Homeಮುಖಪುಟಸುದ್ದಿಮನೆಯ ಗೆದ್ದಲುಗಳೇ #ಡಿಯರ್_ಮೀಡಿಯಾ

ಸುದ್ದಿಮನೆಯ ಗೆದ್ದಲುಗಳೇ #ಡಿಯರ್_ಮೀಡಿಯಾ

ಅವರ ಜನದ್ರೋಹಗಳನ್ನು ಎತ್ತಿ ತೋರಿಸಹೊರಟರೆ ನೀವೇ ಇನ್ನೊಂದು ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತರೇನೋ ಎಂದು ಸಂಶಯ ಬರುವ ಸ್ಥಿತಿ ಇದೆ! ಆ ಪ್ರಮಾಣದಲ್ಲಿ ರಾಜಕೀಯ ಪ್ರೇರಿತ ಸುದ್ದಿಗಾರಿಕೆ ಇಂದು ಓದುಗರಿಗೆ ದ್ರೋಹ ಮಾಡುತ್ತಿದೆ.

- Advertisement -
- Advertisement -

ಅಕ್ಷರದಲ್ಲಿ ಮುದ್ರಿತವಾದದ್ದು “ಅಂತಿಮ ಸತ್ಯ” ಎಂಬುದನ್ನೇ ಹಾಸಿ, ಹೊದ್ದು ನಂಬಿದ್ದವರಿದ್ದರು. ನಿರ್ಣಾಯಕ ಸಂದರ್ಭ ಎದುರಾದಾಗ “ನೋಡಿ ಬೇಕಿದ್ರೆ… ಹಾಗಂತ ನಾನು ಬರೆದು ಕೊಡ್ತೇನೆ!” ಎಂದು ಹೇಳುವುದು ಸುಮ್ಮನೇ ಅಲ್ಲ. “ಬರೆದು ಕೊಡುವುದು ಅಂತಿಮ ಸತ್ಯ” ಎಂಬ ನಂಬಿಕೆಯ ಫಲ ಅದು.

ಯಾವುದೇ ಸುದ್ದಿ ಖಚಿತವಾಗಬೇಕಿದ್ದರೆ ಪೇಪರಲ್ಲಿ ಬಂದಿದೆಯಾ? ಎಂದು ನೋಡುವ ಕಾಲ ಇತ್ತು. ಏನೇ ಸಮಾಜವಿರೋಧಿ ಕೆಲಸ ಮಾಡಿದರೂ ಪೇಪರಲ್ಲಿ ಬರ್ತದೆ ಎಂಬ ಅಂಜಿಕೆ ಇತ್ತು. ಅದು ಕ್ರಮೇಣ ಮಸುಕಾಗುತ್ತಾ ಬಂದಿದೆ. ಮಾಧ್ಯಮಗಳಿಗೊಂದು ಸಾಮಾಜಿಕ ಗೌರವ ತಕ್ಕಮಟ್ಟಿಗೆ ಇತ್ತು. ಹಾಗೆಂದಾಕ್ಷಣ ಎಲ್ಲವೂ ಸುಸೂತ್ರವಾಗಿತ್ತೆಂದಲ್ಲ. ಬರಹಗಳ ಮೇಲಿನ ಓದುಗರ ನಂಬಿಕೆಗೆ ದ್ರೋಹ ಬಗೆಯುವ ಕೆಲಸ ಎಲ್ಲೋ ಅಲ್ಲೊಂದು-ಇಲ್ಲೊಂದು ಅಪರೂಪಕ್ಕೆ ನಡೆಯುತ್ತಿತ್ತು. ಅದನ್ನು “ಹಳದಿ ಪತ್ರಿಕೋದ್ಯಮ” ಎಂದು ಗುರುತಿಸಲಾಗುತ್ತಿತ್ತು.

