Homeಮುಖಪುಟಸುದ್ದಿಮನೆಯ ಗೆದ್ದಲುಗಳೇ #ಡಿಯರ್_ಮೀಡಿಯಾ

ಸುದ್ದಿಮನೆಯ ಗೆದ್ದಲುಗಳೇ #ಡಿಯರ್_ಮೀಡಿಯಾ

ಅವರ ಜನದ್ರೋಹಗಳನ್ನು ಎತ್ತಿ ತೋರಿಸಹೊರಟರೆ ನೀವೇ ಇನ್ನೊಂದು ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತರೇನೋ ಎಂದು ಸಂಶಯ ಬರುವ ಸ್ಥಿತಿ ಇದೆ! ಆ ಪ್ರಮಾಣದಲ್ಲಿ ರಾಜಕೀಯ ಪ್ರೇರಿತ ಸುದ್ದಿಗಾರಿಕೆ ಇಂದು ಓದುಗರಿಗೆ ದ್ರೋಹ ಮಾಡುತ್ತಿದೆ.

- Advertisement -
- Advertisement -

ಅಕ್ಷರದಲ್ಲಿ ಮುದ್ರಿತವಾದದ್ದು “ಅಂತಿಮ ಸತ್ಯ” ಎಂಬುದನ್ನೇ ಹಾಸಿ, ಹೊದ್ದು ನಂಬಿದ್ದವರಿದ್ದರು. ನಿರ್ಣಾಯಕ ಸಂದರ್ಭ ಎದುರಾದಾಗ “ನೋಡಿ ಬೇಕಿದ್ರೆ… ಹಾಗಂತ ನಾನು ಬರೆದು ಕೊಡ್ತೇನೆ!” ಎಂದು ಹೇಳುವುದು ಸುಮ್ಮನೇ ಅಲ್ಲ. “ಬರೆದು ಕೊಡುವುದು ಅಂತಿಮ ಸತ್ಯ” ಎಂಬ ನಂಬಿಕೆಯ ಫಲ ಅದು.

ಯಾವುದೇ ಸುದ್ದಿ ಖಚಿತವಾಗಬೇಕಿದ್ದರೆ ಪೇಪರಲ್ಲಿ ಬಂದಿದೆಯಾ? ಎಂದು ನೋಡುವ ಕಾಲ ಇತ್ತು. ಏನೇ ಸಮಾಜವಿರೋಧಿ ಕೆಲಸ ಮಾಡಿದರೂ ಪೇಪರಲ್ಲಿ ಬರ್ತದೆ ಎಂಬ ಅಂಜಿಕೆ ಇತ್ತು. ಅದು ಕ್ರಮೇಣ ಮಸುಕಾಗುತ್ತಾ ಬಂದಿದೆ. ಮಾಧ್ಯಮಗಳಿಗೊಂದು ಸಾಮಾಜಿಕ ಗೌರವ ತಕ್ಕಮಟ್ಟಿಗೆ ಇತ್ತು. ಹಾಗೆಂದಾಕ್ಷಣ ಎಲ್ಲವೂ ಸುಸೂತ್ರವಾಗಿತ್ತೆಂದಲ್ಲ. ಬರಹಗಳ ಮೇಲಿನ ಓದುಗರ ನಂಬಿಕೆಗೆ ದ್ರೋಹ ಬಗೆಯುವ ಕೆಲಸ ಎಲ್ಲೋ ಅಲ್ಲೊಂದು-ಇಲ್ಲೊಂದು ಅಪರೂಪಕ್ಕೆ ನಡೆಯುತ್ತಿತ್ತು. ಅದನ್ನು “ಹಳದಿ ಪತ್ರಿಕೋದ್ಯಮ” ಎಂದು ಗುರುತಿಸಲಾಗುತ್ತಿತ್ತು.

