾಗೂ ದಲಿತೇತರ ವಸತಿಗಳು ಪ್ರತ್ಯೇಕವಾಗಿಯೇ ಉಳಿದಿವೆ. ಚುಂಡೂರಿನ ಮಧ್ಯಭಾಗದಲ್ಲಿ ಹಾದುಹೋಗಿರುವ ರಸ್ತೆಯ ಎರಡೂ ಬದಿಗಳಲ್ಲಿ ಈ ಎರಡು ಸಮುದಾಯಗಳು ಪ್ರತ್ಯೇಕವಾಗಿ ಜೀವಿಸುತ್ತಿವೆ.

ಆಗಸ್ಟ್ 6 ರಂದು ಆಗಿದ್ದೇನು?

1991 ಜುಲೈ 7ರಂದು ಚುಂಡೂರಿನ ದಲಿತ ಯುವಕರು ಸಿನೆಮಾ ನೋಡಲು ಥಿಯೇಟರಿಗೆ
ಹೋಗಿರುತ್ತಾರೆ. ಅಂದು ದಲಿತ ಯುವಕ ತನ್ನ ಕಾಲುಗಳನ್ನು ಚಾಚಿಕೊಂಡಾಗ ಅಕಸ್ಮಿಕವಾಗಿ ರೆಡ್ಡಿ ಭೂಮಾಲೀಕನ ಮಗ ಶ್ರೀನಿವಾಸರೆಡ್ಡಿಗೆ ತಗಲುತ್ತದೆ. ಇದೇ ವಿಚಾರಕ್ಕೆ ಆ ಎರಡು ಗುಂಪುಗಳ ನಡುವೆಯೂ ಗಲಾಟೆಗಳಾಗುತ್ತವೆ. ದಲಿತ ಯುವಕರು ರೆಡ್ಡಿ ಯುವತಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡರೆಂಬ ಸುಳ್ಳನ್ನು ಸಹ ಹರಿಯಬಿಡಲಾಗುತ್ತದೆ.

ರೆಡ್ಡಿಗಳು ಈ ರೀತಿಯ ಊಹಾಪೋಹವನ್ನು ಹರಡಿ ದಲಿತರ ಮೇಲೆ ಮುಗಿ ಬೀಳಬೇಕೆಂದುಕೊಂಡದ್ದರ ಹಿಂದೆ ದಲಿತರು ಪಡೆದ ಸಾಮಾಜಿಕ-ಆರ್ಥಿಕ-ಧಾರ್ಮಿಕ ಮೇಲ್ಚನೆಯೇ ಮುಖ್ಯ ಕಾರಣವಾಗಿದೆ. ಸುಮಾರು 500 ಕುಟುಂಬಗಳಿದ್ದ ದಲಿತರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್‌ರವರ ಪ್ರಭಾವ 80ರ ದಶಕದಲ್ಲಿ ಹೆಚ್ಚಾಯಿತು. ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳು ಸ್ವಾಭಿಮಾನ ತುಂಬಿದವು. ಕೇವಲ 10 ವರ್ಷಗಳ ಹಿಂದೆ ರೆಡ್ಡಿ ಭೂಮಾಲೀಕರ ಹೊಲಗಳಲ್ಲಿ ಜೀತಗಾರಿಕೆ ಮಾಡುತ್ತಿದ್ದ ದಲಿತರ ಮಕ್ಕಳು ಅಂದು ವಿದ್ಯಾವಂತರಾಗಿ ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದು ಕಡಿಮೆ ಅಕ್ಷರಸ್ಥರಾಗಿದ್ದ ರೆಡ್ಡಿ ಮತ್ತು ಕಾಪುಗಳಲ್ಲಿ ಅಸೂಯೆ ಮೂಡಿಸಿತು. ದಲಿತರು ಕ್ರೈಸ್ತ ಧರ್ಮ ಸ್ವೀಕರಿಸುತ್ತಿದ್ದದ್ದನ್ನು ಸಹಿಸದಾದರು. ಆ ಕಾಲಕ್ಕೆ ರೈಲ್ವೇ ಇಲಾಖೆಯಲ್ಲಿ ಚುಂಡೂರಿನ 300ಕ್ಕೂ ಹೆಚ್ಚು ಯುವಕರು ಕೆಲಸಕ್ಕೆ ಸೇರಿಕೊಂಡಿದ್ದರು. ಬ್ಯಾಂಕು ಹಾಗೂ ಕಂದಾಯ ಇಲಾಖೆಯಲ್ಲಿಯೂ ಕೆಲಸ ಗಿಟ್ಟಿಸಿಕೊಂಡರು. ಇದರಿಂದಾಗಿ ದಲಿತ ಯುವಕರು ಪಾರಂಪರಿಕ ಚಾಕರಿಗಳನ್ನು ಕೈಬಿಟ್ಟರು. ತಮ್ಮ ತಂದೆತಾಯಂದಿರು ಬಳಲಿದ್ದ ಜೀತಗಾರಿಕೆಯಿಂದ ದೂರವೇ ಉಳಿದರು. ದಲಿತರಲ್ಲಿ ಈ ಸ್ವಾಭಿಮಾನವನ್ನು ಬಗ್ಗುಬಡಿಯಲು ಹಾಗೂ ಬುದ್ಧಿ ಕಲಿಸಲು ಹೊಂಚುಹಾಕುತ್ತಿದ್ದ ಮೇಲ್ಜಾತಿ ಭೂಮಾಲೀಕರಿಗೆ ಸಿನೆಮಾ
ಥಿಯೇಟರಿನ ಪ್ರಸಂಗ ಒಂದು ಕಾರಣವಾಗಿತ್ತು.

