Homeಮುಖಪುಟಸುದ್ದಿಮನೆಯ ಗೆದ್ದಲುಗಳೇ #ಡಿಯರ್_ಮೀಡಿಯಾ

ಸುದ್ದಿಮನೆಯ ಗೆದ್ದಲುಗಳೇ #ಡಿಯರ್_ಮೀಡಿಯಾ

ಅವರ ಜನದ್ರೋಹಗಳನ್ನು ಎತ್ತಿ ತೋರಿಸಹೊರಟರೆ ನೀವೇ ಇನ್ನೊಂದು ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತರೇನೋ ಎಂದು ಸಂಶಯ ಬರುವ ಸ್ಥಿತಿ ಇದೆ! ಆ ಪ್ರಮಾಣದಲ್ಲಿ ರಾಜಕೀಯ ಪ್ರೇರಿತ ಸುದ್ದಿಗಾರಿಕೆ ಇಂದು ಓದುಗರಿಗೆ ದ್ರೋಹ ಮಾಡುತ್ತಿದೆ.

- Advertisement -
- Advertisement -

ಅಕ್ಷರದಲ್ಲಿ ಮುದ್ರಿತವಾದದ್ದು “ಅಂತಿಮ ಸತ್ಯ” ಎಂಬುದನ್ನೇ ಹಾಸಿ, ಹೊದ್ದು ನಂಬಿದ್ದವರಿದ್ದರು. ನಿರ್ಣಾಯಕ ಸಂದರ್ಭ ಎದುರಾದಾಗ “ನೋಡಿ ಬೇಕಿದ್ರೆ… ಹಾಗಂತ ನಾನು ಬರೆದು ಕೊಡ್ತೇನೆ!” ಎಂದು ಹೇಳುವುದು ಸುಮ್ಮನೇ ಅಲ್ಲ. “ಬರೆದು ಕೊಡುವುದು ಅಂತಿಮ ಸತ್ಯ” ಎಂಬ ನಂಬಿಕೆಯ ಫಲ ಅದು.

ಯಾವುದೇ ಸುದ್ದಿ ಖಚಿತವಾಗಬೇಕಿದ್ದರೆ ಪೇಪರಲ್ಲಿ ಬಂದಿದೆಯಾ? ಎಂದು ನೋಡುವ ಕಾಲ ಇತ್ತು. ಏನೇ ಸಮಾಜವಿರೋಧಿ ಕೆಲಸ ಮಾಡಿದರೂ ಪೇಪರಲ್ಲಿ ಬರ್ತದೆ ಎಂಬ ಅಂಜಿಕೆ ಇತ್ತು. ಅದು ಕ್ರಮೇಣ ಮಸುಕಾಗುತ್ತಾ ಬಂದಿದೆ. ಮಾಧ್ಯಮಗಳಿಗೊಂದು ಸಾಮಾಜಿಕ ಗೌರವ ತಕ್ಕಮಟ್ಟಿಗೆ ಇತ್ತು. ಹಾಗೆಂದಾಕ್ಷಣ ಎಲ್ಲವೂ ಸುಸೂತ್ರವಾಗಿತ್ತೆಂದಲ್ಲ. ಬರಹಗಳ ಮೇಲಿನ ಓದುಗರ ನಂಬಿಕೆಗೆ ದ್ರೋಹ ಬಗೆಯುವ ಕೆಲಸ ಎಲ್ಲೋ ಅಲ್ಲೊಂದು-ಇಲ್ಲೊಂದು ಅಪರೂಪಕ್ಕೆ ನಡೆಯುತ್ತಿತ್ತು. ಅದನ್ನು “ಹಳದಿ ಪತ್ರಿಕೋದ್ಯಮ” ಎಂದು ಗುರುತಿಸಲಾಗುತ್ತಿತ್ತು.

