Homeಅಂಕಣಗಳುಮಾತು ಮರೆತ ಭಾರತ; ಚುಂಡೂರು ಫೈಲ್ಸ್: ಅಟ್ರಾಸಿಟಿ ಕಾಯ್ದೆಯ ಹೊಸ್ತಿಲಲ್ಲಿ ದಲಿತರ ನರಮೇಧ

ಮಾತು ಮರೆತ ಭಾರತ; ಚುಂಡೂರು ಫೈಲ್ಸ್: ಅಟ್ರಾಸಿಟಿ ಕಾಯ್ದೆಯ ಹೊಸ್ತಿಲಲ್ಲಿ ದಲಿತರ ನರಮೇಧ

- Advertisement -
- Advertisement -

ಅದು 1991ನೇ ಇಸವಿಯ ಆಗಸ್ಟ್ ತಿಂಗಳು. ಭಾರತ ದೇಶವು 45ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿತ್ತು. ಸಂಭ್ರಮಾಚರಣೆಗೆ ಇನ್ನೊಂದು ವಾರವಿತ್ತಷ್ಟೆ. ಆ ಆಗಸ್ಟ್ 6ರ ಸಂಜೆ ಆಂಧ್ರಪ್ರದೇಶದ ತೆನಾಲಿ ಬಳಿಯಿರುವ ಚುಂಡೂರು ಗ್ರಾಮದಲ್ಲಿನ ದಲಿತರು ರೌರವ ನರಕ ನೋಡಿದರು. ಈ ದೇಶದಲ್ಲಿ ಇದನ್ನು ಆಶ್ಚರ್ಯವೆನ್ನಬೇಕೋ, ಅಥವಾ ಸಾಮಾನ್ಯ ಸಂಗತಿಯೆನ್ನಬೇಕೋ ಕೊಲೆಗಾರರಿಗೆ ಪೊಲೀಸರು ನೀಡಿದ ಸಹಾಯದಿಂದಲೇ ಈ ಕೊಲೆಗಳು ನಡೆದುಹೋಗಿದ್ದವು.

ಅದು ಚುಂಡೂರು. ಗುಂಟೂರು ಜಿಲ್ಲೆಯ ಗ್ರಾಮಪಂಚಾಯಿತಿ. ವೇಮೂರು ವಿಧಾನಸಭಾ ಕ್ಷೇತ್ರದಲ್ಲಿದೆ. ಈ ಚುಂಡೂರು ಬ್ರಿಟಿಷರ ಕಾಲದಲ್ಲಿ ಹಲವು ಯೋಜನೆಗಳನ್ನು ಕಂಡ ಗ್ರಾಮವಾಗಿತ್ತು. ಮದ್ರಾಸ್-ಕಲಕತ್ತಾ ರೈಲು ಮಾರ್ಗ ಈ ಗ್ರಾಮದ ಪಕ್ಕದಲ್ಲಿಯೇ ಹಾದುಹೋಗುತ್ತಿತ್ತು. ಈ ಕಾರಣವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನೂ ಚುಂಡೂರಿನ ಜನ ಭೇಟಿಯಾಗಿದ್ದರು. ಬ್ರಿಟಿಷರು ಇಲ್ಲೊಂದು ಪೊಲೀಸ್ ಠಾಣೆಯನ್ನೂ ಸಹ ತೆರೆದಿದ್ದರು. ಇಡೀ ಗುಂಟೂರು ಜಿಲ್ಲೆಯ ಭೂಮಿಯೆಲ್ಲಾ ಕೃಷ್ಣಾ ನದಿಯಿಂದ ಹಚ್ಚಹಸಿರಾಗಿತ್ತು. ಈ ಭೂಮಿಯೆಲ್ಲ ರೆಡ್ಡಿಗಳ ಪಾಲಾಗಿತ್ತು. ಹಾಗೆಯೇ ಚುಂಡೂರಿನ ಸುಮಾರು 3000 ಎಕರೆ ಜಮೀನಿನಲ್ಲಿ ಬರೋಬ್ಬರಿ 2500 ಎಕರೆ ಜಮೀನು ರೆಡ್ಡಿ ಭೂಮಾಲೀಕರದ್ದಾಗಿತ್ತು. ಅವರ ಜಮೀನುಗಳಲ್ಲಿನ ದಲಿತರು ಕೂಲಿಗಳಾಗಿ ಕೆಲಸ ನಿರ್ವಹಿಸುತ್ತಿದ್ದರು. ಭೂಮಾಲೀಕತೆಯ ವಿಚಾರದಲ್ಲಿ ಅಲ್ಲಿನ ಪರಿಸ್ಥಿತಿ ಇಂದಿಗೂ ಹಾಗೆಯೇ ಇದೆ. ಆದರೆ ದಲಿತರು ಗ್ರಾಮ ತೊರೆದು ಪಟ್ಟಣ ಸೇರಿಕೊಂಡಿದ್ದಾರೆ.

