Homeಮುಖಪುಟಸುದ್ದಿಮನೆಯ ಗೆದ್ದಲುಗಳೇ #ಡಿಯರ್_ಮೀಡಿಯಾ

ಸುದ್ದಿಮನೆಯ ಗೆದ್ದಲುಗಳೇ #ಡಿಯರ್_ಮೀಡಿಯಾ

ಅವರ ಜನದ್ರೋಹಗಳನ್ನು ಎತ್ತಿ ತೋರಿಸಹೊರಟರೆ ನೀವೇ ಇನ್ನೊಂದು ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತರೇನೋ ಎಂದು ಸಂಶಯ ಬರುವ ಸ್ಥಿತಿ ಇದೆ! ಆ ಪ್ರಮಾಣದಲ್ಲಿ ರಾಜಕೀಯ ಪ್ರೇರಿತ ಸುದ್ದಿಗಾರಿಕೆ ಇಂದು ಓದುಗರಿಗೆ ದ್ರೋಹ ಮಾಡುತ್ತಿದೆ.

- Advertisement -
- Advertisement -

ಅಕ್ಷರದಲ್ಲಿ ಮುದ್ರಿತವಾದದ್ದು “ಅಂತಿಮ ಸತ್ಯ” ಎಂಬುದನ್ನೇ ಹಾಸಿ, ಹೊದ್ದು ನಂಬಿದ್ದವರಿದ್ದರು. ನಿರ್ಣಾಯಕ ಸಂದರ್ಭ ಎದುರಾದಾಗ “ನೋಡಿ ಬೇಕಿದ್ರೆ… ಹಾಗಂತ ನಾನು ಬರೆದು ಕೊಡ್ತೇನೆ!” ಎಂದು ಹೇಳುವುದು ಸುಮ್ಮನೇ ಅಲ್ಲ. “ಬರೆದು ಕೊಡುವುದು ಅಂತಿಮ ಸತ್ಯ” ಎಂಬ ನಂಬಿಕೆಯ ಫಲ ಅದು.

ಯಾವುದೇ ಸುದ್ದಿ ಖಚಿತವಾಗಬೇಕಿದ್ದರೆ ಪೇಪರಲ್ಲಿ ಬಂದಿದೆಯಾ? ಎಂದು ನೋಡುವ ಕಾಲ ಇತ್ತು. ಏನೇ ಸಮಾಜವಿರೋಧಿ ಕೆಲಸ ಮಾಡಿದರೂ ಪೇಪರಲ್ಲಿ ಬರ್ತದೆ ಎಂಬ ಅಂಜಿಕೆ ಇತ್ತು. ಅದು ಕ್ರಮೇಣ ಮಸುಕಾಗುತ್ತಾ ಬಂದಿದೆ. ಮಾಧ್ಯಮಗಳಿಗೊಂದು ಸಾಮಾಜಿಕ ಗೌರವ ತಕ್ಕಮಟ್ಟಿಗೆ ಇತ್ತು. ಹಾಗೆಂದಾಕ್ಷಣ ಎಲ್ಲವೂ ಸುಸೂತ್ರವಾಗಿತ್ತೆಂದಲ್ಲ. ಬರಹಗಳ ಮೇಲಿನ ಓದುಗರ ನಂಬಿಕೆಗೆ ದ್ರೋಹ ಬಗೆಯುವ ಕೆಲಸ ಎಲ್ಲೋ ಅಲ್ಲೊಂದು-ಇಲ್ಲೊಂದು ಅಪರೂಪಕ್ಕೆ ನಡೆಯುತ್ತಿತ್ತು. ಅದನ್ನು “ಹಳದಿ ಪತ್ರಿಕೋದ್ಯಮ” ಎಂದು ಗುರುತಿಸಲಾಗುತ್ತಿತ್ತು.