ಆದರೆ ಬರಬರುತ್ತಾ ಇಡಿಯ ಪತ್ರಿಕೋದ್ಯಮವೇ ಮಲ್ಟಿಕಲರ್ ಆಗತೊಡಗಿತು. ಅಕ್ಷರಗಳಿಂದಲೇ ದುಡಿದು ತಿನ್ನುವ ಸುದ್ದಿಮನೆಗಳಲ್ಲಿ ತಮ್ಮ ಅನ್ನದಾತರಾದ ಓದುಗರು ತಮ್ಮ ಮೇಲಿರಿಸಿರುವ ನಂಬಿಕೆಗೇ ದ್ರೋಹ ಮಾಡುವ ಕೆಲಸ ಸಾತತ್ಯದೊಂದಿಗೆ ಆರಂಭ ಆದದ್ದು 2010ರ ಸುಮಾರಿಗೆ. ಇದನ್ನು ಓದುಗರು “ಪತ್ರಿಕೆಗಳ ಬೆಲೆ ಸಮರ” ಎಂದೇ ಗುರುತಿಸಿದರೇ ಹೊರತು ಅಲ್ಲಿಂದ ಆಳಕ್ಕೆ ಇಳಿದು ನೋಡಲಿಲ್ಲ. ಸುದ್ದಿ ಚೀಪ್ ಆಯಿತು!

ದೇಶದಾದ್ಯಂತ ಸುದ್ದಿಮನೆಗಳಿಗೆ ಹೀಗೆ ಗೆದ್ದಲು ಹತ್ತಿದ್ದನ್ನು ನಾವು “ಇದು ಮಾಧ್ಯಮವು ಉದ್ಯಮ ಆದದ್ದರ ಫಲ” ಎಂದೇ ವಿಶ್ಲೇಷಿಸುತ್ತಾ ಬಂದೆವು. ಆದರೆ ಗೆದ್ದಲನ್ನು ಗುರುತಿಸಲಿಲ್ಲ. ಅದು ಇಂಚಿಂಚಾಗಿ ಇಡಿಯ ಮಾಧ್ಯಮ ವ್ಯವಸ್ಥೆಯನ್ನು ತಿನ್ನುತ್ತಾ ಬಂದು, 2014 ರ ಲೋಕಸಭಾ ಚುನಾವಣೆಗಳ ರನಪ್ ಹೊತ್ತಿಗೆ ತನ್ನ ಇರುವಿಕೆಯನ್ನು ಪೂರ್ಣಪ್ರಮಾಣದಲ್ಲಿ ತೋರಿಸಿಕೊಂಡಿತು. ಸರಿಯಾಗಿ ಗಮನಿಸಿದರೆ, ಸುದ್ದಿಮನೆಯಲ್ಲಿ ಆಗಿರುವ ಬದಲಾವಣೆಗಳಿಗೆ ಮಾಲಕತ್ವ ಮಾತ್ರ ಕಾರಣ ಅಲ್ಲ; ಬದಲಾಗಿ ಅಲ್ಲಿ ಜಾತಿ, ಗುಂಪು, ಸಿದ್ಧಾಂತ ಮತ್ತಿತರ ಆಯಕಟ್ಟಿನ ಜಾರೆಣ್ಣೆ ಬಳಸಿಕೊಂಡು ನುಸುಳಿ ಕುಳಿತಿರುವ ರಾಜಕೀಯ ದಲ್ಲಾಳಿಗಳು ಕಾರಣ ಎಂಬುದು ಈಗ ಬಯಲಾಗತೊಡಗಿದೆ.