ಇಂದಿಗೂ ಚುಂಡೂರಿನ ದಲಿತರು ಹಾಗೂ ದಲಿತೇತರ ವಸತಿಗಳು ಪ್ರತ್ಯೇಕವಾಗಿಯೇ ಉಳಿದಿವೆ. ಚುಂಡೂರಿನ ಮಧ್ಯಭಾಗದಲ್ಲಿ ಹಾದುಹೋಗಿರುವ ರಸ್ತೆಯ ಎರಡೂ ಬದಿಗಳಲ್ಲಿ ಈ ಎರಡು ಸಮುದಾಯಗಳು ಪ್ರತ್ಯೇಕವಾಗಿ ಜೀವಿಸುತ್ತಿವೆ.

ಆಗಸ್ಟ್ 6 ರಂದು ಆಗಿದ್ದೇನು?

1991 ಜುಲೈ 7ರಂದು ಚುಂಡೂರಿನ ದಲಿತ ಯುವಕರು ಸಿನೆಮಾ ನೋಡಲು ಥಿಯೇಟರಿಗೆ
ಹೋಗಿರುತ್ತಾರೆ. ಅಂದು ದಲಿತ ಯುವಕ ತನ್ನ ಕಾಲುಗಳನ್ನು ಚಾಚಿಕೊಂಡಾಗ ಅಕಸ್ಮಿಕವಾಗಿ ರೆಡ್ಡಿ ಭೂಮಾಲೀಕನ ಮಗ ಶ್ರೀನಿವಾಸರೆಡ್ಡಿಗೆ ತಗಲುತ್ತದೆ. ಇದೇ ವಿಚಾರಕ್ಕೆ ಆ ಎರಡು ಗುಂಪುಗಳ ನಡುವೆಯೂ ಗಲಾಟೆಗಳಾಗುತ್ತವೆ. ದಲಿತ ಯುವಕರು ರೆಡ್ಡಿ ಯುವತಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡರೆಂಬ ಸುಳ್ಳನ್ನು ಸಹ ಹರಿಯಬಿಡಲಾಗುತ್ತದೆ.