ಈ ಘಟನೆಯ ನಂತರ ಪದೇಪದೇ ದಲಿತರ ಮೇಲೆ ಮೇಲ್ಜಾತಿ ರೆಡ್ಡಿ ಭೂಮಾಲೀಕರು ಜಗಳಕ್ಕೆ ಇಳಿದರು. ಇಡೀ ಸಮುದಾಯವನ್ನೇ ಬಹಿಷ್ಕರಿಸಿದರು. ಆದರೆ ಅಷ್ಟಕ್ಕೂ ತಲೆಬಾಗದ ದಲಿತರಿಗೆ ಮೇಲ್ಜಾತಿ ಪರಂಪರೆಯಲ್ಲಿಯೇ ಹಾಸು ಹೊಕ್ಕಾಗಿರುವ ’ಬುದ್ಧಿ ಕಲಿಸೋಣ’ ಎಂಬ ಅಹಂಕಾರ ಬಹಿರಂಗವಾಯಿತು. ಆಗಸ್ಟ್ 6ರಂದು ಸಂಜೆ ದಲಿತರ ಕೇರಿಗೆ ಬಂದ ಪೊಲೀಸರು, ’ರೆಡ್ಡಿ’ ಭೂಮಾಲೀಕರು ’ನಿಮ್ಮ ಮೇಲೆ ಮುಗಿಬೀಳುವವರಿದ್ದಾರೆ, ಕೂಡಲೇ ಊರು ಬಿಟ್ಟು ಹೊರಡಿ’ ಎಂದು ಹೇಳಿದರು. ಆದರೆ ದಲಿತ ಯುವಕರು ಬೆದರಿಕೆಗೆ ಜಗ್ಗಲಿಲ್ಲ. ಪೊಲೀಸರು ಸುಮ್ಮನಿರಲಿಲ್ಲ. ಮನೆಮನೆಗೆ ನುಗ್ಗಿ ದಲಿತರನ್ನು ಲಾಟಿಯಿಂದ ಥಳಿಸುತ್ತಾ ಹೊರ ಓಡಿಸಿದರು. ಇದು ಯಾಕೆ ಹೀಗೆ ಎಂದು ಅರ್ಥವಾಗುವಷ್ಟರಲ್ಲಿ ದಲಿತ ಯುವಕರನ್ನು ರೆಡ್ಡಿ ಭೂಮಾಲೀಕರು ಶಸ್ತ್ರಾಸ್ತ್ರಗಳನ್ನು ಹಿಡಿದು ಸುತ್ತುವರಿದರು. ಸಿಕ್ಕಸಿಕ್ಕ ದಲಿತ ಯುವಕರನ್ನು ಕೊಚ್ಚುತ್ತಾ ಹೋದರು. ಕೆಲವರ ದೇಹವನ್ನು ಅಕ್ಷರಶಃ ಸೀಳಿ ದಿಕ್ಕುದಿಕ್ಕುಗಳಿಗೆ ಎಸೆದರೆಂದು ಕಣ್ಣಾರೆ ಕಂಡ ದಯಾರಿ ಧನರಾಜ್ ಹೇಳುತ್ತಾರೆ. ತನ್ನ ಕುಟುಂಬದ ಮೂವರನ್ನು ಕಳೆದುಕೊಂಡ ಜಲಾಡಿ ಮೋಸಸ್ ಕಣ್ಣೀರಾಕುತ್ತಾರೆ. ಕೃಷ್ಣ ನದಿಯ ಕಾಲುವೆಗಳಲ್ಲಿ ಅಂದು ತುಂಡುತುಂಡಾಗಿ ಎಸೆಯಲ್ಪಟ್ಟಿದ್ದ ದಲಿತ ಯುವಕರ ಹೆಣಗಳು ಮೂರು ದಿನದ ನಂತರ ಗುರುತು ಪತ್ತೆಹಚ್ಚಲಾಗದ ಸ್ಥಿತಿಯಲ್ಲಿ ದೊರಕುತ್ತವೆ. ಈ ನರಮೇಧದ ನಡುವೆ ಕೊಲೆಗಾರರ ಕೈಗೆ ಸಿಕ್ಕಿದರೂ ಸಾವಿನಿಂದ ತಪ್ಪಿಸಿಕೊಂಡ ಧನರಾಜ್ ಕತೆ ಈ ಜಾತಿವ್ಯಾಧಿಗಳ ಮನಸ್ಥಿತಿಯನ್ನು ಹಾಗೂ ಅವರ ಕ್ರೌರ್ಯವನ್ನು ಜಗಜ್ಜಾಹೀರುಗೊಳಿಸುತ್ತದೆ. ಧನರಾಜನನ್ನು ಹಿಡಿದ ರೆಡ್ಡಿಗಳು ಸರಳಿನಿಂದ ಹೊಡೆದು ಗಾಯಗೊಳಿಸುತ್ತಾರೆ. ಆದರೆ ಸಾಯಿಸುವುದಿಲ್ಲ. ಕೇವಲ ಕಾಲು ತಿರುಚಿ ಮುರಿದು ಅವನನ್ನು ಓಡದಂತೆ ಮಾಡುತ್ತಾರೆ. ಇದಕ್ಕೆ ಕಾರಣ ಅದೇ ಊರಿನ ಮಲ್ಲಿಕಾರ್ಜುನ ರೆಡ್ಡಿಗೆ ಒಂದು ಆಸೆ ಇರುತ್ತದೆ. ಅದೇನೆಂದರೆ ಜೀವಮಾನದಲ್ಲಿ ಒಬ್ಬ ದಲಿತನನ್ನಾದರೂ ಕೊಲೆ ಮಾಡಬೇಕೆಂಬುದು. ಆದರೆ ಅವನು ಕಾಲಿಲ್ಲದವನಾಗಿರುತ್ತಾನೆ. ಹಾಗಾಗಿ ಅವನ ಆಸೆ ತೀರಿಸಲು ಧನರಾಜನ ಕಾಲು ಮುರಿದು ಮಲ್ಲಿಕಾರ್ಜುನ ರೆಡ್ಡಿಯನ್ನು ಕರೆದುಕೊಂಡು ಬರಲು ಗುಂಪು ಹೋಗಿರುತ್ತದೆ. ಆದರೆ ಅದೃಷ್ಟವಶಾತ್ ಕೆಲವು ಮಹಿಳೆಯರು ಶ್ರಮವಹಿಸಿ ಧನರಾಜ್‌ನನ್ನು ಉಳಿಸಿಕೊಳ್ಳುತ್ತಾರೆ.