ಆದರೆ ಬರಬರುತ್ತಾ ಇಡಿಯ ಪತ್ರಿಕೋದ್ಯಮವೇ ಮಲ್ಟಿಕಲರ್ ಆಗತೊಡಗಿತು. ಅಕ್ಷರಗಳಿಂದಲೇ ದುಡಿದು ತಿನ್ನುವ ಸುದ್ದಿಮನೆಗಳಲ್ಲಿ ತಮ್ಮ ಅನ್ನದಾತರಾದ ಓದುಗರು ತಮ್ಮ ಮೇಲಿರಿಸಿರುವ ನಂಬಿಕೆಗೇ ದ್ರೋಹ ಮಾಡುವ ಕೆಲಸ ಸಾತತ್ಯದೊಂದಿಗೆ ಆರಂಭ ಆದದ್ದು 2010ರ ಸುಮಾರಿಗೆ. ಇದನ್ನು ಓದುಗರು “ಪತ್ರಿಕೆಗಳ ಬೆಲೆ ಸಮರ” ಎಂದೇ ಗುರುತಿಸಿದರೇ ಹೊರತು ಅಲ್ಲಿಂದ ಆಳಕ್ಕೆ ಇಳಿದು ನೋಡಲಿಲ್ಲ. ಸುದ್ದಿ ಚೀಪ್ ಆಯಿತು!

ದೇಶದಾದ್ಯಂತ ಸುದ್ದಿಮನೆಗಳಿಗೆ ಹೀಗೆ ಗೆದ್ದಲು ಹತ್ತಿದ್ದನ್ನು ನಾವು “ಇದು ಮಾಧ್ಯಮವು ಉದ್ಯಮ ಆದದ್ದರ ಫಲ” ಎಂದೇ ವಿಶ್ಲೇಷಿಸುತ್ತಾ ಬಂದೆವು. ಆದರೆ ಗೆದ್ದಲನ್ನು ಗುರುತಿಸಲಿಲ್ಲ. ಅದು ಇಂಚಿಂಚಾಗಿ ಇಡಿಯ ಮಾಧ್ಯಮ ವ್ಯವಸ್ಥೆಯನ್ನು ತಿನ್ನುತ್ತಾ ಬಂದು, 2014 ರ ಲೋಕಸಭಾ ಚುನಾವಣೆಗಳ ರನಪ್ ಹೊತ್ತಿಗೆ ತನ್ನ ಇರುವಿಕೆಯನ್ನು ಪೂರ್ಣಪ್ರಮಾಣದಲ್ಲಿ ತೋರಿಸಿಕೊಂಡಿತು. ಸರಿಯಾಗಿ ಗಮನಿಸಿದರೆ, ಸುದ್ದಿಮನೆಯಲ್ಲಿ ಆಗಿರುವ ಬದಲಾವಣೆಗಳಿಗೆ ಮಾಲಕತ್ವ ಮಾತ್ರ ಕಾರಣ ಅಲ್ಲ; ಬದಲಾಗಿ ಅಲ್ಲಿ ಜಾತಿ, ಗುಂಪು, ಸಿದ್ಧಾಂತ ಮತ್ತಿತರ ಆಯಕಟ್ಟಿನ ಜಾರೆಣ್ಣೆ ಬಳಸಿಕೊಂಡು ನುಸುಳಿ ಕುಳಿತಿರುವ ರಾಜಕೀಯ ದಲ್ಲಾಳಿಗಳು ಕಾರಣ ಎಂಬುದು ಈಗ ಬಯಲಾಗತೊಡಗಿದೆ.