ರೆಡ್ಡಿಗಳು ಈ ರೀತಿಯ ಊಹಾಪೋಹವನ್ನು ಹರಡಿ ದಲಿತರ ಮೇಲೆ ಮುಗಿ ಬೀಳಬೇಕೆಂದುಕೊಂಡದ್ದರ ಹಿಂದೆ ದಲಿತರು ಪಡೆದ ಸಾಮಾಜಿಕ-ಆರ್ಥಿಕ-ಧಾರ್ಮಿಕ ಮೇಲ್ಚನೆಯೇ ಮುಖ್ಯ ಕಾರಣವಾಗಿದೆ. ಸುಮಾರು 500 ಕುಟುಂಬಗಳಿದ್ದ ದಲಿತರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್‌ರವರ ಪ್ರಭಾವ 80ರ ದಶಕದಲ್ಲಿ ಹೆಚ್ಚಾಯಿತು. ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳು ಸ್ವಾಭಿಮಾನ ತುಂಬಿದವು. ಕೇವಲ 10 ವರ್ಷಗಳ ಹಿಂದೆ ರೆಡ್ಡಿ ಭೂಮಾಲೀಕರ ಹೊಲಗಳಲ್ಲಿ ಜೀತಗಾರಿಕೆ ಮಾಡುತ್ತಿದ್ದ ದಲಿತರ ಮಕ್ಕಳು ಅಂದು ವಿದ್ಯಾವಂತರಾಗಿ ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದು ಕಡಿಮೆ ಅಕ್ಷರಸ್ಥರಾಗಿದ್ದ ರೆಡ್ಡಿ ಮತ್ತು ಕಾಪುಗಳಲ್ಲಿ ಅಸೂಯೆ ಮೂಡಿಸಿತು. ದಲಿತರು ಕ್ರೈಸ್ತ ಧರ್ಮ ಸ್ವೀಕರಿಸುತ್ತಿದ್ದದ್ದನ್ನು ಸಹಿಸದಾದರು. ಆ ಕಾಲಕ್ಕೆ ರೈಲ್ವೇ ಇಲಾಖೆಯಲ್ಲಿ ಚುಂಡೂರಿನ 300ಕ್ಕೂ ಹೆಚ್ಚು ಯುವಕರು ಕೆಲಸಕ್ಕೆ ಸೇರಿಕೊಂಡಿದ್ದರು. ಬ್ಯಾಂಕು ಹಾಗೂ ಕಂದಾಯ ಇಲಾಖೆಯಲ್ಲಿಯೂ ಕೆಲಸ ಗಿಟ್ಟಿಸಿಕೊಂಡರು. ಇದರಿಂದಾಗಿ ದಲಿತ ಯುವಕರು ಪಾರಂಪರಿಕ ಚಾಕರಿಗಳನ್ನು ಕೈಬಿಟ್ಟರು. ತಮ್ಮ ತಂದೆತಾಯಂದಿರು ಬಳಲಿದ್ದ ಜೀತಗಾರಿಕೆಯಿಂದ ದೂರವೇ ಉಳಿದರು. ದಲಿತರಲ್ಲಿ ಈ ಸ್ವಾಭಿಮಾನವನ್ನು ಬಗ್ಗುಬಡಿಯಲು ಹಾಗೂ ಬುದ್ಧಿ ಕಲಿಸಲು ಹೊಂಚುಹಾಕುತ್ತಿದ್ದ ಮೇಲ್ಜಾತಿ ಭೂಮಾಲೀಕರಿಗೆ ಸಿನೆಮಾ
ಥಿಯೇಟರಿನ ಪ್ರಸಂಗ ಒಂದು ಕಾರಣವಾಗಿತ್ತು.