ಸುದ್ದಿಗಳನ್ನು ತಮ್ಮ ಮೂಗಿನ ನೇರಕ್ಕೆ ಬಗ್ಗಿಸಿ ಪ್ರೆಸೆಂಟ್ ಮಾಡುವ ಚಾಳಿ ಸ್ವಲ್ಪ ಕದ್ದುಮುಚ್ಚಿ, ಮುಜುಗರದೊಂದಿಗೆ ಆರಂಭಗೊಂಡದ್ದು, ಈಗ ಪೂರ್ಣಪ್ರಮಾಣದಲ್ಲಿ ವ್ಯವಸ್ಥೆಯ ಭಾಗವಾಗಿಯೇ ನಡೆಯುತ್ತಿದೆ. ಅದು ಬಲುದೊಡ್ಡ ಕಥೆ. ಇಂತಹ ಸನ್ನಿವೇಶದಲ್ಲಿ, ಪ್ರತಿನಿತ್ಯ ಬಹುತೇಕ ಸುದ್ದಿಪುಟಗಳನ್ನು ಕಳ್ಳಸುದ್ದಿ, ಸುಳ್ಳುಸುದ್ದಿ, ನೆಟ್ಟಸುದ್ದಿ, ಕೆಟ್ಟಸುದ್ದಿಗಳು ಆವರಿಸತೊಡಗಿದಾಗ, ಓದುಗರಲ್ಲಿ ಪತ್ರಿಕೆಗಳ ಬಗ್ಗೆ ಅಸಹನೆ ಸ್ಪಷ್ಟವಾಗಿ ತೋರುವಷ್ಟಿತ್ತು. ಆದರೆ, ನಂಬಿಕೆ – ವಾಸ್ತವಗಳ ತೊಳಲಾಟದ ರಭಸದಲ್ಲಿ ಓದುಗ ಕೊಚ್ಚಿಹೋದದ್ದೇ ಜಾಸ್ತಿ. ಅದರ ಫಲವಾಗಿ ಇಂದು ಮಾಧ್ಯಮ ಎಂದರೆ ಛೀ.. ಥೂ.. ಎನ್ನುವುದು ಢಾಳಾಗಿ ಕಾಣಿಸತೊಡಗಿದೆ. ಹಳೆಯ ನಂಬಿಕೆ ಕಳೆದುಹೋಗಿದೆ.

ಒಬ್ಬ ಓದುಗನಾಗಿ ಮತ್ತು ಒಂದೆರಡು ದಶಕ ಸುದ್ದಿಮನೆಗೆ ಮಣ್ಣುಹೊತ್ತವನಾಗಿ, ಕನಿಷ್ಠ ನನ್ನ ಸಂಪರ್ಕದಲ್ಲಿರುವ ಒಂದಿಷ್ಟು ಜನರಿಗಾದರೂ “ಸುದ್ದಿ ಏಕೆ ಹೀಗೆ?” ಎಂಬುದನ್ನು ತಲುಪಿಸಲು ಸೋಷಿಯಲ್ ಮೀಡಿಯಾವನ್ನು ಬಳಸಬಹುದು ಅನ್ನಿಸಿತು. ಅದರ ಫಲವೇ ನನ್ನ ಮಾಧ್ಯಮ ವಿಶ್ಲೇಷಣೆಯ ಮೈಕ್ರೊಬ್ಲಾಗಿಂಗ್ ಪ್ರಯತ್ನ. ಈ ರೀತಿಯ ಮೈಕ್ರೊ ಬ್ಲಾಗಿಂಗ್ ಗೆ ಮೂಲ ಪ್ರೇರಣೆ ನಾನು ಈ ಹಿಂದೆ ಒಂದು ದಿನಪತ್ರಿಕೆಗೆ ಸಣ್ಣ ಅವಧಿಗೆ “ಆಂಬುಡ್ಸ್ ಮನ್” ಆಗಿ ಕೆಲಸ ಮಾಡಿದ್ದು.