ಆದರೆ ಬರಬರುತ್ತಾ ಇಡಿಯ ಪತ್ರಿಕೋದ್ಯಮವೇ ಮಲ್ಟಿಕಲರ್ ಆಗತೊಡಗಿತು. ಅಕ್ಷರಗಳಿಂದಲೇ ದುಡಿದು ತಿನ್ನುವ ಸುದ್ದಿಮನೆಗಳಲ್ಲಿ ತಮ್ಮ ಅನ್ನದಾತರಾದ ಓದುಗರು ತಮ್ಮ ಮೇಲಿರಿಸಿರುವ ನಂಬಿಕೆಗೇ ದ್ರೋಹ ಮಾಡುವ ಕೆಲಸ ಸಾತತ್ಯದೊಂದಿಗೆ ಆರಂಭ ಆದದ್ದು 2010ರ ಸುಮಾರಿಗೆ. ಇದನ್ನು ಓದುಗರು “ಪತ್ರಿಕೆಗಳ ಬೆಲೆ ಸಮರ” ಎಂದೇ ಗುರುತಿಸಿದರೇ ಹೊರತು ಅಲ್ಲಿಂದ ಆಳಕ್ಕೆ ಇಳಿದು ನೋಡಲಿಲ್ಲ. ಸುದ್ದಿ ಚೀಪ್ ಆಯಿತು!

ದೇಶದಾದ್ಯಂತ ಸುದ್ದಿಮನೆಗಳಿಗೆ ಹೀಗೆ ಗೆದ್ದಲು ಹತ್ತಿದ್ದನ್ನು ನಾವು “ಇದು ಮಾಧ್ಯಮವು ಉದ್ಯಮ ಆದದ್ದರ ಫಲ” ಎಂದೇ ವಿಶ್ಲೇಷಿಸುತ್ತಾ ಬಂದೆವು. ಆದರೆ ಗೆದ್ದಲನ್ನು ಗುರುತಿಸಲಿಲ್ಲ. ಅದು ಇಂಚಿಂಚಾಗಿ ಇಡಿಯ ಮಾಧ್ಯಮ ವ್ಯವಸ್ಥೆಯನ್ನು ತಿನ್ನುತ್ತಾ ಬಂದು, 2014 ರ ಲೋಕಸಭಾ ಚುನಾವಣೆಗಳ ರನಪ್ ಹೊತ್ತಿಗೆ ತನ್ನ ಇರುವಿಕೆಯನ್ನು ಪೂರ್ಣಪ್ರಮಾಣದಲ್ಲಿ ತೋರಿಸಿಕೊಂಡಿತು. ಸರಿಯಾಗಿ ಗಮನಿಸಿದರೆ, ಸುದ್ದಿಮನೆಯಲ್ಲಿ ಆಗಿರುವ ಬದಲಾವಣೆಗಳಿಗೆ ಮಾಲಕತ್ವ ಮಾತ್ರ ಕಾರಣ ಅಲ್ಲ; ಬದಲಾಗಿ ಅಲ್ಲಿ ಜಾತಿ, ಗುಂಪು, ಸಿದ್ಧಾಂತ ಮತ್ತಿತರ ಆಯಕಟ್ಟಿನ ಜಾರೆಣ್ಣೆ ಬಳಸಿಕೊಂಡು ನುಸುಳಿ ಕುಳಿತಿರುವ ರಾಜಕೀಯ ದಲ್ಲಾಳಿಗಳು ಕಾರಣ ಎಂಬುದು ಈಗ ಬಯಲಾಗತೊಡಗಿದೆ.