ಹೀಗೆ ಅಂದು ರೆಡ್ಡಿಗಳು ಹಾಗೂ ಕಾಪುಗಳು ನಡೆಸಿದ ದಲಿತರ ನರಮೇಧದಲ್ಲಿ ಎಂಟು ಜನ ದಲಿತರನ್ನು ಕೊಲೆ ಮಾಡಲಾಗುತ್ತದೆ. ಅದೆಷ್ಟು ಕ್ರೂರವಾಗಿ ಕೊಂದಿರುತ್ತಾರೆಂದರೆ ಆ ದೇಹಗಳನ್ನು ಶವಪರೀಕ್ಷೆ ಮಾಡಿದ ವೈದ್ಯ ಮನನೊಂದು ಆತ್ಮಹತ್ಯೆ ಮಾಡಿಕೊಂಡನಂತೆ! ಒಂದು ಶವವೂ ಸಹ ಪೂರ್ಣಪ್ರಮಾಣದಲ್ಲಿ ದೊರೆತಿರಲಿಲ್ಲ!

ಸೆಷನ್ ಕೋರ್ಟ್ 21 ರೆಡ್ಡಿಗಳಿಗೆ ಜೀವಾವಧಿ ಶಿಕ್ಷೆಯನ್ನೂ 35 ಮಂದಿಗೆ ಒಂದು ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಆದರೆ 2014ರಲ್ಲಿ ಆಂಧ್ರಪ್ರದೇಶದ ಹೈಕೋರ್ಟ್ ಈ ಮೇಲಿನ ತೀರ್ಪನ್ನು ಅನೂರ್ಜಿತಗೊಳಿಸಿ ಎಲ್ಲರನ್ನೂ ಬಿಡುಗಡೆಗೊಳಿಸಿತು. ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್‌ಗೆ ತೆರಳಿತಾದರೂ, ಅಲ್ಲಿಯೂ ದಲಿತರಿಗೆ ನ್ಯಾಯ ಸಿಗದೇ ಏದುಸಿರುಬಿಟ್ಟಿತು.


ಇದನ್ನೂ ಓದಿ: ಮಾತು ಮರೆತ ಭಾರತ; ಕಾರಂಚೇಡು ಫೈಲ್ : ದಲಿತರ ಮೇಲೆ ಶೂದ್ರರ ಅಟ್ಟಹಾಸ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...