2019 ಚುನಾವಣೆಗೆ ರನಪ್ ಆರಂಭಗೊಳ್ಳುವ ಹೊತ್ತಿಗೆ, ಮಾಧ್ಯಮಗಳಿಗೆ ಅಡರಿದ ಈ ರೋಗ ಪೂರ್ಣಪ್ರಮಾಣದ, ವಾಸಿಯಾಗದ ಮಹಾವ್ಯಾಧಿ ಎಂಬುದು ಖಚಿತವಾಗತೊಡಗಿತ್ತು. ಹಾಗಾಗಿ ನನ್ನ ಸುದ್ದಿ ವಿಶ್ಲೇಷಣೆಯ ಕೆಲಸಕ್ಕೆ ಒಂದು ಟ್ರ್ಯಾಕಿಂಗ್ ವ್ಯವಸ್ಥೆ ಮಾಡಿಕೊಳ್ಳುವ ನಿಟ್ಟಿನಲ್ಲಿ #ಡಿಯರ್_ಮೀಡಿಯಾ ಹ್ಯಾಷ್ ಟ್ಯಾಗ್ ನ್ನು ಬಳಸತೊಡಗಿದೆ. ಇದು ಮೊದಲು ಬಳಕೆ ಆದದ್ದು 2018 ಅಕ್ಟೋಬರ್ ತಿಂಗಳಿನಲ್ಲಿ. ಈ ಹ್ಯಾಷ್ ಟ್ಯಾಗ್ ನನ್ನ ಟ್ರ್ಯಾಕಿಂಗ್ ದಾಖಲೆ ಆಗಿ ಬಳಕೆ ಆಗುತ್ತಿದ್ದದ್ದು, ಕ್ರಮೇಣ ಒಂದು ಬ್ರ್ಯಾಂಡ್ ಆಗಿ ಕೂಡ ಕಾಣಿಸತೊಡಗಿದ್ದರ ಸಂಪೂರ್ಣ ಶ್ರೇಯಸ್ಸು, ಮಾಧ್ಯಮಗಳಿಗೆ ಮತ್ತು ಅವು ಮಾಡತೊಡಗಿದ ಎದ್ದುಕಾಣುವ “ಹಲ್ಕಾ” ಕೆಲಸಗಳಿಗೆ ಸೇರಬೇಕು!

ಈ ಮಹಾವ್ಯಾಧಿ ಇಂದು ಎಷ್ಟು ತೀವ್ರವಾಗಿದೆ ಎಂದರೆ, ನೀವು ದಿನನಿತ್ಯ ಅವರ ಜನದ್ರೋಹಗಳನ್ನು ಎತ್ತಿ ತೋರಿಸಹೊರಟರೆ ನೀವೇ ಇನ್ನೊಂದು ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತರೇನೋ ಎಂದು ಸಂಶಯ ಬರುವ ಸ್ಥಿತಿ ಇದೆ! ಆ ಪ್ರಮಾಣದಲ್ಲಿ ರಾಜಕೀಯ ಪ್ರೇರಿತ ಸುದ್ದಿಗಾರಿಕೆ ಇಂದು ಓದುಗರಿಗೆ ದ್ರೋಹ ಮಾಡುತ್ತಿದೆ.

ಇಂಗ್ಲೀಷಿನ ಲ್ಯಾಪ್ ಡಾಗ್ ಮೀಡಿಯಾ, ಹಿಂದಿಯ ಗೋದಿ ಮೀಡಿಯಾ ಕನ್ನಡದಲ್ಲಿ #ಡಿಯರ್_ಮೀಡಿಯಾ ಆಗತೊಡಗಿದೆ. ಮುಂದೊಂದು ದಿನ ಈ ಕ್ರಾನಿಕಲ್ ಕನ್ನಡದ ಮಾಧ್ಯಮಗಳ ಸ್ಥಿತಿಗೆ ಹಿಡಿದ ಕನ್ನಡಿ ಆದರೂ ಆಗಬಹುದೆಂದು ಈಗೀಗ ಅನ್ನಿಸತೊಡಗಿದೆ…!!


ಓದಿ: ’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹ


ವೀಡಿಯೋ ನೋಡಿ: ಪರಮಾತ್ಮ ಪೊಲಿಟಿಕಲ್ ಮ್ಯಾಜಿಕ್ ಶೋ; ಚಿಲ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...