ಈ ಘಟನೆಯ ನಂತರ ಪದೇಪದೇ ದಲಿತರ ಮೇಲೆ ಮೇಲ್ಜಾತಿ ರೆಡ್ಡಿ ಭೂಮಾಲೀಕರು ಜಗಳಕ್ಕೆ ಇಳಿದರು. ಇಡೀ ಸಮುದಾಯವನ್ನೇ ಬಹಿಷ್ಕರಿಸಿದರು. ಆದರೆ ಅಷ್ಟಕ್ಕೂ ತಲೆಬಾಗದ ದಲಿತರಿಗೆ ಮೇಲ್ಜಾತಿ ಪರಂಪರೆಯಲ್ಲಿಯೇ ಹಾಸು ಹೊಕ್ಕಾಗಿರುವ ’ಬುದ್ಧಿ ಕಲಿಸೋಣ’ ಎಂಬ ಅಹಂಕಾರ ಬಹಿರಂಗವಾಯಿತು. ಆಗಸ್ಟ್ 6ರಂದು ಸಂಜೆ ದಲಿತರ ಕೇರಿಗೆ ಬಂದ ಪೊಲೀಸರು, ’ರೆಡ್ಡಿ’ ಭೂಮಾಲೀಕರು ’ನಿಮ್ಮ ಮೇಲೆ ಮುಗಿಬೀಳುವವರಿದ್ದಾರೆ, ಕೂಡಲೇ ಊರು ಬಿಟ್ಟು ಹೊರಡಿ’ ಎಂದು ಹೇಳಿದರು. ಆದರೆ ದಲಿತ ಯುವಕರು ಬೆದರಿಕೆಗೆ ಜಗ್ಗಲಿಲ್ಲ. ಪೊಲೀಸರು ಸುಮ್ಮನಿರಲಿಲ್ಲ. ಮನೆಮನೆಗೆ ನುಗ್ಗಿ ದಲಿತರನ್ನು ಲಾಟಿಯಿಂದ ಥಳಿಸುತ್ತಾ ಹೊರ ಓಡಿಸಿದರು. ಇದು ಯಾಕೆ ಹೀಗೆ ಎಂದು ಅರ್ಥವಾಗುವಷ್ಟರಲ್ಲಿ ದಲಿತ ಯುವಕರನ್ನು ರೆಡ್ಡಿ ಭೂಮಾಲೀಕರು ಶಸ್ತ್ರಾಸ್ತ್ರಗಳನ್ನು ಹಿಡಿದು ಸುತ್ತುವರಿದರು. ಸಿಕ್ಕಸಿಕ್ಕ ದಲಿತ ಯುವಕರನ್ನು ಕೊಚ್ಚುತ್ತಾ ಹೋದರು. ಕೆಲವರ ದೇಹವನ್ನು ಅಕ್ಷರಶಃ ಸೀಳಿ ದಿಕ್ಕುದಿಕ್ಕುಗಳಿಗೆ ಎಸೆದರೆಂದು ಕಣ್ಣಾರೆ ಕಂಡ ದಯಾರಿ ಧನರಾಜ್ ಹೇಳುತ್ತಾರೆ. ತನ್ನ ಕುಟುಂಬದ ಮೂವರನ್ನು ಕಳೆದುಕೊಂಡ ಜಲಾಡಿ ಮೋಸಸ್ ಕಣ್ಣೀರಾಕುತ್ತಾರೆ. ಕೃಷ್ಣ ನದಿಯ ಕಾಲುವೆಗಳಲ್ಲಿ ಅಂದು ತುಂಡುತುಂಡಾಗಿ ಎಸೆಯಲ್ಪಟ್ಟಿದ್ದ ದಲಿತ ಯುವಕರ ಹೆಣಗಳು ಮೂರು ದಿನದ ನಂತರ ಗುರುತು ಪತ್ತೆಹಚ್ಚಲಾಗದ ಸ್ಥಿತಿಯಲ್ಲಿ ದೊರಕುತ್ತವೆ. ಈ ನರಮೇಧದ ನಡುವೆ ಕೊಲೆಗಾರರ ಕೈಗೆ ಸಿಕ್ಕಿದರೂ ಸಾವಿನಿಂದ ತಪ್ಪಿಸಿಕೊಂಡ ಧನರಾಜ್ ಕತೆ ಈ ಜಾತಿವ್ಯಾಧಿಗಳ ಮನಸ್ಥಿತಿಯನ್ನು ಹಾಗೂ ಅವರ ಕ್ರೌರ್ಯವನ್ನು ಜಗಜ್ಜಾಹೀರುಗೊಳಿಸುತ್ತದೆ. ಧನರಾಜನನ್ನು ಹಿಡಿದ ರೆಡ್ಡಿಗಳು ಸರಳಿನಿಂದ ಹೊಡೆದು ಗಾಯಗೊಳಿಸುತ್ತಾರೆ. ಆದರೆ ಸಾಯಿಸುವುದಿಲ್ಲ. ಕೇವಲ ಕಾಲು ತಿರುಚಿ ಮುರಿದು ಅವನನ್ನು ಓಡದಂತೆ ಮಾಡುತ್ತಾರೆ. ಇದಕ್ಕೆ ಕಾರಣ ಅದೇ ಊರಿನ ಮಲ್ಲಿಕಾರ್ಜುನ ರೆಡ್ಡಿಗೆ ಒಂದು ಆಸೆ ಇರುತ್ತದೆ. ಅದೇನೆಂದರೆ ಜೀವಮಾನದಲ್ಲಿ ಒಬ್ಬ ದಲಿತನನ್ನಾದರೂ ಕೊಲೆ ಮಾಡಬೇಕೆಂಬುದು. ಆದರೆ ಅವನು ಕಾಲಿಲ್ಲದವನಾಗಿರುತ್ತಾನೆ. ಹಾಗಾಗಿ ಅವನ ಆಸೆ ತೀರಿಸಲು ಧನರಾಜನ ಕಾಲು ಮುರಿದು ಮಲ್ಲಿಕಾರ್ಜುನ ರೆಡ್ಡಿಯನ್ನು ಕರೆದುಕೊಂಡು ಬರಲು ಗುಂಪು ಹೋಗಿರುತ್ತದೆ. ಆದರೆ ಅದೃಷ್ಟವಶಾತ್ ಕೆಲವು ಮಹಿಳೆಯರು ಶ್ರಮವಹಿಸಿ ಧನರಾಜ್‌ನನ್ನು ಉಳಿಸಿಕೊಳ್ಳುತ್ತಾರೆ.