ಸುದ್ದಿಗಳನ್ನು ತಮ್ಮ ಮೂಗಿನ ನೇರಕ್ಕೆ ಬಗ್ಗಿಸಿ ಪ್ರೆಸೆಂಟ್ ಮಾಡುವ ಚಾಳಿ ಸ್ವಲ್ಪ ಕದ್ದುಮುಚ್ಚಿ, ಮುಜುಗರದೊಂದಿಗೆ ಆರಂಭಗೊಂಡದ್ದು, ಈಗ ಪೂರ್ಣಪ್ರಮಾಣದಲ್ಲಿ ವ್ಯವಸ್ಥೆಯ ಭಾಗವಾಗಿಯೇ ನಡೆಯುತ್ತಿದೆ. ಅದು ಬಲುದೊಡ್ಡ ಕಥೆ. ಇಂತಹ ಸನ್ನಿವೇಶದಲ್ಲಿ, ಪ್ರತಿನಿತ್ಯ ಬಹುತೇಕ ಸುದ್ದಿಪುಟಗಳನ್ನು ಕಳ್ಳಸುದ್ದಿ, ಸುಳ್ಳುಸುದ್ದಿ, ನೆಟ್ಟಸುದ್ದಿ, ಕೆಟ್ಟಸುದ್ದಿಗಳು ಆವರಿಸತೊಡಗಿದಾಗ, ಓದುಗರಲ್ಲಿ ಪತ್ರಿಕೆಗಳ ಬಗ್ಗೆ ಅಸಹನೆ ಸ್ಪಷ್ಟವಾಗಿ ತೋರುವಷ್ಟಿತ್ತು. ಆದರೆ, ನಂಬಿಕೆ – ವಾಸ್ತವಗಳ ತೊಳಲಾಟದ ರಭಸದಲ್ಲಿ ಓದುಗ ಕೊಚ್ಚಿಹೋದದ್ದೇ ಜಾಸ್ತಿ. ಅದರ ಫಲವಾಗಿ ಇಂದು ಮಾಧ್ಯಮ ಎಂದರೆ ಛೀ.. ಥೂ.. ಎನ್ನುವುದು ಢಾಳಾಗಿ ಕಾಣಿಸತೊಡಗಿದೆ. ಹಳೆಯ ನಂಬಿಕೆ ಕಳೆದುಹೋಗಿದೆ.

ಒಬ್ಬ ಓದುಗನಾಗಿ ಮತ್ತು ಒಂದೆರಡು ದಶಕ ಸುದ್ದಿಮನೆಗೆ ಮಣ್ಣುಹೊತ್ತವನಾಗಿ, ಕನಿಷ್ಠ ನನ್ನ ಸಂಪರ್ಕದಲ್ಲಿರುವ ಒಂದಿಷ್ಟು ಜನರಿಗಾದರೂ “ಸುದ್ದಿ ಏಕೆ ಹೀಗೆ?” ಎಂಬುದನ್ನು ತಲುಪಿಸಲು ಸೋಷಿಯಲ್ ಮೀಡಿಯಾವನ್ನು ಬಳಸಬಹುದು ಅನ್ನಿಸಿತು. ಅದರ ಫಲವೇ ನನ್ನ ಮಾಧ್ಯಮ ವಿಶ್ಲೇಷಣೆಯ ಮೈಕ್ರೊಬ್ಲಾಗಿಂಗ್ ಪ್ರಯತ್ನ. ಈ ರೀತಿಯ ಮೈಕ್ರೊ ಬ್ಲಾಗಿಂಗ್ ಗೆ ಮೂಲ ಪ್ರೇರಣೆ ನಾನು ಈ ಹಿಂದೆ ಒಂದು ದಿನಪತ್ರಿಕೆಗೆ ಸಣ್ಣ ಅವಧಿಗೆ “ಆಂಬುಡ್ಸ್ ಮನ್” ಆಗಿ ಕೆಲಸ ಮಾಡಿದ್ದು.