ಆದರೆ ಬರಬರುತ್ತಾ ಇಡಿಯ ಪತ್ರಿಕೋದ್ಯಮವೇ ಮಲ್ಟಿಕಲರ್ ಆಗತೊಡಗಿತು. ಅಕ್ಷರಗಳಿಂದಲೇ ದುಡಿದು ತಿನ್ನುವ ಸುದ್ದಿಮನೆಗಳಲ್ಲಿ ತಮ್ಮ ಅನ್ನದಾತರಾದ ಓದುಗರು ತಮ್ಮ ಮೇಲಿರಿಸಿರುವ ನಂಬಿಕೆಗೇ ದ್ರೋಹ ಮಾಡುವ ಕೆಲಸ ಸಾತತ್ಯದೊಂದಿಗೆ ಆರಂಭ ಆದದ್ದು 2010ರ ಸುಮಾರಿಗೆ. ಇದನ್ನು ಓದುಗರು “ಪತ್ರಿಕೆಗಳ ಬೆಲೆ ಸಮರ” ಎಂದೇ ಗುರುತಿಸಿದರೇ ಹೊರತು ಅಲ್ಲಿಂದ ಆಳಕ್ಕೆ ಇಳಿದು ನೋಡಲಿಲ್ಲ. ಸುದ್ದಿ ಚೀಪ್ ಆಯಿತು!

ದೇಶದಾದ್ಯಂತ ಸುದ್ದಿಮನೆಗಳಿಗೆ ಹೀಗೆ ಗೆದ್ದಲು ಹತ್ತಿದ್ದನ್ನು ನಾವು “ಇದು ಮಾಧ್ಯಮವು ಉದ್ಯಮ ಆದದ್ದರ ಫಲ” ಎಂದೇ ವಿಶ್ಲೇಷಿಸುತ್ತಾ ಬಂದೆವು. ಆದರೆ ಗೆದ್ದಲನ್ನು ಗುರುತಿಸಲಿಲ್ಲ. ಅದು ಇಂಚಿಂಚಾಗಿ ಇಡಿಯ ಮಾಧ್ಯಮ ವ್ಯವಸ್ಥೆಯನ್ನು ತಿನ್ನುತ್ತಾ ಬಂದು, 2014 ರ ಲೋಕಸಭಾ ಚುನಾವಣೆಗಳ ರನಪ್ ಹೊತ್ತಿಗೆ ತನ್ನ ಇರುವಿಕೆಯನ್ನು ಪೂರ್ಣಪ್ರಮಾಣದಲ್ಲಿ ತೋರಿಸಿಕೊಂಡಿತು. ಸರಿಯಾಗಿ ಗಮನಿಸಿದರೆ, ಸುದ್ದಿಮನೆಯಲ್ಲಿ ಆಗಿರುವ ಬದಲಾವಣೆಗಳಿಗೆ ಮಾಲಕತ್ವ ಮಾತ್ರ ಕಾರಣ ಅಲ್ಲ; ಬದಲಾಗಿ ಅಲ್ಲಿ ಜಾತಿ, ಗುಂಪು, ಸಿದ್ಧಾಂತ ಮತ್ತಿತರ ಆಯಕಟ್ಟಿನ ಜಾರೆಣ್ಣೆ ಬಳಸಿಕೊಂಡು ನುಸುಳಿ ಕುಳಿತಿರುವ ರಾಜಕೀಯ ದಲ್ಲಾಳಿಗಳು ಕಾರಣ ಎಂಬುದು ಈಗ ಬಯಲಾಗತೊಡಗಿದೆ.