ಹೀಗೆ ಅಂದು ರೆಡ್ಡಿಗಳು ಹಾಗೂ ಕಾಪುಗಳು ನಡೆಸಿದ ದಲಿತರ ನರಮೇಧದಲ್ಲಿ ಎಂಟು ಜನ ದಲಿತರನ್ನು ಕೊಲೆ ಮಾಡಲಾಗುತ್ತದೆ. ಅದೆಷ್ಟು ಕ್ರೂರವಾಗಿ ಕೊಂದಿರುತ್ತಾರೆಂದರೆ ಆ ದೇಹಗಳನ್ನು ಶವಪರೀಕ್ಷೆ ಮಾಡಿದ ವೈದ್ಯ ಮನನೊಂದು ಆತ್ಮಹತ್ಯೆ ಮಾಡಿಕೊಂಡನಂತೆ! ಒಂದು ಶವವೂ ಸಹ ಪೂರ್ಣಪ್ರಮಾಣದಲ್ಲಿ ದೊರೆತಿರಲಿಲ್ಲ!

ಸೆಷನ್ ಕೋರ್ಟ್ 21 ರೆಡ್ಡಿಗಳಿಗೆ ಜೀವಾವಧಿ ಶಿಕ್ಷೆಯನ್ನೂ 35 ಮಂದಿಗೆ ಒಂದು ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಆದರೆ 2014ರಲ್ಲಿ ಆಂಧ್ರಪ್ರದೇಶದ ಹೈಕೋರ್ಟ್ ಈ ಮೇಲಿನ ತೀರ್ಪನ್ನು ಅನೂರ್ಜಿತಗೊಳಿಸಿ ಎಲ್ಲರನ್ನೂ ಬಿಡುಗಡೆಗೊಳಿಸಿತು. ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್‌ಗೆ ತೆರಳಿತಾದರೂ, ಅಲ್ಲಿಯೂ ದಲಿತರಿಗೆ ನ್ಯಾಯ ಸಿಗದೇ ಏದುಸಿರುಬಿಟ್ಟಿತು.


ಇದನ್ನೂ ಓದಿ: ಮಾತು ಮರೆತ ಭಾರತ; ಕಾರಂಚೇಡು ಫೈಲ್ : ದಲಿತರ ಮೇಲೆ ಶೂದ್ರರ ಅಟ್ಟಹಾಸ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...