2019 ಚುನಾವಣೆಗೆ ರನಪ್ ಆರಂಭಗೊಳ್ಳುವ ಹೊತ್ತಿಗೆ, ಮಾಧ್ಯಮಗಳಿಗೆ ಅಡರಿದ ಈ ರೋಗ ಪೂರ್ಣಪ್ರಮಾಣದ, ವಾಸಿಯಾಗದ ಮಹಾವ್ಯಾಧಿ ಎಂಬುದು ಖಚಿತವಾಗತೊಡಗಿತ್ತು. ಹಾಗಾಗಿ ನನ್ನ ಸುದ್ದಿ ವಿಶ್ಲೇಷಣೆಯ ಕೆಲಸಕ್ಕೆ ಒಂದು ಟ್ರ್ಯಾಕಿಂಗ್ ವ್ಯವಸ್ಥೆ ಮಾಡಿಕೊಳ್ಳುವ ನಿಟ್ಟಿನಲ್ಲಿ #ಡಿಯರ್_ಮೀಡಿಯಾ ಹ್ಯಾಷ್ ಟ್ಯಾಗ್ ನ್ನು ಬಳಸತೊಡಗಿದೆ. ಇದು ಮೊದಲು ಬಳಕೆ ಆದದ್ದು 2018 ಅಕ್ಟೋಬರ್ ತಿಂಗಳಿನಲ್ಲಿ. ಈ ಹ್ಯಾಷ್ ಟ್ಯಾಗ್ ನನ್ನ ಟ್ರ್ಯಾಕಿಂಗ್ ದಾಖಲೆ ಆಗಿ ಬಳಕೆ ಆಗುತ್ತಿದ್ದದ್ದು, ಕ್ರಮೇಣ ಒಂದು ಬ್ರ್ಯಾಂಡ್ ಆಗಿ ಕೂಡ ಕಾಣಿಸತೊಡಗಿದ್ದರ ಸಂಪೂರ್ಣ ಶ್ರೇಯಸ್ಸು, ಮಾಧ್ಯಮಗಳಿಗೆ ಮತ್ತು ಅವು ಮಾಡತೊಡಗಿದ ಎದ್ದುಕಾಣುವ “ಹಲ್ಕಾ” ಕೆಲಸಗಳಿಗೆ ಸೇರಬೇಕು!

ಈ ಮಹಾವ್ಯಾಧಿ ಇಂದು ಎಷ್ಟು ತೀವ್ರವಾಗಿದೆ ಎಂದರೆ, ನೀವು ದಿನನಿತ್ಯ ಅವರ ಜನದ್ರೋಹಗಳನ್ನು ಎತ್ತಿ ತೋರಿಸಹೊರಟರೆ ನೀವೇ ಇನ್ನೊಂದು ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತರೇನೋ ಎಂದು ಸಂಶಯ ಬರುವ ಸ್ಥಿತಿ ಇದೆ! ಆ ಪ್ರಮಾಣದಲ್ಲಿ ರಾಜಕೀಯ ಪ್ರೇರಿತ ಸುದ್ದಿಗಾರಿಕೆ ಇಂದು ಓದುಗರಿಗೆ ದ್ರೋಹ ಮಾಡುತ್ತಿದೆ.

ಇಂಗ್ಲೀಷಿನ ಲ್ಯಾಪ್ ಡಾಗ್ ಮೀಡಿಯಾ, ಹಿಂದಿಯ ಗೋದಿ ಮೀಡಿಯಾ ಕನ್ನಡದಲ್ಲಿ #ಡಿಯರ್_ಮೀಡಿಯಾ ಆಗತೊಡಗಿದೆ. ಮುಂದೊಂದು ದಿನ ಈ ಕ್ರಾನಿಕಲ್ ಕನ್ನಡದ ಮಾಧ್ಯಮಗಳ ಸ್ಥಿತಿಗೆ ಹಿಡಿದ ಕನ್ನಡಿ ಆದರೂ ಆಗಬಹುದೆಂದು ಈಗೀಗ ಅನ್ನಿಸತೊಡಗಿದೆ…!!


ಓದಿ: ’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹ


ವೀಡಿಯೋ ನೋಡಿ: ಪರಮಾತ್ಮ ಪೊಲಿಟಿಕಲ್ ಮ್ಯಾಜಿಕ್ ಶೋ; ಚಿಲ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...