ಸುದ್ದಿಗಳನ್ನು ತಮ್ಮ ಮೂಗಿನ ನೇರಕ್ಕೆ ಬಗ್ಗಿಸಿ ಪ್ರೆಸೆಂಟ್ ಮಾಡುವ ಚಾಳಿ ಸ್ವಲ್ಪ ಕದ್ದುಮುಚ್ಚಿ, ಮುಜುಗರದೊಂದಿಗೆ ಆರಂಭಗೊಂಡದ್ದು, ಈಗ ಪೂರ್ಣಪ್ರಮಾಣದಲ್ಲಿ ವ್ಯವಸ್ಥೆಯ ಭಾಗವಾಗಿಯೇ ನಡೆಯುತ್ತಿದೆ. ಅದು ಬಲುದೊಡ್ಡ ಕಥೆ. ಇಂತಹ ಸನ್ನಿವೇಶದಲ್ಲಿ, ಪ್ರತಿನಿತ್ಯ ಬಹುತೇಕ ಸುದ್ದಿಪುಟಗಳನ್ನು ಕಳ್ಳಸುದ್ದಿ, ಸುಳ್ಳುಸುದ್ದಿ, ನೆಟ್ಟಸುದ್ದಿ, ಕೆಟ್ಟಸುದ್ದಿಗಳು ಆವರಿಸತೊಡಗಿದಾಗ, ಓದುಗರಲ್ಲಿ ಪತ್ರಿಕೆಗಳ ಬಗ್ಗೆ ಅಸಹನೆ ಸ್ಪಷ್ಟವಾಗಿ ತೋರುವಷ್ಟಿತ್ತು. ಆದರೆ, ನಂಬಿಕೆ – ವಾಸ್ತವಗಳ ತೊಳಲಾಟದ ರಭಸದಲ್ಲಿ ಓದುಗ ಕೊಚ್ಚಿಹೋದದ್ದೇ ಜಾಸ್ತಿ. ಅದರ ಫಲವಾಗಿ ಇಂದು ಮಾಧ್ಯಮ ಎಂದರೆ ಛೀ.. ಥೂ.. ಎನ್ನುವುದು ಢಾಳಾಗಿ ಕಾಣಿಸತೊಡಗಿದೆ. ಹಳೆಯ ನಂಬಿಕೆ ಕಳೆದುಹೋಗಿದೆ.

ಒಬ್ಬ ಓದುಗನಾಗಿ ಮತ್ತು ಒಂದೆರಡು ದಶಕ ಸುದ್ದಿಮನೆಗೆ ಮಣ್ಣುಹೊತ್ತವನಾಗಿ, ಕನಿಷ್ಠ ನನ್ನ ಸಂಪರ್ಕದಲ್ಲಿರುವ ಒಂದಿಷ್ಟು ಜನರಿಗಾದರೂ “ಸುದ್ದಿ ಏಕೆ ಹೀಗೆ?” ಎಂಬುದನ್ನು ತಲುಪಿಸಲು ಸೋಷಿಯಲ್ ಮೀಡಿಯಾವನ್ನು ಬಳಸಬಹುದು ಅನ್ನಿಸಿತು. ಅದರ ಫಲವೇ ನನ್ನ ಮಾಧ್ಯಮ ವಿಶ್ಲೇಷಣೆಯ ಮೈಕ್ರೊಬ್ಲಾಗಿಂಗ್ ಪ್ರಯತ್ನ. ಈ ರೀತಿಯ ಮೈಕ್ರೊ ಬ್ಲಾಗಿಂಗ್ ಗೆ ಮೂಲ ಪ್ರೇರಣೆ ನಾನು ಈ ಹಿಂದೆ ಒಂದು ದಿನಪತ್ರಿಕೆಗೆ ಸಣ್ಣ ಅವಧಿಗೆ “ಆಂಬುಡ್ಸ್ ಮನ್” ಆಗಿ ಕೆಲಸ ಮಾಡಿದ್ದು.