ಸುದ್ದಿಗಳನ್ನು ತಮ್ಮ ಮೂಗಿನ ನೇರಕ್ಕೆ ಬಗ್ಗಿಸಿ ಪ್ರೆಸೆಂಟ್ ಮಾಡುವ ಚಾಳಿ ಸ್ವಲ್ಪ ಕದ್ದುಮುಚ್ಚಿ, ಮುಜುಗರದೊಂದಿಗೆ ಆರಂಭಗೊಂಡದ್ದು, ಈಗ ಪೂರ್ಣಪ್ರಮಾಣದಲ್ಲಿ ವ್ಯವಸ್ಥೆಯ ಭಾಗವಾಗಿಯೇ ನಡೆಯುತ್ತಿದೆ. ಅದು ಬಲುದೊಡ್ಡ ಕಥೆ. ಇಂತಹ ಸನ್ನಿವೇಶದಲ್ಲಿ, ಪ್ರತಿನಿತ್ಯ ಬಹುತೇಕ ಸುದ್ದಿಪುಟಗಳನ್ನು ಕಳ್ಳಸುದ್ದಿ, ಸುಳ್ಳುಸುದ್ದಿ, ನೆಟ್ಟಸುದ್ದಿ, ಕೆಟ್ಟಸುದ್ದಿಗಳು ಆವರಿಸತೊಡಗಿದಾಗ, ಓದುಗರಲ್ಲಿ ಪತ್ರಿಕೆಗಳ ಬಗ್ಗೆ ಅಸಹನೆ ಸ್ಪಷ್ಟವಾಗಿ ತೋರುವಷ್ಟಿತ್ತು. ಆದರೆ, ನಂಬಿಕೆ – ವಾಸ್ತವಗಳ ತೊಳಲಾಟದ ರಭಸದಲ್ಲಿ ಓದುಗ ಕೊಚ್ಚಿಹೋದದ್ದೇ ಜಾಸ್ತಿ. ಅದರ ಫಲವಾಗಿ ಇಂದು ಮಾಧ್ಯಮ ಎಂದರೆ ಛೀ.. ಥೂ.. ಎನ್ನುವುದು ಢಾಳಾಗಿ ಕಾಣಿಸತೊಡಗಿದೆ. ಹಳೆಯ ನಂಬಿಕೆ ಕಳೆದುಹೋಗಿದೆ.

ಒಬ್ಬ ಓದುಗನಾಗಿ ಮತ್ತು ಒಂದೆರಡು ದಶಕ ಸುದ್ದಿಮನೆಗೆ ಮಣ್ಣುಹೊತ್ತವನಾಗಿ, ಕನಿಷ್ಠ ನನ್ನ ಸಂಪರ್ಕದಲ್ಲಿರುವ ಒಂದಿಷ್ಟು ಜನರಿಗಾದರೂ “ಸುದ್ದಿ ಏಕೆ ಹೀಗೆ?” ಎಂಬುದನ್ನು ತಲುಪಿಸಲು ಸೋಷಿಯಲ್ ಮೀಡಿಯಾವನ್ನು ಬಳಸಬಹುದು ಅನ್ನಿಸಿತು. ಅದರ ಫಲವೇ ನನ್ನ ಮಾಧ್ಯಮ ವಿಶ್ಲೇಷಣೆಯ ಮೈಕ್ರೊಬ್ಲಾಗಿಂಗ್ ಪ್ರಯತ್ನ. ಈ ರೀತಿಯ ಮೈಕ್ರೊ ಬ್ಲಾಗಿಂಗ್ ಗೆ ಮೂಲ ಪ್ರೇರಣೆ ನಾನು ಈ ಹಿಂದೆ ಒಂದು ದಿನಪತ್ರಿಕೆಗೆ ಸಣ್ಣ ಅವಧಿಗೆ “ಆಂಬುಡ್ಸ್ ಮನ್” ಆಗಿ ಕೆಲಸ ಮಾಡಿದ್ದು.