2019 ಚುನಾವಣೆಗೆ ರನಪ್ ಆರಂಭಗೊಳ್ಳುವ ಹೊತ್ತಿಗೆ, ಮಾಧ್ಯಮಗಳಿಗೆ ಅಡರಿದ ಈ ರೋಗ ಪೂರ್ಣಪ್ರಮಾಣದ, ವಾಸಿಯಾಗದ ಮಹಾವ್ಯಾಧಿ ಎಂಬುದು ಖಚಿತವಾಗತೊಡಗಿತ್ತು. ಹಾಗಾಗಿ ನನ್ನ ಸುದ್ದಿ ವಿಶ್ಲೇಷಣೆಯ ಕೆಲಸಕ್ಕೆ ಒಂದು ಟ್ರ್ಯಾಕಿಂಗ್ ವ್ಯವಸ್ಥೆ ಮಾಡಿಕೊಳ್ಳುವ ನಿಟ್ಟಿನಲ್ಲಿ #ಡಿಯರ್_ಮೀಡಿಯಾ ಹ್ಯಾಷ್ ಟ್ಯಾಗ್ ನ್ನು ಬಳಸತೊಡಗಿದೆ. ಇದು ಮೊದಲು ಬಳಕೆ ಆದದ್ದು 2018 ಅಕ್ಟೋಬರ್ ತಿಂಗಳಿನಲ್ಲಿ. ಈ ಹ್ಯಾಷ್ ಟ್ಯಾಗ್ ನನ್ನ ಟ್ರ್ಯಾಕಿಂಗ್ ದಾಖಲೆ ಆಗಿ ಬಳಕೆ ಆಗುತ್ತಿದ್ದದ್ದು, ಕ್ರಮೇಣ ಒಂದು ಬ್ರ್ಯಾಂಡ್ ಆಗಿ ಕೂಡ ಕಾಣಿಸತೊಡಗಿದ್ದರ ಸಂಪೂರ್ಣ ಶ್ರೇಯಸ್ಸು, ಮಾಧ್ಯಮಗಳಿಗೆ ಮತ್ತು ಅವು ಮಾಡತೊಡಗಿದ ಎದ್ದುಕಾಣುವ “ಹಲ್ಕಾ” ಕೆಲಸಗಳಿಗೆ ಸೇರಬೇಕು!

ಈ ಮಹಾವ್ಯಾಧಿ ಇಂದು ಎಷ್ಟು ತೀವ್ರವಾಗಿದೆ ಎಂದರೆ, ನೀವು ದಿನನಿತ್ಯ ಅವರ ಜನದ್ರೋಹಗಳನ್ನು ಎತ್ತಿ ತೋರಿಸಹೊರಟರೆ ನೀವೇ ಇನ್ನೊಂದು ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತರೇನೋ ಎಂದು ಸಂಶಯ ಬರುವ ಸ್ಥಿತಿ ಇದೆ! ಆ ಪ್ರಮಾಣದಲ್ಲಿ ರಾಜಕೀಯ ಪ್ರೇರಿತ ಸುದ್ದಿಗಾರಿಕೆ ಇಂದು ಓದುಗರಿಗೆ ದ್ರೋಹ ಮಾಡುತ್ತಿದೆ.

ಇಂಗ್ಲೀಷಿನ ಲ್ಯಾಪ್ ಡಾಗ್ ಮೀಡಿಯಾ, ಹಿಂದಿಯ ಗೋದಿ ಮೀಡಿಯಾ ಕನ್ನಡದಲ್ಲಿ #ಡಿಯರ್_ಮೀಡಿಯಾ ಆಗತೊಡಗಿದೆ. ಮುಂದೊಂದು ದಿನ ಈ ಕ್ರಾನಿಕಲ್ ಕನ್ನಡದ ಮಾಧ್ಯಮಗಳ ಸ್ಥಿತಿಗೆ ಹಿಡಿದ ಕನ್ನಡಿ ಆದರೂ ಆಗಬಹುದೆಂದು ಈಗೀಗ ಅನ್ನಿಸತೊಡಗಿದೆ…!!


ಓದಿ: ’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹ


ವೀಡಿಯೋ ನೋಡಿ: ಪರಮಾತ್ಮ ಪೊಲಿಟಿಕಲ್ ಮ್ಯಾಜಿಕ್ ಶೋ; ಚಿಲ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...