2019 ಚುನಾವಣೆಗೆ ರನಪ್ ಆರಂಭಗೊಳ್ಳುವ ಹೊತ್ತಿಗೆ, ಮಾಧ್ಯಮಗಳಿಗೆ ಅಡರಿದ ಈ ರೋಗ ಪೂರ್ಣಪ್ರಮಾಣದ, ವಾಸಿಯಾಗದ ಮಹಾವ್ಯಾಧಿ ಎಂಬುದು ಖಚಿತವಾಗತೊಡಗಿತ್ತು. ಹಾಗಾಗಿ ನನ್ನ ಸುದ್ದಿ ವಿಶ್ಲೇಷಣೆಯ ಕೆಲಸಕ್ಕೆ ಒಂದು ಟ್ರ್ಯಾಕಿಂಗ್ ವ್ಯವಸ್ಥೆ ಮಾಡಿಕೊಳ್ಳುವ ನಿಟ್ಟಿನಲ್ಲಿ #ಡಿಯರ್_ಮೀಡಿಯಾ ಹ್ಯಾಷ್ ಟ್ಯಾಗ್ ನ್ನು ಬಳಸತೊಡಗಿದೆ. ಇದು ಮೊದಲು ಬಳಕೆ ಆದದ್ದು 2018 ಅಕ್ಟೋಬರ್ ತಿಂಗಳಿನಲ್ಲಿ. ಈ ಹ್ಯಾಷ್ ಟ್ಯಾಗ್ ನನ್ನ ಟ್ರ್ಯಾಕಿಂಗ್ ದಾಖಲೆ ಆಗಿ ಬಳಕೆ ಆಗುತ್ತಿದ್ದದ್ದು, ಕ್ರಮೇಣ ಒಂದು ಬ್ರ್ಯಾಂಡ್ ಆಗಿ ಕೂಡ ಕಾಣಿಸತೊಡಗಿದ್ದರ ಸಂಪೂರ್ಣ ಶ್ರೇಯಸ್ಸು, ಮಾಧ್ಯಮಗಳಿಗೆ ಮತ್ತು ಅವು ಮಾಡತೊಡಗಿದ ಎದ್ದುಕಾಣುವ “ಹಲ್ಕಾ” ಕೆಲಸಗಳಿಗೆ ಸೇರಬೇಕು!

ಈ ಮಹಾವ್ಯಾಧಿ ಇಂದು ಎಷ್ಟು ತೀವ್ರವಾಗಿದೆ ಎಂದರೆ, ನೀವು ದಿನನಿತ್ಯ ಅವರ ಜನದ್ರೋಹಗಳನ್ನು ಎತ್ತಿ ತೋರಿಸಹೊರಟರೆ ನೀವೇ ಇನ್ನೊಂದು ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತರೇನೋ ಎಂದು ಸಂಶಯ ಬರುವ ಸ್ಥಿತಿ ಇದೆ! ಆ ಪ್ರಮಾಣದಲ್ಲಿ ರಾಜಕೀಯ ಪ್ರೇರಿತ ಸುದ್ದಿಗಾರಿಕೆ ಇಂದು ಓದುಗರಿಗೆ ದ್ರೋಹ ಮಾಡುತ್ತಿದೆ.

ಇಂಗ್ಲೀಷಿನ ಲ್ಯಾಪ್ ಡಾಗ್ ಮೀಡಿಯಾ, ಹಿಂದಿಯ ಗೋದಿ ಮೀಡಿಯಾ ಕನ್ನಡದಲ್ಲಿ #ಡಿಯರ್_ಮೀಡಿಯಾ ಆಗತೊಡಗಿದೆ. ಮುಂದೊಂದು ದಿನ ಈ ಕ್ರಾನಿಕಲ್ ಕನ್ನಡದ ಮಾಧ್ಯಮಗಳ ಸ್ಥಿತಿಗೆ ಹಿಡಿದ ಕನ್ನಡಿ ಆದರೂ ಆಗಬಹುದೆಂದು ಈಗೀಗ ಅನ್ನಿಸತೊಡಗಿದೆ…!!


ಓದಿ: ’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹ


ವೀಡಿಯೋ ನೋಡಿ: ಪರಮಾತ್ಮ ಪೊಲಿಟಿಕಲ್ ಮ್ಯಾಜಿಕ್ ಶೋ; ಚಿಲ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...